ಹಾಸು ಬೀಸು -ಶತಾವಧಾನಿ ಆರ್. ಗಣೇಶ್
ವಸಂತ ಪ್ರಕಾಶನ , ಬೆಂಗಳೂರು
ಮೊದಲ ಮುದ್ರಣ -2009
Emai-vasantha__prakashana@rediffmail.com
" ಹಳಗನ್ನಡದಲ್ಲಿ ತದ್ಭವ ನಿರ್ಮಾಣವು ತುಮ್ಬ ಸ್ವೋಪಜ್ಞತೆಯಿಂದ , ಸೌದರ್ಯಪ್ರಜ್ಞೆಯಿಂದ ಬಂದಿದೆ. ಮುಖ್ಯವಾಗಿ ತತ್ಸಮದ ಉಚ್ಚಾರಣಾ ಕ್ಲೇಶಗಳೂ , ಶ್ರುತಿಕಟುತ್ವಗಳೂ ನಿವಾರಿತವಾದ ಪರಿ ವಿಶೇಷಾಧ್ಯಯನಕ್ಕೆ ಯೋಗ್ಯ.
ಆದುದರಿಂದಲೇ ತಿಸುಳಿ { ತ್ರಿಶೂಲಿ } , ಮಿಡ [ ಮೃಡ } ,ಅಚ್ಚರಸಿ { ಅಪ್ಸರಸಿ ] , ಮಂಜರ { ಮಾರ್ಜಾರ } , ಒಲ್ಲಣಿಗೆ { ಆರ್ದ್ರ ವಸ್ತ್ರ ] , ಬಿಯದ [ ವ್ಯಾಧ }, ಬಗ್ಗ [ ವ್ಯಾಘ್ರ } ಮುಮ್ತಾದ ಸಾವಿರಾರು ಶಬ್ದಗಳು , ಸ್ವಂತಿಕೆ , ಸಂಕ್ಷಿಪ್ತತೆ, ಮತ್ತು ಶ್ರುತಿ ಸೌಖ್ಯಗಳಿಂದ ಕೂಡಿವೆಯಲ್ಲದೆ , ಯಾವುದೋ ತತ್ಸಮದ ವ್ಯಾಕರಣವಿರುದ್ದ ರೂಪವೆಂಬ ಉದ್ವೇಜನವಾಗುವುದಿಲ್ಲ. ಈ ಕಾರಣದಿಂದ ಹಳಗನ್ನಡಕ್ಕೆ ಹೊಸಗನ್ನಡದಲ್ಲಿ ಕಾಣದಂಥ ನಮ್ಯತೆಯುಂಟು, ಮಾಧುರ್ಯವೂ ಉಂಟು."
- ಶತಾವಧಾನಿ ಆರ್. ಗಣೇಶ್
No comments:
Post a Comment