stat Counter



Monday, January 27, 2014

ವೇದಾಂತ ಸಾರ {ಯಕ್ಷಗಾನ } -ಕಿಬ್ಬಚ್ಚಲ ಮಂಜಮ್ಮ

 {ಪ್ರಿಯ ಅಶೋಕವರ್ಧನ ಅವರಿಗೆ:
ನೀವು ಶೋಧಿಸಿರುವ ಕಿಬ್ಬಚ್ಚಲ ಮಂಜಮ್ಮ ಎಂಬುವವರ ಯಕ್ಷಗಾನ ಕೃತಿಯನ್ನು ಅರ್ಧ ಓದಿ ಈಗ ಈ ಕಾಗದವನ್ನು ನಿಮಗೆ ಬರೆಯುತ್ತಿದ್ದೇನೆ. ಪ್ರಾಯಃ ಈ ಪ್ರಸಂಗವೇ ಕನ್ನಡದಲ್ಲಿ ಮೊಟ್ಟ ಮೊದಲಿಗೆ ’ಅನ್ಯೋಕ್ತಿ’ (’ಅಲಿಗರಿ’) ಪ್ರಕಾರದಲ್ಲಿ ಬಂದಿರುವ ಕೃತಿಯೆಂದು ತೋರುತ್ತದೆ. "ಪಿಲ್ಗ್ರಿಮ್ಸ್ ಪ್ರೋಗ್ರೆಸ್" ಕೃತಿಯಂತೆ ಎಲ್ಲಾ ಅಮೂರ್ತ ಗುಣಾವಗುಣಗಳನ್ನು ಪಾತ್ರಗಳಂತೆ ಮಾನುಷೀಕರಣಗೊಳಿಸಿ, ಸತ್ ಹಾಗೂ ಅಸತ್ ಗುಣಗಳ ಯುದ್ಧವನ್ನು ವರ್ಣಿಸಿರುವ ಬಗೆಯೇ ಅದ್ಭುತ, ಆಶ್ಚರ್ಯಕಾರಕ. ಮನೆಯಲ್ಲಿಯೇ ಇರುತ್ತಿದ್ದ ಗೃಹಿಣಿ ಇಂತಹ ಸಾಹಿತ್ಯಕೃತಿಯನ್ನು ರಚಿಸಿದ್ದಾಳೆಂಬುದು ನಮ್ಮೆಲ್ಲರ ’ಕೃತಿಕಾರರೆಂಬ’ ಅಹಂಗೆ ಅಗತ್ಯವಾದ ಪೆಟ್ಟು. ಮತ್ತೊಮ್ಮೆ ಕೃತಿಯನ್ನು ಪೂರಾ ಓದಿ ಬರೆಯುತ್ತೇನೆ. ಅವರ ಕೃತಿಯನ್ನು ಜಾಲತಾಣದಲ್ಲಿ ಸೇರಿಸಿ, ಅನುಕರಣೀಯ ಕಾರ್ಯವನ್ನು ಮಾಡಿದ್ದೀರಿ; ಅಭಿನಂದನೆಗಳು.
ರಾಮಚಂದ್ರನ್

No comments:

Post a Comment