stat Counter



Sunday, August 23, 2020

ಮುರಳೀಧರ ಉಪಾಧ್ಯ ಹಿರಿಯಡಕ - ಡಾ| ಎಸ್. ವಿ. ಪರಮೇಶ್ವರ ಭಟ್ಟ, "ಮಹಾಪರಂಪರೆಯ’ ಯ ಸೇತು ಬಂಧ


ಸಾರಸ್ವತ ಲೋಕದ ಅನನ್ಯ ತಾರೆಯೊಂದು ಕಣ್ಮರೆಯಾಯಿತು. ಸಜ್ಜನ, ಸಶಕ್ತ ಸೃಜನಶೀಲ, ಹಳತು-ಹೊಸತರ ಮಧ್ಯೆಯ ಅದ್ಭೌತ ಕೊಂದಿ, ಪಂಡಿತ, ಬರೆಹಗಾರ ಡಾ| ಎಸ್. ವಿ.ಪಿ. ಇನ್ನಿಲ್ಲ. ಆದರೆ ಅವರು ಕನ್ನಡದ ಸಾಹಿತ್ಯ ಲೋಕಕ್ಕೆ ನೀಡಿದ ಅನರ್ಘ್ಯ ಕೊಡುಗೆಗಳು ಅವರನ್ನು ಚಿರಂತನವಾಗಿಸಿವೆ. ’ತರಂಗ’ ಈ ಬರೆಹದ ಮೂಲಕ ಶ್ರದ್ಧಾಪೂರ್ವಕ ಭಾವಾಂಜಲಿ ಸಲ್ಲಿಸುತ್ತಿದೆ.


ಡಾ| ಎಸ್. ವಿ. ಪರಮೇಶ್ವರ ಭಟ್ಟರು (೧೯೧೪-೨೦೦೦ಫ್ ತನ್ನ ಅಳು ನುಂಗಿ ನಗುವ ಮನೋಧರ್ಮ, ಅತ್ಯುನ್ನತಿಯ ಅಧ್ಯಾಪನ-ಭಾಷಣ ಕಲೆ, ಶಿಷ್ಯ ವಾತ್ಸಲ್ಯ, ಹಳೆಯ ಛಂದೋರೂಪಗಳ ಸಾತತ್ಯ ಹಾಗೂ ಅಭಿಜಾತ ಪರಂಪರೆಯ ಸಂಸ್ಕೃತ ಕೃತಿಗಳ ಭಾಷಾಂತರಗಳಿಂದ ನಮ್ಮ ನೆನಪಿನಲ್ಲಿ ಉಳಿಯುತ್ತಾರೆ.
೧೯೧೪ರ ಫೆಬ್ರವರಿ ಎಂಟರಂದು ತೀರ್ಥಹಳ್ಳಿ ತಾಲೂಕಿನ ಮಾಳೂರಿನಲ್ಲಿ ಸದಾಶಿವರಾಯ-ಲಕ್ಷ್ಮಮ್ಮ ದಂಪತಿಯ ಮಗನಾಗಿ ಜನಿಸಿದ ಎಸ್. ವಿ. ಪರಮೇಶ್ವರ ಭಟ್ಟರು, ಕಮಕೋಡು ನರಸಿಂಹ ಶಾಸ್ತ್ರೀ, ವಿ.ಸೀ., ಬಿ.ಎಂ.ಶ್ರೀ., ಟಿ.ಎಸ್. ವೆಂಕಣ್ಣಯ್ಯ , ತೀ.ನಂ.ಶ್ರೀ., ಡಿ.ಎಲ್. ನರಸಿಂಹಾಚಾರ್ಯ-ಇವರೆಲ್ಲರ ಶಿಷ್ಯನಾಗಿ ಕನ್ನಡ ಕಲಿತು. ಕನ್ನಡ ಎಂ.ಎ. ಅಧ್ಯಯನ ಮಾಡಿದರು. ೧೯೩೯ರಿಂದ ಕನ್ನಡ ಪ್ರಾಧ್ಯಾಪಕರಾದರು. ೧೯೬೯-೧೯೭೪ರ ಅವಧಿಯಲ್ಲಿ ಅವರು ಮಂಗಳುರಿನ ಸ್ನಾತಕೋತ್ತರ ಕೇಂದ್ರದ  ನಿದೇರ್ಶಕರಾಗಿದ್ದರು. ಅವರ ಸಮಗ್ರ ಕೃತಿಗಳ ಗ್ರಾತ್ರ., ವಿಷಯ ವೈವಿಧ್ಯಗಳು ನಮ್ಮನ್ನು ಬೆರಗುಗೊಳಿಸುತ್ತವೆ. ’ರಾಘಿಣೆ’, ’ಗಗನ ಚುಕ್ಕಿ’, ’ಅಂಚೆಯ ಪೆಟ್ಟಿಗೆ’, ’ಇಂದ್ರಗೋಪ’, ’ಸಂಜೆಮಲ್ಲಿಗೆ’-ಇವು ಅವರ್ ಕವನ ಸಂಕಲನಗಳು. ಅವರು ಭಾವ ಗೀತೆಗಳಿಗಿಂತ ಹೆಚ್ಚಾಗಿ ಮುಕ್ತಕಗಳ ಕವಿ. ’ಇಂದ್ರಚಾಪ’, ’ಸುರಗ ಸುರಹೊನ್ನೆ’, ’ಚಂದ್ರವೀಥಿ;, ’ಚಿತ್ರಪಥ’ ’ತುಂಬೆ ಹೂವು’,, ’ಮಳೆಬಿಲ್ಲು’-ಇವು ಅವರ ಮುಕ್ತಕ ಸಂಕಲನಗಳು. ಕಾಳಿದಾಸ, ಭಾಸ, ಹರ್ಷ, ಭವಭೂತಿ-ಇವರ ಸಮಗ್ರ ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿರುವ ಪರಮೇಶ್ವರ ಭಟ್ಟರು ಕನ್ನಡದ ಪ್ರಧಾನ ಭಾಷಾಂತರಕಾರರಲ್ಲೊಬ್ಬರು. ಅಶ್ವಘೋಷನ ’ಬುದ್ಧಚರಿತೆ’, ’ಅಮರು ಶತಕ’, ಭತೃಹರಿಯ ’ ಶತಕತಯ . ಜಯದೇವನ ’ಗೀತಗೋವಿಂದ;, ಹಾಲರಾಜನ ಗಾಥಾ ಸಪ್ತಶತಿ’, ಲಕ್ಷ್ಮೀನೃಸಿಂಹ ಕವಿಯ ’ಕವಿಕೌಮುದಿ’-ಇವು ಅವರ  ಭಾಷಾಂತರ ಕೃತಿಗಳು. ’ಕಾಳಿದಾಸ ಮಹಾಸಂಪುಟ’ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಪ್ರಶಸ್ತಿ ಪಡೆದಿದೆ.

ಕವಿ ಪರಮೇಶ್ವರ ಭಟ್ಟಾರು ತನ್ನ್ ಯೌವನದ ದಿನಗಳಲ್ಲಿ ಕೆಲವು ಒಳ್ಳೆಯ ಭಾವಗೀತೆಗಳನ್ನು ಬರೆದರು. ’ಹೂವೊಂದರ ಕಥೆ’, ’ತಿಳೆಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ ಗಾಳಿ ಜೋಗುಳ ಹಾಡಿ ತೂಗುತ್ತಿತ್ತು’ ಎಂದು ಆರಂಭವಾಗುವ ’ಒಂದು ರಾತ್ರಿ’, ತಿಳಿನಗೆ ಮೂಡಿಸುವ ಅತಿಥಿಗೆ ಇವು ಅವರ್ ಕೆಲವು ಪ್ರಸಿದ್ಧ ಭಾವಗೀತೆಗಳು.
ಭಾವಗೀತೆಗಳಿಂದ ಮುಕ್ತಕಗಳತ್ತ ಹೊರಳಿದ ಪರಮೇಶ್ವರ ಭಟ್ಟರ ’ಇಂದ್ರಚಾಪ’ ೧೯೬೫ರಲ್ಲಿ ಪ್ರಕಟವಾಯಿತು ’ ಇಂದ್ರಚಾಪದಲ್ಲಿ ೧೨೬೦ ಸಾಂಗತ್ಯ ರೂಪದ ಮುಕ್ತಕಗಳಿವೆ. ಪತ್ನಿಯ ದೀರ್ಘ ಕಾಲದ ಅನಾರೋಗ್ಯದಿಂದ ಪರಮೇಶ್ವರ ಭಟ್ಟರಾ ಸಾಂಸಾರಿಕ ಜೀವನ ಸಂಕಟ-ಸಮಸ್ಯೆಗಳಿಂದ ತುಂಬಿ ಹೋಯಿತು. ತನ್ನ ಗೋಳಿನ ಕತೆಯನ್ನು ಕವಿ’ ಇಂದ್ರ ಚಾಪದಲ್ಲಿ ಬಣ್ಣಿಸಿದ್ದಾರೆ- "ಸಂಸಾರದೊರಳಿಗೆ ವಿಧಿ ರುಬ್ಬು ಗುಂಡಾಗಿ ಚಟ್ನಿ ಮಾಡಿದನೆನ್ನ ತಿರುವಿ "ಒಲೆಯ ಮಂದಿರುವಾಗ ಪಂಪನ ಪದ್ಯವನ್ನ್ಯ್ ಅಕ್ಕಿ ತೊಳೆಯುವಾಗ ಕಾಳಿದಾಸನ ಕಾವ್ಯವನ್ನು ನೆನಪಿಸಿಕೊಳ್ಳುವ, ಸಂಸಾರ ತಾಪತ್ರಯಗಳಿಂದ ಕಂಗಾಲಾದ ಕವಿಯನ್ನು ’ಇಂದ್ರ ಚಾಪದಲ್ಲಿ ನಾವು ಕಾಣುತ್ತೇವೆ. ಗೃಹಸ್ಥ ಜೀವನ್ದ ಪ್ರೀತಿ ವಾತ್ಸಲ್ಯ್, ಲಾಲನೆ-ಪಾಲನೆ, ಸಂಯಮ -ಸಂಕಟಗಳು ’ಇಂದ್ರಚಾಪದಲ್ಲಿ ಮಿಂಚುತ್ತವೆ.
ಏಳುನೂರು ತ್ರಿಪದಿಗಳು ಸಂಕಲನವಾಗಿರುವ ’ಸುರಗಿ-ಸುರಹೊನ್ನೆ’ ೧೯೬೭ರಲ್ಲಿ ಪ್ರಕಟ್ವಾಯಿತು. ಇದರಲ್ಲಿ ಒಬ್ಬ್ಫ಼್ ಗೃಹಸ್ಥ ತನ್ನ  ಹೆಂಡತಿಯೊಂದಿಗೆ ಜೀವನದ ಕಟು-ಮಧುರ ಅನುಭವಗಳನ್ನು ಹಂಚಿಕೊಳ್ಳುತ್ತಾನೆ. ಕವಿ ಬರೆದಿರುವಾಮ್ಟೇ, "     ಹೂವಿನಂಥ ನಮ್ಮ ಮನಸ್ಸು ಬಾಡುತ್ತ ಬಂದರೆ ನಮ್ಮ ಆಯು ಮುಗಿಯುತ್ತ ಬಂದಂತೆಯೇ ಎಂಬ ತತ್ತ್ವ ಇಲ್ಲಿದೆ. ಬಾಡಿದರೂ ಬಣ್ಣವಳಿಸಿ ಹೋಗದ ಸುರಗಿಯಾಗಬೇಕು ನಮ್ಮ ಮನಸ್ಸು ಎಂಬುದು ಈ ನಾಯಕನ ನಿಲುವು. ಆದರೆ ’ಸುರಗಿ-ಸುರಹೊನ್ನೆಯ ಸರಸಿ ಮುದ್ದಣನ್ ಮನೋರಮೆಯಂತೆ ಸಂಭಾಷಣಾ ಚತುಗೆಯಲ್ಲ್, ಇವಳು ಮೌನಿ, ಇವಳ್  ಮೌನ, ಪುರುಷಪ್ರಧಾನ ವ್ಯವಸ್ಥೆಯ ವಿಷಯ ದಾಂಪತ್ಯವನ್ನು ಸೂಚಿಸುವಂತಿದೆ. ಪರಮೇಶ್ವರ ಭಟ್ಟರು ತಾನು ಪಿತ್ರಾರ್ಜಿತವಾಗಿ ಪಡೆದ ಅನುಭವ ಮತ್ತು ತನ್ನ ಸ್ವಯಾರ್ಜಿತ ಅನುಭವಗಳನ್ನು "ಸುರಗಿ-ಸುರಹೊನ್ನೆಯ ಮಾಲೆಯಲ್ಲಿ ಪೋಣೆಸಿದ್ದಾರೆ.-
ಹೊಸಗನ್ನಡದಲ್ಲಿ ’ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂಬಂಥ ಸೊಗಸಾದ ವಚನಗಳಾನ್ನು ಬರೆದಿರುವ ಕೆಲವೇ ಕವಿಗಳಲ್ಲಿ ಎಸ್. ವಿ.ಪಿ. ಅವರು ಪ್ರಮುಖರು. ’ಉಪ್ಪು ಕಾಡಲು, ’ಪಾಮರ, ಉಂಬರ’ ಅವರ ವಚನ್ ಸಂಕಲನಗಳು ’ಉಪ್ಪು ಕಡಲಿನ’ನ    ಹಲವು ವಚನಗಳಲ್ಲಿ ಕವಿ ಕಡಲಿನೊಂದಿಗೆ ತನ್ನ ಮನೋವ್ಯಥೆಯನ್ನು ತೋಡಿಕೊಳ್ಳುತ್ತಾರೆ. ಕಡಲಿನಲ್ಲಿ ಕಂತುತ್ತಿರುವ ಸೂರ್ಯನ ವಿವಿಧ ರೂಪಗಳನ್ನು ಚೇತೋಹಾರಿಯಾಗಿ ಬಣ್ಣಿಸುತ್ತಾರೆ. ಆತ್ಮಶೋಧನೆ, ವಿಚಾರವಿಮರ್ಶೆ, ವಿಡಂಬನೆ ಮತ್ತು ಎಲ್ಲಕ್ಕಿಂತ  ಮುಖ್ಯವಾಗಿ ಸಮಕಾಲೀನ ರೂಪಕಗಳಿಂದ ಈ ವಚನಗಳು ಗಮನ ಸೆಳೆಯುತ್ತವೆ. ಎಸ್.ವಿ.ಪಿ. ಅವರ ರೂಪಕ ನಿರ್ಮಾಣ ಪ್ರತಿಭೆಗೆ ದೃಷ್ಟಾಂತವಾಗಿ  ’ ಬ್ರೇಕಿಲ್ಲದ ಬೆಲ್ಲಿಲ್ಲದ ಸೈಕಲ್ , ಸ್ಕೂಟರು ನಡೆಸುವ ಗಂಡನ ಮುಖ್ -ಈ ವಚನಗಳನ್ನು ನೋಡ ಬಹುದು ."ಉಪ್ಪು ಕಡಲಿನ ವಚನಗಳಲ್ಲಿ ಆಧ್ಯಾತ್ಮಿಕ ಅನುಭವದ ಗೀಳಾಗಲಿ, ಭಕ್ತಿಯ ಅತಿರೇಕವಾಗಲಿ ಇಲ್ಲ. ಇಲ್ಲಿರುವುದು ’ಉಪ್ಪು ಕಡಲಿ’ನ ವಾಸ್ತವದ ಅನುಭವ ಲೋಕ.
ಡಾ| ಎಸ್. ವಿ. ಪರಮೇಶ್ವರರ ಕಾವ್ಯದ ಒಂದು ಪ್ರಧಾನ ಲಕ್ಷಣ ಹಾಸ್ಯ. ಅವರು ಹಾಸ್ಯರಸವನ್ನು ಕುರಿತು. "ಶೃಂಗಾರವೊಂದೇ ರಸವೆನ್ನುವವರಿದ್ದಾರೆ. ಕರುಣಾವೊಂದೇ ರಸವೆನ್ನು  ವವರಿದ್ದಾರೆ. ಶಾಂತವೊಂದನ್ನೇ ರಸವೆನ್ನುವವ ರಿದ್ದಾರೆ. ಹೀಗಿರುವಲ್ಲಿ ನನ್ನಂಥವರು ಒಬ್ಬಿಬ್ಬರಾದರೂ ಹಾಸ್ಯವೊಂದೇ ರಸವೆಂದರೆ ಯಾರು  ತಪ್ಪು ತೆಳಿಯಲಾಗದು" ಎನ್ನುತ್ತಿದ್ದರು. "ನೀವೊಂದು ಸೀರೆಯ ಎನಗಾಗಿ ತಂದಂದೆ ನಾ ಕಂಡೇ ಕನಸನು ನಿನ್ನೆ..." ಇಂಥ ತತ್ಕಾಲದಲ್ಲಿ ಪರಮಾನಂದವನ್ನು ನೀಡುವ, ’ಎಸ್.ವಿ.ಪಿ.  ಛಾಪು" ಇರುವ ನೂರಾರು ಹಾಸ್ಯ ಮುಕ್ತಕಗಳನ್ನು ಅವರು ಬರೆದಿದ್ದಾರೆ. ’ಇಂದ್ರಚಾಪ’, ’ ಚಿತ್ರಪಥೆಗಳಾಲ್ಲಿ  ಭಟ್ಟರ ಹಾಸ್ಯ ಮುಕ್ತಕಗಳು ಸಿಗುತ್ತವೆ. ತನ್ನ ಖಾಸಗಿ ಬದುಕಿನ ರಂಪ, ರಗಳೆ. ಒಂಟಿತನಗಳನ್ನು ಮರೆಯಲು ಭಟ್ಟಾರು ಹಾಸ್ಯ ಕ್ನ್ಯೆಯನ್ನು ಗೆಳತಿಯನ್ನಾಗಿ ಮಾಡಿಕೊಂಡರು. ’ಅತಿಥಿಗೆ ಕವನದಲ್ಲಿ ನಗರದ ಕೆಳಮಧ್ಯಮ ವರ್ಗಡ ಗೃಹಸ್ಥನೊಬ್ಬನ ಪಾಡು-ಹಾಡಾಗಿದೆ- "ಹೀಗೆ ಹೇಳಾದ ಬರುವಿರೆಂದೆಮಗೆ ಗೊತ್ತೆ. ಎರಡು ದಿನ ತಡ ಮಾಡಿ ಬರಬಾರದಿತ್ತೆ?" ಎಸ್. ವಿ.ಪಿ. ಅವರ ’ಕಣ್ಣು ಮುಚ್ಚಾಎ’ ಎಂಬ ಸ್ವರಚಿತ ಒಗಟುಗಳ ಸಂಕಲನದಲ್ಲಿರುವ ಒಂದು ಒಗಟು ಹೀಗಿದೆ-’ಮಾರಿ ಗುಡೀಲಿ ಮಾರುತಿರಾಯ’. ಇದಕ್ಕೆ ಅವರ ಉತ್ತರ ’ಸಂಸಾರದ ಕಷ್ಟದಲ್ಲಿ ಸಿಕ್ಕಿದ ಕವಿ’ ಎಂದು.

 ದೇಶೀ ಪ್ರಜ್ಞೆ

ಕನ್ನಡದ ನವ್ಯ ಸಾಹಿತಿಗಳು ಪಾಶ್ಚಾತ್ಯ ಸಾಹಿತ್ಯದಿಂದ ಪ್ರಭಾವಿತರಾಗುತ್ತಿದ್ದಾಗ ಪರಮೇಶ್ವರ ಭಟ್ಟರು ನಮ್ಮ ನಾಡಿನ ಪೂರ್ವಸೂರಿಗಳ್ ಆಪೂರ್ವ ಕೃತಿಗಳನ್ನು  ಅಧ್ಯಯನ ಮಾಡಿದರು. ಮಹಾಪರಂಪರೆಯ ಅಭಿಜಾತ ಕೃತಿಗಳನ್ನು -ಕಾಳಿದಾಸ, ಭಾಸ, ಭವಭೂತಿ, ಅಶ್ವಘೋಷರ ಕೃತಿಗಳಾನ್ನು ಭಾಷಾಂತರಿಸಿದರು. ಇವು ನವವಸಾಹತುಶಾಹಿ ಸಿದ್ಧಾಂತಗಳಿಂದ ’ಪಶ್ಛಿಮ ಬುದ್ಧಿ’ಗಳಾಗುವುದರ ವಿರುದ್ಧ ಎಸ್. ವಿ.ಪಿ. ಅವರ ಮೌನ ಕಾರ್ಯಾಚರಣೆಯಾಗಿದ್ದುವು... "ಹಾಗಾಗಿ ಮೂಲಕ್ಕೂ ಹೊಸ ಕಾಲದ ಜನಕ್ಕೂ ಕಡಿಯಲಿರುವ ಸಂಪರ್ಕ ಕಡಿದು ಹೋಗದಿರಲಿ" ಎನ್ನುವ ಅವರ ಹಾರೈಕೆಯಲ್ಲಿ ಸಾಂಸ್ಕೃತಿಕ ಸಾತತ್ಯವನ್ನು ಕುರಿತ ಜವಾಬ್ದಾರಿ, ಎಚ್ಚರಗಳಿವೆ. ತನ್ನ ಭಾಷಾಂತರದ ಉದ್ದೇಶ ಮಾರ್ಗಡ ಕುರಿತು ಅವರು, "ಒಟ್ಟಿನಲ್ಲಿ ಇಲ್ಲಿ ಮೂಲದಲ್ಲಿ ಇದ್ದುದನ್ನು ಬಿಡದೆ, ಇಲ್ಲದುದನ್ನು ಸೇರಿಸದೆ, ಸಂಸ್ಕೃತದ ಭಾವ ತನ್ನ ಮೂಲ ಅಭಿವ್ಯಕ್ತಿಯ ಸೊಗಸನ್ನು ಇಟ್ಟುಕೊಂಡೇ ಕನ್ನಡದಲ್ಲಿ ಒಡಮೂಡುವಂತೆ ಮಾಡುವುದು ನನ್ನ ಉದ್ದೇಶ" ಎಂದಿದ್ದಾರೆ. ’ಮೇಘದೂತ’ದ ಬೇಂದ್ರೆಯವರಂತೆ , ಬಾಣಭಟ್ಟನ ’ಕಾದಂಬರಿ’ಯ ಬನ್ನಂಜೆ ಗೋವಿಂದಾಚಾರ್ಯರಂತೆ ಮೂಲ ಕಾವ್ಯದ ಪುನರ್ ಸೃಷ್ಟಿ ಪರಮೇಶ್ವರ ಭಟ್ಟರ ಉದ್ದೇಶವಲ್ಲ. ಒಂದಕ್ಕೊಂದು ಹೆಣೆದುಕೊಳ್ಳುವ ಸಂಸ್ಕೃತದ ನಾಗಬಂಧದ ಶೈಲಿಯನ್ನು ಉಳಿಸಿಕೊಳ್ಳಲು ಅವರು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ. ಗರ್ಭ ಗುಡಿಯ ಮೂರ್ತಿಯ ಪ್ರಭಾವಳಿ ಉತ್ಸವ ಮೂರ್ತಿಯಲ್ಲೂ ಇರುತ್ತದೆ.

ಅಪರೂಪದ ರಚನೆಗಳುಿ
ತ್ರಿಪದಿ, ಸಾಂಗತ್ಯ, ಏಳ-ಕನ್ನಡದ ಇಂಥ ದೇಶೀ ಛಂದೋಪ್ರಕಾರಗಳಲ್ಲಿ ನಮ್ಮ ಕಾಲದ ಅನುಭವ ವಿಶೇಷಗಳನ್ನು ಬರೆಯುತ್ತ, ಕನ್ನಡ ಭಾಷೆಯ ಜತೆ ಕವಿ ಪರಮೇಶ್ವರ ಭಟ್ಟಾರು ನಡೆಸಿದ ಸೃಜನಾತ್ಮಕ ಹೋರಾಟ್ ಮಹತ್ತ್ವದ್ದು.ಪ್ರವಾಹದ ವಿರುದ್ಧ ಈಜುವ ಈ ಸಾಹಸದಿಂದಾಗಿ ಸಾಹಿತ್ಯ ಪರಂಪರೆಯಲ್ಲಿ ಹಳತು-ಹೊಸತರ ಮುಖಾಮುಖಿ ಸಾಧ್ಯವಾಗಿದೆ.ಜನಪದ ಸಾಹಿತ್ಯದಲ್ಲಿ ಮಾತ್ರ ಲಭ್ಯವಿರುವ ಎರಡು ವಾದಗಳ ಏಳೆ ಎಂಬ ಪ್ರಾಚೀನ ದೇಶೀ ವಂದೋರೂಪದಲ್ಲಿ ’ತುಂಬೆಹೂವು’ ಎಂಬ ಅಪೂರ್ವ ಕೃತಿಯೊಂದನ್ನು ಅವರು ರಚಿಸಿದ್ದಾರೆ. ಈ ಛಂದೋಪ್ರಯೋಗಗಳಿಂದಾಘಿ ಅವರ ಕಾವ್ಯದಲ್ಲಿ ಏಕಾತಾನದ ದೋಷವಿಲ್ಲ. ಸಂಸ್ಕೃತ ಕೃತಿಗಳ ಭಾಷಾಂತರಗಳಲ್ಲಿಯೂ ಅವರು ಹಲವು ವಿನೂತನ ಛಂದೋ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ.
’ ಕವಿಗೆ ಜಾಹೀರಾಟು ಬೇಕು’ ಎಂದ ಕವಿ ಪರಮೇಶ್ವರ  ಭಟ್ಟರ ಕೃತಿಗಳು . ಗಂಭೀರ ಚರ್ಚೆಗೆ ಒಳಗಾಗದಿರುವುದು ಒಂದು ವಿಪರ್ಯಾಸ. ತನ್ನ ಕಾಲದ ಸಹೃದಯರ ಉಪೇಕ್ಷೆಯನ್ನು ಅಲಕ್ಷಿಸಿ, ಆತ್ಮವಿಶ್ವಾಸದಿಂದ ನಾಟಕಗಳನ್ನು ಬರೆದ ಸಂಸ್ಕೃತ ನಾಟಕಕಾರ ಭವಭೂತಿಯಂತೆ ಪರಮೇಶ್ವರ ಭಟ್ಟರೂ ನಿರ್ಲಿಪ್ತರಾಗಿ ಅಸಾಧಾರಣ ಕೃತಿಗಳನ್ನು ನೀಡಿದರು. ಪಂಪ, ರನ್ನ, ನಾಗವರ್ಮ, ಕುಮಾರವ್ಯಾಸರಂಥ ಕನ್ನಡ ಕವಿಗಳು ಸಂಸ್ಕೃತ ಕೃತಿಗಳನ್ನು ರೂಪಾಂತರಿಸಿದವರು. ನೇರ ಭಾಷಾಂತರ ಮಹತ್ತ್ವ-ಮಿತಿಗಳ ಕುರಿತು ಕನ್ನಡದಲ್ಲಿ ಸಾಕಷ್ಟು ಚರ್ಚೆ ಆಗಿಲ್ಲ. ಇಂಗ್ಲಿಷ್ ಮತ್ತು ಯೂರೋಪಿನ ಸಾಹಿತ್ಯದ ಪ್ರಭಾವ ದಟ್ಟವಾಗಿದ್ದ ನವ್ಯದ ಅಬ್ಬರದ ದಿನಗಳಲ್ಲಿ ಪರಮೇಶ್ವರ ಭಟ್ಟರು ಸಂಸ್ಕೃತದ ಕಾವ್ಯ-ನಾಟಕಗಳನ್ನು ಭಾಷಾಂತರಿಸಿದರು. ನಮ್ಮ ಇಂದಿನ ಶಿಕ್ಷಣ ಪದ್ಧತಿಯಲ್ಲಿ ಕನ್ನಡ-ಸಂಸ್ಕೃತಗಳನ್ನು ತೌಲನಿಕವಾಗಿ   ಜತೆಯಾಗಿ   ಅಧ್ಯಯನ ಮಾಡುವ ವ್ಯವಸ್ಥೆ ಇಲ್ಲ. ಹಾಸ್ಯ ಪ್ರಧಾನವಾದ ಮುಕ್ತಕಗಳು ವ್ಯಾಖ್ಯಾನ ನಿರಪೇಕ್ಷವಾದುವುಗಳು. ಇಂಥ ಕಾರಣಗಳಿಂದಾಗಿ ಪರಮೇಶ್ವರರ ಕೃತಿಗಳ ಸರಿಯಾದ ವಿಮರ್ಶೆ  ಆಗಿಲ್ಲ. ಡಾ| ಎಸ್.ವಿ. ಪರಮೇಶ್ವರ ಭಟ್ಟರು ನಮ್ಮ ನಾಡಿನ ಮಹಾ ಪರಂಪರೆ ಮತ್ತು ಇಂದಿನ ತಲೆಮಾರಿನ ನಡುವಿನ ಸೇತುಬಂಧವಾಗಿದ್ದರು.



ಮುರಳೀಧರ ಉಪಾಧ್ಯ, ಹಿರಿಯಡಕ


Friday, August 21, 2020

ಸಖೀಗೀತ SAKHEEGEETHA: Muraleedhara upadhya Hiriadka - ಸಖೀಗೀತ http://up...

ಸಖೀಗೀತ SAKHEEGEETHA: Muraleedhara upadhya Hiriadka - ಸಖೀಗೀತ http://up...: ಮುರಳೀಧರ ಉಪಾಧ್ಯ ಹಿರಿಯಡಕ 2009ರ  ಡಿಸೆಂಬರ್ ನಲ್ಲಿ ನಾನು ಆರಂಭಿಸಿದ Muraleedhara Upadhya Hiriadka-http;//mupadhyahiri.blogspot. com  ಗೆ ನಿನ್ನೆಯ ವ...

Wednesday, August 19, 2020

ಮುರಳೀಧರ ಉಪಾಧ್ಯ ಹಿರಿಯಡಕ - - ಕೃಷ್ಣನೆಂಬ ಸೊದೆಯ ಕಡಲು { ಆಚಾರ್ಯ ಮಧ್ವರ ಕೃಷ್ನಾಮೃತ ಮಹಾರ್ಣವ }

’ ಕೃಷ್ಣಾಮೃತ ಮಹಾರ್ಣಾ’ ಮಧ್ವಾಚಾರ್ಯರು ತನ್ನ್ ಇಳಿವಯಸ್ಸಿನಲ್ಲಿ ಬರೆದ ಒಂದು ಸಂಕಲನ ಗ್ರಂಥ. ಇದು ಅವರು ಕೊಕ್ಕಡದ ಇಡೆಪಾಡಿತ್ತಾಯರ ನಿತ್ಯಾನು ಸಂಧಾನಕ್ಕೆಂದು ರಚಿಸಿಕೊಟ್ಟ. ಕೃತಿ. ಈ ಗ್ರಂಥದ ಮೊದಲ ಎರಡು ಶ್ಲೋಕಗಳನ್ನು ಹೊರತುಪಡಿಸಿದರೆ ಉಳಿದವುಗಳೆಲ್ಲ ಪುರಾಣ ವಚನಗಳು.
"ಇಲ್ಲಿ ಉದ್ಧರಿಸಿರುವ ಪ್ರಮಾಣಾ ಶ್ಲೋಕಗಳು ಯಾವ ಯಾವ ಗ್ರಂಥಗಳಿಂದ ಆಯ್ದಂಥವು ಎನ್ನುವುದನ್ನು ಪೂರ್ತಿಯಾಗಿ ಪತ್ತೆಹೆಚ್ಚುವುದು ಇನ್ನೂ ಸಾಧ್ಯವಾಗಿಲ್ಲ. ವಿಷ್ಣು ಪುರಾಣ, ನಾರದೀಯ ಪುರಾಣ ಮುಂತಾದೆಡೆ ಬಂದ ಶ್ಲೋಕಗಳನ್ನು ನಾನು ಗುರುತು ಹಾಕಿಕೊಂಡಿದ್ದೇನೆ. ಆದರೂ ಎಲ್ಲ ಶ್ಲೋಕಗಳ ಆಕರವನ್ನು ನಮೂದಿಸುವಂಟಾಗಲಿಲ್ಲ" ಎಂದು ಬನ್ನಂಜೆಯವರು ಮುನ್ನುಡಿಯಲ್ಲಿ ಬರೆದಿದ್ದಾರೆ. ಪಲಿಮಾರು ಮಠದ ಶ್ರೀ ರಘುವರ್ಯ ತೀರ್ಥರ (ಕ್ರಿ.ಶ. ೧೮ನೆಯ ಶತಮಾನ) ಹಸ್ತಪ್ರತಿಯ ಪಾಠವನ್ನು ಬನ್ನಂಜೆಯವರು ’ಕೃಷ್ಣಾಮೃತ ಮಹಾರ್ಣವ’ದ ಭಾಷಾಂತರಕ್ಕಾಗಿ ಬಳಸಿದ್ದಾರೆ. ೧೯೫೬ರಲ್ಲಿ ಉಡುಪಿಯ ಮಧ್ವಸಿದ್ಧಾಂತ ಗ್ರಂಥಾಲಯದ ಮೂಲಕ ಪ್ರಕಟವಾಗಿದ್ದ ಬನ್ನಂಜೆಯವರ ಭಾಷಾಂತರದ ಪರಿಷ್ಕೃತ ರೂಪಾಂತರ ಈ ಗ್ರಂಥದಲ್ಲಿದೆ.
ಈ ಪುಸ್ತಕದಲ್ಲಿ ಹರಿಪೂಝೆ ಮಹಿಮೆ, ಉಪಾವಾಸದ ಹಿರಿಮೆ, ನಿತ್ಯಾನುಸಂಧಾನ, ದರ್ಮಾಧರ್ಮ ನಿರ್ಣಯ, ಮತ್ತಿತರ ಧಾರ್ಮಿಕ ಆಚರಣೆಗಳಿಗೆ ಸಂಬಂಧ ಪಟ್ಟ ೨೩೦ ಶ್ಲೋಕಗಳಿವೆ. ಬನ್ನಂಜೆಯವರು ಶ್ಲೋಕಗಳನ್ನು ಕನ್ನಡ ಲಿಪಿಯಲ್ಲಿ ನೀಡಿ, ಗದ್ಯಾನುವಾದ ಮಾಡಿ, ಉಪಯುಕ್ತ  ಟಿಪ್ಪಣೆಗಳನ್ನು ಬರೆದಿದ್ದಾರೆ. ಅನುಬಂಧ ದಲ್ಲಿರುವ’ಭಗವಂತನ ಕೆಲವು ಮುಖ್ಯಾನಾಮಗಳ ಭಾಗ. ಕೇಶವ, ಕೃಷ್ಣ, ಜನಾರ್ಧನ, ನಾರಾಯಣ, ಗೋವಿಂದ, ಪುರುಷೋತ್ತಮ, ಅನಿರುದ್ಧ, ವಾಸುದೇವ, ಪದ್ಮನಾಭ  ಮತ್ತಿತರ ಹೆಸರುಗಳ ಬಹುಮುಖಿ ನಿರ್ವಚನಗಳು ಕುತೂಹಲಕಾರಿಯಾಗಿವೆ.
ಬನ್ನಂಜೆಯವರ್ ಪ್ರಸ್ತಾವನೆಯ ಮೊದಲ ವಾಕ್ಯ ಹೀಗಿದೆ-"ಕಲಿಯುಗ ಪ್ರಾರಂಭವಾಗಿ ೪೩೦೦ ವರ್ಷಗಳು ಸಂದು, ಮತ್ತೂ ೩೯ ವರ್ಷಗಳು ಸಂದಾಗ ಭೂಮಿಯಲ್ಲಿ ಉಡುಪಿಯ ಸಮೀಪ, ತೌಳವ ಮಂಡಲದ ಪಾಜಕದಲ್ಲಿ ಪವಮಾನನ ಅವತಾರವಾಯಿತು." ಮೆಕಾಲೆಯ ಶಿಕ್ಷಣ ಪರಂಪರೆಯಲ್ಲಿ ಬೆಳೆದವರಿಗೆ ಈ ವಾಕ್ಯ ಅರ್ಥವಾಗದ ಒಗಟಾಗುತ್ತದೆ.
ಬನ್ನಂಜೆಯವರು, ಇನ್ನೂ ಅಪ್ರಕಟಿತವಾಗಿರುವ , ಅಮೂಲ್ಯ ಸಂಗತಿಗಳನ್ನೊಳಗೊಂಡಿರುವ, ಗ್ರಂಥವೊಂದನ್ನು ಉಲ್ಲೇಖಿಸಿದ್ದಾರೆ-ಮಧ್ವಾಚಾರ್ಯರ ಪೂರ್ವಾಶ್ರಮದ ಸೋದರರಾದ ವಿಷ್ಣುತೀರ್ಥರ’ ಸನ್ನ್ಯಾಸ ಪದ್ಧತಿಗೆ ಭಂಡಾರಕೇರಿ ಮಠದ  ಶ್ರೀ ಸುಲೋತ್ತಮ ತೀರ್ಥರು (ಕ್ರಿ.ಶ. ಹದಿನಾರನೆಯ ಶತಮಾನ)ಬರೆದ  ಟೀಕೆ.ಈ ಗ್ರಂಥ ಆದಷ್ಟು ಬೇಗನೆ, ಕನ್ನಡ ಅನುವಾದ ಸಹಿತ ಪ್ರಕಟವಾಗಬೇಕು.
’ಕೃಷ್ಣನೆಂಬ ಸೊದೆಯ ಕಡಲ’ನ್ನು ಕನ್ನಡಿಗರಿಗೆ ನೀಡಿದ ಬನ್ನಂಜೆ ಗೋವಿಂದಾಚಾರ್ಯರು ಅಭಿನಂದನಾರ್ಹರು.
ಮುರಳೀಧರ ಉಪಾಧ್ಯ, ಹಿರಿಯಡಕ,
ಕೃಷ್ಣನೆಂಬ ಸೊದೆಯ ಕಡಲು,
(ಆಚಾರ್ಯ ಮಧ್ವರ ಕೃಷ್ಣಾಮೃತ ಮಹಾರ್ಣವ)
ಭಾಷಾಂತರ:ಬನ್ನಂಜೆ
ಪ್ರ: ದಶಪ್ರಮತಿ ಪ್ರಕಾಶನ, ಬೆಂಗಳೂರು
ಮೊದಲ ಮುದ್ರಣ :೧೯೯೮
(ಪುಟಗಳು:೨೦+೯೬) ಬೆಲೆ:೪೦.

Thursday, August 13, 2020

ಮುರಳಿಧರ ಉಪಾಧ್ಯ ಹಿರಿಯಡಕ - ಎಚ್. ಎಸ್. ಶಿವಪ್ರಕಾಶ್ ಅವರ " ಮಳೆಯೇ ಮಂಟಪ " -- ಹೇಗೆ ಗೆದ್ದಾರು ನಮ್ಮ ಮುಗ್ಧ ದೇವತೆಗಳು?

ಎಚ್. ಎಸ್.ಶಿವಪ್ರಕಾಶ್,  ಹೊಸ ಶತಮಾನದ ಕನ್ನಡ ಕಾವ್ಯಕ್ಕೆ ಹೊಸ ದಾರಿ ತೋರಬಲ್ಲ ಸಾಮರ್ಥ್ಯ ವಿರುವ ಕವಿಗಳಲ್ಲೊಬ್ಬರು. ’ಮಿಲರೇಪ’, ’ಮಳೆ ಬಿದ್ದ ನೆಲದಲ್ಲಿ’, ಅಣು ಕ್ಷಣ ಚರಿತ್ರೆ’, ’ಸೂರ್ಯ ಜಲ’ ’ನವಿರು ನಾಗರ’ ಗಳ ಅನಂತರ ಪ್ರಕಟವಾಗಿರುವ ಶಿವಪ್ರಕಾಶರ ಅನಂತರ ಪ್ರಕಟವಾಗಿರುವ ಶಿವಪ್ರಕಾಶರ ಆರನೆಯ ಕವನ್ ಸಂಕಲನ ’ ಮಳೆಯೇ ಮಂಟಪ’.
’ಒಂದು ಸಲುಗೆಯ ಬಿನ್ನಪ’ದಲ್ಲಿ ಕವಿ ಶಿವಪ್ರಕಾಶ್, ಕಾವ್ಯವನ್ನು ಕುರಿತ ತನ್ನ ಇತ್ತೀಚೆಗಿನ ಚಿಂತನೆಯನ್ನು ವಿವರಿಸಿದ್ದಾರೆ. -"ಭಾಷೆ ಮತ್ತು ಅನುಭವಗಳ ಸಾಂದ್ರತೆ ಮತ್ತು ಜಟಿಲತೆಯನ್ನು ತ್ಯಜಿಸದೆ ಕವಿತೆ ಆದಷ್ಟು ಸರಳ ರೀತಿಯಲ್ಲಿ  ಸಹೃದಯರನ್ನು ಮುಟ್ಟಬೇಕು ಎಂಬುದು ನನ್ನ ನಂಬುಗೆ.... ಕವಿತೆ ಕೇವಲ್ ಒಂದು ಕಲಾಕೃತಿ ಎಂಬ ನಂಬುಗೆ ಈಗ ನನಗಿಲ್ಲ. ಮೂಲಭೂತವಾ ಗಿ    ಅದೊಂದು ಅನ್ವೇಷಣಾ ಕ್ರಮ. ಸ್ವಯದ ಹಾಗೂ ಇದಿರಿನ ಪೇಚಾಟ ಪರದಾಟಗಳನ್ನು ದಾಟುವ ಪ್ರಯೋಗ, ಪ್ರಕ್ರಿಯೆ" ಎನ್ನುತ್ತಾರೆ ಶಿವಪ್ರಕಾಶ್. ’ಕವಿತೆ ಸಾಯುತ್ತದೆ’ ಎಂಬ್ ಕೂಗನ್ನು ಗೇಲಿ ಮಾಡುತ್ತ ಅವರು ಬುದ್ಧ ಜಾತಕ ಕತೆ ಯೊಂದನ್ನು ನೆನಪಿಸುತ್ತಾರೆ. ಆಲದ ಮರದ ಕೆಳಗಿದ್ದ ಒಂದು ಮೊಲ ಮರದಿಂದ ಒಂದು ಹಣ್ಣು ಬಿದ್ದ ಸದ್ದನ್ನು ಕೇಳಿಸಿ ಕೊಂಡು, ’ಲೋಕೋ ವಿನಸ್ಯತಿ( ಲೋಕ ನಶಿಸುತ್ತಿದೆ) ಎಂದು ಹಾಹಾಕಾರ ಹರಡಿಸಿತಂತೆ!’ಮಳೆಯೇ ಮಂಟಪ’ದಲ್ಲಿ ಮೂವತ್ತೇಳು ಕವನಗಳು, ಹದಿನಾರು ತತ್ತ್ವ ಪದಗಳು ಹಾಗೂ ಮೂವತ್ತು ವಚನಗಳಿವೆ.’ ಉರಿವ ಗುಗ್ಗಳ’ ಹಾಗೂ ’ಅಕ್ಕ-ತಮ್ಮ’ ಇಲ್ಲಿರುವ ಸುದೀರ್ಘ ಕವನಗಳು. ’ಬಸುರಿ ಮೂಳೆಯ ಮೇಲೆ ನಚ್ಚಾನೆ   ನಡು    ಮಧ್ಯಾಹ್ನ’ ಉರಿವ, ಕುಣಿವ ಗುಗ್ಗಳದ ಚಿತ್ರ ಭಯಾನಕವಾಗಿದೆ. ’ಅಕ್ಕ-ತಮ್ಮ’ ಕವಿತೆ ಒಂದು ರಾಜಸ್ಥಾನಿ ಜನಪದ ಕತೆಯಿಂದ ಪ್ರೇರಣಿ ಪಡೆದಿದೆ. ಇಲ್ಲಿನ ಅಕ್ಕ- ತಮ್ಮ ಬರಗಾಲದಲ್ಲಿ ತಮ್ಮನ್ನು ಬಿಟ್ಟು ಹೋದ ತಂದೆ-ತಾಯಿಯ್ ನಿರೀಕ್ಷೆಯಲ್ಲಿ ದ್ದಾರೆ. ’ನೋವಿದ್ದ ಮನದಲ್ಲಿ ಸಾವಿರ ಯೋಚನೆ, ಬಾವಿದ್ದ ಎದೆಯಲ್ಲಿ ಸಾವಿರ  ಕಲ್ಪನೆ’ ಎನ್ನುತ್ತಾಳೆ ಅಕ್ಕ. ’ ಕಬೀರದಾಸರ ಭೋಜಪುರಿ ಕವಿತೆ’ ಅಲ್ಲಮನ ಬೆಡಗಿನ ವಚನಗಳನ್ನು ನೆನೆಪಿಸುವಂತಿದೆ. ನೀರು ಬೂದಿಯಾಗುತ್ತದೆ, ಮೀನು ಬದುಕಿ ಉಳಿಯುತ್ತದೆ. ಇರುವೆ ಉಚ್ಚೆ ಹೊಯ್ದಾಗ ನದಿನಾಲೆ ತುಂಬಿ ಹರಿಯುತ್ತವೆ. ’ ಪ್ರೀತಿಯ ಸ್ನೇಹಿತ ಜೋ’ ಎಂಬ್ ಕವಿತೆಯಲ್ಲಿ ಜಾಗತೀಕರಣ ಎಂಬ್ ರಾಜಕೀಯ ಕುತಂತ್ರವನ್ನು ಕುರಿತ ಕವಿಯ ಪ್ರತಿಕ್ರಿಯೆ ಹೀಗಿದೆ-"ಹೇಗೆ ಗೆದ್ದಾರು ನಮ್ಮ ಮುಗ್ಧ ದೇವತೆಗಳು ವ್ಯಾಪಾರಗಾರರ ಚಾಲೂಕಿ ಕುಹಕಗಳನ್ನು?"

ಈ ಸಂಕಲನದಲ್ಲಿರುವ ವಚನಗಳು ಹಾಗೂ ತತ್ತ್ವ ಪದಗಳ ಕುರಿತು ಶಿವ ಪ್ರಕಾಶ ಹೀಗೆನ್ನುತ್ತಾರೆ-" ಒಂದು ವ್ಯಕ್ತಿಗತ ಶೈಲಿಯನ್ನು ಕಟ್ಟಿಕೊಳ್ಳುವ ಮಾಡರ್ನಿಸ್ಟ್ ಹಠ ಇಂದು ಸಲ್ಲುವುದಿಲ್ಲ.ಈ  ಅರ್ಥದಲ್ಲೇ ವೊಲೆ ಷೊಯಿಂಕ ಹೇಳಿದ್ದು-ಶೋಷಿತ  ಜಗತ್ತಿನ ಬರಹಗಾರನಿಗೆ ಅಗತ್ಯವಾದದ್ದು ಸಾಮಾಜಿಕ ಸಿದ್ಧಾಂತವೇ ಹೊರತು ಕಲಾತ್ಮಕ ಸಿದ್ಧಾಂತವಲ್ಲ. ಈ ತೆರನ ಆಲೋಚನೆಗಳು ಮುಕ್ತಛಂದದ ಮೈಕಟ್ಟುಗಳಿಂದ ಭಿನ್ನವಾಗಿರುವ ’ ತತ್ತ್ವ ಪದ’  ಮತ್ತು ವಚನ್ ರೂಪಗಳಲ್ಲೂ ಕಾವ್ಯ ರಚನೆ ಮಾಡುವಂತೆ ನನ್ನನ್ನು ಪ್ರೇರೇಪಿಸಿದುವು. ಇಂದಿನ ಅಸ್ವಸ್ಥ ಭಾಷೆ ಹಾಗೂ ಸಮುದಾಯಗಳ ಕಾವ್ಯ್ ನರಕಿಗಳ ಆತ್ಮ ಸಂವಾದದಂತೆ ಕೇಳಾತೊಡಗಿದೆ. ಹೊಸ ವ್ಯಕ್ತಿ ಮತ್ತು ವಸ್ತುಗಳೊಂದಿಗೆ ಸಂಭಾಷಣೆಗಳ ನೆಲೆಗಳನ್ನು ಉಳಿಸಿಕೊಳ್ಳವುದರಲ್ಲಿ ಈ ಪ್ರಕಾರಗಳು ನನಗೆ ಸಾಧನಗಳಾದುವು."
’ಮಿಂಡರೈವರು’ ಎಂಬ ತತ್ತ್ವಪದ ದಲ್ಲಿ ಸರಕು ಸಂಸ್ಕೃತಿಯ ಖಾರವಾದ ವಿಡಂಬನೆ ಇದೆ. ಇಲ್ಲಿನ್ ಕಿವುಡ ಟ್ರಾನ್ಸಿ ಸ್ಟರನ್ನು, ಕುರುಡ ಟಿ.ಇಯನ್ನು ಹೆಳವಕಾರನ್ನು, ಕುಂಟ್ ಭೂಟು ಜೊತೆಯನ್ನು, ಮೂಕ ಮೈಕನ್ನು ಅಪೇಕ್ಷಿಸುತಾರೆ.
’ಬೆಟ್ಟದ ಮೇಲೊಂದು ಮನೆಯ ಮಾಡುತ್ತೇನೆ, ಮೃಗ ಖಗಗಳಿಗೆ ಅಂಜದ  ಹಾಗೆ’ ಎಂದು ಆರಂಭವಾಗುವ    ವಚನ  ವಿಶೇಷವಾಘಿ ಗಮನ ಸೆಳೆಯುತ್ತದೆ. ’ಸಮುದ್ರದ ತಡಿಯಲ್ಲಿ ಮನೆ ಮಾಡುತ್ತೇನೆ, ನೊರೆ, ತೆರೆ, ಹೆಮ್ಮೀನು, ಮೊಸಳೆ ತಿಮಿಂಗಿಲಗಳಿಗೆ ಅಂಜದ ಹಾಗೆ’, ’ಸಂತೆಯೊಳಗೊಂದು ಮನೆ ಮಾಡುತ್ತೇನೆ, ಸದ್ದುಗದ್ದಲ ಗಮಲು ಧೂಳುಗಳಿಗಂಜದಂತೆ, ಎನ್ನುವ ನಿರೂಪಕ ವಚನದ ಕೊನೆಯಲ್ಲಿ ಹೀಗೆನ್ನುತ್ತಾನೆ-
"ಈ ಎಲ್ಲವೂ ಚೆನ್ನು
ನೀನೂ ಜತೆಗಿದ್ದರೆ
ಇಲ್ಲದ ಹೋದರೆ 
ಬೆಟ್ಟ ಪೂರ್ತಿ ಬೋಳಾಗುತ್ತದೆ
ಕಡಲ ತಡಿ ಕಡಲಲ್ಲಿ ಮುಳುಗಿ ಹೋಗುತ್ತದೆ.
ಸಂತೆ ಅಂತೂ ಇಂತೂ ನೆರೆದು ಮುಗಿದು ಹೋಗುತ್ತದೆ."

ಶಿವಪ್ರಕಾಶರ ಈ ವಚನ ವಿರಹಿಯ ಶೃಂಗಾರದಿಂದ ಆರಂಭವಾಗಿ, ಸಖೀಗೀತದತ್ತ ತುಡಿಯುತ್ತದೆ.
ಇಲ್ಲಿನ ಒಂದು ವಚನದಲ್ಲಿ ’ಅಚ್ಚಗನ್ನಡದ ಬಿಸಿಲು ನಮ್ಮನ್ನು ಆವರಿಸಿದ ಹಾಗೆ’ ಎಂಬ ಮಾತಿದೆ. ’ಮಳೆಯೇ ಮಂಟಪ’ ಅಚ್ಚಗನ್ನಡದ ಬಿಸಿಲು-ಮಳೆಯ ಖುಶಿ ನೀಡುತ್ತದೆ.

ಮುರಳೀಧರ     ಉಪಾಧ್ಯ  ಹಿರಿಯಡಕ
 ಮಳೆಯೇ ಮಂಟಪ
(ಕವನ ಸಂಕಲನ)
ಲೇ: ಎಚ್. ಎಸ್. ಶಿವಪ್ರಕಾಶ್
ಪ್ರ: ಲೋಹಿಯಾ ಪ್ರಕಾಶನ, ’ಕ್ಷಿತಿಜ’,
ಗಾಂಧಿನಗರ, ಬಳ್ಳಾರಿ-೫೮೩೧೦೩
ಮೊದಲ್ ಮುದ್ರಣ:೨೦೦೨.
ಬೆಲೆ ರೂ.೫೦.