stat Counter



Tuesday, January 17, 2017

ಕಡೆಂಗೋಡ್ಲು ಸ್ಮಾರಕ ಕಾವ್ಯ ಸ್ಪರ್ಧೆ -2017- ಹಸ್ತಪ್ರತಿ ಆಹ್ವಾನ

ಕಡೆಂಗೋಡ್ಲು ಸ್ಮಾರಕ ಅಪ್ರಕಟಿತ ಕವನ ಸಂಕಲನಗಳ ಸ್ಪರ್ಧೆ - 2017

ಕಳೆದ 1978ರಲ್ಲಿ ಸ್ಥಾಪಿತವಾದ ಕಡೆಂಗೋಡ್ಲು ಸ್ಮಾರಕ ದತ್ತಿ ಸಮಿತಿಯು ಕಾವ್ಯ ಪ್ರಕಟನೆಗೆ ನೆರವು ನೀಡಿ ಪೆÇ್ರೀತ್ಸಾಹಿಸುವ ಉದ್ದೇಶದಿಂದ 10,000/-ರೂಪಾಯಿಗಳ ಒಂದು ವಾರ್ಷಿಕ ಬಹುಮಾನವನ್ನು ನೀಡುತ್ತಿದೆ. ಹಸ್ತಪ್ರತಿ ಹಂತದಲ್ಲಿರುವ 40ಕ್ಕೆ ಕಡಿಮೆ ಇಲ್ಲದ ಕವಿತೆಗಳ ಅತ್ಯುತ್ತಮ ಸಂಗ್ರಹಕ್ಕೆ ಈ ಬಹುಮಾನವನ್ನು ಕೊಡಲಾಗುವುದು.  ಮೂರು ವಿಮರ್ಶಕರುಳ್ಳ ಒಂದು ತಜ್ಞರ ಸಮಿತಿ ಬಹುಮಾನಕ್ಕೆ ಅರ್ಹವಾದ ಕೃತಿಯನ್ನು ಆಯ್ಕೆ ಮಾಡಲಿದೆ.
ಬಹುಮಾನದ ಉಳಿದ ನಿಯಮಗಳು ಹೀಗಿವೆ:-
ಕಳೆದ ಐದು ವರ್ಷಗಳಲ್ಲಿ ಬರೆದ ಕವಿತೆಗಳು, ಬಿಡಿಯಾಗಿ ಪತ್ರಿಕೆಗಳಲ್ಲಿ ಪೂರ್ವ ಪ್ರಕಟಿತವಾದುವು ಇರಬಹುದು, ಹೊಸದಾಗಿ ರಚಿತವಾದುವೂ ಇರಬಹುದು.
ತಮ್ಮ ಕವನ ಸಂಕಲನದಲ್ಲಿ ಕನಿಷ್ಠ 40 ಕವನಗಳು ಇರಲೇ ಬೇಕು.
ಕವನ ಸಂಕಲನದ ಹೆಸರನ್ನು ಹೊರಭಾಗದಲ್ಲಿ ಸ್ಪಷ್ಟವಾಗಿ ನಮೂದಿಸಿರಬೇಕು.
ತಮ್ಮ ಕವನಗಳು ಯಾವುದೇ ಕವನಸಂಕಲನದಲ್ಲಿ ಈ ಮೊದಲು ಪ್ರಕಟಗೊಂಡಿರಬಾರದು.
ಸ್ಪರ್ಧೆಯಲ್ಲಿ ಭಾಗವಹಿಸುವವರ ಹೆಸರು ಮತ್ತು ವಿಳಾಸಗಳು ಪ್ರತ್ಯೇಕ ಹಾಳೆಯಲ್ಲಿರಬೇಕು ಹೊರತು ಕವನ ಸಂಕಲನದ ಯಾವ ಭಾಗದಲ್ಲೂ ಇರಕೂಡದು (ಇದ್ದಲ್ಲಿ ಕವನ ಸಂಕಲನವನ್ನು ತಿರಸ್ಕರಿಸಲಾಗುವುದು).
ಕವನ ಸಂಕಲನವನ್ನು ಮರಳಿ ಪಡೆಯಲು ಸಾಕಷ್ಟು ಅಂಚೆಚೀಟಿಯನ್ನು ಕಡ್ಡಾಯವಾಗಿ ಲಗತ್ತಿಸಿರಬೇಕು.
ಲೇಖಕರು ತಮ್ಮ ಸಂಗ್ರಹದ ಒಂದು ನಕಲು ಪ್ರತಿಯನ್ನು (ಹಸ್ತ ಯಾ ಕಂಪ್ಯೂಟರ್ ಮುದ್ರಿತ) 2017 ಫೆಬ್ರವರಿ 28ರ ಒಳಗೆ ಸಮಿತಿಯ ವಿಳಾಸಕ್ಕೆ ಕಳುಹಿಸತಕ್ಕದ್ದು. ಮೇ 1ಕ್ಕೆ ಸಮಿತಿಯು ತನ್ನ ನಿರ್ಣಯವನ್ನು ಕರ್ನಾಟಕದ ಪತ್ರಿಕೆಗಳಲ್ಲಿ ಜಾಹೀರುಗೊಳಿಸುತ್ತದೆ.
ಬಹುಮಾನಕ್ಕಾಗಿ ಆಯ್ಕೆಯಾದ ಕವನ ಸಂಕಲನವನ್ನು–ಡೆಮ್ಮಿ 1/8, 1/12 ಅಥವಾ 1/8 ಆಕಾರದಲ್ಲಿ ಮುದ್ರಿಸಬೇಕು.
ಆಯ್ಕೆ ಸಮಿತಿ ತೀರ್ಮಾನ ಪ್ರಕಟವಾದ ಮೂರು ತಿಂಗಳ ಒಳಗಾಗಿ ಮುದ್ರಣ ಮುಗಿದು 12 ಪ್ರತಿಗಳು ಸಮಿತಿಯ ವಶ ಸೇರತಕ್ಕದ್ದು. (ಅದಕ್ಕಿಂತ ವೇಳೆ ಮೀರಿದರೆ ಸಮಿತಿ ಇನ್ನಾರಿಗಾದರೂ ಈ ಬಹುಮಾನ ನೀಡಬಹುದು).
ಸಂಗ್ರಹದ ಮುದ್ರಣ ಪ್ರಕಟಣೆ ಲೇಖಕರೇ ಮಾಡಬೇಕೆಂದೇನೂ ಇಲ್ಲ. ಆದರೆ ಬೇರೆ ಪ್ರಕಾಶಕರು ಮಾಡಿದರೂ ಬಹುಮಾನದ ಮೊತ್ತ ಲೇಖಕರಿಗೆ ಮಾತ್ರವೇ ಸಲ್ಲುತ್ತದೆ.
ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ : ನಿರ್ದೇಶಕರು, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂ.ಜಿ.ಎಂ. ಕಾಲೇಜು ಆವರಣ, ಉಡುಪಿ 576 102.
ಸಂಪರ್ಕಿಸಬೇಕಾದ ದೂರವಾಣಿ  ಸಂಖ್ಯೆ:  ಮೊಬೈಲ್ ನಂ. 9448931556;  ಕಛೇರಿ: 0820-2521159

ಪೆÇ್ರ. ಎಚ್. ಕೃಷ್ಣ ಭಟ್ಟ        
ನಿರ್ದೇಶಕರು

Suಟಿಜಚಿಥಿ, ಆeಛಿembeಡಿ 18, 2016
39ಣh ಗಿಚಿಜiಡಿಚಿರಿಚಿ ಏಚಿಟಿಚಿಞಚಿಜಚಿsಚಿ musiಛಿ ಜಿesಣivಚಿ

No comments:

Post a Comment