ಡಿ. ವಿ. ಜಿ - ನರಜಾತಿಯೊಳಗೆಂತು ಬಂದುದೀ ವೈಷಮ್ಯ ?

ಒಂದೆ ಗಗನವ ಕಾಣುತೊಂದೆ
ನೆಲವನು ತುಳಿಯುತ
ಒಂದೆ ಧಾನ್ಯವನುಣ್ಣುತ
ಒಂದೆ ನೀರ್ಗುಡಿದು
ಒಂದೆ ಗಾಳಿಯನುಸಿರ್ವ
ನರಜಾತಿಯೊಳಗೆಂತು
ಬಂದುದೀ ವೈಷಮ್ಯ?
-ಮಂಕುತಿಮ್ಮ

(ಜಗದೊಳಗಿರುವ ಮನುಜರೆಲ್ಲರೂ ಕಾಣುವ ಆಗಸ ಒಂದೇ, ಇನ್ನೊಂದು ಆಗಸವಿಲ್ಲ.
ತುಳಿಯುವ ನೆಲವೂ ಒಂದೇ, ಇನ್ನೊಂದು ಭೂಮಿಯಿಲ್ಲ,
ತಿನ್ನುವ ಆಹಾರ ಧಾನ್ಯಗಳೂ ಒಂದೇ ರೀತಿಯದ್ದು, ಹಾಗೆಯೇ ಕುಡಿವ ನೀರು, ಉಸಿರಾಡುವ ಗಾಳಿಯೂ ಒಂದೇ.
ಹೀಗಿದ್ದೂ ಮನುಷ್ಯರೊಳಗೆ ದ್ವೇಷ,ಅಸೂಯೆ,ಸಿಟ್ಟು ಇಂತಹ ಭಿನ್ನತೆ ಬಂದುದಾದರು ಹೇಗೆ? ನಮ್ಮೆಲ್ಲರ ಜೀವನಕ್ರಮ, ದೃಷ್ಟಿಕೋನ, ಆಚಾರ-ವಿಚಾರಗಳಲ್ಲಿ ವಿಭಿನ್ನತೆ ಇದೆ. ಆದರೆ ಅದುವೇ ನಮ್ಮ ವೈಷಮ್ಯ ಕ್ಕೆ ಕಾರಣವಾಗ ಬಾರದು. ಪರಸ್ಪರ ಗೌರವಿಸುತ್ತಾ, ಇತರರ ಅಭಿಪ್ರಾಯಗಳನ್ನು ಆಲಿಸಿ; ಅದನ್ನು ಪುರಸ್ಕರಿಸುತ್ತಾ ಪ್ರಜ್ಞಾವಂತರಾಗಿ ಬದುಕಿದರೆ, ಸಹಬಾಳ್ವೆ ನಡೆಸಿದರೆ ನಾವೆಲ್ಲರೂ ಶಾಂತಿಯ ಹರಿಕಾರರಾಗುತ್ತೇವೆ. ಜೀವನ ಅರ್ಥಪೂರ್ಣವಾಗುತ್ತದೆ.
{  ಕವಿತಾ ಅಡೂರು ಅವರ  Facebook ನಿಂದ }

ಸಾಹಿತಿ ಎದುರ್ಕಳ ಶಂಕರನಾರಾಯಣ ಭಟ್ { 83 } - ನಿಧನ - 30-7-2016




ಎದುರ್ಕಳ ಶಂಕರನಾರಾಯಣ ಭಟ್

ಮುಖ್ಯ ಕೃತಿಗಳು -

ಶ್ರೀ  ಕಾವೇರಿ ದರ್ಶನ , ಶ್ರೀ ಕಾವೇರಿ ವೈಭವ , ಶ್ರೀ ಮಧವಾನಂದಸ್ವಾಮೀಜಿ ಜೀವನ ಚರಿತ್ರೆ , ಶ್ರೀ ಇಗ್ಗುತಪ್ಪ ಮಹಾತ್ಮೆ

Kannada Writer EDURKALA SHANKARA NARAYANA BHAT { 83 } expired at Bengaluru on 30-7-2016

ಇರ್ಫಾನ್ ಹಬೀಬ್- { ಸಂದರ್ಶನ } Irfan Habib: History may be reduced to anecdotes

Irfan Habib: History may be reduced to anecdotes: Irfan Habib, eminent historian and former professor at Aligarh Muslim University, says the current Bharatiya Janata Party-led government has abandoned reason and rationalism, and that Illustration: R. Rajeshthis puts a hea

ಪಿಯೂಷ್ ಮಿಶ್ರಾ - ದ್ವಿಪದಿಗಳು { ಕನ್ನಡಕ್ಕೆ- ಸಂವರ್ತ ’ ಸಾಹಿಲ್ " }

ಮಾನವ ತನ್ನ ದೃಷ್ಟಿಯಲ್ಲಿ ತಾ ಸರಿಯಿರಬೇಕು ಅಷ್ಟೇ,
ಲೋಕವು ದೇವರ ಕುರಿತೂ ಅಸಮಾಧಾನ ಹೊಂದಿದೆ.

2

ಬರೇ ಒಂದು ಕುರ್ಸಿಯದು ಚಟ್ಟವೇನಲ್ಲ ಹೆಣದ ಪೆಟ್ಟಿಗೆಯೇನಲ್ಲ,
ಏನೂ ಮಾಡಲಾಗದಿದ್ದರೆ ಎದ್ದೇಳುವ ಕೆಲಸವಾದರೂ ಮಾಡು.

3

ಇರುಳಿಡೀ ಮೊಬೈಲ್ ಸ್ಪರ್ಶಿಸುತ್ತಿರುತ್ತದೆ ಬೆರಳುಗಳು,
ಪುಸ್ತಕ ಎದೆಗೊತ್ತಿ ಮಲಗಿ ಅದೆಷ್ಟೋ ಕಾಲವಾಯಿತು.

4

ಇಂದು ಮತ್ತೆ ಭಾವನೆಗಳ ಹರಿಯಬಿಟ್ಟೆ,
ನಿನಗೆ ಮತ್ತೆ ಬರೀ ಪದಗಳಾಗಿ ಕಂಡವು.

5

ನಿನ್ನ ಬಳಿ ಇನ್ನೇನೂ ನಾ ಬೇಡುವುದಿಲ್ಲ ಶಿವನೇ,
ಕೊಟ್ಟು ಕಸಿಯುವ ನಿನ್ನ ಚಾಳಿ ನನಗೊಪ್ಪಿಗೆಯಿಲ್ಲ.

6

ಹಾಳೆಯ ಮೇಲೆ ಎರಡಕ್ಷರ ಇಳಿಸಿ ಹಗುರಾಗುತ್ತೇನೆ,
ಚೀರಾಡುತ್ತೇನೆ ಹೀಗೆ ನಾನು ಸದ್ದುಗದ್ದಲವಿಲ್ಲದೆಯೆ.

7

ಕೆಲಸವೆಂಥಾ ಕೆಲಸವದು ಮಾಡುತಾ ಹೃದಯವೇ ಅತ್ತರೆ,
ಪ್ರೀತಿಯದು ಎಂಥಾ ಪ್ರೀತಿಯು ಸುಲಭದಲ್ಲಿ ಕೈಗೂಡಿದರೆ.

8

ನೋವು ಭೋರ್ಗರೆದು ಸುರಿದಾಗ ನಾ ಅದೆಷ್ಟು ಒಬ್ಬಂಟಿಯಾಗಿದ್ದೆ,
ಎರಡು ಹನಿ ಖುಷಿ ಬಿದ್ದಾಗ ಅದೆಲ್ಲಿಂದ ಹರಿದು ಬಂತೋ ಜನಸ್ತೋಮ.

9

ಹಗುರ ಬಹಳ ಹಗುರ ಜೀವನವು,
ಹೊರೆಯೇನಿದ್ದರೂ ಆಸೆಗಳದು.

10

ಸಂಬಂಧಗಳ ಪೋಷಣೆಗೆ ಇರುವುದು ಆದಿತ್ಯವಾರವೊಂದೇ ನೋಡು,
ಉಳಿದೆಲ್ಲ ದಿನಗಳು ಉಳುಮೆ ದುಡಿಮೆಯಲ್ಲಿ ಖರ್ಚಾಗಿ ಹೋಗುತ್ತವೆ.

11

ಔತಣಕ್ಕೆ ಕರೆದು ನನ್ನೆಲ್ಲಾ ಕನಸುಗಳನ್ನು ಒಂದು ದಿನ,
ಮೋಸದಿಂದ ವಿಷ ಉಣ್ಣಿಸಬೇಕು ಎಂದುಕೊಳ್ಳುತ್ತೇನೆ.

12

ಎಲ್ಲಿ ಖರ್ಚಾಗಿ ಹೋಯಿತೋ ದೇವರೇ ಬಲ್ಲ,
ಬದುಕಲೆಂದೇ ಬಚ್ಚಿಟ್ಟಿದ್ದ ಆ ಕ್ಷಣಗಳೆಲ್ಲಾ.

~ ಪಿಯೂಷ್ ಮಿಶ್ರಾ

ಕನ್ನಡಾನುವಾದ: ಸಂವರ್ತ  'ಸಾಹಿಲ್'

ಡಿ. ವಿ. ಜಿ. - ನೆಲವರ್ಧ ಜಲವರ್ಧ ಸೇರಲೀ ಭೂಗೋಳ

ಡಿ.ವಿ.ಜಿ ಬೆಳಗು*
ನೆಲವರ್ಧ ಜಲವರ್ಧ
ಸೇರಲೀ ಭೂಗೋಳ
ತಲೆಯರ್ಧವೆದೆಯರ್ಧ
ಮನುಜ ಸಂಸಾರ
ನಲಿವರ್ಧವಳಲರ್ಧ
ಮನುಜ ಜೀವಿತಸಾರ
ಕಲಿತಿದನು ಬಾಳೆಲವೋ
-ಮರುಳ ಮುನಿಯ

(ನಮಗೆ ಆಸರೆಯಾಗಿರುವ ಈ ಭೂಮಿಯು ಅರ್ಧ ನೆಲ ಮತ್ತು ಅರ್ಧ ನೀರಿನಿಂದಲೂ ಕೂಡಿಕೊಂಡಿದೆ. ಮನುಷ್ಯನ ಸಂಸಾರವು ಅರ್ಧ ಬುದ್ಧಿಶಕ್ತಿಯಿಂದ ಮುನ್ನಡೆದರೆ ಮತ್ತಿನ್ನರ್ಧ ಭಾವಶಕ್ತಿ(ಹೃದಯ) ಯನ್ನು ಅವಲಂಬಿಸಿರುತ್ತದೆ. ಇದೇ ರೀತಿ ಮನುಷ್ಯನ ಬದುಕಿನ ಸಾರವು ಅರ್ಧ ನಲಿವನ್ನೂ ,ಅರ್ಧ ದುಃಖವನ್ನೂ ಹೊಂದಿರುತ್ತದೆ. ಈ ವಿಭಿನ್ನತೆಯನ್ನು ಅರಿತು ಕೊಂಡು ಬಾಳ್ವೆಯನ್ನು ಮಾಡು. ಬದುಕಿನ ಹಾದಿಯಲ್ಲಿ ನಮಗಿದಿರಾಗಿ
ಏನಿದೆಯೋ , ಹೇಗಿದೆಯೋ ಹಾಗೆಯೇ ಅದನ್ನು ಸ್ವೀಕರಿಸುತ್ತಾ ಸಮಚಿತ್ತದಲ್ಲಿ ಬಾಳೋಣ. ಹೊಂದಾಣಿಕೆ ಮತ್ತು ಸಹನೆಯ ಗುಣಗಳಿಂದ ಬದುಕು ಸಹ್ಯವಾಗುತ್ತದೆ, ಸುಮಧುರವಾಗುತ್ತದೆ. ಕೊರಗುವುದನುಳಿದು, ಪ್ರತಿಯೊಂದನ್ನೂ ಪ್ರಶ್ನಿಸಿ ನಾವೇ ಪ್ರಶ್ನೆಯಾಗುವುದನ್ನು ಬಿಟ್ಟು, ಎಲ್ಲರೊಳೊಂದಾಗಿ ನಲಿಯೋಣ.

 { ಕವಿತಾ ಆಡೂರು ಅವರ  Face Book  ನಿಂದ }

ಕತೆ ಕತೆ ಕಾರಣ - ವೈದೇಹಿ

ಕತೆ ಕತೆ ಕಾರಣ - Vaidehiಒಂದು ಸೇಬಿನ ಮರದಲ್ಲಿರುವ ಹಣ್ಣುಗಳನ್ನು ಎಣಿಸಬಹುದು.ಆದರೆ ಸೇಬಿನ ಹಣ್ಣಿನ ಒಳಗೆ ಇರುವ ಮರಗಳನ್ನು ಎಣಿಸುವುದು ಮಾತ್ರ ಅಸಾಧ್ಯ' ಎಂದು ಒಂದು ಚೀನೀಗಾದೆ. ಈ ಗಾದೆಯನ್ನು ವೈದೇಹಿಯವರ ಇತ್ತೀಚೆಗಿನ ಕತೆಗಳ ಸಂಕಲನ, 'ಕತೆ ಕತೆ ಕಾರಣ'ಕ್ಕೂ ಅನ್ವಯಿಸಿ, ಇದರಲ್ಲಿ ೧೨ ಕತೆಗಳಿವೆ ಎಂದು ಹೇಳಬಹುದು; ಆದರೆ ಈ ಕತೆಗಳು ಇನ್ನೆಷ್ಟು ಕತೆಗಳನ್ನು ತಮ್ಮೊಳಗೆ ಇರಿಸಿಕೊಂಡಿವೆ ಎಂಬ ವಿಸ್ಮಯ ಈ ಕತೆಗಳನ್ನು ಓದಿದ ನಂತರ ನಮ್ಮಲ್ಲಿ ಉಳಿದೇ ಬಿಡುತ್ತದೆ. ಸಂಕಲನದ ಕತೆಗಳು ನೀಡುವ ಒಳ ನೋಟದ ಮುಖಾಂತರ ಓದುಗ ಆ ಕತೆಗಳನ್ನು ತಾನೇ ಕಲ್ಪಿಸಿಕೊಳ್ಳಬಲ್ಲ.
- ಜಿ.ರಾಜಶೇಖರಕತೆ ಕತೆ ಕಾರಣ</p>
        </div>

        <div class= / ವೈದೇಹಿ - Authors / ಲೇಖಕರು

Wednesday, July 20, 2016

ನಟರಾಜ ಹುಳಿಯಾರ್ - ಅಧಿಕಾರಶಾಹಿಯ ಹೃದಯ ಪರೀಕ್ಷೆ

ಅಧಿಕಾರಶಾಹಿಯ ಹೃದಯ ಪರೀಕ್ಷೆ | ಪ್ರಜಾವಾಣಿ

ತಬರಿಸಮ್ - ಅಧಿಕಾರಶಾಹಿಯ ಯಾಂತ್ರಿಕ , ಅಮಾನವೀಯ ವರ್ತನೆ . " ತಬರನ ಕತೆ " ಹಿನ್ನೆಲೆಯಲ್ಲಿ ಕಿ. ರಂ . ನಾಗರಾಜ್ ಬಳಸುತ್ತಿದ್ದ ಶಬ್ದ - ಕನ್ನಡ ನಿಘಂಟಿಗೆ ಕಿ. ರಂ. ಕೊಡುಗೆ

ಲೇಖಕಿ ಶಾಂತಾ ರಾಮೇಶ್ವರ ರಾವ್ { ಪಂಜೆ ಮಂಗೇಶರಾಯರ ಮಗಳು }

Shanta Rameshwar Rao books and biography | Waterstones

ಹುದುಗಲಾರದ ದು:ಖ { A GRIEF To BURY } ಮೂಲ -ವಸಂತ ಕಣ್ಣಬೀರನ್ -ಅನುವಾದ ಸಂಯೋಜನೆ - ಎಮ್. ಎಸ್.ಆಶಾದೇವಿ { 2014 }  ಈ ಪುಸ್ತಕದಲ್ಲಿ ಪಂಜೆ ಮಂಗೇಶ ರಾಯರ ಮಗಳು  ಇಂಗ್ಲಿಷ್ ಲೇಖಕಿ  ಶಾಂತಾ ರಾಮೇಶ್ವರ ರಾವ್ ಅವರ ಸಂದರ್ಶನ ಇದೆ .ಇದೊಂದು ಪ್ರೇಮ ವಿವಾಹದ ಮನ ಮಿಡಿವ ಕತೆ - ಮುರಳೀಧರ ಉಪಾಧ್ಯ

ಸಿಂಧು ಭಾರ್ಗವ್ - ಸಣ್ಣ ಕಥೆ : ಹಿತ್ತಲಲ್ಲಿ ಅರಳಿದ ಪುಷ್ಪ

ಜೀವನದ ಸ೦ತೆಯಲಿ: ವಾರದ ಸಣ್ಣ ಕಥೆ : ಹಿತ್ತಲಲ್ಲಿ ಅರಳಿದ ಪುಷ್ಪ: ವಾರದ ಸಣ್ಣ ಕಥೆ : ಹಿತ್ತಲಲ್ಲಿ ಅರಳಿದ ಪುಷ್ಪ ~~~~~~~~~~~~~~~~~~~~~~~~~ ಅವಳಿಗೊಂದು ರೀತಿಯ ಹುಚ್ಚು, ಕಾಡು ಮಲ್ಲಿಗೆಯನ್ನು ಮನೆ ಅಂಗಳದಲ್ಲಿ ಬೆಳೆಸಬೇಕೆಂದು...