ಕೆ. ಪಿ. ರಾವ್ { AUDIO- ಸಂದರ್ಶನ } K. P. RAO { AUDIO- Interview ]

Upload Audio | Listen to Audio | K. P. RAO { INERVIEW } | YourListen
ಕನ್ನಡ ಕಂಪ್ಯೂಟರ್ ಗೆ ಅಮೂಲ್ಯ  ಕೊಡುಗೆ ನೀಡಿರುವ ನಾಡೋಜ ಕೆ. ಪಿ ರಾವ್ ಅವರ ಸಂದರ್ಶನ  ಶ್ಯಾಮ ಭಟ್ಟರಿಂದ .

ಕೈದಿಗಳಿಗಿಂತ ನಿಕೃಷ್ಟ ಹಾಸ್ಟೆಲ್ ಬದುಕು -ನೀಲಾ. ಕೆ

ಕೈದಿಗಳಿಗಿಂತ ನಿಕೃಷ್ಟ ಹಾಸ್ಟೆಲ್ ಬದುಕು - Indiatimes Vijaykarnatka
ಮಹಿಳಾ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಚಿವರು ತುರ್ತು ಗಮನಿಸಬೇಕಾದ  ಸಮಸ್ಯೆಗಳು ಇಲ್ಲಿವೆ - ಮುರಳೀಧರ ಉಪಾಧ್ಯ

: ಮೇ ಸಾಹಿತ್ಯ ಮೇಳದ ಪ್ರಾಸ್ತಾವಿಕ ಮಾತು

ಲಡಾಯಿ ಪ್ರಕಾಶನ: ಮೇ ಸಾಹಿತ್ಯ ಮೇಳದ ಪ್ರಾಸ್ತಾವಿಕ ಮಾತು: ಡಾ.ಎಚ್.ಎಸ್.ಅನುಪಮಾ ಮೇ ತಿಂಗಳು ಹೋರಾಟದ ಮಾಸ. ಸಂಘಟಿತ ಧ್ವನಿ ಒಗ್ಗೂಡಿದ ಕಾಲ. ‘ಮೇ ಸಾಹಿತ್ಯ’ ಎಂಬ ಟರ್ಮ್ ಕೂಡಾ ಪ್ರತಿಭಟನಾ ಸಾಹಿತ್ಯಕ್ಕೆ ತತ್ಸಮಾನವಾಗಿ ಬಳಸಲ್...
Dr / H. S. ANUPAMA_ May Sahitya Sammelana, Dharwad-2013

0ುಶವಂತ ಚಿತ್ತಾಲರ ಪೀಜೀ


0ುಶವಂತ ಚಿತ್ತಾಲರ ಪೀಜೀ

 'ಅತಿಥಿ ದೇವೋಭವ' ಎಂದು ಸಾರುತ್ತಿದ್ದ ಸಂಸ್ಕೃತಿ0ೊಂದು 'ಗಿರಾಕಿ' ಅಥವಾ 'ಕಸ್ಟಮರ್' ಎಂಬ ಹೊಸದೊಂದು ವರ್ಗವನ್ನು ಸೃಷ್ಟಿಸಿರುವಲ್ಲಿ ನಮ್ಮ ನಾಗರೀಕತೆ0ುು ಆಧುನಿಕಪೂರ್ವ ಘಟ್ಟದಿಂದ ಆಧುನಿಕ ಘಟ್ಟಕ್ಕೆ ಹೊರಳಿಕೊಂಡಿರುವ ಸ್ಪಷ್ಟಸೂಚನೆ ಕಂಡುಬರುತ್ತದೆ. ಜೀವನಕ್ರಮ ಮತ್ತು ಮೌಲ್ಯಕಲ್ಪನೆಗಳಲ್ಲಿ ನಿಣರ್ಾ0ುಕ ಪಲ್ಲಟ ಕಂಡಿರುವ ಸಂಗತಿಗಳಲ್ಲಿ ಮೇಲುನೋಟಕ್ಕೇ ಎದ್ದುಕಾಣುವ ಪರಿಕಲ್ಪನೆಗಳೆಂದರೆ, 'ಅತಿಥಿ', 'ಅತಿಥೇ0ು' ಮತ್ತು 'ಆತಿಥ್ಯ'. ಅತಿಥಿ0ುನ್ನು ದೇವರಾಗಿ ಕಾಣದಿದ್ದವರೂ ಅಗತ್ಯವೆಂದೋ, ಅನಿವಾ0ರ್ುವೆಂದೋ ಅಪರಿಚಿತರಿಗೆ, ಪರವೂರಿನವರಿಗೆ ಕೈಲಾದ ಆತಿಥ್ಯವನ್ನು ಉಚಿತವಾಗಿ ನೀಡುತ್ತಿದ್ದುದು ಸಹಜವಾಗಿತ್ತು. ಇಂದಿಗೂ ಆಧುನಿಕ ನಾಗರಿಕ ಸವಲತ್ತುಗಳು ಇಲ್ಲದ ಅನೇಕ ಗ್ರಾಮಗಳಲ್ಲಿ  ಈ ಪದ್ಧತಿ ಇನ್ನೂ ಮುಂದುವರೆದಿದೆ. ನಗರಗಳು ಬೆಳೆದು ವಿದ್ಯಾಭ್ಯಾಸ, ಉದ್ಯೋಗ, ವ್ಯಾಪಾರ, ವೈದ್ಯಕೀ0ು ಚಿಕಿತ್ಸೆ, ಕೋಟರ್ು-ಕಛೇರಿ ವ್ಯವಹಾರಗಳು ಮುಂತಾದ ಕಾರಣಗಳಿಗಾಗಿ ದೊಡ್ಡ ಸಂಖ್ಯೆ0ುಲ್ಲಿ ಜನರು ಪಟ್ಟಣಗಳಿಗೆ ಬರುವುದು ಜಾಸ್ತಿ0ಾದ ಮೇಲೆ ಅವರ ಅಗತ್ಯಗಳನ್ನು ಪೂರೈಸುವ ಹೊಸ ಸಂಸ್ಥೆಗಳು ಅನಿವಾ0ರ್ುವಾಗಿ ಹುಟ್ಟಿಕೊಳ್ಳಬೇಕಾಯಿತು. ಇಂಥ ಎರಡು ಮುಖ್ಯ ವ್ಯವಸ್ಥೆಗಳೆಂದರೆ ಹೊಟೆಲ್ ಮತ್ತು ಪೀಜಿ. ಹಿಂದಿನ ಕಾಲದಲ್ಲಿ ನಗರಗಳಲ್ಲಿ ಇರುತ್ತಿದ್ದ ಧರ್ಮಛತ್ರಗಳು ಮತ್ತು ಇಂದೂ ನಗರಗಳಲ್ಲಿ ಇರುವ ಉಚಿತ ಹಾಸ್ಟೆಲ್ಲುಗಳಿಗೂ ಈ  ಹೊಟೆಲ್ ಮತ್ತು ಪೀಜಿಗಳಿಗೂ ಇರುವ ವ್ಯತ್ಯಾಸಗಳನ್ನು ವಿವರಿಸುವ ಅಗತ್ಯವಿಲ್ಲ. ಹಣ ಪಡೆದು ಊಟ-ವಸತಿಗಳನ್ನು ಒದಗಿಸುವ ಈ ಸಂಸ್ಥೆಗಳು ಮುಖ್ಯವಾಗಿ ಈ ಕಾರಣದಿಂದಲೇ ಉಳಿದ ವ್ಯವಸ್ಥೆಗಳಿಗಿಂತ ನಿರ್ಣ0ಾತ್ಮಕವಾಗಿ ಭಿನ್ನ. 'ವಾರಾನ್ನ'ದ ಪದ್ಧತಿ ಈಗ ನಿಂತು ಹೋಗಿರುವ ಹಾಗೆ ಕಾಣುತ್ತದೆ. ಬಡಮಕ್ಕಳನ್ನು ಮನೆ0ುಲ್ಲಿಟ್ಟುಕೊಂಡು ಅವರ ವಿದ್ಯಾಭ್ಯಾಸಕ್ಕೆ ನೆರವಾಗುವವರ ಸಂಖ್ಯೆ0ುೂ ಕಡಿಮೆ0ಾದಂತಿದೆ. ಹಾಗಾಗಿ ಹೊಟೆಲ್ಲುಗಳು ಮತ್ತು ಪೀಜಿಗಳು ಇಂದು ಪಟ್ಟಣಗಳಲ್ಲಿ ಮತ್ತು ನಗರ-ಮಹಾನಗರಗಳ ಅವಿಭಾಜ್ಯ, ಅನಿವಾ0ರ್ು ಅಂಗಗಳಾಗಿವೆ.
        ಈ ಬೆಳವಣಿಗೆ0ು ಮಾನಸಿಕ ಮತ್ತು ನೈತಿಕ ಪರಿಣಾಮಗಳನ್ನು ನಮ್ಮ ಸಾಹಿತ್ಯ ಕೃತಿಗಳು ಪರಿಶೀಲಿಸದೆ ಬಿಟ್ಟಿಲ್ಲ. ಕಾರಂತರ ಮರಳಿ ಮಣ್ಣಿಗೆ, ಶ್ರೀಕೃಷ್ಣ ಆಲನಹಳ್ಳಿ ಅವರ ಭುಜಂಗ0್ಯುನ ದಶಾವತರಗಳು ಕಾದಂಬರಿಗಳಲ್ಲಿ ಹೊಟೆಲ್ ಇಡುವುದರ ಬಗ್ಗೆ0ೆು ಪರ-ವಿರೋಧಗಳ ಸ್ವಾರಸ್ಯಕರ ಚಚರ್ೆಗಳಿವೆ. ಹೊಟೆಲ್ಗಳು ನಮ್ಮ ಸಾಮಾಜಿಕ ವ್ಯವಸ್ಥೆ0ು ಮೇಲೆ, ಅದರಲ್ಲೂ ಜಾತಿ ಸಂಬಂಧಗಳ ಮೇಲೆ ಮಾಡಿದ ಪರಿಣಾಮಗಳನ್ನು ಕಾರಂತ, ಅನಂತಮೂತರ್ಿ, ಆಲನಹಳ್ಳಿ ಕೃಷ್ಣ, ದೇವನೂರ ಮಹಾದೇವ ಮೊದಲಾದವರ ಕತೆ-ಕಾದಂಬರಿಗಳಲ್ಲಿ ವಿವರವಾಗಿ ಗಮನಿಸಬಹುದು. ಅನ್ನದಾನವನ್ನು ಶ್ರೇಷ್ಠದಾನವೆಂದು ನಂಬಿದ್ದ ಸಮುದಾ0ುಗಳಿಂದ ಬಂದವರೇ ಅನ್ನವಿಕ್ರ0ುಕ್ಕೆ ತೊಡಗಿದ್ದರಲ್ಲಿ ಆಧುನಿಕ ಇತಿಹಾಸದ ಒಂದು  ಹೊಸ ಘಟ್ಟವೇ ಗೋಚರವಾಗುವಂತಿದೆ. ಇದಕ್ಕೆ ಹೋಲಿಸಿದರೆ  ಪೀಜಿಗಳು ಆಮೇಲಿನ ಬೆಳವಣಿಗೆ ಎಂದು ಕಾಣುತ್ತದೆ. ಹೋಟೆಲ್ ಒಂದು 'ಉದ್ಯಮ'ವಾದರೆ ಪೀಜಿಗಳು ಅವುಗಳ ಮುಂದೆ ತೀರ ಸಣ್ಣವು. ಅವುಗಳು ಒಬ್ಬರ ಮನೆ0ು ಪರಿಧಿ0ೊಳಗೆ ನಡೆ0ುುವಂಥವು. ಅವುಗಳ ಪ್ರಮಾಣದಲ್ಲಿ ಒಂದು ಪೀಜಿ ಮತ್ತೊಂದಕ್ಕಿಂತ ತುಸು ಸಣ್ಣ-ದೊಡ್ಡ ಎನಿಸಿದರೂ 'ಮನೆ0ು ಆತಿಥ್ಯ' ಎಂಬ ನೆಲೆ0ುಲ್ಲಿ ಅವು ಹೊಟೆಲ್ಗಳಿಗಿಂತ ಭಿನ್ನವೆಂದು ಮೇಲುನೋಟಕ್ಕೆ ಕಾಣುತ್ತದೆ. ಅಂದರೆ ಒಂದು ಕುಟುಂಬವು ತನ್ನ ಮನೆ0ುನ್ನು ಮತ್ತು ತನಗಾಗಿ ತ0ಾರಿಸುವ ಆಹಾರವನ್ನು 'ಅತಿಥಿ'ಅಥವಾ ಅತಿಥಿಗಳೊಂದಿಗೆ ಹಂಚಿಕೊಂಡು ಅದಕ್ಕಾಗಿ ಪರಸ್ಪರ ಒಪ್ಪಿತ 'ಪ್ರತಿಫಲ'ವನ್ನು ಪಡೆ0ುುವ ಪೀಜಿ ವ್ಯವಸ್ಥೆ0ುು 'ಹೋಮ್ ಲವಿಂಗ್' ವ್ಯಕ್ತಿಗಳಿಗೆ ಆಥರ್ಿಕವಾಗಿ ಮತ್ತು ಭಾವನಾತ್ಮಕವಾಗಿ ಹೆಚ್ಚು ಸುರಕ್ಷಿತವೆಂದು ಅನಿಸಿದರೆ ಅದು ಸುಳ್ಳಲ್ಲ. ಹೊಟೆಲ್ಗಳಲ್ಲಿ ಅಷ್ಟಾಗಿ ಮುಖ್ಯವಲ್ಲದ 'ಹೊಂದಾಣಿಕೆ'0ು ಪ್ರಶ್ನೆ0ುನ್ನು ಇಲ್ಲಿ ಅತಿಥಿ-ಅತಿಥೇ0ುರು ಸೂಕ್ಷ್ಮವಾಗಿ ನಿಭಾಯಿಸಬೇಕಾಗುತ್ತದೆ. ಏಕೆಂದರೆ ಇಲ್ಲಿ ಅವರೀರ್ವರ ಸಂಬಂಧವು ಕೇವಲ ಮಾರಾಟಗಾರ-ಬಳಕೆದಾರ ಸಂಬಂಧಕ್ಕಿಂತ ತುಸು ಭಿನ್ನವಾಗಿರುತ್ತದೆ. ಮನೆ ಮಾಲೀಕ-ಬಾಡಿಗೆದಾರರ ಸಂಬಂಧಕ್ಕಿಂತಲೂ ಇದು ಸ್ವಲ್ಪ ಬೇರೆ0ುದೇ ಆದ ಸ್ತರದಲ್ಲಿರುತ್ತದೆ. ಪೀಜಿ0ುು ಮುಖ್ಯವಾಗಿ, ಉದ್ಯಮವೊಂದರ ಲಾಭ-ನಷ್ಟಗಳ ಪ್ರಶ್ನೆಗೆ ಹೊರತಾಗಿ ಇಬ್ಬರು ಅಥವಾ ಅದಕ್ಕಿಂತ ತುಸುವೇ ಹೆಚ್ಚಿನ ಸಂಖ್ಯೆ0ು ವ್ಯಕ್ತಿಗಳ ನಡುವಣ ಸಣ್ಣಪ್ರಮಾಣದ ಆಥರ್ಿಕ ಒಪ್ಪಂದವಾಗಿರುತ್ತದೆ. ಹೀಗಾಗಿ ಇದು ಹೆಚ್ಚಿನ ಪ್ರಚಾರವಿಲ್ಲದ ಆದರೆ ನಗರ-ಮಹಾನಗರಗಳಲ್ಲಿ ತುಂಬ ಜನಪ್ರಿ0ುವಾದ ಒಂದು ವ್ಯವಸ್ಥೆ0ಾಗಿ ಕಳೆದ ಆರೇಳು ದಶಕಗಳಿಂದ ಚಾಲ್ತಿ0ುಲ್ಲಿದೆ. ಪೀಜೀ ಅಂದರೆ 'ಪೇಯಿಂಗ್ ಗೆಸ್ಟ್'. ಇದಕ್ಕೆ ಸೂಕ್ತವಾದ ಸಮಾನಾರ್ಥಕ ಪದವೊಂದು ಕನ್ನಡದಲ್ಲಿ ಇಲ್ಲದಿರುವುದೂ ಈ ವ್ಯವಸ್ಥೆ0ುು ನಮ್ಮ ಸಂಸ್ಕೃತಿಗೆ ಹೊಸದು ಎಂಬುದನ್ನು ಸೂಚಿಸುತ್ತದೆ. ಅತಿಥೇ0ು ಮತ್ತು ಅತಿಥಿ ಇಬ್ಬರ ಆಥರ್ಿಕ ಅಡಚಣೆ0ುನ್ನೂ ತುಸು ನೀಗುವ ವ್ಯವಸ್ಥೆ ಇದು. ಕುಟುಂಬದ ಆದಾ0ು ಅದರ ಖಚರ್ಿಗೆ ಸಾಕಾಗುವಂತಿದ್ದರೆ ತಮ್ಮ ಮನೆ0ುನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಲು 0ಾರು ಬ0ುಸುತ್ತಾರೆ? ಹಾಗೆ0ೆು ಸ್ವಂತ ಮನೆ ಮಾಡುವಷ್ಟು ಅನುಕೂಲ ಇದ್ದವರು ಮತ್ತೊಬ್ಬರ ಮನೆ0ುಲ್ಲಿ ವಾಸಿಸಲು ಬ0ುಸುವರೆ? ಹಾಗಾಗಿ ಸರಳ ನೈತಿಕ ನೆಲೆಗಳಿಂದಷ್ಟೇ ಈ ಪ್ರಶ್ನೆ0ುನ್ನು ಚಚರ್ಿಸಲಾಗದು.
ಇನ್ನು ಹೊಸ ಆತಿಥ್ಯ ಪರಿಕಲ್ಪನೆ0ು ತೀರಾ ಈಚಿನ ಘಟ್ಟವೆಂದರೆ ಹೋಮ್ ಸ್ಟೇಗಳು. ನಗರ ಜೀವನದಿಂದ ಬೇಸತ್ತವರು ಬದಲಾವಣೆಗೋ, ಮನರಂಜನೆಗೋ, ಮನಃಶಾಂತಿಗೋ, ಮೋಜಿಗೋ, ಪ್ರಕೃತಿ0ು ಸಾಮೀಪ್ಯ ಬ0ುಸಿ0ೋ ಹಳ್ಳಿಗೆ ಬಂದು ನಾಲ್ಕಾರು ದಿನ 0ಾರ ಮನೆ0ುಲ್ಲಿ0ೋ ಉಳಿದು ಸ್ಥಳೀ0ು ಆತಿಥ್ಯವನ್ನು ಸವಿದು, ಸ್ಥಳೀ0ು ಜೀವನಕ್ರಮವನ್ನು ಕೆಲಕಾಲ ಬದುಕಿ ಮತ್ತೆ ನಗರಕ್ಕೆ ಹಿಂದಿರುಗುವ ಹೊಸ ವ್ಯವಸ್ಥೆ ಇದು. ಇಲ್ಲಿ ಸ್ಥಳೀ0ು ಊಟ-ವಸತಿ ಮಾತ್ರವಲ್ಲ ಒಂದು ಜೀವನಕ್ರಮವನ್ನೇ ಮಾರಾಟಕ್ಕೆ ಇಡಲಾಗುತ್ತದೆ. ಇದರ ಸ್ವರೂಪ ಮತ್ತು ಪರಿಣಾಮಗಳನ್ನು ಕುರಿತ ಕತೆಗಳೂ ಈಚೆಗೆ ಪ್ರಕಟವಾಗಿವೆ. ಉದಾಹರಣೆಗೆ, ಎಲ್.ಸಿ.ಸುಮಿತ್ರಾ ಅವರ ಕಣಿವೆ ಮನೆ.ಕಾಮ್, ಅನಂತಮೂತರ್ಿ0ುವರ ಪಚ್ಚೆ ರೆಸಾಟರ್್ ಕತೆಗಳನ್ನು ಈ ಹಿನ್ನೆಲೆ0ುಲ್ಲಿ ಓದಬಹುದು.
    ಮುಂಬಯಿ ಎಂಬ ಮಹಾನಗರದ ಜೀವನದ ಅನೇಕ ಮುಖಗಳನ್ನು ಸೂಕ್ಷ್ಮವಾಗಿ ಚಿತ್ರಿಸಿರುವ 0ುಶವಂತ ಚಿತ್ತಾಲರು ಪೀಜೀ  ಎಂಬ ಕತೆ0ುನ್ನು ತಮ್ಮ ಬರವಣಿಗೆ0ು ಮೊದಲ ಘಟ್ಟದಲ್ಲೇ ರಚಿಸಿರುವುದರಲ್ಲಿ ಆಶ್ಚ0ರ್ುವೇನಿಲ್ಲ. 1956ರಲ್ಲಿ ರಚಿತವಾದ ಈ ಕತೆ0ುು ಚಿತ್ತಾಲರ ಮೊದಲ ಕಥಾಸಂಕಲನ ಸಂದರ್ಶನ(1957)ದಲ್ಲಿ ಸೇರಿದೆ. ಅನಂತ ಕುಲಕಣರ್ಿ ಈ ಕತೆ0ು ಕೇಂದ್ರ ಪಾತ್ರ. ಧಾರವಾಡದ ಕಡೆಯಿಂದ ನೌಕರಿಗಾಗಿ ಮುಂಬಯಿಗೆ ಬಂದಿರುವ, ಇನ್ನೂ ಅವಿವಾಹಿತನಾಗಿ ಉಳಿದಿರುವ ಇವನು ಕಳೆದ ಏಳು ವರುಷಗಳ 'ರುಕ್ಷ ಆಫೀಸು ಕೆಲಸ, ದಣಿಸುವ ಬಸ್ ಕ್ಯೂ, ರುಚಿಯಿಲ್ಲದ ಬದಲಿಲ್ಲದ ಹೋಟೆಲೂಟ'ಗಳಿಂದ 'ವ್ಯಗ್ರ'ನಾಗಿದ್ದಾನೆ. ಬಹಳ ವರುಷಗಳ ನಂತರ ಗಜಾನನನೆಂಬ ಸಹಪಾಠಿ ಸಿಕ್ಕಾಗ, 'ಮುಂಬಯಿ0ುಲ್ಲಿ ಮನೆ ಸಿಗುವುದೇ ಕಠಿಣವಂತೆ. ನಿಮಗೆ ಮಾತ್ರ ಒಳ್ಳೇ ಮನೆ ಸಿಕ್ಕಿರಬೇಕು-ನೀವು ಮುಂಬಯಿಗೆ ಬಂದು ಬಹಳ ವರ್ಷಗಳಾದುವು' ಎಂದು ಅತಿ ಸಹಜವಾಗಿ ಕೇಳಿದ ಪ್ರಶ್ನೆಯಿಂದ 'ಅನಂತ ಒಮ್ಮೆಲೇ ಮ್ಲಾನಗೊಂಡ. ಅವನ ಇಂದಿನ ಮನಸ್ಥಿತಿ0ುಲ್ಲಂತೂ ಈ ಪ್ರಶ್ನೆ ಅತೀವ ಗಾಸಿಗೊಳಿಸಿತು', 'ಇಲ್ಲ, ನನಗೂ ಈ ವರೆಗೆ ಮನೆ ಸಿಗಲಿಲ್ಲ.(ಸಿಗುವ ಆಸೆ0ುೂ ಇಲ್ಲ. ನನಗೇಕೆ ಮನೆ?) ಗಿರಗಾಂವದಲ್ಲಿ ಒಂದು ಮಹಾರಾಷ್ಟ್ರೀ0ುನ್ ಕುಟುಂಬದಲ್ಲಿ 'ಪೇಯಿಂಗ್ ಗೆಸ್ಟ್' ಅಂತ ಇದ್ದೇನೆ' ಎಂದು ಉತ್ತರಿಸುತ್ತಾನೆ. ಗಜಾನನನು ಸಲಿಗೆಯಿಂದ, 'ಅಹುದೆ? ಟೈಮ್ಸ್ ಆಫ್ ಇಂಡಿ0ಾದಲ್ಲಿ ಬಹಳೇ ಬರುತ್ತಿವೆ ಜಾಹಿರಾತುಗಳು-ಪೀಜೀ ಅಕೋಮೊಡೇಷನ್ ಕುರಿತು, ಕೋಣೆಗಳೆಷ್ಟೋ?'. ತನ್ನ ಬಗ್ಗೆ ತಾನೇ ಕನಿಕರ ತುಂಬಿಕೊಂಡು ಅನಂತ ಉತ್ತರಿಸುತ್ತಾನೆ: 'ಕೋಣೆಗಳ ಪ್ರಶ್ನೆ0ೆು ಇಲ್ಲ; ಒಂದೇ ಒಂದು ಕೋಣೆ. ಹಾಗೆ ನೋಡಿದರೆ ಕೋಣೆ0ೆು ಅಲ್ಲ. ಬಾಲ್ಕನಿ0ೊಂದನ್ನು ಎಲ್ಲ ಬದಿಯಿಂದಲೂ ಬ್ಲ್ಯಾಂಡ್ಸು(ತಟ್ಟಿ)ಗಳಿಂದ ಮುಚ್ಚಿ ರೂಮಿನ ರೂಪ ತಂದಿದ್ದಾರೆ'. ತನ್ನಂತಹನಿಗಲ್ಲ ಮದುವೆ. ಮನೆ, ಮದುವೆ, ಸಂಸಾರ ಎಂದರೆ ಹೋರಾಟ. ಹೋರಾಡುವ ಶಕ್ತಿ ತನ್ನಲ್ಲಿ ಉಳಿದಿದೆ0ೆು? ಏಕೋ ಇದ್ದಲ್ಲೇ ಹಣ್ಣಾಗುತ್ತಿದ್ದೇನೆ. ಒಣಗುತ್ತಿದ್ದೇನೆ-ಎಂದೆಲ್ಲ ಅನಂತ ನೋ0ುುತ್ತಾನೆ. ಸಮುದ್ರತೀರದಲ್ಲಿ ಕುಳಿತು ಮುಂಬಯಿ0ು ಜನಸಾಗರವನ್ನು ನೋಡುವಾಗ ತನ್ನಂತೆ ಎಷ್ಟೋ ಜನ ಇದೇ ಪರಿಸ್ಥಿತಿ0ುಲ್ಲಿರಬಹುದಲ್ಲವೆ ಎನಿಸುತ್ತದೆ: ಈ ಎಲ್ಲ ಜನರಿಗೆ ಮನೆಗಳಿವೆ0ೆು? ಇಷ್ಟೆಲ್ಲ ಜನರಿಗೆ ಮನೆ ಒದಗಿಸಿದ ಮುಂಬಯಿ, ತನಗೊಬ್ಬನಿಗಷ್ಟೇ..ಹುಚ್ಚು, ತನ್ನಂತೆ0ೆು ಪರರ ಮನೆ0ು ಬಾಲ್ಕನಿ0ುಲ್ಲೋ, ಅಡುಗೆ ಮನೆ0ುಲ್ಲೋ ಮಲಗುವ ಜನ ಇವರಲ್ಲೆಷ್ಟೋ! ತನ್ನಂತೆ0ೆು ಕೂಡ್ರಲೂ ರೂಮು ಇಲ್ಲದೆ, ಆಫೀಸು ಬಿಟ್ಟ ಮೇಲೆ ಅಲ್ಲಿ ಇಲ್ಲಿ ವೇಳೆ ಕಳೆದು, ರಾತ್ರಿ ಮಲಗಲಷ್ಟೇ ಮನೆ(ಹೆರವರದು) ಸೇರುವ ಜನ ಅದೆಷ್ಟೋ!
ಇಂದು ಅನಂತನ ಮನಸ್ಸು ಅಸ್ತವ್ಯಸ್ತಗೊಂಡಿದೆ. ಇಷ್ಟು ದಿನ ತಾನು, ಅರವಿಂದ-ಇಬ್ಬರೂ ಉಪ0ೋಗಿಸುತ್ತಿದ್ದ ಕೋಣೆ ಇಂದಿನಿಂದ ಅರವಿಂದ ಹಾಗೂ ಅವನ ಹೆಂಡತಿ0ು ಕೋಣೆ0ಾಗಲಿದೆ. ಮನೆ0ುಲ್ಲೆಲ್ಲ ಒಬ್ಬ ಹೊಸ ಹೆಣ್ಣು(ಗೆಳೆ0ುನ ಹೆಂಡತಿ0ಾದರೇನಂತೆ!) ಓಡಾಡುತ್ತಿರುವಾಗ, ತಾನೊಬ್ಬನೇ ಬಾಲ್ಕನಿ0ುಲ್ಲಿ ಮುದುಡಿ ಕೂಡ್ರುವುದಕ್ಕಿಂತ, ಇಲ್ಲಿ ತುಸು ಹೊತ್ತು ಕಳೆದು ಇಲ್ಲಿಂದಲೇ ಹೋಟೆಲ್ಲಿಗೆ ಹೋಗಿ ಆದಷ್ಟು ರಾತ್ರಿ ಮಾಡಿ ಮನೆ ಸೇರಿದರೆ ಬಾಲ್ಕನಿ0ುಲ್ಲಿ ಮಲಗುವ ತನಗೆ 0ಾರಿಂದಲೂ ತೊಂದರೆಯಿಲ್ಲ, ತನ್ನಿಂದಲೂ ಇತರರಿಗೆ ತೊಂದರೆಯಿಲ್ಲ. ರಾತ್ರಿ ಬಾಲ್ಕನಿ0ುಲ್ಲಿ ಮಲಗಿದಾಗ ಪಕ್ಕದ ಕೋಣೆಯಿಂದ ನವದಂಪತಿಗಳ ಸರಸ-ಸಂಭಾಷಣೆ ಬೇಡ ಬೇಡವೆಂದರೂ ಅವನ ಕಿವಿ0ುನ್ನು ತುಂಬುತ್ತದೆ. 'ಥೂ ಇದೇನು! ತುಸು ಮೆಲ್ಲಗೆ ಮಾತನಾಡಬಾರದೆ? ತಾನು ಇಲ್ಲಿ ಮಲಗಿದ್ದೇನೆ ಎನ್ನುವ ಅರಿವೂ ಇರಬಾರದೇ?-ಅನಂತನ ಸುಸಂಸ್ಕೃತ ಮನಸ್ಸು ತಿರಸ್ಕಾರ ವ್ಯಕ್ತಪಡಿಸಿತು. ಆದರೆ?..ಹೃದ0ುದಲ್ಲೋ ಅಲ್ಲೋಲಕಲ್ಲೋಲ. ಮರುಕ್ಷಣ ತನ್ನ ಸ್ಥಿತಿಗೆ ತನಗೇ ಮರುಕವೆನಿಸಿತು. ತಾನಿದ್ದೇನೆ ಎನ್ನುವ ಅರಿವೇ ಇಲ್ಲ ಇವರಿಗೆ. ತಾನು ಇದ್ದರೇನು? ಇಲ್ಲದಿದ್ದರೇನು?..'.ಕ್ರಮೇಣ 'ಅನಂತನ ಜಾಗೃತ ಸುಸಂಸ್ಕೃತ ಪ್ರಜ್ಞೆ0ುನ್ನು ಮೀರಿ ನಿಂತ ಅಗಾಧ ಶಕ್ತಿ0ೊಂದು'ಅವನನ್ನು ಸಾವಕಾಶ ಹಾಸಿಗೆಯಿಂದ ಹೊಡೆದೆಬ್ಬಿಸುತ್ತದೆ. ಗೋಡೆಗೆ ಕಿವಿ ಹಚ್ಚಿ ನವದಂಪತಿಗಳ ಸಂಭಾಷಣೆ0ುನ್ನು ಆಲಿಸುತ್ತಾನೆ:
'ತುಸು ಮೆಲ್ಲಗೆ(ಮಾತನಾಡಬಾರದೆ?)'
ನಾಳೆ0ೆು ಹೇಳುತ್ತೀರಲ್ಲ, ಹಾಗಾದರೆ?'
'ಏನೆಂದು?'
'ಬೇರೆ0ೆುಡೆ ರೂಮು ಹಿಡಿ0ುಲು?'
ಅವನಿದ್ದರೆ ತೊಂದರೆ0ೆು?'
'ತೊಂದರೆ0ುಲ್ಲ..ಏನೋ ಸಂಕೋಚ..ಮೇಲಾಗಿ ಇದ್ದುದೊಂದು ಬಾಲ್ಕನಿ..ಆರಾಮಾಗಿ ಕೂಡ್ರೋಣ ಎಂದರೆ..'
'ಇಷ್ಟೆಲ್ಲ ವರುಷ ನಮ್ಮಲ್ಲಿದ್ದವ..ಮೇಲಾಗಿ ಅಪ್ಪ ಒಪ್ಪುತ್ತಾರೊ, ಇಲ್ಲವೊ..ಕುಳಿತಲ್ಲಿ 40 ರೂ ಬಾಡಿಗೆ..'.
'ಅವರನ್ನು ಒಪ್ಪಿಸುವ ಕೆಲಸ ನನ್ನದು.''ಇಂತಹ ಸುಖದ ಸಮ0ುದಲ್ಲಿ ಅವನ ಹೆಸರೇಕೆ?..ತುಸು ಹತ್ತಿರ ಬಾರಲ್ಲ..'.
ಅನಂತನ ಮೇಲೆ ಈ ಸಂಭಾಷಣೆ ಮಾಡುವ ಪರಿಣಾಮಗಳನ್ನು ವಿವರಿಸುವ ಅಗತ್ಯವಿಲ್ಲ. ಅನಂತನ ಪಾಡು ಆಮೇಲೆ ಏನಾಯಿತೆಂದು ಕತೆ ಲಂಬಿಸಿಕೊಂಡು ಹೋಗುವುದಿಲ್ಲ.  ಮುಖ್ಯವಾದ ಸಂಗತಿ ಎಂದರೆ ಚಿತ್ತಾಲರ ಕಥನಪ್ರತಿಭೆ0ುು ಅರ್ಧ ಶತಮಾನದಷ್ಟು ಹಿಂದೆ0ೆು ಆಧುನೀಕರಣ-ನಗರೀಕರಣಗಳ ಪರಿಣಾಮಗಳ ಒಂದು ಮುಖ್ಯ ಮಾದರಿ0ುನ್ನು ಪೀಜೀ ಎಂಬ ರೂಪಕದಲ್ಲಿ ಸಮರ್ಥವಾಗಿ ಕಟ್ಟಲು ಸಾಧ್ಯವಾಗಿರುವುದು. ಲೇಖಕರ ಸಹಾನುಭೂತಿ0ುು ಎಲ್ಲ ಪಾತ್ರಗಳ ಬಗ್ಗೆ0ುೂ ಸಮಾನವಾಗಿ ವ್ಯಕ್ತವಾಗಿರುವುದು ಈ ಕತೆ0ು ಸಂಕೀರ್ಣತೆಗೆ ಒದಗಿಬಂದಿದೆ. ಮತ್ತು ಪೀಜೀ ಎಂಬ ವ್ಯವಸ್ಥೆ0ುನ್ನು ಸಮಸ್ಯಾತ್ಮಕಗೊಳಿಸಿದೆ.  ಇಂದು ಈ ಪರಿಸ್ಥಿತಿ0ುು ಅನಂತ ಎಂಬ ಓರ್ವ ವ್ಯಕ್ತಿಗಾಗಲೀ ಮುಂಬಯಿ ಎಂಬ ಒಂದು ಮಹಾನಗರಕ್ಕಾಗಲೀ ಸೀಮಿತಗೊಂಡಿಲ್ಲ. ಹಳ್ಳಿ ಮತ್ತು ಸಣ್ಣ ಊರುಗಳಿಂದ ಇಂದು ಬೆಂಗಳೂರಿಗೆ (ಅಥವಾ ಅಂಥ ನಗರಗಳಿಗೆ) ವಲಸೆ ಹೋಗುತ್ತಿರುವ ಸಾವಿರಾರು ತರುಣ-ತರುಣಿ0ುರ ಪಾಡು ಇದಕ್ಕಿಂತ ಬೇರೆ0ುಲ್ಲ. ತನ್ನ ಕಾಲದೇಶಗಳಿಗೆ ಬದ್ಧವಗಿದ್ದೂ ಚಿತ್ತಾಲರ ಈ ಕತೆ ಗಳಿಸಿಕೊಂಡಿರುವ ಸಾಧಾರಣೀಕರಣ ಅಸಾಧಾರಣವಾದದ್ದು.
                              ******
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228


Saturday, May 18, 2013

ಗಿರೀಶ್ ಕಾರ್ನಾಡ್ -75 ‘A really serious playwright’ -Devina Dutt

‘A really serious playwright’ - The HinduPhoto: Courtesy Harmony/Vilas Kalgutker
ಗಿರೀಶ್ ಕಾರ್ನಾಡರಿಗೆ ೭೫ .  ಹುಟ್ಟು ಹಬ್ಬದ ಶುಭಾಶಯಗಳು - ಮುರಳೀಧರ ಉಪಾಧ್ಯ ಹಿರಿಯಡಕ

ಕಬ್ಬಿನ ಹಾಲು- KABBINA HAALU (Sugarcane Juice) Short Movie - YouTube

KABBINA HAALPhoto: ಡಾ । ವಿಷ್ಣುವರ್ಧನ್ ಅವರ  ಮೂರನೆಯ ಪುಣ್ಯ ಸಂಸ್ಮರಣೆಯ ಅಂಗವಾಗಿ   ಬೆಂಗಳೂರಿನಲ್ಲಿ  ನಡೆದ  ದಕ್ಷಿಣ ಭಾರತ ಮಟ್ಟದ ಕಿರುಚಿತ್ರ ಸ್ಪರ್ಧೆಯಲ್ಲಿ  ಪ್ರಥಮ ಬಹುಮಾನ ಪಡೆದ "ಕಬ್ಬಿನ ಹಾಲು" ಈಗ ಯು ಟ್ಯೂಬ್  ನಲ್ಲಿದ ಲಭ್ಯವಿದೆ . ಚಿತ್ರವನ್ನು ನೋಡಿ ನಿಮ್ಮ ಅಭಿಪ್ರಾಯ ತಿಳಿಸಬೇಕಾಗಿ ವಿನಂತಿ 
https://www.youtube.com/watch?v=loDmUdRMBkoU (Sugarcane Juice) 
ಡಾ / ವಿಷ್ಣುವರ್ಧನ್ ಸ್ಮಾರಕ ದಕ್ಷಿಣ ಭಾರತ ಕಿರು ಚಿತ್ರ ಸ್ಪರ್ದೆಯಲ್ಲಿ ಪ್ರಥಮ ಬಹುಮಾನ ಪಡೆದ ಕಿರು ಚಿತ್ರ- ಕಬ್ಬಿನ ಹಾಲು. ಮನ ಮಿಡಿವ ಈ ಕಿರು ಚಿತ್ರದ ನಿರ್ದೇಶಕ ಕಿರಣ್ ರಾಜ್. ಕೆ ಅವರಿಗೆ ಅಭಿನಂದನೆಗಳು - ಮುರಳೀಧರ ಉಪಾಧ್ಯ ಹಿರಿಯಡಕ

Short Movie - YouTube

ಮುಕ್ತ ವಿ-ಪುಸ್ತಕಲೋಕಕ್ಕೆ ಸ್ವಾಗತ

ಅತ್ರಿ ಬುಕ್ ಸೆಂಟರ್: ಮುಕ್ತ ವಿ-ಪುಸ್ತಕಲೋಕಕ್ಕೆ ಸ್ವಾಗತ: ಮುದ್ರಿತ ಪುಸ್ತಕೋದ್ಯಮ ಇಂದು ಗೋರಿ ಶೃಂಗಾರ . “ ಪುಸ್ತ್ಕಾ ಪ್ರಕಟಿಸ್ಬೇಕು ” ಎಂಬ ಹಳಗಾಲದ ಹಳಹಳಿಕೆಯನ್ನು ವಿಚಾರಪೂರ್ಣ ಸಾಹಿತಿಗಳಿಂದು ಕಳಚಿಕೊಳ್ಳಬೇಕು . ಇಂದು ಪುಸ...

ಗೋಪೀನಾಥ ರಾವ್ - ಪಾಂ ಪಾಂ ರೈಲು (ಕಥಾ ಸಂಕಲನ



ಗೋಪೀನಾಥ ರಾವ್ - ಪಾಂ ಪಾಂ ರೈಲು (ಕಥಾ ಸಂಕಲನ)

ಮುನ್ನುಡಿ

- ಮುರಳೀಧರ ಉಪಾಧ್ಯ ಹಿರಿಯಡಕ

- 1 - 
ಶ್ರೀ ಗೋಪೀನಾಥ ರಾವ್ ಅವರ ತಂದೆ ಮಟ್ಟಿ ಸುಬ್ಬರಾವ್ ತಾಳಮದ್ದಲೆ ಕಲಾವಿದರಾಗಿ ಪ್ರಸಿದ್ಧರಾಗಿದ್ದರು.  ಸುರತ್ಕಲ್ ಗೋವಿಂದದಾಸ ಕಾಲೇಜಿನಲ್ಲಿ ಪದವೀಧರರಾದ ಗೋಪೀನಾಥ ರಾವ್ ಸಿ.ಎ. ಮುಗಿಸಿದ ಮೇಲೆ ದುಬೈನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದಾರೆ.  ಅನಿವಾಸಿ ಕನ್ನಡಿಗ ಗೋಪೀನಾಥರಾಯರು ನನ್ನ ಅಂತಜರ್ಾಲದ ಗೆಳೆಯರಲ್ಲೊಬ್ಬರು.  ನಾನು-ಅವರು ಇದುವೆರೆ ಭೇಟಿಯಾಗಿಲ್ಲವಾದರೂ ದೂರವಾಣಿ ನಮ್ಮನ್ನು ಹತ್ತಿರ ತಂದಿದೆ.  ಗೋಪೀನಾಥರಾಯರಿಗೆ ಕತೆ ಬರೆಯಲು ಕಂಪ್ಯೂಟರ್ ಒಂದು ಪ್ರೇರಣೆ ಎಂಬುದು ನನಗೆ ಸಂತೋಷದ ಸಂಗತಿ.  ಉಜಿರೆಯಲ್ಲಿರುವ ಹಿರಿಯ ಲೇಖಕ ಕೆ.ಟಿ. ಗಟ್ಟಿಯವರ ಮನೆಗೆ ಹೋದಾಗ ಅವರು ಕಂಪ್ಯೂಟರ್ನಲ್ಲಿ ತನ್ನ ಕತೆ, ಕಾದಂಬರಿಗಳನ್ನು ಬರೆಯುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು, ಖುಷಿಯಾಯಿತು.

- 2 -
ಸಣ್ಣಕತೆ ಪ್ರಕಾರವನ್ನು ಕುರಿತು ಕತೆಗಾರ ಗೋಪೀನಾಥರಾಯರ ನಿಲುವು ಹೀಗಿದೆ - ಸಣ್ಣ ಕತೆ ಬರವಣಿಗೆಯಲ್ಲಿ ಕೆಲವು ಸರಳ ಸೂತ್ರಗಳಿಗೆ ಮೊದಲಿನಿಂದಲೂ ಅಂಟಿಕೊಂಡವ ನಾನು.  ಸಣ್ಣ ಕತೆಗಳಲ್ಲಿ ಕತೆ ಮುಖ್ಯ.  ಪಾತ್ರಗಳು ಅಥವಾ ಕತೆಗಾರ ವಸ್ತುವನ್ನು ಕತೆಯನ್ನಾಗಿಸಿ ಪ್ರಸ್ತುತಪಡಿಸುವ ಸಹಾಯಕರು ಮಾತ್ರ.  ಬರೆದ ಕತೆಯೂ, ಬಾಯಲ್ಲಿ ಕತೆ ಹೇಳುತ್ತಾ ಹೋಗುವ ಹಾಗೆ ಸರಾಗವಾಗಿ ಹಾಗೂ ಸುಲಲಿತವಾಗಿ ಓದಿಸಿಕೊಂಡು ಹೋಗಬೇಕು.  ಇವು ಮೂರು ನನ್ನ ದಿಕ್ಸೂಚಿ ಸೂತ್ರಗಳು.  ಗೋಪೀನಾಥರಾಯರು ಸಣ್ಣಕತೆ ಪ್ರಕಾರವನ್ನು ಕುರಿತು ಗಂಭೀರವಾಗಿ ಚಿಂತಿಸಿದ್ದಾರೆ.

ಕತೆ ಸಣ್ಣಕತೆಯಾದಾಗ ಅದು 'ಕಲಾತ್ಮಕ'ವಾಗಿದೆಯೇ ಎಂಬ ಪ್ರಶ್ನೆ ಮುಖ್ಯವಾಗುತ್ತದೆ.  ಅದನ್ನು ಯೋಚಿಸಿಕೊಂಡು ಒಂದು ಮೂತರ್ಿಯನ್ನಾಗಿ ಮಾಡಿ ಅದನ್ನು ಹೊರತರಬೇಕಾಗುತ್ತದೆ ಎಂಬ ಮಾಸ್ತಿಯವರ ಮಾತು ಇಂದಿಗೂ ಪ್ರಸ್ತುತ.

- 3 -
ಗೋಪೀನಾಥರಾಯರ 'ಸಾರ್ವಭೌಮ' ಕಥಾಸಂಕಲನ 2009ರಲ್ಲಿ ಪ್ರಕಟವಾಗಿದೆ.  ಇದೀಗ ಪ್ರಕಟವಾಗುತ್ತಿರುವ ಅವರ ಎರಡನೆಯ ಕಥಾಸಂಕಲನ 'ಪಾಂ ಪಾಂ ರೈಲು'ನಲ್ಲಿ ಒಂಬತ್ತು ಕತೆಗಳಿವೆ.

ಈ ಸಂಲನದಲ್ಲಿ ನನಗೆ ಇಷ್ಟವಾದ ಹೆಚ್ಚಿನ ಕತೆಗಳಲ್ಲಿ ಹಳ್ಳಿಗರು ಕ್ರಿಯಾಕೇಂದ್ರಗಳಾಗಿವೆ.....'ಗಂಗೇಚ ಯಮುನೇಚ' ಒಂದು ಹಾಸ್ಯಪ್ರಧಾನ ಕತೆ.  ತಮ್ಮ ಇಷ್ಟದ ಗಂಗಾರಾಮ್ ಮೇಷ್ಟ್ರಿಗೆ ಮದುವೆ ಮಾಡಿಸಲು ಹುಡುಗಿ ಹುಡುಗತೊಡಗುವ ಅವರ ವಿದ್ಯಾಥರ್ಿಗಳು ಕುಟಿಲೋಪಾಯಗಳನ್ನು ಯೋಜಿಸುತ್ತಾರೆ.  ಮುಗುಳ್ನಕ್ಕು ನೀವು ಗಂಗ, ನಾನು ಯಮುನಾ ಅಂದಳಂತೆ.  ಆ ಮೇಲಿನದೆಲ್ಲಾ ಬರೀ ಸಿನಿಮಾ ಕತೆ ಎಂಬ ಅನೀರೀಕ್ಷಿತ ಮುಕ್ತಾಯ ಚೆನ್ನಾಗಿದೆ.

'ಆನೆಗೊಂದು ಸಕರ್ಾರಿ ಲಂಗೋಟಿ' ಕತೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ, ದೇವರ ಹೆಸರಿನಲ್ಲಿ ಅಮಾನವೀಯವಾಗಿ ವತರ್ಿಸುತ್ತದೆ.  ದೇವಸ್ಥಾನದ ಆಡಳಿತಮಂಡಳಿಯವರು ಮಾನವೀಯತೆ ಮರೆತರೂ, ಆನೆ ಮಾನವೀಯತೆ ಮರೆಯುವುದಿಲ್ಲ.  ಆನೆ ಕೆರೆಗಿಳಿಯುವುದನ್ನು ಪ್ರತಿಭಟಿಸಲು ತಮ್ಮ ಸೊಸೆ ಮಹಾಲಕ್ಷ್ಮೀಯನ್ನು ಕೆರೆಗಿಳಿಸುವ ಹಯವದನ ಭಟ್ಟರ ನಿಧರ್ಾರದಲ್ಲಿ ಕುಟುಂಬಾಂತರ್ಗತ ಕ್ರೌರ್ಯದ ಇನ್ನೊಂದು ಮುಖವಿದೆ.

'ನೋಡಿ ನಮ್ಮ ಬಾವುಟ' ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳ ಕುರಿತು, ತಲೆಮಾರುಗಳ ನಡುವಿನ ಕಂದಕದ ಕುರಿತು ಚಿಂತಿಸಲುವ ಕತೆ.  ಸ್ವಾತಂತ್ರ್ಯ ಹೋರಾಟಗಾರ ರಾಮೇಗೌಡರು ತನಗೆ ಸರಕಾರದಿಂದ ಸಿಕ್ಕಿದ್ದ ಜಾಗವನ್ನು ಶಾಲೆ ಕಟ್ಟಲು ದಾನವಾಗಿ ನೀಡಿದ್ದಾರೆ.  ಅವರ ಮಗ ರವಿಶಂಕರ ಗೌಡರ ಕುಟುಂಬದವರು, ಬಡ ಮಕ್ಕಳಿಗಾಗಿ ಕಟ್ಟಿಸಿದ್ದ ಆ ಕನ್ನಡ ಶಾಲೆಯನ್ನು ಮುಚ್ಚಿಸಿ, ಆ ಜಮೀನನ್ನು ವಾಪಾಸು ಪಡೆಯಲು ಯೋಜನೆ ರೂಪಿಸುತ್ತಾರೆ.  ಹಣದ ಹೆದರಿಕೆ ಇಲ್ಲ ನನಗೆ.  ಹಣ ದೇವರಾದ ಜನರ ಹೆದರಿಕೆ ಎನ್ನುವ ಡಿ. ಎಚ್. ಲಾರೆನ್ಸ್ನ ಸಾಲನ್ನು ನೆನಪಿಸುವ ಕತೆ ಇದು.  ಒಂದು ಪಿಕ್ನಿಕ್ ಗೆ ಹೊರಟವರ ಸಂಭಾಷಣೆಯ ತಂತ್ರದಲ್ಲಿ ಬೆಳೆಯುವ ಈ ಕತೆ ಕಲಾತ್ಮಕವಾಗಿದೆ.

ಅಣ್ಣ ತಮ್ಮಂದಿರ ಆಸ್ತಿ ಜಗಳದ ಅತಿರೇಕ 'ಮಾರಿ ತಿನ್ನುವ ಹಕ್ಕು' ಕತೆಯ ವಸ್ತು.  ಶಿವರಾಮ ಬಲ್ಲೂರನ ಅಣ್ಣ, ತನ್ನ ತಮ್ಮನಿಗೆ ಮಾನಸಿಕ ಅಸ್ವಸ್ಥತೆ ಇದೆ ಎಂದು ಸುಳ್ಳು ಸಾಕ್ಷಿ ಸೃಷ್ಟಿಸಿ ಅವನ ಆಸ್ತಿಯನ್ನು ಲಪಟಾಯಿಸುತ್ತಾನೆ.

'ಕಲ್ಲು ಪ್ರತಿಮೆಗಳು' ಕತೆಯಲ್ಲಿ ರಾಜಕೀಯ ಮತ್ತು ಭ್ರಷ್ಟಾಚಾರವನ್ನು ಕುರಿತ ಮಾಂಗೂ ತೀಕ್ಷ್ಣವಾಗಿದೆ.  ಭ್ರಷ್ಟಾಚಾರದ ಕಬಂಧ ಬಾಹುಗಳು ರಾಜಕಾರಣಿಗಳ ಪ್ರತಿಮೆಗಳನ್ನೂ ಅಪ್ಪಿಕೊಳ್ಳುತ್ತವೆ.  ಭಗ್ನಗೊಂಡ ರಾಜಕಾರಣಿಗಳ ಪ್ರತಿಮೆಗಳನ್ನು ಮರುಸ್ಥಾಪನೆ ಮಾಡಲು ಲಕ್ಷಗಟ್ಟಲೆ ರೂಪಾಯಿಗಳ ಯೋಜನೆ ಸಿದ್ಧವಾಗುತ್ತದೆ.

ಗೋಪೀನಾಥರಾಯರ ಕತೆಗಳಲ್ಲಿ ಮೊದಲು ಗಮನ ಸೆಳೆಯುವುದು ತಿಳಿಹಾಸ್ಯದ ಸ್ಪರ್ಶ.  ಆದರೆ ಇಲ್ಲಿನ ಹಾಸ್ಯದ ಹಿಂದೆ ಗಾಢವಾದ ವಿಚಾರವಿದೆ.  ಇದು ಛಿದ್ರಗೊಳ್ಳುತ್ತಿರುವ ದಾಂಪತ್ಯ, ಕುಟುಂಬಗಳನ್ನು ಕುರಿತ, ಪತನಮುಖಿಯಾಗಿರುವ ಸಾಮಾಜಿಕ ಮೌಲ್ಯಗಳನ್ನು ಕುರಿತ ವಿಷಾದ.

ಕೆಲವು ಕಲಾತ್ಮಕ, ಚಿಂತನಶೀಲ, ಅಸಾಧಾರಣ ಕತೆಗಳನ್ನು ಕನ್ನಡಕ್ಕೆ ನೀಡಿರುವ ಶ್ರೀ ಗೋಪೀನಾಥ ರಾವ್ ಅವರಿಗೆ ಅಭಿನಂದನೆಗಳು.

ಪಾಂ ಪಾಂ ರೈಲು ಮತ್ತು ಇತರ ಕತೆಗಳು
- ಗೋಪೀನಾಥ ರಾವ್
ಎನ್. ಆರ್. ಎ. ಎಂ. ಎಚ್. ಪ್ರಕಾಶನ
ಕೋಟೇಶ್ವರ -576 222
ಮೊದಲ ಮುದ್ರಣ - 2011

 


ಝಳಕಿ-ಬಾಲು ಸಂಶೋಧನೆ: ವಚನಗಳು ಜಾತಿ ವಿರೋಧಿಯಲ್ಲ: ಈ ಸಂಶೋಧನೆಯ ರಾಜಕೀಯವೇನು?


ಝಳಕಿ-ಬಾಲು ಸಂಶೋಧನೆ: ವಚನಗಳು ಜಾತಿ ವಿರೋಧಿಯಲ್ಲ: ಈ ಸಂಶೋಧನೆಯ ರಾಜಕೀಯವೇನು?

ಜಿ.ರಾಜಶೇಖರ್

ಡಂಕಿನ್ ಝಳಕಿ ಮತ್ತು ಎಸ್.ಎನ್.ಬಾಲಗಂಗಾಧರ ಅವರ ವಚನ ಸಾಹಿತ್ಯವು
ಜಾತಿವ್ಯವಸ್ಥೆಯ ವಿರುದ್ಧ ಮಾತನಾಡುತ್ತದೆಯೇ? ಎಂಬ ಪ್ರಬಂಧದ(ಚಿಂತನ ಬಯಲು-
ಸಂಚಿಕೆ 3, ಅಕ್ಟೋಬರ್ 2012, ಪುಟ 25-44) ಬಗ್ಗೆ ಪ್ರಜಾವಾಣಿಯಲ್ಲಿ ಕಳೆದ ಹಲವು
ದಿನಗಳಿಂದ ನಡೆದಿರುವ ಚಚರ್ೆಯಲ್ಲಿ ವಚನಗಳ ಮುಖ್ಯ ಲಕ್ಷಣವನ್ನೇ ಯಾರೂ ಗಮನಿಸಿದ
ಹಾಗಿಲ್ಲ.ವಚನಕಾರರು ಬರೆದಿರುವುದು ಕಾವ್ಯವೇ ಹೊರತು, ಸಮಾಜ ಶಾಸ್ತ್ರದ ಪಠ್ಯವಲ್ಲ.
ಸ್ವತಃ ವಚನಕಾರರಿಗೇ ಅದರ ಅರಿವು ಇದ್ದಿತು ಎನ್ನುವುದಕ್ಕೆ ವಚನಗಳಲ್ಲಿ ಸಾಕಷ್ಟು
ಉದಾಹರಣೆಗಳು ದೊರೆಯುತ್ತವೆ. ಬಸವ, ಅಲ್ಲಮ ಮತ್ತು ಅಕ್ಕರಂತೂ ಕವಿತ್ವ
ಮಾತ್ರವಲ್ಲ ಭಾಷೆಯಲ್ಲಿ ಅರ್ಥ ಪ್ರಕಟವಾಗುವ ಬಗೆಯ ಕುರಿತು ಕೂಡ ಚಿಂತಿಸಿದವರು.
ವಚನಕಾರರನ್ನು ಕನ್ನಡಿಗರು ಕಳೆದ 800 ವರ್ಷಗಳಿಂದ ಓದುತ್ತ ಬಂದಿರುವುದು ಕೂಡ,
ಅವರು ಕವಿಗಳು ಎಂಬ ಗ್ರಹಿಕೆಯಲ್ಲೇ. ವಚನಕಾರರ ನಂತರ ಅವರ ಪರಂಪರೆಯನ್ನು
ಮುಂದುವರೆಸಿಕೊಂಡು ಬಂದಿರುವವರು ಸಹ ಕವಿಗಳೇ. ಬಸವಾದಿ ಪ್ರಮಥರಿಂದ
ಮೊದಲುಗೊಂಡು 19ನೆಯ ಶತಮಾನದ ತತ್ವಪದಕಾರರವರೆಗೆ, ಇದು ಸಂದು ಕಡಿಯದ
ಭಾಷಿಕ ಪರಂಪರೆ. ಆದರೆ ಝಳಕಿ ಮತ್ತು ಬಾಲು ಅವರ ಮಟ್ಟಿಗೆ ವಚನಕಾರರು ತಮ್ಮ
ವಚನಗಳನ್ನು ರಚಿಸಿ ನಿರ್ಗಮಿಸಿದ ನಂತರ ಕನ್ನಡ ನಾಡಿಗೆ ಕ್ರೈಸ್ತ ಮಿಷನರಿಗಳು ಬಂದು
ವಚನಗಳು ಜಾತಿವ್ಯವಸ್ಥೆಯನ್ನು ವಿರೋಧಿಸುವ ರಚನೆಗಳು ಎಂದು ಅಥರ್ೈಸುವವರೆಗೆ,
ವಚನಗಳನ್ನು ಯಾರೂ ಓದಲಿಲ್ಲ; ಓದಿದರೂ ಹಾಗೆ ಅಥರ್ೈಸಲಿಲ್ಲ. ಅಂದರೆ ಹತ್ತಿರ
ಹತ್ತಿರ 600 ವರ್ಷಗಳವರೆಗೆ ವಚನಗಳಿಗೆ ಅಜ್ಞಾತವಾಸ. ಝಳಕಿ-ಬಾಲು ಅವರನ್ನು
ನಂಬುವುದಾದರೆ, ಹರಿಹರ, ರಾಘವಾಂಕರಿಂದ ಹಿಡಿದು ತತ್ವಪದಕಾರರವರೆಗೆ, ಯಾವ
ಕವಿಗೂ ವಚನಗಳ ಪರಿವೆ ಇರಲಿಲ್ಲ; ಶೂನ್ಯ ಸಂಪಾದನೆ ಮತ್ತು ಮಂಟೇಸ್ವಾಮಿ ಕಾವ್ಯಕ್ಕೆ
ಸಹ ವಚನ ಸಾಹಿತ್ಯದ ಜೊತೆ ಕೊಳು ಕೊಡುಗೆಯ ಸಂಬಂಧ ಇರಲಿಲ್ಲ. ಕ್ರೈಸ್ತ
ಮಿಷನರಿಗಳು ಬಂದವರೆ, ವಚನಗಳನ್ನು ಕೈಗೆತ್ತಿಕೊಂಡು ಅವಕ್ಕೆ ಜಾತಿವ್ಯವಸ್ಥೆ ವಿರೋಧಿ
ಎಂಬ ಅರ್ಥ ಹಚ್ಚಿದರು. ಝಳಕಿ-ಬಾಲು ಅವರ ಈ ವಾದ ಕನ್ನಡದ 700 ವರ್ಷಗಳ
ಸಾಂಸ್ಕೃತಿಕ ಚರಿತ್ರೆಯನ್ನೇ ಅಲ್ಲಗೆಳೆಯುತ್ತದೆ. ವಚನಗಳು ಜಾತಿವ್ಯವಸ್ಥೆಯನ್ನು
ವಿರೋಧಿಸುವುದು ಹಾಗಿರಲಿ, ಆ ಕುರಿತು ಏನನ್ನೂ ಹೇಳುವುದಿಲ್ಲ ಎಂಬ ತಮ್ಮ ವಾದಕ್ಕೆ
ಸಮರ್ಥನೆಯಾಗಿ ಝಳಕಿ-ಬಾಲು, ಒಂದು ವಿಚಿತ್ರ ತರ್ಕವನ್ನು ನಮ್ಮ ಮುಂದೆ ಇಡುತ್ತಾರೆ.
1993ರಲ್ಲಿ ಕನರ್ಾಟಕ ಸರಕಾರ ಪ್ರಕಟಿಸಿದ ಸಮಗ್ರ ವಚನಸಾಹಿತ್ಯದ 15 ಸಂಪುಟಗಳ
ಸಂಪಾದಕ ಡಾ|| ಎಂ.ಎಂ.ಕಲಬುಗರ್ಿ, ತನ್ನ ಪ್ರಸ್ತಾವನೆಯಲ್ಲಿ, ವಚನಗಳು ಭಾರತದ ವರ್ಣ,
ವರ್ಗ ಹಾಗು ಲಿಂಗಗಳ ಬೇಧ ಸಂಸ್ಕೃತಿಯ ವಿರುದ್ಧ ನಡೆದ ಪ್ರಥಮ ಆಂದೋಲನ ಎಂದು
ಹೇಳುತ್ತಾರೆ. ಈ ಅಭಿಪ್ರಾಯವನ್ನೇ, ಝಳಕಿ ಮತ್ತು ಬಾಲು ಪ್ರಸ್ತಾಪಿಸುವ ಎಲ್ಲ
ವಿದ್ವಾಂಸರೂ- ಡಿ.ಆರ್.ನಾಗರಾಜ್, ಚಿದಾನಂದ ಮೂತರ್ಿ, ಹಿರೇಮಲ್ಲೂರು ಈಶ್ವರನ್,
ಒ.ಎಲ್.ನಾಗಭೂಷಣಸ್ವಾಮಿ, ಎಚ್.ತಿಪ್ಪೇರುದ್ರಸ್ವಾಮಿ ಮತ್ತು ಎ.ಕೆ.ರಾಮಾನುಜನ್ -
ಗಿಳಿಪಾಠದ ಹಾಗೆ ಒಪ್ಪಿಸಿರುವರು ಎಂಬುದು ಕೂಡ ಝಳಕಿ-ಬಾಲು ಅವರ ಫಿಯರ್ಾದು.
ಸರಕಾರ ಈ ಸಮಗ್ರ ಸಂಪುಟ ಪ್ರಕಟಿಸುವವರೆಗೆ ಎಲ್ಲ ವಚನಗಳೂ (ಒಟ್ಟು 21788)
ಒಂದೆಡೆ ಸಿಗುತ್ತಲೇ ಇರಲಿಲ್ಲ. ಹಾಗಿದ್ದೂ ಎಂ.ಕಲಬುಗರ್ಿಯವರನ್ನೂ ಒಳಗೊಂಡು 19
ಮತ್ತು 20ನೆಯ ಶತಮಾನದ ಕನ್ನಡ ವಿದ್ವಾಂಸರು ವಚನ ಸಾಹಿತ್ಯ ಜಾತಿ ವಿರೋಧಿ ಎಂದು
ಹೇಗೆ ತೀಮರ್ಾನಿಸಿದರು? ಇದು ಝಳಕಿ-ಬಾಲು ಅವರ ಪಾಟೀ ಸವಾಲು. ನೂರಾರು
ವರ್ಷಗಳಿಂದ, ಕನ್ನಡಿಗರು ಸಮೃದ್ಧವಾದ ತಮ್ಮ ಭಾಷಿಕ ಪರಂಪರೆಯಲ್ಲಿ ತಮಗೆ
ಬೇಕಾದದ್ದನ್ನು ಆಯ್ದುಕೊಂಡು, ಬೇಡವಾದದ್ದನ್ನು ಬದಿಗೆ ಸರಿಸುತ್ತಬಂದಿದ್ದಾರೆ. ವಚನಗಳ
ಬಗ್ಗೆಯೂ ಅವರ ದೋರಣೆ ಅದೇ - ಹಂಸಕ್ಷೀರ ನ್ಯಾಯದ್ದು. ಸಮಾಜಶಾಸ್ತ್ರಜ್ಞನಿಗಾದರೆ,
ತನ್ನ ಆಕರಗಳಲ್ಲಿ ಆಯ್ಕೆಯೇ ಇಲ್ಲ; ಎಲ್ಲವನ್ನೂ ಆತ 'ಸಾಕ್ಷಾಧಾರ' ಎಂಬ ನೆಲೆಯಲ್ಲಿ
ಕೂಲಂಕುಷವಾಗಿ ಅಭ್ಯಾಸ ಮಾಡಲೇಬೇಕು. ಆದರೆ ಕಾವ್ಯದ ಓದುಗನಿಗಾಗಲೀ,
ವಿಮರ್ಶಕನಿಗಾಗಲೀ ಆ ಜರೂರು ಇಲ್ಲ. ಅದಕ್ಕೆ ಸರಿಯಾಗಿ ಝಳಕಿ-ಬಾಲು, ತಮ್ಮ
ಪ್ರಬಂಧದಲ್ಲಿ ಉಲ್ಲೇಖಿಸುವ ಎಲ್ಲ ಕನ್ನಡ ವಿದ್ವಾಂಸರೂ ಮೂಲತಃ ಕನ್ನಡ ಸಾಹಿತ್ಯ
ಸಂಸ್ಕೃತಿಗಳ ಅಭ್ಯಾಸಿಗಳು; ಹಿರೇಮಲ್ಲೂರು ಈಶ್ವರನ್ ಒಬ್ಬರು ಮಾತ್ರ ಸಮಾಜ
ಶಾಸ್ತ್ರಜ್ಞರು. ಅದರೆ ಝಳಕಿ-ಬಾಲು ದುರದೃಷ್ಟಕ್ಕೆ ಅವರು ಕೂಡ ವಚನಗಳು
ಜಾತಿವ್ಯವಸ್ಥೆಯನ್ನು ವಿರೋಧಿಸುತ್ತವೆ ಎಂದೇ ಪ್ರತಿಪಾದಿಸುತ್ತಾರೆ.
ಝಳಕಿ-ಬಾಲು ವಾದವನ್ನು ಸಮಥರ್ಿಸುತ್ತ ರಾಜರಾಮ ಹೆಗಡೆ, ವಚನಕಾರರು
ಹೇಳಿರುವುದು ಎಲ್ಲವೂ ಅವರಿಗಿಂತ ಮೊದಲು ಸಂಸ್ಕೃತ ಆಗಮಗಳಲ್ಲಿ
ಬಂದಿರುವಂತಹದ್ದೆ. ಅದರಲ್ಲಿ ಹೊಸತು ಏನಿಲ್ಲ ಎಂದು ಹೇಳುತ್ತಾರೆ. ಝಳಕಿ ಪ್ರಕಾರ
ಆದಿಶಂಕರರ ಕೃತಿಯಲ್ಲೇ ಜಾತಿಬೇಧ ಮತ್ತು ವೇದಗಳನ್ನು ಅಲ್ಲಗೆಳೆಯುವ ಮಾತುಗಳಿವೆ.
ಶಂಕರ ತನ್ನ ತತ್ವ ಚಿಂತನೆ ನಡೆಸಿದ್ದು ಸಂಸ್ಕೃತದಲ್ಲಿ; ವಚನಕಾರರು, ವಚನ ರಚಿಸಿದ್ದು
ತಮ್ಮ ತಾಯ್ನುಡಿಯಲ್ಲಿ. ಸಂಸ್ಕೃತ ಮತ್ತು ದೇಶಭಾಷೆಗಳ ನಡುವೆ ಇರುವ ತರತಮ
ವ್ಯತ್ಯಾಸವೇ ಬ್ರಾಹ್ಮಣ ಶೂದ್ರ ಬೇಧದಲ್ಲಿ ಪ್ರತಿಬಿಂಬಿತವಾಗಿದೆ ಎಂಬ ಸತ್ಯ ಝಳಕಿ ಮತ್ತು
ರಾಜಾರಾಮ ಹೆಗಡೆಯವರಿಗೆ ಗೊತ್ತಿಲ್ಲವೆ? ಅಥವಾ ಅವರು ಅದನ್ನೂ
ನಿರಾಕರಿಸುತ್ತಾರೆಯೆ? ಶಂಕರ ಮತ್ತು ವಚನಕಾರರ ನಡುವೆ ಇನ್ನೂ ಒಂದು ವ್ಯತ್ಯಾಸವಿದೆ.
ಶಂಕರ, ಭಾರತದ ಬಹುಜನರ ಸಾಂಸ್ಕೃತಿಕ ಪರಂಪರೆಯ ಭಾಗವಲ್ಲ; ಆದರೆ
ವಚನಕಾರರು ಇಂದಿಗೂ ಕನ್ನಡದ ಬಹುಜನರ ನೆನಪಿನಲ್ಲಿ ಜಾಗೃತರಾಗಿರುವಂತಹವರು.
ಅವರು ನಮ್ಮ ಜೀವಂತ ಸಾಂಸ್ಕೃತಿಕ ಪರಂಪರೆ- ಲಿವಿಂಗ್ ಟ್ರೆಡಿಷನ್. ಝಳಕಿ- ಬಾಲು
ಮತ್ತು ಅವರ ಸಹವತರ್ಿಗಳಿಗೆ ಈ ಪರಂಪರೆಯನ್ನು ಅದರ ನೈಜ ನೆಲೆಗಳಲ್ಲಿ
ಅರ್ಥಮಾಡಿಕೊಳ್ಳುವ ವ್ಯವಧಾನವೂ ಇಲ್ಲ; ಅದರ ಬಗ್ಗೆ ಗೌರವವೂ ಇಲ್ಲ. ವಚನಗಳು
ಅವರಿಗೆ ಕೇವಲ ಸಮಾಜಶಾಸ್ತ್ರದ ಒಂದಿಷ್ಟು ಮಾಹಿತಿಗಳ ಅಕರ. ಅವರ ಸಮಾಜ
ಶಾಸ್ತ್ರೀಯ ತೀಮರ್ಾನಗಳು ಸಹ ಎಷ್ಟು ಅಪಾಯಕಾರಿ ಎಂಬುದನ್ನು ಈಗಾಗಲೇ ದೇವನೂರ
ಮಹದೇವ ನಮ್ಮ ಮನಗಾಣಿಸಿದ್ದಾರೆ.(ಪ್ರಜಾವಾಣಿ, ಪುಟ 8, 29-4-2013)
ವಚನಕಾರರು ಇಂದಿಗೂ ಕನ್ನಡ ಸಂಸ್ಕೃತಿಯ ಭಾಗವಾಗಿರುವುದರಿಂದಲೇ ಕನ್ನಡದ
ನಾಲ್ವರು ಪ್ರಮುಖ ಲೇಖಕರು- ಲಂಕೇಶ್, ಗಿರೀಶ್ ಕಾನರ್ಾಡ್, ಎಚ್.ಎಸ್.ಶಿವಪ್ರಕಾಶ್
ಮತ್ತು ಚಂದ್ರಶೇಖರ ಕಂಬಾರ, ವಚನಕಾರರ ಸಾಮಾಜಿಕ ಆಂದೋಲನದ ಬಗ್ಗೆ
ನಾಟಕಗಳನ್ನು ರಚಿಸಿದ್ದಾರೆ (ಅನುಕ್ರಮವಾಗಿ ಸಂಕ್ರಾಂತಿ, ತಲೆದಂಡ, ಮಹಾಚೈತ್ರ ಮತ್ತು
ಶಿವರಾತ್ರಿ). ಈ ನಾಲ್ಕು ನಾಟಕಗಳೂ ಕನ್ನಡದಲ್ಲಿ ಬಹು ಚಚರ್ಿತ ಕೃತಿಗಳು ಮತ್ತು ರಂಗದ
ಮೇಲೂ ಯಶಸ್ವಿಯಾಗಿರುವಂತಹವು. ಈ ಪಟ್ಟಿಯಲ್ಲಿ ಬಿ.ಪುಟ್ಟಸ್ವಾಮಯ್ಯನವರ ಅತ್ಯಂತ
ಜನಪ್ರಿಯ ನಾಟಕ ಕ್ರಾಂತಿಕಲ್ಯಾಣವನ್ನೂ ಸೇರಿಸಿಕೊಳ್ಳಬೇಕು. ಈ ಎಲ್ಲ ನಾಟಕಗಳು
ಕ್ರೈಸ್ತ ಮಿಷನರಿಗಳು ವಚನಗಳನ್ನು ಅಥರ್ೈಸಿರುವ ಬಗೆಯಿಂದ ಪ್ರೇರಿತವಾಗಿವೆಯೇ?
ಝಳಕಿ-ಬಾಲು ಅವರ ಅಭಿಪ್ರಾಯ ಅದೇ ಆಗಿದ್ದರೆ, ಅವರು ಹಾಗೆಂದು ಸ್ಪಷ್ಟಪಡಿಸಬೇಕು.
ಆದುನಿಕ ಕನ್ನಡದ ಅತ್ಯಂತ ಸತ್ವಪೂರ್ಣ ಲೇಖಕರನ್ನು ಇವರು ಹೇಗೆ ಪರಿಭಾವಿಸುತ್ತಾರೆ
ಎಂಬುದು ಎಲ್ಲರಿಗೂ ಗೊತ್ತಾಗಬೇಕು. ಝಳಕಿ-ಬಾಲು ಅವರಿಗೆ ವಚನಗಳು ಮಾತ್ರವಲ್ಲ
ಸಮಕಾಲೀನ ಗದ್ಯದ ಶ್ರೇಷ್ಠ ಕೃತಿಗಳನ್ನು ಓದಲು ಸಹ ಅಭಿರುಚಿಯಾಗಲಿ, ಸಿದ್ಧತೆಯಾಗಲಿ
ಇಲ್ಲ ಎನ್ನುವುದು ನನ್ನ ಗುಮಾನಿ.
ವಚನಗಳು ಜಾತಿವಿರೋಧಿ ಎಂಬುದು 19-20ನೆಯ ಶತಮಾನಗಳಲ್ಲಿ ಕ್ರೈಸ್ತ
ಮಿಷನರಿಗಳ ಪ್ರೇರಣೆಯಿಂದ ನಾವು ಅವಕ್ಕೆ ಹಚ್ಚಿದ ಅರ್ಥವಲ್ಲ; ಅಥವಾ ಅದು,
ಶೇಕ್ಸ್ಪಿಯರನಲ್ಲೋ, ಕಾಳಿದಾಸನಲ್ಲೊ, 21ನೆಯ ಶತಮಾನಕ್ಕೆ ಸಲ್ಲುವಂತಹ ತಾತ್ವಿಕ
ಹೊಳಹುಗಳನ್ನು ಕಂಡುಕೊಳ್ಳುವ ಬಗೆಯದ್ದೂ ಅಲ್ಲ. ಕಾಲ ದೇಶ -ಎರಡು
ದೃಷ್ಟಿಗಳಿಂದಲೂ, ವಚನಕಾರರು ಕನ್ನಡಿಗರಿಗೆ ಯಾವತ್ತೂ ದೂರವಾದವರೇ ಅಲ್ಲ. ಅದೂ
ಅಲ್ಲದೆ, ಜಾತ್ಯತೀತತೆ ಮತ್ತು ಜಾತಿ ವಿರೋಧ ಆಧುನಿಕ ವಿಚಾರಗಳಾಗಿದ್ದು 19ನೆಯ
ಶತಮಾನಕ್ಕಿಂತ ಮೊದಲು ಅವು ಇರಲೇ ಇಲ್ಲ ಎಂದು ಭಾವಿಸುವುದು ವಿಚಾರಗಳ ವಿಕಾಸದ
ಚರಿತ್ರೆಯನ್ನು ಅಲ್ಲಗೆಳೆಯುತ್ತದೆ. ಯಾವ ಆಧುನಿಕ ವಿಚಾರವೂ ಧಿಡೀರ್ ಎಂದು
ಒಮ್ಮಿಂದೊಮ್ಮೆಗೆ ಹುಟ್ಟಿಕೊಳ್ಳುವುದಿಲ್ಲ. ಆದರೆ ಝಳಕಿ ಮತ್ತು ಬಾಲು ಅವರಿಗೆ ಚರಿತ್ರೆ
ಪ್ರಾರಂಭವಾಗುವುದೇ ಕ್ರೈಸ್ತ ಮಿಷನರಿಗಳ ಆಗಮನದೊಂದಿಗೆ. ಕ್ರೈಸ್ತ ಮಿಷನರಿಗಳು
ಮತ್ತು ಬ್ರಿಟಿಷ್ ವಸಾಹತುಶಾಹಿ, ಒಂದು ಇನ್ನೊಂದರ ಮುಂದುವರಿಕೆ ಎಂಬಂತೆ ಝಳಕಿ-
ಬಾಲು ಕನ್ನಡ ನಾಡಿಗೆ ಅವುಗಳ ಪ್ರವೇಶವಾದದ್ದನ್ನು ನಿರೂಪಿಸುತ್ತಾರೆ. ಆದರೆ
ಕನರ್ಾಟಕದಲ್ಲೇ ಆಗಲಿ, ಭಾರತದಲ್ಲೇ ಆಗಲಿ ಮಿಷನರಿಗಳು ಮತ್ತು ಬ್ರಿಟಿಷ್
ವಸಹಾತುಶಾಹಿ ಎಲ್ಲಿಯೂ ಒಟ್ಟಾಗಿ ಕೆಲಸ ಮಾಡಿದ್ದೇ ಇಲ್ಲ. ಬ್ರಿಟಿಷ್ ಸರಕಾರಕ್ಕೆ
ಭಾರತದಲ್ಲಿ ಈ ಬ್ರಿಟಿಷೇತರ ಐರೋಪ್ಯ ಮಿಷನರಿಗಳಿಂದ ಆಗಬೇಕಾದದ್ದು ಏನೂ
ಇರಲಿಲ್ಲ. ವಸಾಹತುಶಾಹೀ ಸರಕಾರ ಈ ಮಿಷನರಿಗಳನ್ನು ಹತ್ತಿರ ಕೂಡ ಸೇರಿಸಿಕೊಳ್ಳಲಿಲ್ಲ.
ಹಾಗಾಗಿ ಆಫ್ರಿಕಾ ಮತ್ತು ದಕ್ಷಿಣ ಅಮೇರಿಕದ ವಸಾಹತುಗಳಲ್ಲಿ, ವ್ಯಾಪಕವಾಗಿ ಬಲತ್ಕಾರದ
ಮತಾಂತರಗಳು ನಡೆದಂತೆ ಭಾರತದಲ್ಲಿ ನಡೆಯಲಿಲ್ಲ. ಆದರೆ ಝಳಕಿ-ಬಾಲು ಅವರ
ಸಂಶೋಧನೆಯ ತೀಮರ್ಾನಗಳನ್ನು ಒಪ್ಪಿಕೊಂಡರೆ ವಚನಗಳನ್ನು ಜಾತಿವ್ಯವಸ್ಥೆಯ
ವಿರೋಧಿ ಎಂಬಂತೆ ಓದುತ್ತ ಬಂದಿರುವ ನಾವೆಲ್ಲರೂ ಮತಾಂತರಗೊಂಡವರೇ ಆಗಿ
ಬಿಡುತ್ತೇವೆ.
ಝಳಕಿ-ಬಾಲು ತಮ್ಮ ಈ ಬರಹವನ್ನು ನಿರ್ವಸಾಹತೀಕರಣದ ಒಂದು ಭಾಗವೆಂದೇ
ಸಾರಿಕೊಂಡಿದ್ದಾರೆ. ಉದಾಹರಣೆಗೆ ಅದರ ಅಡಿಟಿಪ್ಪಣಿ 7ರಲ್ಲಿ ಬಾಲಗಂಗಾಧರ ಮತ್ತು
ಎಡ್ವಡರ್್ ಸಯೀದ್ ನಮ್ಮ ಗತ ಮತ್ತು ಪ್ರಸ್ತುತವನ್ನು ಅರ್ಥ ಮಾಡಿಕೊಳ್ಳಲು ಹೊಸ
ಚೌಕಟ್ಟು ಹಾಕಿಕೊಟ್ಟವರು ಎಂದು ಹೇಳಲಾಗಿದೆ. ಲೋಕ ಖ್ಯಾತ ಚಿಂತಕ-
ಹೋರಾಟಗಾರ ಎಡ್ವಡರ್್ ಸಯೀದ್(1936-2003) ಮತ್ತು ತಾವು ಸರಿಸಮಾನರು
ಎಂಬಂತೆ ಸ್ವತಃ ಬಾಲು ಅವರೇ ತಮ್ಮ ಪ್ರಬಂಧದಲ್ಲಿ ಹೇಳಿಕೊಳ್ಳುವುದರ ಔಚಿತ್ಯ ಏನೇ
ಇರಲಿ, ಸಯೀದ್ ಮತ್ತು ಬಾಲು ನಡುವೆ ಸಮಾನವಾಗಿರುವಂತಹದ್ದು ಏನೂ ಇಲ್ಲ.
ಜಗತ್ತಿನಾದ್ಯಂತ ರಾಜಕೀಯ ಚಿಂತನೆ ಮತ್ತು ಸಾಹಿತ್ಯ ವಿಮಶರ್ೆಗಳಿಗೆ ಹೊಸ ಹಾದಿ
ಹಾಕಿಕೊಟ್ಟ ಸಯೀದ್ನ ಕೃತಿ 'ಓರಿಯೆಂಟಲಿಸಂ' (1978). ವಸಾಹತುಶಾಹಿ ರಾಷ್ಟ್ರಗಳ
ಬುದ್ಧಿಜೀವಿಗಳು ವಸಾಹತುಗಳ 'ನೇಟಿವ್' ಜನರ ಬದುಕನ್ನು ಹೇಗೆ ಪ್ರತಿನಿಧೀಕರಿಸುತ್ತಾರೆ
ಮತ್ತು ಹೇಗೆ ಆ ಬಗೆಯ ಚಿತ್ರಣ ಮತ್ತು ನಿರೂಪಣೆಗಳಿಂದ ಈ ನೇಟಿವ್ ಜನರ ಸ್ವ
ವನ್ನು ಸಹ ತಾವೇ ಸಂರಚಿಸುತ್ತಾರೆ ಎಂಬುದನ್ನು ಈ ಕೃತಿ ವಿಶ್ಲೇಷಿಸುತ್ತದೆ. ಎಡ್ವಡರ್್
ಸಯೀದ್ ಪೆಲೆಸ್ತೀನ್ನಲ್ಲಿ ಹುಟ್ಟಿ, ಈಜಿಪ್ಟ್ನಲ್ಲಿ ಬೆಳೆದು ಅಮೇರಿಕದ ಪ್ರತಿಷ್ಠಿತ
ವಿಶ್ವವಿದ್ಯಾಲಯ ಒಂದರಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕರಾಗಿದ್ದವರು. ಹಾಗಾಗಿ ಅವರು
ಐರೋಪ್ಯ ವಸಾಹತುಶಾಹಿಯನ್ನು ಅನುಭವಿಸಿ ಬಲ್ಲವರು ಮತ್ತು ಅಮೇರಿಕದ
ಸಾಮ್ರಾಜ್ಯಶಾಹಿಯ ಮಿಲಿಟರಿ, ರಾಜಕೀಯ ಮತ್ತು ಸಾಂಸ್ಕೃತಿಕ ಮಸಲತ್ತುಗಳನ್ನು
ಹತ್ತಿರದಿಂದ ಕಂಡು ಬಲ್ಲವರು. ಅವರು ಯಾವತ್ತೂ ಪ್ರಾಧ್ಯಾಪಕನ ಕುಚರ್ಿಗೆ ಅಂಟಿಕೊಂಡ
ನಿಲರ್ಿಪ್ತ ಬುದ್ಧಿಜೀವಿಯಾಗಿರಲಿಲ್ಲ. ತನ್ನ ಗೆಳೆಯ ನೋಮ್ ಚೋಮ್ಸ್ಕಿಯಂತೆ ಸಯೀದ್
ಕೂಡ ಒಬ್ಬ ಚಿಂತಕ-ಹೋರಾಟಗಾರ. ತನ್ನ ತಾಯಿನೆಲ ಪೆಲೆಸ್ತೀನ್, ಇಸ್ರೇಲ್ ಆಕ್ರಮಣಕ್ಕೆ
ಒಳಗಾಗಿರುವುದು ಮತ್ತು ಅದನ್ನು ಅಮೇರಿಕ, ಬ್ರಿಟನ್, ಫ್ರಾನ್ಸ್ ಮುಂತಾದ
ಸಾಮ್ರಾಜ್ಯಶಾಹಿಗಳು ಬೆಂಬಲಿಸುತ್ತಿರುವುದನ್ನು ಸಯೀದ್ ತೀವ್ರವಾಗಿ ಪ್ರತಿಭಟಿಸಿದವರು.
ಪೆಲೆಸ್ತೀನ್ ಕುರಿತ ಅವರ ಸ್ವಗತದಂತಹ ಬರವಣಿಗೆಯಂತೂ ಅದರ ತೀವ್ರತೆ ಮತ್ತು
ಮಾನವೀಯ ತುಡಿತಗಳಿಂದ ಹೃದಯಸ್ಪಷರ್ಿಯಾಗಿದೆ. ಇಸ್ರೇಲ್ನ ಆಕ್ರಮಣ ಮತ್ತು
ದುಂಡಾವತರ್ಿಗಳ ವಿರುದ್ಧ ಪೆಲೆಸ್ತೀನ್ ಜನತೆಯ ಹೋರಾಟದಲ್ಲಿ ನೇರವಾಗಿ
ಭಾಗಿಯಾಗಿದ್ದ ಸಯೀದ್, ಆ ಹೋರಾಟದ ಮಂಚೂಣಿಯಲ್ಲಿದ್ದ ಯಾಸೇರ್ ಆರಾಫತ್
ನಾಯಕತ್ವದ ಪೆಲೆಸ್ತೀನ್ ರಾಷ್ಟ್ರೀಯ ಸಮಿತಿಯ ಸದಸ್ಯರೂ ಆಗಿದ್ದರು. ಮತ್ತು ಆ
ಕಾರಣಕ್ಕೇನೆ, ಥೇಟು ನಮ್ಮ ಆರ್.ಎಸ್.ಎಸ್ ಥರಹದ ಅಮೇರಿಕದ ಬಲಪಂಥೀಯ
ಯಹೂದಿ ಸಂಘಟನೆಗಳು ಸಯೀದ್ ಮೇಲೆ ಅನೇಕ ಬಾರಿ ಹಲ್ಲೆ ನಡೆಸಿದ್ದವು.
ಸಯೀದ್ರಿಗೆ ಅವರ ಸಿದ್ಧಾಂತ ಮತ್ತು ಸಾಹಿತ್ಯ ವಿಮಶರ್ೆ ಸಾಮ್ರಾಜ್ಯಶಾಹಿಯ ವಿರುದ್ಧ
ಅವರ ರಾಜಕೀಯ ಹೋರಾಟದ ಮುಂದುವರಿಕೆಯೇ ಆಗಿತ್ತು. ಸಯೀದ್ ಜೊತೆ
ಗುರುತಿಸಿಕೊಳ್ಳಲು ಬಾಲು ಅವರಿಗೆ ಏನು ಅರ್ಹತೆ ಇದೆ? ನನಗೆ ಗೊತ್ತಿರುವ ಮಟ್ಟಿಗೆ
ಬಾಲು, ಯಾವ ವಿಮೋಚನಾವಾದೀ ಅಥವಾ ಎಡಪಂಥೀಯ ಚಳುವಳಿಯಲ್ಲಿಯೂ ಎಂದೂ
ತೊಡಗಿಕೊಂಡವರಲ್ಲ. ಕುವೆಂಪು ವಿಶ್ವವಿದ್ಯಾಲಯದ ಅವರ ಅನುಯಾಯಿಗಳಿಗಂತೂ ಈ
ಚಳುವಳಿಗಳ ಬಗ್ಗೆ ಅತೀವ ತಿರಸ್ಕಾರವಿದೆ. ಅವರಲ್ಲಿ ಒಬ್ಬರಾದ ಜೆ.ಸದಾನಂದ, ಇತ್ತೀಚೆಗೆ,
ಮಾಕ್ಸರ್್ವಾದ ನಿಜರ್ೀವಗೊಂಡಿದೆ ಎಂಬ ಮರಣೋತ್ತರ ವರದಿ ಸಲ್ಲಿಸಿದ್ದಾರೆ.
ಹಾಗಿದ್ದೂ, ತಮ್ಮ ಸಂಶೋಧನೆ ಮತ್ತು ಬರಹಗಳು, ಬೌದ್ಧಿಕತೆಯ ನಿರ್ವಸಾಹತೀಕರಣದ
ತಮ್ಮ ಪ್ರಯತ್ನದ ಒಂದು ಭಾಗವೆಂದು ಇವರು ಹೇಳಿಕೊಳ್ಳುತ್ತಾರೆ. ಆದರೆ ಅವರ ಈ
ಪ್ರಯತ್ನ, ಭಾರತವೂ ಸೇರಿ ಜಗತ್ತಿನ ವಿವಿಧ ನಡೆದ ಯಾವ ವಿಮೋಚನಾ
ಹೋರಾಟದಿಂದಲೂ ಏನನ್ನೂ ಪಡೆದಿರುವ ಹಾಗೆ ಕಾಣುವುದಿಲ್ಲ. ಇವರ ಸಂಸ್ಥೆಗೆ
ಸಂಘಪರಿವಾರದ ಬೆಂಬಲವಿದೆ ಎಂಬ ವದಂತಿಗಳಿವೆ. ನಿರ್ವಸಾಹತೀಕರಣ ಸಂಘಪರಿವಾರದ
ಧ್ಯೇಯವಂತೂ ಅಲ್ಲ. ಈ ಹಿನ್ನೆಲೆಯಲ್ಲಿ ಝಳಕಿ-ಬಾಲು ಮತ್ತು ಅವರ ಸಹವತರ್ಿಗಳ
ಸಂಶೋಧನೆಯ ಉದ್ದೇಶದ ಬಗ್ಗೆ ಯಾರಿಗಾದರೂ ಸಂದೇಹ ತಲೆದೋರುವುದು ಸಹಜ.
ಈ ಸಂದರ್ಭದಲ್ಲಿ ನಾನು ಹೇಳಲೇಬೇಕಾದ ಮಾತೊಂದಿದೆ. ಪತ್ರಿಕೆಯ ಕಳೆದ
ವಾರದ ಸಂಚಿಕೆಯಲ್ಲಿ ಝಳಕಿ-ಬಾಲು ಅವರ ಕುರಿತು ಪ್ರಕಟವಾಗಿರುವ, ಸ್ವದೇಶಿ ಮತ್ತು
ವಿದೇಶಿ ಸುಲಿಗೆಕೋರರ ಕೂಡಿಕೆಗೆ ಸಂಶೋಧನೆಯೆಂಬ ಕಿರೀಟ ಎಂಬ ಲೇಖನದ
ಕೊನೆಯ ಸಾಲುಗಳು ಹೀಗಿವೆ. ತಮ್ಮ ಬುಡಕ್ಕೆ ಕೊಡಲಿ ಪೆಟ್ಟು ಬೀಳುತ್ತಿರುವಾಗಲೂ,
'ಮಹಾಚೈತ್ರ' ಕ್ಕಾಗಿ 'ಅನುದೇವಾ ಹೊರಗಣವನು' ಹಾಗು 'ಮಾರ್ಗ'ಕ್ಕಾಗಿ ಬೀದಿಗಿಳಿದ
ಲಿಂಗಾಯತರು ಮೂತರ್ಿ ಸ್ಥಳಾಂತರಿಸಲು ಕೂಡ ಬಿಡದ ದಲಿತರು ಈಗ ಏನು
ಮಾಡುತ್ತಿದ್ದಾರೆ?. ಈ ಮಾತಿನ ಅರ್ಥವೇನು? ಇಲ್ಲಿ ಹೆಸರಿಸಲಾಗಿರುವ ಪುಸ್ತಕಗಳ
ವಿರುದ್ಧ ದಲಿತರು ಬೀದಿಗೆ ಇಳಿದದ್ದು ಸರಿ ಎಂದು ಲೇಖಕರು ಹೇಳುತ್ತಿದ್ದಾರೆಯೇ?
ಲೇಖಕರು ಯಾವ ಅರ್ಥದಲ್ಲಿಯೇ ಹಾಗೆ ಹೇಳಿರಲಿ, ಪುಸ್ತಕದ ವಿರುದ್ಧ, ಯಾವುದೇ
ಪುಸ್ತಕದ ವಿರುದ್ಧ ಜನ ಬೀದಿಗೆ ಇಳಿದು ಪ್ರತಿಭಟಿಸಕೂಡದು. ಬೆಂಗಳೂರಿನಲ್ಲಿ ಮೆಟ್ರೋ
ಕಾಮಗಾರಿಗೆಂದು ಅಂಬೇಡ್ಕರ್ ಮೂತರ್ಿಯನ್ನು ಸ್ಥಳಾಂತರಿಸುವುದರ ವಿರುದ್ಧ ನಡೆದ
ಪ್ರತಿಭಟನೆ, ಒಂದು ಮನೆಹಾಳು ಕೆಲಸ. ಈಗ ಲೇಖಕರು ಝಳಕಿ-ಬಾಲು ಅವರ
'ಸಂಶೋಧನೆ' ವಿರುದ್ಧ ಇಡಿ ಇಡೀ ಸಮುದಾಯಗಳು ಬೀದಿಗಿಳಿದು ಪ್ರತಿಭಟಿಸಬೇಕು
ಎಂದು ಕರೆಕೊಡುತ್ತಿದ್ದಾರೆ. ಇವರ ಮಾತಿನಲ್ಲಿ ಹೊಗೆಯಾಡುತ್ತಿರುವ ಅಸಹನೆ ನನ್ನನ್ನು
ಅಸ್ವಸ್ಥನನ್ನಾಗಿ ಮಾಡಿದೆ.
G. RAJASHEKAHAR -DUNDIN JALAKI's Vachana Research

ಎಂ.ಎಸ್.ಶ್ರೀರಾಮ್ ಅವರ ಸಲ್ಮಾನ್ ಖಾನನ ಡಿಫಿಕಲ್ಟೀಸು


ಎಂ.ಎಸ್.ಶ್ರೀರಾಮ್ ಅವರ ಸಲ್ಮಾನ್ ಖಾನನ ಡಿಫಿಕಲ್ಟೀಸು

ಎಮ್.ಎಸ್,ಶ್ರೀರಾಮ್ ಅವರ ಈ ಕತೆ0ು ಶೀಷರ್ಿಕೆ0ುನ್ನು ನೋಡಿದಾಗ, ಇದೇನು! ಕನ್ನಡ ಲೇಖಕರೊಬ್ಬರು ಎಲ್ಲಾ ಬಿಟ್ಟು ಸಲ್ಮಾನ್ ಖಾನನ ಡಿಫಿಕಲ್ಟೀಸಿನ ಬಗ್ಗೆ ಬರೆದಿದ್ದಾರಲ್ಲ! ಎನಿಸಬಹುದು. ಕತೆ0ು ಮೊದಲ ಪ್ಯಾರಾ ಈ ಆಶ್ಚ0ರ್ುವನ್ನು ಪುಷ್ಟೀಕರಿಸುವಂತೆ0ೆು ಇದೆ.  ಕತೆ  ಮುಂದುವರೆ0ುುತ್ತಿದ್ದಂತೆ   ವಿಭಕ್ತಿ ಪ್ರತ್ಯ0ುವನ್ನು ತುಸು ಮಾರ್ಪಡಿಸಿಕೊಂಡು 'ಸಲ್ಮಾನ್ ಖಾನನಿಂದ ಡಿಫಿಕಲ್ಟೀಸು' ಎಂದು ಓದಿಕೊಂಡರೆ ಆರಂಭದ ಆಶ್ಚ0ರ್ು-ಗೊಂದಲಗಳು ಕೊಂಚ ಶಮನಗೊಂಡು 'ಎಲ್ಲಾ ಸರಿ0ಾಗಿದೆ' ಎಂದು ಸಮಾಧಾನವಾಗಬಹುದು. ಕತೆ ಓದಿ ಮುಗಿಸಿದ ಮೇಲೆ ಸಲ್ಮಾನ್ ಖಾನನ ಡಿಫಿಕಲ್ಟೀಸಿಗೂ ಸಲ್ಮಾನ್ ಖಾನನಿಂದ ಸೃಷ್ಟಿ0ಾದ ಡಿಫಿಕಲ್ಟೀಸಿಗೂ ಧ್ವನಿಪೂರ್ಣ ವೈದೃಶ್ಯವೊಂದು ಹೊಳೆದು ಮನಸ್ಸು ಭಾರವಾಗುತ್ತದೆ. ಆದರೆ ತಮ್ಮ ಬರವಣಿಗೆ0ುಲ್ಲಿನ ತಿಳಿಹಾಸ್ಯ ಮತ್ತು ತುಸು ಲಘುಧಾಟಿ0ು ನಿರೂಪಣೆಯಿಂದಾಗಿ ಮನಸ್ಸಿನ ಈ ಭಾರವನ್ನು ಓದುಗ ಕೇವಲ ಸುಖಿಸದಂತೆ ನಿರೋಧಿಸುವ ಲೇಖಕರು   ಹಾಗೆ ಮಾಡಿ ಓದುಗರ ಸಂವೇದನೆ0ುು ಭಾವುಕತೆ0ುಲ್ಲಿ ಅದ್ದಿಹೋಗುವುದನ್ನು ತಡೆ0ುುತ್ತಾರೆ. ಆ ಮೂಲಕ ಓದುಗರ ವಿಮರ್ಶನ ಪ್ರಜ್ಞೆ0ುನ್ನು ಜಾಗೃತವಾಗಿಡುತ್ತಾರೆ. ಕಾಲಾನುಕ್ರಮದ ಸರಳರೇಖಾತ್ಮಕ ನಿರೂಪಣಾ ವಿಧಾನವನ್ನು ಕೈಬಿಟ್ಟು, ಪ್ರಾ0ುಶಃ ಈ ಕತೆ0ು ಕೊನೆ0ು ಪ್ಯಾರಾ ಆಗಬಹುದಿದ್ದ ವಾಕ್ಯಗಳನ್ನು ಕತೆ0ು ಆರಂಭದಲ್ಲೇ ಓದಿಸಿ ಓದುಗರಲ್ಲಿ ಕುತೂಹಲ ಹುಟ್ಟಿಸುತ್ತಾರೆ. ಮೇಲುನೋಟಕ್ಕೆ ಪರಸ್ಪರ ಸಂಬಂಧವಿರದ ಪಾತ್ರಗಳನ್ನು ಘಟನೆಗಳನ್ನು ಹೂಡಿ ಅವುಗಳು ಓದುಗರ ಮನಸ್ಸಿನಲ್ಲಿ ಸಂಘಟಿತಗೊಂಡು ಒಂದು ಅನುಭವ ಸೃಷ್ಟಿ0ಾಗುವಂಥ ಕಥನಕ್ರಮವೊಂದು ಶ್ರೀರಾಮರ ಕಥಾಸಾಹಿತ್ಯದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ಕತೆ0ುಲ್ಲೂ ಅಂಥದೊಂದು ಛಾ0ೆುಯಿದೆ. ನಿಜಜೀವನದ ಜೀವಂತ ವ್ಯಕ್ತಿಗಳನ್ನೂ ತಮ್ಮ ಕತೆಗಳ ಪಾತ್ರಗಳನ್ನಾಗಿ ಮಾಡುವ ಉಪಕ್ರಮವೂ ಇಲ್ಲಿ0ುೂ ಕಂಡುಬರುತ್ತದೆ.
      ಮುಂಬಯಿ0ು ಬಾಂದ್ರಾದಲ್ಲಿ ವಾಸಿಸುವ ಚಿತ್ರನಟ ಸಲ್ಮಾನ್ ಖಾನನಿಗೆ ಒಂದು ದಿನ ಹೈದರಾಬಾದಿನ ರೇಖಾರಾಣಿ ಎಂಬ ಹುಡುಗಿಯಿಂದ ಪತ್ರವೊಂದು ಬರುತ್ತದೆ. ಕೈ ಬರಹದ ಈ ಇನ್ ಲ್ಯಾಂಡ್ ಲೆಟರು ಅವನ ಗಮನವನ್ನು ಸೆಳೆ0ುುತ್ತದೆ. ಆದರೆ ಆ ಪತ್ರದ ಬಗ್ಗೆ ಅವನೇನೂ ಮಾಡುವಂತಿರಲಿಲ್ಲ. ಏಕೆಂದರೆ ಆ ಹುಡುಗಿ0ು 'ಅತಾ-ಪತಾ'ದ ಬಗ್ಗೆ ಆ ಪತ್ರದಲ್ಲಿ ಮಾಹಿತಿ ಇರಲಿಲ್ಲ. ಸ್ವವಿಳಾಸವಿಲ್ಲದ ಆ ಪತ್ರವನ್ನು ಏನು ಮಾಡುವುದೆಂದು ತಿಳಿ0ುದೆ ಅವನು ಅದನ್ನು ತನ್ನ 'ಬೀಯಿಂಗ್ ಹ್ಯೂಮನ್ ಫೌಂಡೇಷನ್'ಗೆ ಕಳಿಸಿ ಇರಿಸುತ್ತಾನೆ. ಈ ರೇಖಾರಾಣಿ 0ಾರು? ಅವಳಿಗೂ ಸಲ್ಮಾನ್ ಖಾನನಿಗೂ ಏನು ಸಂಬಂಧ? ಅವಳೇಕೆ ಇವನಿಗೆ ಪತ್ರ ಬರೆದಳು? ಆ ಪತ್ರದಲ್ಲಿ ಅವಳು ಏನು ಬರೆದಿದ್ದಳು? ಮುಂತಾದ ಪ್ರಶ್ನೆಗಳಿಗೆ ಉತ್ತರ ಸಿಗಬೇಕೆಂದರೆ ಕತೆ0ು ಮುಂದಿನ ಭಾಗಗಳಿಗೆ ಅನಿವಾ0ರ್ುವಾಗಿ ಹೋಗಬೇಕು.
         ರೇಖಾರಾಣಿ ದೋಮಲ್ಗೂಡಾದ ದ್ವಾರಕಾ ಹೈಸ್ಕೂಲಿನಲ್ಲಿ ಒಂಬತ್ತನೇ ತರಗತಿ0ುಲ್ಲಿ ಓದುತ್ತಿದ್ದಳು. ಇಂಗ್ಲೀಷ್ ಮೀಡಿ0ುಂ ಎಂದು ಹೇಳುವುದನ್ನು ಅವಳು 0ಾವತ್ತೂ ಮರೆ0ುುತ್ತಿರಲಿಲ್ಲ. ಪ್ರತೀ ಬಾರಿ0ುೂ ತರಗತಿ0ುಲ್ಲಿ ಮೊದಲ ಅಥವಾ ಎರಡನೆ0ು ಸ್ಥಾನದಲ್ಲಿರುತ್ತಿದ್ದ ಅವಳಿಗೆ ಡಿಗ್ರಿ ಮಾಡಿ ಒಂದು ಕಾಲ್ ಸೆಂಟರಿನಲ್ಲಿ ಕೆಲಸಹಿಡಿ0ುಬೇಕೆಂಬ ಬ0ುಕೆಯಿತ್ತು. ಕಾಲ್ ಸೆಂಟರಿನ ಹುಡುಗಿ0ುರೆಲ್ಲಾ ಚೆನ್ನಾಗಿ ಇಂಗ್ಲೀಷ್ ಮಾತಾಡುತ್ತಾರೆಂದು ರೇಖಾರಾಣಿ ಕೇಳಿದ್ದಳು. ಬರುವ ಮೂರು ತಿಂಗಳುಗಳಲ್ಲಿ ಪರೀಕ್ಷೆ ಬರೆದು ಮುಗಿಸಿದರೆ ನಂತರ ಸಲ್ಮಾನ್ ಖಾನನ ಬಾಡಿಗಾಡರ್್ ಸಿನೇಮಾ ತೋರಿಸುವುದಾಗಿ ಅಪ್ಪ ಪೆಂಟ0್ಯು ಹೇಳಿದ್ದ. ಈಗಾಗಲೇ ವಾಂಟೆಡ್ ಮತ್ತು ದಬಾಂಗ್ ನೋಡಿದ್ದ ರೇಖಾ ತನ್ನ ಕಾಲ್ ಸೆಂಟರಿನ ನೌಕರಿ0ುನ್ನು ಬ0ುಸಿದಷ್ಟೇ ಉತ್ಕಟವಾಗಿ ಬಾಡಿಗಾಡರ್್ ಚಿತ್ರದ ಬಿಡುಗಡೆ0ುನ್ನು ಎದುರು ನೋಡುತ್ತಿದ್ದಳು. ಕೆಳ ಮಧ್ಯಮವರ್ಗದ ಸಣ್ಣ ಆಸೆಗಳು ಮತ್ತು ಆಶೋತ್ತರಗಳನ್ನು ಬಿಂಬಿಸುವ ಈ ಪ್ಯಾರಾ ಇನ್ನೂ ಒಂದು ಕಾರಣದಿಂದ ಆಕಷರ್ಿಸುತ್ತದೆ. ಅದು 'ಪೆಂಟ0್ಯು' ಎಂಬ ಹೆಸರು. ಅವನು ಹಿಂದೆ ಇದ್ದಿಲಂಗಡಿ0ೊಂದರಲ್ಲಿ ಕೆಲಸಕ್ಕಿದ್ದ; ಆಗ ಅಡವಿ ರಾಮುಡು ಎಂಬ ಚಿತ್ರವನ್ನು ನೋಡಿ ಬಂದಿದ್ದ; ಈಗ ಅವನು ರಾಜೂ ಸೇಠ್ ಎಂಬ ಸಾಹುಕಾರನ ಬಳಿ ಕೆಲಸ ಮಾಡುತ್ತಾನೆ; ಇನ್ನೋವಾ ಗಾಡಿ0ುಲ್ಲಿ, ಮಹಿಳೆ0ುರನ್ನು ಅವರ ಅಪಾಟರ್್ಮೆಂಟ್ಗಳಿಂದ ಅವರು ಕೆಲಸಮಾಡುವ ಜಾಗಕ್ಕೆ ಕರೆದೊ0ು್ದು , ಅವರ ಶಿಫ್ಟ್ ಮುಗಿದ ಮೇಲೆ ವಾಪಸು ಕರೆತರುವ ಡ್ರೈವರ್ ಕೆಲಸದಲ್ಲಿದ್ದ; ಅವನ ಸಂಬಳ ಹತ್ತು ಸಾವಿರ ರೂಪಾಯಿ ಮುಂತಾದ ವಿವರಗಳನ್ನು ಕಥೆ ಮುಂದೆ ನೀಡುತ್ತಾ ಹೋಗುತ್ತದೆ.
        ಪೆಂಟ0್ಯುನ ಇನ್ನೋವಾ ಅಪಘಾತಕ್ಕೆ ಈಡಾಗುತ್ತದೆ. ಅವನ ಆಸ್ಪತ್ರೆ ಖಚರ್ಿಗೆ ಸಾವಿರಾರು ರೂಪಾಯಿಗಳು ಬೇಕಾಗುತ್ತವೆ. ಅವರಿವರು ಒಂದಷ್ಟು ಸಹಾ0ು ಮಾಡಿದರೂ ಅವನ ಹೆಂಡತಿ0ು ಬಂಗಾರ ಮಾರಾಟವಾಗುತ್ತದೆ. 'ಇಪ್ಪತ್ತು ಸಾವಿರ ರೂಪಾಯಿ ಕರಮ ಚಂದಾನಿ ಸೇಠ್ ಬಳಿ ಸಾಲವಾಗಿತ್ತು. ತಿಂಗಳಿಗೊಂದು ರೂಪಾಯಿ0ು ಬಡ್ಡಿಗೆ ತೆಗೆದ ಸಾಲದ ಕಂತನ್ನೂ ವಸೂಲು ಮಾಡಲು ತಪ್ಪದೇ ಪ್ರತೀ ತಿಂಗಳ ಐದನೆ0ು ತಾರೀಖು ಸೇಠ್ ಹಾಜರಾಗುತ್ತಿದ್ದ'. ಪೆಂಟ0್ಯುನ ಹೆಂಡತಿ ಮನೆಗೆಲಸದ ಮನೆಗಳ ಸಂಖ್ಯೆ0ುನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ತಿಂಗಳಿಗೆ ನೂರೈವತ್ತು ಕಬಳಿಸುತ್ತಿದ್ದ ಕೇಬಲ್ ಟಿ.ವಿ.0ುನ್ನು ಬಂದು ಮಾಡಬೇಕಾಗುತ್ತದೆ. ಪರೀಕ್ಷೆಗೆ ಓದುತ್ತಿದ್ದ ರೇಖಾರಾಣಿ ಆಗಾಗ ತನ್ನ ಅಮ್ಮನೊಂದಿಗೆ ಮನೆಗೆಲಸ ಮಾಡಲು ಹೋಗಬೇಕಾಗುತ್ತದೆ. ತನಗೆ ಸಹಾ0ುವಾಗುವುದರ ಜೊತೆಗೆ ರೇಖಾರಾಣಿಗೂ ಕೆಲಸ ತಿಳಿ0ುಲಿ ಎಂದು ಅವಳ ಅಮ್ಮ ರಾಮುಲಮ್ಮ ಅವಳನ್ನು ಎಲ್ಲೆಡೆಗೆ ಕರೆದುಕೊಡು ಹೋಗಲಾರಂಭಿಸಿದ್ದಳು. ಹೀಗೆ ಪೆಂಟ0್ಯು ಅಪಘಾತಕ್ಕೀಡಾಗಿ ಮನೆ0ುಲ್ಲೇ ಉಳಿ0ುಬೇಕಾದ ಅನಿವಾ0ರ್ುತೆ ಅವರ ಮನೆ0ು ದಿನಚರಿ0ು ಮೇಲೆ0ೆು ಅಗಾಧ ಪರಿಣಾಮ ಬೀರಿತ್ತು. ಅವನ ಕೆಲಸವೂ ಹೋಗಿತ್ತು. ಅಪ್ಪ ಮನೆ0ುಲ್ಲಿ; ಅಮ್ಮ ಹೊರಗೆ. ಈ ಪರಿಸ್ಥಿತಿಗೆ ಹೊಂದಿಕೊಂಡು ರೇಖಾ ಪರೀಕ್ಷೆಗಾಗಿ ಚೆನ್ನಾಗಿ0ೆು ಓದುತ್ತಿರುತ್ತಾಳೆ.    ಪರೀಕ್ಷೆ 0ಾವಾಗ ಮುಗಿ0ುುತ್ತದೆ, 0ಾವಾಗ ತಾನು ಸಲ್ಮಾನ್ ಖಾನನ ಬಾಡಿಗಾಡರ್್ ನೋಡುತ್ತೇನೆ ಎಂಬ ತವಕದಲ್ಲಿರುತ್ತಾಳೆ.
      ಸಿನೇಮಾಕ್ಕೆ ದುಡ್ಡಾದರೆ ಸಾಕು ತಾನು ಕಾಚೀಗೂಡಾದವರೆಗೆ ನಡೆದೇ ಹೋಗುತ್ತೇನೆಂದು ರೇಖಾ ರಾಮುಲಮ್ಮನಿಗೆ ಹೇಳುತ್ತಾಳೆ. ಆದರೆ 'ರಾಮುಲಮ್ಮ ಎಪ್ಪತ್ತೈದು ರೂಪಾಯಿ ಸಾಮಾನ್ಯದ ಮೊತ್ತವೇನೂ ಅಲ್ಲ ಎಂದು ರೇಖಾರಾಣಿಗೆ ಅನೇಕ ಬಾರಿ ಹೇಳಿದಳು. ರೇಖಾರಾಣಿಗೂ ಅದು ತಿಳಿದ ವಿಚಾರವೇ. ಆದರೂ ಮೂರು ತಿಂಗಳ ಕಷ್ಟಕ್ಕೆ ಫಲವಾಗಿ ಸಲ್ಮಾನ್ ಖಾನನ ಸಿನೇಮಾವೊಂದನ್ನು ನೋಡುವುದು ಮಹಾಪಾಪವೆಂದೇನೂ ಅವಳಿಗನ್ನಿಸಲಿಲ್ಲ'. ರಾಮುಲಮ್ಮ ಮಗಳನ್ನು ಮನೆಗೆಲಸಕ್ಕೆ ಅಟ್ಟುತ್ತಾಳೆ. ಪಾ0ುಸ ಮಾಡುವುದಾಗಿ ಹೇಳುತ್ತಾಳೆ. ರೇಖಾರಾಣಿಗೆ ಸಿಟ್ಟೇ ಬರುತ್ತದೆ. 'ನನ್ನನ್ನು ಸಿನೇಮಾಕ್ಕೆ 0ಾವಾಗ ಕಳಿಸುತ್ತೀ0ು ಹೇಳು'ಎಂದು ಜಬರ್ದಸ್ತಿನಿಂದ ಕೇಳಿದರೆ ರಾಮುಲಮ್ಮ ಅವಳ ತಲೆ0ು ಮೇಲೆ ಜೋರಾಗಿ ಮೊಟಕಿ ಮನೆಗೆಲಸಕ್ಕೆ ದಬ್ಬುತ್ತಾಳೆ. ಮನೆಗೆಲಸ ಮುಗಿಸಿ ರೇಖಾರಾಣಿಮನೆಗೆ ಹಿಂದಿರುಗುತ್ತಿದ್ದಾಗ ದಾರಿ0ುಲ್ಲಿ ಅವಳ ಕಣ್ಣಿಗೆ ಅನಾಥವಾಗಿ ಬಿದ್ದಿದ್ದ ನೂರರ ಒಂದು ನೋಟು ಕಣ್ಣಿಗೆ ಬೀಳುತ್ತದೆ. 'ಮೊದಲಿಗೆ ಬಗ್ಗಿ ತೆಗೆ0ುಲು ಹೆದರಿದಳಾದರೂ, ಗಾಂಧಿ ತಾತನ ಮುಖವಿರುವ ಜಾಗದಲ್ಲಿ ಸಲ್ಮಾನ್ ಖಾನನ ಮುಖ ಕಾಣಿಸಿದಂತಾಗಿ ಅವಳು ಅದನ್ನು ತನ್ನ ಕೈ0ುಲ್ಲಿ ಹಿಡಿದಳು. ಕೆಡವಿಕೊಂಡವರು ಅದನ್ನು ಹುಡುಕಿ ಬರಬಹುದೆಂದು ಸುತ್ತಮುತ್ತ ನೋಡಿದಳು. 0ಾರೂ ಕಾಣಲಿಲ್ಲ. ಮೈಸಮ್ಮ ತಾಯಿ ತನಗಾಗಿ0ೆು-ತಾನು ಕಷ್ಟಪಟ್ಟು ಓದಿ ಮುಗಿಸಿದ್ದಕ್ಕಾಗಿ0ೆು ಈ ಹಣವನ್ನು ಕಳಿಸಿರಬಹುದೆಂದು, ಕಣ್ಣಿಗೆ ಅದ್ದಿ ಮನೆ0ುತ್ತ ಓಡಿದಳು'. ಇದರ ಪರಿಣಾಮ ಮಾತ್ರ ಅನಿರೀಕ್ಷಿತವಾಗಿರುತ್ತದೆ.  ಮಗಳ ಕೈ0ುಲ್ಲಿ ನೂರು ರೂಪಾಯಿ ನೋಟು ಕಂಡು ರಾಮುಲಮ್ಮ ಕೆಂಡಾಮಂಡಲವಾಗುತ್ತಾಳೆ. 'ಕೆಲಸಕ್ಕೆಂದು ಕಳಿಸಿದರೆ ಕಳ್ಳತನ ಮಾಡಿ ಬರುವುದಲ್ಲದೇ ರಸ್ತೆ0ುಲ್ಲಿ ನೂರು ರೂಪಾಯಿ ಸಿಕ್ಕಿತೆಂದು ಚೆವಿಲೋ ಪೂವು ಇಡುತ್ತೀ0ಾ-0ಾವ ಹೊಟ್ಟೆ0ುಲ್ಲಿ ಎಂಥಾ ಮಗಳಾಗಿ ಹುಟ್ಟಿದೆ ಎಂದು ಚೆನ್ನಾಗಿ ಬ0್ದುದ್ದಲ್ಲದೇ ತಲೆಗೂ ಬೆನ್ನಿಗೂ ಇಕ್ಕಿದಳು. ರೇಖಾರಾಣಿ ಏನೇ ಹೇಳಿದರೂ ಕೇಳುವ ಮೂಡಿನಲ್ಲಿ ರಾಮುಲಮ್ಮ ಇರಲಿಲ್ಲ'. 0ಾರ ಮನೆ0ುಲ್ಲಿ ಮಗಳು ಮನೆಗೆಲಸ ಮಾಡಿಬಂದಿದ್ದಳೋ ಅಲ್ಲಿಗೆ ಹೋಗುತ್ತಾಳೆ. ಮನೆ0ು 0ು0ುಜಮಾನಿ 'ಅದು ತನ್ನದೇ ಅಲ್ಲವೇ ಅನ್ನುವ ಖಾತ್ರಿ ತನಗಿಲ್ಲವಾದರೂ, ರಾಮುಲಮ್ಮ ತನ್ನ ಮನೆಯಿಂದಲೇ ರೇಖಾರಾಣಿ ಕದ್ದಿದ್ದಾಳೆ ಎಂದು ಖಂಡಿತವಾಗಿ ಹೇಳಿಕೊಳ್ಳುತ್ತಿರುವುದರಿಂದ ಅದನ್ನು ವಾಪಸ್ಸು ಪಡೆದಳು'. ರಾಮುಲಮ್ಮ ಕೆಲಸವನ್ನೂ ಕಳೆದುಕೊಳ್ಳುತ್ತಾಳೆ, ಆ ಬಿಲ್ಡಿಂಗಿನವರ ವಿಶ್ವಾಸವನ್ನೂ ಕಳೆದುಕೊಳುತ್ತಾಳೆ.
     ಈ ಪ್ರಸಂಗವು ಲಂಕೇಶರ ಅಕ್ಕ ಕಾದಂಬರಿ0ು ಒಂದು ಪ್ರಕರಣವನ್ನು ನೆನಪಿಸುವಂತಿದೆ. ಅಕ್ಕ ದೇವೀರಿ ಕ್ಯಾತನ ಕೈ0ುಲ್ಲಿ ಐವತ್ತು ರೂಪಾಯಿ ನೋಟನ್ನಿಟ್ಟು ತಾನು  ಕೂಲಿಗೆ ಹೊರಟ ಮೇಲೆ ಅಕ್ಕ ವಾಪಸು ಬರುವಷ್ಟರಲ್ಲಿ ಈ ನೋಟನ್ನು 'ತೀರಿಸಿಬಿಡಬೇಕು' ಎಂದು ನಿರ್ಧರಿಸುತ್ತಾನೆ. ಆದರೆ ನಡೀತಿದ್ದಂಗೆ ಬ0ು ಶುರುವಾ0ು್ತು. ಐವತ್ತು ರೂಪಾ0್ನು ಜೇಬಿನಿಂದ ತೆಗೆದ್ರೆ ಕಂಡೋರ್ ಏನಂದಾರು? ದಿನಸಿ ಅಂಗಡಿ0ು ರಾಮಚಂದ್ರಶೆಟ್ಟಿ0ುಂತೂ ತಕ್ಷಣ ಪೋಲೀಸರಿಗೆ ಹೇಳ್ತಾನೆ. ಉಳಿದ ಅಂಗಡಿಗಳವರದೂ ಬೇರೆ ಕತೆ. ಕೊನೆಗೆ 'ರಾಜಕುಮಾರ್ ಪಿಚ್ಚರ್' ನೋಡಿಬಿಡೋಣ ಎಂದು 'ರಿಕ್ಸಾ' ಕರೆದರೆ ಡ್ರೈವರ್ 'ಕಾಸ್ ಎಸ್ಟ್ ಮಡಗಿದ್ದೀ ಮಗಾ?' ಎಂದು ವ್ಯಂಗ್ಯದಿಂದ ಕೇಳುತ್ತಾನೆ. ಕ್ಯಾತ ಐವತ್ತು ರೂಪಾಯಿ ನೋಟು ತೋರಿಸಿದರೆ ಅನುಮಾನದಿಂದ ನೋಡುತ್ತಾನೆ. 'ಮಾವನ ಮನಿ0ಾಗೆ ಇರಾಕೆ ತ0ಾರಾಗು' ಎನ್ನುತ್ತಾನೆ. ಕ್ಯಾತನಿಗೆ ಅವಮಾನವೆನಿಸುತ್ತದೆ: ಕ್ಯಾತ ಅದೇನು ತಪ್ಪು ಮಾಡಿದ್ದ? ಎಲ್ಲರಂಗೆ ರಿಕ್ಸಾ ಕರೆದು ಮಜೂರಿ ಕೊಡ್ತೀನಿ, ರಾಜ್ ಪಿಚ್ಚರ್ಗೆ ಬಿಡು, ಅಂದಿದ್ದ. ಇಸ್ಟಕ್ಕೆ ಮಾವನ ಮನೆಗೆ ಕ್ಯಾತ 0ಾಕೆ ಹೋಗಬೇಕು..ಈ ಐವತ್ತು  ರೂಪಾಯಿಗೆ ಬೆಂಕಿಹಾಕ... ಲಘುಧಾಟಿ0ುಲ್ಲೇ ವರ್ಗಸಮಾಜದ ಸ್ವರೂಪವನ್ನು ತೋರುವ ಕನ್ನಡದ ಅತ್ಯುತ್ತಮ ಮಾದರಿಗಳೊಂದಿಗೆ ಶ್ರಿರಾಮರ ಕತೆ0ುೂ ಸೇರುವುದು ಹೀಗೆ. ಬಡವರ ಕೈ 0ಾವತ್ತೂ ಖಾಲಿ ಎಂಬುದೊಂದು ಗೃಹೀತ ಸತ್ಯವಷ್ಟೆ. ಅಕಸ್ಮಾತ್ ಅದು ತುಂಬಿದ್ದರೆ ಅದು ಕೇವಲ ಒಂದು ಅಪವಾದ. ಇದು ಅಪವಾದವೆಂದು ಗುರುತಿಸುವ ಔದಾ0ರ್ುವನ್ನು ಸಮಾಜದಿಂದ ನಿರೀಕ್ಷಿಸುವುದಾದರೂ ಹೇಗೆ? ಆ ಹಣ ಕದ್ದದ್ದೇ ಎಂದು ಸಮಾಜ ತೀಮರ್ಾನಿಸಿದರೆ ಸಮಾಜದ ದೃಷ್ಟಿ0ುಲ್ಲಿ ಅದು ಕೇವಲ ಸಹಜ. ರೇಖಾರಾಣಿ0ು ಪ್ರಸಂಗದಲ್ಲಿ ಇದು ಇನ್ನಷ್ಟು ದುರ್ಭರ; ಏಕೆಂದರೆ ಸ್ವತಃ ಅವಳ ತಾಯಿಗೇ ಮಗಳ ಬಗ್ಗೆ ಅನುಮಾನ. ಎಳೆ ಹುಡುಗಿ ರೇಖಾರಾಣಿಗೆ ಈ ಪ್ರಸಂಗವು ಎಷ್ಟು ಆಘಾತಕಾರಿ0ಾಗುತ್ತದೆ ಎಂದರೆ ಅದರ ತೀವ್ರತೆ0ುಲ್ಲಿ ಅವಳಿಗೊಂದು ಸತ್ಯ ಹೊಳೆದು ಬಿಡುತ್ತದೆ: ಉತ್ಕಟವಾಗಿ ಸಲ್ಮಾನ್ ಖಾನನ ಚಿತ್ರವನ್ನು ಬ0ುಸಿದ್ದೇ ತಪ್ಪಾಗಬಹುದೆಂದು ರೇಖಾರಾಣಿಗೆ ಅರ್ಥವಾಯಿತು. ತನ್ನ ವರ್ಗ ಮಿತಿಗಳನ್ನು ರೇಖಾ ಮರೆತಿದ್ದರಿಂದಲೇ-ಅಂದರೆ ಬಡವ ನೀ ಮಡಗಿದ ಹಾಗೆ ಇರು ಎಂಬ ಸಾಮಾಜಿಕ ಆದೇಶವನ್ನು ಮೀರಿದ್ದರಿಂದಲೇ-ಅವಳು ಕಷ್ಟಕ್ಕೆ ಸಿಕ್ಕಿಹಾಕಿಕೊಳ್ಳಬೇಕಾಯಿತು ಎಂಬ ವ್ಯಂಗ್ಯದಲ್ಲಿ ವರ್ಗಸಮಾಜದ ವಿಕೃತಿಗಳು, ವೈರುಧ್ಯಗಳು ಬ0ುಲಾಗುತ್ತವೆ. ದುರಂತದ ಪ್ರಮಾಣದಲ್ಲಿ ತುಂಬ ವ್ಯತ್ಯಾಸವಿದ್ದರೂ ಚೋಮನ ದುರಂತವೂ ಇದೇ ಬಗೆ0ುದಲ್ಲವೆ? ಸೂಕ್ಷ್ಮವಾಗಿ ನೋಡಿದರೆ ಚೋಮನ ದುಡಿ0ುಲ್ಲಿ ಚೋಮನ ನಿಜವಾದ ದುರಂತ ಅಡಗಿರುವುದು ಅವನ ಜಾತಿಮೂಲ, ವರ್ಗಮೂಲಕ್ಕಿಂತ ಹೆಚ್ಚಾಗಿ ಆ ಮೂಲಗಳಿಂದ ಬಂದ ವ್ಯಕ್ತಿ0ೊಬ್ಬನು ಸ್ವಂತ ಸಾಗುವಳಿ0ು ಕನಸನ್ನು ಇಟ್ಟುಕೊಂಡಿದ್ದ ಎಂಬುದರಲ್ಲಿ. ಅವನ ಕನಸಿಗೆ ಜಮೀಂದಾರನಾದ ಸಂಕಪ್ಪ0್ಯುನೂ ಸ್ಪಂದಿಸುವುದಿಲ್ಲ; ಸ್ವತಃ ಚೋಮನ ಕುಟುಂಬದವರೂ ಸ್ಪಂದಿಸುವುದಿಲ್ಲ ಅಲ್ಲವೇ? ಚೋಮನ ಸಹಜ ಆಸೆ0ುನ್ನು  ಅವನು ತನ್ನ ಮಿತಿ0ುನ್ನು ಅತಿಕ್ರಮಿಸುವ ಆಸೆ ಎಂದು ವ್ಯಾಖ್ಯಾನಿಸುವಲ್ಲಿ ಅವನ ಸಮಾಜ ತನ್ನ ಕ್ರೌ0ರ್ುವನ್ನು ತೋರುತ್ತದೆ.
       ರೇಖಾರಾಣಿ0ುನ್ನು ಪೆಂಟ0್ಯುನ ಮಗಳು ಎಂದು ಕಲ್ಪಿಸಿಕೊಂಡು ಶ್ರೀರಾಮ್ ತಿರುಮಲೇಶರ  ಪೆಂಟ0್ಯುನ ಅಂಗಿ ಕವಿತೆ0ೊಂದಿಗೂ ಒಂದು ಬಗೆ0ು ಅಂತರ್ಪಠ್ಯೀ0ುತೆ0ುನ್ನು ಸೂಚಿಸಿದ್ದಾರೆ. ಇದ್ದಿಲಂಗಡಿ0ುಲ್ಲಿ ಕೆಲಸ ಮಾಡುತ್ತಿದ್ದ ಪೆಂಟ0್ಯುನಿಗೆ ಅಡವಿ ರಾಮುಡು ಸಿನೇಮಾಗೆ ಹೋಗುವ ಆಸೆ. ಪೋಲೀಸು ಪಟೇಲನ ಮನೆಗೆ ಇದ್ದಿಲನ್ನು ತೆಗೆದುಕೊಂಡು ಹೋಗಬೇಕೆಂಬುದನ್ನು ಮರೆತು ಗರಿಗರಿ ಬಿಳಿಬಟ್ಟೆ ತೊಟ್ಟು ಹೊರಟ ಅನ್ನುವಷ್ಟರಲ್ಲಿ ಪೋಲೀಸು ಪಟೇಲ ಎದುರಾಗುತ್ತಾನೆ. 'ಅಂದಿನಿಂದ-ಅಂದಿನಿಂದ 0ಾತಕ್ಕೆ, ಆ ಕ್ಷಣ-/ದಿಂದ ಪೆಂಟ0್ಯುನ ಬಿಳಿ ಅಂಗಿ/ಎಂದೂ ಬಿಳಿ0ುಂಗಿ0ಾಗಿರಲಿಲ್ಲ' ಎಂದು ತಿರುಮಲೇಶರ ಕವಿತೆ ದಾಖಲಿಸುತ್ತದೆ. ಪೆಂಟ0್ಯುನ ಮಗಳ ಪಾಡು ಇದಕ್ಕಿಂತ ಬೇರೆ0ುಲ್ಲ. ಸಲ್ಮಾನ್ ಖಾನನಿಗೆ ಸ್ವವಿಳಾಸವಿಲ್ಲದ ಖಾರವಾದ ಕಾಗದ ಬರೆದು 'ಇನ್ನೆಂದೂ ಸಲ್ಮಾನನ ಸಿನೇಮಾಗಳನ್ನು ನೋಡುವುದಿಲ್ಲವೆಂದು ಅವಳು ಶಪಥಂಗೈದಳು'. ಸಲ್ಮಾನ್ ಖಾನನ ಡಿಫಿಕಲ್ಟೀಸು ಜಾಸ್ತಿ0ಾಗುವುದು ಹೀಗೆ.
                                 *****
ಟಿ.ಪಿ.ಅಶೋಕ
ಅಗ್ರಹಾರ
ಸಾಗರ-577 401
94482 54228