ವಿನಯ್ ಹೆಗಡೆ -..: ಯೋಜನೆ ರೂಪಿಸುವವರ ಅರೆಬೆಂದ ಚಿಂತನೆಗೆ ರಾಜ್ಯದ ನದಿಗಳು ಬಲಿ...

AGHANASHINI...: ಯೋಜನೆ ರೂಪಿಸುವವರ ಅರೆಬೆಂದ ಚಿಂತನೆಗೆ ರಾಜ್ಯದ ನದಿಗಳು ಬಲಿ...: ರಾಜ್ಯದ ಇನ್ನಷ್ಟು ನದಿಗಳ ಮೇಲೆ ಜನಪ್ರತಿನಿಧಿಗಳ ಹಾಗೂ ಉದ್ಯಮಿಗಳ ಕಣ್ಣು ಬಿದ್ದಿದೆ. ಎತ್ತಿನಹೊಳೆ ತಿರುವು ಎಂಬ ವಿಲ ಯೋಜನೆ ಕಣ್ಣ ಮುಂದಿದೆ. ಹೀಗಿದ್ದಾಗಲೇ ಇನ್ನೆರಡು...

ರಹಮತ್ ತರೀಕೆರೆ - ಧೀರ ಗಂಭೀರ { ಕಾರ್ನಾಡ್ ನೆನಪು }

ರಹಮತ್ ತರೀಕೆರೆ  - ಧೀರ ಗಂಭೀರ { ಕಾರ್ನಾಡ್ ನೆನಪು }

  ನ್ಯಾಯ ಪಥ - { 19 ಜೂನ್ , 2019 }

ಗಿರೀಶ್ ಕಾರ್ನಾಡ್ - ಆಕಾಶವಾಣಿ ಸಂದರ್ಶನಗಳು - ಮಾಹಿತಿ

  ಬೆಂಗಳೂರು ಆಕಾಶವಾಣಿಯ ಸಂಗ್ರಹದಲ್ಲಿರುವ ಗಿರೀಶ್ ಕಾರ್ನಾಡರ ಸಂದರ್ಶನಗಳ ಆಯ್ದ ಭಾಗಗಳನ್ನು ಆಕಾಶವಾಣಿ 14- 6-2019ರಂದು ಪ್ರಸಾರ ಮಾಡಿತು .

 ಗಿರೀಶ್ ಕಾರ್ನಾಡರ ಆಕಾಶವಾಣಿ ಸಂದರ್ಶನಗಳು

೧ - 1973

೨ - 1991 -ಎಸ್. ಆರ್ . ವಿಜಯಶಂಕರ - ಕಾರ್ನಾಡ್ ಸಂದರ್ಶನ

೩ - 1996 -ಮರುಳಸಿದ್ದಯ್ಯ - ಕಾರ್ನಾಡ್ ಸಂದರ್ಶನ

Bengaluru - Radio Interviews of Girish Karnad

ಉಡುಪಿಗೆ ವಾರಾಹಿ ನೀರು - ಮಾಹಿತಿ

೧   ವಾರಾಹಿ ನೀರು ಶುದ್ದೀಕರಣ ಘಟಕ - ಭರತ್ಕಲ್ ನಲ್ಲಿ

೨  -  ಜಿಲ್ಲಾ ಪಂಚಾಯತ್ ರಸ್ತೆಗಳ ಆಡಿಯಲ್ಲಿ ಪೈಪ್ ಲೈನ್

೩  ದಾರಿಯಲ್ಲಿ ಸಿಗುವ ಊರುಗಳು - ಹಾಲಾಡಿ , ಆವರ್ಸೆ , ಬಿಲ್ಲಾಡಿ , ಹೆಗ್ಗುಂಜೆ , ಕಾಡೂರು , ಕೊಕ್ಕರ್ಣೆ ,

  ಚೇರ್ಕಾಡಿ , ಕುಕ್ಕೆಹಳ್ಳಿ , ಬಜೆ , ಮಣಿಪಾಲ , ಉಡುಪಿ

೪  ವಾರಾಹಿ ನೀರು ಸರಬರಾಜು ಯೋಜನೆ ದಾರಿಯಲ್ಲಿ ಸಿಗುವ ಹದಿನಾಲ್ಕು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲಿದೆ

 ೫ may 2019 -  ವಾರಾಹಿ ಕುಡಿಯುವ ನೀರು ಯೋಜನೆಗೆ ಕರ್ನಾಟಕ ಸರಕಾರ ಒಲ್ಲಿಗೆ ನೀಡಿದೆ.Pipeline ಕಾಮಗಾರಿಗೆ ಟೆಂಡರ್ ಕರೆಯುವ ಕೆಲಸ ಆರಂಭವಾಗಿದೆ ,

 ೬   ಈ ಯೋಜನೆ 2021 ಕ್ಕೆ ಮುಗಿಯಬಹುದೆಂದು ಅಂದಾಜು

 VARAHI DRINKING WATER PROJECT to UDUPI

ವಿವೇಕ್ ಶ್ಯಾನುಭಾಗ್ - ಗಿರೀಶ್ ಕಾರ್ನಾಡ್ - GIRISH KARNAD - His soul was in Kannada - -Vivek Shanbhag

His soul was in Kannada - The Hindu: Though his plays were translated into several languages of India and the world, Girish Karnad’s thoughts and emotions had their moorings in Kannada. He was a global figure, but he kept his relationship with Kannada language and writing intact
His soul was in Kannada

ಪ್ರೊ / ನೇರಂಬಳ್ಳಿ ಪ್ರಭಾಕರ ಆಚಾರ್ಯ{N. P. Acharya } ನಿಧನ -9- 6-2019



ಹಿರಿಯ ಲೇಖಕರೂ, ವಿಶ್ರಾಂತ ಉಪನ್ಯಾಸಕರೂ ಆದ ಪ್ರೊಫೆಸರ್ ನೇರಂಬಳ್ಳಿ ಪ್ರಭಾಕರ ಆಚಾರ್ಯ (Prof N P Acharya) ಇನ್ನಿಲ್ಲ. ಸುದೀರ್ಘ ಕಾಲ ಮುಂಬಯಿಯ ಕೆ. ಸಿ. ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದ ಅವರು ಇಂಗ್ಲಿಷ್- ಕನ್ನಡಗಳೆರಡರಲ್ಲೂ ಬರೆದಿದ್ದು, ದಿ ಸುರಗಿ ಟ್ರೀ, ಮನು ಇನ್ ಕಿಷ್ಕಿಂಧಾ, ಕವಿತೆಯ ಓದು, ಧ್ವನಿ ಅಂಡ್ ಎಪಿಫನಿ: ಎಸ್ಸೆಸ್ ಇನ್ ಕ್ರಿಟಿಸಿಸಂ ಮುಂತಾದ ಕ್ರತಿಗಳನ್ನು ರಚಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಅವರು ಕುಂದಾಪುರದ ಕೋಟೇಶ್ವರದಲ್ಲಿ ನೆಲೆಸಿದ್ದರು.
Image may contain: 1 person

ಪುರುಷೋತ್ತಮ ಬಿಳಿಮಲೆ -ರಾಷ್ಟ್ರೀಯ ಶಿಕ್ಷಣ ನೀತಿ ಕನ್ನಡದಲ್ಲಿ ಬರುವುದು ಅಗತ್ಯ

ರಾಷ್ಟ್ರೀಯ ಶಿಕ್ಷಣ ನೀತಿ ಕನ್ನಡದಲ್ಲಿ ಬರುವುದು ಅಗತ್ಯ
ಈಗ ಕರಡು ರೂಪದಲ್ಲಿ ಸಿಗುತ್ತಿರುವ 477 ಪುಟಗಳ ರಾಷ್ಟ್ರೀಯ ಶಿಕ್ಷಣ ನೀತಿಯು ಅನೇಕ ಉತ್ತಮಾಂಶಗಳನ್ನು ಒಳಗೊಂಡಿದೆ. ಸಹಜವಾಗಿ ಕೆಲವು ಸಂದೇಹಗಳೂ , ಚರ್ಚಾಸ್ಪದ ಅಂಶಗಳೂ ಇವೆ.ಅದರ ಸಿದ್ಧತೆಯಲ್ಲಿ ಅನೇಕ ಮಹನೀಯರು ದುಡಿದಿದ್ದಾರೆ. ಈಗ ಅದನ್ನು ಸಾರ್ವಜನಿಕರ ಸಲಹೆಗಳಿಗಾಗಿ ಬಿಡುಗಡೆಮಾಡಲಾಗಿದೆ. ಸಂಸ್ಕೃತ, ಪ್ರಾಚೀನ ಭಾರತದ ಜ್ಞಾನ ಸಂಹಿತೆಯ ಜೊತೆಗೆ ಅದು ಜಾನಪದ, ಬುಡಕಟ್ಟು ಸಂಸ್ಕೃತಿಯ ಬಗ್ಗೆಯೂ ಮಾತಾಡುತ್ತದೆ.
ಕಳೆದ ಸುಮಾರು 50 ವರ್ಷಗಳಿಂದ ಪ್ರಚಲಿತದಲ್ಲಿದ್ದ 10+2+ 3 ಮಾದರಿಯನ್ನು ಒಡೆದು ಅದೀಗ 5+3+3+4 ಮಾದರಿಯನ್ನು ಮುಂದಿಟ್ಟಿದೆ.
5- ಮೂರರಿಂದ ಎಂಟು ವರುಷ, ಗ್ರೇಡ್ 1 ಮತ್ತು ಎರಡು,
+3 ( ಎಂಟರಿಂದ ಹನ್ನೊಂದು, ಗ್ರೇಡ್ 3,4,5)
+3 ( ಹನ್ನೊಂದರಿಂದ ಹದಿನಾಲ್ಕು, ಗ್ರೇಡ್ 6,7,8 )
+4 ( 14ರಿಂದ 18 ವರ್ಷ, 9,10,11, 12) .
ಅಂಗನವಾಡಿಗಳನ್ನು ಪ್ರತ್ಯೇಕವಾಗಿಡದೆ, ಪ್ರಿ ಸ್ಕೂಲಿನೊಂದಿಗೆ ಸೇರಿಸುವುದು.
ಖಾಸಗಿಯವರು ತಮಗೆ ಬೇಕಾದ ಶಾಲಾ ಶುಲ್ಕವನ್ನು ತಾವೇ ನಿಗದಿಪಡಿಸುವುದು, ಆದರೆ ಇದು ಮನಸೋ ಇಚ್ಛೆ ಆಗಿರಬಾರದು.
ಯುಜಿಸಿಯು NHERA National Higher Education Regulatory Authority ಆಗಲಿದೆ.
National Research Foundation ನ ಸ್ಥಾಪನೆ
ಜಾಗತೀಕರಣದ ಇಂದಿನ ಸಂದರ್ಭದಲ್ಲಿ ಅದು ಭಾರತ ಕೇಂದ್ರಿತ ಶಿಕ್ಷಣದ ಪರವಾಗಿ ವಾದ ಮಂಡಿಸುತ್ತಿದೆ.
ಏನೇ ಇರಲಿ, ಈ ಶಿಕ್ಷಣ ನೀತಿಯು ಇದೀಗ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ದೊರಕುತ್ತಿದೆ. ಸಂವಿಧಾನದ ಮಾನ್ಯತೆ ಪಡೆ್ದ 22 ಭಾಷೆಗಳಲ್ಲಿಯೂ ಅದು ಮೊದಲು ದೊರಕಬೇಕು. ಅದು ದೊರಕಿದ ಮೇಲೆ ಅದನ್ನು ಓದಿ ಪ್ರತಿಕ್ರಿಯಿಸಲು ಒಂದು ತಿಂಗಳ ಅವಧಿ ನೀಡಬೇಕು.
ಶಿಕ್ಷಣ ನೀತಿಯ ಕನ್ನಡ ಅನುವಾದವನ್ನು ಯಾರು ಮಾಡಬೇಕು? ಕೇಂದ್ರ ಸರಕಾರ? ಕರ್ನಾಟಕ ಸರಕಾರ? ಸಾಹಿತ್ಯ ಪರಿಷತ್ತು? ಕನ್ನಡ ಅಭಿವೃದ್ಧಿ ಪ್ರಾಧಿಕಾರ?
ವಿಷಯ ಪೂರ್ತಿ ತಿಳಿಯದೆ ಒಪ್ಪಿಕೊಳ್ಳುವುದೂ, ತಿರಸ್ಕರಿಸುವುದೂ ಎರಡೂ ಅಪರಾಧವೇ ಸರಿ.
ಕನಿಷ್ಠ ಶಿಕ್ಷಣ ನೀತಿಯ ಮುಖ್ಯಾಂಶಗಳಾದರೂ ಕನ್ನಡಕ್ಕೆ ಬರಲಿ