ಕೆ.ಕೆ.ನಾಯರ್‍-'Jwale' { Kannada Translation of K.Surendran's Malayalam Novel


Jwale-Kannada Translation of K Surendran,s {1922-1997 ] Malayalam Novel 'Jwala 'by K. K Nayar
Published by Hemanta Sahitya,
# 972c 4th e block, 10th A Main
Rajajinagar,
Bangalore-560010
First  Impression- 2010
Pages-360
Price- Rs 180
K. surendran"s Jwala was published in 1965, K. K. Nayar has tranlated more than 25t books from Malayalam to Kannada.
contact K.K.Nayar
   Tripti
4rth cross,
Saptagiri Nagar
Manipal-576104
phone- 9820-2572372

Tuesday, August 30, 2011

ಅರಳು ಪ್ರಶಸ್ತಿಗಾಗಿ ಪುಸ್ತಕಗಳಿಗೆ ಆಹ್ವಾನ

kannadanet.com: ಅರಳು ಪ್ರಶಸ್ತಿಗಾಗಿ ಪುಸ್ತಕಗಳಿಗೆ ಆಹ್ವಾನ: ಕೊಪ್ಪಳ ಆ. ೩೦ (ಕ.ವಾ.): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ ೧. ೫ ಕೋಟಿ ರೂ. ಗಳ ದತ್ತಿ ನಿಧಿಯಿಂದ ಬೆಂ.ಮ.ಸಾ.ಸಂ. ಅ...

Monday, August 29, 2011

Mahasweta Devi- [ed] Nandini Sen

Mahasweta Devi { Critical Perspectives }
Edited by Nandini Sen
Published by
Penchcraft Internatinal
4262,/3, Ansari Road,
Daryaganj
New Delhi
110002
Rs 650

ಅಂದ ಕಾಲತ್ತಿಲೆ..!

.: ಅಂದ ಕಾಲತ್ತಿಲೆ..!: * ಈಶ್ವರಯ್ಯ ಹಳದಿ ಬಣ್ಣದ ಸಿಲ್ಕ್ ಜುಬ್ಬಾ, ಜರಿ ಪಂಚೆ, ಸ್ವರ್ಣಲೇಪಿತ ಫ್ರೇಮಿನಲ್ಲಿ ದಪ್ಪ ಕನ್ನಡಕ, ದುಂಡಗಿನ ಕುಂಕು...

Friday, August 26, 2011

ಕಲಬೆರಕೆಯ ಹುಡುಗನೂ ಶಾಂತಸಾಗರದ ಹುಡುಗಿಯೂ (ಡೊಂಬಯ್ಯ ಇಡ್ಕಿದು)

'ಕಲಬೆರಕೆಯ ಹುಡುಗ'ನ ಕನಸುಗಳು 
 (ಪುಸ್ತಕ ವಿಮರ್ಶೆ)
                                                   - ಮುರಳೀಧರ ಉಪಾಧ್ಯ ಹಿರಿಯಡಕ

1

       
          ಪುಸ್ತಕದಂಗಡಿಗಳಿಂದ ಕಾವ್ಯ ನಾಪತ್ತೆಯಾಗುತ್ತಿದೆ ಎಂದೊಡನೆ ಕಾವ್ಯ ಅಕಾಲಿಕವಾಗಿದೆ ಎಂದು ಅರ್ಥವಲ್ಲ. ಕವಿಗಳಿಗೆ ಕಾವ್ಯ ಅಡಗು ತಾಣ. ಕಾವ್ಯಕ್ಕೆ ಯಾವುದು ಅಡಗುತಾಣ ಎಂದು ನಾವು ಹುಡುಕಬೇಕಾಗಿದೆ. ಈ ಹುಡುಕಾಟ 'ಗೂಗಲ್' 'ಯಾಹೂ' ಹುಡುಕಾಟದಷ್ಟು ಸುಲಭವಲ್ಲ. ಬೇಂದ್ರೆಯವರ 'ಜೋಗಿ' ಕವನದಲ್ಲಿ ಊರ ಹೊರಗಿನ ತೋಪಿನಲ್ಲಿ ಒಂದು ಮಾವಿನಮರ. ಅದರ ಕೆಳಗೆ ಹುತ್ತ. ಆ ಹುತ್ತದಲ್ಲಿ ಒಂದು ಏಳು ಹೆಡೆಯ ಹಾವು. ಆ ಮಾವಿನ ಮರದಲ್ಲಿ ಒಂದು ಕೋಗಿಲೆ ಕೂಗುತ್ತಿದೆ. ಬೇಂದ್ರೆಯವರ ಕವನ ಕಾವ್ಯದ ಇಂದಿನ ಸ್ಥಿತಿಯ ರೂಪಕ. ನಮ್ಮ ಮನೆಯ ಬಳಿ ಮಾವಿನಮರವಿಲ್ಲ. ಹಾಗಾಗಿ ಕೋಗಿಲೆಯ ಹಾಡು ಆಗಾಗ ಟಿ.ವಿ.ಯಲ್ಲಿ ರೇಡಿಯೋದಲ್ಲಿ ಕೇಳಿಸುತ್ತದೆ.


          ಪುಸ್ತಕದಂಗಡಿಯಲ್ಲಿ ಸಿಗದ ಕಾವ್ಯ ಪಠ್ಯ ಪುಸ್ತಕಗಳಲ್ಲಿದೆ. ಶಾಲಾ ಕಾಲೇಜುಗಳಲ್ಲಿ ಲಕ್ಷಗಟ್ಟಲೆ ವಿದ್ಯಾರ್‍ಥಿಗಳು ನೂರಾರು ಹಳೆಯ ಹೊಸ ಕವಿಗಳ ಕಾವ್ಯ ಭಾಗಗಳನ್ನು, ಕವನಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಕಾವ್ಯದ ಅರ್ಥ ಎಂಬುದು ಮಾಡುಕಟ್ಟೆಯಲ್ಲಿ ಸಿಗುವ ಪದಾರ್ಥ ಅಲ್ಲ ಎಂದು ಅವರಲ್ಲಿ ಕೆಲವರಿಗಾದರೂ ಅರಿವಾಗುತ್ತಿದೆ. ಅಜ್ಜನ ಹೆಗಲ ಮೇಲೆ ಕುಳಿತ ಮೊಮ್ಮಗುವಿನಂತೆ ಹೊಸ ಕಾಲದ ಯುವಕ-ಯುವತಿಯರು ಕಾವ್ಯ ರಚನೆ ಮಾಡುತ್ತಿದ್ದಾರೆ. 'ಇಂಟರ್ನೆಟ್'ನಂಥ ಹೊಸ ಮನೆಗಳು ಕಾವ್ಯಕ್ಕೆ ಆಶ್ರಯ ನೀಡುತ್ತಿವೆ.

2



          ಡೊಂಬಯ್ಯ ಇಡ್ಕಿದು ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಇಡ್ಕಿದು ಎಂಬ ಹಳ್ಳಿಯಲ್ಲಿ ಬೆಳೆದವರು. ಮಣಿಪಾಲದಲ್ಲಿ ಪತ್ರಿಕೋದ್ಯಮ ಕಲಿಸುತ್ತಿರುವ ಕಾಲೇಜು ಉಪನ್ಯಾಸಕರು. ನಾಟಕ  ಮತ್ತಿತರ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಆಸಕ್ತರು. ಇವರ ಅಂತರಂಗದಲ್ಲಿ ಕಾವ್ಯ ಅಡಗಿ ಕುಳಿತಿದೆ ಎಂದು ಗೊತ್ತಾದಾಗ ನನಗೆ ಆಶ್ಚರ್ಯದ ಜೊತೆಗೆ ಸಂತೋಷ.



          'ಇರುದೆಲ್ಲವ ಬದಿಗಿರಿಸಿದ್ದೇವೆ' ಎಂದು ವಿಷಾದಿಸುವ ಈ ಕವಿಗೆ ನಮ್ಮ ಪರಂಪರೆಯ ಸಾತತ್ಯದಲ್ಲಿ ನಂಬಿಕೆ ಇದೆ. ಇಲ್ಲಿರುವ ಹುಡುಗ ವಸಾಹತ್ತೋತರ ಸಮಾಜದ ತಲ್ಲಣಗಳನ್ನು ಅನುಭವಿಸುತ್ತಿರುವ 'ಕಲಬೆರಕೆಯ ಹುಡುಗ!' ಅವನ ಜೊತೆಯಲ್ಲಿ 'ಶಾಂತ ಸಾಗರದ ಹುಡುಗಿ' ಇರುವುದು ಸಮಾಧಾನದ ಸಂಗತಿ. 'ಕಲಬೆರಕೆಯ ಹುಡುಗ'ನಿಗೆ ಅಧೋಮುಖ ಸಮಾಜದ ಭಯಾನಕ ಕನಸುಗಳು ಬೀಳುತ್ತವೆ. ಆದರೆ ಈತ ಗಾಂಧೀಜಿಯನ್ನು ಮರೆತಿಲ್ಲ. ತನ್ನ ಅಜ್ಜನಲ್ಲೆ ಗಾಂಧೀಜಿಯನ್ನು ಹುಡುಕುತ್ತಿದ್ದಾನೆ.



          ಯೌವನ ಸಹಜವಾದ ಪ್ರೇಮಗೀತೆಗಳ ಬದಲು ಈ ಕವಿ ಚಿಂತನಶೀಲ ಕವನಗಳನ್ನು ಬರೆದಿದ್ದಾನೆ. 'ನಡೆವವರೆಡಹದೆ ಕುಳಿತವರೆಡಹುವರೆ?' ಎನ್ನುತ್ತ ನಾವು ಈ ಉದಯೋನ್ಮುಖ ಕವಿಯ ಬೆನ್ನು ತಟ್ಟೋಣ. ಮನೋರಮೆ ಮುದ್ದಣನನ್ನು ಕಾಡಿದಂತೆ, ಪ್ರಶ್ನಿಸಿದಂತೆ, ಡೊಂಬಯ್ಯನವರು ತನ್ನ ಕಾವ್ಯಾನುಭವವನ್ನು ತಾನೇ ಪ್ರಶ್ನಿಸಿದರೆ, ತಿದ್ದಿ ತೀಡಿದರೆ, ಅವರೊಳಗಿನ ಕಸುಗಾಯಿ ಕವಿ ಬೆಳೆಯುತ್ತಾನೆ. ಚಿಪ್ಪೊಡೆದು ಬರಲಿ ವಿನತಾಪುತ್ರ.


3

          ರಾಷ್ಟ್ರಕವಿ ಜಿ. ಎಸ್.ಶಿವರುದ್ರಪ್ಪನವರ 'ಕವಿತೆಯೆಂದರೆ ......' ಕವನದ ಕೆಲವು ಸಾಲುಗಳನ್ನು ನೆನಪಿಸಿಕೊಳ್ಳುತ್ತ ಈ ಮುನ್ನುಡಿಯನ್ನು ಮುಗಿಸುತ್ತೇನೆ.

ಕೆಲವು ಕವಿತೆಗಳು ಮುಂಜಾನೆ ಗಿಡದ ಮೈತುಂಬ
ಸಮೃದ್ಧವಾಗಿ ಅರಳುವ ಹೂವು
ಇನ್ನೂ ಕೆಲವು ಎಷ್ಟು ಪುಂಗಿಯೂದಿದರೂ
ಹುತ್ತ ಬಿಟ್ಟು ಹೊರಕ್ಕೆ ಬಾರದ ಹೂವು
ಮತ್ತೆ ಕೆಲವು ಮಬ್ಬುಗತ್ತಲಲ್ಲಿ ಮಲಗಿರುವ
ಆಕಾರವಿರದ ನೋವು.
ಕವಿಮಿತ್ರ ಡೊಂಬಯ್ಯ ಇಡ್ಕಿದು ಅವರಿಗೆ ಶುಭಾಶಯಗಳು.
'ಸಖೀಗೀತ'
ಎಂ.ಜಿ.ಎಂ.-1
ಹುಡ್ಕೊ 1 ಮೈನ್, ದೊಡ್ಡಣಗುಡ್ಡೆ,
ಉಡುಪಿ-576102.

Kalaberakeya Huduga,Shantasagarada Hudugi
{ A Collection of poems }
by Dombaiyya Idkidu
Published by
Swikrithi,
1-146
Idkidu
Bantwal-574220
First Impression- 2009
Price- Rs.25
Pages-43
Cover Page-Prasad Rao, Manipal
mobile-Dombaiyya Idkidu-9449162096

.......

         

         




 

ಜಿ.ವಿ { G. Venkatasubbaiah- Kannada Writer- Interview }

G.Venkatasubbaiah- Latest interview in Karmaveera Kannada Weekly,
August 28, 2011

THE NINASAM CULTURE COURSE 2011 ..

ninasamculturecourse: THE NINASAM CULTURE COURSE 2011
One of Ninasa...
: THE NINASAM CULTURE COURSE 2011 One of Ninasam’s important activities for more than last 2 decades has been the Culture Course , condu...

Wednesday, August 24, 2011

Sunday, August 21, 2011

ವೈದೇಹಿ-ಹೂವಕಟ್ಟುವ ಕಾಯಕ

ªÉÊzÉû-ºÀƪÀPÀlÄÖªÀ PÁAiÀÄPÀ
Hoovakattuva Kayaka
{ A collection of poems }
By Vaidehi
Published by-
kannada Sangha
Christ University
,Hosur Road
Bangalore-560020
First Published-2011
pages-10+ 130= 140
price- rs 120
                    Vaidehi is one of the Navaratna writers of the contemporary kannada literature.Her favourite and best literary genre is short story.Vision of life , dreams and distress  of feminity are the specialities of her poems.
                   The first part of this collection contains  41 poems.'Uttara Seeta  Charita ' is one of the best poems of Vaidehi.We can compare this poem with her famous short story- 'Shakuntaleyondige kaLeda Aparahna '.This poem discribes the loneliness and  temperament of the Seeta of Uttara Kanda, Ramayana.
                The second part of this collection contains  selected poems from Vaidehi's earliear collections.'Parvati uvaacha ' and 'Astamanada Kavitegalu' are my favourite poems.'Hoova kattuva Kayaka' means preparing a garland of flowers.Vaidehi knows how to prepare a garland of flowers in poetry."Parijata" is the name of her collection of poems published in 1999.The flower 'Parijata'  reminds us many mythological stories . Myths of Indian gods- Shiva, Krishna,hallucinations , dreams  and  reality of the poor, rural, unsophisticated Indian girls are main themes of Vaidehi's beautiful Kannada poems.

ಗುಲಾಬಿ ಟಾಕೀಸು(ಚಿತ್ರಕಥೆ)


ಗುಲಾಬಿ ಟಾಕೀಸು-ವೈದೇಹಿ,-ಗಿರೀಶ್ ಕಾಸರವಳ್ಳಿ
Gulabi Talkies
{ A compilation of original story, screenplay, analysis on the film }
compiled by B.S.Lingadevaru
publidshe by Akka Communications pvt ltd,
# 337, Sourabha Complex, 2nd Floor, !0th Main.
Banashankari 1st stage, 2nd block,
Bengaluru-560050
email- bsl@akkacommunications.com
phone-080-26609649
First Impression-2011
Pages- 8+ 144=152
price-Rs100
Cover Page Design- Udayravi Hegde
    This book contains kannada short story 'Gulabi Talkies' by Mrs. Vaidehi, Gulabi Talkies film script by Girish Kasaravalli,Gulabi talkies film review by Dr, U R. Ananthamurthy, Girish Kasarvalli's article about  the changes he made in the  film script and Girish Ksasaravalli.'s interview by Manu Chakravarthy and B. S.Lingadevaru.
  Umashree got best actress - national award for  her acting in Gulabi Talkies.Girish Kararvalli got best sreenplay award and best film award by  Karnataka government[ 2009 ] Gulabi Talkies  recieved awards in Osian, French and Italian film festivals.
  K. V. Subbanna has translated some of the best film scripts to kannada.Girish Kasaravalli has revised and enlarged Vaidehi's short story.His film script Gulabi Talkies gives an artistic description of the sensitive issue  of  communal relationships in coastal karnataka.
     Gulabi Talkies- film  script is an important addition to film script literature in kannada and  Indian  film scripts literature.Congrats to B. S.Lingadevaru for editing this thought provoking and worth discussing film script. Girish Kasaravalli knows the "Nadi Midita' { pulse beat } of contemporary  Karnataka.He has his own optimistic vision about the future of Karnataka.
                                                       - MURALEEDHARA UPADHYA HIRIADKA

: ದಿಕ್ಕು ತಪ್ಪಿದ ಚಳವಳಿಯ ಬೆನ್ನು ಹತ್ತಿದ ಹುಚ್ಚು ಮೀಡಿಯಾ.....

ಸಂಪಾದಕೀಯ: ದಿಕ್ಕು ತಪ್ಪಿದ ಚಳವಳಿಯ ಬೆನ್ನು ಹತ್ತಿದ ಹುಚ್ಚು ಮೀಡಿಯಾ.....: ನೂರೈವತ್ತು ಕೋಟಿ ಜನರು ಅಣ್ಣಾ ಹಜಾರೆಯ ಬೆಂಬಲಕ್ಕೆ ನಿಂತಿದ್ದಾರೆ ಎನ್ನುತ್ತದೆ ಸಿಎನ್ಎನ್ ಐಬಿಎನ್ ಎಂಬ ಒಂದು ಟಿವಿ ಚಾನಲ್. ಯಾರು ಈ ನೂರೈವತ್ತು ಕೋಟಿ ಜನ? ಎಲ್ಲಿಂದ ಬ...

Ayurveda Vijnana By Dr.Shripati Acharya { 2011 - Kannada }

Ayurveda Vijnana written by Dr, Shripati Acharya { Dean, Post Graguate Centre,Muniyal Aryurveda College, Manipal} and his students contains 19 articles on various topics of Ayurveda.
 Obesity,acute gastroenterities,asthma, renal calculas,diabetis mellitus,dysuria,anaemia,respiratory problems,osteoarthritis,renal disorders, bph,ihd,rheumatoid arthritis,sciatica syndrome,,ostcoarthritis  these are the topics discussed in different articles.These articles are useful  for common man and ayurveda students.
        Publishers name is not mentioned in this book.First Edition-2011. Price-rs- 300.
   This book is an important addition to  Ayurveda Literature In Kannada.
         - Muraleedhara Upadhya Hiriadka

ಕನ್ನಡಿ ಮತ್ತು ಇತರ ಕತೆಗಳು.... { B. M. Basheer }

ಲಡಾಯಿ ಪ್ರಕಾಶನ: ಕನ್ನಡಿ ಮತ್ತು ಇತರ ಕತೆಗಳು....: "ಬಿ . ಎಂ . ಬಶೀರ
ಕನ್ನಡಿ
ಆತ ಹೊಸದಾಗಿ ತಂದ ಕನ್ನಡಿಯಲ್ಲಿ ತನ್ನ ಮುಖವನ್ನು ನೋಡಿ ಅಸಮಾಧಾನದಿಂದ ಗೊಣಗಿದ
‘‘ಇತ್ತೀಚೆಗೆ ಮಾರುಕಟ್ಟೆಯಲ್ಲಿ ಒಳ್ಳೆಯ ಕನ್ನಡಿಯ..."

Rabindranath Tagore- Gruhapravesh { Drama } Kannada Translation by Srinivas Sutrave

Rabindranatha Tagore- Gruhapravesh { Drama }
Kannada Translation by Srinivas Sutrave
first edition- 2010
published by Darpana Prakashana,Dharwa,
pages-66
price-rs-60
Book review by B. S. Chandrashekar
Book review published in EE MASA NATAKA
Kannada Monthly
August-2011
Email-nataka34@gmail.com

Sad Demise-Pro.K.G.Narayana, S. M.S. College, Brah...

rathabeedhi geleyaru udupi: Sad Demise-Pro.K.G.Narayana, S. M.S. College, Brah...: "We, The President And Working Committee Members of Rathabeedhi Geleyaru, { R } Udupi mourn the sad demise of Pro. K. G. Narayana, Former Pre..."

ತಳುಕಿನ ವೆ೦ಕಣ್ಣಯ್ಯ { 1885-1936 }

ಜೀವನ್ಮುಖಿ: ತಳುಕಿನ ವೆ೦ಕಣ್ಣಯ್ಯ: "ತಳುಕಿನ ವೆ೦ಕಣ್ಣಯ್ಯ (1885-1936) ಅವರು ಕನ್ನಡ ಸಾಹಿತ್ಯ ಲೋಕದ ಆದ್ಯ ಪ್ರವರ್ತಕರಲ್ಲಿ ಒಬ್ಬರು. ಇವರನ್ನು ಆಧುನಿಕ ಕನ್ನಡ ಸಾಹಿತ್ಯದ ಅಶ್ವಿನಿಕುಮಾರರೆಂದು ಕರೆಯಲಾಗ..."

Sunday, August 7, 2011

ದಿ| ರಂಗನಾಥ ಶೆಣೈಯವರ ಒಂದು ಪತ್ರ

ದಿ| ರಂಗನಾಥ ಶೆಣೈಯವರ ಒಂದು ಪತ್ರ
                                                                        -    ಮುರಳೀಧರ ಉಪಾಧ್ಯ ಹಿರಿಯಡಕ
                                   
          ಮಾಜಿ ಲೋಕಸಭಾ ಸದಸ್ಯ ದಿ| ರಂಗನಾಥ ಶೆಣೈಯವರ ಕುರಿತು ಲೇಖನವೊಂದನ್ನು ಬರೆದುಕೊಡಬೇಕೆಂದು ಅವರ ಮಗಳು ಶ್ರೀಮತಿ ಭಾರತಿ ಶೆಣೈ ಅವರು ವಿನಂತಿಸಿದಾಗ ನಾನು ಮೊದಲು ನಿರಾಕರಿಸಿದೆ. ದಿ| ಶೆಣೈ ಅವರ ಕುರಿತು ನನಗೆ ಹೆಚ್ಚಿಗೆ ಏನೂ ತಿಳಿದಿಲ್ಲ ಎಂಬುದೇ ನನ್ನ ನಿರಾಕರಣೆಗೆ ಕಾರಣವಾಗಿತ್ತು. ಆಮೇಲೆ ಭಾರತಿ ಶೆಣೈ ಅವರ ಕೋರಿಕೆಯ ಮೇರೆಗೆ ದಿ| ರಂಗನಾಥ ಶೆಣೈ ಅವರ ಕುರಿತು ಅವರ ನಿಕಟವರ್ತಿಗಳಿಂದ ಮಾಹಿತಿ ಸಂಗ್ರಹಿಸಿ ಒಂದು ಲೇಖನ ಬರೆಯಲು ನಾನು ಒಪ್ಪಿಕೊಂಡೆ.

          ಇನ್ನೆಬ್ಬ ಮಾಜಿ ಲೋಕಸಭಾ ಸದಸ್ಯ ದಿ| ಶ್ರೀನಿವಾಸ ಮಲ್ಯರ ಕುರಿತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ದಂತಕಥೆಗಳಿವೆ. ಆ ದಂತಕಥೆಗಳು ಅವರ ಬಗೆಗಿನ ಅಭಿಮಾನದಿಂದ ಹುಟ್ಟಿವೆ. ರಂಗನಾಥ ಶೆಣೈಯವರ ಕುರಿತು ಅಂತಹ ದಂತಕಥೆಗಳನ್ನು ನಾನು ಕೇಳಿಲ್ಲ. ಅವರನ್ನು ಕುರಿತ ಟೀಕೆ, ಟಿಪ್ಪಣಿಗಳೂ ಲಭ್ಯವಿಲ್ಲ. ನನ್ನ ಸಹಪಾಠಿ, ಗೆಳೆಯ ಉಡುಪಿಯ ನಿಷ್ಠಾವಂತ ಸಾಮಾಜಿಕ ಕಾರ್ಯಕರ್ತ ಯು.ಆರ್.ಜಯವಂತರಲ್ಲಿ ರಂಗನಾಥ ಶೆಣೈಯವರ ಕುರಿತು ಒಮ್ಮೆ ಮಾತನಾಡಿದಾಗ ನನಗೊಂದು ಆಶ್ಚರ್ಯ ಕಾದಿತ್ತು. ಅವರು ನನ್ನೊಡನೆ ಮಾತು ಮುಂದುವರಿಸುತ್ತಲೇ, ತನ್ನ ಮೇಜಿನ ಮೇಲಿದ್ದ ಒಂದು ಫೈಲ್ನಿಂದ ಹಳೆಯ ಕಾಗದವೊಂದನ್ನು ಹುಡುಕಿ ತೆಗೆದರು. ಅದನ್ನು ನನ್ನ ಕೈಗಿತ್ತು, ಈ ಕಾಗದವನ್ನು 22 ವರ್ಷದಿಂದ ರಕ್ಷಿಸಿದ್ದೇನೆ. ಓದಿ ಮರೆಯದೆ ಹಿಂದಿರುಗಿಸಿ ಎಂದರು.

          ರಂಗನಾಥ ಶೆಣೈಯವರು 1947ರ ಫೆಬ್ರವರಿ 16ರಂದು ಶ್ರೀ ಯು.ಆರ್.ಜಯವಂತರಿಗೆ ಬರೆದ ಪತ್ರದ ಆಯ್ದ ಭಾಗಗಳನ್ನು ನೀಡಿ, ಅದರ ಕುರಿತು ಕೆಲವು ಮಾತುಗಳನ್ನು ಬರೆಯುತ್ತೇನೆ.

            "ನನ್ನ ಯುವಕ ಗೆಳೆಯರಾದ ಶ್ರೀ ಜಯವಂತನವರಿಗೆ ಮಾಡುವ ಪ್ರೀತಿಯ ನಮಸ್ಕಾರಗಳು. ತರುವಾಯ ನೀವು ನನಗೆ ಉಡುಪಿಯಲ್ಲಿ ಸಿಕ್ಕಿದ ನಂತರ ತಾರೀಕು 30-01-1974ರ ನಿಮ್ಮ ಪತ್ರ ನಿನ್ನೆ ಕೈಸೇರಿತು. ಪತ್ರದಲ್ಲಿ ಇಂದಿನ ರಾಜಕೀಯ ಪರಿಸ್ಥಿತಿ ಮತ್ತು ಅದರಲ್ಲಿ ನನ್ನಂತವರ ಪಾತ್ರದ ಕುರಿತು  ಮಾರ್ಮಿಕವಾಗಿ ಚಿತ್ರಿಸಿದ್ದೀರಿ. ಅಂತರರಾಷ್ಟ್ರೀಯ ಪರಿಸ್ಥಿತಿಯಿಂದಾಗಿಯೋ, ಅಹಿಂಸಾತ್ಮಕ ಪ್ರಜಾಸತ್ತೆಯಲ್ಲಿ ವೇಶ್ಯೆಯರಿಗಿಂತ ಹೆಚ್ಚು ಆಕರ್ಷಕರಾಗಿ ಮೆರೆಯುತ್ತಿರುವ ಹೃದಯಮಾನ್ಯ ಶೋಷಕರಿಗೆ ಸಿಕ್ಕುವ ಸ್ಥಾನಮಾನಗಳಿಂದಲೋ, ಈ ಸ್ಥಾನಮಾನಗಳಿಗಾಗಿ ಮಿತಿ ಮೀರಿದ ಹಣಗಳಿಸಲು ಉಪಯೋಗಿಸುವ ಭ್ರಷ್ಟಾಚಾರದ ರೀತಿನೀತಿಗಳಿಂದಲೋ, ನಮ್ಮ ದೇಶಕ್ಕೆ ಈಗಿನ ಪರಿಸ್ಥಿತಿ ಬಂದಿದೆ. ಇದನ್ನು ಒಬ್ಬಿಬ್ಬರು ಅಥವಾ ಒಂದೆರಡು ಸಾವಿರ ಜನರು ಕೂಡಿ ಪರಿಹರಿಸಲು ಸಾಧ್ಯವಿಲ್ಲ. ಪರಿಹಾರ ಮಾರ್ಗವೇನೆಂಬುದು ಇನ್ನೊಂದು ಪ್ರಶ್ನೆ. ತಗಲುವ ಸಮಯವೆಷ್ಟೆಂಬುದನ್ನು ದೇವರೇ ಹೇಳಬೇಕು. ಸಮೃದ್ಧಿ ಹಾಗೂ ಸಮಭಾಗಿತ್ವ ಇನ್ನೂ ದೂರದ ಕನಸಾಗಿದೆ."

          "ಅನ್ಯಾಯವನ್ನು ಪ್ರತಿಭಟಿಸುವ ಇಲ್ಲವೆ ಎದುರಿಸುವ ಯಾವ ಚೈತನ್ಯವನ್ನೂ ನಾನು ಇಟ್ಟುಕೊಂಡ ಹಾಗಿಲ್ಲ ಎನ್ನುತ್ತೀರಿ. ಇದು ನಿಜವಾದಲ್ಲಿ ಪಕ್ಷದ ನೀತಿಯನ್ನೇ ನಾನು ಅನುಸರಿಸುತ್ತೇನೆಂದು ಹೇಳಬಹುದು."

          "ಹಿರಿಯ ರಾಜಕಾರಣದ ಮರ್ಮವನ್ನು ಇನ್ನೂ ತಿಳಿಯಬೇಕಾದ ನನಗೆ ನಮ್ಮ ಕಾಂಗ್ರೆಸ್ ಪಕ್ಷದ ಹಾಗೂ ಶ್ರೀಮತಿ ಇಂದಿರಾಗಾಂಧಿಯವರ ಕೆಲವೊಂದು ಧೋರಣೆಗಳ ಅರ್ಥವೇ ಆಗುವುದಿಲ್ಲ. ಆದರೆ ಇಷ್ಟನ್ನು ಮಾತ್ರ ಹೇಳಬಲ್ಲೆ, ಇಂದಿನ ಪರಿಸ್ಥಿತಿಯಲ್ಲಿ ಶ್ರೀಮತಿ ಗಾಂಧಿಯವರಿಗೆ ದೇಶ ಬೇಕಾದುದಕ್ಕಿಂತಲೂ ಹೆಚ್ಚಿಗೆ ದೇಶಕ್ಕೆ ಶ್ರೀಮತಿ ಗಾಂಧಿಯವರು ಬೇಕಾಗಿದ್ದಾರೆ. ಆದುದರಿಂದ ನಾವು ಕೆಲವೊಂದು ವಿಷಯಗಳಲ್ಲಿ ಮೌನ ತಾಳಬೇಕಾಗಿದೆ. ನಾನು ದೇಶದ ಆಗುಹೋಗುಗಳ ವಿಷಯ ಚೆನ್ನಾಗಿ ಅಭ್ಯಸಿಸುತ್ತೇನೆಂಬ ವಿಚಾರದಲ್ಲಿ ನಿಮಗೆ ಯಾವ ಸಂಶಯವೂ ಬೇಡ. ಆದರೆ ಈ ಅಭ್ಯಾಸ ಯಾವಾಗ ಯಾವ ರೂಪ ತಾಳುತ್ತದೆ ಎಂದು ಹೇಳುವುದು ನನ್ನ ಯೋಚನೆಗೂ ಮೀರಿದ ವಿಚಾರವಾಗಿರುತ್ತದೆ. ಕುರೂಪ ತಾಳದಿದ್ದರೆ ಸಾಕು ಸದ್ಯಕ್ಕೆ.
ಶ್ರೀ ಕುಶೆಯವರು ತಾವಾಗಿ ಸೋತರೆ ನಾವೇನೂ ಮಾಡಲು ಸಾಧ್ಯವಿಲ್ಲ. ಆದರೆ ಪಕ್ಷ ರಾಜಕೀಯದಲ್ಲಿ ವ್ಯಕ್ತಿಗಿಂತ ಪಕ್ಷವೇ ಮೇಲು. ಆದುದರಿಂದ ಪಕ್ಷದ  ಅಭ್ಯರ್ಥಿಗೆ  ನಾವು ಸಾಧ್ಯವಾದಷ್ಟು ಸಹಾಯ ಮಾಡಬೇಕಾಗಿದೆ."

          "ನಮ್ಮ ಜಿಲ್ಲೆಯಲ್ಲಿ ಅಕ್ಕಿಯ ವಿಚಾರ - (1) ಮಂಗಳೂರು ನಗರ, (2) ಮಂಗಳೂರು ನಗರದ ಸುತ್ತಮುತ್ತಲಿನ ಗ್ರಾಮಗಳು, (3) ಕೇರಳದ ಗಡಿಗೆ ತಾಗಿರುವ ಪ್ರದೇಶ (ಬೆಲ್ಟ್ ಏರಿಯ) ಮತ್ತು (4) ಸುಮಾರು 5 ಮೈಲು ಅಗಲದ ಜಿಲ್ಲೆಯ ಕರಾವಳಿ ಪ್ರದೇಶ ಇಷ್ಟು ಪ್ರದೇಶಗಳಿಗೆ ಅಕ್ಕಿ ಸಿಕ್ಕಲು ಆಗುವ ಕಷ್ಟ ಮತ್ತು ಅಲ್ಲಿಯ ಕೃಷಿಕರಿಗೆ ಸರಕಾರದ ನೆರವಿನಿಂದ ಅಕ್ಕಿ ಹಂಚಬೇಕಾದ ಅವಶ್ಯಕತೆ ನಮ್ಮ ಮೈಸೂರು ಸರಕಾರಕ್ಕೆ ಅರಿವಾದಂತಿದೆ. ಈ ನಾಲ್ಕು ಪ್ರದೇಶಗಳಲ್ಲಿ ಏನಾದರೊಂದು ವ್ಯವಸ್ಥೆ ಮಾಡಬೇಕೆಂದು ಸರಕಾರ ನಿರ್ಧಾರ ಮಾಡಿದಂತಿದೆ. ನಾಲ್ಕನೆಯ ಈ ಪ್ರದೇಶಕ್ಕೆ ನಾನು ಕನಿಷ್ಠ ಎರಡು ಗಂಟೆಗಳ ಕಾಲ (ಎಂ.ಪಿ.ಗಳ ಸಭೆ, ಬೆಂಗಳೂರು 13-02-1974) ಹೋರಾಡಬೇಕಾಯಿತು. ನ್ಯಾಯಬೆಲೆ ಅಂಗಡಿಗಳನ್ನು ಈ ಪ್ರದೇಶದಲ್ಲಿ ತೆರೆದು ಲೆವಿ ಅಕ್ಕಿಯನ್ನು ಸದ್ಯದಲ್ಲೇ ಹಂಚುವ ಭರವಸೆ ಕೊಟ್ಟಿದ್ದಾರೆ - ಮಾನ್ಯ ದೇವರಾಜ ಅರಸು ಅವರು."

          "ಅರ್ಥಿಕ ಅಡಚಣೆಗಳಿಲ್ಲದೆ ಜಿಲ್ಲೆಯ ತರುಣರು ಸ್ವಂತ ಉದ್ಯೋಗದ ಯೋಜನೆ ಹಾಕಿಕೊಂಡರೆ ಜಿಲ್ಲೆಯು ಖಂಡಿತವಾಗಿಯೂ,  ಅರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಮುಂದುವರಿಯುತ್ತದೆ. ಇಂದು ನಮ್ಮ ಜಿಲ್ಲೆಯಲ್ಲಿ ಮತ್ತು ನಮ್ಮ ಜಿಲ್ಲೆಯವರು ಉಳಿಸಿದ ಹಣ ಬೊಂಬಯಿ, ಕಲ್ಕತ್ತ, ಬೆಂಗಳೂರು ಮುಂತಾದ ನಗರಗಳಲ್ಲಿ ಬ್ಯಾಂಕುಗಳ ಮೂಲಕ ದೊಡ್ಡ ವ್ಯಾಪಾರ ಹಾಗೂ ದೊಡ್ಡ ಉದ್ಯಿಮೆಗಳಿಗೆ ಉಪಯೋಗವಾಗುತ್ತದೆ. ನಮ್ಮ ಜಿಲ್ಲೆಯ ಜನರಿಗೆ ಚಿಟ್ಫಂಡ್ ಮತ್ತು ಖಾಸಗಿ ಸಾಲಕೊಡುವವರು (ಇವರಿಗೆಲ್ಲ ಬ್ಯಾಂಕುಗಳ ಬೆಂಬಲವಿದೆ) ಮಾತ್ರ ಗತಿ. ಬ್ಯಾಂಕುಗಳ ತವರು ಮನೆಯಾದ ಉಡುಪಿಯಲ್ಲಿ ಎಷ್ಟು ಚಿಟ್ ಫಂಡ್ಗಳು! ಎಷ್ಟು ಖಾಸಗಿ ಸಾಲ ಕೊಡುವವರು! ಜಿಲ್ಲೆಯಲ್ಲಿ ಹಣವನ್ನು ಉಳಿಸುವ ಪ್ರಯತ್ನ ಮಾಡುವವರಿಗೆ (ಪಿಗ್ಮಿ ಇತ್ಯಾದಿ ಡಿಪೊಸಿಟ್ಗಳ ಮೂಲಕ) ಉಳಿತಾಯಕ್ಕಿಂತಲೂ ಹೆಚ್ಚಿನ ಸಾಲದ ಸೌಲಭ್ಯವಿಲ್ಲ! ಇದನ್ನೆಲ್ಲಾ ನಿಧಾನವಾಗಿ ಸರಿಪಡಿಸಬೇಕೆಂದು ನಮ್ಮ ಸರಕಾರ ಹೇಳುತ್ತದೆ. ಅದೆಷ್ಟು ನಿಧಾನವೋ?"

          "ಉಡುಪಿ ಲೋಕಸಭಾ ಕ್ಷೇತ್ರದ ಕುಂದಾಪುರ ಮತ್ತು ಉಡುಪಿ ತಾಲೂಕುಗಳಲ್ಲಿ ಚಿಕ್ಕ ರೈತರಿಗಾಗಿ ಹಾಗೂ ಭೂಮಿ ಇಲ್ಲದ ಕೃಷಿ ಕಾರ್ಮಿಕರಿಗಾಗಿ  MALF ಯೋಜನೆ ಜಾರಿಯಲ್ಲಿದೆ. ಅಧಿಕಾರಿಗಳು, ಸಹಕಾರಿ ಸಂಸ್ಥೆಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಮನಸ್ಸು ಮಾಡಿದಲ್ಲಿ ಈ ಯೋಜನೆ ಯಶಸ್ವಿಗೊಳಿಸಬಹುದು. ಕುಂದಾಪುರ, ಕಾರ್ಕಳ ತಾಲೂಕುಗಳು ಮಲೆನಾಡು ಪ್ರದೇಶಗಳೆಂದು ಸಾರಲ್ಪಟ್ಟು ಅಲ್ಲಿ Rural Electrification Scheme ಪ್ರಕಾರ ಸುಲಭವಾಗಿ ವಿದ್ಯುತ್ತು ಪಡೆಯಬಹುದು. ಆದರೂ ಹಲವಾರು ಗ್ರಾಮಗಳಿಗೆ ಇನ್ನೂ ವಿದ್ಯುತ್ ಬರಲಿಲ್ಲ. ಬೀಡಿ ಕೆಲಸಗಾರರಿಗೆ minimum wages ನಿರ್ಧರಿಸಿದರೂ, ಕರ್ನಾಟಕ  ಸರಕಾರ, ಕೇರಳ ಸರಕಾರ ಮುಂದುವರಿಸಿದಷ್ಟು ಮುಂದುವರಿಯಲಿಲ್ಲ. ಮೀನುಗಾರಿಕೆಯನ್ನು ಮುಂದಿನ ಐದು ವರ್ಷಗಳಲ್ಲಿ ಹತ್ತು ಪಾಲಿನಷ್ಟು ಅಭಿವೃದ್ಧಿಗೊಳಿಸಬಹುದು. ಭೂಮಸೂದೆ ಜಾರಿಗೆ ಬಂದರೆ ಚಿಕ್ಕ ರೈತರ ಅಭಿವೃದ್ಧಿಗೆ ಇಡೀ ಜಿಲ್ಲೆಯಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಬಹುದು. ಶೇಂದಿಯನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಶೇಂದಿಯನ್ನು ಬಿಟ್ಟು ಉಳಿದ ಮದ್ಯಪಾನಕ್ಕೆ ಮತ್ತೆ ಸಂಪೂರ್ಣ ನಿಷೇಧ ತಂದರೆ ಒಳ್ಳೆಯದೆಂದು ನನ್ನ ಅಭಿಮತ. ನಮ್ಮ ಜಿಲ್ಲೆಗಂತೂ ಇದರಿಂದ ಒಂದಕ್ಕಿಂತ ಹೆಚ್ಚು ರೀತಿಯ ಒಳ್ಳೆಯದಾಗುತ್ತದೆ."

          "ಇರಲು ಮನೆ ಇಲ್ಲದ ಕಾರ್ಮಿಕರಿಗೆ ಸರಕಾರ ಭೂಮಿಕೊಟ್ಟು ಅದರಲ್ಲಿ ಮನೆಕಟ್ಟಲು ನೆರವು ಕೊಡುವ ಯೋಜನೆ ಸಂಪೂರ್ಣವಾಗಿ ಯಶಸ್ವಿಗೊಳಿಸಬೇಕು. ಬಂದರದ ಸುತ್ತಲೂ ಉದ್ದಿಮೆಗಳು ಬರಬೇಕು."

         "ಜಿಲ್ಲೆಯ ನಿರ್ಬಲ ಜನರ ಯೋಚನೆ ಬಂದಾಗ ಮೇಲಿನ ವಿಚಾರಗಳು ಬಂದವು. ಹೆಚ್ಚಿಗೆ ಬಂದರೆ ನಿಮಗೆ ಬೇಸರವಾಗಬಹುದು. ಈ ವಿಚಾರಗಳಿಗೆ ನಮ್ಮ ಪಕ್ಷ ಒಂದಲ್ಲ ಒಂದು ರೀತಿಯಲ್ಲಿ ಗಮನ ಕೊಟ್ಟಿರುತ್ತದೆ. ನಾವೆಲ್ಲರೂ ಮುಖ್ಯವಾಗಿ ನಮ್ಮ ಪಕ್ಷದಲ್ಲಿರುವ ನಿಮ್ಮಂತಹ ತರುಣರು ಸದ್ಯಕ್ಕೆ ಈ ವಿಚಾರಗಳಿಗೆ ಪ್ರೋತ್ಸಾಹ ಕೊಡೋಣ. ಕೀರ್ತಿಯ ಕಾಮ ನಮಗೆ ಬೇಡ - ಇದು ಅನವಶ್ಯಕವಾದ ಕಿಚ್ಚಿಗೆ ಕಾರಣವಾಗುತ್ತದೆ. ನಿಷ್ಕಾಮ ಸೇವೆಯ ಮನೋಭಾವವಿದ್ದರೆ ನಾವು ಹೆಚ್ಚಿಗೆ ಪರಿಣಾಮಕಾರಿಗಳಾಗಬಹುದು. ಸಾರ್ವಜನಿಕ ವ್ಯಾಪಾರಿ ಸಂಸ್ಥೆ (Public undertakings)ಗಳಲ್ಲಿ ನಷ್ಟವಾದಾಗ ಟೀಕೆ ಮಾಡುವುದರಲ್ಲಿ ಅರ್ಥವಿರಬಹುದು. ಆದರೆ ಸೇವೆಯೂ ಕೂಡ ವ್ಯಾಪಾರದ ತಳಹದಿಯಲ್ಲಿ ಆಗಬೇಕೆನ್ನುವ ಆಧುನಿಕ ಸೇವಾ ಧುರಂಧರರ ತತ್ವ ನಾವು ಒಪ್ಪುವುದು ಬೇಡ. ಅಂತಹ ತತ್ವವನ್ನು ವಿರೋಧಿಸುವುದರಲ್ಲಿಯೇ ನಾವು ಕಾಲ ಕಳೆಯುವುದೂ ಸರಿಯಲ್ಲ."

          "ನೀವು ಬರೆದ ಪತ್ರಕ್ಕಿಂತಲೂ ಉದ್ದದ ಪತ್ರ ಬರೆಯಬೇಕೆಂದು ಈ ಪತ್ರವನ್ನು ಆರಂಭಿಸಿದೆ, ನಿಮ್ಮಷ್ಟೇ ಸುಂದರವಾದ ಅಕ್ಷರಗಳನ್ನು ಉಪಯೋಗಿಸಬೇಕೆಂದಿದ್ದೆ. ಆದರೆ ಈ ಪತ್ರವನ್ನು ಓಡುವ ಉಗಿಬಂಡಿಯಲ್ಲಿ ಬರೆಯುತ್ತಿದ್ದೇನೆ. ಹಾಗಾಗಿ ಓದಲು ನಿಮಗೆ ಸ್ವಲ್ಪ ಕಷ್ಟವಾಗಬಹುದು."

          "ಶ್ರೀ ಸಭಾಪತಿಯವರೂ ನನಗೆ ಪತ್ರ ಬರೆದಿದ್ದಾರೆ. ಅವರಿಗೆ ಕೆಲವು ದಿನಗಳೊಳಗೆ ಬರೆಯಬೇಕೆಂದಿದ್ದೇನೆ."
         "ನಾವು ನಗರಸಭಾ ಚುನಾವಣೆಯಲ್ಲಿ ಸೋತದ್ದು ನನಗೆ ತುಂಬಾ ಬೇಸರವಾಗಿದೆ. ನಮ್ಮ ಪಕ್ಷದಿಂದ ಹಲವು ರೀತಿಯಲ್ಲಿ ನಿರ್ಲಜ್ಜೆಯ ಉಪಯೋಗ ಪಡೆಯುವವರೇ ನಮ್ಮ ಎದುರಾ ಎದುರಿ ಹಾಗೂ ಬೆನ್ನಿನಲ್ಲಿ ತಿವಿದರು. ಬಹುಶಃ ನಾವು ಗೆದ್ದಿದ್ದರೆ ನಗರಸಭೆಗೆ ದಿನನಿತ್ಯ ಟೀಕೆ ಮಾಡಿ ಉದಯವಾಣಿ ಬರೆಯುತ್ತಿತ್ತು .......ಆದರೆ ನಮ್ಮನ್ನೆಲ್ಲ ಜಾಗ್ರತವಗಿರಿಸಲು ಅದು ತುಂಬಾ ಸಹಾಯ ಮಾಡುತ್ತದೆ."
                                                 -ರಂಗನಾಥ ಶೆಣೈ.

          ದಿ| ರಂಗನಾಥ ಶೆಣೈ ಅವರ ರಾಜಕೀಯ ಸಾಮಾಜಿಕ ವಿಚಾರ ಧಾರೆಯ ಸಾರಾಂಶ ಈ ಪತ್ರದಲ್ಲಿದೆ. ರಾಜಕೀಯ ಸ್ಥಾನಗಳನ್ನು ಗಳಿಸಲು ಅನುಸರಿಸುವ ಭ್ರಷ್ಟ ರೀತಿ-ನೀತಿಗಳ ಬಗ್ಗೆ ಶೆಣೈ ಅವರು ಈ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ತನ್ನ ಪಕ್ಷದ ನಾಯಕಿ ಇಂದಿರಾ ಗಾಂಧಿಯವರ ಧೋರಣೆ ತನಗೆ ಅರ್ಥವಾಗುವುದಿಲ್ಲ ಎಂಬ ತನ್ನ ಪ್ರಾಮಾಣಿಕ ಅನ್ನಿಸಿಕೆಯನ್ನು ಶೆಣೈಯವರು ತನ್ನ ಪಕ್ಷದ ಯುವ ಕಾರ್ಯಕರ್ತರೊಡನೆ ಹಂಚಿಕೊಂಡದ್ದನ್ನು ಗಮನಿಸಬೇಕು. (ಅಲಹಬಾದ್ ಹೈಕೋರ್ಟ್)  ಇಂದಿರಾ ಗಾಂಧಿಯವರ ಲೋಕಸಭಾ ಸದಸ್ಯತ್ವವನ್ನು ರದ್ದು ಗೊಳಿಸಿದಾಗ ಅವರು ರಾಜೀನಾಮೆ ನೀಡಬೇಕೆಂದು ರಂಗನಾಥ ಶೆಣೈಯವರು ಸಲಹೆ ನೀಡಿದ್ದರು. ಶೆಣೈ ಮತ್ತಿತರ ತನ್ನ ಪಕ್ಷದ ಎಂ.ಪಿ.ಗಳ ಸಲಹೆಯನ್ನು ತಿರಸ್ಕರಿಸಿದ ಇಂದಿರಾಗಾಂಧಿಯವರು ಜೂನ್ 26, 1975ರಲ್ಲಿ ದೇಶದಲ್ಲಿ ಆಂತರಿಕ ತುರ್ತು  ಪರಿಸ್ಥಿತಿಯನ್ನು ಘೋಷಿಸಿದರು. ಅದು ಮುಂದಿನ ಚುನಾವಣೆಯಲ್ಲಿ ಅವರು ಸೋಲುವವರೆಗೆ - ಮಾರ್ಚ್ 21, 1977ರ ವರೆಗೆ ಜಾರಿಯಲ್ಲಿತ್ತು.) ದಕ್ಷಿಣ ಕನ್ನಡ ಜಿಲ್ಲೆಯ ಸಾಮಾಜಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೋಡಿದಾಗ ದಿ| ಶೆಣೈ ಅವರು ಭೂಮಸೂದೆಯ ಪರವಾಗಿದ್ದುದು ಮುಖ್ಯವಾದ ಸಂಗತಿ. ರಾಜಕಾರಣಿಗಳು ಜಾಗೃತರಾಗಿರಲು  ಪತ್ರಿಕೆಗಳು ಸಹಾಯಮಾಡುತ್ತವೆ ಎನ್ನುವ ಶೆಣೈಯವರು ಪ್ರಜಾಪ್ರಭುತ್ವ ವ್ಯವಸ್ಥೆ ಸಂಕಟದಲ್ಲಿದ್ದ ದಿನಗಳಲ್ಲಿ ಲೋಕಸಭಾ ಸದಸ್ಯರಾಗಿದ್ದರು.........ಸೇವೆ ವ್ಯಾಪಾರವಾಗಬಾರದು, ಕೀರ್ತಿ ಕಿಚ್ಚಿಗೆ ಕಾರಣವಾಗುತ್ತದೆ ಎಂಬ ಶೆಣೈಯವರ ಕಿವಿಮಾತುಗಳನ್ನು ಯುವಕರು ನೆನಪಿನಲ್ಲಿಡಬೇಕು. ತನ್ನ ಊರಿನ, ಪಕ್ಷದ ಯುವಕರೊಬ್ಬರು ಬರೆದ ಪತ್ರಕ್ಕೆ ಸುದೀರ್ಘವಾದ ಉತ್ತರವನ್ನು ಉಗಿಬಂಡಿಯಲ್ಲಿ ಪ್ರಯಾಣಮಾಡುವಾಗ ಶೆಣೈಯವರು ಬರೆದರು.

          ಈ ಪತ್ರ ದಿ| ರಂಗನಾಥ ಶೆಣೈ ಅವರಲ್ಲಿ ನಮಗೆ ಗೌರವವನ್ನು ಮೂಡಿಸುತ್ತದೆ.
                       

ರಂಗದರ್ಶನ
(ಪರ್ಕಳ ರಂಗನಾಥ ಶೆಣೈ ಸ್ಮೃತಿ ಸಂಚಯ).
ಸಂ.-ಶ್ರೀಮತಿ ಭಾರತೀ ಶೆಣೈ.
ಪ್ರ.-ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ-576102.
ಮೊದಲ ಮುದ್ರಣ.
ಬೆಲೆ ರೂ. 90.00

 Rangadarshana

{ Life and Mission Of  P. Ranganatha Shenoy[1927-1979 ] }
Edited by Smt Bharathi Shenoy
Published by 
Rashtrakavi Govinda Pai Samshodana Kendra , Udupi-576102
First Edition-2004
pages-20+188  + 16
price- rs-90
cover design-
Veda offset printers, Bangalore

: ಪತ್ರಕರ್ತರಿಗೆ ದತ್ತಿನಿಧಿ ಪ್ರಶಸ್ತಿ: ಅರ್ಜಿ ಆಹ್ವಾನ

kannadanet.com: ಪತ್ರಕರ್ತರಿಗೆ ದತ್ತಿನಿಧಿ ಪ್ರಶಸ್ತಿ: ಅರ್ಜಿ ಆಹ್ವಾನ: "ಕೊಪ್ಪಳ ಆ. : ಕರ್ನಾಟಕ ಮಾಧ್ಯಮ ಅಕಾಡೆಮಿಯಲ್ಲಿ ವಿವಿಧ ಸಂಸ್ಥೆಗಳು ಸ್ಥಾಪಿಸಿರುವ ದತ್ತಿನಿಧಿಯಿಂದ ನೀಡಲಾಗುವ ಪ್ರಶಸ್ತಿಗಳಿಗಾಗಿ ಅರ್ಹ ಪತ್ರಕರ್ತರಿಂದ ಅರ್ಜಿ ಆಹ್ವಾನಿಸಿ..."

"ಸಿರಿಭೂವಲಯವನ್ನು "ಅಧ್ಯಯನ ಮಾಡಲು ಮನವಿ

ವೇದಸುಧೆ: "ಸಿರಿಭೂವಲಯವನ್ನು "ಅಧ್ಯಯನ ಮಾಡಲು ಮನವಿ: "ವೇದಸುಧೆಯ ಪ್ರೀತಿಯ ಅಭಿಮಾನಿಗಳೇ, ನಮಸ್ತೆ. ಹಾಸನದ ಶ್ರೀ ಸುಧಾರ್ಥಿಯವರು ತಮ್ಮ ಸುಮಾರು ಇಪ್ಪತ್ತೈದು ವರ್ಷಗಳ ಸತತ ಪರಿಶ್ರಮದಿಂದ ಬಹಳ ಅಪರೂಪವಾದ ವಿಚಿತ್ರವಾದ, ವಿಶಿಷ್ಟ..."

ಚಿಂತಾಮಣಿಯ ನರಮೇಧ: ಮಾಧ್ಯಮಗಳ ಹೊಣೆಗಾರಿಕೆಯ ಪ್ರಶ್ನೆಗಳು.....

ಸಂಪಾದಕೀಯ: ಚಿಂತಾಮಣಿಯ ನರಮೇಧ: ಮಾಧ್ಯಮಗಳ ಹೊಣೆಗಾರಿಕೆಯ ಪ್ರಶ್ನೆಗಳು.....: "ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಚ್ಚವಾರ್ಲಪಲ್ಲಿ ಮತ್ತು ಯರ್ರಕೋಟಾದಲ್ಲಿ ಮಂಗಳವಾರ ಕಳ್ಳರು, ಮೋಸಗಾರರು ಎಂದು ಹೇಳಲಾದ ಹತ್ತು ಮಂದಿ ಹತರಾಗಿದ್ದಾರೆ. ಊರಿ..."

Thursday, August 4, 2011

ಒಂದು ಜ್ವಾಲೆ- ಗುರುರಾಜ ಮಾರ್ಪಳ್ಳಿ


ಒಂದು ಜ್ವಾಲೆ- ಗುರುರಾಜ ಮಾರ್ಪಳ್ಳಿ

ಸೂರ್ಯ ಹಟ್ಟುವಾಗ ಹುಟ್ಟಿಕೊಳ್ಳುತ್ತದೆ ಆ ಜ್ವಾಲೆ, ಹೊತ್ತೇರುತ್ತಿದ್ದಂತೆ
ಮೈಯಿಡಿ ಆವರಿಸಿ ಉರಿಯತೊಡಗುತ್ತದೆ.  ಧರ್ಮಗ್ರಂಥಗಳಲ್ಲಿ ಆ ಉರಿಯ ಕುರಿತು
ಎಲ್ಲೂ ಏನು ಹೇಳಿಲ್ಲ, ಮತ್ತು ಕತೆ ಕಾದಂಬರಿ ಕಾವ್ಯಗಳಲ್ಲಿ ಹುಡುಕಿ
ನೋಡಿದೇನೆ.  ಸುದ್ದಿಯಿಲ್ಲ.
ಅದು ವಿರಹದ ಯಾತನೆಯಲ್ಲ.  ಏಕೆಂದರದು ಶೃಂಗಾರವಲ್ಲ.  ಒಂದು
ಭೀಭತ್ಸ
ಯಾತನೆಯಾಗಿದೆ ಅದು ತತ್ವಜ್ಞಾನಿಗಳಲ್ಲಿ ಕೇಳಿದ್ದೇನೆ ಉತ್ತರ ಸಿಕ್ಕಿಲ್ಲ
ದಿನರಾತ್ರಿ
ಕಡಲ ತಡಿಗಳಲ್ಲಿ ಬೆಟ್ಟಗಳ ನದಿ ಬಯಲುಗಳಲ್ಲಿ ಅಲೆದಾಡಿದ್ದೇನೆ
ಎಲ್ಲೂ ನೆಮ್ಮದಿ ದೊರೆಯಲಿಲ್ಲ. ರಾತ್ರಿಯಾದರೆ ನನ್ನೊಡನೆ ಮಲಗುವ
ಎಚ್ಚರವಾದರೆ
ಉರಿಯುವ ಆಜೀವ ಪರ್ಯಂತ ತಪ್ತಯಾತನೆ ಅದು.  ಹುಚ್ಚೆದ್ದು
ಕೆದರುವುದು.
ಅಪರಿಹಾರ್ಯ ಕೆರಳುವುದು ಸೂರ್ಯ ಹುಟ್ಟುವಾಗ ಅದು ಹುಟ್ಟುವುದು
ನಾನು ಸೋತರೆ ಕೇಕೆ ಹಾಕುವುದು, ಪ್ರೇತದಂತೆ ಅಹನರ್ಿಶಿ ಕಾಡುವುದು,
ಜೀವವಿದ್ದರೆ ತಿಳಿಯುತ್ತಿತ್ತು ಅದು ದೇವರಿಗೆ, ಕಲಾವಿದನ ಚಿತ್ರಗಳಲ್ಲಿ
ಬರುವುದು ಬೇಕಾದಂತೆ ಬಣ್ಣಮೆತ್ತಿಕೊಳ್ಳುವುದು ಸವಾಧಿಕಾರಿಯ
ಮನಸ್ಸಿನಲ್ಲಿ
ಭುಗಿಳೇಲುವುದು ನಗ್ನವಾಗಿ, ತಾನು ಆಗಲಾರದ್ದಕ್ಕೆ ಹಪಹಪಿಸುವುದು.
ಅನಿಲ ಕೋಣೆಯಲ್ಲಿ
ಜನ ಸತ್ತಾಗ ತೃಪ್ತಿಕೊಡುವುದು. ಕೂದಲುಗಳ ಕಾಖರ್ಾನೆ ನಡೆಸುವುದು.
ಅದಕ್ಕೆ
ದಾರ್ಶನಿಕನಾಗಲು ಗೊತ್ತು.  ಸವರ್ಾಧಿಕಾರಿಯಾಲು ಕಾತರಿಸುವುದು
ಅದೇ ಹೊತ್ತು
ಸಂನ್ಯಾಸಿಯ ವೇಷ ಧರಿಸುವುದು, ಧರ್ಮವೆಂದು ಉಳಿದವರ ತಲೆತಿನ್ನುವುದು.
ಬುದ್ಧಿ ತಿನ್ನುತ್ತ ಬುದ್ಧಿಜೀವಿಯಾಗುವುದು.  ಚಿಂತನೆಯೆಂದು ಬೊಗಳೆ
ಬಿಡುವುದು.
ಸೂರ್ಯನ ಜತೆ ಹುಟ್ಟುವುದು ಆ ಅತೃಪ್ತಿ.  ಮೊದಲು ತನ್ನನ್ನು
ಆಮೇಲೆ ಉಳಿದವರನ್ನು.
ಚೂರುಚೂರೇ ನುಂಗುವುದು.
ಅರ್ಧ ಒಪ್ಪಿದ ಹೆಣ್ಣನ್ನು ಆಕ್ರಮಿಸುವಂತಎ ಅಂಗಾಂಗ ಕೆಳಿಸುವುದು
ಮಾಂಸದ ತಾವರೆಗಳ ಅರಳಿಸುವುದು.  ಆ ಬೆಟ್ಟಗಳನ್ನೇರಿ
ಕಂದಕಗಳನ್ನಿಳಿದು
ದೇಹ ದೇಹಗಳಲ್ಲಿ ಅವಿತು ತಾನು ಕಬಳಿಸುವುದು. ಲಜ್ಜೆ ಮೀರಿದ
ಭೋಗದಲ್ಲಿ
ಮಾತು ಮೀರಿದ ಯೋಗದಲ್ಲಿ ತನ್ನ ಸಂತಾನಗಳ ಹುಟ್ಟಿಸಿ ಕೃತಾರ್ಥವಾಗುವುದು
ಸೂರ್ಯನ ಜತೆಗೆ ಹುಟ್ಟುವುದು.  ಹಗಲಿಡೀ ತಾನು ಉರಿಯುತ್ತ
ಕಾಯುವುದು.  ಕಾಯುತ್ತೇನೆ ಈಗಲೂ
ರಾತ್ರಿಯಾಗುವುದನ್ನು, ಚಂದ್ರ ಬಾಡುವುದನ್ನು ಉರಿಯಲು ಬಿಟ್ಟಿದ್ದೇನೆ.
ಹಗಲು ತನ್ನಷ್ಟಕ್ಕೆ ಅನರ್ಥಕಾರಿ ಉರಿಯನ್ನು.
ನಾನು ನನ್ನೊಳಗೆ ಅದನ್ನು ಗಮನಿಸಿದ್ದೇನೆ.  ನನ್ನನ್ನ ಜೀವಂತ ತಿನ್ನುವುದನ್ನು ಕಂಡಿದ್ದೇನೆ.  ಅದು ತಿಂದು ಮುಗಿಯಲಾರದ ಕೆಲಸ.
ಆಯುಷ್ಯವಡೀ.  ಎಷ್ಟು ದಿನಗಳಾದರೂ
ನುಂಗುತ್ತಲೇ ಇರುವ ಕೆಲಸ, ಹಾವು ಕಪ್ಪೆಗಳ ನುಂಗಿದಂತೆ, ಕೊನೆಗದು
ಸಾವಾಗಿ ಬರಬಹುದು.  ಚಿಗೆ ಉರಿದು ದೇಹ ಅಳಿದಂತೆ
ಜೀವವನ್ನೆ ನುಂಗಬಹುದು.
ಸೂರ್ಯ ಹುಟ್ಟುವ ಹೊತ್ತು ಅದು ಹುಟ್ಟುತ್ತದೆ.  ಅದು ಜೀವ,
ಮನ್ಮಥ, ಗರುಡ,
ಈಶ್ವರನೆಂದುಕೊಂಡಿದೆ ಪುರಾಣದಲ್ಲಿ.  ಬದುಕುತ್ತದೆ ಎಲ್ಲರ
ಕಾಡುತ್ತ ಇಡಿಯ ಅಂತರಂಗದಲ್ಲಿ.

ವಿಷ್ಣು ಸಹಸ್ರನಾಮ ಕನ್ನಡ ಅರ್ಥ ಸಾರಾಂಶ { -Vishnu Sahasranama }

ವಿಷ್ಣು ಸಹಸ್ರನಾಮ ಕನ್ನಡ ಅರ್ಥ ಸಾರಾಂಶ-Vishnu Sahasranama Meaning in Kannada: Vishnu sahasranama-Phala-Shruti: "ಫಲಶ್ರುತಿಃ ವಿಷ್ಣು ಸಹಸ್ರನಾಮ ಪಠಿಸುವುದರ ಮಹತ್ವ ಹಾಗು ಅದರ ಉಪಯೋಗವನ್ನು ಇಲ್ಲಿ ವಿವರಿಸಲಾಗಿದೆ: ಇತೀದಂ ಕೀರ್ತನೀಯಸ್ಯ ಕೇಶವಸ್ಯ ಮಹಾತ್ಮನಃ | ನಾಮ್ನಾಂ ಸಹಸ್ರಂ ದಿವ್..."

Tuesday, August 2, 2011

ಖ್ಯಾಲು ಖಯಾಲಿಗಳು

ಖ್ಯಾಲು ಖಯಾಲಿಗಳು

ಗುರುರಾಜ ಮಾರ್ಪಳ್ಳಿ

 ನಾನು ಬರೆಯುತ್ತಿರುವುದು ಒಂದೇ ಕವನ
 ಅದು ಜೀವನ..........

ನುಂಗಲಾರದ ಉಗುಳಲಾರದ ಅನುಭವವೊಂದು ತೀವ್ರವಾಗಿ ಚಡಪಡಿಕೆ ಯಾತನೆ ತಲ್ಲಣಗಳಾಗಿ ಮೈಮನಸ್ಸು ಉರಿದೆದ್ದ ಗಳಿಗೆಯಲ್ಲಿ ನಾನು ನನಗೆ ತೋಚಿದ್ದನ್ನು ಈ ಮೂರು ದಶಕಗಳಿಂದ ಬರೆಯುತ್ತ ಬಂದಿದ್ದೇನೆ.  ನನ್ನ ಈ ಅನುಭವಕ್ಕೆ ದೇಶಕಾಲಪಾತ್ರಗಳ ತೆಕ್ಕೆಗೊದಗುವ ಕಾರಣಗಳೇ ಬಹುತೇಕ ಕಾರಣಗಳು.

ನಾನು ಪ್ರತಿಯೊಂದು ಮಾಧ್ಯಮವನ್ನು ಆಯ್ದುಕೊಂಡಾಗಲೂ ಆ ಮಾಧ್ಯಮದ ಮಂದಿ ನನ್ನನ್ನು ಆಕ್ಷೇಪಿಸುವ ರೀತಿಯಲ್ಲಿ ನೋಡಿದ್ದಾರೆ.  ಕಾವ್ಯವೆಂದರೆ ಕನ್ನಡ ಪ್ರೇಮ, ನಾಡುನುಡಿಗಳ ಅಭಿಮಾನವಾಗಿ ಬೆಳೆಸಿಕೊಳ್ಳುವ ಜಾಯಮಾನಕ್ಕೆ ದೂರವಾಗಿರುವ ನಾನು ಸಂಶಯ ಪಿಶಾಚಿಗಳ ಕಿವಿಮಾತುಗಳನ್ನು ಶ್ರದ್ಧೆಯಿಂದ ಕೇಳುತ್ತ ಬಂದವನು.
ವರ್ತಮಾನ ಜಗತ್ತು ಒಂದುಕಡೆ ಭೀಭತ್ಸ, ಭಯಾನಕ ಮತ್ತು ಅನೈತಿಕತೆಯ ಅಗ್ನಿಕುಂಡದಂಥ ಮಾಧ್ಯಮಗಳ ತೆಕ್ಕೆಗೆ ಜನರನ್ನು ಪತಂಗಗಳಂತ DPÀ¶ð¸ÀÄwÛgÀĪÁUÀ ರಾಜಕಾರಣ, ಧರ್ಮ, ಸಿದ್ಧಾಂತಗಳ ಕ್ಷೇತ್ರಗಳು, ಭ್ರಷ್ಟತೆ, ಅಪಮೌಲ್ಯಗಳಿಂದ ಆಷಾಢಭೂತಿ ಮುಖವಾಡಗಳನ್ನು ಕಟ್ಟಿಕೊಂಡಿರುವಾಗ ಇದರಲ್ಲಿ ಸಲೀಸಾಗಿ ಈಜಾಡಿ ಹಳೆಮನೆಯ ಮಂದಿಯಾಗಿ ರೊಮ್ಯಾಂಟಿಕ್ ಯುಗದಲ್ಲೆ ಕಾಲಕಳೆಯುವುದು ನನಗೆ ಸಾಧ್ಯವಿಲ್ಲ.

ಅನುಭೂತಿ, ಅನುಭವ, ಆಧ್ಯಾತ್ಮ, ತತ್ವಜ್ಞಾನ ಏನೇ ಹೇಳಿದರೂ ವರ್ತಮಾನದ ತೆಕ್ಕೆಗೊಗ್ಗುವ ಅನುಭವಗಳ ಮಿತಿಯಲ್ಲೆ ವ್ಯಕ್ತಿ ಬಾಳಬೇಕಾಗುತ್ತದೆ.  ಒಂದು ವ್ಯವಸ್ಥಿತ ಕಲ್ಪನೆಯ ಶಿಷ್ಠಸಮಾಜದಲ್ಲಿ ಸಾಹಿತ್ಯ, ಕಾವ್ಯ, ಚುತ್ರ, ನೃತ್ಯಗಳಂತಹ ಮಾಧ್ಯಮಗಳಿಗೆ ಒಂದು ದೀರ್ಘ ಚರಿತ್ರೆ, ಪರಂಪರೆ, ಸಂಸ್ಕೃತಿ, ಸಂಪ್ರದಾಯಗಳಿಗಿರುವ ಹಾಗೆಯೇ ಸೃಜನಶೀಲತೆ
¥Àæ0iÉÆÃUÀ²Ã®vÉUÀ½UÉ 
ಸ್ವಚ್ಛಂದ ಸೃಷ್ಟಿಯ ಸಾಧ್ಯತೆಗಳಿಗೂ ಈ ಮಾಧ್ಯಮಗಳು ತೆರೆದುಕೊಳ್ಳಬೇಕೆಂಬ ಅರಿವು ಇದರಲ್ಲಿ ಕೆಲಸ ಮಾಡುವವರಿಗೆ ಕಡಿಮೆಯಾಗುತ್ತ ಬಂದಿವೆ.

ವೈಯಕ್ತಿಕವಾಗಿ ಬಹಿರಂಗ ವೇದಿಕೆಗಳನ್ನು ಕಂಡುಕೊಂಡಿರುವ ಉಚ್ಛೃಂಖಲ ಅಶ್ಲೀಲತೆ ಯಾದೃಚ್ಛಿಕವೇನಲ್ಲ.  ತಾಯಿಯ ಒಡಲಿನಿಂದ ಜಗತ್ತಿಗೆ ಕಣ್ಣು ಬಿಡುವಷ್ಟರಲ್ಲಿ ಮನುಷ್ಯ ಜೀವದ ಸ್ವಾತಂತ್ರ್ಯಗಳನ್ನು ಅಪಹರಿಸಿ ಸಿದ್ಧ ಮಾದರಿಯ ಶಿಕ್ಷಣ ಸಂಸ್ಕೃತಿಯ ರೂಪಕಗಳನ್ನು ಪಡೆಯುವಂಥ ಒಂದು DyðPÀ ವ್ಯವಸ್ಥೆ ಅಸಮಾನತೆಗೆ ತಾಯಿಯ ಬಸಿರಲ್ಲೆ ದೀಕ್ಷೆಕೊಡುವಂತೆ ಮಾಡುತ್ತದೆ.  ದೇಶ, ಕಾಲ, ಪಾತ್ರಗಳಲ್ಲಿ ಹೆಸರು ಗುರುತಿನ ಚೀಟಿ, ¥Á¸ï¥ÉÇÃmïð  ಹೊಂದದೆ ಮನುಷ್ಯ ವಿಶ್ವಮಾನವನಾಗುವುದು ಸಾಧ್ಯವೇ ಇಲ್ಲ.  ಇದನ್ನು ತಾನು ಸಾಕುವ ಪ್ರಾಣಿಗಳಿಗೂ ಅನ್ವಯಿಸುತ್ತದೆ ಮನುಷ್ಯ ಸಮಾಜ.  ಈ ವಿಚಿತ್ರಗಳನ್ನು ಪ್ರಶ್ನಿಸಿದರೆ ಪ್ರಜ್ಞೆ ತೊಳಲಾಡತೊಡಗುತ್ತದೆ, ಪ್ರಜ್ಞೆಗೆ ಅವಜ್ಞೆ ಕಾಡುತ್ತದೆ.  ವಿವೇಕ
²ÃµÁð¸À£À ಹಾಕಿ - ನಿಲ್ಲುತ್ತದೆ.

ಪ್ರಶ್ನೆಗಳು ನಮಗೆ ಪ್ರತಿಧ್ವನಿಗಳಾಗಿ ಅಪ್ಪಳಿಸುವ ಸಮಾಜದಲ್ಲಿ ಕ್ಲೀಷೆಗಳನ್ನು ಪ್ರೀತಿಸಲು ಸಾಧ್ಯವಾಗದಿದ್ದರೆ ನಿತ್ಯಜೀವನ ನರಕವಾಗಿ ಕಾಡುತ್ತದೆ.  ಶಿಕ್ಷಣಕಿಲ್ಲದ ಅನುಕೂಲತೆ ಕ್ಷಿಪಣಿಗಳನ್ನು ತಯಾರಿಸಿಡಲೂ, ಹೊಟ್ಟೆ ಬಟ್ಟೆಗಿಲ್ಲದ ಅನ್ನ ಗೋದಾಮಿಗಳಲ್ಲಿ ಕೊಳೆಯುವುದೂ ಫ್ಯಾಶನ್ನಾಗುತ್ತದೆ.  ನೋಬೆಲ್ ವಿಜೇತ ಕಾಲ ತುಲನೆಯ ಅರ್ಥಶಾಸ್ತ್ರಜ್ಞರಿಗೆ ಪ್ರಜಾಪ್ರಭುತ್ವ ಅಪ್ಯಾಯಮಾನವಾಗಿ ಕಂಡೀತು.  ಎಲ್ಲ ಶೋಧನೆಗಳ ಮೌಲ್ಯಮಾಪನಗಳಿಗೆ ಶ್ರೇಷ್ಠಾತಿಶ್ರೇಷ್ಠ ಎಂಬ ಗ್ರಹಿಕೆಯ ರತ್ನಪ್ರಶಸ್ತಿಗಳು, ನೋಬೆಲ್ಲುಗಳು ಕೊನೆಗೂ ಕಾರಣಗಳಾಗುತ್ತವೆ.

ಆರೇಳು ದಶಕಗಳ ಹಿಂದೆ ಬಂಗಾಳದ ರೇ ¤«Äð¹zÀ ಚಿತ್ರಗಳ ಕಾಲದಲ್ಲಿ ಕ್ಯಾಮರಾದ ಟೆಕ್ನಾಲಜಿ ಈಗಿನಂತೆ ಬೆಳೆದಿರಲಿಲ್ಲ.  ಬಸ್ಸಿನಲ್ಲಿ ತಂಡಗಳನ್ನ ಕಟ್ಟಿಕೊಂಡು ಪ್ರಯಾಣಿಸಿ ಒಡವೆ ಒತ್ತೆಯಿಟ್ಟು ¤«Äð¹zÀ ಈ ಚತ್ರಗಳಲ್ಲಿ ಕಾಣಿಸುವ ಕ್ಯಾಮರಾದ ಕಣ್ಣಿನ ಜೀವಂತಿಕೆ ಹೆಲಿಕಾಪ್ಟರುಗಳಲ್ಲಿ ಜೋತಾಡುತ್ತ ಶೂಟಿಂಗ್ ಮಾಡುವ ಅತ್ಯಾಧುನಿಕತೆಯಲ್ಲಿ ಯಾಕೆ ಕಾಣುವುದಿಲ್ಲ?  ಟೆಕ್ನಾಲಜಿಯ ಅಪಾಯಕ್ಕೆ ಮಾನವೀಯತೆ ಧ್ವಂಸವಾಗುತ್ತ ಬಂದಿದೆ.  ನನ್ನ ಕಾಲದ ಬದುಕಿನ ಬಗ್ಗೆ ನನ್ನ ಎಡಗೈ ಹೆಬ್ಬೆಟ್ಟಿನ ರುಜು ಹಾಕದೇ ಇರುವುದಕ್ಕೆ ನನಗೆ ನೂರಾರು ಕಾರಣಗಳಿವೆ.  ಭಾಷೆ, ಕಾವ್ಯ, ಸಾಹಿತ್ಯ, ಸಂಗೀತ ಯಾವ ಮಾಧ್ಯಮಗಳೂ ಇರದ ಜೀವರಾಶಿಗಳಲ್ಲಿ ಬದುಕಿನಲ್ಲೆ ಕಾವ್ಯವಿದೆ ಸೌಂದರ್ಯವಿದೆ ಎಂಬುದನ್ನು ಕಂಡಿರುವ ನನಗೆ ಮನುಷ್ಯ ಸಮಾಜದ ಕುರಿತು ಕೆಲವು ಮೂಲಭೂತ ಸಂಶಯ ಮತ್ತು ಆಕ್ಷೇಪಗಳಿವೆ.  ಅದನ್ನು ಬರೆಯಲು ನಾನು ಬಳಿಸಿಕೊಂಡ ಅವಕಾಶವನ್ನು ಬಳಸದೇ ಇದ್ದರೂ ಇರಬಹುದಿತ್ತು.  ಆದರೆ ಎಲ್ಲವೂ ನಮ್ಮ ಬುದ್ಧಿಯ ನಿಕಷದಲ್ಲೆ ಉಳಿದುಬಿಡಬಾರದೆಂದೂ ಅನಿಸುತ್ತದೆ.

ಚೆನ್ನಮಲ್ಲಿಕಾರ್ಜನಯ್ಯ ಇರಿದಲಗು
ಒಡಲಲ್ಲಿ ಮುರಿದು ಹೊರಳುವೆನ್ನಳಲು
ನೀವೆತ್ತ ಬಲ್ಲಿರೇ

ಅನ್ನುವ ಅಕ್ಕನ ವಚನಗಳಲ್ಲಿ ಸೃಜನಶೀಲತೆಯ ತೊಳಲಾಟದ ಸ್ಥಿತಿಗತಿಗಳಿವೆ ಎಂಬ ಅನುಭವ ನನ್ನದು.  ಈ ಹೊರಳಾಟದ ಇರಿತಕ್ಕೆ ಮುಖ ತಿರುಗಿಸಿಬಿಡುವವರೇ ಹೆಚ್ಚು.

ಮಾಧ್ಯಮಗಳಿಗಾಗಿಯೇ ಜೀವನವನ್ನು ಮುಡಿಪಿಟ್ಟು ಬದುಕಿಬಂದ ಬದುಕುತ್ತಿರುವ ಸಾಮಾಜಿಕ ಬದ್ಧತೆಯ ವಾತಾವರಣದಲ್ಲಿ ನನ್ನಂಥವನ ಧೋರಣಿಗೆ ಅಗಾಧ ಒಂಟಿತನ ದೇಣಿಗೆಯಾಗಿ ಬರುತ್ತದೆ. ಆದರೆ ವ್ಯಕ್ತಿ ತನ್ನ D0iÀÄĪÀiÁð£À  ಇಡೀ ಬೆನ್ನುತಟ್ಟುವವರಿಗಾಗಿ ಕಾಯಬಾರದು.  (ಜೀವ ಜೀವಾನಾನುಭವ ನಿರಪೇಕ್ಷವಾಗುವುದರ ಕಡೆಗೆ ಸಾಗುವುದೇ ಅರಿವಲ್ಲವೇ?)  ಒಂಟಿ ವ್ಯಕ್ತಿ ಏಕಾಂಗಿಯಾಗುವುದರ ಜತೆಗೆ ಸಮಾಜ, ಜಗತ್ತು ಕೂಡಾ ಒಂಟಿ ಅನ್ನುವುದರ ಅರಿತು ಮೂಡುವುದು ಮಾಧ್ಯಮಗಳ ಮೂಲಕವೇ ಹೊರತು ಸಿದ್ಧಾಂತ, ತತ್ವಜ್ಞಾನ, ಧರ್ಮ, ರಾಜಕಾರಣಗಳ UÉÆö×
 ಸಮಾವೇಶಗಳಲ್ಲಿ ಖಂಡಿತಾ ಅಲ್ಲ.

UÀÄgÀÄgÁd ªÀiÁ¥Àð½’s  ಖ್ಯಾಲು ಖಯಾಲಿಗಳು
ಪ್ರ - ರಜತ ಸಾಹಿತ್ಯ
ನಂ.`14, ಸೀತಮ್ಮ ಅನಂತಯ್ಯ ಕಲ್ಯಾಣ ಮಂದಿರದ ಹತ್ತಿರ
4ನೇ ಅಡ್ಡ ರಸ್ತೆ, ಓ.ಟಿ. ರಸ್ತೆ, ಶಿವಮೊಗ್ಗ - 577 202
2011 -ರೂ.165/-

"Khyall-Khayaligalu"
(Collection of Poetry)
      By
Gururaja Marpalli

Published by

Smt. Jayanthi Ramanath, on behalf of Rajatha Sahitya
# 14, Near Seethamma Ananthaiah, Kalyana Mandira
4th Cross, O.T. Road, Shimoga 577 202 Mob.: 9844420216
First Edition: 2011
Pages VI+322+iv
Price: Rs.165