Sunday, January 15, 2012

ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು...ದಿನೇಶ್ ಅಮೀನ್ ಮಟ್ಟು.

1 comment:

  1. ಜನ್ವರೀ 16, 2012 ರಂದು ಪ್ರಕಟವಾದ "ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು.... " ಎಂಬ ಲೇಖನದ ಸಂಬಂಧವಾಗಿ ನನ್ನ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿದ್ದೇನೆ.
    ಒಂದು ಕಡೆ ಜೀಸಸ್ ಬಗ್ಗೆ ಕನಿಕರದಿಂದ ಸ್ವಾಮಿ ವಿವೇಕಾನಂದರು ಮಾತನಾಡಿದ್ದರು ಎಂದು ಹೇಳುತ್ತೀರಿ, ಇನ್ನೊಂದು ಕಡೆ ಮುಸ್ಲಿಮ್ ಬಾಂಧವಾರ ಮನೆಯಲ್ಲಿ ಊಟ ಮಾಡುವುದರ ಸಲುವಾಗಿ ವಿವೇಕಾನಂದರು ಹೋರಾಡಿದ್ದರು ಎಂದು ಹೇಳುತ್ತೀರಿ, ಇನ್ನೊಂದು ಕಡೆ ಹಿಂದುತ್ವದ ನ್ಯೂನತೆಗಳ ಬಗ್ಗೆ ವಿವೇಕಾನಂದರ ನುಡಿದ ಒಂದೆರಡು ಆಯ್ದ ಉದಹರಣೆಗಳನ್ನು ಮಾತ್ರ ಪ್ರಸ್ತಾಪಿಸುತ್ತೀರಿ. ಈ ಮೂಲಕ ಹೇಳಬೇಕೆಂದಿರುವುದಾದರೂ ಏನು ಗೊತ್ತಾಗುತಿಲ್ಲ? ಹಿಂದೂಗಳು ಪೂಜನೀಯರೆಂದು ಆಧರಿಸುವ ವಿವೇಕಾನಂದರೇ ಹಿಂದುತ್ವವನ್ನೂ, ಹಿಂದೂಗಳನ್ನೂ ತುಚ್ಚವಾಗಿ ಕಂಡಿದ್ದಾರೆ ಎಂದು ತೋರಿಸಬೇಕೆಂಬ ಪ್ರಯತ್ನವಿರಬಹುದೇ ಎಂದು ತಿಳಿದುಕೊಂಡರೆ, ಇನ್ನೊಂದು ಕಡೆ ವಿವೇಕಾನಂದರು ಸಾಮಾನ್ಯ ವ್ಯಕ್ತಿ, ಅವರಿಗೆ ಸಾಮಾನ್ಯರಿಗೆ ಇರುವ ಎಲ್ಲ ನ್ಯೂನತೆಗಳು ಇದ್ದವು ಎಂಬ ಕಲ್ಪನೆ ತರಿಸುವ ಪ್ರಯತ್ನಾವಿರುವಂತೆ ಭಾಸವಾಗುತ್ತದೆ. ನಿಮ್ಮ ಲೇಖನ ಪೂರ್ಣರೀತಿಯಿಂದ ವಿರೋದಾಭಾಸದಿಂದ ತುಂಬಿದಂತೆ ತೋರುತ್ತದೆ. ಇಂತಹ ಒಂದು ಅಭಿಪ್ರಾಯವನ್ನು ವಿವೇಕಾನಂದರ ಬಗ್ಗೆ ಅಲ್ಪ ಜ್ಞಾನವಿರುವವರೂ ಕೂಡ ನುಡಿಯಲು ಸಾಧ್ಯವಿಲ್ಲ, ಆದರೆ ಈ ರೀತಿ ಅಭಿಪ್ರಾಯ ಕೇವಲ ಸಮಾಜದಲ್ಲಿ ಅಸ್ಥಿರತೆ ತರುವ ಉದ್ದೇಶವಿರುವವರಿಂದ ಮಾತ್ರ ಸಾಧ್ಯ.

    ನಿಮ್ಮ ಉದ್ದೇಶ ಹಿಂದೂಗಳನ್ನು ಅವಹೇಳನ ಮಾಡುವುದೋ ಅಥವಾ ಹಿಂದೂಗಳ ಆದರ್ಶಪ್ರಾಯರಾದ ವಿವೇಕಾನಂದರನ್ನು ಅವಹೇಳನ ಮಾಡುವುದೋ?
    ಅವಹೇಳನ ಮಾಡುವ ಉದ್ದೇಶವಿದೆಯಂದು ಕೊಳ್ಳಲು ಹೋದರೇ, ಅದನ್ನೂ ಧೃಢತೆ ಇಂದ ಮಾಡಲಾಗದೇ, ಹಿಂದೂಗಳು ತಿರುಗೇಟು ನೀಡಬಹುದೆಂಬ ಅಂಜಿಕೆಯಿಂದ ಕೊನೆಯ ಎರಡು ಮೂರು ಸಾಲಿನಲ್ಲಿ ಕೆಲವು ಹಿತನುಡಿಗಳನ್ನು ಹೇಳಿ ತ್ಯಾಪೆ ಕೆಲಸ ಮಾಡಿದ್ದೀರಿ.

    ನಿಮ್ಮ ಲೇಖನ ಪ್ರಜಾವಾಣಿ ಪತ್ರಿಕೆಯಲ್ಲಿ ಬರುವ ಲೇಖನಗಳ ಗುಣಮಟ್ಟ ಕುಗ್ಗುತ್ತಿರುವ ಸಂಕೇತವೇ?

    ReplyDelete