stat Counter



Sunday, July 17, 2016

ಡಿ. ವಿ. ಜಿ - ತಂದೆಯಾರ್ ಮಕ್ಕಳಾರ್ ನಾನೆಂಬುದೆದ್ದುನಿಲೆ ?


ತಂದೆ ಮಕ್ಕಳಿಗೆ
ಹದಗೆಟ್ಟುದನು ಕಾಣೆಯಾ?
ಹೊಂದಿರುವರವರ್
ಅಹಂತೆಯು ಮೊಳೆಯುವನಕ
ತಂದೆಯಾರ್ ಮಕ್ಕಳಾರ್
ನಾನೆಂಬುದೆದ್ದುನಿಲೆ?
ಬಂಧ ಮುರಿವುದು ಬಳಿಕ
-ಮಂಕುತಿಮ್ಮ
*ನಲ್ಬೆಳಗು*-ಕವಿತಾ ಅಡೂರು:
(ತಂದೆ ಮಕ್ಕಳ ನಡುವಿನ ಸಂಬಂಧ ಹಾಳಾಗಿರುವುದನ್ನು, ಅವರುಗಳು ಬದ್ಧ ದ್ವೇಷಿಗಳಾಗಿರುವುದನ್ನು ನಾವು ನಮ್ಮ ಪರಿಸರದಲ್ಲಿ ಕಾಣುತ್ತೇವೆ. ನಾನು ಯಾರಿಗಿಂತಲೂ ಕಡಿಮೆ ಇಲ್ಲ, ಎಲ್ಲವು ನಾನು ಹೇಳಿದ ಹಾಗೆ ನಡೆಯ ಬೇಕು, ನಾನೇ ಬುದ್ಧಿವಂತ, ಎಲ್ಲವೂ ನನ್ನಿಂದ, ನಾನು ಯಾರ ಮಾತಿಗೂ ತಲೆಬಾಗುವುದಿಲ್ಲ ಹೀಗೆ *ನಾನು-ನಾನು* ಎಂಬ ಅಹಂಕಾರದ ಭಾವ ; ಸಂಬಂಧಗಳ ನಡುವೆ ಮೊಳೆತಾಗ ಪ್ರೀತಿ-ಮಮತೆ ಸಾಯುತ್ತದೆ. ತಂದೆ ಯಾರೋ,ಮಗ ಯಾರೋ, ಎಂಬಂತೆ ವ್ಯವಹರಿಸುತ್ತಾರೆ. ಆಜನ್ಮ ಶತ್ರುಗಳಂತೆ ಕಾದಾಡುತ್ತಾರೆ. ಎಲ್ಲಾ ಸಂಬಂಧಗಳ ನಡುವಿನ ಬಿರುಕಿಗೆ ಇದೇ ಅಹಂಭಾವ ಕಾರಣವಾಗುತ್ತದೆ. ಹಾಗಾಗಿ ಬಿರುನುಡಿಗಳ ಆಡುವ ಮೊದಲು, ಕಾದಾಟಕ್ಕಿಳಿವ ಮೊದಲು ಒಂದು ಕ್ಷಣ ಯೋಚಿಸೋಣ. ನಮ್ಮ ಬದುಕಿಗೆ ಆ ವ್ಯಕ್ತಿ ಮುಖ್ಯವೋ ಅಥವಾ ನಮ್ಮ ತನದ ಸ್ಥಾಪನೆ ಮುಖ್ಯವೋ?

{ ಕವಿತಾ ಅಡೂರು ಅವರ Face Book  ನಿಂದ }

No comments:

Post a Comment