ಕನ್ನಡದಲ್ಲಿ ಚಿನುವ ಅಚಿಬೆ

ಕನ್ನಡದಲ್ಲಿ ಚಿನುವ ಅಚಿಬೆ

 'ಥಿಂಗ್ಸ್ ಫಾಲ್ ಅಪಾರ್ಟ್ನೈಜೀರಿಯದ ಕಾದಂಬರಿಕಾರ ಚಿನುವ ಅಚಿಬೆ (ಜನನ-1930) ಅವರು 1958ರಲ್ಲಿ  ಬರೆದ ವಿಶ್ವವಿಖ್ಯಾತ ಕಾದಂಬರಿ.  ನೈಜೀರಿಯದಲ್ಲಿ ಈ ಕಾದಂಬರಿಯ ಎರಡು ಲಕ್ಷಕ್ಕಿಂತ ಹೆಚ್ಚು ಪ್ರತಿಗಳು ಮಾರಾಟಗೊಂಡಿವೆ.  ಬ್ರಿಟಿಷರ ವಸಾಹತುವಾಗಿದ್ದ ನೈಜೀರಿಯಾ 1960ರಲ್ಲಿ ಸ್ವಾತಂತ್ರ್ಯ ಪಡೆಯಿತು.  ಹದಿನಾರನೆಯ ಶತಮಾನದಲ್ಲಿ ನೈಜೀರಿಯಾ ಪ್ರವೇಶಿಸಿದ ಬ್ರಿಟಿಷರು ಮುಂದೆ ಅಲ್ಲಿ ನಿಧಾನವಾಗಿ ಕ್ರೈಸ್ತ ಮತ ಪ್ರಚಾರ ಆರಂಭಿಸಿದರು.  ಪ್ರಾರಂಭದಿಂದಲೇ ಧರ್ಮ ಮತ್ತು ಶಿಕ್ಷಣ ಒಟ್ಟೊಟ್ಟಿಗೆ ಹೆಜ್ಜೆ ಇಟ್ಟವು.  'ಇಬೋ', 'ಹೌಸಾ' ಮತ್ತು 'ಯೊರೂಬಾ' ನೈಜೀರಿಯಾದ ಮೂರು ಬುಡಕಟ್ಟಿನವರು.  ಅಚಿಬೆ 'ಇಬೋ' ಬುಡಕಟ್ಟಿನವರು.  ನೊಬೆಲ್ ಪ್ರಶಸ್ತಿ ವಿಜೇತ ವೊಲೆ ಶೊಯಿಂಕ ಯೊರುಬಾ ಬುಡಕಟ್ಟಿನವರು.
 'ಕಬ್ಬಿಣದ ಕುದುರೆ'ಗಳನ್ನೇರಿ ಬಂದ ಪರಂಗಿ ಪಾದ್ರಿಗಳು ಸುವರ್ಣಗಡ್ಡೆಯ ಕೃಷಿಕರಾಗಿದ್ದ 'ಇಬೋ' ಬುಡಕಟ್ಟಿನವರು ಸಂಸ್ಕೃತಿಯನ್ನು ನಾಶಗೊಳಿಸುವುದು 'ಥಿಂಗ್ಸ್ ಫಾಲ್ ಅಪಾರ್ಟ್' ಕಾದಂಬರಿಯ ವಸ್ತು.  1983ರಲ್ಲಿ ಮೈಸೂರಿಗೆ ಭೇಟಿ ನೀಡಿದ ಚಿನುವಾ ಅಚಿಬೆ ಡಾ| ಯು. ಆರ್. ಅನಂತಮೂರ್ತಿ ಅವರೊಂದಿಗಿನ ಸಂವಾದದಲ್ಲಿ ತನ್ನ ಈ ಕಾದಂಬರಿಯ ಕುರಿತು, ನಾನು ಆ ಸಂಸ್ಕೃತಿ, ನಾಗರಿಕತೆ ಸುಸಂಪೂರ್ಣವಾದದ್ದು, ಪರಿಪಕ್ವವಾದದ್ದು, ಸಂವೇದನಾರಹಿತ ವಿದೇಶೀ ದಾಳಿಕೋರರ ಕೈಯಲ್ಲಿ ಅದು ಧ್ವಂಸವಾಯಿತು ಎಂದೇನೂ ಹೇಳುವುದಿಲ್ಲ.  ಬದಲಿಗೆ, ಅಲ್ಲಿನ ಸಾಂಪ್ರಾದಾಯಿಕ ಬದುಕಿನಲ್ಲಿ ಅದಾಗಲೇ ಬಿರುಕುಗಳಿದ್ದುದರಿಂದಲೇ ಕ್ರೈಸ್ತಧರ್ಮ ಅಷ್ಟರಮಟ್ಟಿಗೆ ಪ್ರಭಾವ ಬೀರಿ ಅಂಥ ಯಶಸ್ಸು ಗಳಿಸಲು ಸಾಧ್ಯವಾಯಿತು ಎಂದು ನನ್ನ ವಾದ.  ಸಂಸ್ಕೃತಿ ಎಲ್ಲರಿಗೂ ಸುಖ, ಸಂತೋಷ ಭದ್ರತೆಗಳನ್ನು ದೊರಕಿಸಿಕೊಟ್ಟಿರಲಿಲ್ಲ.  ಹಾಗಾಗಿ ಅಲ್ಲಿ ಅತೃಪ್ತರಾದವರೇ ಹೊಸ ವ್ಯವಸ್ಥೆಯನ್ನು ಬರಮಾಡಿಕೊಳ್ಳಲು ಮೊದಲಾದರು ('ಪೂರ್ವಾಪರ'-1990) ಎಂದಿದ್ದಾರೆ. 'ಥಿಂಗ್ಸ್ ಫಾಲ್ ಅಪಾರ್ಟ್' 'ಉಮೋಫಿಯಾ' ಎಂಬ ಇಬೋಗಳ ಹಳ್ಳಿಯ ಮೂರು ತಲೆಮಾರಿನ ಕತೆ.  ಒಕೊಂಕೊನ ತಂದೆ ಯನೋಕ ಕೊಳಲು ವಾದಕನಾಗಿದ್ದ, ಸೋಮಾರಿಯಾಗಿದ್ದ.  ಸಾಲಗಾರನಾಗಿದ್ದ ಅವನು ಊದಲು ರೋಗಿಯಾದಾಗ ಅವನ್ನು 'ಕೇಡಿನ ಕಾಡಿ'ನಲ್ಲಿ ಬಿಟ್ಟುಬಂದರು.  ಸತ್ತ ಮೇಲೆ ಅವನನ್ನು ಸಮಾಧಿ ಮಾಡಲಿಲ್ಲ.   ನಿಮ್ಮ ಕೋಳಿಗೆ ತೋಳು ಹೊಂಚುಹಾಕುತ್ತಿದ್ದರೆ ಮೊದಲು ತೋಳ ಓಡಿಸು, ಆ ಮೇಲೆ ಕೋಳಿಗೆ ಬುದ್ದಿ ಹೇಳಬಹುದು ಎಂಬ ಆಫ್ರಿಕನ್ ಗಾದೆಯಂತೆ ಬ್ರಿಟಿಷರ ಓಲೆಕಾರನ್ನು ಕೊಂದ ಒಕೊಂಕೊ ಆತ್ಮಹತ್ಯೆ ಮಾಡಿಕೊಂಡ.  ಆತ್ಮಹತ್ಯೆ ಮಹಾಪಾಪವಾದ್ದರಿಂದ ಅವನ ಕುಲಬಾಂಧವರು ಅವನ್ನು ಹೂಳುವಂತಿರಲಿಲ್ಲ. ಒಕೊಂಕೊನ ಮಗ ನೋಯೆ ಕ್ರೈಸ್ತನಾಗಿ ಮತಾಂತರಗೊಂಡ.
 'ಮೊರೆಯುವ ಜ್ವಾಲೆ'ಯಂತಿದ್ದ ಒಕೊಂಕೊ, ಸಮಷ್ಟಿ ಹಿತದ ನಿಷ್ಠೆಯಲ್ಲಿ ಮೂರು ವರ್ಷ ತನ್ನ ಸಾಕುಮಗನಾಗಿದ್ದ ಬಾಲಕ ಇಕೆಮೆಷೂನಾನನ್ನು ಕೊಂದ.  ಈ ಕೊಲೆಯಿಂದಾಗಿ ಅವನ ಮಗ ನೋಯೆಗೆ ತನ್ನ ಬುಡಕಟ್ಟಿನವರ ನಂಬಿಕೆಗಳು ಅಸಹ್ಯ ಹುಟ್ಟಿಸಿದುವು.  ಮುಂದೆ 'ಹೊಸ ಧರ್ಮದ ಕಾವ್ಯ' ಅವನನ್ನು ಸೆರೆಹಿಡಿಯಿತು.  ಒಕೊಂಕೊನ ಆತ್ಮಹತ್ಯೆ ಪರಂಗಿ ಕ್ರೈಸ್ತರ ಎದುರು ಇಬೋ ಬುಡಕಟ್ಟು ಸೋತದ್ದರ ಸಂಕೇತ,  ಕಾದಂಬರಿಯ ಕೊನೆಯಲ್ಲಿ ಪರಂಗಿ ಜಿಲ್ಲಾಧಿಕಾರಿ ನೈಜೀರಿಯದ ಕುರಿತು ತಾನು ಬರೆಯಬೇಕೆಂದಿರುವ ಪುಸ್ತಕದ ಶೀಷರ್ಿಕೆಯನ್ನು ನಿರ್ಧರಿಸುತ್ತಾನೆ -ನೈಜರ್ ಕೆಳದಂಡೆಯ ಆದಿವಾಸಿ ಜನರ ಶಾಂತೀಕರಣ.
 ಒಗ್ಬಾಫಿ ಉದೋನ ಹೆಂಡತಿಯ ಕೊಲೆಯ ಪ್ರಕರಣ, ಹೆಂಡತಿಯ ಮೇಲೆ ಹಾದರದ ಆರೋಪ ಹೊರಿಸಿದ ಉಜೋವುನಲುನ ಪ್ರಸಂಗ, ಒಕೊಂಕೊನ ಬಂದೂಕು ಸಿಡಿದು ಬಾಲಕನೊಬ್ಬ ಆಕಸ್ಮಿಕವಾಗಿ ಸತ್ತ ಘಟನೆ - ಇವುಗಳಲ್ಲಿ ಇಬೋ ಸಂಸ್ಕೃತಿಯ ಪ್ರಬುದ್ಧತೆ ಕಾಣಿಸುತ್ತದೆ.  ಆದರೆ 'ಓಸು'ಗಳನ್ನು ಅಸ್ಪೃಶ್ಯರೆಂದು ಪರಿಗಣಿಸುವುದು, ಅವಳಿ-ಜವಳಿ ಮಕ್ಕಳನ್ನು ಕೊಲ್ಲುವುದು - ಇಂಥಅನಿಷ್ಟ ಸಂಪ್ರದಾಯಗಳೂ ಅವರಲ್ಲಿದ್ದುವು.
 ಅಚಿಬೆಯವರ ಈ ಕಾದಂಬರಿಯ ಶೀರ್ಷಿಕೆ ಯೇಟ್ಸ್‌ನ 'ದಿ ಸೆಕಂಡ್ ಕಮಿಂಗ್' ಕವನದ ಸಾಲು.  (ರಾಮಚಂದ್ರ ಶರ್ಮರು ಈ ಸಾಲನ್ನು ಎಲ್ಲ ಛಿದ್ರ, ಅಭದ್ರ, ಕೂಡಿ ಹಿಡಿಯುವ ಕೇಂದ್ರ, ಕಟ್ಟು ಕಿತ್ತೊಗೆದಂತೆ ಅವ್ಯವಸ್ಥೆ ಎಂದು ಭಾಷಾಂತರಿಸಿದ್ದಾರೆ).  ಸಿ. ನಾಗಣ್ಣನವರು ಈ ಕಾದಂಬರಿಗೆ ನೀಡಿರುವ 'ಭಂಗ' ಎಂಬ ಶೀರ್ಷಿಕೆ ಔಚಿತ್ಯಪೂರ್ಣ.  'ಭಂಗ' ಶಬ್ದದ ಮುರಿಯುವಿಕೆ, ತುಂಡು, ನಾಶ, ಸೋಲು, ಅಪಮಾನ, ಕಷ್ಟ, ಅಲೆ, ಕುಂದು, ಕೊಂಕು, ಕಪಟ, ವಿಕಲ್ಪಗಣಿತ, ನಾಟ್ಯದಲ್ಲಿ ದೇಹವನ್ನು ನಿಲ್ಲಿಸುವ ಭಂಗಿ - ಎಂಬ ಎಲ್ಲ ಅರ್ಥಗಳೂ ಈ ಕಾದಂಬರಿಗೆ ಹೊಂದಿಕೊಳ್ಳುತ್ತವೆ.  ಅಚಿಬೆಯವರು ತನ್ನ ಬುಡಕಟ್ಟಿನ ಭಾಷೆಯ ಬದಲು ಇಂಗ್ಲಿಷಿನಲ್ಲಿ ಈ ಕಾದಂಬರಿ ಒಕೊಂಕೊನ ಆತ್ಮಹತ್ಯೆಯ ಮುಂದಿನ ಹಂತದಂತೆ ಕಾಣಿಸುತ್ತದೆ.
 ಡಾ| ಬಿ. ದಾಮೋದರ ರಾವ್ ಅವರು ಗುರುತಿಸಿರುವಂತೆ ಅಚಿಬೆಯವರ ಈ ಕಾದಂಬರಿಯಲ್ಲಿ ಇಬೋ ಅನುಭವ ಮತ್ತು ಇಂಗ್ಲಿಷ್ ಮಾಧ್ಯಮಗಳು ಕುತೂಹಲಕರವಾಗಿ ಬೆಸೆದುಕೊಂಡಿವೆ.  ಸಿ. ನಾಗಣ್ಣನವರು ನಂಜನಗೂಡಿನ ಕನ್ನಡದಲ್ಲಿ ಭಾಷಾಂತರಿಸಿರುವ ಈ ಕಾದಂಬರಿ 'ಕುಸುಮಬಾಲೆ'ಯಂಥ ಕನ್ನಡದ  ಸ್ವತಂತ್ರ ಕಾದಂಬರಿಯಂತೆ ಓದಿಸಿಕೊಂಡುಹೋಗುತ್ತದೆ "Once upon a time" she began, all the birds were invited to a feast in the sky.  They were very happy and began to prepare themselves for the great day.  They painted their bodies with red cam wood and drew beautiful patterns on them with uli." ಈ ಸಾಲುಗಳನ್ನು ಸಿ. ನಾಗಣ್ಣ ಹೀಗೆ ಅನುವಾದಿಸಿದ್ದಾರೆ - ಒಂದಾನೊಂದು ಕಾಲ್ದಲಿ ಅವಳು ಶುರುಮಾಡಿದಳು ಆಕಾಶದಲ್ಲಿ ಔತ್ನಕ್ಕ ಅಂತ ಎಲ್ಲ ಹಕ್ಕಿ ಪಕ್ಷಿಗಳಿಗೂ ಕರಬಂತು.  ಅವೆಲ್ಲಕ್ಕೂ ಕುಸಿಯಾಯ್ತು.  ಹೊರಡಾ ದಿವಸನ್ನ ಭಾಳ ಸಡಗರದಲ್ಲಿ ಕಾಯ್ತಾ ತಯಾರಿ ನಡೆಸಿದೊ.  ತಮ್ಮ ಮೈಮೇಲೆಲ್ಲ ಕೆಂಪು ಬಣ್ಣ ಬಳಕೊಂಡಿದ್ದವು.  ಆ ಮ್ಯಾಲ ಉಲಿ ಬಣ್ಣದಿಂದ ಬೇಕ್ಬೇಕಾದ ಚಿತ್ತಾರ ಬರೆಕೊಂಡಿದ್ದೊ
 ಇಬೋಗಳ ಒಂದು ಹಾಡಿನ ಭಾಷಾಂತರ ಹೀಗಿದೆ -
ಷ್‍ನಲ್ಲಿ

ನಾನವಳ ಕೈ ಹಿಡಕಂಡರ
ಮುಟ್ಟಬ್ಯಾಡ ಅಂತಾಳ
ನಾನವಳ ಕಾಲು ಹಿಡಕಂಡರ
ಮುಟ್ಟಬ್ಯಾಡ ಅಂತಾಳ
ಆದರೆ ಅವಳ ಸೊಂಟದ ಮಣಿಗಳ ಹಿಡಕೊಂಡರ
ಗೊತ್ತಿಲ್ಲದ ಹಾಗೆ ನಟನ ಮಾಡ್ತಾಳ.

 ವಾಸ್ತವವಾಗಿ ಅವರು ಗಾದೆಗಳೆಂಬ ತಾಳೆಯೆಣ್ಣೆಯಲ್ಲಿ ಅದ್ದಿಯೇ ಮಾತುಗಳನ್ನು ನುಂಗುವುದು ಎನ್ನುವ ಅಚಿಬೆಯವರು ಒಂದು ಬೆರಳಿಗೆ ಎಣ್ಣೆಯಾದರೆ ಮಿಕ್ಕ ಬೆರಳುಗಳೂ ಜಿಡ್ಡಾಗುವುವು - ಇಚಿಥ ಹತ್ತಾರು ಗಾದೆಗಳನ್ನು ಈ ಕಾದಂಬರಿಯಲ್ಲಿ ಬಳಸಿದ್ದಾರೆ.  ಈ ಗಾದೆಗಳಲ್ಲಿ ನೈಜೇರಿಯಾದ ಮಣ್ಣಿನ ವಾಸನೆ ಹೊಡೆಯುತ್ತದೆ.

 ಸಿ. ನಾಗಣ್ಣರವರ 'ಭಂಗ'ದ ಭಾಷಾಂತರ ಎಷ್ಟು ಚೆನ್ನಾಗಿದೆ ಎಂದರೆ - ನಾಟ್ಯ ವಿದುಷಿಯೊಬ್ಬರು ತನ್ನ 'ನಾಟ್ಯದಲ್ಲಿ ದೇಹವನ್ನು ನಿಲ್ಲಿಸುವ ಭಂಗಿ'ಯಂತಿದೆ.

- ಮುರಳೀಧರ ಉಪಾಧ್ಯ ಹಿರಿಯಡಕ
ಪುಸ್ತಕ ಸಮೀಕ್ಷೆ
'ಉದಯವಾಣಿ' (2001)

ಭಂಗ
'ಥಿಂಗ್ಸ್ ಫಾಲ್ ಅಪಾರ್ಟ್'
ಮೂಲ- ಚಿನುವ ಅಚಿಬೆ
ಅನುವಾದ- ಸಿ. ನಾಗಣ್ಣ
ಪ್ರ.: ಆರ್ ಡಿ ಕ್ರಿಯೇಟಿವ್ ಕಂಪನಿ
ಮಹಡಿ, 'ಮಾರುತಿ ನಿಲಯ'
ಸಿ.ಬಿ. ನಗರ, ಎರಡನೇ ಕ್ರಾಸ್
ಉಪ್ಪಾರಹಳ್ಳಿ, ತುಮಕೂರು-2
ಮೊದಲ ಮುದ್ರಣ - 2001
ಬೆಲೆ: ರೂ.35
bhanga
[kannada translation of' Things Fall Apart'
-chinua achebe
translated by-
C. Naganna
PUBLISHED BY-
r. d. creative company
maruti nilaya
c. b. nagar, 2nd cross,
upaarahalli,
tumkur-2,
first edition- 2001
price- rs- 35
review by- muraleedhara upadhya hiriadka
mupadhyahiri.blogspot.com




ಬಿ.ವಿ.ಕಾರಂತ-ಮುರಳೀಧರ ಉಪಾಧ್ಯ ಹಿರಿಯಡಕ[೨೦೧೦]


ಬಿ.ವಿ. ಕಾರಂತ[ಜೀವನ- ಸಾಧನೆ]- ಮುರಳೀಧರ ಉಪಾಧ್ಯ ಹಿರಿಯಡಕ[೨೦೧೦]ಸಾಧನಾ ಪ್ರಕಾಶನ, ಬೆಂಗಳೂರು
B. V. Karanta
-Muraleedhara Upadhya Hiriadka
published by-
SADHANA PRAKASHANA
no- 15/16
first floor,balepet, main road,
bengaluru-53
mobile-9480088960
first edition-2010
pages-100
price- rs-50
This is an abridged edition of my book b. v . karanta published in 1996, by karnataka sangha puttur.My editorial  is reprinted in this booklet.

The Old Man and the Sea

ಅಮೆರಿಕನರೆಂದೂ ಸೋಲುವುದಿಲ್ಲ

 ಅಮೆರಿಕನ್ ಕಾದಂಬರಿಕಾರ ಅನರ್ೆಸ್ಟ್ ಹೆಮಿಂಗ್ವೇಯ (1968-1961) 'ದಿ ಓಲ್ಡ್ ಮ್ಯಾನ್ ಆ್ಯಂಡ್ ದಿ ಸೀ' 1952ರಲ್ಲಿ ಪ್ರಕಟವಾದ 112 ಪುಟಗಳ ಕಿರು ಕಾದಂಬರಿ.  1954ರಲ್ಲಿ ಹೆಮಿಂಗ್ವೇ ಈ ಕಾದಂಬರಿಗಾಗಿ ನೊಬೆಲ್ ಪ್ರಶಸ್ತಿ ಪಡೆದು 1961ರಲ್ಲಿ ಆತ್ಮಹತ್ಯೆ ಮಾಡಿಕೊಂಡ.  ಹೆಮಿಂಗ್ವೇಯ ಇತರ ಮುಖ್ಯ ಕಾದಂಬರಿಗಳು - 'ಐಲಾಂಡ್ಸ್ ಇನ್ ದಿ ಸ್ಟ್ರೀಮ್' (1970), 'ಎ ಫಾರವೆಲ್ ಟು ಆರ್ಮ್ಸ್' (1927), 'ಫಾರ್ ಹೂಮ್ ದಿ ಬೆಲ್ ಟೋಲ್ಸ್' (1940).
 ಎಂಬತ್ತನಾಲ್ಕು ದಿನಗಳ ಕಾಲ ಪ್ರಯತ್ನಿಸಿದರೂ ಮುದುಕ ಸಾಂಟಿಯಾಗೋಗೆ ಗಲ್ಫ್ ಸ್ಟ್ರೀಮ್
 ಕಡಲಲ್ಲಿ ಒಂದೇ ಒಂದು ಮೀನು ಸಿಗುವುದಿಲ್ಲ.  ಬಾಲಕ ಮನೋಲಿನ್ ಮೊದಲ ನಲುವತ್ತ ದಿನಗಳ ವರೆಗೆ ಅವನ ಜತೆಯಲ್ಲಿದ್ದ.  ಆ ಮೇಲೆ ಮುದುಕ ಒಂಟಿಯಾಗಿ ಕಡಲಿಗೆ ಹೋಗುತ್ತಿದ್ದ.  ದೊಡ್ಡ ಮಾರ್ಲಿನ್ ಮೀನೊಂದು ಸಾಂಟಿಯಾಗೋನ ಬಲೆಗೆ ಬೀಳುತ್ತದೆ.  ಅವನು ಹೋರಾಡಿ ಅದನ್ನು ಕೊಂದು ದೋಣಿಗೆ ಕಟ್ಟುತ್ತಾನೆ.  ಆದರೆ ಏಳು ಶಾರ್ಕ್
 ಮೀನುಗಳು ಏಳು ಬಾರಿ ದಾಳಿ ಮಾಡಿ ಮಾರ್ಲಿನ್‍ನ ಮಾಂಸವನ್ನೆಲ್ಲ ತಿಂದು ಮುಗಿಸುತ್ತವೆ.  ಮುದುಕ ಸಾಂಟಿಯಾಗೋ, ಮಾರ್ಲಿನ್‍ನ  ಅಸ್ಥಿಪಂಜರದೊಂದಿಗೆ ಕಡಲತೀರಕ್ಕೆ ಬರುತ್ತಾನೆ.  ನಲ್ವತ್ತು, ಏಳು, ಮೂರು - ಈ ಸಂಖ್ಯೆಗಳನ್ನು ವಿಮರ್ಶಕರು
ಧಾರ್ಮಿಕ ಸಂಕೇತಗಳೆಂದು ಗುರುತಿಸಿದ್ದಾರೆ.  'ನಾನು ಧಾರ್ಮಿಕ  ಸ್ವಭಾವದ ಮನುಷ್ಯನಲ್ಲ' 'ಪಾಪವೆಂದರೇನು ತನಗೆ ಗೊತ್ತಿಲ್ಲ, ಅಂಥ ವಿಷಯಗಳಲ್ಲಿ ತನಗೆ ನಂಬಿಕೆಯಿದೆ ಎನಿಸುವುದಿಲ್ಲ' ಎಂದು ಸಾಂಟಿಯಾಗೋ ಯೋಚಿಸುತ್ತಾನೆ.
 ಹೆಮಿಂಗ್ವೇ ಎರಡನೆಯ ಮಹಾಯುದ್ಧದ ಕ್ರೌರ್ಯ, ಹಿಂಸೆ, ಸೇಡು, ಸರ್ವನಾಶಗಳನ್ನು ಕಂಡಿದ್ದ ಕಾದಂಬರಿಕಾರ.  ಧ್ವನಿಪೂರ್ಣವಾಗಿರುವ ಅವನ ಈ ಕಿರುಕಾದಂಬರಿಗೆ ರಾಜಕೀಯ ವ್ಯಾಖ್ಯಾನವೊಂದನ್ನು ನೀಡಲು ಸಾಧ್ಯವೇ? ಎಂದು
ಚರ್ಚಿಸಬೇಕಾಗಿದೆ.  'ಅಮೆರಿಕರೆಂದಿಗೂ ಸೋಲುವುದಿಲ್ಲ' ಎಂದು ಸಾಂಟಿಯಾಗೊ ಬೇಸ್ ಬಾಲ್ ಆಟದ ಕುರಿತು ಹೇಳುತ್ತಾನೆ.  ಈ ಮಾತು ನವವಸಾಹತುಶಾಹಿಯ ಸಂದರ್ಭದಲ್ಲಿ ರಾಜಿಕೀಯ ಅರ್ಥಾಂತರಗಳನ್ನು ಪಡೆಯಬಹುದಲ್ಲವೇ?  ದೊಡ್ಡ ಮೀನನ್ನು ಹಿಡಿದು ಕೊಲ್ಲುವ ಸಾಂಟಿಯಾಗೊ ಗೆದ್ದು ಸೋಲುತ್ತಾನೆ. ಅವನ ಜಯದ ಹಿಂದೆ ಅಪಜಯವೂ ಇದೆ.  ಜಪಾನಿನ ಮೇಲೆ ಅಣುಬಾಂಬು ಹಾಕಿದ ಅಮೆರಿಕ ಹಿರೋಶಿಮಾದ ಭಸ್ಮ ಕರಂಡಕಗಳನ್ನಲ್ಲದೆ ಇನ್ನೇನನ್ನು ಪಡೆಯಿತು?  ವಿಯೆಟ್ನಾಂ ಯುದ್ಧದಲ್ಲಿ ಅಮೆರಿಕನ್ನರಿಗೆ ಸಿಕ್ಕಿದ್ದು ಅಸ್ಥಿಪಂಜರಗಳು, ಶವಪಟ್ಟಿಗೆಗಳು ಮಾತ್ರವಲ್ಲವೇ?  ಕಾದಂಬರಿಯ ಕೊನೆಯ ವಾಕ್ಯ ಹೀಗಿದೆ - 'ವೃದ್ಧ ಸಾಂಟಿಯಾಗೋ ಸಿಂಹಗಳ ಬಗ್ಗೆ ಕನಸುಕಾಣುತ್ತಿದ್ದ'.  ಹೌದು, ಅಮೆರಿಕ ಯಾವಾಗಲೂ ತಾನು ಮೃಗರಾಜನಾಗಬೇಕೆಂದು ಕನಸು ಕಾಣುತ್ತದೆ.  ಆ ಕನಸನ್ನು ನನಸಾಗಿಸಲು ಆಗಾಗ ಕೆಲವು ಹೊಸ ಹೆಸರಿನ ಬಲೆಗಳನ್ನು ಹಿಡಿದುಕೊಂಡು ಹೊರಡುತ್ತದೆ.  ಮೀನಿನ ಅಸ್ಥಿಪಂಜರದೊಂದಿಗೆ ಹಿಂದಿರುಗಿದ ಮುದುಕನ ಕತೆ ಓದಿದಾಗ ನನಗೆ ಇದು ಒಬ್ಬ ಮುದುಕನ ಕತೆಯಲ್ಲ; ಒಂದು ದೇಶದ ಸೊಕ್ಕಿನ, ಅರ್ಥಹೀನ ಯುದ್ಧಗಳ ಕತೆ ಅನ್ನಿಸಿತು.
 ಎ.ಕೆ. ರಾಮಾನುಜನ್ ಬರೆದಿರುವವಂತೆ "ಕವಿ ಬೆಸ್ತ.  ನಿರಂತರದ ಹೊಳೆಯಲ್ಲಿ ಹಿಡಿದ ಮೀನು, ಐದು ನಿಮಿಷದ ಹಿಂದೆ ಬಳುಕಿ ಮಿಂಟಿದ ಮೀನು, ಹೊರಗೂ ಬದುಕಬೇಕೆನ್ನುವ ನಿಮಿಷದಾಚೆಯ ಬೆಸ್ತ.  ಹೆಮಿಂಗ್ವೇ ಸಾಯದ ಸುಂದರ ಮೀನುಗಳನ್ನು ಹಿಡಿದ ಕಾದಂಬರಿಕಾರ".  ಸಿದ್ಧರಾಜ ಪೂಜಾರಿ ಅವರ ಅನುವಾದ ತೃಪ್ತಿಕರವಾಗಿದೆ.

- ಮುರಳೀಧರ ಉಪಾಧ್ಯಾಯ
ಪುಸ್ತಕ ಸಮೀಕ್ಷೆ
ಉದಯವಾಣಿ (2000)

ವೃದ್ಧ ಸಾಂಟಿಯಾಗೊ ಮತ್ತು ಸಮುದ್ರ
(ನೊಬೆಲ್ ಪ್ರಶಸ್ತಿ ವಿಜೇತ ಕಾದಂಬರಿ)
ಇಂಗ್ಲಿಷ್ ಮೂಲ: ಅರ್ನೆಸ್ಟ್ ಹೆಮಿಂಗ್ವೇ
ಕನ್ನಡಕ್ಕೆ - ಸಿದ್ದರಾಜ ಪೂಜಾರಿ
ಪ್ರ: ಕವಿ ಚಕ್ರವರ್ತಿ ರನ್ನ ಪ್ರಕಾಶನ
ಮಹಾಲಿಂಗಪುರ - 587312
ಮೊದಲ ಮುದ್ರಣ: 2000  ರೂ.65

Sunday, May 29, 2011

ಪ್ರಿಂರೋಜವಿಜಯಮ್[ಕನ್ನಡ ಕಾದಂಬರಿ- ೧೯೧೩]

ಎಸ್. ಜಿ. ಗೋವಿಂದರಾಜ ಅಯ್ಯಂಗಾರ್ಯ-S. G Govindaraja aigangars'' ' Primrojavijayam'[ kannada novel]. was first published in 1913[ second print- 1924, third print- 1926.][pages 200, chapters- 36][ kannada translation of oliver goldsmiths'-the vicar of wakefield] read k. s madhusoodans' article in prajavani, kannada daily, may29, 2011.this is a worth discussig kannada novel, published in 1913. good topic for m. phil  or ph. d

ನಂಜಿನ ನಾಲಗೆ [ ಫ್ರೆಂಚ್ ಕತೆ]

[Prajavani]- ಮೊಹಮ್ಮದ್ ಮೌಲಿಸ್ ಹಾಲ್/ ಕೇಶವ ಮಳಗಿ

Friday, May 27, 2011

ಜಯಂತ ಕಾಯ್ಕಿಣಿ ವಾಚಿಕೆ

ಜಯಂತ ಕಾಯ್ಕಿಣಿ ವಾಚಿಕೆ-[ ಸಂ- ಡಾ/ ಸಿ. ಎನ್. ರಾಮಚಂದ್ರನ್]
jayant kaikini vaachike
[selected poems, stories, essays and lyrics]
edited by-
Dr. C. N. Ramachandran
publidshed by-
nudi pustaka,
no-27, 21st main road,
opp-bda complex,
banashankari 2nd stage,
bangalore-560070
phone-080-26711329
first edition-2010
price- rs-110
pges-144
Editor Dr C. N Ramachandran has written a scholarly introduction to this book

ಡಾ/ಗಿರಡ್ಡಿ ಗೋವಿಂದರಾಜ ಅವರೊಂದಿಗೆ[ಸಂದರ್ಶನ]

ಡಾ/ ಗಿರಡ್ಡಿ ಗೋವಿಂದರಾಜ-[ಮಹೇಶ್ ತಿಪ್ಪಶೆಟ್ಟಿ, ಮಲ್ಲಿಕಾರ್ಜುನ ಹಿರೇಮಠ] ಅರುಹು- ಕುರುಹು, ಎಪ್ರಿಲ್ ಜೂನ್- ೨೦೧೧
read dr/ giraddi govindaraj's interview in  aruhu- kuruhu,[ kannada quarterly], april- june- 2011,edied by h. s. umesh. mouna,366,navilu road, kuvempunagar, mysore-570023, mobile- 9449972117. email- aruhukuruhu@gmail.com.

ಅಮೃತ ಸೋಮೇಶ್ವರ-ಜೈಮಿನಿಭಾರತದಲ್ಲಿ ತಂದೆಮಕ್ಕಳ ಕಾಳಗ

ಅಮೃತ ಸೋಮೇಶ್ವರ- ಜೈಮಿನಿ ಭಾರತದಲ್ಲಿ ತಂದೆಮಕ್ಕಳ ಕಾಳಗ-read this insightful article in-gandhibazaar[kannada monthly]may,2011[editor- balakrisha k. n]26/3, ratnavils road, bangalore-4
mobile- 9448192842 email- rohith653@rediffmail.com

a comprehensive history of medieval india

[The Hindu] : A Comprehensive History of Medieval India-Salma Ahmad Farooqaui[ book review by-Ranee Kumar]

Thursday, May 26, 2011

ಚಕ್ರವರ್ತಿಯ ಬಟ್ಟೆಗಳು

ಚಕ್ರವರ್ತಿಯ ಬಟ್ಟೆಗಳು

  ಇಲ್ಲಿನ ಅನೇಕ ಬರೆಹಗಳ ಹಿಂದೆ ಒಂದು ಬಗೆಯ ಕೋಪ ಮತ್ತು ಅಸಹಾಯಕತೆಗಳಿವೆ.  ನಮ್ಮ ಕಾಲದ ಅಷ್ಟೇಕೆ, ಯಾವುದೇ ಕಾಲದ ಬದುಕಿನಲ್ಲಿ ತುಂಬಿಕೊಂಡಿರುವ ಆತ್ಮವಂಚನೆ ಮತ್ತು ಅನ್ಯ ವಂಚನೆಗಳ ಪ್ರಮಾಣವು ನನ್ನನ್ನು ದಿಕ್ಕುಗೆಡಿಸಿದೆ.  ನಾನು ಇವೆಲ್ಲವನ್ನೂ ಮೀರಿದ ದೇವತಾಮನುಷ್ಯನೆಂದಲ್ಲ.  ಆದರೆ ನಮಗೆಲ್ಲರಿಗೂ ಸುಳ್ಳೆಂದು ತಿಳಿದಿರುವ ಸಂಗತಿಗಳನ್ನು, ಅರ್ಧಸತ್ಯಗಳನ್ನು ನಾವೆಲ್ಲರೂ ಬಹಳವಾಗಿ ಜತನವಾಗಿ ಕಾಪಾಡಿಕೊಂಡು ಬಂದಿದ್ದೇವೆ.  ವ್ಯಕ್ತಿಯ ಸಾರ್ವಜನಿಕ ಇಮೇಜ್ ಮತ್ತು ಖಾಸಗೀ ಬದುಕುಗಳ ನಡುವೆ ಯಾವುದೇ ತಾಳಮೇಳವು ಇಲ್ಲದೇ ಹೋದಾಗ, ಮಾತುಗಳು ಬಿಚ್ಚಿಡುವುದಕ್ಕಿಂತ ಹೆಚ್ಚಾಗಿ ಬಚ್ಚಿಡುವುದನ್ನೇ ಕಾಯಕವಾಗಿ ಮಾಡಿಕೊಂಡಾಗ, ಹುಸಿಗಳ ಅಬ್ಬರವು ತಾನೇತಾನಾಗುತ್ತದೆ.  ಯಾವುದೋ ಒಂದು ಸಾಮಾಜಿಕ ಉದ್ದೇಶದಿಂದ, ಹೋರಾಟದ ಸಂದರ್ಭದಲ್ಲಿ ಮೂಡಿಬರುವ ವ್ಯೂಹತಂತ್ರಗಳಿಗೆ (ಸ್ಟ್ರಾಟಿಜಿ) ಕೊಂಚವಾದರೂ ಸಮರ್ಥನೆ ಇರುತ್ತದೆ.  ಬದಲಾಗಿ ತನ್ನನ್ನು ಪ್ರೊಮೋಟ್ ಮಾಡಿಕೊಳ್ಳುವ ಅಜೆಂಡಾದಿಂದ ಹುಟ್ಟುವ ಸುಳ್ಳುಗಳಿಗೆ ಅಂತಹ ನೆಪವೂ ಇರುವುದಿಲ್ಲ. ಚಕ್ರವರ್ತಿಯ ಬತ್ತಲೆತನದ ಬಗ್ಗೆ ಬಾಯಿಬಿಡಲು ಹಿಂಜರಿದ ಜನಸುಮುದಾಯದ ಬಗ್ಗೆ ನಾವು ಕೂಡ ಸುಳ್ಳುಗಳ ಮರೆಯಲ್ಲಿ ಸುಖವಾಗಿ ಬದುಕುತ್ತೇವೆ.  ನನ್ನ ದೃಷ್ಟಿಯಲ್ಲಿ ಆಂಡರ್ಸನ್ ಬರೆದ ಚಕ್ರವರ್ತಿಯ ಹೊಸ ಬಟ್ಟೆಗಳು ಎಂಬ ಕತೆಯು ನಮ್ಮ ಸಮಾಜದ ಬಹುದೊಡ್ಡ ರೋಗವೊಂದಕ್ಕೆ ಕನ್ನಡಿ ಹಿಡಿಯುತ್ತದೆ.

- ಡಾ| ಎಚ್.ಎಸ್. ರಾಘವೇಂದ್ರ ರಾವ್
ಚಕ್ರವರ್ತಿಯ ಹೊಸ ಬಟ್ಟೆಗಳು
- ಡಾ| ಎಚ್. ಎಸ್. ರಾಘವೇಂದ್ರ ರಾವ್
ಪ್ರಕಾಶಕರು - ಚಾಣಕ್ಯ ಪ್ರಕಾಶನ, ವಿಜಾಪುರ
2010.  ರೂ. 95.00

ಚಕ್ರವರ್ತಿಯ ಹೊಸ ಬಟ್ಟೆಗಳು

ಪರಿವಿಡಿ

1. ಚಕ್ರವರ್ತಿಯಹೊಸ ಬಟ್ಟೆಗಳು (01)
2. 'ಶೇಕಡಾ ಏಳರ ಖಳರು' - ಕೆಲವು ಟಿಪ್ಪಣಿಗಳು (06)
3. ನಿಜವೋ ಸುಳ್ಳೋ ನಿರ್ಧರಿಸಿ (12)
4. ದೇಶೀಯತೆ ಎಂಬ ಗಾಳಿಗೋಪುರ (18)
5. ಸಂಸ್ಕೃತಿಯ ಅಧ್ಯಯನ - ಕೆಲವು ಪ್ರತಿಕ್ರಿಯೆಗಳು (23)
6. ಕರ್ನಾಟಕದ ಸಂದರ್ಭದಲ್ಲಿ ಸಂಸ್ಕೃತಿಯ ಅಧ್ಯಯನ - ಪ್ರಶ್ನಾವಳಿ (30)
7. ಜನಪದ ಕಾವ್ಯದ ರೂಪಮೀಮಾಂಸೆ (34)
8. ಕರ್ನಾಟಕ  Vs  ಕನ್ನಡ: ಕೆಲವು ಅನುಮಾನಗಳು (41)
9. ಹಲವು ಬಣ್ಣದ ಹಕ್ಕಿ: ಐವತ್ತು ವರ್ಷಗಳ ಕನ್ನಡ ಸಾಹಿತ್ಯ (48)
10. ಕನ್ನಡ ಮತ್ತು ದಕ್ಷಿಣ ಕನ್ನಡ (56)
11. ಪದವಿ ತರಗತಿಗಳಲ್ಲಿ ಭಾಷಾ ಶಿಕ್ಷಣ ಕನ್ನಡ (67)
12. ಇವು ನೆನಪುಗಳಲ್ಲ (74)
13. ತಂತಿಯ ಮೇಲೆ ನಡಿಗೆ (77)
14. ಬೆರಳು ಕೇಳಿದ ಗುರು - ಕಣ್ಣು ಕೊಟ್ಟ ಗುರು (83)
15. ಖಾಸಗಿ ಮತ್ತು ಸಾರ್ವಜನಿಕ - ದೇವನೂರ ಮಹಾದೇವ ಮಾದರಿ (86)
16. ಧರ್ಮ ಮತ್ತು ಸಾಹಿತ್ಯ (89)
17. ಕನ್ನಡ ಸಾಹಿತ್ಯ, ಭಾಷೆ ಮತ್ತು ಭಾಷಾಶಾಸ್ತ್ರ : ಸಾಧನೆಗಳು, ಸಾಧ್ಯತೆಗಳು (110)
18. ಕನ್ನಡ ಸಾಹಿತ್ಯದಲ್ಲಿ ನೋವಿನ ನೆಲೆಗಳು (130)
chakravarthiya battegalu
[a collecton of critical essays in kannada]
-dr. h. s. raghavendra rao
edited by- aravinda chokkadi
published by
chanakya prakashana,
malaghana building,
meenakshi chouk,
vijapura-586101
phone-0835-2222197
pages-10+147=157
price-rs-95
first impression- 2010
cover page design- chandranath bajagoli

Dr/ S.N. Sridhar [interview]by- vikram visaji

Dr/ S. N .Sridhar[interview] by-Vikram Visaji[read this interview in mayura,kannada monthly, june,2011.
Dr. S. N. Sridhar,
professor,
department of linguistics,
state university of New York
Stony Brook,
New York-11768-4376
indina kannada- rachane mattu balake
[modern kannada-structure and usage]
by- dr. s. n. sridhar
published by-
kannada university hampi,
vidyaranya,
kamalapura-583221
 first impression-1995,
pages-164+12
rs-. 45
DR. S. N. SRIDHAR-'MODERN KANNADA GRAMMAR'

Tuesday, May 24, 2011

Graviola Fruit[ Lakshmana phala]- medicine for cancer ]available at subramanya, karnataka

for details contact- mr ganesh prasad-9448723259
                             mr ananda gowda- 9591965972
read report in udayavani , kannada daily dated- 25-5-2011

ನಗ್ನತೆಯ ಭವ್ಯಗುಡಿ ಮತ್ತು ಚಡ್ಡಿಗೆ ಹೆದರದವರು- ಶಾಂತಾರಾಮ ಸೋಮಯಾಜಿ[ಪ್ರಬಂಧಗಳು- ೨೦೧೦]

ನಗ್ನತೆಯ ಭವ್ಯಗುಡಿ ಮತ್ತು ಚಡ್ಡಿಗೆ ಹೆದರದವರು-ಶಾಂತಾರಮ ಸೋಮಯಾಜಿ[ಪ್ರಬಂಧಗಳು-2010]
nagnatheya bhavyagudi mattu chaddige hedaradavaru
[collection of kannada essays]
Shantharama Somayaji
first edition- 2010
demmi- 1/8
pages-- 200
price-rs 200
published by-
sahitya nandana
no- 9,4th e block
10th a main road
rajajinagar
bangalore-560010
mr. Shantharama  Somayaji[1947] is a renowned kannada writer. He has written more than 30 books in different genres-short story, novel, essay, childrens' books,'vaastu'etc.Mr Somayaji is an engineer. He worked as a professor in the universities of u. s .a  for  25 years.Now he is a resident of udupi, karnataka.


This collecton of essays by mr. Somayaji contains  27 essays.One of the kannada  weeklies requestd mr Somayaji to write these essays. But the editor rejected to publish these essays.Probably the editor didnot like the satire and scientific thinking in these essays.
In some of the essays mr somayaji  recollects his family life in u s a- for example-'nagtateya bhavya gudi..'
mr somayaji's  essays are like  a beautiful  collage- mixture of personal memories, humour, satire, scientific thinking and humaneness.
contact mr Santharama Somayaji-
   ' padma'
1st main,
2nd cross,
hayagreva nagar,
 udupi-576102
phone-0820-2574143
- muraleedhara upadhya hiriadka


ಡಾ/ತಾಳ್ತಜೆವಸಂತಕುಮಾರ-ಸೇಡಿಯಾಪು ಪ್ರಶಸ್ತಿ-೨೦೧೧-

ಅಭಿನಂದನೆಗಳು- ಮುರಳೀಧರ ಉಪಾಧ್ಯ ಹಿರಿಯಡಕ
raashtrakavi govinda pai samshodana kendra  udupi- sediyaapu krishna bhat award -2011 to dr Taltaje Vasanta Kumar- congratulations- muraleedhara upadhya

Friday, May 20, 2011

ಇಂದು ಬೆಂಗಳೂರಲ್ಲಿ ನಾಟಕ-MISTAKE-[ನಿ- ಡಾ/ಶ್ರೀಪಾದ ಭಟ್] ರಥಬೀದಿ ಗೆಳೆಯರು ಉಡುಪಿ

ravindra kalakshetra bengaluru- may 21, 2011 saturday 7pm-kannada drama 'mistake'[ story- sadat hasan manto] directed by dr shripada bhat, rathabeedhi geleyaru udupi. tingala nataka by karnataka nataka academy

ಪುಟ್ಟಕ್ಕನ ಹೈವೆ

[Prajavani]- puttakkana highway[director- suresh] national film award- kannada- 2010

ಬಾಬಾ ಎಂಬ ವಿದ್ಯಮಾನದ ಸುತ್ತ- ಚಂದ್ರಶೇಖರ ಪಾಟೀಲ

ಸಂಕ್ರಮಣ- ಚಂಪಾ ಕಾಲಂ -ಮಾರ್ಚ್ ಎಪ್ರಿಲ್ -2011
read chandrasheker patil's satire-' baba emba vidyamanada sutta' in sankramana, kannada periodical, march- april 2011[ vol- 46, no- 02]
sankramana prakashana
2nd cross,
jyoti layout,
 yelachenahalli,
 j p nagar post
 bangalore- 560078
phone- 080- 26323344
 mobile- 9449069344


ಡಾ/ಕೆ. ಎಮ್. ರಾಘವ ನಂಬಿಯಾರ್- ಕಾರ್ಕಳ ತಾಲೂಕು ಸಾಹಿತ್ಯ ಸಮ್ಮೇಳನ ಅಧ್ಯಕ್ಶರು-೨೪-೫-೨೦೧೧

Dr K .M. Raghava Nambiyar
 date of birth- 7-12- 1947
pen name- raanam
address-
 panchamoola
 journalists colony
 near indrani temple
 udupi- 576102
phone-
0820-2572355
mobile-9483032535
president- karkala taluk  11th kannada sahitya sammelana at  ennehole on may 24th 2011

ಡಾ/ ಎಮ್. ಎಮ್. ಕಲ್ಬುರ್ಗಿ[ಸಂದರ್ಶನ]- ಅಣ್ನಿಗೇರಿ ತಲೆಬುರುಡೆ....

ಗೌರಿ ಲಂಕೇಶ್ ಮೇ ೨೫, ೨೦೧೧-gauri lankesh, may 25th, 2011- Interview with dr M. M. Kalburgi by  Girish talikatti.In this interview dr Kalburgi explains the history of kashmiri radical shaivas who came to karnataka in the 13th century and dominated over the local lingayat groups.Veera Goggi deva was the leader of veera maaheshvara sangha at annigeri.His inscription  at veerabhadra temple annigeri describes him as an extrimist leader.Harihara in his -'Kovoora Bramaiiyyana Ragale' describes the beliefs of this radical shaiva group. Members of this group were committing mass suicide after after thier violent attacks on non- shaivas.. Veeragaase[turuvankaru] folk dance tradtion recollects the beliefs and rituals of this radical-[ ugra] shaiva group

Saturday, May 14, 2011

ರೋಹಿಣಿ-ಒಂದು ನಕ್ಶತ್ರದ ಹೆಸರು

[Prajavani]- ರಾಘವೇಂದ್ರ ಖಾಸನೀಸರ ಅಪ್ರಕಟಿತ ಕತೆ

ಕನ್ನದ ಜನಪದ ಕವಿಗಳು ಕಂಡ ದ್ರೌಪದಿ- ಡಾ/ ಬಿ. ಎನ್. ಸುಮಿತ್ರಾಬಾಯಿ

ಕನ್ನಡ ಜನಪದ ಕವಿಗಳು ಕಂದ ದ್ರೌಪದಿ[droupadi in kannada folk literatue]- dr b n sumitra bai- read this article in-'namma maanasa'-monthly-114/5 9th cross,2nd main,  chamarjapet,  bengalur-560018

Autumn Ways[haiku] by- H.S.Shivaprakash[2010]

Autumn ways[haiku]
by H.. S. Shivaprakash
Alokparva Prakashan
2010
pages- 72
rs- 150
 Read book review of 'autumn ways' by Anamika in INDIAN LITERATURE jan, feb- 2011.
Anamika says- "Some  such haikus burn bright, in the forest of the night. Both fo the rigour and succinctness  of percepton thet stand out of glow, almost  with the cocreetness of the Blaken  Tiger. A few of them are thinner:. Thin and shy. "

hotthu kanthuva munna[sarah aboobaker -autobiography- kannada- 2010]

hotthu kanthuva munna[autobiography] by dr saarah aboobaker
published by-
chandragiri prakashana
2-21-1631/2
microvave station road,
mangalore-575006
first edition- 2010
 price- rs-150
pages-5+209
phone-0824-2455292

hotthu kanthuva munna[sarah aboobaker ]book review by-dr sabeeha bhoomeegowda


ಸಬೀಹಾ ಭೂಮಿಗೌಡ-ಹೊತ್ತು ಕಂತುವ ಮುನ್ನ[ಸಾರಾ ಅಬೂಬಕರ್]- ಪುಸ್ತಕ ವಿಮರ್ಶೆ

graha prasveesha[drama]- rabindranath tagore. kannada translation by- srinivasa sutraave[2011]

ಗ್ರಹ ಪ್ರವೇಶ[ ನಾಟಕ] ಮೂಲ-ಟಾಗೂರ್- ಅನುವಾದ-ಶ್ರಿನಿವಾಸ ಸುತ್ರಾವೆ
ದರ್ಪಣ ಧಾರವಾಡ[೨೦೧೧]

Saturday, May 7, 2011

daughters -Bharati Ray

[a story of five generations] book review by Jahnavi Barua

/ Books : A room of their own- ವೀಣಾ ಶಾಂತೇಶ್ವೆರ್

[The Hindu ] : ವೀಣಾ ಶಾಂತೇಶ್ವೆರ್ ವಾಚಿಕೆ[ ಸಂ-ಎಮ್. ಎಸ್. ಆಶಾದೇವಿ]

Wednesday, May 4, 2011

Kumarvyas Bharat: kathe mattu kavya[ lectures] by Kirtinath kurtkoti[2010]

ಕುಮಾರವ್ಯಾಸ ಭಾರತ- ಕಥೆ ಮತ್ತು ಕಾವ್ಯ- ಕೀರ್ತಿನಾಥ ಕುರ್ತಕೋಟೆ
kumarvyas bharat: kathe mattu kavya
lectures by- kirtinath kurtkoti
editor- dr govindraj giraddi
publisher-
kurtkoti memorial trust
1- desai colony, university cross
 dharwad- 58003
first impression-2010
price- rs- 100
pges-10+126
size-1/8 demi
cover design-- sri madhu desasi, dharwad
Edited version of pro kirtinath kurtkoti"s lectures on kumaravyasa bharata at neenasam heggodu from 5-2-1991 to 14- 2- 1991.