stat Counter



Saturday, September 29, 2018

ಚಂದ್ರಶೇಖರ ಕಂಬಾರ - -- ಕತೆ ಕತೆ ಕಾರಣ

ಧಾರವಾಡದಲ್ಲಿ ನಡೆವ 84ನೇಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಚಂದ್ರಶೇಖರ ಕಂಬಾರ ಆಯ್ಕೆ

ಅಮ್ಮಚ್ಚಿ ಎಂಬ ನೆನಪು - ಹಾಡುಗಳು Ammachi Yemba Nenapu Official Jukebox | Raj B Shetty, Vaijayanthi V Adig...

ಡಿ. ವಿ. ಜಿ / ಬೇಂದ್ರೆ / ಶಿವರಾಮ ಕಾರಂತ/ ಕುವೆಂಪು - A Negotiation with the Millennium through four Modern Kannada Writers.

Friday, September 28, 2018

{ -ಪುಸ್ತಕ ವಿಮರ್ಶೆ }------ N. S . Gundur To READ it differently

ರಾಮಚಂದ್ರ ಗುಹಾ - ಆರ್‌ಎಸ್‌ಎಸ್‌ನ ಅಂಬೇಡ್ಕರ್‌ ಪ್ರೀತಿ ಮತ್ತು ಮಿಥ್ಯೆ

ಮಾತುಕತೆ ಮೂಲಕವೂ ಕಲಿಯುವಿಕೆ ಸಾಧ್ಯ: ಡಾ.ಚಿರಂಜೀವಿ ಸಿಂಗ್‌

ಎಮ್. ಆರ್. ಕಮಲ --- ನಮ್ಮದಲ್ಲದ ದನಿಯಲ್ಲಿ ಮಾತನಾಡುವ ಸಂಕಟ

ನಮ್ಮದಲ್ಲದ ದನಿಯೊಂದರಲ್ಲಿ ಮಾತನಾಡುವ ಸಂಕಟ
ಎಷ್ಟು ಜನರಿಗೆ ಇಂಥ ಅನುಭವವಾಗಿದೆಯೋ ತಿಳಿಯದು. ಯಾವುದೋ ಸಂದರ್ಭಕ್ಕೆ ಅನುಸಾರವಾಗಿ ನಮ್ಮದಲ್ಲದ ದನಿಯಲ್ಲಿ, ನಮ್ಮದಲ್ಲದ ಮಾತುಗಳನ್ನು ಆಡತೊಡಗುತ್ತೇವೆ. ನೋಡುವವರಿಗೆ ಅದು ಅತ್ಯಂತ ಸಹಜವೇನೋ ಎನ್ನುವಂತಿರುತ್ತದೆ. ಆದರೆ ಸೂಕ್ಷ್ಮ ವ್ಯಕ್ತಿಗೆ ಇಂಥ ಟೊಳ್ಳು ಮಾತುಗಳನ್ನು ಆಡುತ್ತಿದ್ದೇನೆ ಎಂದು ಅನ್ನಿಸಿದ ತಕ್ಷಣ ವಿಚಿತ್ರ ಅವಮಾನ, ಸಂಕಟಗಳು ಶುರುವಾಗುತ್ತವೆ. ಅನಿವಾರ್ಯವಲ್ಲದಿದ್ದರೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮಗಳಿಗೆ ಹೋಗಲು, ವೇದಿಕೆಯಲ್ಲಿ ಮಾತನಾಡಲು ನಾನು ಹೆದರುತ್ತೇನೆ. ಆದರೆ ನನ್ನ ಮಾತುಗಳನ್ನು ಕೇಳುವವರಿಗೆ ನನ್ನೊಳಗಿನ ಸಂಕಟ ಅರ್ಥವಾಗುವುದಿಲ್ಲ. ಯಾವುದೇ ಬಗೆಯ ಅಪ್ರಾಮಾಣಿಕತೆ ವಿಚಿತ್ರ ಕಸಿವಿಸಿ ಹುಟ್ಟಿಸಿಬಿಡುತ್ತದೆ.
ಯಾರದ್ದೋ ಸಾವಿನ ಮನೆಗೆ ಹೋಗುತ್ತೇವೆ. ಸುಮ್ಮನೆ ನಿಂತರೆ ಏನು ತಪ್ಪು ತಿಳಿಯುತ್ತಾರೋ ಅನ್ನಿಸತೊಡಗುತ್ತದೆ. `ಏನಾಯ್ತು?' ಎಂದು ಒಂದು ಪ್ರಶ್ನೆಯನ್ನು ಗೊತ್ತಿದ್ದರೂ ಕೇಳುತ್ತೇವೆ. ಯಾರೋ ಏನೋ ಹೇಳುತ್ತಾರೆ. ಇಂತಹ ಸಂದರ್ಭದಲ್ಲಿ ಯಾವ ಮಾತುಗಳು ತಪ್ಪು, ಯಾವುದು ಸರಿ ಎಂದು ಅರ್ಥವಾಗುವುದಿಲ್ಲ. `ಸದ್ಯ ನರಳದೆ ಸತ್ತರಲ್ಲ', `ವಯಸ್ಸಾಗಿತ್ತು ಪಾಪ, ಆದರೂ ಮನೆಯವರಿಗೆ ದುಃಖ ಇದ್ದೇ ಇರುತ್ತಲ್ಲ' ಹೀಗೆ ಏನೋ ಒಂದು ಮಾತೊಗೆದು ಹಗುರಾಗಲು ನೋಡಿ ಮತ್ತಷ್ಟು ಭಾರವಾಗಿಬಿಡುತ್ತೇವೆ. ಆದಷ್ಟು ಬೇಗ ಅಲ್ಲಿಂದ ಹೊರಟುಬಿಡಬೇಕು ಅನ್ನಿಸಲು ಶುರುವಾಗುತ್ತದೆ. ಸತ್ತಿರುವ ವ್ಯಕ್ತಿ `ಹೆಸರಾಂತ' ಆಗಿದ್ದರೆ ಅಲ್ಲಿಯೇ ಟಿವಿ ಯವರು ಮೈಕ್ ತಂದು ಮುಂದೆ ಹಿಡಿಯುತ್ತಾರೆ. ಹೀಗೆ ಮಾತನಾಡುವವರನ್ನು ಅನೇಕ ಬಾರಿ ದೂರದರ್ಶನದಲ್ಲಿ ನೋಡುವಾಗ ಇವರು ತಮ್ಮ ಅಂತರಂಗದ ಮಾತು ಆಡುತ್ತಿದ್ದಾರೆಯೇ, ಸತ್ತಿರುವವರು ಇವರಿಗೆ ಅಷ್ಟು ಪ್ರಭಾವ ಬೀರಿದ್ದರೆ ಎನ್ನುವ ಅನುಮಾನ ಬರುವಷ್ಟು ಟೊಳ್ಳಾಗಿರುತ್ತದೆ. ಎದೆಯೊಳಗಿಂದ ಬಾರದ ಯಾವ ಮಾತುಗಳನ್ನಾಡುವುದು ಅತ್ಯಂತ ಕಷ್ಟಕರ ಎನ್ನುವುದು ನನ್ನ ಅನುಭವ. ಹೀಗಾಗಿಯೇ ನನ್ನ ಗೆಳೆಯರ ಸಂಖ್ಯೆ ಬಹು ಕಡಿಮೆ. ಯಾರ ಜೊತೆ ಅತ್ಯಂತ ಸಹಜವಾಗಿ ಇರಬಹುದು ಅನ್ನಿಸುವುದೋ ಅವರೊಂದಿಗೆ ಮಾತ್ರ ಇರುವುದಕ್ಕೆ, ಮಾತನಾಡುವುದಕ್ಕೆ ಇಷ್ಟ.
ಈ ಮೊಗಹೊತ್ತಿಗೆಯಲ್ಲಿ ಅನೇಕರು ಪ್ರತಿಯೊಂದು ವಿಷಯಕ್ಕೂ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಾರೆ. ಹಾಗೆ ನೀಡಬೇಕಾದರೆ ಒಂದೋ ಆ ಘಟನೆ ನಮ್ಮ ಅನುಭವಕ್ಕೆ ಹತ್ತಿರವಾಗಿರಬೇಕು ಅಥವಾ ಅದನ್ನು ತೀವ್ರವಾಗಿ ಗ್ರಹಿಸುವಷ್ಟು ಸೂಕ್ಷ್ಮ ಸಂವೇದನೆ ಇರಬೇಕು. ಅವರೆಡೂ ಇಲ್ಲದಿದ್ದಾಗಲು ನೀವು ಒತ್ತಾಯದಿಂದ, ಒತ್ತಡದಿಂದ ಪ್ರತಿಕ್ರಿಯಿಸಲು ಆರಂಭಿಸಿದರೆ ಮಾತಿನ ಅರ್ಥಹೀನತೆ ಬಹುಬೇಗ ಅರಿವಿಗೆ ಬಂದು ನಗೆಪಾಟಲಾಗಿಬಿಡುತ್ತೇವೆ. ಎಲ್ಲರು ಒಂದೇ ರೀತಿಯ ಮಾತುಗಳನ್ನು ಆಡುವಾಗ, ಆ ಮಾತುಗಳು ನಿಮ್ಮದಲ್ಲ ಎನ್ನಿಸಿದಾಗ ಕೂಡ ಮಾತನಾಡಿದರೆ ಇಂಥ ಸಂಕಷ್ಟ ಎದುರಾಗುತ್ತದೆ. ಸಹಜತೆ, ಪ್ರಾಮಾಣಿಕತೆಗಳಿಂದ ಮಾತ್ರ ಇದನ್ನು ಮೀರಲು ಸಾಧ್ಯವೇನೋ. ಪ್ರೋತ್ಸಾಹಕ್ಕೆ ಆಡುವ ಮೆಚ್ಚುಗೆಯ ಮಾತುಗಳನ್ನು ನಾನು ಟೊಳ್ಳು ಎಂದು ಸಂಪೂರ್ಣವಾಗಿ ನಿರಾಕರಿಸಲಾರೆ. ಯಾರೋ ವಿದ್ಯಾರ್ಥಿ ಕವಿತೆಯನ್ನು ಬರೆಯಲು ಆರಂಭಿಸಿದರೆ ಅವರು ಮುಂದುವರಿಸಲಿ ಎನ್ನುವ ಕಾರಣಕ್ಕೆ ಶಿಕ್ಷಕ ಮನೋಭಾವದವರಾದವರು ಬೆನ್ನು ತಟ್ಟುತ್ತಾರೆ. ಅಲ್ಲಿರುವ ಉದ್ದೇಶ ದಾರಿ ತಪ್ಪಿಸುವುದಾಗಿರುವುದಿಲ್ಲ, ಅಗಾಧವಾದ ಪ್ರೀತಿ ವ್ಯಕ್ತವಾಗುವ ಬಗೆ ಅದು.
ಗದರುವುದು ಪ್ರೀತಿಯ ಇನ್ನೊಂದು ಬಗೆ. ನಾನು ಎಂ. ಎ. ಓದುವಾಗ ಡಿ. ಆರ್. ನಾಗರಾಜ್ ಬಹಳ ಉತ್ಸಾಹದಿಂದ ಜಗತ್ತಿನ ಸಾಹಿತ್ಯದ ಬಗ್ಗೆ ಮಾತನಾಡುತ್ತಿದ್ದರು. ಸೂಕ್ಷ್ಮವಾಗಿ ಗ್ರಹಿಸುವ ವಿದ್ಯಾರ್ಥಿಗಳೆಂದರೆ ಅವರಿಗೆ ಪಂಚಪ್ರಾಣ. ಒಮ್ಮೆ ಚೆಕಾಫ್ ನ `ಚೆರ್ರಿ ಆರ್ಚರ್ಡ್' ಪಾಠ ಮಾಡುತ್ತಿದ್ದರು. ಪಠ್ಯ ಪುಸ್ತಕವಿಲ್ಲದೆ ಬರುವ ವಿದ್ಯಾರ್ಥಿಗಳ ಬಗ್ಗೆ ಅವರಿಗೆ ಅಸಾಧ್ಯ ಸಿಟ್ಟು. ನಾನು ಹಾಗೆ ಒಂದು ದಿನವೂ ಪಠ್ಯ ಪುಸ್ತಕವನ್ನು ಬಿಟ್ಟು ಹೋದವಳಲ್ಲ. ಆ ದಿನ ನನ್ನ ಗೆಳತಿ ಮರೆತು ಬಂದಿದ್ದಳು. ಹೀಗಾಗಿ ಅವಳು ನೋಡಿಕೊಳ್ಳಲಿ ಎಂದು ಉದಾರತೆಯಿಂದ ಅವಳ ಮುಂದೆ ಪುಸ್ತಕವಿಟ್ಟು ಪಾಠ ಕೇಳುತ್ತಿದ್ದೆ. ಇದ್ದಕ್ಕಿದ್ದಂತೆ ಒಂದು ದೊಡ್ಡ ದನಿ ಕೇಳಿಸಿತು. `ಕಮಲ, ವಾಟ್ ನಾನ್ಸೆನ್ಸ್? ವೈ ಡಿಡ್ ಯು ನಾಟ್ ಬ್ರಿನ್ಗ್ ದಿ ಟೆಕ್ಸ್ಟ್ ಬುಕ್?' ಎಂದು ಮೇಷ್ಟ್ರು ಕಿರುಚುತ್ತಿದ್ದರು. `ಸರ್, ದಿಸ್ ಈಸ್ ಮೈ ಟೆಕ್ಸ್ಟ್ ಬುಕ್' ಎಂದು ಹೇಳುವಾಗ ಕಣ್ಣಿನಲ್ಲಿ ನೀರು ಸುರಿಯುತ್ತಿತ್ತು. ಪುಸ್ತಕ ತರದಿದ್ದುದಕ್ಕೆ ಗೆಳತಿಗೆ ಏನು ಹೇಳಲಿಲ್ಲ, ಬೈಯಲಿಲ್ಲ. ನನ್ನ ಮೇಲೆ ಹೀಗೆ ಕಿರುಚಿದ್ದೇಕೆ ಎಂದು ಬೇಸರವಾಗಿತ್ತು. ತರಗತಿ ಮುಗಿದ ಮೇಲೆ ಮೂಲೆಯಲ್ಲಿ ಕಾಯುತ್ತ ನಿಂತಿದ್ದ ಮೇಷ್ಟ್ರು, `ಕಮಲ ಐ ಯಾಮ್ ಸಾರಿ, ರಿಯಲಿ ಸಾರಿ' ಎಂದರು. `ಅವಳನ್ನೇಕೆ ಬೈಯಲಿಲ್ಲ ಸರ್' ಎಂದು ಸಣ್ಣ ಕೋಪದಿಂದ ಕೇಳಿದೆ. ಆಗ ಅವರು ಹೇಳಿದ ಉತ್ತರ ನನಗಿನ್ನೂ ಚೆನ್ನಾಗಿ ನೆನಪಿದೆ. `ವೇಸ್ಟ್ ಆಫ್ ಟೈಮ್! ನಮ್ಮ ಮಾತುಗಳು ಅರ್ಥ ಆಗದವರ ಬಳಿ ಮಾತಾಡುವುದು ಚೀರಾಟ ಅಷ್ಟೇ' .
ಆದರೆ ಒಂದು ಹಂತದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಮಾತುಗಳು ಚೀರಾಟದಂತೆ, ಆಕ್ರಂದನದಂತೆ ಕೇಳತೊಡಗುತ್ತದೆ. ನನ್ನ ವೃತ್ತಿಯ ಕೊನೆಯ ದಿನಗಳಲ್ಲಿ ತರಗತಿಗಳಲ್ಲಿ ಅನೇಕ ಬಾರಿ ನಾನು ಆಡುವ ಮಾತುಗಳು `ಸ್ವಗತ'ದಂತೆ ತೋರಿ, ನಿಲ್ಲಿಸಿಬಿಟ್ಟು ಬೇರೆ ಬೇರೆ ಚಟುವಟಿಕೆಗಳನ್ನು ಮಾಡಿಸುತ್ತಿದ್ದೆ. ಮಾತು ಕೇಳದ, ಮಾತು ಅರ್ಥಮಾಡಿಕೊಳ್ಳದವರ ನಡುವೆ ನಾವು ಆಡುವ ಮಾತುಗಳಿಗೆ ಅರ್ಥವಿದೆಯೇ ಎಂದು ಯೋಚಿಸಿದ್ದೇನೆ. ಅದನ್ನು ಇನ್ನೊಂದು ಬಗೆಯಲ್ಲೂ ಹೇಳಬಹುದು. ಬಹುಶಃ ನಮ್ಮ ಮಾತುಗಳೇ ಅಪ್ರಸ್ತುತ, ವಿಚಿತ್ರ ಎಂದು ಯುವಕರಿಗೆ ಕಾಣುತ್ತಿರಬಹುದು. ಅದೆಲ್ಲವನ್ನು ಅರ್ಥಮಾಡಿಕೊಂಡೂ ಮತ್ತೆ ಮಾತಾಡುತ್ತೇವಲ್ಲ! ಆಗ ವಿಚಿತ್ರ ಅವಮಾನದಿಂದ ಕುದ್ದು ಹೋಗಿಬಿಡುತ್ತೇವೆ. ಎಷ್ಟೋ ಜನರು ತಮ್ಮನ್ನು ಕಡೆಗಣಿಸಿದರೆಂದು ಭಾವಿಸುತ್ತ, ಮತ್ತಷ್ಟು ಜೋರಾಗಿ ತಮ್ಮ ಇರವನ್ನು ಸ್ಥಾಪಿಸಲು, ಹಠ ತೊಟ್ಟು ಮಾತನಾಡಲು ಶುರು ಮಾಡುತ್ತಾರೆ. ಅದು ಟಿವಿ ನಿರೂಪಕರ ಕಿರುಚಾಟದಂತೆ ಕೇಳಿಸುತ್ತದೆ. ಮನೆಯ ಹಿರಿಯರು ಹೇಳುವ ವಿಚಾರಗಳನ್ನು ಮುದುಕರ `ಗೊಣಗಾಟ' ಎಂದು ಕರೆಯುವುದರಲ್ಲಿಯೇ ಅರ್ಥಗಳು ಅಡಗಿವೆ.
ಸೂಕ್ಷ್ಮ ವ್ಯಕ್ತಿಗೆ `ಕೋಡಂಗಿ'ಯಂತೆ ವೇದಿಕೆಯಲ್ಲಿ ಕುಣಿಯುವುದು, ಮಾತನಾಡುವುದು ಕಷ್ಟ. ಅದು ಸಹಜವಾದ ಅವನ ವ್ಯಕ್ತಿತ್ವವೇ ಆಗಿದ್ದರೆ, ವೃತ್ತಿ ಆಗಿದ್ದರೆ ಸರಿ. ಅದೇನು ಅಲ್ಲದೆ ಬರಿಯ ಖ್ಯಾತಿಗಾಗಿ, ಜನಪ್ರೀತಿಗಾಗಿ ನಾವು ಮಾಡುವ ಸರ್ಕಸ್ ಗಳು ಎದೆಯಲ್ಲಿ ಗಾಢ ವಿಷಾದವನ್ನಲ್ಲದೆ ಬೇರೇನನ್ನು ಹುಟ್ಟಿಸಲಾರದು. ನಮಗಾಗದ್ದನ್ನು ಆದಷ್ಟು `ಆಗುವುದಿಲ್ಲ' ಎಂದು ಗಟ್ಟಿ ದನಿಯಲ್ಲಿ ಹೇಳುವುದನ್ನು, ನಿರಾಕರಿಸುವುದನ್ನು ಮಾಡದಿದ್ದರೆ ಜೀವನವೆಲ್ಲ ದಾಕ್ಷಿಣ್ಯದಲ್ಲಿ ಕಳೆದು, ಎದೆಯೊಳಗೊಂದು ತೀವ್ರ ನೋವು ಉಳಿಸಿಕೊಂಡುಬಿಡುತ್ತೇವೆ. `ಅಕ್ಕಿ ಮೇಲಾಸೆ, ನೆಂಟರ ಮೇಲೆ ಪ್ರೀತಿ' ಎಂಬ ದ್ವಂದ್ವದಿಂದ ಹೊರಬರದೆ ಮುಕ್ತಿಯಿಲ್ಲ. ಆದರೆ ಅದಕ್ಕೊಂದು ದಿಟ್ಟತನ ಬೇಕು. ನಿಂದೆಯನ್ನು ಸಹಿಸಿಕೊಳ್ಳುವ ಶಕ್ತಿ ಬೇಕು. .

ಎಮ್. ಆರ್. ಕಮಲ --Deactivate ಎಂಬ ಕ್ರೌರ್ಯ



Deactivate ' ಎಂಬ ಕ್ರೌರ್ಯ!
ಈ ಮೂರುವರ್ಷಗಳಿಂದ, ಅದರಲ್ಲೂ ಮೊಗಹೊತ್ತಿಗೆಯನ್ನು (ಫೇಸ್ಬುಕ್) ಹೆಚ್ಚು ಬಳಸತೊಡಗಿದ ಮೇಲೆ ಒಂದು ವಿಷಯ ನನ್ನ ತಲೆಯನ್ನು ಕೊರೆಯುತ್ತಿದೆ. ಈ ಮೊಗಹೊತ್ತಿಗೆಯಲ್ಲಿ ತಮ್ಮನ್ನು ತಾವು ಅಭಿವ್ಯಕ್ತಿಸಿಕೊಳ್ಳುವ (ಕಲೆ, ಸಂಗೀತ, ಕವನ, ಕಸೂತಿ, ಹೊಸ ಬಗೆಯ ಉಡುಪುಗಳು, ಮಾತು ಇತ್ಯಾದಿ ಇತ್ಯಾದಿ) ಹೆಣ್ಣುಮಕ್ಕಳು ಇದ್ದಕ್ಕಿದ್ದಂತೆ ಕಣ್ಮರೆಯಾಗುವುದು ಏಕೆ? ಈಗಿನ ಪರಿಭಾಷೆಯಲ್ಲಿ ಹೇಳುವುದಾದರೆ `deactivate ' ಮಾಡಿಕೊಳ್ಳುವುದು. ಈ ಪದವೇ ಎಷ್ಟು ಕ್ರೂರವಾಗಿದೆ ನೋಡಿ! ಚಟುವಟಿಕೆಯಿಂದಿದ್ದ ಹೆಣ್ಣುಮಕ್ಕಳು ಇಲ್ಲಿ ಎಲ್ಲ ಚಟುವಟಿಕೆಗಳನ್ನು ನಿಲ್ಲಿಸುವುದು! ಮೊಗಹೊತ್ತಿಗೆಯ ಆಚೆಗೂ ಇದೆಲ್ಲವನ್ನು ಅವರು ಮಾಡುತ್ತಿರಬಹುದು. ಆದರೆ ತಮ್ಮ ಕಲೆಯನ್ನು ವಿಶಾಲ ನೆಲೆಯಲ್ಲಿ ಪ್ರಕಟಿಸಿ, ಬರುವ ಸಣ್ಣ ಪುಟ್ಟ ಪ್ರೋತ್ಸಾಹದ ನುಡಿಗಳಿಂದ ಬದುಕನ್ನು ಆತ್ಮವಿಶ್ವಾಸದಿಂದ ನಡೆಸುವುದಕ್ಕೆ ಸಾಧನವಾಗಿದ್ದ ಮೊಗಹೊತ್ತಿಗೆಯೇ ಅವರನ್ನು ಇಲ್ಲಿಂದ ಆಚೆಗಟ್ಟುತ್ತಿರುವುದು ನನ್ನನ್ನು ಚಿಂತಾಕ್ರಾಂತಳನ್ನಾಗಿಸುತ್ತದೆ. ಗಂಡಸೊಬ್ಬ ಇಲ್ಲಿಂದ ಹೋದರೆ ಅದು ಪುಸ್ತಕ ಬರೆಯುವುದಕ್ಕೋ, ಪ್ರವಾಸ ಹೋಗುವುದಕ್ಕೋ ಅಥವಾ ಮನೆಯಲ್ಲಿ ಯಾರಿಗೋ ತೊಂದರೆಯಾಗಿದೆ ಎನ್ನುವ ಕಾರಣಕ್ಕೋ ಇರುತ್ತದೆ. ಆದರೆ ಹೆಣ್ಣೊಬ್ಬಳು ಇಲ್ಲಿಂದ ಕಣ್ಮರೆಯಾದರೆ ಕಾರಣಗಳು ಅಷ್ಟು ಸುಲಭದ್ದಾಗಿರುವುದಿಲ್ಲ. ಬರೆಯುವ ಹುಡುಗಿ ಸ್ವಲ್ಪ ನಿರ್ಭಿಡೆಯವಳಾಗಿದ್ದರೆ ಅವಳ ಮೇಲೆ ಗುಂಪು ದಾಳಿ ನಡೆಸುತ್ತಾರೆ. ಅಶ್ಲೀಲವಾಗಿ ಬರೆದು ಖುಷಿ ಪಡುತ್ತಾರೆ. ಅವಳ ಹೆಸರನ್ನು ಯಾರಿಗೋ ಕಟ್ಟಿ ಮಾನವನ್ನು `ಹರಾಜು' (?) ಮಾಡಿ ಬರೆಯದಂತೆ ಮಾಡಿಬಿಡುತ್ತೇವೆ ಎಂದು ಮಾನಗೇಡಿಗಳು ಭ್ರಮಿಸುತ್ತಾರೆ. ಇದೆಲ್ಲವನ್ನು ಮಾಡುವವರು ಯಾರೂ ಅವಿದ್ಯಾವಂತರಲ್ಲ. ಆ ಹೆಣ್ಣುಮಗಳು ತಮ್ಮ ಗುಂಪಿನವಳೋ ಅಲ್ಲವೋ ಎನ್ನುವುದರ ಮೇಲೆ ಈ ದ್ವೇಷಾಸೂಯೆಗಳೆಲ್ಲ ನಿರ್ಧಾರವಾಗುತ್ತದೆ. ತಾವು ಹೇಳಿದ ವಿಚಾರಗಳನ್ನು ಒಪ್ಪುವುದಿಲ್ಲ ಎನ್ನುವ ಪುರುಷಾಹಂಕಾರ ಮೆರೆಯತೊಡಗುತ್ತದೆ.
ಒಮ್ಮೆ ಕಾಲೇಜಿನ ಸಹೋದ್ಯೋಗಿಯೊಬ್ಬಳನ್ನು, `ಯಾಕಮ್ಮ ಫೇಸ್ ಬುಕ್ ನಲ್ಲಿ ಬರೆಯುವುದನ್ನು ನಿಲ್ಲಿಸಿದೆ?' ಎಂದು ಕೇಳಿದೆ. ಅವಳು ಹೇಳಿದ ಉತ್ತರ ಕೇಳಿ ದಂಗಾದೆ. ವಯೋ ಸಹಜವಾಗಿ ಯಾವುದೋ ಆಧುನಿಕ ಉಡುಪು ತೊಟ್ಟು, ಕರಿಮಣಿ ಸರ ಅದಕ್ಕೆ ಹೊಂದುವುದಿಲ್ಲವೆಂದು ತೆಗೆದು ಪರ್ಸ್ ನಲ್ಲಿ ಇಟ್ಟು ಫೋಟೋ ತೆಗೆಸಿಕೊಂಡಿದ್ದಳಂತೆ. ಅದನ್ನು ಫೇಸ್ಬುಕ್ ನಲ್ಲಿ ನೋಡಿದ ಅತ್ತೆ, ಎಲ್ಲಿಂದಲೋ ಫೋನ್ ಮಾಡಿ ಬಾಯಿಗೆ ಬಂದ ಹಾಗೆ ಬೈದರಂತೆ. ನಿನ್ನ ತವರು ಮನೆಯಲ್ಲಿ ಹೀಗಿರಬಹುದು. ನಮ್ಮ ಮನೆಯಲ್ಲಿ ಇದೆಲ್ಲ ನಡೆಯುವುದಿಲ್ಲ ಎಂದರಂತೆ. ನನಗೆ ಮೈಯೆಲ್ಲಾ ಉರಿದುಹೋಯಿತು. `ಮೇಡಂ, ನೀವು ಕರಿಮಣಿ ಸರ ಹಾಕಿಕೊಂಡಿರುತ್ತೀರಲ್ಲ, ಅದಕ್ಕೆ ಇದನ್ನು ಹೇಳಲು ಸಂಕೋಚವಾಯಿತು' ಎಂದಳು. `ಅಯ್ಯೋ, ನನಗೆ ಅಲಂಕಾರ ಇಷ್ಟ ಎಂದು ಹಾಕಿಕೊಳ್ಳುತ್ತೇನೆ ಅಷ್ಟೇ, ನನ್ನನ್ನು ಮನೆಗೆ ಬಂದು ನೋಡು, ಬೇಡವಾದಾಗ ಎಲ್ಲವನ್ನು ತೆಗೆದಿಟ್ಟು ಆರಾಮಾಗಿರುತ್ತೇನೆ' ಎಂದೆ. ಅವಳು ಬಹಳ ಒಳ್ಳೆಯ ಹುಡುಗಿ, ಅತ್ತೆ ಹೀಗೆಲ್ಲ ಗಮನಿಸುತ್ತಾರೆ ಎಂದು ತಿಳಿದ ತಕ್ಷಣ ಮೊಗಹೊತ್ತಿಗೆಯಿಂದ ಕಣ್ಮರೆಯಾಗಿದ್ದಳು. ಹೆಣ್ಣನ್ನು ಸೆರೆಹಿಡಿದು ಬಂಧಿಸುವುದಕ್ಕೆ ಇವೆಲ್ಲ ವಿಷಯಗಳೇ ಎಂದು ಅಚ್ಚರಿಯಾಗುತ್ತದೆ. ಇನ್ನೊಬ್ಬಳು ಸಹೋದ್ಯೋಗಿ ಚಂದವಾಗಿ ಹಾಡುತ್ತಿದ್ದಳು. ಆಗಾಗ್ಗೆ ತಾನು ಹಾಡಿದ ಹಾಡನ್ನು ಅಪ್ಲೋಡ್ ಮಾಡುತ್ತಿದ್ದಳು. `ಈ ವಯಸ್ಸಿನಲ್ಲಿ ನಿನ್ನ ಅವತಾರ ಏನಮ್ಮ?' ಎಂದು ಮಗ ಬೈದು ನಿಲ್ಲಿಸಿದನಂತೆ. ಹೀಗೆ ಗಂಡ ಬೈದ, ಮಗ ಬೈದ, ಗೆಳೆಯ ಬೈದ, ಅತ್ತೆ ಬೈದರು, ಮಾವ ಬೈದರು ಎಂದೆಲ್ಲ ಸಹಜವಾಗಿ ವ್ಯಕ್ತವಾಗುವ ಚೈತನ್ಯವನ್ನು ಕಟ್ಟಿ ಹಿಡಿಯುವ ವ್ಯಕ್ತಿಗಳ ಬಗ್ಗೆ ಯೋಚಿಸುವಾಗ ಇನ್ನಷ್ಟು ಹಿಂದಕ್ಕೆ ಹೋಗುತ್ತಿರುವ ಸಮಾಜದ ಬಗ್ಗೆ ತೀವ್ರ ಆತಂಕವಾಗುತ್ತದೆ.
`ಕರಿ'ಮಣಿಯನ್ನು ಶ್ರೇಷ್ಠ ಎಂದು ವಾದಿಸುವವರೇ `ಕಪ್ಪು ಬಣ್ಣ' ವನ್ನು ಹೀಗಳೆಯುತ್ತಾರೆ. ನಾನು ಮೊದಲಿನಿಂದಲೂ `ಐ ಲೈನರ್' ನಲ್ಲಿ ಚಂದದ ಕುಂಕುಮದ ವಿನ್ಯಾಸಗಳನ್ನು ಬರೆದುಕೊಳ್ಳುತ್ತಿದ್ದೆ. ಆಗೆಲ್ಲ ಅನೇಕ ಗೆಳತಿಯರು ಕಪ್ಪು ಕುಂಕುಮವನ್ನು ಇಟ್ಟುಕೊಳ್ಳುವ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರು. ಸ್ವಲ್ಪ ದಿನಗಳಲ್ಲಿ ಅವರು ನನ್ನನ್ನು ಅನುಸರಿಸಿದರು ಎಂದು ಬೇರೆ ಹೇಳಬೇಕಿಲ್ಲ. ಅಮ್ಮ ಕಪ್ಪು ಬಣ್ಣವನ್ನು ತುಂಬಾ ಪ್ರೀತಿಸುತ್ತಿದ್ದಳು. ಅಂಗಡಿಗೆ ಕರೆದುಕೊಂಡು ಹೋದಾಗೆಲ್ಲ ಕಪ್ಪು ಬಣ್ಣದ ಸೀರೆಯನ್ನು ನೋಡಿ ನಿಟ್ಟುಸಿರುಬಿಡುತ್ತಿದ್ದಳು. `ತಗೊಳ್ಳಮ್ಮ' ಎಂದರೆ `ಗಂಡನಿಗೆ ಶ್ರೇಯಸ್ಸಲ್ಲ ಅಂತ ನೆರೆಯವರುಆಡಿಕೊಳ್ಳುತ್ತಾರೆ ಕಣೆ' ಎನ್ನುತ್ತಿದ್ದಳು. ಅಂತೂ ಅಮ್ಮ ಊರು ಬಿಟ್ಟ ಮೇಲೆ ಕಪ್ಪು ಬಣ್ಣದ ಮೈಸೂರ್ ಸಿಲ್ಕ್ ಸೀರೆಯೊಂದನ್ನು ಬೈದು ಅಕ್ಕಂದಿರು ಅಂಗಡಿಗೆ ಹೋಗಿ ತಂದುಕೊಟ್ಟರು. ಅದನ್ನು ತಂದ ಮೇಲೆ ಉಟ್ಟು, ಅಣ್ಣನಿಗೆ ಏನಾದರೂ ಆದರೆ ಎಂದು ಅದೆಷ್ಟು ಹೆದರಿದ್ದಳೆಂದರೆ ಆರು ತಿಂಗಳು ಅವಳ ಬೀರುವಿನಲ್ಲಿ ಸೀರೆ ಹಾಗೇ ಕೂತಿತ್ತು. ಕೊನೆಗೆ ಮಕ್ಕಳು ಕೊಟ್ಟ ಧೈರ್ಯದ ಮೇಲೆ ಎಪ್ಪತ್ತನೆಯ ವಯಸ್ಸಿನಲ್ಲಿ ಉಟ್ಟು ಸಂಭ್ರಮಿಸಿದಳು! ಅಣ್ಣ ಅದಾದ ಮೇಲೂ ಎಷ್ಟೋ ವರ್ಷಗಳ ಕಾಲ ಆರೋಗ್ಯವಾಗಿದ್ದರು ಎಂದು ಹೇಳಬೇಕಿಲ್ಲ!
ಮೊಗಹೊತ್ತಿಗೆಯಲ್ಲಿ ಇಂಥ ಮನಸ್ಸುಗಳೇ ಹೆಣ್ಣನ್ನು, ಅವಳ ವಿಚಾರಗಳನ್ನು ಬಂಧಿಸಲು ಯತ್ನಿಸುತ್ತಿವೆ. ನನ್ನನ್ನೂ ಸೇರಿ ಈ ಅನುಭವಕ್ಕೆ ಪಕ್ಕಾಗದವರು ಯಾರಾದರೂ ಇಲ್ಲಿ ಇದ್ದಾರೆಯೇ? `ಒಂದು ಕೆಟ್ಟ ಚಿತ್ರದ ಬಗ್ಗೆ ಅಭಿಪ್ರಾಯವನ್ನು ಹೇಳಿದ್ದಕ್ಕೆ ಅದೆಷ್ಟು ಜನ ನನ್ನ ಮೇಲೆ ಮುಗಿಬಿದ್ದಿದ್ದರು! ಎಷ್ಟೋ ಮನೆಗಳೇ ಈ ಮೊಗಹೊತ್ತಿಗೆಯಿಂದ ಹಾಳಾಗಿವೆಯಂತೆ! ನೆಂಟರಿಷ್ಟರು ಹಾಕಿಕೊಳ್ಳುವ ಮನೆ, ಕಾರುಗಳ ಚಿತ್ರವನ್ನು ನೋಡಿಕೊಂಡು ಉರಿದು ಬೀಳುತ್ತಾರಂತೆ. ನೀನು ಯಾರಿಗೆ ಕಾಮೆಂಟ್ ಹಾಕಿದೆ, ಯಾರಿಗೆ ಹಾಕಬಾರದಿತ್ತು, ಯಾರ ಜೊತೆಯಿರುವ ಫೋಟೋ ಹಾಕಿದೆ ಇತ್ಯಾದಿಗಳೆಲ್ಲ ಪ್ರತಿ ಮನೆಗಳಲ್ಲೂ ಗಂಟಾನುಗಟ್ಟಲೆ ಚರ್ಚಿತವಾಗಿ ಅನೇಕರು ಬೇಸತ್ತು ಓಡಿ ಹೋಗಿದ್ದಾರಂತೆ. ಒಟ್ಟಿನಲ್ಲಿ ಹೆಣ್ಣುಮಕ್ಕಳನ್ನು ಸದಾ ನಿಯಂತ್ರಿಸಲು ನೂರಾರು ತಂತ್ರಗಳು! ಯಾರೋ ಚಂದದ ಚಿತ್ರ ಹಾಕಿ ನಕ್ಕರೆ ಆ ಕ್ಷಣದ ಸಂತೋಷದ ಅಭಿವ್ಯಕ್ತಿ ಎಂದು ಕೊಳ್ಳುವುದನ್ನು ಬಿಟ್ಟು ಹಿನ್ನೆಲೆಯನ್ನು ಹುಡುಕುತ್ತ, ಇದು ಯಾರನ್ನೋ ಉರಿಸಲು ಹಾಕಿದ್ದು ಎಂದೆಲ್ಲ ವಿಶ್ಲೇಷಣೆಗಳು ನಡೆಯುತ್ತವಂತೆ! ಕೆಲವರಂತೂ ಯಾರೋ ಒಬ್ಬರನ್ನು ತಮ್ಮ ಶತ್ರುವಾಗಿಸಿಕೊಂಡು ಅವರನ್ನು ಆಡಿಕೊಂಡು ಪೋಸ್ಟ್ ಹಾಕುವುದರಲ್ಲಿಯೇ ಜೀವನ ಕಳೆಯುತ್ತಿರುತ್ತಾರೆ.
ಇತ್ತೀಚಿಗೆ ಮೊಗಹೊತ್ತಿಗೆಯಲ್ಲಿ ಹೆಣ್ಣುಮಕ್ಕಳ ಮೇಲೆ ಗುಂಪು ದಾಳಿ ನಡೆಸುವುದು ಹೆಚ್ಚುತ್ತಿದೆ. `soft target ' ಎನ್ನುವುದನ್ನು ಸರಾಗವಾಗಿ ಕಂಡುಕೊಂಡಿದ್ದಾರೆ. ಯಾರನ್ನಾದರೂ ಹೀಗಿರಬೇಕು ಎಂದು ನಿಯಂತ್ರಿಸುವ ಹಕ್ಕನ್ನು ಯಾರು ಯಾರಿಗೆ ಕೊಟ್ಟಿದ್ದಾರೋ ತಿಳಿಯದು. ನಮ್ಮದು ತಪ್ಪು ವಿಚಾರಗಳಾಗಿದ್ದರೆ ವಾದ-ಸಂವಾದಗಳನ್ನು ಮಾಡಲಿ. ಅದನ್ನು ಬಿಟ್ಟು ವೈಯಕ್ತಿಕ ವಿಚಾರಗಳನ್ನು ಹಿಡಿದು ಓಡಿಸುವ ಪ್ರಯತ್ನ ಮಾಡುವ ಪಾಳೆಗಾರಿಕೆ ಒಪ್ಪತಕ್ಕದೇ ಅಲ್ಲ. ಯಾವ ಗುಂಪಿನ ವಿಚಾರಗಳು ನಮ್ಮನ್ನು ನಿಯಂತ್ರಿಸಬಾರದು. ಬದುಕನ್ನು ವಿಶಾಲ, ಮಾನವೀಯ ನೆಲೆಯಲ್ಲಿ ಅರ್ಥಮಾಡಿಕೊಳ್ಳುವುದಕ್ಕೆ ಇವು ಸಹಕಾರಿಯೂ ಅಲ್ಲ. ಇಲ್ಲಿ ಯಾರೂ ಅಸ್ಪೃಶ್ಯರಲ್ಲ. ಎಲ್ಲರೊಂದಿಗೆ ಬೆರೆತು, ಮಾತಾಡುತ್ತಲೇ ನಮ್ಮ ವಿಚಾರವನ್ನು ಗಟ್ಟಿಯಾಗಿ ಹೇಳುವ ಶಕ್ತಿಯನ್ನು ಉಳಿಸಿಕೊಳ್ಳಬೇಕು. ಇಲ್ಲವಾದರೆ ಅವಮಾನಿತರಾಗಿಯೋ, ಹೆದರಿಯೋ, ಬೇಸರದಿಂದಲೋ ಇಲ್ಲಿಂದ ಹೋಗಬೇಕಾಗುತ್ತದೆ. ಮೊಗಹೊತ್ತಿಗೆ ಸಮಾಜದ ಪ್ರತಿರೂಪ ಅಷ್ಟೇ. ಬದುಕನ್ನು ಅಲ್ಲಿ ಎದುರಿಸುವಾಗ ಇಲ್ಲಿಯೂ ಇದ್ದೇ ಎದುರಿಸಬೇಕು ಅನ್ನುವ ಛಲ ನಮ್ಮ ಹೆಣ್ಣುಮಕ್ಕಳಿಗೆ ಇರಬೇಕು ಎನ್ನುವುದೇ ನನ್ನ ಆಸೆ.

Thursday, September 27, 2018

ಪ್ರಸನ್ನ - ದೇವರು ಪ್ರತ್ಯಕ್ಷನಾದಾಗ ನಾವಿರಬೇಡವೇ ಅಲ್ಲಿ?

ವಿಷ್ಣು ಭಟ್ಟ ಗೋಡ್ಸೆ ಯ 1857 ರ ಸ್ವಾಂತ್ರ್ಯ ಸಂಗ್ರಾಮದ ವೀಕ್ಷಕ ಕಥನ -2- 10 -2018

 ರಥಬೀದಿ ಗೆಳೆಯರು { ರಿ } ಉಡುಪಿ

                               ವಿಶೇಷ ಉಪನ್ಯಾಸ --

                       ಡಾ/ ಜಿ. ಭಾಸ್ಕರ ಮಯ್ಯ -

                      ವಿಷ್ಣು ಭಟ್ಟ ಗೋಡ್ಸೆಯ " ನನ್ನ ಪ್ರವಾಸ "

                       {  1857 ರ ಪ್ರಥಮ ಸ್ವಾತಂತ್ಯ ಸಂಗ್ರಾಮದ ವೀಕ್ಷಕ ಕಥನ  }


                         2 - 10- 2018  ಮಂಗಳವಾರ , ಸಂಜೆ - 4.30

                            ಬಳಕೆದಾರರ ವೇದಿಕೆ  ಸಭಾಂಗಣ

                         ಸರಕಾರಿ ಪ್ರಾಥಮಿಕ ಶಾಲೆ  ವಠಾರ ,

                           { ಕಾರ್ಪೊರೇಷನ್ ಬ್ಯಾಂಕ್ ಬಳಿ }ಉಡುಪಿ -576101

                                ನಿಮಗೆ  ಸ್ವಾಗತ

contact -9448215779

                                             


Image may contain: one or more people and text

ಮಹದೇವ ಪ್ರಕಾಶ್ - - ಸುಭಾಷ್‌ ಪ್ರತಿಪಾದಿಸಿದ ದಂಗೆಯ ಮಾರ್ಗ ಗೆದ್ದಿತೇ?

Tuesday, September 25, 2018

ರಫೇಲ್ ಡೀಲ್; ತಡವರಿಸತೊಡಗಿದ ಬಿಜೆಪಿ ಮಾತುಗಾರರು

ದೇವನೂರು ಮಹಾದೇವ -- ‘ದಲಿತ’ ಕಂಡರೆ ಯಾಕೆ ಹೊಟ್ಟೆನೋವು?

ಕೇಂದ್ರ ಸರ್ಕಾರ ಅವಮಾನಿಸಿದ ಎಚ್‌ಎಎಲ್‌ಗೆ ಉಂಟು 7 ದಶಕಗಳ ಅಮೋಘ ಇತಿಹಾಸ

Folklore Unit --, JNU-ವಿಶೇಷ ಉಪನ್ಯಾಸ

Image may contain: text

ಶ್ರೀವತ್ಸ ಜೋಶಿ - ಹರಿಶ್ಚಂದ್ರ ಕಾವ್ಯ ಹಲಸಿನ ಹಣ್ಣಂತೆ ಬಿಡಿಸಿ ಹಂಚಿದರು!

ಇಸ್ರೇಲ್ ನೆಲದಲ್ಲಿ ಕನ್ನಡಿಗರ ಪರಾಕ್ರಮ

ಕಾವ್ಯ ಕಟ್ಟುವ ಕಲೆ

ಬೆಂಗಳೂರಿನ ಶಾಸನಗಳು - Leaving no stone unturned

ಡಾ / ವೀಣಾ ಬನ್ನಂಜೆ - ಸತ್ಯಕಾಮ ಅನಾವರಣ - Dr. Veena Bannanje - Sathyakama Anavarana - Episode 2

ಆದಿ ಪುರಾಣ - #AadiPurana Theatrical Trailer | Movie Releasing on 5th October | Shash...

Sunday, September 23, 2018

ವಿನೀಲ { ಪ್ರೊ/ ಅದ್ಯನಡ್ಕ ಕೃಷ್ಣ ಭಟ್ಟರ ಸಂಸ್ಮರಣ ಸಂಪುಟ } ಸಂ- ಅ. ರಾಮಚಂದ್ರ ಭಟ್

Image may contain: 1 person, smiling, text
adyanadka krishna bhat



ವಿನೀಲ { ಪ್ರೊ/ ಅದ್ಯನಡ್ಕ ಕೃಷ್ಣ ಭಟ್ ಸಂಸ್ಮರಣ ಸಂಪುಟ }

Vineela { A Commemorative  Volume on Pro. Adyanadka Krishna Bhat }

Edited by A. Ramachandra Bhat {aramachandrabhat@gmail.com }

Published by -SARASA PRAKASHANA , DIVYA ,5-1070 ,Kidiyoor  -Udupi- 576103

Pages 280 ,Price-rs 200



First Private Butterfly Park | ಖಾಸಗಿ ಚಿಟ್ಟೆ ಉದ್ಯಾನ ಸಮ್ಮಿಲನ್ ಶೆಟ್ಟಿ ಬಟರ್ ...

ಪಠ್ಯಪುಸ್ತಕ ವಿಳಂಬ; ಅಭಿಮಾನಿ ಪ್ರಕಾಶನ ಸೇರಿ ೨೪ ಮುದ್ರಣಾಲಯ ಕಪ್ಪುಪಟ್ಟಿಗೆ?

ಸಮ್ಮಿಶ್ರ ಸರ್ಕಾರ ಕೆಡವಲೆಂದೇ ಕೃತಕ ಬಿಕ್ಕಟ್ಟು ಸೃಷ್ಟಿಯಲ್ಲಿ ಮುಳುಗಿದ ಮಾಧ್ಯಮಗಳು

Udyavara Madhava Acharya -ಬಿ. ಗೋಪಾಲ ಶೆಟ್ಟರ " ದೇವಯಾನಿ ಶರ್ಮಿಷ್ಠೆ { ರಂಗಗೀತೆ...

ಅರ್ಚನಾ / ಸಮನ್ವೀ -- Archana and Samanvi - Kanjadalayatakshi - Kamalamanohari - Suddasaveri

ಎಚ್. ಎಸ್. ಶಿವಪ್ರಕಾಶ್ - ಮಗಳಿಗೆ ಪಾಠ

 
#_ಮಗಳಿಗೆ_ಪಾಠ_೧
--ಎಚ್. ಎಸ್. ಶಿವಪ್ರಕಾಶ್
ಬೇಕು ಬೇಡಗಳ ಆಟ ಆಡುವಾಗ
ಹುಷಾರು ಮಗಳೆ
ನನ್ನಂಥ ಅಪ್ಪಂದಿರು
ನಿಮ್ಮಮ್ಮನ ಥರಾ ಅಮ್ಮಂದಿರು
ಇನ್ನುಳಿದ ಅಣ್ಣ-ತಮ್ಮ, ಅಕ್ಕ-ತಂಗಿ
ಸುತ್ತು ಮುತ್ತಲ ಅಕ್ಕಪಕ್ಕದವರನ್ನೂ ಒಳಗೊಂಡು
ನಿನಗೆ ಎಲ್ಲರೂ ಕಲಿಸುತ್ತಾರೆ
ಈ ಖತರನಾಕ್ ಪಾಠವನ್ನು:
‘ಬೇಕೆನಿಸದ್ದನ್ನು ಬೇಡ ಅನ್ನು
ಬೇಡ ಅನಿಸಿದ್ದನ್ನು ಬೇಕು ಅನ್ನು
ಆಗ ಮಾತ್ರ ನೀನು ಪೂಜೆಗೆ ಲಾಯಕ್ಕು
ಪ್ರಾರ್ಥನೆಯ ವಸ್ತು
ಶಾಪಾನುಗ್ರಹ ಶಕ್ತಿಯೂ ನಿನ್ನ ಸುತ್ತ
ಹೊಡೆಯುತ್ತದೆ ಗಸ್ತು’
ಇದನ್ನು ನಂಬಬೇಡ
ಎಂದೆಂದಿಗೂ
ನಂಬಿದರೆ. ಬೇಕೆನಿಸಿದ್ದು
ಸೋಕುವುದೇ ಇಲ್ಲ ನಿನ್ನನ್ನು
ಬೇಡ ಅನಿಸಿದ್ದು ಬೇಡನ ಹಾಗೆ
ಬೇಟೆಯಾಡುತ್ತಿರುತ್ತದೆ ನಿನ್ನನ್ನು
ಆ ಸಾಚಾ ಸುಳ್ಳಿನ ಮುಳ್ಳು
ಸದಾ ಚುಚ್ಚುತ್ತಲೇ ಇರುತ್ತದೆ
ಆ ನೋವಿಂದ ಪಾರಾಗಲು
ನೀನೊಂದು ನೊಂದ ಜೀವಂತ ಶವವಾಗುತ್ತೀಯ
ಆ ಮೋಡವನ್ನು ಮುಟ್ಟಬೇಕು
ಈ ಚಿಟ್ಟೆ ಮುಂಗೈ ಮೇಲೆ ಕೂಡಬೇಕು
ಆ ಬಟ್ಟೆ ತೊಟ್ಟು ನಲಿದಾಡ ಬೇಕು
ಈ ನವಿಲುಗರಿಯನ್ನು ನೇವರಿಸಬೇಕು
ಇತ್ಯಾದಿ ಈ ಪೃಥ್ವಿ ಮಾತ್ರ ಕೊಡಬಲ್ಲ
ಸಣ್ಣಪುಟ್ಟ ಸುಖಗಳನ್ನೂ ಕಳೆದುಕೊಳ್ಳುತ್ತೀಯ
ಹುಷಾರು ಮಗಳೆ!
11 Comments
Shripad Bhat, Rajendra Prasad and 89 others
LikeShow more reactions
Comment
Comments

Saturday, September 22, 2018

ಬೊಳುವಾರು ಅವರ ಹೊಸ ಕಾದಂಬರಿ - " ಉಮ್ಮಾ "

 ಬೊಳುವಾರು ಅವರ " ಉಮ್ಮಾ " ಇಸ್ಲಾಮಿಕ್ ಪುರಾಣ ಲೋಕದ  ಗೌರವಾನ್ವಿತ ಮಹಿಳೆಯರನ್ನು ಕುರಿತ ಅಪೂರ್ವ ಕಾದಂಬರಿ. ಗ್ರೀಕ್ ಪುರಾಣ ಕತೆಗಳನ್ನು ಕುರಿತ   ಕಾದಂಬರಿ / ಕಾವ್ಯಗಳ ಪ್ರವೇಶ , ಆ ಪುರಾಣ ಲೋಕದ ಪರಿಚಯವಿಲ್ಲದವರಿಗೆ  ಕಷ್ಟವಾಗುವಂತೆ ಈ ಕಾದಂಬರಿಯನ್ನು  ಆರಂಭದಲ್ಲಿ ತಾಳ್ಮೆಯಿಂದ ಓದಬೇಕಾಗುತ್ತದೆ . ಮುಂದೆ  ಪ್ರವಾದಿಪತ್ನಿಯರ  ಸ್ವಗತಗಳು ಓದಿಸಿಕೊಂಡು ಹೋಗುತ್ತವೆ.  ಆಯಿಷಾ ಅವರ ಪಾತ್ರ ಸಂಕೇರ್ಣವಾಗಿದೆ , ಮನ ಮಿಡಿಯುತ್ತದೆ . ಪ್ರವಾದಿಯವರ ಮೊದಲ ಪತ್ನಿ ಖತೀಜಾ ಮತ್ತು ಅವರಿಗೆ ಉಡುಗೊರೆಯಾಗಿ ಬಂದ ಮಾರಿಯಾ ಅಲಕ್ಷಿತರಾಗಿದ್ದಾರೆ.
 ಇದೋದು ಪ್ರವಾದಿ ಭಾಗವತ . ಭಾಗವತದ   ರಾಧಾ  ಕೃಷ್ಣ ರ ಕುರಿತು ನೂರಾರು ಸಾಹಿತ್ಯ ಕೃತಿಗಳು ಬಂದಿವೆ. . ಆದರೆ    ಕೃಷ್ಣನ ಪತ್ನಿಯರನ್ನು ಕುರಿತ ಇಂಥ  ಕಾದಂಬರಿ ಬಂದಿಲ್ಲ .
  ಈ ಕಾದಂಬರಿಯ ಕಥನ ತಂತ್ರದಲ್ಲಿ ಒಂದು ವೈಚಾರಿಕ ಎಳೆ ಇದೆ. ಪುರಾಣ ಲೋಕವನ್ನು ವಾಸ್ವವ ಮಾರ್ಗದಲ್ಲಿ ಚಿತ್ರಿಸುವ ಈ ಕಾದಂಬರಿಯಲ್ಲಿ " ಪರ್ವ " ದಂತೆ ಪುರಾಣಭಂಜನೆಯೂ ಇದೆ.. ವಿಶ್ವಾಸಿಗಳ ಪುರಾಣವನ್ನು , " ಸಿಡಿಮದ್ದಿನಂಥ " ವಸ್ತುವನ್ನು ,ಅವಿಶ್ವಾಸಿಗಳಿಗೂ ಖುಷಿಕೊಡುವಂತೆ ಬರೆಯುವ ಅಸಿಧಾರಾ ವ್ರತದಲ್ಲಿ ಬೊಳುವಾರು ಯಶಸ್ವಿ ಆಗಿದ್ದಾರೆ. ನೇಮಿಚಂದ್ರರ " ಯಾದ್ ವಶೇಮ್ " ಸಂಶೋಧನೆ ಆಧಾರಿತ ಯಶಸ್ವಿ ಚಾರಿತ್ರಿಕ ಕಾದಂಬರಿ ..ಬೊಳುವಾರರ " ಉಮ್ಮಾ " ರಿಸ್ಕ್ ತೆಗೆದುಕೊಳ್ಳುವ ಲೇಖಕನ  " Bold and Beatifull "  ಕಾದಂಬರಿ.
  ’ ಉಮ್ಮಾ " ಇಂಗ್ಲೀಷ್ ಗಿಂತ ಮೊದಲು ಅರೇಬಿಕ್ ,  ಪರ್ಷಿಯನ್ ಭಾಷೆಗಳಿಗೆ ಅನುವಾದ ಆಗಬೇಕು , ಜಗದಗಲ ಹರಡಬೇಕು.
     ಈ ಕಾದಂಬರಿ ್ ಓದಿ ಮುಗಿಸಿದಾಗ You Tube ನಲ್ಲಿ ಕಂಡ ಮದೀನಾದ    ಪ್ರಾಚೀನ ಖಬರಸ್ಥಾನದ ಪಾರಿವಾಳಗಳು ನೆನಪಾದುವು
          - ಮುರಳೀಧರ ಉಪಾಧ್ಯ ಹಿರಿಯಡಕ
   

ರಾಜಕೀಯ ಒತ್ತಡ ಒಂದೇ ಅಲ್ಲ: ಕೆ. ಸತ್ಯನಾರಾಯಣ

ಶೇಖರ್ ಗುಪ್ತ --- ವಿದ್ವಜ್ಜನರೆಂದರೆ ಅಲರ್ಜಿ ಮೋದಿ ಸರ್ಕಾರಕ್ಕೆ!

ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ - - ಗಂಗಾವತರಣ { ದ. ರಾ. ಬೇಂದ್ರೆ } Da.Ra.Bendre's Gangavatarana by Bendaravadi pal Vcd

Da.Ra.Bendre's Gangavatarana by Bendaravadi pal Vcd

ಕನ್ನಡಕ್ಕೇ ಬದುಕು ಅರ್ಪಿಸಿದ ನಿರ್ಲಿಪ್ತ ಸಂತ ಬೆಂಡರವಾಡಿ ಸುಬ್ರಹ್ಮಣ್ಯ ಶರ್ಮ ನಿಧನ 22-9-2018

ರುಡಾಲೀ -- Classic movies rudaali- Dimple Kapadiya Raj Babbar

ಮಹಿಳಾ ಸಂವೇದನೆಗೆ ಸಿನಿ ಕನ್ನಡಿ ಹಿಡಿದ ಕಲ್ಪನಾ ವಾಜ್ಮಿ ನಿಧನ

| ‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾ

ಲೇಖಕಿ ವೈದೇಹಿ ಸಣ್ಣಕತೆಗಳನ್ನು ಆಧರಿಸಿದ ಸಿನಿಮಾ ‘ಅಮ್ಮಚ್ಚಿಯೆಂಬ ನೆನಪು’

ಪ್ರಸಾದ್ ರಕ್ಷಿದಿ -- ಮಲೆನಾಡಿನ ಮಹಾಮಳೆ –

ಬಿ. ಎಮ್. ಬಶೀರ - --- ಆಳ್ವಾಸ್ ನುಡಿಸಿರಿ ಮತ್ತು ಎಡಪಂಥೀಯರ ಬೆಕ್ಕಿನ ಬಿಡಾರ -

ಆಳ್ವಾಸ್‌ ನುಡಿಸಿರಿ 2018: ಡಾ| ಮಲ್ಲಿಕಾ ಘಂಟಿ ಸರ್ವಾಧ್ಯಕ್ಷತೆ

ವಿದ್ಯಾ ರಶ್ಮಿ ಪೆಲತ್ತಡ್ಕ -- - ಕಿರು ಓದಿನ ಈ ಕಾಲ

ಆನಂದ ಋಗ್ವೇದಿ - - ನಮ್ಮ ಬರಹದ ದಾರಿ

ಗುಜರಾತ್ ಬಯಲುಶೌಚ ಮುಕ್ತ ರಾಜ್ಯವಲ್ಲ: ವಾಸ್ತವ ಬಿಚ್ಚಿಟ್ಟ ಸಿಎಜಿ ವರದಿ

Tuesday, September 18, 2018

SPOKENWORD S G VASUDEV | ಕಲಾವಿದ ಎಸ್ ಜಿ ವಾಸುದೇವ್ ಅವರ ಸ್ಪೋಕನ್‌ ವರ್ಡ್‌

ಉಡುಪಿ - ಈಗಲೇ ನದಿಗಳಲ್ಲಿ ನೀರಿಲ್ಲ, ಬೇಸಗೆ ಹೇಗೆ?

Ravindranath Shanbhog --ಅನಿವಾಸಿ ಭಾರತೀಯರ ಹಿತರಕ್ಷಣೆ

ಎಮ್. ಆರ್. ಕಮಲ - ಬಟಾಣಿ ರಾಜಕುಮಾರಿ ಮತ್ತು ಹಳ್ಳಿ ಗಮಾರಿ

ಬಟಾಣಿ ರಾಜಕುಮಾರಿ ಮತ್ತು ಹಳ್ಳಿ ಗಮಾರಿ!-ಎಂ. ಆರ್. ಕಮಲ
ಪುಟ್ಟು ಚಿಕ್ಕವನಿದ್ದಾಗ ಜಗತ್ತಿನ `ಸುಕುಮಾರ' `ಸುಕುಮಾರಿ'ಯರ ಕತೆಗಳನ್ನು ಅತ್ಯಂತ ಆಸಕ್ತಿಯಿಂದ ಆಲಿಸುತ್ತಿದ್ದ. ಅದರಲ್ಲಿ `ವಡ್ಡಾರಾಧನೆ' ಯ `ಸುಕುಮಾರಸ್ವಾಮಿ'ಯ ಕಥೆ ಮತ್ತು `ರಾಜಕುಮಾರಿ ಮತ್ತು ಬಟಾಣಿ' ಎಂಬ ವಿದೇಶದ ಕತೆ ಬಹು ಮುಖ್ಯವಾದವು. ನಮ್ಮ ಜನಪದರು ಸಹ ಈ ವಿದೇಶಿ ಕಥೆಯಂತಹ ಅನೇಕ ಕತೆಗಳನ್ನು ಹೆಣೆದಿದ್ದಾರೆ. ರಾಜಕುಮಾರನೊಬ್ಬ ನಿಜವಾದ ರಾಜಕುಮಾರಿಯನ್ನು ಹುಡುಕಿಕೊಂಡು , ದೇಶ ವಿದೇಶ ಸುತ್ತಿ ಕೊನೆಗೆ ಯಾರನ್ನು ಒಪ್ಪದೇ ಮನೆ ಸೇರುತ್ತಾನೆ. ತಂದೆ-ತಾಯಿಗಳು ಬೇಸತ್ತು ಹೋಗಿರುವಾಗ ಒಂದು ರಾತ್ರಿ ಭಯಂಕರವಾದ ಮಳೆ ಆರಂಭವಾಗುತ್ತದೆ. ಬಿರುಗಾಳಿ ಬೇರೆ! ಅವೇಳೆಯಲ್ಲಿ ಯಾರೋ ಬಾಗಿಲು ತಟ್ಟಿದ ಶಬ್ದ! ತಂದೆ ಹೋಗಿ ನೋಡಿದರೆ ನಿಜವಾದ ರಾಜಕುಮಾರಿ ಬಾಗಿಲಲ್ಲಿ ತೊಯ್ದು ತೊಪ್ಪೆಯಾಗಿ ನಿಂತಿದ್ದಾಳೆ. ಅವಳನ್ನು ಒಳಗೆ ಕರೆದು, ಉಡುಪು ಬದಲಿಸಲು ಹೇಳಿದ ರಾಜಕುಮಾರನ ತಾಯಿ ಅವಳು ನಿಜವಾದ ರಾಜಕುಮಾರಿಯೋ ಅಲ್ಲವೋ ಎಂದು ಪರೀಕ್ಷಿಸುವ ಸಲುವಾಗಿ ಒಂದು ಉಪಾಯ ಮಾಡುತ್ತಾಳೆ. ಮೆತ್ತನೆಯ ಹಾಸಿಗೆಯ ಮೇಲೆ ಮತ್ತೆ ಇಪ್ಪತ್ತು ಮೆತ್ತನೆಯ ಹಾಸಿಗೆಗಳನ್ನು ಹಾಸಿ, ಕೆಳಗಿದ್ದ ಹಾಸಿಗೆಯ ಕೆಳಗೆ ಒಂದು ಬಟಾಣಿ ಇಡುತ್ತಾಳೆ. ರಾಜಕುಮಾರಿ ಹೂವಿನ ಏಣಿಯನ್ನೇರಿ ಹಾಸಿಗೆಯಲ್ಲಿ ಮಲಗುತ್ತಾಳೆ. ಬೆಳಗ್ಗೆ ಬಂದು ತಾಯಿ ನೋಡಿದರೆ ಕಣ್ಣುಗಳೆಲ್ಲ ಕೆಂಪಾಗಿ, ತಲೆ ಕೆದರಿಕೊಂಡು ನಿದ್ದೆಯನ್ನೇ ಮಾಡದೆ ಇಡೀ ರಾತ್ರಿಯನ್ನು ರಾಜಕುಮಾರಿ ಕಳೆದಿದ್ದಾಳೆ. ರಾಜಕುಮಾರನ ತಾಯಿ ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಹಾಸಿಗೆಯಲ್ಲಿ ಏನೋ ಒತ್ತುತ್ತಿದ್ದರಿಂದ ನಿದ್ದೆ ಬರಲಿಲ್ಲವೆಂದು ತಿಳಿಸುತ್ತಾಳೆ! ಆಗ ಗಂಡ-ಹೆಂಡತಿ ಇವಳು ನಿಜವಾದ ರಾಜಕುಮಾರಿ ಎಂದು ನಿರ್ಧರಿಸಿ ಮಗನನ್ನು ಮದುವೆಗೆ ಒಪ್ಪಿಸುತ್ತಾರೆ. ನಿಮಗೆಲ್ಲ ಈ ಕಥೆ ಹೇಳುವುದಕ್ಕೆ ದೊಡ್ಡ ಕಾರಣವಿದೆ.
ನಿನ್ನೆ ರಾತ್ರಿ ಕಣ್ಣೆಳೆಯಿತು ಎಂದು ಮಂಚದ ಮೇಲೆ ಹೊದಿಕೆಯನ್ನು ಹೊದ್ದುಕೊಳ್ಳದೆ, ದಿಂಬನ್ನು ಇಟ್ಟುಕೊಳ್ಳದೆ ಮಲಗಿಬಿಟ್ಟಿದ್ದೆ. ಪಾಪ ರಮೇಶ್, ಸಿನಿಮಾದಲ್ಲಿ ಹೆಂಡತಿಯರನ್ನು ನೋಡಿಕೊಳ್ಳುವಂತೆ ಒಂದು ಹೊದಿಕೆಯನ್ನು ಹೊದ್ದಿಸಿದ್ದಾರೆ, ದಿಂಬನ್ನು ಇಟ್ಟಿದ್ದಾರೆ. ಹತ್ತಾರು ದಿನದಿಂದ ನನ್ನ ದಿಂಬು ಹತ್ತಿಯನ್ನೆಲ್ಲ ಉದುರಿಸಿಕೊಂಡು, ನೆಪಕ್ಕೆ ಮಾತ್ರ ದಿಂಬಿನಂತೆ ಕಾಣುತ್ತಿದೆ ಎಂದು ಗಂಡನಿಗೆ ಒಮ್ಮೆ ಹೇಳಿದ್ದೆ. ಇಷ್ಟೆಲ್ಲಾ ದುರವಸ್ಥೆಯಲ್ಲಿರುವ, ದಿಂಬಿನಂತೆಯೂ ಕಾಣದ ಇದರ ಬಗ್ಗೆ ನನಗೆ ಕೊನೆಯಿರದ ವ್ಯಾಮೋಹ. ನನ್ನ ಮೂವತ್ತೈದು ವರ್ಷದ ಹೊದಿಕೆಯದು ಇನ್ನೊಂದು ಕತೆ. ಅದು ಅಲ್ಲಲ್ಲಿ ಎಳೆ ಬಿಟ್ಟು, ಕಂಡಿಗಳಾಗಿ, ಫ್ಯಾನ್ ಗಾಳಿ ಜೋರಾಗಿ ಬೀಸುವಾಗ ಒಂದು ಕಂಡಿಯಲ್ಲಿ ಮೂಗನ್ನಿಟ್ಟುಕೊಂಡು, ಗಾಳಿ ಹೀರುತ್ತಲೇ ಬೆಚ್ಚಗೆ ಮಲಗುವ ಸೌಭಾಗ್ಯ ಈ ಹೊದಿಕೆಯಿಂದ ಮಾತ್ರ ಸಿಗುವುದು. ಜೊತೆಗೆ ಒಗೆದು, ಒಗೆದು ಅದೆಷ್ಟು ಮೆತ್ತಗಾಗಿದೆ ಎಂದರೆ ಮೈಮೇಲಿರುವುದೂ ಗೊತ್ತಾಗುವುದಿಲ್ಲ. ಮಕ್ಕಳು ನನ್ನ ಹೊದಿಕೆ, ದಿಂಬುಗಳನ್ನು ನೋಡಲಾರದೆ ಹೊಸದನ್ನು ತಂದುಕೊಟ್ಟರು. ಪುಟ್ಟುವಂತೂ ಫ್ರಾನ್ಸ್ ನಿಂದ ಮೆತ್ತಗೆ ಇರುವ ಹೊದಿಕೆಗಳನ್ನು ನನಗೆ, ಗಂಗಮ್ಮನಿಗೆ ಒಂದು ದೊಡ್ಡ ಸೂಟ್ ಕೇಸ್ ನಲ್ಲಿ ಹಾಕಿಕೊಂಡು ತಂದ. ನಾನು ಒಂದು ದಿನವೂ ಹೊದ್ದುಕೊಳ್ಳಲಿಲ್ಲ. ರಾತ್ರಿ ನನ್ನ ಕಾಲ ಬಳಿ ನಿದ್ರಿಸುವ ಕಾಳ ಅದರ ಮೇಲೆ ಸುಖವಾಗಿ ಗೊರಕೆ ಹೊಡೆಯುತ್ತಿರುತ್ತಾನೆ. ನಿನ್ನೆ ನಾನು ನಿದ್ರಿಸಿದ ಮೇಲೆ ನನ್ನ ಗಂಡ ಅನುಕಂಪಗೊಂಡು ನನ್ನ ದಿಂಬಿಗೆ ಒಂದಿಷ್ಟು ಹತ್ತಿಯನ್ನು ತುರುಕಿ, ಅದಕ್ಕೊಂದು ಆಕಾರ ಕೊಟ್ಟು, ಮೆತ್ತಗೆ ಮಾಡಿ ತಲೆಗಿಟ್ಟಿದ್ದಾನೆ. ಒಳ್ಳೆಯದೊಂದು ಹೊದಿಕೆಯನ್ನು ಬೇರೆ ಹೊದಿಸಿದ್ದರಲ್ಲ! ಮಲಗಿ ಸ್ವಲ್ಪ ಹೊತ್ತಿಗೆ ನನಗೆ ಎಚ್ಚರಾಗಿ ಹೋಯಿತು. ಏನು ಮಾಡಿದರೂ ನಿದ್ದ ಬರುತ್ತಿಲ್ಲ. ಒಂದು, ಎರಡು ಎಣಿಸಿ ನೋಡಿದೆ. ಪಕ್ಕದಲ್ಲಿದ್ದ ಕಾಳನನ್ನು ಮಾತಾಡಿಸಿದೆ. ತಲೆ ಕಿತ್ತುಕೊಂಡೆ, ಕಣ್ಣುಗಳು ಕೆಂಪಗಾದವು. ಬೆಳಗ್ಗೆ ನಾಲ್ಕು ಗಂಟೆಯಾಗುವುದನ್ನೇ ಕಾಯುತ್ತ ಲೈಟ್ ಹಾಕಿದೆ. ನನ್ನ ಗಂಡ ಎದ್ದು ನೋಡುತ್ತಾನೆ. `ರಾಜಕುಮಾರಿ ಮತ್ತು ಬಟಾಣಿ' ಕಥೆಯ ರಾಜಕುಮಾರಿಯಂತಾಗಿ ಒದ್ದಾಡುತ್ತಿದ್ದೇನೆ. `ಪುಟ್ಟು ಊರಲ್ಲಿ ಇಲ್ಲ, ಇಷ್ಟು ಬೇಗ ಎದ್ದು ಏನು ಮಾಡಬೇಕು?ಮಲಕ್ಕೋ, ಮುಖ ನೋಡ್ಕೋ ಹೇಗಾಗಿದೆ?' ಎಂದು ಬೈದು, ತನ್ನ ನಿದ್ದೆಯನ್ನು ಕೆಡಿಸಿದ್ದಕ್ಕೆ ಗೊಣಗಿದ. ನಾನು ಕಣ್ಣು ಬಿಟ್ಟು ನೋಡಿ ಹೌಹಾರಿದೆ!
ದಿಂಬನ್ನು ಯಾರೋ ಸರಿಮಾಡಿದ್ದಾರೆ! ಯಾವುದೋ ಹೊದಿಕೆಯನ್ನು ಹೊದಿಸಿಬಿಟ್ಟಿದ್ದಾರೆ. ಹತ್ತಿಯೆಲ್ಲ ಮೂಲೆ ಸೇರಿ, ಒಂದು ಕಡೆ ಕಲ್ಲಿನಂತಾಗಿದ್ದ, ಒಂದು ಕಡೆ ಹತ್ತಿಯೇ ಇಲ್ಲದೆ ಟೊಳ್ಳಾಗಿದ್ದ ನನ್ನ ದಿಂಬಿನ ಸ್ವರೂಪ ಬದಲಾಗಿ ಹೋಗಿದೆ. ಜೊತೆಗೆ ಯಾವುದೋ ಮೆತ್ತೆಯನ್ನು ಬೇರೆ ಹೊದ್ದಿಸಿ ನನಗೆ ನಿದ್ರೆ ಬಾರದಂತಾಗಿದೆ ಎಂದು ಹೊಳೆಯಿತು. `ಯಾರು ನನ್ನ ದಿಂಬು ಮುಟ್ಟಿದ್ದು?' ಕಿರುಚಿದೆ. ಅವಳು ಯಾವಳೋ ರಾಜಕುಮಾರಿಗೆ ಬಟಾಣಿ ಒತ್ತಿ ನಿದ್ದೆ ಬಂದಿಲ್ಲ, ನನಗೆ ಈ ಕಲ್ಲಿನ ದಿಂಬು ಒತ್ತದೆ ನಿದ್ದೆ ಬಂದಿಲ್ಲ! ನನ್ನ ಈ ವಿಚಿತ್ರ ವರ್ತನೆ ನನ್ನ ಗಂಡನಿಗೆ ಆಘಾತ ಉಂಟು ಮಾಡಿರಬೇಕು. ನಾನು ಚಿಕ್ಕವಳಿದ್ದಾಗ ನನ್ನ ತಂದೆ ಕೊಬ್ಬರಿ ಸುಲಿಸಿ, ಒಳ್ಳೆ ರೇಟ್ ಬರಲಿ, ಆಮೇಲೆ ಮಾರೋಣ ಎಂದು ಮೂಟೆಗಳಲ್ಲಿ ಅದನ್ನು ತುಂಬಿ ನಡುಮನೆಯಲ್ಲಿ ಸಾಲಾಗಿ ಇಟ್ಟಿರುತ್ತಿದ್ದರು. ಆಗ ಮನೆಯಲ್ಲಿ ಮಂಚ ಇರಲಿಲ್ಲ. ನನಗೆ ಈ ಕೊಬ್ಬರಿ ಮೂಟೆಗಳು ಮಂಚದಂತೆ ಕಂಡು ಖುಷಿಯಾಗಿ ರಾತ್ರಿ ಅವುಗಳ ಮೇಲೆ ಕೂತು ಓದಿಕೊಳ್ಳುತ್ತಿದ್ದೆ. ಹಾಗೆ ನಿದ್ದೆ ಮಾಡಿಬಿಡುತ್ತಿದ್ದೆ. ಈ ಕಲ್ಲಿನಂಥ ಕೊಬ್ಬರಿ ಗಿಟುಕಿನ ಮೇಲೆ ನಿದ್ದೆ ಮಾಡುತ್ತೆ ಪಾಪ ಅಂತ ಅಮ್ಮ ಯಾವುದೋ ಹೊತ್ತಿನಲ್ಲಿ ಎಳೆದು ಹಾಸಿಗೆಗೆ ಹಾಕಿರುತ್ತಿದ್ದಳು. ಆ ಹಾಸಿಗೆಗಳೇನೂ ಹಂಸ ತೂಲಿಕಾ ತಲ್ಪಗಳಾಗಿರಲಿಲ್ಲ. ಅಲ್ಲಲ್ಲಿ ಹತ್ತಿ ಗಂಟು ಕಟ್ಟಿಕೊಂಡು ಹೋಗಿರುತ್ತಿತ್ತು. ದಿಂಬುಗಳಿಗೂ ಕಲ್ಲುಗಳಿಗೂ ಅಂತಹ ವ್ಯತ್ಯಾಸ ಕೂಡ ಇರುತ್ತಿರಲಿಲ್ಲ!
ವರ್ಷಕ್ಕೊಮ್ಮೆ ಸಾಬಣ್ಣ ತನ್ನ ಉಪಕರಣಗಳನ್ನು ದೊಡ್ಡ ಚೀಲಕ್ಕೆ ತುಂಬಿಕೊಂಡು ಹಾಸಿಗೆ ಮಾಡಿಕೊಡಲು ಬರುತ್ತಿದ್ದ. ಆ ದಿನ ಅಂಗಳಕ್ಕೆ ಅಥವಾ ಜಗುಲಿಗೆ ಮನೆಯಲ್ಲಿದ್ದ ಹತ್ತಾರು ಹಾಸಿಗೆಗಳು ವರ್ಗಾವಣೆಯಾಗುತ್ತಿದ್ದವು. ಮೊದಲು ಹಾಸಿಗೆಯ ಹೊಲಿಗೆಗಳನ್ನು ಬಿಚ್ಚುವುದು, ನಂತರ ಒಳಗಿದ್ದ ಹತ್ತಿಯನ್ನೆಲ್ಲ ಮಂದಳಿಗೆ ಚಾಪೆ ಮೇಲೆ ಹಾಕುವುದು. ಸಾಬಣ್ಣ . ತಂಬೂರಿ ತರಹ ಎಂಥದ್ದೋ ಒಂದು ಉಪಕರಣ ತರುತ್ತಿದ್ದ. ಅದಕ್ಕೆ ಒಂದೋ, ಎರಡೂ ದಪ್ಪ ತಂತಿಗಳು. ಆ ತಂತಿಯಲ್ಲಿ ಮೀಟಿಕೊಂಡು ಹತ್ತಿಯನ್ನು ಮೃದು ಮಾಡುತ್ತಿದ್ದ. ಆ ಸಮಯದಲ್ಲಿ ಅಂಗಳದ ತುಂಬಾ ಹಾರುತ್ತಿದ್ದ ಹತ್ತಿಯನ್ನು ಹಿಡಿಯಲು ನಾವು ಖುಷಿಯಿಂದ ಓಡುತ್ತಿದ್ದೆವು. ಅವು ಗಿಡದ ಮೇಲೆ, ಹೆಂಚಿನ ಮೇಲೆಲ್ಲಾ ಕೂತಿರುತ್ತಿದ್ದವು. ಹೊಸ ಹಾಸಿಗೆಯ ಕವರ್ ಬೇಕೆಂದರೆ ಮೊದಲೇ ಹೊಲಿದು ತಂದಿದ್ದ (ಒಂದು ಭಾಗವನ್ನು ಬಿಟ್ಟು) ಪಟಾ ಪಟಿ ಡಿಸೈನ್ ಬಟ್ಟೆಗೆ ಈ ಹತ್ತಿಯನ್ನು ತುಂಬಿ, ಹತ್ತಿ ಹಾಸಿಗೆಯಲ್ಲಿ ಜಾರದಂತೆ ಮಧ್ಯೆ ಮಧ್ಯೆ ಒಂದೊಂದು ಟಾಕ್ ಹಾಕಿ ಹೊಲಿದುಕೊಡುತ್ತಿದ್ದ. ಆಮೇಲೆ ಸರಿಯಾಗಿ ಕೂರುವಂತೆ ಯಾವುದೋ ಬಡಿಗೆಯಿಂದ ಬಡಿಯುವುದು ಇತ್ಯಾದಿ. ಅವತ್ತು ಸಾಬಣ್ಣನಿಗೆ ಊಟ, ತಿಂಡಿಯೆಲ್ಲ ನಮ್ಮ ಮನೆಯಲ್ಲೇ. ಅವನ ಕಥೆಯನ್ನು ಕೇಳಿಕೊಂಡು ಸುತ್ತ ನಾಲ್ಕಾರು ಜನ ಕುಳಿತಿರುತ್ತಿದ್ದರು. ನಾವು ಮಕ್ಕಳು ಹತ್ತಿಯನ್ನು ಅಂಗಳದ ತುಂಬಾ ಹಾರಿಸಿಕೊಂಡು, ಅಮ್ಮನ ಹತ್ತಿರ ಬೈಸಿಕೊಂಡು ಓಡಾಡುವುದು. ಆದರೆ ಹಾಸಿಗೆಯ ಮೇಲೆ ನಾವು ಕುಣಿಯುತ್ತಿದ್ದ ಪರಿಗೆ ಬಹುಬೇಗನೆ ಹಾಸಿಗೆಗಳು ಕಲ್ಲಾಗಿ, ಟೊಳ್ಳಾಗಿ ಹೋಗುತ್ತಿದ್ದವು. ಈ ರೀತಿ ಬಾಲ್ಯವನ್ನು ಕಳೆದ ನನಗೆ ಒಳ್ಳೆಯ ಹೊದಿಕೆ, ದಿಂಬುಗಳು ಶತ್ರುಗಳಂತೆ ಕಂಡಿದ್ದು ಅಚ್ಚರಿಯೇನಲ್ಲ. ಬೆಳಗ್ಗೆ ಬಂದ ಸಿಟ್ಟಿಗೆ ದಿಂಬಿನ ಮೂಲೆಯಲ್ಲಿನ ಹೊಲಿಗೆಯನ್ನು ಕಿತ್ತು, ಒಂದಿಷ್ಟು ಹತ್ತಿಯನ್ನು ತೆಗೆದೆಸೆದೆ. ನನ್ನ ಗಂಡ ಇಂಥ ವಿಚಿತ್ರ ಹೆಂಗಸನ್ನು ಬೇರೆಲ್ಲೂ ಕಂಡಿಲ್ಲ ಎನ್ನುವಂತೆ ನೋಡಿದ. ಈ ಮೆತ್ತನೆಯ ದಿಂಬಿನ ಮೇಲೆ ಮಲಗಿ, ಕತ್ತು ಬೇರೆ ಉಳುಕಿ, ಬರೆಯಲು ಒದ್ದಾಡುತ್ತಿದ್ದೇನೆ! ನನಗೆ ಹೊದಿಕೆ ಹೊದಿಸಿ, ದಿಂಬು ಸರಿ ಮಾಡಿಕೊಟ್ಟಿದ್ದಕ್ಕೆ ಇವತ್ತು ಇಡೀ ದಿನ ಬೈಗುಳವನ್ನು ಬೇರೆ ಕೇಳಬೇಕು!
`ಪುಷ್ಪಕ ವಿಮಾನ' ಮೂಕಿ ಚಿತ್ರದಲ್ಲಿ ಹೋಟೆಲ್ ನಲ್ಲಿ ನಿದ್ದೆ ಬಾರದೆ, ತಾನಿದ್ದ ಮನೆಗೆ ಮರಳಿ ಬಂದು, ಪಕ್ಕದ ಟೆಂಟಿನ ಚಲನಚಿತಗಳ ವಿಚಿತ್ರ ಸದ್ದುಗಳನ್ನು ರೆಕಾರ್ಡ್ ಮಾಡಿಕೊಂಡು, ಹೋಟೆಲ್ ಗೆ ಮರಳಿ, ಅವುಗಳನ್ನು ಹಾಕಿಕೊಂಡು ಕೇಳುತ್ತ ಮಲಗುತ್ತಾನಲ್ಲ ಹಾಗಾಗಿದೆ ನನ್ನ ಸ್ಥಿತಿ. ಮೀನಿನ ಪೇಟೆಯಲ್ಲಿರುವವರಿಗೆ ಮೀನಿನ ವಾಸನೆಯಿಲ್ಲದೆ ಬದುಕಲು ಸಾಧ್ಯವಾಗದಂತೆ. ಇದ್ದಕ್ಕಿದ್ದಂತೆ ನೀವ್ಯಾರು ದಯವಿಟ್ಟು ನಮ್ಮ ಮನೆಗೆ ಬರಬೇಡಿ. ನಾನು ಹಾಕಿಕೊಳ್ಳುವ ಕಿತ್ತುಹೋದ ಬಟ್ಟೆಗಳು, ಅವತಾರಗಳನ್ನು ನೋಡಿದರೆ ನಿಮ್ಮ ಮನಸ್ಸಿನಲ್ಲಿದ್ದ ನನ್ನ ರೂಪ ಅಳಿದುಹೋಗಬಹುದು!.

ಪ್ರಮುಖ ಸಚಿವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವುದು ಕೇಂದ್ರದ ಹೊಣೆಯಲ್ಲವೇ?

Monday, September 17, 2018

ಬಂಟ್ವಾಳ - ಜಾಕ್ ಮೂಲಕ ಮನೆ ಲಿಫ಼್ಟಿಂಗ್ House lifting with Jacks in Managalore..

ದಕ್ಷಿಣ ಕನ್ನಡ ಜಿಲ್ಲೆ ಜನತೆಗೆ ಶಾಕಿಂಗ್ ಸುದ್ದಿ- ಬರಿದಾಗುತ್ತಿದೆ ನೇತ್ರಾವತಿ

ನದಿಗಳಲ್ಲಿ ದಿಢೀರ್ ಇಂಗಿದ ನೀರು ಎಚ್ಚರಿಕೆ ಗಂಟೆ

ಬಲಿಪ ಭಾಗವತರಿಗೆ ಪಾರ್ತಿಸುಬ್ಬ ಪ್ರಶಸ್ತಿ -2018

ದೇರಳಕಟ್ಟೆಯಲ್ಲಿ ಮಂಗಳೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ. -15--9-2018.

ದೇರಳಕಟ್ಟೆಯಲ್ಲಿ ಮಂಗಳೂರು ಕನ್ನಡ ಸಾಹಿತ್ಯ ಸಮ್ಮೇಳನ.. part 2 [ 15- 9-2019 }

ದೇರಳಕಟ್ಟೆ ಯಲ್ಲಿ ಕನ್ನಡ ಸಾಹಿತ್ಯ ಪರಿಷತ್‍ನ ಮಂಗಳೂರು ತಾಲೂಕು ಸಮ್ಮೇಳನ [ Part -1 } 15--- 9-2018

Sunday, September 16, 2018

ಡಿ. ಉಮಾಪತಿ - ‘ರಾಮರಾಜ್ಯ’ದಲಿ ಚಂದ್ರಶೇಖರನೆಂಬ ಒಬ್ಬ ‘ರಾವಣ’

Folk Dance Performed by the Marathi Community | ಮರಾಠಿ ಆಚರಣೆ ಬಾಳಸಾಂತ್ ನೃತ್ಯ

ವಿಡಿಯೋ | ಮರಾಠಿಗರ ಐತಿಹ್ಯ ವಿವರಿಸುವ ಪಾರಂಪರಿಕ ಕಲೆ ಬಾಳಸಾಂತ್

ಅರವಿಂದ ಚೊಕ್ಕಾಡಿ -- ಡಾ /ಶ್ರೀಪಾದ ಭಟ್ ನಿರ್ದೇಶಿಸಿದ " ಪಾಪು ಗಾಂಧಿ , ಬಾಪು ಗಾಂಧಿ "

*ಅರವಿಂದ ಚೊಕ್ಕಾಡಿ
ಡಾ.ಎ.ಪಿ.ಜೆ.ಅಬ್ದುಲ್ ಕಲಾಂ,ಹೋಮಿ ಜಹಾಂಗೀರ್ ಬಾಭಾ ಮುಂತಾದ ವಿಜ್ಞಾನಿಗಳು ಕಲೆಗಳನ್ನು ಹವ್ಯಾಸವಾಗಿ ಹೊಂದಿದ್ದರು.ಏಕೆಂದರೆ ನಮ್ಮೆಲ್ಲ ಒತ್ತಡಗಳ ನಡುವೆ ಕಲೆಗಳು ನಿರಾಳತೆಯನ್ನು ಒದಗಿಸುವುದಷ್ಟೆ ಅಲ್ಲದೆ ಬದುಕನ್ನು ಸಮೃದ್ಧಗೊಳಿಸುತ್ತವೆ.ಅರ್ಥಪೂರ್ಣಗೊಳಿಸುತ್ತವೆ.ಮಾರ್ದವತೆಯನ್ನು ತರುತ್ತವೆ.ಆಲೋಚನೆಯನ್ನು ಸಂವೇದನಾಶೀಲಗೊಳಿಸುತ್ತವೆ.ಕಲೆಯನ್ನು ಆಳವಾಗಿ ಅನುಭವಿಸುವವರು ಕ್ರೂರಿಗಳಾಗಿ ಕ್ರೌರ್ಯವನ್ನು ಮೆರೆಯಲು ಸಾಧ್ಯವಿಲ್ಲ.
ಪ್ರಸ್ತುತ ಬದುಕಿನಲ್ಲಿ ಬುದ್ಧಿವಂತರಿಗೆ ಕೊತೆ ಇಲ್ಲ.ಲಾಭ-ನಷ್ಟಗಳ ಪಕ್ಕಾ ಲೆಕ್ಕಾಚಾರ ಹಾಕಬಲ್ಲವರಿಗೆ ಕೊರತೆ ಇಲ್ಲ.ಉಪಯುಕ್ತತೆಯನ್ನೆ ಕೇಂದ್ರೀಕರಿಸಿದ ಶಿಕ್ಷಣವು ಆ ಕೆಲಸವನ್ನು ಮಾಡುತ್ತಿದೆ.ವ್ಯಾವಹಾರಿಕ ಬದುಕು ಕೂಡ ಅದನ್ನೆ ರೂಢಿಸುತ್ತಿದೆ.ಇಂತಹ ಸನ್ನಿವೇಶದಲ್ಲಿ ಉಪಯುಕ್ತತೆಯ ಲೆಕ್ಕಾಚಾರಗಳನ್ನು ಮೀರಿದ ಮನುಷ್ಯ ಸಂವೇದನೆಗಳನ್ನು ಗಟ್ಟಿಗೊಳಿಸುವುದಕ್ಕಾಗಿ ಶಿಕ್ಷಣಕ್ಕೆ ಕಲೆಯನ್ನು ಹೆಚ್ಚು ಹೆಚ್ಚು ಸಂಯೋಜಿಸಬೇಕಾದ ಅಗತ್ಯವಿದೆ.ಅಂತಹ ಅನುಭವವೊಂದು ಹೀಗಿದೆ:
*************
ರಂಗಾಯಣ ತಂಡದಲ್ಲಿ ಕಲಾವಿದರಾಗಿರುವ ನಿತಿನ್ ಡಿ.ಆರ್.ಮುಂಡಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹಿರಿಯ ವಿದ್ಯಾರ್ಥಿ.ಕಳೆದ ವಾರ ಅದೇ ಶಾಲೆಯಲ್ಲಿ ರಂಗಾಯಣದ ತಂಡದಿಂದ ' ಗಾಂಧಿ ' ನಾಟಕ ಪ್ರದರ್ಶಿತವಾಯಿತು.ಕರಾವಳಿಯ ಜಿಲ್ಲೆಗಳಲ್ಲಿ ರಂಗಭೂಮಿ ನಾಟಕಗಳು ಬಹಳ ವಿರಳ.ಅಂತಾದ್ದರಲ್ಲಿ ಇದು ಪ್ರೌಢಶಾಲೆಯಲ್ಲಿ ಪ್ರದರ್ಶಿತವಾದ ನಾಟಕ.ಆದರೆ ರಂಗಭೂಮಿ ನಾಟಕಗಳಿಗೆ ಬೇರೆ ಯಾವ ನಾಟಕಗಳಿಗೂ ಇಲ್ಲದ ಒಂದು ಗುಣವಿದೆ.ಅದು ಮನುಷ್ಯನ ಮನೋವಲಯದ ಮೇಲೆ ಪ್ರಭಾವವನ್ನು ಬೀರುತ್ತದೆ.ಎಲ್ಲ ಪ್ರದೇಶಕ್ಕೂ ಸಾಮಾನ್ಯ ಎನಿಸುವ ಸಿನಿಮಾಗಳು,ಕರಾವಳಿ ಜಿಲ್ಲೆಗಳಲ್ಲಿ ಪ್ರಧಾನವಾದ ಯಕ್ಷಗಾನ ಬಯಲಾಟಗಳೆಲ್ಲ ಆರ್ಭಟ ಪ್ರಧಾನವಾದದ್ದು.ಬಹಿರ್ಮುಖತೆಯೇ ಅವುಗಳ ಗುಣ.ಆದರೆ ರಂಗಭೂಮಿ ಮೌನದಲ್ಲೆ ಮಾತನ್ನು ಸೃಷ್ಟಿಸುತ್ತದೆ.ಅಂತರ್ಮುಖಿಯಾಗಿ ಚಲಿಸಿ ಮನುಷ್ಯನ ಮನೋಪ್ರಪಂಚಕ್ಕೆ ಪ್ರವೇಶಿಸುತ್ತದೆ.ಧ್ವನಿ ಮತ್ತು ವರ್ಣಗಳು ಅದರಲ್ಲಿ ವಿಶೇಷವಾದ ಸಂಚಲನಾ ಕಾರಕಗಳು.ಅದು ಪ್ರೌಢಶಾಲೆಯ ಮಕ್ಕಳ ಮೇಲೂ ಪರಿಣಾಮವನ್ನು ಬೀರಿ ಪರಿವರ್ತನೆಯನ್ನು ತರಬಲ್ಲುದು ಎಂಬುದಕ್ಕೆ ನಾಟಕದ ನಂತರ ಒಬ್ಬ ವಿದ್ಯಾರ್ಥಿ " ನನಗೆ ಗಾಂಧಿ ಇಷ್ಟವಿರಲಿಲ್ಲ.ಆದರೆ ಈ ನಾಟಕವನ್ನು ನೋಡಿದ ಮೇಲೆ ಗಾಂಧಿ ಇಷ್ಟವಾದರು.ಜಾತಿವಾದವನ್ನು ಯಾವ ರೀತಿಯಲ್ಲೂ ಮಾಡಬಾರದೆಂಬುದನ್ನು ಈ ನಾಟಕದಿಂದ ಕಲಿತೆ"ಎಂದದ್ದು ಸಾಕ್ಷಿಯಾಯಿತು.ಕಲಾವಿದರು ತಮ್ಮ ಅನುಭವವನ್ನು ಹೇಳುತ್ತಾ ಕಾಲೇಜೊಂದರಲ್ಲಿ ನಾಟಕದ ಪ್ರದರ್ಶನದ ನಂತರ ಒಬ್ಬ ವಿದ್ಯಾರ್ಥಿ," ನಾನು ಗಾಂಧಿಯನ್ನು ದ್ವೇಷಿಸುತ್ತಿದ್ದೆ.ಏಕೆಂದರೆ ನಾನು ಗಾಂಧಿಯನ್ನು ತಿಳಿದುಕೊಂಡಿರಲಿಲ್ಲ.ಈಗ ಗಾಂಧಿ ನನ್ನ ಪೂರ್ವೀಕರೆಂದು ಹೆಮ್ಮೆಯಿಂದ ಹೇಳುತ್ತೇನೆ.ಗಾಂಧಿಯನ್ನು ತಿಳಿದುಕೊಳ್ಳುತ್ತೇನೆ" ಎಂದಿದ್ದನೆಂದು ನೆನಪು ಮಾಡಿಕೊಂಡರು.
ಕಲೆಯ ಯಶಸ್ಸು ಕಡಿಮೆ ಮಾತನಾಡುವುದರಲ್ಲಿಯೂ ಇದೆ ಎಂಬುದನ್ನು ಕ್ಷಣ ಕಾಲ ನಾಟಕದಲ್ಲಿ ಬಂದು ಹೋಗುವ ಅಂಬೇಡ್ಕರ್ ಪಾತ್ರ ಚೆನ್ನಾಗಿ ಮನವರಿಕೆ ಮಾಡಿ ಕೊಟ್ಟಿತು."ಬಾಪೂ,ಗೋಖಲೆಯವರು ನಿಮ್ಮನ್ನು ಒಂದು ವರ್ಷ ದೇಶ ಸಂಚಾರ ಮಾಡಲು ಹೇಳಿದ್ದರು.ನಾನು ಹೇಳುತ್ತಿದ್ದೇನೆ.ಇನ್ನೊಂದು ವರ್ಷ ದೇಶ ಸಂಚಾರವನ್ನು ನೀವು ಮಾಡಬೇಕು.ಗೋಖಲೆಯವರು ನಿಮಗೆ ಆಗ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಬಾರದು,ಸಾರ್ವಜನಿಕ ಹೇಳಿಕೆಗಳನ್ನು ಕೊಡಬಾರದು ಎಂದು ಹೇಳಿದ್ದರು.ನಾನು ಹೇಳುತ್ತಿದ್ದೇನೆ.ಅಸ್ಪೃಷ್ಯತೆಯ ಬಗ್ಗೆ ನೀವು ಈ ಪರ್ಯಟನೆಯಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ಕೊಡಬೇಕು"ಎಂದು ಪಾತ್ರ ಹೊರಟು ಹೋಗುತ್ತದೆ.ಅದಕ್ಕೆ ಗಾಂಧಿಯ ಪಾತ್ರ " ಸರಿ ಬಾಬಾ ಸಾಹೇಬ್" ಎನ್ನುವುದರ ಹೊರತಾಗಿ ಬೇರೇನೂ ಉತ್ತರಿಸುವುದಿಲ್ಲ.ನಂತರ ಪರ್ಯಟನೆ.ಈ ದೃಶ್ಯ ಸರಿ ಎನಿಸಿದ ಮೇಲೆ ಒಂದು ಕ್ಷಣವೂ ಸುಮ್ಮನಿರದ ಗಾಂಧಿಯ ವ್ಯಕ್ತಿತ್ವವನ್ನು ಚೆನ್ನಾಗಿ ನಿರೂಪಿಸುತ್ತದೆ.
ಗಾಂಧಿ ಎಂದರೆ ಈಗ ಮನಃಪಟಲದಲ್ಲಿ ಬರುವುದು ಉಪ್ಪಿನ ಸತ್ಯಾಗ್ರಹದ ನಂತರದ ಗಾಂಧಿಯ ವ್ಯಕ್ತಿತ್ವ.ಆದರೆ ಗಾಂಧಿ ಕೂಡ ನಮ್ಮಂತೆಯೇ ಮನುಷ್ಯರಾಗಿದ್ದರೆಂಬುದನ್ನು ನಾಟಕವು ಮನಮುಟ್ಟುವಂತೆ ಹೇಳಿತು.ತಾಯಿಗೆ ಸುಳ್ಳು ಹೇಳುವ ಮಗು ಮೋಹನದಾಸ,ತಪ್ಪಿಗೆ ತಂದೆಯಿಂದ ಶಿಕ್ಷೆ ಕೇಳುವ ಮೋಹನ ದಾಸ ವ್ಯಕ್ತಿತ್ವ ವಿಕಾಸದ ಪ್ರಾಥಮಿಕ ಲಕ್ಷಣಗಳನ್ನು ಚೆನ್ನಾಗಿ ನಿರೂಪಿಸಿತು.ಅದರ ಜೊತೆಗೆ ಗಾಂಧಿಯ ಇಡೀ ಜೀವನದಲ್ಲಿ ಕಾಣಿಸುವ, ತಾನು ಮಾಡಿದ್ದು ಸರಿಯಾಗಲಿಲ್ಲವೊ ಏನೊ ಎನ್ನುವ ಆತ್ಮಾವಲೋಕನದ ಗುಣವನ್ನು ಬಾಲ್ಯದಲ್ಲೆ ಮೋಹನದಾಸ ಹೇಗೆ ಹೊಂದಿದ್ದ ಎಂಬುದನ್ನು ಸೊಗಸಾಗಿ ನಿರೂಪಣೆ ಮಾಡಿತು.
ಹಾಸ್ಯದ ಮುಖಾಂತರವೇ ವಿಕಾಸವನ್ನು ಹೇಳುವುದು ಇಂಗ್ಲೆಂಡಿನಲ್ಲಿದ್ದ ಗಾಂಧಿಯ ಎಡವಟ್ಟುಗಳು.ಇಂಗ್ಲಿಷರಂತೆ ಕಾಣಿಸಿಕೊಳ್ಳುವುದಕ್ಕಾಗಿ ಟೈ ಧರಿಸುವಾಗ ಮಾಡುವ ಎಡವಟ್ಟು,ಡ್ಯಾನ್ಸ್ ಕ್ಲಾಸಿಗೆ ಸೇರಿ ಯುವತಿಯನ್ನು ಹಿಡಿದುಕೊಳ್ಳಲಾಗದೆ ಯುವತಿ ಬಿದ್ದು ಗಾಂಧಿಗೆ ಬೈಯ್ಯುವುದು,ಡ್ಯಾನ್ಸ್ ಕಲಿಯುವ ಮೊದಲು ಸಂಗೀತ ಕಲಿಯಬೇಕೆಂದು ಗಿಟಾರ್ ನುಡಿಸುವುದನ್ನು ಅಭ್ಯಾಸ ಮಾಡುತ್ತಾ ಮಾಡುತ್ತಾ "ಅರೆ,ನಾನ್ಯಾಕೆ ಬ್ರಿಟಿಷರಂತೆ ಕಾಣಲು ಇದನ್ನೆಲ್ಲ ಮಾಡುತ್ತಿದ್ದೇನೆ.ನಾನು ನಾನಾಗಬಲ್ಲೆನೆ ಹೊರತು ಇನ್ನೊಬ್ಬನಾಗಲಾರೆ" ಎಂಬ ಅರಿವನ್ನು ಗಾಂಧಿ ತಂದುಕೊಳ್ಳುವುದು-ಇವೆಲ್ಲ " ನಾವೂ ಇಂತಹ ಎಡವಟ್ಟುಗಳನ್ನು ಮಾಡಿದ್ದೇವಲ್ಲ"ಎಂದು ಪ್ರೇಕ್ಷಕರಿಗೆ ಅನಿಸಿ ಗಾಂಧಿಯನ್ನು ನಮ್ಮೊಳಗೊಬ್ಬನಂತೆ ಮಾಡಲು ಸಫಲವಾಗುತ್ತದೆ.ಅದೇ ಸಮಯಕ್ಕೆ ಗಾಂಧಿಗೂ ನಮಗೂ ಇರುವ ವ್ಯತ್ಯಾಸವನ್ನೂ ಅರ್ಥ ಮಾಡಿಸುತ್ತದೆ.ಅದೇನೆಂದರೆ ಗಾಂಧಿ ತನ್ನ ಪ್ರತಿಯೊಂದು ಎಡವಟ್ಟಿನಿಂದಲೂ ಕಲಿಯುತ್ತಾ ಹೋದರು.ನಾವು ಎಡವಟ್ಟಿನಿಂದ ಕಲಿಯುವುದಿಲ್ಲ.ಈ ಅಂತರವನ್ನು ಹೇಗೆ ತುಂಬಿಕೊಳ್ಳಬೇಕೆಂಬುದನ್ನು ನಾಟಕವು ಪ್ರೇಕ್ಷಕರಿಗೆ ಬಿಟ್ಟು ಬಿಡುತ್ತದೆ.
ಅರಿವು ಹುಟ್ಟಿಸುವ ಕ್ರಮ ಹೇಗಿರುತ್ತದೆ ಎಂಬುದು ಶೈಕ್ಷಣಿಕ ಪ್ರಕ್ರಿಯೆಯ ಮಹತ್ವದ ಅಂಶ.ಅದನ್ನು ದಕ್ಷಿಣ ಆಫ್ರಿಕಾದಲ್ಲಿ ಭಾರತೀಯರ ವಿವಾಹವನ್ನು ನಿಷೇಧಿಸುವ ಕಾನೂನು ಜಾರಿಯಾದಾಗ ಗಾಂಧಿ ಮತ್ತು ಕಸ್ತೂರ್ಬಾ ನಡುವೆ ನಡೆಯುವ ಈ ಸಂವಾದವು ತಿಳಿಸಿಕೊಡುತ್ತದೆ:
ಗಾಂಧಿ:ಹತ್ತಿರ ಬರಬೇಡ.
ಕಸ್ತೂರ್ಬಾ:ಏಕೆ?
ಗಾಂಧಿ:ಹತ್ತಿರ ಬರಲು ನೀನು ಯಾರು?
ಕಸ್ತೂರ್ಬಾ:ನಾನು ನಿಮ್ಮ ಹೆಂಡತಿ
ಗಾಂಧಿ:ಅಲ್ಲ.
ಕಸ್ತೂರ್ಬಾ:ಮತ್ತೆ ಅಲ್ಲಿ ಮಲಗಿರುವ ಮಕ್ಕಳ ತಾಯಿ ಯಾರು?
ಗಾಂಧಿ:ನೀನು
ಕಸ್ತೂರ್ಬಾ:ಅವರ ತಂದೆ ಯಾರು?
ಗಾಂಧಿ:ನಾನು
ಕಸ್ತೂರ್ಬಾ:ಮತ್ತೆ,ಹಾಗಾದರೆ ನಾನು ನೀವಿಟ್ಟುಕೊಂಡ ಹೆಣ್ಣೇನು?
ಗಾಂಧಿ:ಹೌದು
ಕಸ್ತೂರ್ಬಾ:ಯಾರು ಹೇಳಿದ್ದು?
ಗಾಂಧಿ:ಕಾನೂನು
ಕಸ್ತೂರ್ಬಾ:ಕಾನೂನು ಮಾಡಿದವರು ಹೊಟ್ಟೆಗೆ ಏನು ತಿನ್ನುತ್ತಾರೆ?
ಗಾಂಧಿ:ಮಾಂಸ
ಕಸ್ತೂರ್ಬಾ:ಇದನ್ನು ನಾನು ಒಪ್ಪುವುದಿಲ್ಲ
ಗಾಂಧಿ:ಒಪ್ಪದೆ ಏನು ಮಾಡುತ್ತಿ?
ಕಸ್ತೂರ್ಬಾ:ಸತ್ಯಾಗ್ರಹ
ಹೀಗೆ ಅರಿವನ್ನು ಹುಟ್ಟಿಸುವುದೆಂದರೆ ವಿಚಾರದ ಉಪದೇಶವಲ್ಲ;ವಿಚಾರವನ್ನು ತಿಳಿದುಕೊಂಡು ಕ್ರಿಯಾಶೀಲರಾಗಬೇಕಾದವರು ತಮ್ಮೊಳಗೇ ವಿಚಾರವನ್ನು ಕಂಡುಕೊಳ್ಳುವಂತೆ ಮಾಡುವುದು ಎಂಬುದನ್ನು ನಾಟಕವು ಪರಿಣಾಮಕಾರಿಯಾಗಿ ನಿರೂಪಿಸಿತು.
ಬಾಲಕ ಮೋಹನದಾಸ ತಾನು ನೋಡಿದ ಸತ್ಯ ಹರಿಶ್ಚಂದ್ರ ನಾಟಕವನ್ನು ತಾಯಿಗೆ ವಿವರಿಸುವಾಗ ಹರಿಶ್ಚಂದ್ರ ನಾಟಕದ ದೃಶ್ಯ ಮರುಸೃಷ್ಟಿಯಾಗುತ್ತದೆ.ಅದರಲ್ಲಿ ರಾಘವಾಂಕನ ಹರಿಶ್ಚಂದ್ರ ಕಾವ್ಯವನ್ನು ಪದ್ಯನಾಟಕವಾಗಿ ಬಳಸಿಕೊಳ್ಳಲಾಗಿದೆ.ಗುಜರಾತ್ ನ ಗಾಂಧಿಯೂ ಕನ್ನಡದ ಸಂಸ್ಕೃತಿಯೂ ಅನ್ಯಾದೃಶ್ಯದ ರೂಪದಲ್ಲಿ ಸಮನ್ವಯಗೊಳ್ಳುವ ಈ ಪರಿ ಅತ್ಯಂತ ಚೇತೋಹಾರಿಯಾಗಿತ್ತು.
ಪ್ರಾರಂಭಕ್ಕೆ ಬರುವ ಈ ನಾಟಕವನ್ನು ನೋಡಿದರೆ,ಬೊಳುವಾರು ಮಹಮ್ಮದ್ ಕುಂಞಿ ಅವರ ' ಪಾಪೂ ಗಾಂಧಿ ಗಾಂಧಿ ಬಾಪೂ ಆದ ಕಥೆ' ಕೃತಿಯನ್ನು ಪ್ರಧಾನವಾಗಿ ಆಧರಿಸಿದ ಈ ನಾಟಕದಲ್ಲಿ ಕೊನೆಗೊಂದು ದೃಶ್ಯ ಅಗತ್ಯವಿತ್ತು ಎನಿಸುತ್ತದೆ.ಗುಂಡಿಗೆ ಬಲಿಯಾದ ಗಾಂಧಿ ಇದ್ದಲ್ಲಿಗೆ ಮಹಾಬತ್ ಖಾನ್ ಬಂದು ಎಲ್ಲವೂ ಅಪರಿಪೂರ್ಣವೇ.ಈಗ ಪರಿಪೂರ್ಣನಾಗಿರುವೆ.ಪರಿಪೂರ್ಣವಾದದ್ದು ಭೂಮಿಯ ಮೇಲೆ ಇರುವುದಿಲ್ಲ.ನೀನಿನ್ನು ಹೊರಡು"ಎನ್ನುವ ದೃಶ್ಯ ಬೇಕಿತ್ತು ಎನಿಸುತ್ತದೆ.ನಾಟಕದಲ್ಲಿ ಅದಿಲ್ಲ.
ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ರೈಲಿನಲ್ಲಿ ಹೋಗುವ ದೃಶ್ಯ ಅಟೆನ್ ಬರೋ ಅವರ ' ಗಾಂಧಿ ' ಸಿನಿಮಾದಲ್ಲಿ ಬೆನ್ ಕಿಂಗ್ಸ್ಲೇ ಕೊಟ್ಟ ಅಭಿನಯದಂತೆಯೇ ಇದೆ.ಧನಾತ್ಮಕವಾಗಿಯೂ ಈ ಅಂಶವನ್ನು ಸ್ವೀಕರಿಸಬಹುದು.ಋಣಾತ್ಮಕವಾಗಿಯೂ ಸ್ವೀಕರಿಸಬಹುದು.
ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಎಲ್ಲ ನಾಯಕರೂ ಧ್ವಜಾರೋಹಣದಲ್ಲಿ ನಿರತರಾಗಿದ್ದರೆ ಗಾಂಧಿ ಕೋಲ್ಕತ್ತಾದ ಸಮೀಪ ಒಂಟಿಯಾಗಿ ಕಸ ಗುಡಿಸುತ್ತಿರುವ ದೃಶ್ಯ ಪರಿಣಾಮಕಾರಿ ವಿಡಂಬನೆಯಾಗಿ ಬಂದಿದೆ." ದೇಶವಿಭಜನೆ ಬೇಡವೆಂದೆ.ಬ್ರಿಟಿಷರು ಹೋಗಲಿ.ಆಮೇಲೆ ನಾವೆಲ್ಲ ಕುಳಿತುಕೊಂಡು ಮಾತನಾಡೋಣವೆಂದೆ.ಆದರೆ ನಮ್ಮ‌ ನಾಯಕರಿಗೆ ಸ್ವತಂತ್ರ ದೇಶವನ್ನು ಆಳುವ ಅವಸರ"ಎಂಬ ಗಾಂಧಿಯ ಮಾತುಗಳು ಒಬ್ಬ ಮಹಾನಾಯಕ ಕಡೆಗೂ ಒಂಟಿಯೇ ಆಗುವುದನ್ನು ಸೂಚಿಸುತ್ತದೆ.
ದೃಶ್ಯಗಳಿಗೆ ಕೊಟ್ಟ ಸಂಗೀತ ಆಯಾ ದೃಶ್ಯವನ್ನು ಪ್ರೇಕ್ಷಕರಿಗೆ ತಲುಪಿಸುವುದರಲ್ಲಿ ಯಶಸ್ವಿಯಾಗುತ್ತವೆ.ಅದರಲ್ಲಿ ಬಹಳ ಅದ್ಭುತವೆನಿಸುವುದು ಗಾಂಧಿ ಹತ್ಯೆಯಾದಾಗ ರೋದನವಾಗಿ ಏರುಧ್ವನಿಯಲ್ಲಿ ಬರುವ ' ರಘುಪತಿ ರಾಘವ ರಾಜಾರಾಮ್ ' ಗೀತೆ.
ಬೆಳಕಿನ ಪರಿಣಾಮ ಉದ್ದಕ್ಕೂ ಚೆನ್ನಾಗಿದೆ.ಆದರೆ ಬಹಳ ಗಮನ ಸೆಳೆಯುವುದು ಮೂರು ದೃಶ್ಯಗಳಲ್ಲಿ ಬರುವ ವರ್ಣಗಳು.ಹರಿಶ್ಚಂದ್ರ ನಾಟಕದ ದೃಶ್ಯ,ರಸ್ಕಿನ್ನನ ಅನ್ ಟು ದಿಸ್ ಲಾಸ್ಟ್ ನ ದ್ರಾಕ್ಷಿ ತೊಟದ ಕೂಲಿಕಾರರ ದೃಶ್ಯ,ಗಾಂಧಿ ಹತ್ಯೆಯ ಸಂದರ್ಭದಲ್ಲಿ ಹಿಂದೂ-ಮುಸ್ಲಿಂ ಸಂಘರ್ಷದ ದೃಶ್ಯಗಳಲ್ಲಿ ಬಳಕೆಯಾದ ಬೆಳಕಿನ ವರ್ಷಗಳು ಅಚ್ಚಳಿಯದಂತೆ ಉಳಿಯುವಂತಹವು.
ಶಾಲಾ ಮಕ್ಕಳಿಗೆ ಶೈಕ್ಷಣಿಕವಾಗಿ ಅನೇಕ ಕಲಿಕೆಗಳನ್ನುಂಟುಮಾಡುವ ಈ ನಾಟಕವನ್ನು ಗಾಂಧೀಜಿಯವರ ೧೫೦ ನೆಯ ವರ್ಷಾಚರಣೆಯೊಂದಿಗೆ ನಿರಂತರವಾಗಿ ಎಲ್ಲ ಶಾಲೆ-ಕಾಲೇಜುಗಳಲ್ಲಿಯೂ ಆಡಿಸಿದರೆ ಬಹಳ ಉಪಯುಕ್ತವಾದೀತು.ನಾಟಕದ ಕೊನೆಯಲ್ಲಿ ಬಿಳಿ ಬಟ್ಟೆಯನ್ನು ಏರು ಮುಖವಾಗಿ ಬಿಡಿಸುತ್ತಾ ಹೋಗುವ ದೃಶ್ಯ ಈ ದೇಶಕ್ಕೆ ಗಾಂಧಿಯ ಅವಶ್ಯಕತೆಯನ್ನು ಹೇಳುವ ಆಶಯವಾಗುತ್ತದೆ.ಆ ಆಶಯದೊಂದಿಗೆ ಪ್ರತೀ ಶಾಲೆಯಲ್ಲೂ ಈ ನಾಟಕವನ್ನು ಆಡಿಸುವ ಆಶಯವೂ ಸೇರಿಕೊಳ್ಳುತ್ತದೆ.
*************
ಹೀಗೆ ಒಂದು ನಾಟಕದ ಪ್ರದರ್ಶನವಾದ ಕೂಡಲೆ ಅದರ ಉದ್ದೇಶ ಈಡೇರಿದಂತಾಗುವುದಿಲ್ಲ.ನಿಜವಾಗಿಯೂ ಅದರ ಉದ್ದೇಶ ಈಡೇರಬೇಕಾದರೆ ಕಲೆಯ ಪ್ರದರ್ಶನವಾದ ನಂತರ ಅದರ ಬಗ್ಗೆ ಮಕ್ಕಳಿಗೆ ವಿವರಿಸಬೇಕು.ಒಂದು ನಾಟಕವನ್ನು ಯಾವ ದೃಷ್ಟಿಕೋನದಲ್ಲಿ ನೋಡಬೇಕು,ಹೇಗೆ ಗ್ರಹಿಸಬೇಕು,ಸಂಗೀತವನ್ನು ಹೇಗೆ ಅನುಭವಿಸಬೇಕು ಎಂಬುದನ್ನೆಲ್ಲ ತಿಳಿಸಿಕೊಡುವ ಕೆಲಸ ಆಗಬೇಕು.ಹೀಗೆ ತಿಳಿಸಿದಾಗ ಮಕ್ಕಳಿಗೆ ಕಲೆಯ ಆಸಕ್ತಿ ಬೆಳೆಯುತ್ತದೆ.ತಾವೂ ಮಾಡಬೇಕೆನಿಸುತ್ತದೆ.ಮಾಡಲು ಸಾಧ್ಯವಾಗದವರು ನೋಡುವ ಮತ್ತು ಕೇಳುವ ಹವ್ಯಾಸವನ್ನು ಬೆಳೆಯಿಸಿಕೊಳ್ಳುತ್ತಾರೆ.ಈ ಹವ್ಯಾಸವನ್ನು ಬೆಳೆಯಿಸಿದಾಗ ಕಲೆಯ ಉದ್ದೇಶ ಸಾರ್ಥಕವಾಗುತ್ತದೆ.
ಇದನ್ನು ಸಾಧಿಸಬೇಕಾದರೆ ಅಧ್ಯಾಪಕರಿಗೆ ವಿವಿಧ ಕಲೆಗಳ ಪರಿಚಯವಿರಬೇಕು.ಕಲೆಗಳ ಆಸಕ್ತಿ ಇರಬೇಕು.ಅಧ್ಯಾಪಕರನ್ನು ಆರಿಸುವಾಗ ಈ ಅಂಶವೂ ಪರಿಗಣನೆಯಲ್ಲಿರಬೇಕು.

{ ಅರವಿಂದ ಚೊಕ್ಕಾಡಿ ಅವರ Face Book ನಿಂದ }


Shripad Bhat, Manjula Subrahmanya and 26 others
LikeShow more reactions
CommentShare
Comments
LikeShow more reactions
LikeShow more reactions
Reply2h