ಕನ್ನಡದ ಸೇವೆ - ಸಾಲಿ ರಾಮಚಂದ್ರ ರಾಯರು

ಕನ್ನಡದ ನೆಲದ ಪುಲ್ಲೆನಗೆ ಪಾವನ ತುಲಸಿ!
ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ
ಕನ್ನಡದ ನೆಲದ ಕಲ್ಲೆಮಗೆ ಶಾಲಗ್ರಾಮ ಶಿಲೆ! ಕನ್ನಡಂ ದೈವಮೈ!
ಕನ್ನಡದ ಶಬ್ದಮೆಮಗೋಂಕಾರಮೀಯೆನ್ನ
ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ-
ಮಿನ್ನಾವುದೈ ಪೆರತು ಕನ್ನಡದ ಸೇವೆಯಿಂದಧಿಕಮೀ ಜಗದೊಳಗೆ?
-- ಸಾಲಿ ರಾಮಚಂದ್ರರಾಯರು 

ಶ್ರೀಮತಿ ಸುಮತಿ ಕು. ಶಿ. ಹರಿದಾಸ ಭಟ್ ನಿಧನ -28-5-2015

ಉಡುಪಿ: ಹಿರಿಯ ಸಾಹಿತಿ ದಿ| ಪ್ರೊ| ಕು.ಶಿ. ಹರಿದಾಸ ಭಟ್ಟರ ಪತ್ನಿ ಸುಮತಿ ಅಮ್ಮ (82) ಮೇ 28ರಂದು ಇಂದ್ರಾಳಿಯ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 
ಪತಿ ಹರಿದಾಸ ಭಟ್ಟರ  ಸಾಹಿತಿ ಮಿತ್ರರಾದ ದ.ರಾ. ಬೇಂದ್ರೆ, ಶಿವರಾಮ ಕಾರಂತ, ಜಿ.ಟಿ. ನಾರಾಯಣ ರಾವ್‌ ಮೊದಲಾದವರಿಗೆ ಆತಿಥ್ಯ ನೀಡಿದ ಹೆಗ್ಗಳಿಗೆ ಅವರದ್ದು.
-----
ಅತಿಥಿಗಳಿಗೆ ಅನ್ನಪೂರ್ಣೆ , ವಾತ್ಸಲ್ಯಮಯಿ ಶ್ರೀಮತಿ ಸುಮತಿ ಹರಿದಾಸ ಭಟ್ಟರಿಗೆ ಅಂತಿಮ ನಮನಗಳು- ಮುರಳೀಧರ ಉಪಾಧ್ಯ
Mrs Sumati K. S. Haridas Bhat expired on 28-5-2015


ರಂಗ ಸಾಂಗತ್ಯ - ಕಲ್ಯಾಣದೆಡೆಗೆ ಕಾವ್ಯ { AUDIO } - ನಿ- ಡಾ/ ಶ್ರೀಪಾದ ಭಟ್

Ranga Sangatya -Kannada Kavya -Dr. Shripada Bhat Uploaded by muraleedhara.upadhya at Your Listen:

'via Blog this'
ಪಂಪ -ಬಸವಣ್ಣ -  ಜನಪದ ಸಾಹಿತ್ಯ , ಲಕ್ಷ್ಮೀಶ -  ಪಂಜೆ -’ತೆಂಕಣಗಾಳಿ ’ - ಕುವೆಂಪು- ಕಲ್ಕಿ - ಬೇಂದ್ರೆ - ಕುರುಡು ಕಾಂಚಾಣ - ಪ್ರತಿಭಾ ನಂದ ಕುಮಾರ್ -ಅಡುಗೆ ಮನೆಯಲ್ಲಿ ,- ವೈದೇಹಿ - ಶಿವನ ಮೀಸುವ ಹಾಡು , ಸು. ರಂ. ಎಕ್ಕುಂಡಿ ,