stat Counter



Saturday, September 27, 2014

ಕವಿ ಶಂಕರ ಕಟಗಿ ನಿಧನ

ಸ್ನೇಹಿತರೆ,
ನನ್ನ ಕವಿ ಗೆಳೆಯ ಶಂಕರ ಕಟಗಿ ಶನಿವಾರ ರಾತ್ರಿ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದ ಸುದ್ದಿಯನ್ನು ಕವಿ ಸತ್ಯಾನಂದ ಪಾತ್ರೋಟ ತಿಳಿಸಿದ್ದಾರೆ.
ಮಹತ್ವಾಕಾಂಕ್ಷೆಯ ಈ ಕವಿಯ ಸಾವು ನನಗೆ ಹಾಗೂ ನನ್ನ ಸಂಗಾತಿ ಎಚ್ ಎಲ್ ಪುಷ್ಪಾಗೆ Sad News... Rip...
ಪ್ರೀತಿಯ ಮುನಿಸು ಜಗಳ ವಾದ ವಿವಾದ ವಗ್ವಾದಗಳ ನಡುವೆ ನಮ್ಮದು ಮರೆಯದ ಗೆಳೆತನ. ಹೊಸ ಕವನ ಬರೆದರೆ ಹತ್ತಾರು ಕವಿ ಮಿತ್ರರಿಗೆ ಓದಿ ಹೇಳದಿದ್ದರೆ ಸಮಾಧಾನ ಇಲ್ಲ. ಬಂಡಾಯ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ಗೆಳೆಯ ಕನಸುಗಾರ."ಮುಸ್ಸಂಜೆ ನೆರಳಲ್ಲಿ", "ಗೆಳೆಯ ನಾದ", " ದಟ್ಟಿ ದಾವಣಿ" ಮೊದಲಾದವು ಕವನ ಸಂಕಲನ.
Wednesday 1st October, jagmohan palace - ಮೈಸೂರಲ್ಲಿ ನಡೆವ ಕವಿಗೋಷ್ಟಿಯಲ್ಲಿ ಅವನು ಭಾಗವಹಿಸಲು with Family... Wife, Daughter .... ಬೆಂಗಳೂರು ತಲುಪಿದ್ದ ಗೆಳೆಯನ ಫೋನು ನನಗೆ ಬಾರಲೆ ಇಲ್ಲ. ಬೆಳಗ್ಗೆ ಬಂದು ಎರಗಿದ್ದು ಅವ್ನ ನಂಬಲಾರದ "ಸಾವು".
ಈ ಸಾವು ನ್ಯಾಯವೇ?
ನಿಜ,
ಯಾರು ಶಾಶ್ವತ ಅಲ್ಲ. ಎಲ್ಲರೂ ಹೋಗಲೇ ಬೇಕು...
ಆದರೆ 
ಗೆಳೆಯ ಶಂಕರ ಕಟಗಿ ಬೇಗ ಹೋಗಿಬಿಟ್ಟ - ಆರ್. ಜಿ. ಹಳ್ಳಿ ನಾಗರಾಜ { Face Book  ನಿಂದ }

No comments:

Post a Comment