Thursday, August 31, 2017

ವಿದ್ಯಾ ರಶ್ಮಿ - ಅಗ್ನಿ ದಿವ್ಯದ ಹುಡುಗಿಯ ಕಥನ

ಅಗ್ನಿದಿವ್ಯದ ಹುಡುಗಿಯ ಕಥನ
ಅವಳು ನಿಜಕ್ಕೂ ಅಗ್ನಿದಿವ್ಯದ ಹುಡುಗಿ, ಆನಂದಿ ಜೋಶಿ. ಭಾರತದ ಮೊದಲ ಮಹಿಳಾ ವೈದ್ಯೆ ಎಂಬ ಹೆಗ್ಗಳಿಕೆ ಪಡೆದವಳು. ಹೆಣ್ಣುಮಕ್ಕಳು ಹೊರಗೆ ಓಡಾಡುವುದೇ ನಿಷಿದ್ಧವಾಗಿದ್ದ ಕಾಲದಲ್ಲಿ ತಾನೂ ಓದಬೇಕು, ವೈದ್ಯೆಯಾಗಬೇಕು ಎಂಬ ಮಹದಾಸೆಯ ಕಿಚ್ಚು ಹತ್ತಿಸಿಕೊಂಡವಳು. ಬಾಲ್ಯವಿವಾಹಕ್ಕೂ ಒಳಗಾದ ಈ ಬಾಲೆಯ ಅದೃಷ್ಟವೋ ಏನೋ ಅವಳ ಪತಿ ಗೋಪಾಲ ಜೋಶಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸವನ್ನು ಬಹುವಾಗಿ ಬೆಂಬಲಿಸಿದವನು. ಆಕೆಯನ್ನು ವೈದ್ಯೆಯಾಗಿಸುವ ಪಣ ತೊಟ್ಟವನು. ಅವನ ಬೆಂಬಲದೊಂದಿಗೆ ಆಕೆ ಶಾಲೆಗೆ ಹೋಗುತ್ತಾಳೆ, ಅದಕ್ಕಾಗಿ ಸೆಗಣಿ ನೀರಿನ ಅಭಿಷೇಕಕ್ಕೂ ಒಳಗಾಗುತ್ತಾಳೆ! ಅವಳ ವಿದ್ಯಾಭ್ಯಾಸಕ್ಕಾಗಿ ಭಾರತದ ಊರೂರಿಗೆ ಪಯಣ ಬೆಳೆಸುತ್ತಾರೆ. ಕೊನೆಗೂ ಅಮೆರಿಕದಲ್ಲಿ ಏಷ್ಯಾದ ಮೊದಲ ವೈದ್ಯೆಯಾಗಿ ಪದವಿ ಪಡೆಯುವ ಮಹತ್ಸಾಧನೆಯನ್ನು ಮಾಡಿಯೇಬಿಡುತ್ತಾಳೆ ಆ ಪುಟ್ಟ ಹುಡುಗಿ. ಆ ಪದವಿ ಅವಳ ಸೊತ್ತಾಗುವಾಗ ಅವಳಿಗೆ ಬರಿಯ ೨೧ ವರ್ಷ! ಇಂತಿಪ್ಪ ಹುಡುಗಿ ಕೆಲವೇ ತಿಂಗಳುಗಳಲ್ಲಿ ಕಾಲವಾಗುತ್ತಾಳೆ ಕೂಡ. ಆದರೆ, ಬದುಕಿದ್ದ ಕೆಲವೇ ವರ್ಷಗಳ ಕಾಲ ತಾನು ಹೋದಲ್ಲೆಲ್ಲ ಸೂರ್ತಿಯ ಅಗ್ನಿಯನ್ನು ಜ್ವಲಿಸಿ ಹೋದ ಆ ದಿವ್ಯ ಚೇತನದ ಕಥನ ‘ಅಗ್ನಿ ದಿವ್ಯದ ಹುಡುಗಿ’. ಪತ್ರಕರ್ತ ಚಂದ್ರಶೇಖರ ಮಂಡೆಕೋಲು ಆನಂದಿಯ ಹುಟ್ಟಿದ ಸ್ಥಳಕ್ಕೂ ಭೇಟಿ ನೀಡಿ, ಹಲವು ಗ್ರಂಥಗಳನ್ನು ಪರಾಮರ್ಶಿಸಿ, ಆಕೆಯ ಸಂಬಂಧವಾದ ಹಲವರನ್ನು ಸಂಪರ್ಕಿಸಿ ಬರೆದ ಕೃತಿ. ಆನಂದಿ (೧೮೬೫-೧೮೮೭) ಕುರಿತ ಅಕೃತ ಮಾಹಿತಿ ನೀಡುವಲ್ಲಿ ಮಂಡೆಕೋಲು ಅವರ ಶ್ರಮ ಕೃತಿಯಲ್ಲಿ ಸ್ಪಷ್ಟವಾಗುತ್ತದೆ. ಅವರ ನಿರೂಪಣೆಯ ಶೈಲಿ, ಭಾಷೆಯೂ ಬಲು ಚೆಂದ. ಆನಂದಿಯ ಕಥನವನ್ನು ಹೇಳುವಾಗಲೇ ಆ ಕಾಲದ ಇನ್ನಾವುದೋ ಪ್ರಮುಖ ಘಟನೆಗಳನ್ನು ವರ್ಷ, ತಿಂಗಳ ಸಮೇತ ಬರೆವವ ಸಮಕಾಲೀನ ಇತಿಹಾಸದ ದಾಖಲೀಕರಣವೂ ಅನನ್ಯ. ಆನಂದಿಯನ್ನು ಪೊರೆದ ಹಲವು ವ್ಯಕ್ತಿಗಳ ದೊಡ್ಡತನ, ಆಕೆಯ ಬೆನ್ನೆಲುಬಾಗಿ ನಿಂತ ಪತಿ ಗೋಪಾಲನ ಸಂಕೀರ್ಣ ವ್ಯಕ್ತಿತ್ವ, ಅವಳ ಬದುಕಿನ ಮನಮಿಡಿವ ಘಟ್ಟಗಳು... ಇವನ್ನೆಲ್ಲ ಓದಿಯೇ ತಿಳಿಯಬೇಕು. ಆನಂದಿಬಾಯಿ ಎಂಬ ಸಾಧಕಿಯ ಬದುಕಿನ ಕಥನ ತಿಳಿಯಲು ಹಾಗೂ ಹೃದ್ಯ ಓದಿನ ಖುಷಿಗಾಗಿ ಈ ಕೃತಿಯನ್ನು ಖಂಡಿತ ಓದಬಹುದು.
ಪುಸ್ತಕ ಕೊಟ್ಟು ಓದಲೇಬೇಕಾದ ಕೃತಿ ಎಂದ ಸಹೋದ್ಯೋಗಿ ವಾಗೀಶ್ ಅವರಿಗೆ ಥ್ಯಾಂಕ್ಸ್.
ಅಗ್ನಿ ದಿವ್ಯದ ಹುಡುಗಿ
ಲೇ: ಚಂದ್ರಶೇಖರ ಮಂಡೆಕೋಲು
ಪ್ರ:ಪಲ್ಲವ ಪ್ರಕಾಶನ, ಚನ್ನಪಟ್ಟಣ  {From Face Book }


Image result for ಅಗ್ನಿದಿವ್ಯದ ಹುಡುಗಿಯ ಕಥನ

ಡಾ/ ರೋಹಿಣಾಕ್ಷ ಶಿರ್ಲಾಲು -ಕನ್ನಡವೂ ಭಾರತವೂ ಜಗವೆಲ್ಲವೂ ಒಂದೇ


ಡಾ/ ರೋಹಿಣಾಕ್ಷ ಶಿರ್ಲಾಲು -ಕನ್ನಡವೂ ಭಾರತವೂ ಜಗವೆಲ್ಲವೂ ಒಂದೇ


 { ಪಿಎಚ್. ಡಿ ಪದವಿಗಾಗಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಮಹಾ ಪ್ರಬಂಧ }

2017

ಪ್ರಕಾಶಕರು

ಚಿಂತನ ಬಯಲು ,

ನಂ -15 , ಮೊಡಂಕಾಪು ಅಂಚೆ ,

ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ -574219

kannasdavuu Bharatavuu Jagavellavuu Ondee { Ph. D thesis }

Author Dr. Rohishaksha Shirlalu -Lecturer in Kannada, Vivekananda College , Puttur-574203 { mobile-9449663744 } -Email-rohishirlalu@gmail.com }Published by - Chintana Bayalu , No-15--109 ,Anikethana ,Modankapu Post   574219, Bantval Taluk ,Dakshina Kannada Dist ,Phone-9449772651



















Friday, August 18, 2017

ರಾಮದಾಸ್ -- ಕೊಡುತ್ತೀರ , ಯಾರಾದರೂ ನನಗೆ ನನ್ನ ದೇವರನ್ನು ?

*ಕೊಡುತ್ತೀರ, ಯಾರಾದರೂ ನನಗೆ, ನನ್ನ ದೇವರನ್ನು ?
ಕೊಡುತ್ತೀರ, ಯಾರಾದರೂ ನನಗೆ, ನನ್ನ ದೇವರನ್ನು
ಕಳೆದುಕೊಂಡಿದ್ದೇನೆ, ಹೆತ್ತವಳು ನನ್ನ ಹೃದಯದಲ್ಲಿ ಬಿತ್ತಿದ್ದನ್ನು
ಬಾಲಿಶ ಕಲ್ಪನೆಗಳು ಹದವಾಗಿ ಉತ್ತಿದ್ದನ್ನು ?
ಹರಿಕಥೆ ಗೊಬ್ಬರವಾಗಿ, ದಾಸರ ಹಾಡು ಮಳೆಯ ಜೋಗುಳವಾಗಿ
ಅಲ್ಲಿ ಕಾಮನ ಬಿಲ್ಲು, ಇಲ್ಲಿ ಹುಣ್ಣಿಮೆ ಚಂದ್ರ, ಮುರಲೀನಾದ !
ಬಟಾನ ಬಯಲಿನೇಕಾಂತದಲ್ಲಿ ಗೋಪಾಲಬಾಲಸಖ್ಯ !
ಎಲ್ಲಿ..ಎಲ್ಲಿ..ಎಲ್ಲಿ ಹೋಯಿತು ಅವನ ಕೊಳಲ ಗಾನ ?
ಅಂದು ಪಂಚಕೋಶವ ತುಂಬಿ ಝೇಂಕರಿಸಿದ್ದು
ಅನ್ನವಾಗದೆ, ಬಟ್ಟೆಯಾಗದೆ, ನೀರು ನೆಳಲಾಗದೆ, ಕಡೆಗೆ
ಕಣ್ಣೊರೆಸುವ ಕೈಯೂ ಆಗದೆ.....ಏನೇನೂ ಆಗದೆ, ಆಗುತ್ತದೆಯೆ
ವರಾಹನ ದಾಡೆ, ಉಗುರು, ಪಾದ, ಕೊಡಲಿ, ಬಾಣ, ಚಕ್ರ ?
ಇಲ್ಲಿ ರಾವಣಸ್ಪರ್ಶಕ್ಕೆ ಮುರಿಯುತ್ತಾವೆ ಲಟಲಟನೆ ಶಿವನ ಬಿಲ್ಲು
ಪೂತನಿ ಹಾಲು ಸಮೃದ್ಧ ಸರಬರಾಜಾಗುತ್ತದೆ, ಮುಗ್ಧರಿಗೆ
ನೆಲ ನೀರು ಆಕಾಶಗಳಲ್ಲಿ ರಾರಾಜಿಸುತ್ತವೆ ಶಕಟಗಳು.
ಕೊಡುತ್ತೀರ, ಯಾರಾದರೂ ನನಗೆ, ನನ್ನ ಬಾಲ್ಯವನ್ನು ?
ಲಂಗೋಟಿ ಎಳೆದೋ, ಕೊರಳ ಪಟ್ಟಿ ಹಿಡಿದೋ
ಹೆಡೆಮುರಿ ಕಟ್ಟಿ ಬೆನ್ನಿಗೆರಡು ಗುದ್ದಿಯೋ ಕೇಳುತ್ತೇನೆ : ಯಾಕೋ ಕತ್ತೆ
ನಿನ್ನ ವಿನಾ ಇಲ್ಲಿ ಏನೇನೂ ಆಗುವುದಿಲ್ಲ ಅಂದೆಯಂತೆ, ಹೌದೆ ?
ಮಳೆ ಪ್ರವಾಹ ಕ್ಷಾಮ ಜ್ವಾಲಾಮುಖೀಸ್ಫೋಟ ಹಿಮಪಾತ ಬಿರುಗಾಳಿ ಬಿಟ್ಟರೂ
ಮಗನೆ, ಹೇಗೆ ಬಿಡಲೋ ನಾನು, ಚಾಕು ಚೂರಿ ಗುಂಡು ಆಟಂಬಾಂಬು, ಜಾತಿ
ಜಾತಿಗಳನ್ನ ?
ಧನಪಿಶಾಚಿಯ ಸಹಸ್ರಶೀರ್ಷ, ಸಹಸ್ರಬಾಹು-ಪಾದಗಳನ್ನ ?
ನನ್ನ ತಾಯಿ ಎಲ್ಲ ನದಿ ಸಮುದ್ರ ಸೇರುವ ಹಾಗೆ, ಸರ್ವಾಂತರ್ಯಾಮಿ
ನನ್ನೆದೆಯ ಸೇರುವ ಹಾಗೆ ಮಾಡಿದ್ದಳಯ್ಯ---ಕಳೆದುಕೊಂಡಿದ್ದೇನೆ.
ಏ ಸಾಧು, ಸಂನ್ಯಾಸಿ ಸ್ವಾಮೀಜಿ ಬೂದೀಬಾಬ ಮೌಲ್ವೀ ಪೋಪ್
ಕೊಡುತ್ತೀರ, ಯಾರಾದರೂ ನನಗೆ, ನನ್ನ ದೇವರನ್ನ
ಭಯವಿಲ್ಲದೆ ಬೆರಗಿಲ್ಲದೆ ಮುಚ್ಚುಮರೆಯಿಲ್ಲದೆ
ನನ್ನ ಕೈ ಹಿಡಿದು, ತಾನು ನಡೆದು
ನನ್ನನ್ನು ನಡೆಸುವವನನ್ನ ?

Image may contain: one or more people

Like
Comment
Share
Jyoti Ballal and 4 others