ಮಹಾಲಿಂಗ ---ಇನ್ನಿಲ್ಲವಾದ ರಾಬರ್ಟ್ ಗ್ರೀಸಿಂಕ್ ಎಂಬ ವಿಶಿಷ್ಟ ಚೇತನ

ಅದ್ಭುತ ಕಲಾವಿದ ಅದ್ಭುತ ಜೀವನ*

🎨🎨🎨🎨🎨🎨🎨🎨🎨🎨🎨


*ಇನ್ನಿಲ್ಲವಾದ ರಾಬರ್ಟ್ ಗ್ರೀಸಿಂಕ್ ಎಂಬ ವಿಶಿಷ್ಟ ಚೇತನ*

ಗ್ರೀಸಿಂಕ್ ಡಚ್ ಕಲಾವಿದ. ತಂದೆಯೂ ಕಮರ್ಷಿಯಲ್ ಕಲಾವಿದ. ಹೃದಯದ ಶಾಂತಿ ಹುಡುಕುತ್ತ ಹಿಪ್ಪಿಯಾಗಿ ಹಿಮಾಲಯಕ್ಕೆ ಬಂದ ಈ ರಾಬರ್ಟ್ ಗ್ರೀಸಿಂಕ್ ಕೊನೆಗೆ ಹಾಳು ಹಂಪೆಗೆ ಹಲವು ದಶಕಗಳ ಹಿಂದೆ ಬಂದು ಸೇರಿದ. ಮನಕ್ಕೆ ಮಣ್ಣು ನೆಮ್ಮದಿ ಕೊಟ್ಟಿತು. ಹಂಪಿಯ ಬಂಡೆ, ಜನ, ದೇವರು, ಹಾಳು ಮಂಟಪಗಳು ಚಿತ್ರಿಸುತ್ತಿದ್ದ. ಅವನ ಶೈಲಿ ಇರುವುದನ್ನು ಇದ್ದಂತೆ ಹೇಳುವುದು. ಎರಡು ಕಿ. ಮೀ ದೂರದ ಕಲ್ಲುಗಳು ಅವನ ಚಿತ್ರದಲ್ಲಿ ಸ್ಮಷ್ಟವಿರುತ್ತಿದ್ದವು.

ಅವನು ಹಂಪಿಯ ಲಂಬಾಣಿ ಹೆಣ್ಣನ್ನು ಮದುವೆಯಾದ. ಅವರಲ್ಲಿ ಒಬ್ಬನಾದ. ಲಂಬಾಣಿ ಕನ್ನಡ ಅದ್ಭುತವಾಗಿ ಕಲಿತ. ಊರು ಮರೆತ. ಮಕ್ಕಳಾದುವು. ಸಂಸಾರ ನಡೆಸಿದ. ಚಿತ್ರ ಬಿಡಿಸಿ ಸರಳ ಬದುಕಿಗೆ ದುಡ್ಡು ಮಾಡಿದ. ಗೊತ್ತಿದ್ದವರಿಗೆ ಗೊತ್ತಿತ್ತು ಅವನ ಚಿತ್ರಗಳ ತಾಕತ್ತು.
ಮಡದಿ ಮರಣಿಸಿದ ಬಳಿಕ ಮತ್ತೆ ಅದೇ ಸಮುದಾಯದ ಹೆಣ್ಣೋರ್ವಳ ವರಿಸಿದ. ಸಂಸಾರ ಕಾಪಾಡಿದ. ಹಂಪಿ ಬಿಟ್ಟು ಹೋಗಲೆ ಇಲ್ಲ. ಹಂಪಿಯ ಲಂಬಾಣಿಗಳು ಬದುಕಾದರು. ಹಂಪಿಯ ಬಂಡೆಗಳು ಬಡವರು ಬಂಧುಗಳಾದರು. ಚಿತ್ರ ಪ್ರದರ್ಶನ ಮಾರಾಟ ಆದದ್ದು ಇದ್ದು. ಆ ಬಗ್ಗೆ ಆಸೆಬುರುಕ ಅವನಲ್ಲ

ಈಗ ಎಪ್ಪತ್ತು ವರುಷದ ಮುದುಕನಾಗಿ ಹಂಪಿಯಲ್ಲೆ ಸತ್ತ. ಸಂಸಾರ ದೊಡ್ಡದಿತ್ತು. ನೂರಾರು ಚಿತ್ರಗಳು ಇದ್ದವು. ಎಲ್ಲ ಈ ದೇಶದ ಜನ, ಹಬ್ಬ, ಜೀವನ, ಸಂತೋಷ, ಪ್ರಕೃತಿ. ರಾಬರ್ಟ್ ಗ್ರೀಸಿಂಕ್ ಇವನ್ನೆಲ್ಲ ಪ್ರೀತಿಸಿದ್ದ ಎಂಬುದಕ್ಕೆ ಇವೇ ಸಾಕ್ಷಿ.

ಮಹಾ ಕಲಾವಿದ ಗಾಗಿನ್ ನೆನಪಾಗಬಹುದು ನಿಮಗೆ. ಅವನೂ ಸಾಗರದ ನಡುವಿನ ದ್ವೀಪವಾಸಿಗಳ ಜೊತೆ ಹೀಗೆಯೆ ಬದುಕಿದ. ಅವನಿಗೂ ಇವನಿಗೂ ವ್ಯತ್ಯಾಸವಿದೆ. ರಾಬರ್ಟ್ ಪ್ರಸಿದ್ದಿಯನ್ನೂ ಬಯಸಲಿಲ್ಲ. ಸ್ಥಳೀಯ ಹೆಣ್ಣುಮಕ್ಕಳ ಸ್ನೇಹ ಇವನಿಗೆ ಗಟ್ಟಿ ಭಾರತೀಯ ಸಂಸಾರವೆ ಆಗಿತ್ತು. ಗಾಗಿನ್ ನಂತೆ ಎಲ್ಲೆಲ್ಲ ತಿರುಗುವ ಬಯಕೆಯು ರಾಬರ್ಟ್ ಗೆ ಇರಲಿಲ್ಲ

ವಿಶಿಷ್ಟವಾಗಿ ಬದುಕಿ, ನಮ್ಮವನೆ ಆಗಿ ತುಂಬು ಬಾಳಿದ ಈ ಒಂದು ಕಾಲದ ಹಿಪ್ಪಿ ನಿನ್ನೆ ಅಲ್ಲ ಮೊನ್ನೆ ನಮ್ಮ ಬಿಟ್ಟು ನಡೆದ.

ಯಾವ್ಯಾವನೋ ಸಾಂಸ್ಕತಿಕ ಪುಢಾರಿಯನ್ನು ಪೇಪರ್ ಟೈಗರ್ ನ್ನು ಮಹಾವ್ಯಕ್ತಿ ಎಂದು ಭಾರೀ ಪ್ರತಿಭಾವಂತ ಅಂತ ಭ್ರಮಿಸಿ ನಾವು ಫೂಲ್ ಆಗುತ್ತೇವೆ. ರಾಬರ್ಟ್ ಗೀಸಿಂಕ್ ಈ ನಲುವತ್ತು ವರುಷ ಹಂಪಿಯಲ್ಲೆ ಇದ್ದುದು ನಮಗೆ ಗೊತ್ತೇ ಇರಲಿಲ್ಲ. ಕೊಟ್ಟಿರುವ ಚಿತ್ರಗಳಲ್ಲಿ ಅವನು ಈ ನೆಲ ಜನ ರನ್ನು ಪ್ರೀತಿಸಿದ್ದು ಅರ್ಥವಾಗಿ ಈಗ ನೆನೆದು ಕಣ್ಣು ಮನಸ್ಸು ಒದ್ದೆ ಮಾಡುವುದು ನಮಗೆ ಉಳಿದದ್ದು

*🔥ಇದು ದೊಂದಿ ಬಳಗದ ಪ್ರಸ್ತುತಿ*🔥

Tuesday, November 22, 2016

ಮುರಳೀಧರ ಉಪಾಧ್ಯ ಹಿರಿಯಡಕ - ಕನ್ನಡ ಬೋಧನೆಯಲ್ಲಿ ಕಂಪ್ಯೂಟರ್

ಪದವಿಪೂರ್ವ ಶಿಕ್ಷಣ ಇಲಾಖೆ , ಉಡುಪಿ ಜಿಲ್ಲೆ

{ ಉಡುಪಿ  , ಚಿಕ್ಕಮಗಳೂರು ಜಿಲ್ಲೆಯ ಕನ್ನಡ ಉಪನ್ಯಾಸಕರಿಗಾಗಿ }

ವಿಶೇಷ ಉಪನ್ಯಾಸ 

ಕನ್ನಡ ಬೋಧನೆಯಲ್ಲಿ ಕಂಪ್ಯುಟರ್ ಬಳಕೆ

- ಪ್ರೊ/  ಮುರಳೀಧರ ಉಪಾಧ್ಯ ಹಿರಿಯಡಕ

23 - 11-2016 -- 2pm to 5pm

ಎಮ್. ಜಿ. ಎಮ್. ಪದವಿಪೂರ್ವ ಕಾಲೇಜು , ಉಡುಪಿ

Computer and Internet for Kannada Teaching - Special talk by Pro. Muraleedhara Upadhya Hiriadka - at M. G. M. College Udupi on 23-11-2016 - organised by Pre university Board , Udupi Dist.Contact Pro- Muraleedhara upadhya - mo no - 9448215779 - email -mhupadhya@gmail.com blog- mupadhyahiri.blogspot.in

ಬಿಲ್ಹಣನ ’ವಿಕ್ರಮಾಂಕ ದೇವ ಚರಿತಂ - ಮುರಳೀಧರ ಉಪಾಧ್ಯ ಹಿರಿಯಡಕ

 ಬಿಲ್ಹಣ ಹನ್ನೊಂದನೆಯ ಶತಮಾನದಲ್ಲಿ ಕಾಶ್ಮೀರದಿಂದ ಕರ್ನಾಟಕಕ್ಕೆ ಬಂದು, ಕಲ್ಯಾಣದ ಚಾಲುಕ್ಯ ರ ಆರನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಸಂಸ್ಕೃತ ಕವಿ. ಅವನು ’ವಿಕ್ರಮಾಂಕದೇವ ಚರಿತೆ’ ಯಲ್ಲಿ ತನ್ನ ಆಶ್ರಯದಾತನಾಗಿದ್ದ ವಿಕ್ರಮಾದಿತ್ಯನ (೧೦೭೬-೧೧೨೭)ಚರಿತ್ರೆ ಯನ್ನು ವೈಭವೀಕರಿಸಿ ವರ್ಣಿಸಿದ್ದಾನೆ.
 ಕ್ರಿ.ಶ. ೯೯೩ರಲ್ಲಿ ಎರಡನೆಯ ತೈಲನು ರಾಷ್ಟ್ರಕೂಟ ಸಾಮ್ರಾಜ್ಯವನ್ನು ವಶಪಡಿಸಿ ಕೊಂಡಾಗ ಚಾಲುಕ್ಯರ ಆಳ್ವಿಕೆ ಆರಂಭವಾಯಿತು. ವಿಕ್ರಮಾದಿತ್ಯನಿಗಿಂತ ಮೊದಲು ಚಾಲುಕ್ಯ ರಾಜ್ಯವನ್ನು ಆಳಿದ ತೈಲ, ಸತ್ಯಾಶ್ರಯ, ಎರಡನೆಯ ಜಯಸಿಂಹ, ಒಂದನೆಯ ಸೋಮೇಶ್ವರ, ಎರಡನೆಯ ಸೋಮೇಶ್ವರ ಇವರ ಆಡಳಿತ ಕಾಲದ ಮುಖ್ಯ ಘಟನೆಗಳನ್ನು ಬಿಲ್ಹಣ ತನ್ನ  ಕಾವ್ಯದಲ್ಲಿ ವರ್ಣೆಸಿದ್ದಾನೆ. ಬಿಲ್ಹಣನ ಪ್ರಕಾರ, ಒಂದನೆಯ ಸೋಮೇಶ್ವರ (೧೦೪೪-೧೦೬೮) ಭಯಾನಕ ರೋಗವೊಂದರಿಂದ ನರಳಿ, ತುಂಗಭದ್ರೆಯಲ್ಲಿ ಮುಳುಗಿ ಪ್ರಾಣತ್ಯಾಗ ಮಾಡಿದನು. ಚಾಲುಕ್ಯರಿಗೂ, ಚೋಳರಿಗೂ ನಡೆದ ಹಲವು ಯುದ್ಧಗಳನ್ನು ಬಿಲ್ಹಣ ವರ್ಣಿಸಿದ್ದಾನೆ. ಕರಾಡಾದ ರಾಜಕುಮಾರಿ ಚಂದ್ರಲೇಖೆ ಹಾಗೂ ವಿಕ್ರಮಾದಿತ್ಯನ ಮದುವೆಯ ಪ್ರಸಂಗದಲ್ಲಿ ಬಿಲ್ಹಣನ ವರ್ಣನಾಚಾತುರ್ಯ, ರಸಿಕತೆಗಳು ಕಾಣಿಸುತ್ತವೆ
ಕಲ್ಹಣನಂತೆ ಇತಿಹಾಸದ ಅಪ್ರಿಯ ಸತ್ಯಗಳನ್ನು , ಜನಸಾಮಾನ್ಯರ   ಗೋಳಿನ ಕತೆಯನ್ನು ದಾಖಲು ಮಾಡುವುದರಲ್ಲಿ ಬಿಲ್ಹಣನಿಗೆ ಆಸಕ್ತಿ ಇಲ್ಲ. ಚಾಲುಕ್ಯ ರಾಜವಂಶದ ಕಾಳಗ-ಕಲ್ಯಾಣಗಳೇ ಅವನ ಕಾವ್ಯದ ವಸ್ತು. ಬಿಲ್ಹಣನ ’ವಿಕ್ರಮಾಂಕ ದೇವ ಚರಿತ’ ಪ್ರಥಮ ದರ್ಜೆಯ ಕಾವ್ಯವೇನೂ ಅಲ್ಲ. ಅವನ ಕಾವ್ಯ ಕರ್ನಾಟಕ-ತಮಿಳುನಾಡುಗಳ ಇತಿಹಾಸ ರಚನೆಗೆ ಬೇಕಾದ ಕೆಲವು ಐತಿಹಾಸಿಕ ಘಟನೆಗಳನ್ನು ದಾಖಲಿಸುತ್ತದೆ.
ನೀರ್ಪಾಜೆ ಭೀಮ ಭಟ್ಟರು ಕಲ್ಹಣನ ’ರಾಜ ತರಂಗಿಣೆ’ಯ ಕನ್ನಡ ಭಾಷಾಂತರ ಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ ಪಡೆದಿರುವ ಹಿರಿಯ ವಿದ್ವಾಂಸರು. ಬಿಲ್ಹಣನ’ ವಿಕ್ರಮಾಂಕದೇವ ಚರಿತಂ’ನ ಕನ್ನಡ ಗದ್ಯಾನುವಾದವನ್ನು ನೀರ್ಪಾಜೆಯವರು ಈ ಗ್ರಂಥದಲ್ಲಿ ನೀಡಿದ್ದಾರೆ. ಕರ್ನಾಟಕ ಅ ಇತಿಹಾಸದ ಆಕರ ಗ್ರಂಥವೊಂದನ್ನು ಭಾಷಾಂತರಿಸಿರುವ ಲೇಖಕರು ಅಭಿನಂದನಾರ್ಹರು.

ಮಹಾಕವಿ ಬಿಲ್ಹಣನ
’ವಿಕ್ರಮಾಂಕ ದೇವ ಚರಿತಂ’
ಕನ್ನಡ ಗದ್ಯಾನುವಾದ: ನೀರ್ಪಾಜೆ ಭೀಮಭಟ್ಟ
ಪ್ರ: ಅಭ್ಯುದಯ ಪ್ರಕಾಶಾನ, ಕನ್ಯಾನ
ಮೊದಲ ಮುದ್ರಣ:೧೯೯೮ ಬೆಲೆ:ರೂ.೧೦೦.೦೦
ಮುರಳೀಧರ   ಉಪಾಧ್ಯ ಹಿರಿಯಡಕ

Kannada Classical Poetry Text VIKRAMANKADEVACHARITAM by Bilhana , Kannada Prose translation by  Neerpaje Bhima Bhat - Book Review by Muraleedhara Upadhya Hiriadka



ಬಿಲ್ಹಣನ ’ವಿಕ್ರಮಾಂಕ ದೇವ ಚರಿತಂ - ಮುರಳೀಧರ ಉಪಾಧ್ಯ ಹಿರಿಯಡಕ

 ಬಿಲ್ಹಣ ಹನ್ನೊಂದನೆಯ ಶತಮಾನದಲ್ಲಿ ಕಾಶ್ಮೀರದಿಂದ ಕರ್ನಾಟಕಕ್ಕೆ ಬಂದು, ಕಲ್ಯಾಣದ ಚಾಲುಕ್ಯ ರ ಆರನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದ ಸಂಸ್ಕೃತ ಕವಿ. ಅವನು ’ವಿಕ್ರಮಾಂಕದೇವ ಚರಿತೆ’ ಯಲ್ಲಿ ತನ್ನ ಆಶ್ರಯದಾತನಾಗಿದ್ದ ವಿಕ್ರಮಾದಿತ್ಯನ (೧೦೭೬-೧೧೨೭)ಚರಿತ್ರೆ ಯನ್ನು ವೈಭವೀಕರಿಸಿ ವರ್ಣಿಸಿದ್ದಾನೆ.
 ಕ್ರಿ.ಶ. ೯೯೩ರಲ್ಲಿ ಎರಡನೆಯ ತೈಲನು ರಾಷ್ಟ್ರಕೂಟ ಸಾಮ್ರಾಜ್ಯವನ್ನು ವಶಪಡಿಸಿ ಕೊಂಡಾಗ ಚಾಲುಕ್ಯರ ಆಳ್ವಿಕೆ ಆರಂಭವಾಯಿತು. ವಿಕ್ರಮಾದಿತ್ಯನಿಗಿಂತ ಮೊದಲು ಚಾಲುಕ್ಯ ರಾಜ್ಯವನ್ನು ಆಳಿದ ತೈಲ, ಸತ್ಯಾಶ್ರಯ, ಎರಡನೆಯ ಜಯಸಿಂಹ, ಒಂದನೆಯ ಸೋಮೇಶ್ವರ, ಎರಡನೆಯ ಸೋಮೇಶ್ವರ ಇವರ ಆಡಳಿತ ಕಾಲದ ಮುಖ್ಯ ಘಟನೆಗಳನ್ನು ಬಿಲ್ಹಣ ತನ್ನ  ಕಾವ್ಯದಲ್ಲಿ ವರ್ಣೆಸಿದ್ದಾನೆ. ಬಿಲ್ಹಣನ ಪ್ರಕಾರ, ಒಂದನೆಯ ಸೋಮೇಶ್ವರ (೧೦೪೪-೧೦೬೮) ಭಯಾನಕ ರೋಗವೊಂದರಿಂದ ನರಳಿ, ತುಂಗಭದ್ರೆಯಲ್ಲಿ ಮುಳುಗಿ ಪ್ರಾಣತ್ಯಾಗ ಮಾಡಿದನು. ಚಾಲುಕ್ಯರಿಗೂ, ಚೋಳರಿಗೂ ನಡೆದ ಹಲವು ಯುದ್ಧಗಳನ್ನು ಬಿಲ್ಹಣ ವರ್ಣಿಸಿದ್ದಾನೆ. ಕರಾಡಾದ ರಾಜಕುಮಾರಿ ಚಂದ್ರಲೇಖೆ ಹಾಗೂ ವಿಕ್ರಮಾದಿತ್ಯನ ಮದುವೆಯ ಪ್ರಸಂಗದಲ್ಲಿ ಬಿಲ್ಹಣನ ವರ್ಣನಾಚಾತುರ್ಯ, ರಸಿಕತೆಗಳು ಕಾಣಿಸುತ್ತವೆ
ಕಲ್ಹಣನಂತೆ ಇತಿಹಾಸದ ಅಪ್ರಿಯ ಸತ್ಯಗಳನ್ನು , ಜನಸಾಮಾನ್ಯರ   ಗೋಳಿನ ಕತೆಯನ್ನು ದಾಖಲು ಮಾಡುವುದರಲ್ಲಿ ಬಿಲ್ಹಣನಿಗೆ ಆಸಕ್ತಿ ಇಲ್ಲ. ಚಾಲುಕ್ಯ ರಾಜವಂಶದ ಕಾಳಗ-ಕಲ್ಯಾಣಗಳೇ ಅವನ ಕಾವ್ಯದ ವಸ್ತು. ಬಿಲ್ಹಣನ ’ವಿಕ್ರಮಾಂಕ ದೇವ ಚರಿತ’ ಪ್ರಥಮ ದರ್ಜೆಯ ಕಾವ್ಯವೇನೂ ಅಲ್ಲ. ಅವನ ಕಾವ್ಯ ಕರ್ನಾಟಕ-ತಮಿಳುನಾಡುಗಳ ಇತಿಹಾಸ ರಚನೆಗೆ ಬೇಕಾದ ಕೆಲವು ಐತಿಹಾಸಿಕ ಘಟನೆಗಳನ್ನು ದಾಖಲಿಸುತ್ತದೆ.
ನೀರ್ಪಾಜೆ ಭೀಮ ಭಟ್ಟರು ಕಲ್ಹಣನ ’ರಾಜ ತರಂಗಿಣೆ’ಯ ಕನ್ನಡ ಭಾಷಾಂತರ ಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ ಪಡೆದಿರುವ ಹಿರಿಯ ವಿದ್ವಾಂಸರು. ಬಿಲ್ಹಣನ’ ವಿಕ್ರಮಾಂಕದೇವ ಚರಿತಂ’ನ ಕನ್ನಡ ಗದ್ಯಾನುವಾದವನ್ನು ನೀರ್ಪಾಜೆಯವರು ಈ ಗ್ರಂಥದಲ್ಲಿ ನೀಡಿದ್ದಾರೆ. ಕರ್ನಾಟಕ ಅ ಇತಿಹಾಸದ ಆಕರ ಗ್ರಂಥವೊಂದನ್ನು ಭಾಷಾಂತರಿಸಿರುವ ಲೇಖಕರು ಅಭಿನಂದನಾರ್ಹರು.

ಮಹಾಕವಿ ಬಿಲ್ಹಣನ
’ವಿಕ್ರಮಾಂಕ ದೇವ ಚರಿತಂ’
ಕನ್ನಡ ಗದ್ಯಾನುವಾದ: ನೀರ್ಪಾಜೆ ಭೀಮಭಟ್ಟ
ಪ್ರ: ಅಭ್ಯುದಯ ಪ್ರಕಾಶಾನ, ಕನ್ಯಾನ
ಮೊದಲ ಮುದ್ರಣ:೧೯೯೮ ಬೆಲೆ:ರೂ.೧೦೦.೦೦
ಮುರಳೀಧರ   ಉಪಾಧ್ಯ ಹಿರಿಯಡಕ

Kannada Classical Poetry Text VIKRAMANKADEVACHARITAM by Bilhana , Kannada Prose translation by  Neerpaje Bhima Bhat - Book Review by Muraleedhara Upadhya Hiriadka



ಜಬ್ಬಾರ್ ಸಮೋ [ Audio } ನನ್ನ ಕತೆ - ನಿಮ್ಮ ಜೊತೆ { ಆಳ್ವಾಸ್ ನುಡಿಸಿರಿ -2016 ]

http://chirb.it/d4yx8K  - Pls clik here to listen



Jabbar Sumo  ಜಬ್ಬಾರ್ ಸುಮೋ


ಯಕ್ಷಗಾನ ತಾಳಮದ್ದಲೆ ಕಲಾವಿದ ಜಬ್ಬಾರ್ ಸಮೋ ಅವರ ಆತ್ಮಕತೆ ,

Autobioghraphy of Yakshagana Talamaddale artist Mr. Jabbar Samo