stat Counter



Wednesday, August 12, 2020

ಮುರಳೀಧರ ಉಪಾಧ್ಯ ಹಿರಿಯಡಕ- ಡಾ/ ವಿಶ್ವಾಸ ಅವರ ಸ್ಮೃತಿಪಥ

ಡಾ|| ಎಚ್. ಆರ್. ವಿಶ್ವಾಸ ಅವರ ಕನ್ನಡ - ಸಂಸ್ಕೃತ ಭಾಷಾಂತರಕಾರರಾಗಿ ಪ್ರಸಿದ್ದರಿ. ಎಸ್.ಎಲ್. ಭ್ಯರಪ್ಪನವರ  ಆವರಣ ಕಾದಂಬರಿಯ ಸಂಸ್ಕೃತ ಅನುವಾದಕ್ಕಾಗಿ ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ ಭಷಾಂತರ ಪ್ರಶಸ್ತಿ ಪಡೆದಿದ್ದರೆ. ವಿಶ್ವಾಸ ಅವರು ಕನ್ನಡದಿಂದ ಸಂಸ್ಕೃತಕ್ಕೆ ಭಷಾಂತರಿಸಿರುವ ಇನ್ನೊಂದು ಮಹತ್ತ್ವದ ಕೃತಿ - ಪವ೯. ’ ಅಪಶ್ಚಿಮಃ ಪಶ್ಚಿಮೇ ಮತ್ತು ಪಿಡಿದು ಸಂಸ್ಕೃತ ಸೂತ್ರವ..’ - ಇವು ವಿಶ್ವಾಸ ಅವರು ತನ್ನ ಅಮೇರಿಕ ಪ್ರವಾಸದ ಕುರಿತು ವರೆದಿರುವ ಪ್ರವಾಸಕಥನಗಳು. ಡಾ|| ವಿಶ್ವಸ ಅವರ ಅಂಕಣ ಬರಹಗಳ ಸಂಕಲನ - ಸಂಗತ. ಕೆಲವು ಲಲಿತ ಪ್ರಬಂದಗಳು, ಹಾಗೂ ಸೊಗಸಾದ ವ್ಯಕ್ತಿಚಿತ್ರಗಳು ಈ ಸಂಕಲನದಲ್ಲಿವೆ. ಪಿ.ಎಚ್.ಡಿ. ಸಂಪ್ರಬಂಧ ಬರೆಯಲು ಡಾ|| ವಿಶ್ವಸ ಅವರು ಆಯ್ಕೆ ಮಾಡಿಕೊಂಡ ವಿಷಯ - ಜಗ್ಗು ಶಿಂಗರಾಯ೯ನ ಕೃತಿಗಳು. ಡಾ|| ವಿಶ್ವಸ ಸಂಸ್ಕೃತಭಾರತಿಯ ಪೂಣಾ೯ವಧಿ ಕಾಯ೯ಕತ೯ರಾಗಿ ಈಗ ಮಂಗಳೂರಿನಲ್ಲಿ ನೆಲೆಸಿದ್ದಾರೆ. 

ಸ್ಮೃತಿಪಥ ಪುಸ್ತಕದ ಬರವಣಿಗೆಯ ಹಿನ್ನೆಲೆಯನ್ನು ಡಾ|| ವಿಶ್ವಾಸ್  ಹೀಗೆ ವಿವರಿಸುತ್ತಾರೆ - ಎಂಟು ತಿಂಗಳ ಹಿಂದೆ (೧೯-೦೭-೨೦೧೩) ನಡೆದ ರಸ್ತೆ ಅಪಘಾತವೂಂದರಲ್ಲಿ ತೀವ್ರ ಜಜ೯ರಿತನಾಗಿ ಪವಾಡವನ್ನುವ ರೀತಿಯಲ್ಲಿ ಬದುಕಿಬಂದು, ವಿಶ್ರಾಂತಿಗೆಂದು ಲ್ಕಾರು ತಿಂಗಳು  ಮನೆಯಲ್ಲೇ ಅಲ್ಲಾಡದೆ ಪಟ್ಟಾಗಿ ಕುಳಿತಿದ್ದಾಗ ಬಿಡದೆ ಕಾಡಲು ತೊಡಗಿದವು ಹಳೆಯ ನೆನಪುಗಳು.ಅವುಗಳಿಗೆ ಅಕ್ಷರದ ರೂಪು ಕೊಡಲು ಪ್ರಯತ್ನಿಸಿದೆ. ಅದರ ಫಲವೇ ಈ ಸ್ಮ್ಕೃತಿಗಳು.’

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹುತ್ತಿನಗದ್ದೆ ಗ್ರಾಮದ ಹುಲಿಯಾಳಿ ವಶ್ವಾಸರ ಹುಟ್ಟೂರು. ಮಲೆನಾಡ ಮಡಿಲಲ್ಲಿ ಎಂಬ ಅಧ್ಯಾಯದಲ್ಲಿ ಮಲೆನಾಡಿನ ಹಳ್ಳಿಗಳ ಆತ್ಮೀಯ ಸಮೀಪ ಚಿತ್ರಣ ಸಿಗುತ್ತದೆ. ಮಲೆನಾಡಿನ ಮಳೆಗಾಲ, ರೈತರ ಸುಖ - ಕಷ್ಟಗಳು, ಮಕ್ಕಳು ಯಕ್ಷಗಾನ ಮಂಡಳಿ, ಆಥಿ೯ಕ ಸಮಸ್ಯೆಯಿಂದಾಗಿ ವಿದ್ಯಾಭ್ಯಾಸಕ್ಕೆ ಪಡುವ ಕಷ್ಟ - ಹೀಗೆ ವೈವಿಧ್ಯಪುಣ೯ ನೆನಪುಗಳು ಇಲ್ಲಿ ಅನಾವರಣಗೊಂಡಿವೆ. ಮಲೆನಾಡಿನ ಗ್ರಾಮೀಣ ಶಿಕ್ಷಣವ್ಯವಸ್ಥೆಯ ಒಂದು ಸ್ಥೂಲ ನೋಟ ಇಲ್ಲಿ ಸಿಗುತ್ತದೆ.

ಮಲೆನಾಡಿನ ಹಳ್ಲಿಗಳಲ್ಲಿ ರಾತ್ರಿ ಕಾಲ್ನಡಿಗೆ ಪ್ರಯಾಣಕ್ಕೆ ಬಳಸುವ ಒಂದು ರೀತಿಯ ಪಂಜಿನ ಹೊತ್ತೆ ಅಡಿಕೆ ಮರದ ಹಾಳೆ ಮತ್ತುದಬ್ಬೆಯಿಂದ ಇದನ್ನು ತಯಾರಿಸುತ್ತಾರೆ. ಈ ಹೊತ್ತೆ ಜಾನಪದ ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಜಾನಪದ ನಿಘಂಟಿನಲ್ಲೂ ದಾಖಲಾಗಿಲ್ಲ. ಎತ್ತಿನ ಮೂಗಿನ ಹೂಳ್ಳೆಗಳಲ್ಲಿ ಸೇರಿಕೊಂಡ ಹೂಟ್ಟಿನ ಜಿಗಣೆಯನ್ನು ತೆಗೆಯುವ ಜನಪದ ವೈದ್ಯಕೀಯ ತಂತ್ರ ಕುತೂಹಲಕಾರಿಯಾಗಿದೆ.

ಮನೆಗೆ ನಡೆದುಕೊಂಡು ಹೋಗುವಾಗಲೇ ಕವಾ೯ಲೋ ಕಾದಂಬರಿಯ ಅಧ೯ಭಾಗ ಓದಿದ್ದು ವಿದ್ಯಾಥಿ೯ ಪುಸ್ತಕಪ್ರೀತಿಗೆ ಒಂದು ಪುಟ್ಟ ಉದಾಹರಣೆ. ಶ್ರೀ ವಿಶ್ವೇಶತೀಥ೯ಸ್ವಾಮೀಜಿಯವರ, ಸೋ.ತಿ. ನಾಗರಜ, ರಂಗನಾಥಶಮಾ೯, ಉಡುಪಿಯ ಎನ್. ಲಕ್ಷ್ಮೀನಾರಾಯಣ ಭಟ್ಟ - ಇಂಥ ಸಂಸ್ಕೃತವಿದ್ವಾಂಸರ, ಗೋಪಾಲಕೃಷ್ಣ ಅಡಿಗ, ಹಾ.ಮಾ. ನಾಯಕ, ಎಸ್,ಎಲ್. ಭೈರಪ್ಪನವರಂಥ ಸಾಹಿತಿಗಳ ಆತ್ಮೀಯ ವ್ಯಕ್ತಿಚಿತ್ರಗಳು ಈ ಹೊತ್ತಗೆಯಲ್ಲಿವೆ. ಸೋ.ತಿ. ನಾಗರಾಜರ ವ್ಯಕ್ತಿಚಿತ್ರ ಎಷ್ಟು ಚೆನ್ನಾಗಿದೆ ಎಂದರೆ ತರೀಕೆರೆ ತಾಲೂಕಿನ ಸೋಮಪುರಕ್ಕೆ ಹೋಗಿ ಅವರನ್ನು ಭೇಟಿಯಾಬೇಕೆಂದು ನನಗೆ ಆಸೆಯಾಗಿದೆ. 

ಶಿಂಗರಾಯ೯ ಒಬ್ಬ ಅಲಕ್ಷಿತ ಲೇಖಕನಾಗಿರುವುದರಿಂದ ಡಾ. ವಿಶ್ವಾಸರು ಶಿಂಗರಾಯ೯ನನ್ನು ಕುರಿತುತನ್ನ ಪಿ.ಎಚ್.ಡಿ. ಅದ್ಯತನದ ಬಗ್ಗೆ ವಿವರವಾಗಿ ಬರೆದಿದ್ದರೆ ಚೆನ್ನಾಗಿತ್ತು. ವಿಶ್ವಾಸರು ಹಂಸಕ್ಷೀರ ನ್ಯಾಯದಂತೆ ತನ್ನ ಜೀವನದ ಕಹಿನೆನಪುಗಳನ್ನು ನುಂಗಿಕೂಂಡು ಸಿಹಿ ಅನುಭವಗಖನ್ನು ಕುರಿತು ಮಾತ್ರ ಬರೆದಿದ್ದಾರೆ.

ಸಂಸ್ಕೃತವಿದ್ವಾಂಸರ ಸಂಸ್ಕೃತಭೂಯಿಷ್ಠವಾಗಿ ಬರೆಯದೆ, ಕನ್ನಡಕ್ಕೆ ಹತ್ತಿರವಾದ ಶೈಲಿಯಲ್ಲಿ ಹೇಗೆ ಬರೆಯಬಹುದೆಂಬುದಕ್ಕೆ ಬನ್ನಂಜೆ ಗೋವಿಂದಾಚಾಯ೯ರ ಕನ್ನಡ ಗದ್ಯ ಒಳ್ಳೆಯ ಮಾದರಿ. ಡಾ|| ಎಚ್.ಆರ್. ವಿಶ್ವಾಸ ಅವರ ಸಂಸ್ಕೃತ ಘಾಟನ್ನು ದುರವಿಟ್ಟು, ಕನ್ನಡದಲ್ಲಿ ಬರೆಯುತ್ತಿರುವುದು ಸಂತಸದ ಸಂಗತಿ. ಅವರ ಶೈಲಿ ಕಮ೯ಣಿಸರದೂಳ್ ಚೆಂಬವಳಮಂ ಕೋ"ದಂತಿದೆ. ಡಾ|| ವಿಶ್ವಾಸರ ಬಾಲ್ಯ, ಯೌವನಗಳ ಸುಸಂಸ್ಕೃತ ಅಭಿರುಚಿಗಳ ಸಮೃದ್ದ ನೆನಪುಗಳಿಂದ ಇಡಿಕಿರೊದಿರುವ ಈ ಹೂತ್ತೆಗೆ ಕಾದಂಬರಿಯ ಅದ್ಯಾಯಗಳಂತೆ, ಲಲಿತ ಪ್ರಬಂಧಗಳಂತೆ, ವ್ಯಕ್ತಿಚಿತ್ರಗಳಂತೆ ಸಲೀಸಾಗಿ ಓದಿಸಕೊಂಡು ಹೋಗುತ್ತದೆ.  ನೆನಪಿನ ದೋಣಿಯಲ್ಲಿ ವಿಹರಿಸಿದ ಡಾ|| ವಿಶ್ವಾಸರಿಗೆ ಅಭಿನಂನೆಗಳು.

         ----ಮುರಳೀಧರ ಉಪಾಧ್ಯ ಹಿರಿಯಡಕ 

 

No comments:

Post a Comment