ಕಾವ್ಯ ಮನೆ ಪ್ರಕಾಶನ "ಕಥೆಗಾರರಿಂದಲೇ ಕಥಾಸ್ಪರ್ಧೆ 2017" ಕನ್ನಡ ಸಾಹಿತ್ಯದ ಒಂದಿಷ್ಟು ಸಣ್ಣ ಕಥೆಗಾರರು ಸೇರಿ ಮಾಡುತ್ತಿರುವ ವಿಭಿನ್ನ ಪ್ರಯತ್ನ ಇದು. ಸಾಮಾನ್ಯವಾಗಿ ಕಥೆಗಾರರು ತಮ್ಮ ಕಥೆಗಳಿಗೆ ಬಹುಮಾನ ಪಡೆದುಕೊಳ್ಳುವುದು ಗೊತ್ತು. ಆದರೆ, ನಾವೂ ಯಾಕೆ ನಮ್ಮ ಹೊಸ ಕಥೆಗಾರರಿಗೆ ಗುರುತಿಸಿ ಪ್ರೋತ್ಸಾಹಿಸಬಾರದು ಎಂದು ಸ್ವತಃ ಕತೆಗಾರರೇ ಮುಂದೆ ಬಂದು ಈ ಕಥಾ ಸ್ಪರ್ಧೆಯ ಪ್ರಾಯೋಜಕರಾಗಿದ್ದಾರೆ. *ಬಹುಮಾನಗಳ ವಿವರ* ಪ್ರಥಮ - 5000/- ದ್ವಿತೀಯ- 3000/- ತೃತೀಯ - 2000/- ಜೊತೆಗೆ ಮೆಚ್ಚುಗೆ ಪಡೆಯುವ 8 ಕಥೆಗಳಿಗೆ ಪುಸ್ತಕ ಬಹುಮಾನ ನೀಡಲಾಗುವುದು. *ಆಯೋಜಕರು* ಹಿರಿಯ ಕಥೆಗಾರರಾದ ಕೇಶವ ಮಳಗಿ , ಬಾಳಾಸಾಹೇಬ ಲೋಕಾಪುರ, ಯುವ ಕಥೆಗಾರರಾದ ಚೀಮನಹಳ್ಳಿ ರಮೇಶಬಾಬು, ಹನುಮಂತ ಹಾಲಿಗೇರಿ ಈ ಕುರಿತು ಕಾವ್ಯಮನೆ ಮತ್ತು ಅಬ್ದುಲ್ ಹೈ.ತೋ ಅವರೆಗೆ ಸಂಪರ್ಕಿಸಿದಾಗ ಸಂಭ್ರಮದಿಂದಲೇ ಪ್ರಾಯೋಜಕರಾಗಲು ಒಪ್ಪಿಕೊಂಡಿದ್ದಾರೆ, ಮತ್ತಷ್ಟು ಕಥೆಗಾರರರು ನಮ್ಮ ಜೊತೆ ಸಹಕಾರ ನೀಡಲು ಮುಂದೆ ಬಂದಿದ್ದರಾದರೂ ನಮಗೆ ಬೇಕಾದ ಸಂಪನ್ಮೂಲ ಈ ನಾಲ್ವರ ಕಥೆಗಾರರಿಂದಲೇ ಸಿಕ್ಕಿದ್ದರಿಂದ ನಾವು ನಯವಾಗಿಯೇ ನಿರಾಕರಿಸಿದೆವು. ಕಥಾಸ್ಪರ್ಧೆಯ ನಿಯಮಗಳು:- ಆಗಸ್ಟ್ 10, 2017 ರೊಳಗಾಗಿ ಕಥೆ ಕಳುಹಿಸಬೇಕು. 1. ಯಾವುದೇ ಪದ ಮಿತಿಯಾಗಲಿ ಇಲ್ಲ. ಹಾಗೂ ವಯೋಮಾನದ ನಿರ್ಬಂಧನೆಯಿಲ್ಲ. ಒಬ್ಬರೂ ಒಂದೇ ಕಥೆ ಕಳುಹಿಸಲ್ಲವಕಾಶ. 2. ನಿರ್ಣಾಯಕರ ಆಯ್ಕೆಯೆ ಅಂತಿಮ. ಸ್ಪರ್ಧೆಗೆ ಬಂದ ಕಥೆಗಳನ್ನು ಯಾವುದೇ ರೀತಿಯಲ್ಲಿ ಬಳಸಿಕೊಳ್ಳುವ ಹಕ್ಕು ಆಯೋಜಕರದಾಗಿರುತ್ತದೆ. 3. ನಿಮ್ಮ ಕಥೆಯು ಈ ಹಿಂದೆ ಎಲ್ಲಿಯೂ ಪ್ರಕಟವಾಗಿರಬಾರದು. ನುಡಿಯಲ್ಲಿ ಟೈಪ್ ಮಾಡಿ ಕೆಳಕಂಡ ಇಮೇಲ್ ವಿಳಾಸಕ್ಕೆ ನಿಮ್ಮ ಕಥೆ ಕಳುಹಿಸಬೇಕು. ಜೊತೆಗೆ ನಿಮ್ಮ ಪರಿಚಯ ಪತ್ರ ಇರಲಿ. ಕೈಬರಹದಲ್ಲಿ ಕಳುಹಿಸುವರು ಕೆಳಕಂಡ ವಿಳಾಸಕ್ಕೆ ಕಳುಹಿಸಬಹುದು. ಅಕ್ಷರಗಳು ತಿಳಿಯುವಂತಿರಲಿ. Xerox ಪ್ರತಿಗಳು ಸ್ವೀಕರಿಸುವುದಿಲ್ಲ. *ನಗದು ಬಹುಮಾನದೊಂದಿಗೆ ಕಾವ್ಯ ಮನೆಯ ಪ್ರಶಸ್ತಿ ಪತ್ರ ಸಹ ನೀಡಲಾಗುವುದು * " ಕಥೆಗಾರರಿಂದಲೆ ಕಥಾಸ್ಪರ್ಧೆ"ಯೆಂದು ಲಕೋಟೆ ಮೆಲೆ ಬರೆಯಿರಿ. * khumnabaade580@gmail.com ವಿಳಾಸ: - ಕಾವ್ಯ ಮನೆ ಪ್ರಕಾಶನ, ಪ್ಲಾಟ್ ನಂ-220, ಶಿವ ನಿಲಯ, 1ನೇ ಬ್ಲಾಕ್, ವಿರೇಂದ್ರ ಪಾಟೀಲ ಬಡಾವಣೆ, ಸೇಡಂ ರೋಡ್, ಕಲಬುರ್ಗಿ -585105. 7829464653. * ಸ್ಪರ್ಧೆ ನಿರ್ವಾಹಕರು ಕಪಿಲ ಪಿ ಹುಮನಾಬಾದೆ, ಸಂಚಾಲಕರು,ಕಾವ್ಯ ಮನೆ, ಕಲಬುರ್ಗಿ ಸಲಹೆಗಾರರು ಹನುಮಂತ ಹಾಲಿಗೇರಿ, ಕಥೆಗಾರರು, ಬಾಗಲಕೋಟೆ. *ಕಥೆಗಾರರಿಂದಲೆ ಕಥೆಗಾರರಿಗಾಗಿ ಕಥಾಸ್ಪರ್ಧೆ* # ಕಾವ್ಯ ಮನೆ. ದಯವಿಟ್ಟು ನಿಮ್ಮ ಸಾಹಿತ್ಯ ಆಸಕ್ತರಿಗೆ ಶೇರ್ ಮಾಡಿ ಅವರು ಸ್ಪರ್ಧೆಯಲ್ಲಿ ಭಾಗವಸಿಸಲಿ.....
ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
No comments:
Post a Comment