/ Book Review : Evocative masterpiece

bhimayana- experiences of untouchability-srividya natarajan, s. anand[ book review by- sowmya sivakumar]

ರಥಬೀದಿ ಗೆಳೆಯರು, ಉದುಪಿ- ಮಕ್ಕಳ ರಂಗಶಿಬಿರ ೨-೫-೨೦೧೧- ೧೫- ೫-೨೦೧೧


pls send interested students[ 7th to 10th std] to rathabeedhi geleyru- makkala ranga shibira at   gov high school  olakadu, udupi- from 2-5-2011 to 15-2-2011. no entry fee. daily 9. 30am to 5pm. for details contact- sri udyavara nagesh kumar- 9845559186

Friday, April 22, 2011

phalasanchaya- rabindranath tagore[ translated into kannada by g ramanath bhat[2003]

phalasanchaya
200 poems, 326 mini poems by
rabindranath tagore
translated into kannada by
g ramanath bhat, mysore
published by
geetha book house, mysore
first published- 2003
This kannada translation  contains 200 poems of Tagore selected from his collections- fruit gathering, lover's gift and cossing,poms, crescent moon,gitanjali, and stray birds, and 326 mini poems of tagore


Monday, April 18, 2011

naanu mattu avalu[ kannada short stories] by prajna marpally[book review]

ಪ್ರಜ್ಞ ಮಾರ್ಪಳ್ಳಿಯವರ ಕಥಾಸಂಕಲನ 
'ನಾನು ಮತ್ತು ಅವಳು'
-    ಮುರಳೀಧರ ಉಪಾಧ್ಯ ಹಿರಿಯಡಕ
                                   
          ಕನ್ನಡ ಉಪನ್ಯಾಸಕಿಯಾಗಿರುವ ಪ್ರಜ್ಞ ಮಾರ್ಪಳ್ಳಿಯವರ ಚೊಚ್ಚಲ ಕಥಾ ಸಂಕಲನ - 'ನಾನು ಮತ್ತು ಅವಳು'. ಪ್ರಜ್ಞ ಮಾರ್ಪಳ್ಳಿ ಚಿತ್ರಕಲೆ, ಯಕ್ಷಗಾನ, ಬರವಣಿಗೆ ಹೀಗೆ ವೈವಿಧ್ಯಪೂರ್ಣ ಆಸಕ್ತಿಗಳಿರುವ ಲೇಖಕಿ. ಈ ಸಂಕಲನದಲ್ಲಿ ಒಟ್ಟು 12 ಕಥೆಗಳಿವೆ.
          'ಸೂಜಿ ಮತ್ತು ನೂಲು', 'ಮಳೆಗಾಲದಲ್ಲೊಂದು ದಿನ' ಕಥೆಗಳಲ್ಲಿ ಪುರುಷಪ್ರಧಾನ ಸಮಾಜದಲ್ಲಿರುವ ಕುಟುಂಬಾಂತರ್ಗತ ಕ್ರೌರ್ಯದ ಚಿತ್ರಣವಿದೆ.
          'ನಾನು ಮತ್ತು ಅವಳು' ಕಥೆಯ ಶಮ್ಮಿಯ ತಂದೆ-ತಾಯಿಯದು ಅಂತಜರ್ಾತೀಯ ವಿವಾಹ. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ ಶಮ್ಮಿ ತನ್ನ ವಿಧವೆ ತಾಯಿಯ ಕಹಿ ಅನುಭವಗಳನ್ನು ನೋಡುತ್ತ ಬೆಳೆದಿದ್ದಾಳೆ. ಅವಳ ಗೆಳತಿ ಸ್ನೇಹಳ ದೃಷ್ಟಿಯಲ್ಲಿ ಮದುವೆ ಎಂದರೆ 'ಸಂಪೂರ್ಣ ಶರಣಾಗತಿ'. ಈ ಪ್ರೀತಿ, ಪ್ರೇಮ, ಸಂಸಾರ - ಎಲ್ಲಾ ವಿಚಾರಗಳು ಬಂದಾಗ್ಲೂ ಗಂಡಾದವನು ಇವೆಲ್ಲವನ್ನೂ ಸ್ವಾರ್ಥದಿಂದ್ಲೇ ಮಾಡ್ತಾನೆ ಅನ್ನೋದು ನನ್ನ ಅಭಿಪ್ರಾಯ ಎನ್ನುತ್ತಾಳೆ ಸ್ನೇಹಾ. ಪುರುಷದ್ವೇಷಿಯಾಗಿ ಬೆಳೆದ ಅವಳು ವಿವಾಹ ವ್ಯವಸ್ಥೆಯನ್ನು ತಿರಸ್ಕರಿಸುವುದಿಲ್ಲ. ತನ್ನ ಕನಸಿನ ರಾಜಕುಮಾರ ಸಿಕ್ಕಿದರೆ ಅವಳು ಮದುವೆಗೆ ರೆಡಿ. ಕಂಡೀಷನ್ ಏನಪ್ಪಾ ಅಂದ್ರೆ ನಾನು ಅವ್ನ ಜೊತೆಗಿರೋದಿಲ್ಲ. ಅವ್ನು ನನ್ನ ಜೊತೆಗಿಬರ್ೇಕು ಅಷ್ಟೇ! ಎನ್ನುತ್ತಾಳೆ. ಶಮ್ಮಿ ಮತ್ತು ಸ್ನೇಹಾ ತದ್ರೂಪಿಗಳಂತೆ ಕಾಣುತ್ತಾರೆ. ಲಿಂಗಾಧಾರಿತ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಯುವತಿಯರ ಆತಂಕಗಳು, ಕನಸುಗಳು ಈ ಕಥೆಯಲ್ಲಿವೆ.
          ಈ ಸಂಕಲನದ ಕಥೆಗಳಲ್ಲಿ ಕುಂದಾಪುರ ಕನ್ನಡ, ಉತ್ತರಕನರ್ಾಟಕದ ಕನ್ನಡ, ಬೆಂಗಳೂರು ಕನ್ನಡ - ಹೀಗೆ ಹಲವು ಬಗೆಯ ಕನ್ನಡಗಳು ಕಾಣಿಸುತ್ತವೆ. ಉಡುಪಿ ಜಿಲ್ಲೆ ಕನ್ನಡ, ತುಳು, ಕೊಂಕಣಿ, ಬ್ಯಾರಿ - ಹೀಗೆ ಹಲವು ಭಾಷೆಗಳ ಸಹಬಾಳ್ವೆ. ಕೊಡು - ಕೊಳು ಇರುವ ಜಿಲ್ಲೆ. ಇಂತಹ ಪ್ರಾದೇಶಿಕ ರಂಗು ಇರುವ ಪ್ರದೇಶದ ಲೇಖಕರು ತಮ್ಮ ಕನ್ನಡ ಭಾಷೆಯ ಬಳಕೆಯಲ್ಲಿ ಎಚ್ಚರಿಕೆಯ ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಉಡುಪಿಯ ಕಥೆಗಾರ ಪಿ. ಬಿ. ಪ್ರಸನ್ನರ 'ಗಣಪ ಮತ್ತು ಗಾಂಪ' ಸಂಕಲನದ ಕಥೆಗಳಲ್ಲಿ 'ಉಡುಪಿ ಕನ್ನಡ'ದ ಸಾರ್ಥಕ ಪ್ರಯೋಗವನ್ನು ಕಾಣಬಹುದು. ಗುಲ್ವಾಡಿ ವೆಂಕಟರಾಯರ 'ಇಂದಿರಾ ಬಾಯಿ' ಕಾದಂಬರಿಯ ಭಾಷಾ ಪ್ರಯೋಗ ಇನ್ನೊಂದು ಅನುಸರಣಯೋಗ್ಯ ಮಾದರಿಯಾಗಿದೆ.
          ಪ್ರಜ್ಞ ಮಾರ್ಪಳ್ಳಿ ತನ್ನ ಕಥೆಗಳ ಕುಸುರಿ ಕೆಲಸ ಮತ್ತು ಭಾಷಾ ಪ್ರಯೋಗದಲ್ಲಿ ಇನ್ನಷ್ಟು ಎಚ್ಚರಿಕೆಯಿಂದ ಮುನ್ನಡೆಯಬೇಕಾಗಿದೆ.
          ಕನ್ನಡ ಕಥಾಲೋಕದಲ್ಲಿ ಸ್ವಾಭಿಮಾನದಿಂದ ಹೆಜ್ಜೆ ಹಾಕುತ್ತಿರುವ ಉದಯೋನ್ಮುಖ ಕತೆಗಾತರ್ಿ ಪ್ರಜ್ಞ ಮಾರ್ಪಳ್ಳಿ ಅವರಿಗೆ ಶುಭಾಶಯಗಳು.
'ನಾನು ಮತ್ತು ಅವಳು' (ಕಥಾಸಂಕಲನ) - ಪ್ರಜ್ಞ ಮಾರ್ಪಳ್ಳಿ

ಪ್ರಕಾಶಕರು - ಶ್ರೀನಿವಾಸ ಪುಸ್ತಕ ಪ್ರಕಾಶನ,
ನಂ. 164/A, ಮೊದಲನೇ ಮಹಡಿ, ಎಂ. ಆರ್. ಎನ್. ಬಿಲ್ಡಿಂಗ್,
ಕನಕಪುರ ಮುಖ್ಯ ರಸ್ತೆ, ಬಸವನಗುಡಿ,
ಬೆಂಗಳೂರು - 560004.

ಮೊದಲ ಮುದ್ರಣ - 2011
ಬೆಲೆ ರೂ. 65/-

(ಜಗಜ್ಯೋತಿ ಕಲಾವೃಂದ, ಮುಂಬೈ - ಇವರಿಂದ 'ಜಗಜ್ಯೋತಿ' ಪ್ರಶಸ್ತಿ ಪಡೆದ ಕೃತಿ.)



 

Paachi Kattida Paagaara - a novel by Mitra Venkatraj

ಮಿತ್ರಾ ವೆಂಕಟ್ರಾಜರ ಕಾದಂಬರಿ -

'ಪಾಚಿ ಕಟ್ಟಿದ ಪಾಗಾರ'

- ಮುರಳೀಧರ ಉಪಾಧ್ಯ ಹಿರಿಯಡಕ


ಕುಂದಾಪುರದ ಶ್ರೀಮತಿ ಮಿತ್ರಾ ವೆಂಕಟ್ರಾಜ್ ಈಗ ಮುಂಬೈ ಮಹಾನಗರದಲ್ಲಿ ನೆಲೆಸಿರುವ ಕನ್ನಡ ಲೇಖಕಿ.  'ರುಕುಮಾಯಿ' 'ಹಕ್ಕಿ ಮತ್ತು ಅವಳು' ಇವರ ಕಥಾಸಂಕಲನಗಳು.  2010ರಲ್ಲಿ ಮನೋಹರ ಗ್ರಂಥಮಾಲೆ ಪ್ರಕಟಿಸಿರುವ ತನ್ನ ಚೊಚ್ಚಲ ಕಾದಂಬರಿ ಕುರಿತು ಲೇಖಕಿ, ಸುಮಾರು ಏಳೆಂಟು ವರ್ಷಗಳಿಂದ ನನ್ನ ಈ ಕಾದಂಬರಿಯ ಬರಹವು ಸಾಗಿಬಂದಿದೆ ಎಂದಿದ್ದಾರೆ.

ಪಾರಳ ಕತೆಯಿಂದ ಆರಂಭವಾಗುವ ಮೊದಲ ಭಾಗದಲ್ಲಿ 15 ಅಧ್ಯಾಯಗಳು.  ಕಮಲಿಯ ಕತೆಯಿಂದ ಆರಂಭವಾಗುವ ಎರಡನೆಯ ಭಾಗದಲ್ಲಿ 15 ಅಧ್ಯಾಯಗಳು ಒಟ್ಟು 30 ಅಧ್ಯಾಯಗಳ, 369 ಪುಟಗಳ ಕಾದಂಬರಿ ಇದು.  ಕನರ್ಾಟಕದ ಕರಾವಳಿಯ ಬಂಟ್ವಾಳ ತಾಲೂಕಿನ, ಉಡುಪಿ ತಾಲೂಕಿನ ಹಳ್ಳಿಗಳು ಇಲ್ಲಿನ ಕ್ರಿಯಾಕೇಂದ್ರಗಳು.  1920ರಿಂದ 1980ರ ವರೆಗಿನ ಘಟನೆಗಳ ಉಲ್ಲೇಖ ಈ ಕಾದಂಬರಿಯಲ್ಲಿದೆ.

ಪಾರಳ ತಂದೆ ಅಣ್ಣಪ್ಪಯ್ಯ 1920ರ ನೆರೆಗೆ ಬಲಿಯಾಗುತ್ತಾರೆ.  ಅಧ್ಯಾಪಕ ಗೋಪಾಲನ ಪತ್ನಿ ಪಾರ, ಶಿವರಾಮ ಕಾರಂತರ 'ಕಿಸಾಗೌತಮಿ' ಗೀತರೂಪಕದಲ್ಲಿ ಕಿಸಾಗೌತಮಿಯ ಪಾತ್ರ ಮಾಡುತ್ತಾಳೆ.  ಗೋಪಾಲನ ಗೆಳೆಯ ಸದಾನಂದ, ಸ್ವಾತಂತ್ರ್ಯ ಹೋರಾಟಕ್ಕೆ ಪೂರಕವಾಗಿದ್ದ ಸಮಾಜ ಸುಧಾರಣೆಯ ಚಳುವಳಿಯಲ್ಲಿ ಸಕ್ರಿಯನಾಗಿದ್ದಾನೆ.  1947ರ ಸ್ವಾತಂತ್ರ್ಯ ಕಳೆದು ಎರಡು ವಾರದಲ್ಲಿ ಗೋಪಾಲ ಹಾವು ಕಚ್ಚಿ ಸಾಯುತ್ತಾನೆ.  ಕಾದಂಬರಿಯ ಮೊದಲ ಭಾಗದ ಕೊನೆಯಲ್ಲಿ 1950ರ ದಶಕದ ಕೇರಳದ ಕಮ್ಯೂನಿಸ್ಟ್ ಸರಕಾರ ಹಾಗೂ 'ಉಳುವವನೇ ಹೊಲದೊಡೆಯ' ಘೋಷಣೆಯ ಪ್ರಸ್ತಾಪವಿದೆ.  ಕೆಮ್ಮಾಡಿ ಮನೆತನದ ಒಕ್ಕಲಿನವನ ಮಗ ಗೋವಿಂದನ ಆಧುನಿಕ ಶಿಕ್ಷಣದ ಕನಸಿಗೆ ಕೇರಳದ ನಾರಾಯಣ ಗುರುಗಳ ಬೋಧನೆ ಪ್ರೇರಣೆ ನೀಡುತ್ತದೆ.  ಕೆಮ್ಮಾಡಿ ಮನೆಯ ಜಮೀನ್ದಾರ ಮಾಧವ ಕರ್ನಾಟಕದ  ಭೂಸುಧಾರಣೆಯ ಶಾಸನ ಜ್ಯಾರಿಯಾಗುವುದಕ್ಕೆ ಎರಡು ವರ್ಷ ಮೊದಲು ಸಾಯುತ್ತಾನೆ.  ಶ್ಯಾನುಭಾಗರು, ಕೃಷ್ಣದೇವರಾಯರಿಗೆ ಹೇಳುವ ಒಂದು ಮಾತನ್ನು ಗಮನಿಸಬೇಕು - "ನಿಮ್ಮ ಕಾಲವೇ ಬೇರೆ.  ಈಗಿನ ನಮೂನೆಯೇ ಬೇರೆ.  ಬೇರೆ ಬೇರೆ ಕಾಲಕ್ಕೆ ಬೇರೆ ಬೇರೆ ನೀತಿ ಎಂದು ಅಂದು ಶ್ರೀಕೃಷ್ಣ ಪರಮಾತ್ಮ ಹೇಳಿದ್ದಲ್ಲಯೆ......".

'ಪಾಚಿ ಕಟ್ಟಿದ ಪಾಗಾರ' ಕಾದಂಬರಿಯ ವಸ್ತುವನ್ನು ಕುರಿತು ಲೇಖಕಿ ಮಿತ್ರಾ ವೆಂಕಟ್ರಾಜ್, "ಅಣ್ಣ ತಮ್ಮಂದಿರ ನಡುವಣ ಪ್ರೀತಿ-ದ್ವೇಷಗಳ ತಿಕ್ಕಾಟವೇ ಕತೆಯ ಮೂಲವಸ್ತುವಾದರೂ, ಪಾರ ಎಂಬವಳ ಕತೆಯೂ, ಕಾದಂಬರಿಯ ಉದ್ದಕ್ಕೆಲ್ಲ ಹರಿದುಕೊಂಡು ಅದಕ್ಕೆ ಇನ್ನೊಂದು ಆಯಾಮವನ್ನು ಕೊಡುತ್ತದೆ.  ಹಾಗೆಯೇ ಇದು, ಪಾರ, ಲಕ್ಷ್ಮೀದೇವಿ ಅವಳ ಸೊಸೆ ಕಮಲಿ - ಈ ಮೂವರು ಹೆಂಗಸರ ಬದುಕಿನ ಹೋರಾಟದ ಕತೆಯೂ ಹೌದು" ಎಂದಿದ್ದಾರೆ.

'ಪಾಚಿ ಕಟ್ಟಿದ ಪಾಗಾರ'ವನ್ನು ಧನಿ-ಒಕ್ಕಲು ಪದ್ಧತಿಯ ಅವಸಾನದ ಕಾಲದ ಕತೆಯಾಗಿ ನೋಡಿದಾಗ, ಸಾಮಾಜಿಕ ಪರಿವರ್ತನೆಯ ಸೂಕ್ಷ್ಮಗಳು ಇಲ್ಲಿ ಕಲಾತ್ಮಕವಾಗಿ ಚಿತ್ರಣಗೊಂಡಿರುವುದು ಕಾಣಿಸುತ್ತದೆ.  ಕೃಷ್ಣದೇವರಾಯರಲ್ಲಿ ಧನಿಗಳೊಬ್ಬರ ಒಳ್ಳೆಯತನ ಕಾಣಿಸಿದರೆ, ಅವರ ಮಗ ಮಾಧವನಲ್ಲಿ ಊಳಿಗಮಾನ್ಯ ವ್ಯವಸ್ಥೆಯ ಕ್ರೌರ್ಯ ಕಾಣಿಸುತ್ತದೆ.  ಕೃಷ್ಣದೇವರಾಯರು ತನ್ನ ಒಕ್ಕಲಿನವನಾದ ಮಂಜನ ಮಗ ಗೋವಿಂದನ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಾರೆ.  ತನ್ನ ಮಗ ಮಾಧವ ಮದುವೆಯಾಗಲು ನಿರಾಕರಿಸಿದಾಗ, ಕೃಷ್ಣದೇವರಾಯರು ಮದುಮಗಳ ತಂದೆ ನಾಗಪ್ಪಯ್ಯನವರಲ್ಲಿ ಕ್ಷಮೆಯಾಚಿಸುತ್ತಾರೆ.  ಪಾರಳಿಗೆ ಬೇರೆ ಗಂಡು ಹುಡುಕಿ ಅದೇ ಮಂಟಪದಲ್ಲಿ ಒಂದು ವಾರದೊಳಗೆ ಮದುವೆ ಮಾಡಿಸುತ್ತಾರೆ.
ಮಂಗಳೂರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ತನ್ನ ಮಗ, ಕಾಲೇಜು ಪ್ರಾಧ್ಯಾಪಕರ ಮೇಲೆ ಕೈಮಾಡಿದ ಎಂಬ ಸುದ್ದಿ ಕೇಳಿದ ಕೃಷ್ಣದೇವರಾಯರು, 'ತನ್ನ ಮಗ ಸತ್ತ' ಎಂದು ಉದ್ಗರಿಸುತ್ತಾರೆ.  ತಮ್ಮ ಸೀತಾರಾಮನ ಕಣ್ಣಿಗೆ ಅಣ್ಣ ಮಾಧವ 'ಹರಿಕತೆ ದಾಸರು ಬಣ್ಣಿಸುವ ಉಗ್ರ ನರಸಿಂಹನಾಗಿ' ಕಾಣಿಸುತ್ತಾನೆ.  ಮಾಧವನ ಕ್ರೌರ್ಯಕ್ಕೆ ಸೋಮ, ತನಿಯರಂಥ ಒಕ್ಕಲುಗಳು ಬಲಿಯಾಗುತ್ತಾರೆ.  ಸೋಮನ ಗುಡಿಸಲು ಬೆಂಕಿಗೆ ಆಹುತಿಯಾಗುತ್ತದೆ.  ತನಿಯ ನಾಪತ್ತೆಯಾಗುತ್ತಾನೆ.  ಮಾಧವನ ಆಶ್ರಯದಲ್ಲಿದ್ದ ವಿಧವೆ ಪಾರಳ ಮಗ ಲಚ್ಚಣ (ಲಕ್ಷ್ಮೀನಾರಾಯಣ) ಜಮೀನ್ದಾರರ ವಿರುದ್ಧ ಕಮ್ಯುನಿಸ್ಟರು
 ನಡೆಸುತ್ತಿದ್ದ ಗುಪ್ತ ಸಭೆಗಳಲ್ಲಿ ಭಾಗವಹಿಸುತ್ತಿದ್ದ.  ಅವನ ಕೊಲೆಯ ಹಿಂದೆ 'ಹುಲ್ಲೆ ಮೊಗದ ಹುಲಿ'ಯಂತಿರುವ ಮಾಧವನ ಕೈವಾಡ ಕಾಣಿಸುತ್ತದೆ.  ತನ್ನ ದುಶ್ಚಟಗಳಿಗೆ ಒಡನಾಡಿಯಾಗಿದ್ದ ಸೋದರಮಾವ ಅನಂತಯ್ಯನನ್ನು ಕೂಡ ಮಾಧವ
ನಿರ್ದಾಕ್ಷಿಣ್ಯವಾಗಿ ಮನೆಯಿಂದ ಹೊರಗೆ ಅಟ್ಟುತ್ತಾನೆ; ಪಾರಳಿಗೆ ಅಶನಾರ್ಥ ಕೊಡಿಸಲಿಕ್ಕಾಗಿ ಗೂಂಡಾಗಳನ್ನು ಬಳಸುತ್ತಾನೆ.  ಪಾರಳಿಂದ ಹಿಟ್ಲರನ ಕತೆ ಕೇಳಿದ ಲಕ್ಷ್ಮೀದೇವಿ 'ಪ್ರಪಂಚದಲ್ಲಿ ಇಂಥ ರಾಕ್ಷಸರೂ ಇದ್ದಾರೆಯೇ' ಎಂದು ಆಶ್ಚರ್ಯಪಡುತ್ತಾಳೆ.  ತನ್ನ ಮಗನೇನೂ 'ಕಮ್ಮಿ ಹಿಟ್ಲರ್ ಅಲ್ಲ' ಎಂದು ಮನಸ್ಸಿನಲ್ಲಿಯೇ ಅಂದುಕೊಳ್ಳುತ್ತಾಳೆ.  'ಕೆಮ್ಮಾಡಿ ಮನೆಯಲ್ಲಿ ಜೋರಾಗಿ ಶ್ವಾಸ ಬಿಡುಕ್ಕಾಗ' ಎಂಬ ಕಮಲಿಯ ಸೋದರರಿಯರ ತಮಾಷೆಯ ಮಾತು ಸತ್ಯಸಂಗತಿಯಾಗಿದೆ.  'ಹಸನಬ್ಬನನ್ನು ನಾನೇ ಕೊಲೆಮಾಡಿಸಿದೆ' ಎಂದು ಸುಳ್ಳು ಹೇಳುವ ಮಾಧವ ದ್ವೇಷ, ದರ್ಪ, ಹಿಂಸಾರತಿಯಿಂದ ದುರಂತದತ್ತ ಸಾಗುತ್ತಾನೆ.

ಇಪ್ಪತ್ತನೆಯ ಶತಮಾನದ ಕರಾವಳಿ ಕರ್ನಾಟಕದ ಮಹಿಳೆಯರ ಸ್ಥಿತಿ-ಗತಿಯನ್ನು 'ಪಾಚಿ ಕಟ್ಟಿದ ಪಾಗಾರ' ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ.  ನರ್ಸಪ್ಪಯ್ಯನ ಮೊದಲ ಹೆಂಡತಿ ಚೆನ್ನಮ್ಮ ಎರಡು ಹೆಣ್ಣು ಮಕ್ಕಳ ತಾಯಿ.  ತನ್ನ ಗಂಡನ ವಂಶ ಬೆಳೆಸಲು ಗಂಡುಮಕ್ಕಳು ಬೇಕೆಂದು ಅವಳು ತಾನೇ ಗಂಡನಿಗೆ ಸೀತಮ್ಮನೊಡನೆ ಎರಡನೆ ಮದುವೆ ಮಾಡಿಸುತ್ತಾಳೆ.  ಇಪ್ಪತ್ತು ವರ್ಷ ಪ್ರಾಯದ ವಿಧವೆ ಸೀತಮ್ಮ ಆಸ್ತಿಯ ಮೇಲ್ವಿಚಾರಣೆ ನೋಡಿಕೊಂಡು, ಗಂಡ ಮಾಡಿಟ್ಟ ಸಾಲ ತೀರಿಸುತ್ತಾಳೆ.  ಕೃಷ್ಣದೇವರಾಯನ ಹೆಂಡತಿ ಹೆರುವ ಯಂತ್ರದಂತೆ ಜೀವಿಸುತ್ತಾಳೆ.  ಶಂಕರಿ, ಮಾಧವ, ವಿಶಾಲು, ಜಲಜೆ - ಈ ನಾಲ್ವರು ಮಕ್ಕಳ ನಂತರ ಮುಂದೆ ಅವಳ ಏಳು ಮಕ್ಕಳು ಸಾಯುತ್ತಾರೆ.  ಶಾಂಭವಿ ಹನ್ನೆರಡನೆಯವಳು. ದೊಡ್ಡ ಮಗಳು ಎರಡನೇ ಹೆರಿಗೆಗೆ ಬಂದಾಗ ಲಕ್ಷ್ಮೀದೇವಿಗೆ ಹದಿನಾಲ್ಕನೆಯ ಹೆರಿಗೆಯಾಗುತ್ತದೆ.  ಆ ಮಗುವೇ ಸೀತಾರಾಮ.

ಪಾರು-ಗೋಪಾಲ ದಂಪತಿಗಳು ರಾತ್ರಿ ಕೆರೆಕಟ್ಟೆಗೆ ವಾಯುವಿಹಾರಕ್ಕೆ ಹೋಗುತ್ತಾರೆ.  ಆಗ ಗೋಪಾಲನ ದೊಡ್ಡಣ್ಣ ನಾರಾಯಣನು ಅವನನ್ನು ಕರೆದು" ಮಾಣಿ, ಗೋಪಾಲ ಇದು ಚಂದ ಕಾಣ್ತಿಲ್ಯ. ಹೆಂಡ್ತಿಗೆ ಹಲ್ಲೆಲ್ಲ ಲೆಕ್ಕ ಮಾಡೂಕೆ ಬಿಡ್ತೆ.  ಯಾವ್ಯಾವುದು ಎಲ್ಲಿರ್ಕೊ ಅಲ್ಲೆ ಇರ್ಕು.  ಕಾಲಿಗೆ ಹಾಗೂ ಚಪ್ಪಲಿ ತಲೆಮೇಲೆ ಹಾಕ್ಕಣುಕಾಗ.  ಕಂಡವ್ರು ನೆಗಾಡ್ತೊ" ಎಂದುಬಿಟ್ಟ.  ಆ ನಾಲ್ವತ್ತರ ದಶಕದಲ್ಲಿ ಕೋಟದ ಆಸುಪಾಸಿನಲ್ಲೆಲ್ಲೂ ಹೀಗೆ ಗಂಡ-ಹೆಂಡಿರು ಜೊತೆಯಲ್ಲಿ ತಿರುಗಾಡುವುದಾಗಲೇ, ಹರಟುವುದಾಗಲೀ ಇದ್ದಿರಲಿಲ್ಲ. (ಪುಟ-55)

ವಿಧವೆ ಪಾರಳಿಗೆ ಅಶನಾರ್ಥ ಕೊಡಲು ಅವಳ ಭಾವಂದಿರು ನಿರಾಕರಿಸುತ್ತಾರೆ.  ಪಾರ ಪಾತ್ರೆ ಮಾರಿ 5 ರೂಪಾಯಿ
 ಪಡದು ಒಂದು ಕೊಟ್ಟಿಗೆಯಲ್ಲಿ ಬದುಕುತ್ತಾಳೆ.  ಮೂರು ಮಕ್ಕಳನ್ನು ಅನಾಥಾಶ್ರಮಕ್ಕೆ ಕಳಿಸುತ್ತಾಳೆ.  ಪಾರ, ಕಮಲಿಯಂಥ ಹೆಣ್ಣುಮಕ್ಕಳ ಸ್ವಾಭಿಮಾನ, ಜೀವನೋತ್ಸಾಹ ಈ ಕಾದಂಬರಿಯ ದೃಷ್ಟಿಕೇಂದ್ರ.  ಆದರೆ ಶಂಕರಿ ಅವಿಭಕ್ತ ಕುಟುಂಬದ ಅಸೂಯೆ, ದ್ವೇಷಗಳಿಗೆ ಬಲಿಯಾಗುತ್ತಾಳೆ, ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

ಮಿತ್ರಾ ವೆಂಕಟ್ರಾಜರು ಕೋಟ ಕನ್ನಡದ ಎರಡು ಪ್ರಭೇದಗಳನ್ನು ಇಲ್ಲಿ ಬಳಸಿದ್ದಾರೆ.  ಬಂಟ್ವಾಳದ ಆಸುಪಾಸಿನ, ತುಳುವಿನ ಒಡನಾಟದಲ್ಲಿರುವ ಕೋಟ ಕನ್ನಡ ಈ ಕಾದಂಬರಿಗೆ ಪ್ರಾದೇಶಿಕ ಚೆಲುವನ್ನು ನೀಡಿದೆ.  ಗುಲ್ವಾಡಿ ವೆಂಟರಾಯರು ತನ್ನ 'ಇಂದಿರಾಬಾಯಿ' ಕಾದಂಬರಿಯಲ್ಲಿ ಬಳಸಿದ್ದ ಕೊಂಕಣಿ, ತುಳು ಒಡನಾಟದ ಕನ್ನಡ ಬಳಕೆಯನ್ನು ಈ ಲೇಖಕಿ ಸೃಜನಶೀಲವಾಗಿ ಮುನ್ನಡೆಸಿದ್ದಾರೆ.  ಮೀನಾಕ್ಷಿ ತನ್ನ ಮಗಳು ಪಾರಳನ್ನು ಸಾಕಿದ ರೀತಿಯನ್ನು ಲೇಖಕಿ ವಿವರಿಸುವುದು ಹೀಗೆ -

"ಮೀನಾಕ್ಷಿ ತನ್ನ ಮಗಳನ್ನು ಮುಚ್ಚಟೆಯಿಂದ ಸಾಕಿ ದೊಡ್ಡದು ಮಾಡಿದಳೆನ್ನಬೇಕು.  ಒಮ್ಮೆ ಅರಸಿನ ಕುಟ್ಟಿ ಪುಡಿಮಾಡಿ, ಅದಕ್ಕೆ ಕೆನೆ ಬೆರೆಸಿ, ಮಗಳ ಮುಖ ಮೈಗೆ ಹಚ್ಚಿ ಸ್ನಾನ ಮಾಡಿಸಿದರೆ, ಇನ್ನೊಮ್ಮೆ ತೆಂಗಿನ ಹಾಲನ್ನು ಸವರಿ ಅವಳ ಮೈ ತೊಳೆಯುತ್ತಿದ್ದಳು.  ಮಗಳ ಕೂದಲಿಗಂತೂ ಮೀನಾಕ್ಷಿ ಮಾಡದ ಉಪಚಾರವಿರಲಿಲ್ಲ.  ದಾಸವಾಳದ ಹೂವನ್ನು ಅರೆದು, ತಲೆಗೆ ಹಚ್ಚಿ, ಸೀಗೆಕಾಯಿ ಉಜ್ಜಿ, ಕೂದಲು ತೊಳೆಯುತ್ತಿದ್ದಳು.  ನಸು ಹೊಗೆಯಲ್ಲಿ ಕೂದಲು ಒಣಗಿಸಿ, ಒಂದೊಂದೇ ಕೂದಲನ್ನು ಜಡೆ ಕಟ್ಟುತ್ತಿದ್ದಳು.  ಆರೈಕೆ ಅನುಪಾನಗಳು ಸಾಕಷ್ಟಿದ್ದರೂ ಒಂದು ಮುದ್ದು ಮಾತಿನಿಂದ ಮೀನಾಕ್ಷಿ ಮಗಳನ್ನು ಕರೆದವಳಲ್ಲ.  ಕುಳಿತುಕೊಂಡು ಪ್ರೀತಿಯಿಂದ ಮಗಳೊಡನೆ ಸುಖ ದುಃಖಗಳನ್ನು ಹಂಚಿಕೊಂಡವಳಲ್ಲ.  ನಲ್ಮೆಯ ನುಡಿಗಳಿಗಿಂತ ಹೆಚ್ಚು ಬೈಗುಳಗಳನ್ನೇ ಕೇಳಿ ಪಾರಳು ಬೆಳೆದದ್ದೆಂದರೆ ಸರಿಯಾದೀತೇನೋ.  ಕೆಲವೊಮ್ಮೆ ಮೀನಾಕ್ಷಿ ಏನೇನೋ ನೆನಪಾಗಿ, ಮಗಳ ತಲೆಗೆ ನೀರು ಹುಯ್ಯತ್ತಿದ್ದಂತೆ ಅನವಶ್ಯಕವಾಗಿ, ಚೊಂಬಿನಿಂದಲೇ ಅವಳ ತಲೆಗೆ ಕುಟ್ಟಿ, 'ಅಯ್ಯೋ ಅಪ್ಪನ್ನ ತಿಂದು ಹುಟ್ಟಿದವಳೆ' ಎಂದು ಕಣ್ಣೀರು ತೆಗೆಸುವುದೂ ಇತ್ತು.

ಈ ಕಾದಂಬರಿಯಲ್ಲಿರುವ 'ಹೆಣೆ' ಎಂಬ ಸಂಬೋಧನೆ ಮುದ್ರಣದೋಷವಲ್ಲ. 'ಹೆಣ್ಣೆ', 'ಹೆಣೆ' ಎಂಬ ಜಾತಿಸೂಚಕ ವ್ಯತ್ಯಾಸವಿರುವ ಎರಡು ಪ್ರಯೋಗಗಳೂ ಕೋಟ-ಕನ್ನಡದಲ್ಲಿವೆ.

'ಪಾಚಿ ಕಟ್ಟಿದ ಪಾಗಾರ' ಎಂಬ ಶೀರ್ಷಿಕೆ, ಕೆಮ್ಮಾಡಿ ಮನೆಯಲ್ಲಿ, ಧನಿಗಳ ಮನೆಯಲ್ಲಿರುವ ಪಾಚಿಕಟ್ಟಿದ ಮನಸ್ಸುಗಳನ್ನು ಸೂಚಿಸುವಂತಿದೆ.  ಈ 'ಪಾಚಿ ಕಟ್ಟಿದ ಪಾಗಾರ'ದ ಒಳಗೆ ಕಮಲಿ, ಸೀತಾರಾಮರು ಗೃಹಬಂಧನದಲ್ಲಿದ್ದಂತೆ ಸಂಕಟಪಡುತ್ತಾರೆ.  ಕಾದಂಬರಿಯಲ್ಲಿ ಪಾಚಿಯ ಹಸಿರುಬಣ್ಣ ಹಿನ್ನೆಲೆಗೆ ಸರಿದು ಕ್ರಾಂತಿ-ಪರಿವರ್ತನೆಯ ಸಂಕೇತವಾದ ಕೆಂಪು ಮುನ್ನೆಲೆಗೆ ಬರುತ್ತದೆ.

ಶಿವರಾಮ ಕಾರಂತರ 'ಧರ್ಮರಾಯನ ಸಂಸಾರ' ಸ್ವಾತಂತ್ರ್ಯಪೂರ್ವದ ಕರಾವಳಿಯ ಜಮೀನ್ದಾರರ ಕ್ರೌರ್ಯ, ಹಿಂಸಾರತಿ, ವಿಕೃತ ಲೈಂಗಿಕ ಜೀವನವನ್ನು ಚಿತ್ರಿಸುವ ಮಹತ್ವದ ಕಾದಂಬರಿ.  'ಪಾಚಿ ಕಟ್ಟಿದ ಪಾಗಾರ'ದ ಮಾಧವ, 'ಧರ್ಮರಾಯನ ಸಂಸಾರ'ದ ಮಹಾಬಲಯ್ಯನನ್ನು ನೆನಪಿಸುತ್ತಾನೆ.  ಮಹಾಬಲಯ್ಯನ ಲೈಂಗಿಕ ದೌರ್ಬಲ್ಯಗಳು ಅವನ ದುರಂತಕ್ಕೆ ಕಾರಣವಾಗುತ್ತವೆ.  ಆದರೆ 'ಪಾಚಿ ಕಟ್ಟಿದ ಪಾಗಾರ'ದ ಮಾಧವನ ಅವನತಿಗೆ ಕಾರಣ 'ಭೂ ಸುಧಾರಣೆಯ' ಚಳುವಳಿ.  ಅವಸಾನದ ಅಂಚಿನಲ್ಲಿದ್ದ ಧನಿ-ಒಕ್ಕಲು ಪದ್ಧತಿಯ ಆತ್ಮೀಯ, ಕಲಾತ್ಮಕ ಚಿತ್ರಣವನ್ನು ಮಿತ್ರಾ ವೆಂಕಟ್ರಾಜರು ನೀಡಿದ್ದಾರೆ (ಈ ಕಾದಂಬರಿಯ ಹಿನ್ನೆಲೆಯಲ್ಲಿರುವ ಕರ್ನಾಟಕದಭೂಸುಧಾರಣೆಯನ್ನು ಕುರಿತ 'ದಕ್ಷಿಣ ಕನ್ನಡದಲ್ಲಿ ಭೂಸುಧಾರಣೆ' ಎಂಬ ಸಂಶೋಧನಾತ್ಮಕ ಲೇಖನವೊಂದನ್ನು ಜಿ. ರಾಜಶೇಖರ ಬರೆದಿದ್ದಾರೆ).

ಕರಾವಳಿ ಕರ್ನಾಟಕದ ಇಪ್ಪತ್ತನೆಯ ಶತಮಾನದ ಸಾಮಾಜಿಕ, ಕೌಟುಂಬಿಕ, ರಾಜಕೀಯ ಪರಿವರ್ತನೆಯನ್ನು ಸೂಕ್ಷ್ಮ ಒಳನೋಟಗಳೊಂದಿಗೆ ಚಿತ್ರಿಸುವ ಕಾದಂಬರಿ - 'ಪಾಚಿ ಕಟ್ಟಿದ ಪಾಗಾರ'. ಈ ಕಾದಂಬರಿಗೆ ಲೇಖಕಿಯ ಮೊದಲ ಕಾದಂಬರಿ ಎಂದು ರಿಯಾಯತಿ ಅಂಕ ನೀಡಬೇಕಾಗಿಲ್ಲ.  ಸಣ್ಣ ಕತೆಯಿಂದ ಕಾದಂಬರಿ ಪ್ರಕಾರಕ್ಕೆ ಜಿಗಿದಿರುವ ಲೇಖಕಿಈ ಕ್ಷೇತ್ರಕ್ಕೆ ಹೊಸಬರೆಂದು ಎಲ್ಲೂ ಅನ್ನಿಸುವುದಿಲ್ಲ.  ಮಿತ್ರಾ ವೆಂಕಟರಾಜ್ ತನ್ನ ಪ್ರಬುದ್ಧ ಜೀವನಾನುಭವದಿಂದ ಬರೆದಿರುವ ಈ ಕಾದಂಬರಿ, ಇಪ್ಪತ್ತೊಂದನೆಯ ಶತಮಾನದ, ಮೊದಲ ದಶಕದ ಕನ್ನಡದ ಅತ್ಯುತ್ತಮ ಕಾದಂಬರಿಗಳ ಸಾಲಿಗೆ ಸೇರುತ್ತದೆ.

'ಪಾಚಿ ಕಟ್ಟಿದ ಪಾಗಾರ'

- ಮಿತ್ರಾ ವೆಂಕಟ್ರಾಜ್

ಪ್ರ - ಮನೋಹರ ಗ್ರಂಥಮಾಲಾ, ಧಾರವಾಡ

ಮೊದಲ ಮುದ್ರಣ - 2010

Prajavani- ಚಂದ್ರಶೇಖರ ಕಂಬಾರ

ಚಂದ್ರಶೇಖರ ಕಂಬಾರ- ಸ್ತ್ರೀ- ಪುರುಷ-Prajavani

Kannadha Prabha.com PDF files- go to page 17

kamsavemba....p b prasanna[ second prize winning kannada essay in yugadi essay writing competition-Kannadha Prabha.com PDF files-2011- go topage- 17

Friday, April 15, 2011

maNiya venkataramana hebbar at 100

Mr Anantakrishna Hebbar[vittal, d. k ] is my friend. His father mr m v hebbar is 100 years old now. Family members are celebrating his birth centenary on may 1,2011 at puttur".jeevema sharadah shatam " Best wishes to mr centenarian m v hebbar

KIRUBERALU

KIRUBERALU- beautiful photos in susheelendra kudupady's blog-

Prajavani

ಎಚ್. ಎಸ್. ಶಿವಪ್ರಕಾಶ್- ಬರ್ಲಿನ್ ಟಾಗೂರ್ ಕೇಂದ್ರದ ನಿರ್ದೇಶಕ-ಅಭಿನಂದನೆಗಳು-Prajavani

Wednesday, April 13, 2011

savvy english savi[kannada] a book on recreatinal english by dr udayaravi shastry

savvy english savi[kannada]
[a book on recreational linguistics]
 written by dr Udayaravi Shastry
published by
jayanth book agency
no 87,3rd cross, 4th cross, 4th block
banashankari 3rd  stage, 3rd phase
 bangalore- 560085
first edition- 2009
second revised edition- 2010
price-rs 130
 This is the first book on recreational english in kannada.  Congratulations to  dr udyaravi shastry

Sangam house bangalore

Sangam house bangalore, invites kannada writers to writers residency program- last date to send application- july 31, 2011

The Weave of My Life

The Weave of My Life-[ a dalit woman's memoirs]- urmila pawar[ book review by wandana sonalkar

Prajavani

ರಾಮಚಂದ್ರ ಗುಹಾ- ನೆಹರೂಯುಗದ ಭಾರತೀಯರು-Prajavani

Thursday, April 7, 2011

neralu matthu itara aayda kathegalu-[kannada short stories- mahabalamurthy kodlakere[2010]]

neralu mathu ithara aaida kathegalu[kannada short ]
by- mahabalamurthy kodlekere
published by -
vasantha prakashana
no- 360, 10th b main, 3rd block,
 jayanagar
bangalore-560011
emaikl- vasantha_ prakashana@rediffmail.com
first published- 2010
pages- 306
price- rs-170
forward by g s amur
this book contains 21 short stories seleced from 6 short story collections of mahabalamurthy kodlekere.
mahabalamurthy kodlekere
178, 11th main, 7th cross,
[dr v k gokak road]
hanumantha nagar
bangalore-560019
email-
mahabalamurthykodlekere@hotmail.com
cover page- beautiful photo- koti theertha- gokarna

www.outlookindia.com | A Million Kissas

stories of the soil- classic punjabi stories-[ edited and translated by nirupama dutt-]www.outlookindia.com | A Million Kissas

yellaranthalla dr karatharu[kannada] edited by upendra somayaji[second edition-2011

yellaranthalla dr karantharu[[kannada]
[collection of articles written by different  authors]
edied by-c  upendra somayaji, chitrapadi saligrama[udupi dist]
published by
srinivasa pustaka prakashana
164/a 1st floor,  m r n building,
kanakapura main road,
basavanagudi,
bangalore-560004
mobile-9844774531- 9844048406
first edition -2002
revised edition- 2011
pages-192+4
price-rs100
cover design - baguru markandeya
this book contains 20 articles  about shivarama karanths' contribution to kannada literatute, yakshagana, popular science, environment ,education and film.k k hebbar,keremane mahabala hegde,dr kusuma soraba adyanadka krishna bhat, t p ashok, g s shivarudrasppa, b malini mallya and others have written about  the importance of dr karanths' contribution.