ಸಖೀಗೀತ-SAKHEEGEETA-This blog contains articles, book reviews in kannada and english about kannada and Indian literature
stat Counter
//
var sc_project=11731401;
var sc_invisible=0;
var sc_security="395262f6";
var scJsHost = (("https:" == document.location.protocol) ? "https://secure." : "http://www.");
document.write(""+"script>");
//]]>
Showing posts with label ಕನಕದಾಸರು. Show all posts
Showing posts with label ಕನಕದಾಸರು. Show all posts
Sunday, November 25, 2018
Wednesday, January 17, 2018
ಲಾತವ್ಯ ಆಚಾರ್ಯ - ಉಡುಪಿ ಪರ್ಯಾಯದಲ್ಲಿ ಕನಕದಾಸರಿಗೆ ಮೊದಲ ಮಣೆ
ಉಡುಪಿ ಪರ್ಯಾಯದಲ್ಲಿ ಕನಕದಾಸರಿಗೆ ಮೊದಲ ಮಣೆ | Udayavani -
ವಿಶೇಷವೆಂದರೆ ಉಡುಪಿ ಅಷ್ಟಮಠದಲ್ಲಿ ಇದುವರೆಗೆ ಸುಮಾರು 240ಕ್ಕೂ ಮಿಕ್ಕಿ ಯತಿಗಳು ಆಗಿಹೋಗಿದ್ದಾರೆ. ಶ್ರೀ ವ್ಯಾಸರು,
ಶ್ರೀ ರಾಘವೇಂದ್ರರು, ಪುರಂದರರಂತಹ ಅಪರೋಕ್ಷ ಜ್ಞಾನಿಗಳು ಪ್ರಸಿದ್ಧ ಸಂತರು ಈ ಕ್ಷೇತ್ರದಲ್ಲಿ ಬಹುಕಾಲ ಅಪಾರ ಸೇವೆ ಸಲ್ಲಿಸಿದ್ದಾರೆ. ಆದರೆ ಕನಕದಾಸರ ಹೊರತು ಇನ್ನಾರ ಸ್ಮಾರಕವೂ ಉಡುಪಿ ಕೃಷ್ಣ ಮಠದಲ್ಲಿ ಇಲ್ಲ.
ಶ್ರೀ ರಾಘವೇಂದ್ರರು, ಪುರಂದರರಂತಹ ಅಪರೋಕ್ಷ ಜ್ಞಾನಿಗಳು ಪ್ರಸಿದ್ಧ ಸಂತರು ಈ ಕ್ಷೇತ್ರದಲ್ಲಿ ಬಹುಕಾಲ ಅಪಾರ ಸೇವೆ ಸಲ್ಲಿಸಿದ್ದಾರೆ. ಆದರೆ ಕನಕದಾಸರ ಹೊರತು ಇನ್ನಾರ ಸ್ಮಾರಕವೂ ಉಡುಪಿ ಕೃಷ್ಣ ಮಠದಲ್ಲಿ ಇಲ್ಲ.
Wednesday, April 15, 2015
Tuesday, November 19, 2013
ಕನಕ ಮುಂಡಿಗೆ -ಅರ್ಥಾನುಸಂಧಾನ - ಡಾ / ಕಬ್ಬಿನಾಲೆ ವಸಂತ ಭಾರದ್ವಾಜ

ಪ್ರಕಾಶಕರು -
ಕನಕದಾಸ ಸಂಶೋಧನ ಪೀಠ,
ಗೋವಿಂದ ಪೈ ಸಂಶೋಧನ ಕೇಂದ್ರ
ಉಡುಪಿ-576102
ಮೊದಲ ಮುದ್ರಣ- 2013 , ಬೆಲೆ-ರೂ.75
contact -0820-2521159
ಪಂಡಿತ ಪರಂಪರೆಯ ಹೊಸ ತಲೆಮಾರಿನ ವಿದ್ವಾಂಸ ಡಾ / ಕಬ್ಬಿನಾಲೆ ವಸಂತ ಭಾರದ್ವಾಜರ ’ ಕನಕಮುಂಡಿಗೆ ’ - ನಾನು ಇತ್ತೀಚಿಗೆ ಓದಿದ ಉತ್ತಮ ಸಂಶೋಧನ ಗ್ರಂಥಗಳಲ್ಲಿ ಒಂದು .
" ಮಗಳ್ಗೆ ಮಗನಾದ, ಮಗಳಿಗಳಿಯನಾದ , ಮಗಗೆ ಮೈದುನನಾದ , ಮಗಳಿಗೆ ಪತಿಯಾದ ’ -ಎಂಧ ಹತ್ತಾರು ಪೌರಾಣಿಕ ಕುಟುಂಬ ಸಂಬಂಧದ ಒಗಟುಗಳು ಕನಕದಾಸರ ಮುಂಡಿಗೆಗಳಲ್ಲಿವೆ.ಈ ಒಗಟುಗಳ ಅರ್ಥಾನುಸಂಧಾನ ಈ ಪುಸ್ತಕದಲ್ಲಿದೆ .
ಕನಕದಾಸರು ’ ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ " ಎಂದು ಬೀಸುವ ಕಲ್ಲನ್ನು ಬಣ್ಣಿಸುತ್ತಾರೆ. ದೇವತೆಗಳನ್ನೂ ಕಾಡುವ ಲೈಂಗಿಕ ಸೆಳೆತವನ್ನು " ಹಲವು ಜೀವವ ಒಂದೆಲೆ ನುಂಗಿತು " ಎಂದು ಸಾಂಕೇತಿಕವಾಗಿ ನಿರೂಪಿಸುತ್ತಾರೆ.
ಒಗಟುಗಳನ್ನು ಕನಕದಾಸರು ’ಹಳಗನ್ನಡ’ ಎಂದೂ ಹೆಸರು ನೀಡಿದ್ದುಂಟು -" ತಿಳಿದವರು ಪೇಳಿರೀ ಹಳಗನ್ನಡವನ್ನು ’ { ಒಂಬತ್ತು ಹೂವಿಗೆ ಒಂದೇ ನಾಳವು " } ಕನಕದಾಸರ " ಹಳಗನ್ನಡ " ವನ್ನು ಅರ್ಥ ವಿವರಣೆಯಲ್ಲಿ ಒಂದಲ್ಲ , ಹತ್ತು ಹೆಜ್ಜೆ ಮುನ್ನಡೆದಿರುವ ಕಬ್ಬಿನಾಲೆ ವಸಂತ ಭಾರದ್ವಾಜರಿಗೆ ಅಭಿನಂದನೆಗಳು.
- ಮುರಳೀಧರ ಉಪಾಧ್ಯ ಹಿರಿಯಡಕ
Subscribe to:
Posts (Atom)
