stat Counter



Wednesday, July 29, 2020

ಎಚ್. ಎಸ್. ಶಿವಪ್ರಕಾಶ್ - ಬಯಲ ಜೋಳಿಗೆ { 2020 }

 H. S. Shivaprakash

ಹಿರಿಯಡಕ ಸಂಸ್ಕೃತಿ ಸಿರಿ ಟ್ರಸ್ಟ್ { ರಿ } -ಪ್ರಬಂಧ ಸ್ಪರ್ಧೆ 2020 - ಬಹುಮಾನ ಪಡೆದವರು

             ಹಿರಿಯಡಕ ಸಂಸ್ಕೃತಿ ಸಿರಿ  ಟ್ರಸ್ಟ್ { ರಿ }

                  ಪ್ರಬಂಧ ಸ್ಪರ್ಧೆ  -2020

{ ಹಿರಿಯಡಕ  ಸರಕಾರಿ ಪ್ರಥಮೆ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ  }

"ಕೊರೋನಾ ಲಾಕ್  ಡೌನ್   - ಕಹಿ ಸಿಹಿ ನೆನಪುಗಳು"

ಪ್ರಥಮ ಬಹುಮಾನ{ ರೂ .1500 }

ಆಕಾಶ್  , ಎಮ್ ಕಾಮ್  ವಿದ್ಯಾರ್ಥಿ  , ಪೆರ್ಡೂರು

ದ್ವಿತೀಯ ಬಹುಮಾನ - { ರೂ. 1000 }

ದಿವ್ಯಾ  ಬಿ. ಕಾಮ್ ವಿದ್ಯಾರ್ಥಿನಿ , ತ್ರಿಶೂಲನಗರ , ಕಾರ್ಕಳ

ಎ.ಎಸ್. ದಿವ್ಯಾ  , ಬಿ.ಕಾಮ್ ವಿದ್ಯಾರ್ಥಿನಿ , ಮುತ್ತುರ್ಮೆ , ಪೆರ್ಡೂರು ,

ಪ್ರೋತ್ಸಾಹಕ ಬಹುಮಾನಗಳು

 ಶ್ರೀಧರ  , ಬಿ. ಕಾಮ್ ವಿದ್ಯಾರ್ಥಿ , ಕುಕ್ಕೆಹಳ್ಳಿ 

ದಿಶಾ  , ಪೆರ್ಣಂಕಿಲ

 


Tuesday, July 28, 2020

ಮುರಳೀಧರ ಉಪಾಧ್ಯ -" ಕಾಂತ ಬಾರೆ ಬೂದಬಾರೆ { ಮುದ್ದು ಮೂಡುಬೆಳ್ಲೆ }

 ಕಾಂತಬಾರೆ-ಬೂದಬಾರೆಯರು ತುಳುನಾದಿನ ಜಾನಪದ ಲೋಕದ ಅವಳಿವೀರರು. ವಿಜಯನಗರದ ಆಳ್ವಿಕೆಯ ಅನಂತರ ಬಪ್ಪನಾಡಿನಲ್ಲಿ ಸಾವಂತರು ಪ್ರಬಲರಾದರು. ಅವರ ಆಶ್ರಯದಲ್ಲಿದ್ದ ಕಾಂತಬಾರೆ-ಬೂದಬಾರೆಯರು ವೀರರಾಗಿ ಮಾತ್ರವಲ್ಲ ಕೃಷಿ ನೀರಾವರಿ ಕ್ಷೇತ್ರಗಳಲ್ಲೂ ಹಲವು ಸಾಧನೆಗಳನ್ನು ಮಾಡಿ ಕುರಿತ ಐತಿಹ್ಯ್-ಪಾಡ್ದನಗಳು ಲಭ್ಯವಿವೆ. ಕಾಂತಬಾರೆ-ಬೂದಬಾರೆಯರ ಜನಪ್ರಿಯತೆ ಮೂಲ್ಕಿಯ ಒಂಬತ್ತು ಮಾಗಣೆಗೆ ಸೀಮಿತಗೊಂಡಿದೆ.
ಕ್ಷೇತ್ರಾಧ್ಯಯನ ಹಾಹೂ ಜನಪದ ಪಠ್ಯಗಳ ಅಧ್ಯಯನದಿಂದ ಮುದ್ದು ಮೂಡುಬೆಳ್ಳೆಯವರು ರಚಿಸಿರುವ ಈ ಗ್ರಂಥ ಕಾಂತಬಾರೆ-ಬೂದಬಾರೆಯರನ್ನು ಕುರಿತ ಅನೇಕ ಅಸ್ಪಷ್ಟ ಸಂಗತಿಗಳನ್ನು ಸ್ಪಷ್ಟಪಡಿಸುತ್ತದೆ. ಲೇಖಕರು ಬರೆದಿರುವಂತೆ "ಮೂಲ್ಕಿ ಸೀಮೆಯ ಒಂಬತ್ತು ಮಾಗಣೇಯ ಸಮಸ್ತ ಬಿಲ್ಲವರ ಆರಾಧ್ಯ  ದೈವಗಳಾಗಿರುವ ಅವಳೀವೀರರಾದ ಕಾಂತ ಬಾರೆ ಬೂದಬಾರೆ ಕವಿ ಕಲ್ಪನೆಯ ಸೃಷ್ಟಿಗಳಲ್ಲ. ಈ ಜಾನಪದ ವೀರರು ಶೌರ್ಯ ಪರಾಕ್ರಮಗಳನ್ನು ಸೀಮೆಯುದ್ದಕ್ಕೂ ಮೆರೆದು ಸಾವಂತರಸರ ಬಲಗೈ ಬಂಟರಾಘಿ ಸೀಮೆಯನ್ನು    ರಕ್ಷಣೆ ಮಾಡಿ  ಅಸಾಧಾರಣ ಕಾರ್ಯಗಳನ್ನು ಸಾಧಿಸಿದ ಐತಿಹಾಸಿಕ ವ್ಯಕ್ತಿಗಳು ಎಂಬುದಾಗಿ ಸೀಮೆಯ ಭಕ್ತರು ಬಲವಾಘಿ ನಂಬಿದವರು. ಇದಕ್ಕೆ ಅವರದಾಗಿ ಉಳಿದಿರುವ ಅನೇಕ ಕುರುಹುಗಳ ಸಾಕ್ಷಿ ಇಂದಿಗೂ ಇರುವುದು ಈ ನಂಬಿಕೆ ಯನ್ನು ಇನ್ನಷ್ಟು ಪುಷ್ಟೀಕರಿಸುತ್ತದೆ".

ಸೂಕ್ಷ್ಮ ಸ್ತರದ ಅಧ್ಯಯನ ಕೃತಿಯಾದ ’ಕಾಂತಬಾರೆ-ಬೂದಬಾರೆ’ಯಲ್ಲಿ ಮುದ್ದು ಮೂಡುಬೆಳ್ಳೆಯವರ ಪರಿಶ್ರಮ-ಸಾಧನೆಗಳು ಶ್ಲಾಘನೀಯವಾಗಿವೆ.
ಮುರಳೀಧರ ಉಪಾಧ್ಯ, ಹಿರಿಯಡಕ,
ಮೂಲ್ಕಿ ಸೀಮೆಯ ಅವಳಿ ವೀರರು
ಕಾಂತಬಾರೆ-ಬೂದಬಾರೆ
(ಒಂದು ಅಧ್ಯಯನ)
ಲೇ:ಮುದ್ದು ಮೂಡುಬೆಳ್ಳೆ
ಪ್ರ:ಗೆಳೆಯರ ಬಳಗ ಪ್ರಕಾಶನ, ಸಿ.೩,
ಎ.ಐ.ಆರ್. ಕ್ವಾರ್ಟರ್ಸ್, ಉರ್ವಾ ಸ್ಟೋರ್ಸ್, ಮಂಗಳೂರು-೬
ಮೊದಲ ಮುದ್ರಣ-೧೯೯೮.
ಬೆಲೆ:ರೂ.೪೫ (ಪುಟಗಳು:೧೫೪)

Monday, July 27, 2020

Maha Mahopadhyaya Dr U P Upadhyaya

ವನಮಾಲ ವಿಶ್ವನಾಥ್- - ಷ . ಶೆಟ್ಟರ್ ಅವರ ಕೃತಿಗಳು

ಮುರಳೀಧರ ಉಪಾಧ್ಯ - ಕೀರ್ತಿನಾಥ ಕುತಕೋಟಿ ಅವರ- : -ಪ್ರತ್ಯಭಿಜ್ಞಾನ"

 ಎ.ಆರ್. ಕೃಷ್ಣಾಶಾಸ್ತ್ರಿಗಳಾ ’ಸಂಸ್ಕೃತ ನಾಟಕ’ ೧೯೩೭ರಲ್ಲಿ ಪ್ರಕಟವಾಯಿತು. ಅವರು ಅಶ್ವಘೋಷನ ತುಂಡುಗಳ ಆಧಾರದಿಂದ ಅವನ್ ವ್ಯಕ್ತಿತ್ವವನ್ನು ಪುನರ್ ನಿರ್ಮಿಸಿದ ಬಗ್ಗೆ, ಅವರ ಖಚಿತ ಹಾಗೂ ತೂಕದ ವಿಮರ್ಶನ ನಿಲುವಿನ ಬಗ್ಗೆ ಕುರ್ತಕೋಟಿಯವರಿಗೆ ಮೆಚ್ಚುಗೆ ಇದೆ. "ಪಾಶ್ಚಾತ್ಯ ಪಂಡಿತರು ಸಂಸ್ಕೃತ ನಾಟಕದ ಬಗ್ಗೆ ಇಟ್ಟುಕೊಂಡಿರುವ ಅಭಿಪ್ರಾಯಗಳು ಈಗ ನಮ್ಮದಾಗಬೇಕಾಗಿಲ್ಲ.... ಪಾಶ್ಚಾತ್ಯ ವಿಮರ್ಶೆಯ ಮಾನ ದಂಡಗಳು ಸಾರ್ವತ್ರಿಕವೆಂಬ ಭ್ರಮೆ ನಮಗೂ ಇದೆ. ಈ ಭ್ರಮೆಯಿಂದ ತಪ್ಪಿಸಿ ಕೊಳ್ಳುವದು ಅಷ್ಟು ಸುಲಭವಾಗಿಲ್ಲ. ಆದರೂ  ಈ ದಿಕ್ಕಿನಲ್ಲಿ ಇದೊಂದು ಚಿಕ್ಕ ಪ್ರಯತ್ನ ಅಷ್ಟೇ". ಎಂದು ಕುರ್ತ ಕೋಟಿಯವರು ’ ಪ್ರತ್ಯಭಿಜ್ಞಾನ’ದ ಮುನ್ನಡಿಯಲ್ಲಿ ಬರೆದಿದ್ದಾರೆ.
ಪ್ರಸ್ತಾವನೆ ಕುರ್ತಕೋಟಿಯವರು ಚರ್ಚಿಸಿರುವ ನಾಟಕಗಳಲ್ಲಿ ಭಾಸನ ’ ಅವಿಮಾರಕ’ ಗಮನ ಸೆಳೆಯುತ್ತದೆ. ಕುರ್ತ ಕೋಟಿಯವರ ಪ್ರಕಾರ, "ಅವಿಮಾರಕ" ಗಮನ ಸೆಳೆಯುತ್ತದೆ. ಕುರ್ತಕೋಟಿಯವರ ಪ್ರಕಾರ ’ಅವಿಮಾರಕ’ ರಂಗಭೂಮಿಯ  ದೃಷ್ಟಿಯಿಂದ ಅತ್ಯಂತ ಯಶಸ್ವಿಯಾದ ನಾಟಕ. ನಾಟಕದ ಸ್ವರೂಪದ ಬಗ್ಗೆ, ರಂಗ-ಭೂಮಿಯ ಬಗ್ಗೆ ತಿಳಿಸಿಕೊಡುವ ನಾಟಕ." ಋಷಿಯ ಶಾಪದಿಂದ ಸ್ವಪಚನಾಗಿರುವ ಅವಿಮಾರಕ ಈ ನಾಟಕದ ನಾಯಕ.
 ಭಾಸನ’ ಪ್ರತಿಮಾನಾಟಕ’, ಶೂದ್ರಕನ ’ಮೃಚ್ಛಕಟಿಕ;, ಕಾಳಿದಾಸನ’ ಅಭಿಜ್ಞಾನ ಶಾಕುಂತಲ’, ವಿಶಾಖದತ್ತನ ’ಮುದ್ರಾ ರಾಕ್ಷಸ’, ಭವಭೂತಿಯ ’ಉತ್ತರರಾಮ ಚರಿತ’, ಶ್ರೀ ಹರ್ಷನ ’ನಾಗಾನಂದ’ ನಾಟಕಗಳನ್ನು ಕುರ್ತಕೋಟಿಯವರು  ’ಪ್ರತ್ಯಭಿಜ್ಞಾನ’ದಲ್ಲಿ ವಿಮರ್ಶಿಸಿದ್ದಾರೆ. ’ಮೃಚ್ಛಕಟಿಕ’ದ ವಿಮರ್ಶೆಯಲ್ಲಿ ಅವರ ಪ್ರತಿಭೆಯ ಹೊಳಹುಗಳಿವೆ. ’ಲಿಂಪತೀವ ತಮೋಂಗಾನಿ’ (ಕತ್ತಲೆ ಮೈಗೆ ಮೆತ್ತಿ ಕೊಂಡಿದೆ)ಎನ್ನುತ್ತಾನೆ ಶೂದ್ರಕ. ’ಮೃಚ್ಛಕಟಿಕ’ದ ಸಮಾಜ ಅರಾಜಕತೆಯ ಕತ್ತಲೆ ಹಾಗೂ ದಾರಿದ್ರ್ಯದ ಕತ್ತಲೆಯಿಂದ ತುಂಬಿದೆ. ಈನಾಟಕದಲ್ಲಿ ಪ್ರಣಯಕ್ಕೆ ರಾಜಕೀಯದ ಬಣ್ಣ ಬರುತ್ತದೆ. ಚಾರುದತ್ತ ವಸಂತ ಸೇನೆಯರ ಪ್ರಣಯ ಉಜ್ಜಯನಿಯ ರಾಜಕೀಯ ಪ್ರತಿಷ್ಠೆಯ ಪ್ರಶ್ನೆಯಾಗುತ್ತದೆ. ಒಂದು ಒಳ್ಳೆಯ ಕಾದಂಬರಿಯಂತೆ, ಕಾವ್ಯದಂತೆ ಓದಿಸಿ ಕೊಂಡು ಹೋಗುವುದು, ನಮ್ಮ ಅರಿವನ್ನು ವಿಸ್ತರಿಸುವುದು ’ಪ್ರತ್ಯಭಿಜ್ಞಾನದ ಹೆಚ್ಚುಗಾರಿಕೆ.
ಮುರಳೀಧರ ಉಪಾಧ್ಯ ಹಿರಿಯಡಕ

ಪ್ರತ್ಯಭಿಜ್ಞಾನ
ಲೇ:ಕೀರ್ತಿನಾಥ ಕುರ್ತಕೋಟಿ
ಪ್ರ:ಮನೋಹರ ಗ್ರಂಥಮಾಲಾ ಲಕ್ಷ್ಮೀ
ಭವನ, ಸುಭಾಸ್ ರಸ್ತೆ, ಧಾರವಾಡ-೧.
ಮೊದಲ ಮುದ್ರಣ:೧೯೯೮
ಬೆಲೆ:ರೂ.೧೨೦ (ಪುಟಗಳು:೧೬೮)

Sunday, July 26, 2020

ಎನ್. ಜಗದೀಶ್ ಕೊಪ್ಪ - ಮಂಜುನಾಥ್ ಚಾಂದ್ ಅವರ " ಕಾಡ ಸೆರಗಿನ ಸೂಡಿ" { ಕಾದಂಬರಿ -2020}

ಕಾದಂಬರಿಗೆ ಮುನ್ನುಡಿ ಬರೆದಿರುವ ಡಾ.ಎನ್,ಜಗದೀಶ್ ಕೊಪ್ಪ ಅವರ ಕೆಲವು ಆಯ್ದ ಸಾಲುಗಳು ಇಲ್ಲಿವೆ...
...........................................................
ಈ ಕಾದಂಬರಿಯ ಕಥಾವಸ್ತು ಮತ್ತು ಪಾತ್ರಗಳ ಜೊತೆಯಲ್ಲಿ ಅಲ್ಲಿನ ನಿಸರ್ಗ, ಕಾಡು ಬೆಟ್ಟ, ನದಿ, ಪಾಣಿ ಮತ್ತು ಪಕ್ಷಿ ಸಂಕುಲಗಳು ಪ್ರಾಮುಖ್ಯತೆಯನ್ನು ಪಡೆದಿರುವುದು ವಿಶೇಷವಾಗಿದೆ. ಕಥನವನ್ನು ಹೇಳುವ ತಂತ್ರದ ಜೊತೆಗೆ ಸ್ಥಳಿಯ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸಿರುವುದು ಲೇಖಕರ ಪ್ರತಿಭೆಗೆ ಸಾಕ್ಷಿಯಾಗಿದೆ. ಕನ್ನಡದ ಸಂದರ್ಭದಲ್ಲಿ ಕುವೆಂಪು ಮತ್ತು ಪೂರ್ಣಚಂದ್ರ ತೇಜಸ್ವಿಯವರು ಮಾತ್ರ ಕಥಾ ವಸ್ತುವಿನ ಜೊತೆಗೆ ಪ್ರಕೃತಿ ಮತ್ತು ಅಲ್ಲಿನ ಜೀವಜಾಲದ ಲೋಕವೊಂದನ್ನು ಬೆಸೆಯುವಲ್ಲಿ ಪರಿಣತಿಯನ್ನು ಸಾಧಿಸಿದ್ದರು.
ಈ ಕಾದಂಬರಿಯ ಉದ್ದಕ್ಕೂ ಬರುವ ಸೌಪರ್ಣಿಕಾ ನದಿ, ಕಂದೀಲು ಗುಡ್ಡ, ಹಾಗೂ ಕುಂದಾಪುರ ಮತ್ತು ಕೊಲ್ಲೂರು ನಡುವೆ ಹಬ್ಬಿರುವ ಅರಣ್ಯ ಹಾಗೂ ಕೊಲ್ಲೂರು ಮತ್ತು ಹೆಬ್ರಿಯ ನಡುವಿನ ಕಾಡು ಕಣಿವೆ ಹೀಗೆ ಅಲ್ಲಿನ ನಿಸರ್ಗದ ನಡುವಿನ ಸನ್ನಿವೇಶಗಳು ಕಾದಂಬರಿಯ ವಸ್ತು ಮತ್ತು ಅದರ ತಂತ್ರಕ್ಕೆ ಘನತೆಯನ್ನು ತಂದುಕೊಟ್ಟಿವೆ. ಎರಡು ದಶಕಗಳ ಹಿಂದೆ ತೆಲುಗು ಭಾಷೆಯಲ್ಲಿ ಮಹಿಂದ್ರ ರಾಜಾರಾಂ ಮೋಹನ್ ರಾವ್ ಎಂಬುವರು ಆಂಧ್ರ ಪ್ರದೇಶದ ಉತ್ತರ ಭಾಗದ ಪೂರ್ವ ಗೋದಾವರಿ ಜಿಲ್ಲೆಯ ಮುಂಗಡ ಎಂಬ ತನ್ನೂರಿಗೆ 1931ರಲ್ಲಿ ಗಾಂಧೀಜಿಯವರು ಪ್ರಥಮವಾಗಿ ಕಾಲಿಟ್ಟ ಸಂದರ್ಭವನ್ನು ಹಿನ್ನೆಲೆಯಾಗಿಟ್ಟು ತಮ್ಮ ಆತ್ಮ ಕಥನವನ್ನು ಕಾದಂಬರಿ ರೂಪದಲ್ಲಿ 'ಸ್ವರಾಜ್ಯಂ' ಹೆಸರಿನಲ್ಲಿ ಪ್ರಕಟಿಸಿದ್ದಾರೆ. (ಈ ಕೃತಿ ಇಂಗ್ಲಿಷ್ ಭಾಷೆಯಲ್ಲಿ ಪೆಂಗ್ವಿನ್ ಪ್ರಕಾಶನದಿಂದ ಪ್ರಕಟವಾಗಿದೆ) ತಾವು ಬಾಲಕನಾಗಿದ್ದ ಸಂದರ್ಭದಲ್ಲಿ ಗಾಂಧೀಜಿಯವರ ಪ್ರಭಾವದಿಂದ ತನ್ನ ನೆಲದಲ್ಲಿ ಸಂಭವಿಸಿದ ಅನೇಕ ಹೋರಾಟ, ಕ್ರಾಂತಿಕಾರಿ ಘಟನೆಗಳು, ತ್ಯಾಗ ಮತ್ತು ಬಲಿದಾನದ ಸನ್ನಿವೇಶಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಚಾಂದ್ ಅವರ ಈ ಕಾದಂಬರಿಯು ನನ್ನ ಮೇಲೆ ಅಂತಹದ್ದೇ ಪರಿಣಾಮ ಬೀರಿದೆ. ಅವರ ನಿರೂಪಣಾ ಶೈಲಿ, ಮತ್ತು ಆ ಕಾಲಘಟ್ಟದ ಕಾಡು ಕಣಿವೆಯ ನಡುವಿನ ಒಂಟಿ ಮನೆಯೇ ಊರಾಗಿರುವ ಸನ್ನಿವೇಶದಲ್ಲಿ ಅಲ್ಲಿನ ಘಟನಾವಳಿಗಳನ್ನು ಕಣ್ಣಿಗೆ ಕಟ್ಟುವಂತೆ ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ.
ಅನೇಕ ರೋಚಕ ತಿರುವುಗಳ ನಡುವೆಯೂ ಸಹ ಈ ಕಾದಂಬರಿಯು ಹಲವು ಬಗೆಯ ಕುತೂಹಲ, ವಿಷಾದಗಳ ಜೊತೆ ರೋಮಾಂಚನವನ್ನುಂಟು ಮಾಡುತ್ತಾ ಓದಿದ ನಂತರವೂ ಓದುಗರನ್ನು ನಿರಂತರವಾಗಿ ಕಾಡುವ ಗುಣವನ್ನು ಒಳಗೊಂಡಿರುವುದು ವಿಶೇಷವಾಗಿದೆ. ಈ ದೃಷ್ಟಿಯಿಂದ ಮಂಜುನಾಥ ಚಾಂದ್ ಅವರ ಈ ಕಾದಂಬರಿ ಸೂಡಿ ಕನ್ನಡದ ಸಾರಸ್ವತ ಲೋಕಕ್ಕೆ ಒಂದು ವಿಶಿಷ್ಟ ಕೊಡುಗೆ ಎಂದೇ ಹೇಳಬಹುದು. ಇಂತಹ ಅಪರೂಪದ ಕಥನವನ್ನು ನೀಡಿದ ಮಿತ್ರರಾದ ಚಾಂದ್ ಅವರಿಂದ ಇಂತಹ ಇನ್ನಷ್ಟು ಕೃತಿಗಳು ಹೊರ ಬರಲಿ ಎಂದು ಶುಭ ಹಾರೈಸುತ್ತೇನೆ....
---------------------------------------
ಮುಖಪುಟ ರಚನೆ ಮತ್ತು ಇಡೀ ಕೃತಿಯನ್ನು ಒಂದು ಕಲಾಕೃತಿಯಂತೆ ರೂಪಿಸಿಕೊಟ್ಟವರು: ಸುಧಾಕರ ದರ್ಬೆ.
ಒಟ್ಟು ಪುಟಗಳು: 196
ಬೆಲೆ: 180
ಮುಂಗಡ ಕಾಯ್ದಿರಿಸಿದವರಿಗೆ: 150
ಈ ಸಂಖ್ಯೆಗೆ ಗೂಗಲ್ ಪೇ ಮಾಡಿದರೆ ಬಿಡುಗಡೆಯಾದ ತಕ್ಷಣ ಕಾದಂಬರಿ ನಿಮ್ಮ ಮಡಿಲಿಗೆ. -7899774123
ವಿಳಾಸವನ್ನು ಈ ಸಂಖ್ಯೆಗೆ ವಾಟ್ಸಾಪ್ ಮಾಡಿ- 9449238154
ಗರಿಷ್ಠ ಹತ್ತು ದಿನಗಳಲ್ಲಿ ಕೃತಿ ಲಭ್ಯ
ಇದು ಅಕ್ಷರ ನಂಬಿದವನ ಸಾಹಸ
ನಿಮ್ಮ ಬೆಂಬಲವಿರಲಿ...
-ಚಾಂದ್
-------------------------------------------


ಸ್ವಾತಂತ್ರ್ಯ ಹೋರಾಟಗಾರ ಹಿರಿಯಡಕ ರಾಮರಾಯ ಮಲ್ಯರು -Freedom Fighter Hiriadka Ramaraya Malya

Hiriadka Ramaraya Malya

ಹಿರಿಯಡಕ ರಾಮರಾಯ ಮಲ್ಯರನ್ನು ಕುರಿತು ಕಯ್ಯಾರ  ಅವರು ಬರೆದ ಲೇಖನ Hiriadka Samskruthi Siri Trust You Tube channel ನಲ್ಲಿ ಲಭಯವಿದೆ .


ಮುರಳೀಧರ ಉಪಾಧ್ಯ ಹಿರಿಯಡಕ - ಮಹಿಳಾ ಅಧ್ಯಯನ ಮೌಲಿಕ ಕೃತಿಗಳು.

ಕೇಂಬ್ರಿಜ್ ಯೂನಿವರ್ಸಿಟಿ ಪ್ರೆಸ್ ೧೯೯೭ರಲ್ಲಿ ಪ್ರಕಟಿಸಿದ ಜೆರಾಲ್ಡಿನ್ ಫೋರ್ಬ್ ಅವರ ’ವಿಮೆನ್ ಇನ್ ಮಾಡರ್ನ್ ಇಂಡಿಯಾ’ ಗ್ರಂಥವನ್ನು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ವಿಭಾಗದ ಡಾ| ಎಚ್.ಎಸ್. ಶ್ರೀಮತಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಈ ಗ್ರಂಥದ ರಚನೆಯ ಪೂರ್ವಸಿದ್ಧತೆಗಾಗಿ ಭಾರತ ವಿವಿಧ ಪ್ರೆದೇಶಗಳಲ್ಲಿ ಕ್ಷೇತ್ರಕಾರ್ಯ ನಡೆಸಿದ ಜೆರಾಲ್ಡಿನ್ ಫೋರ್ಬ್ಸ್ ಸಾವಿರಾರು ಲಿಖಿತ ದಾಖಲೆಗಳನ್ನು ಅಲಿಖಿತ ನೆನಪುಗಳನ್ನು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

ಭಾರತೀಯ ಮಹಿಳೆ ಅಷ್ಟೊಂದು ಮೂಕಳಾಗಿ ಬಾಳು ಬಂದಿದ್ದಾಳೆಂಬುದು ನಿಜವಲ್ಲ. ಅವಳು ದನಿಯೇ ಇಲ್ಲದವಳು ಎಂದು ತೀರ್ಮಾನಕ್ಕೆ ಬಂದು ಬಿಡುವುದು ತಪ್ಪು.ಹತ್ತೊಂಬತ್ತನೆಯ ಶತಮಾನದ ಈಶ್ವರಚಂದ್ರ ವಿದ್ಯಾಸಾಗರ, ಕುಂದಕೂರಿ ವೀರೇಶಲಿಂಗಂ ಪಂತುಲು ಮತ್ತಿತರ ಸುಧಾರಣಾವಾದಿ ಪುರುಷರ ಪ್ರಯತ್ನಗಳು,  ಸುಧಾರಣೆಯ ಕಾರ್ಯಕ್ರಮಗಳ ಪಟ್ಟಿಯಲ್ಲಿ ಶಿಕ್ಷಣಕ್ಕೆ ದೊರೆತ ಮೊದಲ ಆದ್ಯತೆ ಮಹಿಳಾ ವಿಮೋಚನೆಯ ಹಾದಿಯನ್ನು ಸುಗಮಗೊಳಿಸಿದ್ದು, ಸಾರ್ವಜನಿಕ ರಂಗಕ್ಕೆ ಬಂದ ಮಹಿಳೆಯರಿಗೆ ಗಾಂಧೀಜಿಯವರು ಕಾರ್ಯಯೋಜನೆಯ ನೀಲನಕ್ಷೆ ನೀಡಿದ್ದು, ಪುರುಷರು ರಾಜಕೀಯದಲ್ಲಿ ಹೆಚ್ಚು ಕ್ರಿಯಾಶೀಲರಾದಾಗ ಸಮಾಜ ಸುಧಾರಣೆಯ ಕೆಲಸವನ್ನು ಮಹಿಳೆಯರು ಕೈಗೆತ್ತಿಕೊಂಡದ್ದು, ವಸಾಹತುಶಾಹಿ ಆರ್ಥಿಕ ನೀತಿಯಿಂದಾಗಿ ಮಹಿಳೆಯರ ಮೇಲೆ ಆದ ಆರ್ಥಿಕ ಪರಿಣಾಮಗಳು, ಸ್ವಾತಂತ್ರ್ಯ ಪೂರ್ವದ ಮಹಿಳಾ ಸಂಘಟನೆಗಳಿಂದ ಮಧ್ಯಮ ವರ್ಗದ ಮಹಿಳೆಯರು ಲಾಭ ಪಡೆದದ್ದು. ತೆಲಂಗಾಣದ ಮಹಿಳೆಯರ  ಸಂಕಷ್ಟಗಳಿಗಾಗಲೀ ದೇಶ ವಿಭಜನೆಯಾದ ಸಂದರ್ಭದಲ್ಲಿ ನಿರಾಶ್ರೀತರಾದವರ ಪಾಲಿಗಾಗಲೀ, ಯಾವ ಪರಿಹಾರವನ್ನೂ ಸೂಚಿಸುವುದು ಸಾಮಾಜಿಕ ಸ್ತ್ರೀವಾದಕ್ಕೆ ಸಾಧ್ಯವಾಗದಿದ್ದುದು.
ಇವು ಜೆರಾಲ್ಡಿನ್ ಫೋರ್ಬ್ ಗುರುತಿಸಿರುವ ಕೆಲವು ಮುಖ್ಯಾಂಶಗಳು.

"ಆದರೆ ಮಹಿಳೆಯರ ಹಕ್ಕುಗಳಿಗಾಗಿ ನಡೆದಿರುವ ಹೋರಾಟದಲ್ಲಿ ಇಲ್ಲಿನ ಮಹಿಳೆಯರು ಮುನ್ನಡೆದಿದ್ದಾರೆ ಎಂಬುದು ಅತ್ಯಂತ ಗಮನಾರ್ಹವಾದ ಫೋರ್ಬ್ "ಏನೇ ಆದರೂ ಮಹಿಳೆಯರಿಗೆ ದೊರೆತ ಶಿಕ್ಷಣ ಹಾಹೂ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳು ಭಾರತದ ಸಾಮಾಜಿಕ ಹಾಗೂ ರಾಜಕೀಯ ನಕ್ಷೆಯನ್ನೇ ಬದಲಿಸಿವೆ. ಕಾಯಿದೆಯ ವಸ್ತುಗಳೆನಿಸಿಯಷ್ಟು ಪರಿಗಣಿತವಾಗುತ್ತಿದ್ದ ಮಹಿಳೆಯರು ಈಗ ಕಾಯಿದೆಯ ನಿರ್ಮಾಪಕಿಯರೂ ಆಗುವ ಹಂತ ತಲುಪಿದ್ದಾರೆ. ಈ ಹಿಂದಿನಂತೆ ಕುಟುಂಬವು ಬದುಕಿನ ನಿರ್ಧಾರಕ್ ನಿಯಂತ್ರಕವಾಗಿ ಉಳಿದಿಲ್ಲ ಎಂಬ ಸಂಗತಿ ಮಹಿಳೆಯರ ಪಾಲಿಗಾದರೂ ನಿಜವೆನಿಸಿದೆ. ಸಾಮಾನ್ಯವಾದೊಂದು ಜಾಗೃತಿಯು ಆರಂಭವಾಗಿದೆ ಎಂಬುದಂತೂ ಒಪ್ಪಲೇ ಬೇಕಾದ ವಿಷಯ. ಹಾಗಾಗಿ ಶಾಶ್ವತ  ದಮನ ಇನ್ನು ಸಾಧ್ಯವಿಲ್ಲದ ಮಾತು.

ಉಡುಪಿಯಲ್ಲಿ೧೯೭೬ರಲ್ಲಿ ತಾನು ಸಂದರ್ಶಿಸಿದ ಸ್ವಾತಂತ್ರ್ಯ ಹೋರಾಟ ಗಾರ್ತಿ ಶ್ರೀಮತಿ ಅಂಬಾಬಾಯಿ ಅವರನ್ನು ಕುರಿತು ಜೆರಾಲ್ಡಿನ್ ಫೋರ್ಬ್ಸ್ ಹೀಗೆ ಬರೆದಿದ್ದಾರೆ-"ಕರ್ನಾಟಕದ ಅಂಬಾಬಾಯಿಗೆ ಹನ್ನೇರಡು ವರ್ಷಕ್ಕೆ ಮದುವೆಯಾಘಿತ್ತು. ಹದಿನಾರಕ್ಕೆ ವಿಧವೆಯಾದ ಅಂಬಾಬಾಯಿ ವಿದೇಶೀ ವಸ್ತ್ರದಂಗಡಿ ಹಾಘೂ ಸಾರಾಯಿ ಅಂಗಡಿಗಳಾ ಮುಂದೆ ಕೂರುತ್ತಿದ್ದ ಧರಣೆ ಸತ್ಯಾಗ್ರಹಗಳಲ್ಲಿ ಸೇರಿ ಕೊಂಡರು. ಬಂಧನಕ್ಕೊಳಗಾಗಿ ನಾಲ್ಕು ತಿಂಗಳ ಶಿಕ್ಷೆ-ಜೈಲುವಾಸ.ಬಿಡುಗಡೆಗೊಮ್ಡು ಬಂದದ್ದೇ ಮತ್ತೆ ಬಂಧನ. ಹೀಗೆ ಜೈಲುವಾಸಗಳ ಮಧ್ಯಾಂತರದಲ್ಲಿ ಆಕೆ ಸತತವಾಗಿ ಭಾಷಣಗಳನ್ನು ಮಾಡಿದಳು. ತಕಲಿಯಲ್ಲಿ ನೂಲುವುದನ್ನು ಕಲಿಸಿದಳು. ಬೆಳಗಿನ ಪ್ರಭಾತ ಫೇರಿಗಳನ್ನು ಆಯೋಜಿಸಿದಳು. ಇವು ತನ್ನ್ ಬದುಕಿನ ಅತ್ಯಂತ ಆನಂದದ ಕ್ಷಣಗಳೆಂದು ಚರ್ಚಿಸಲಾಗಿದೆ. ವರದಕ್ಷಿಣೆ, ಅತ್ಯಾಚ್ಯಾರ, ಕೌಟುಂಬಿಕ ಹಿಂಸೆ, ವ್ಧು ದಹನ್ ಇವು ಸ್ವಾಯತ್ತ ಮಹಿಳಾ ಚಳವಳಿಗಳ ಮುಖ್ಯ ವಿಷಯಗಳಾಗಿವೆ. ದಲಿತ ಮತ್ತು ಪರಿಶಿಷ್ಟ ಚಳವಳಿ, ಬಂಗಾಲದಭಾಗ ಚಳವಳಿ, ದ್ರಾವಿಡ ಆತ್ಮಗೌರವ ಚಳವಳಿ, ವಾರ್ಲಿ ಚಳವಳಿ, ತೆಲಂಗಾಣ ಹೋರಾಟ-ಇವುಗಳ ಇತಿಹಾಸ ’ ಮಹಿಳಾ ಚಳವಳಿಗಳು ಮತ್ತು ಇತರ ಸಾಮಾಜಿಕ ಸಾಂಸ್ಕೃತಿಕ ಚಳವಳಿಗಳು ಮತ್ತು ಇತರ ಸಾಮಾಜಿಕ ಸಾಂಸ್ಕೃತಿಕ ಚಳವಳಿಗಳು’ ಎಂಬ ಕೊನೆಯ ಅಧ್ಯಾಯದಲ್ಲಿದೆ.

" ಒಟ್ತಾರೆಯಾಗಿ ಸ್ತ್ರೀವಾದ ಎಂದರೆ ಮೂಲಭೂತವಾಘಿ ಸಮಾಜದಲ್ಲಿನ ಸ್ತ್ರೀಶೋಷಣೆ ಹಾಗೂ ದಮನವನ್ನು ಕುರಿತ ಪ್ರಜ್ಞಾಪೂರ್ವಕ ಎಚ್ಚರ.... ಸ್ತ್ರೀಯನ್ನು ಕುರಿತ   ಗ್ರಹಿಕೆ, ವಿವರಣೆ, ವಿಶ್ಲೇಷಣೆ, ಪುನರ್ ಮೌಲ್ಯೀಕರಣ ಪ್ರಯತ್ನಕ್ಕೆ ಸೂಕ್ತವಾದ ತಾತ್ವಿಕತೆಯನ್ನು ಕಟ್ಟಿ ಕೊಡುವ ಪ್ರಕ್ರಿಯೆಯೇ ಸ್ತ್ರೀವಾದ" ಎಂದು ’ಮಹಿಳಾ ಅಧ್ಯಯನ’ದ ವಿದ್ಯಾರ್ಥಿಗಳು ಮಾತ್ರವಲ್ಲದೆ ಸ್ತ್ರೀವಾದದಲ್ಲಿ ಆಸಕ್ತಿ ಇರುವವರೆಲ್ಲ್ ಅಧ್ಯಯನ ಮಾಡಾಬೇಕಾದ ಗ್ರಂಥ.
ಕನ್ನಡದಲಿ ಮಹಿಳಾ ಅಧ್ಯಯನವನ್ನು ಕುರಿತ ಎರಡು ಮೌಲಿಕ ಗ್ರಂಥಗಳನ್ನು ಪ್ರಕಟಿಸಿರುವ ಕನ್ನಡ ವಿಶ್ವವಿದ್ಯಾಲಯ್ದ ಮಹಿಳಾ ಅಧ್ಯಯನ್ ವಿಭಾಗದವರು ಹಾಗೂ ಪ್ರಸಾರಾಂಗದವರು ಅಭಿನಂದನಾರ್ಹರು.
ಮುರಳೀಧರ ಉಪಾಧ್ಯ, ಹಿರಿಯಡಕ.
ಆಧುನಿಕ ಭಾರತದಲ್ಲಿ ಮಹಿಳೆ                                                              
ಇಂಗ್ಲಿಷ್ ಮೂಲ:ಜೆರಾಲ್ಡಿನ್  ಫೋರ್ಬ್ಸ್
ಕನ್ನಡಕ್ಕೆ:ಎಚ್.ಎಸ್. ಶ್ರೀಮತಿ
ಮುದ್ರಣ:೨೦೦೧ ಬೆಲೆ:ರೂ೧೨೦.

ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು
ಮತ್ತು ಮಹಿಳಾ ಚಳವಳಿಗಳು
ಲೇ:ಡಾ|ಪ್ರೀತಿ ಶುಭಚಂದ್ರ
ಮುದ್ರಣಾ:೨೦೦೨ ಬೆಲೆ ರೂ.೧೨೫.

ಸಂಗಾತ ಕಥಾ ಬಹುಮಾನ 2020


N. Prabhaker Acharya ,ಎನ್.ಪ್ರಭಾಕರ ಆಚಾರ್ಯ -God Of Love

N. Prabhaker Acharya  God of Love

Friday, July 24, 2020

‘ಅಮ್ಮನ ಚಿನ್ನ ರಸಾಲು ಮಾವಿನ ಮರ’ – ರಮೇಶ್ ಭಟ್ ಬೆಳಗೋಡು – ಪುಸ್ತಕಪ್ರೇಮಿ

ನಯನ ಬಜಕೂಡ್ಲು --ಸುರಭಿ ಕೊಡವೂರು ಬರೆದ " ಮೊಬೈಲ್ ಮೈಥಿಲಿ { ಕಥಾ ಸಂಕಲನ }

ಪುಸ್ತಕ :- ಮೊಬೈಲ್ ಮೈಥಿಲಿ ಮತ್ತು ಮುಗ್ಧ ಕಥೆಗಳು
ಲೇಖಕರು :- ಕೆ. ಸುರಭಿ ಕೊಡವೂರು
ಪ್ರಕಾಶಕರು :-ಅನುಗ್ರಹ ಪ್ರಕಾಶನ
ಬೆಲೆ :- Rs. 100
ಪುಸ್ತಕ ದೊರೆಯುವ ಸ್ಥಳ :- ಸಪ್ನ, ಫಿನೀಕ್ಸ್ ಬುಕ್ಸ್, ನವಕರ್ನಾಟಕ ಬುಕ್ ಸ್ಟಾಲ್.
ಈ ಕಥೆ ಪುಸ್ತಕ ಕೈಸೇರುತ್ತಿದ್ದಂತೆ ಯಾಕೋ ಬಾಲ್ಯ ನೆನಪಾಯಿತು .ನಾನು ಬಹಳ ಚಿಕ್ಕ ವಯಸ್ಸಿನಿಂದಲೂ ಅಜ್ಜಿಯ ಸಾಂಗತ್ಯ, ಪೋಷಣೆಯಲ್ಲಿ ಹೆಚ್ಚು ಬೆಳೆದವಳು. ಆ ಮುಗ್ಧ ದಿನಗಳಲ್ಲಿ ಅಜ್ಜಿಯನ್ನು ಕತೆ ಹೇಳು ಎಂದು ದಿನಾ ಪೀಡಿಸುತ್ತಿದೆ. ಆಗ ಅಜ್ಜಿ ಹೇಳುತ್ತಿದ್ದ ಕಥೆಗಳು ಕಾಗಕ್ಕ ಗುಬ್ಬಕ್ಕ, ಕಾಗೆ ಭತ್ತವನ್ನು ಹೊತ್ತೊಯ್ಯುವ ಕಥೆ, ಮತ್ತು ಅಮರಾವತಿ ಎಂಬ ಪಟ್ಟಣದ ಒಬ್ಬಳು ರಾಜಕುಮಾರಿಯ ಕಥೆ. ಆಹಾ.... ಅದೆಷ್ಟೊಂದು ಸುಂದರವಾಗಿತ್ತು ಆ ಬಾಲ್ಯ ಆ ಕಥೆಗಳು. ಈ ಕತೆಗಳಲ್ಲಿ ನನಗೆ ಬಹಳ ಇಷ್ಟವಾದದ್ದು ಕಾಗೆ ಭತ್ತವನ್ನು ಹೊತ್ತೊಯ್ಯುವ ಕಥೆ. ಈ ಕಥೆಗೆ ಅಂತ್ಯವೇ ಇಲ್ಲ. ನಿದ್ದೆಯಿಂದ ಕಣ್ಣೆವೆ ಮುಚ್ಚಿ ಕೊಳ್ಳುವವರೆಗೂ ಕಾಗೆ ಭತ್ತವನ್ನು ಒಂದೊಂದಾಗಿ ಹೊತ್ತೊಯ್ಯುತ್ತಿತ್ತು. ಈ ಕಥೆ ಇಷ್ಟವಾಗಲು ಕಾರಣ ಅಜ್ಜಿ ಅದನ್ನು ಹೇಳುತ್ತಿದ್ದ ಆಕರ್ಷಕ ರೀತಿ. ನನ್ನ ಬಾಲ್ಯವನ್ನು ಸೊಗಸಾಗಿಸುವುದೇ ಈ ಸುಂದರ ನೆನಪುಗಳು.
ಇಂತಹ ಸುಂದರ ಬಾಲ್ಯದಿಂದ ಇವತ್ತು ಬಹಳಷ್ಟು ಪುಟಾಣಿಗಳು ವಂಚಿತರು ಅನ್ನುವುದು ದುಃಖದ ಸಂಗತಿ. ಒಂದನೆಯದಾಗಿ ಒಂದು ಕುಟುಂಬವೆಂದರೆ ಅಪ್ಪ ,ಅಮ್ಮ ,ಮಗು ಅಷ್ಟೇ ಆಗಿದೆ. ಹಿರಿಯರ ನೆರಳಿನಿಂದ ಇಂದಿನ ಬಹಳಷ್ಟು ಮಕ್ಕಳು ವಂಚಿತರು. ಅದಲ್ಲದೆ ಮುಂದುವರಿದ ತಾಂತ್ರಿಕ ಕ್ರಾಂತಿಯೊಂದಿಗೆ ಮಕ್ಕಳ ಮುಗ್ಧತನವೂ ಇಲ್ಲವಾಗುತ್ತಿದೆ. ಪುಟಾಣಿಗಳು ಮೊಬೈಲ್ ಕಂಪ್ಯೂಟರ್ ಗೇಮ್ಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅಜ್ಜ, ಅಜ್ಜಿ, ಅತ್ತೆ, ಮಾವ, ಚಿಕ್ಕಪ್ಪ, ದೊಡ್ಡಪ್ಪ ಈ ಸಂಬಂಧಗಳೆಲ್ಲವೂ ಬಹಳಷ್ಟು ಮಕ್ಕಳಿಗೆ ಅಪರಿಚಿತ. ಒಂದು ವೇಳೆ ಇದ್ದರೂ ಅಲ್ಲಿ ಮನ ಹೃದಯಗಳನ್ನು ಬೆಸೆಯುವ ವಾತ್ಸಲ್ಯ, ಸ್ನೇಹದ ತಂತುಗಳು ಇಲ್ಲ. ಸಂಬಂಧಗಳು ಬರೀ ವ್ಯಾವಹಾರಿಕ, ಇದೆಂತಹ ಬದುಕು ?.
ಮೊದಲ ಕಥೆಯಲ್ಲೆ ಈ ಕತೆಗಳನ್ನು ಬರೆದ ಪುಟ್ಟ ಲೇಖಕಿಯ ಮನಸ್ಸು ಹೇಗೆಂದು ಅರ್ಥವಾಗುತ್ತದೆ. ಈ ಕತೆಗಳನ್ನು ಬರೆಯುವಾಗ ಲೇಖಕಿಯ ವಯಸ್ಸು 7-8 ವರ್ಷ ಇರಬಹುದು.ಅಥವಾ ಇನ್ನೂ ಚಿಕ್ಕ ಪ್ರಾಯ. ಇವತ್ತಿನ ಪ್ರಸ್ತುತ, ನೀರಸ, ರೋಬೋಟ್ ನಂತಹ ಬದುಕಿನ ಪರಿಚಯ ಸಿಗುತ್ತದೆ ಇಲ್ಲಿ. ಮೊಬೈಲ್ ಎಂಬ ಮಾಯಾಪೆಟ್ಟಿಗೆ ಮುಗ್ಧರು ಮಕ್ಕಳು ಹೇಗೆ ದಾಸರಾಗುತ್ತಿದ್ದಾರೆ, ಅದು ಎಷ್ಟು ಕೆಟ್ಟದ್ದು ಅನ್ನುವುದನ್ನು ಈ ಪುಟ್ಟ ಬಾಲಕಿ ಸ್ವತಃ ಅರ್ಥೈಸಿಕೊಂಡು ಬರೆದಿದ್ದಾಳೆ.
ಇವತ್ತಿನ ಅಮ್ಮಂದಿರಿಗೆ ಮಗುವನ್ನು ಲಾಲಿಸಿ, ಮುದ್ದಿಸಿ, ಚಂದಿರನನ್ನು ತೋರಿಸಿ, ಲಾಲಿ ಹಾಡಿ ಸಂತೈಸುವ ವ್ಯವಧಾನವಿಲ್ಲ, ಊಟ ಮಾಡಿಸುವ ತಾಳ್ಮೆ ಇಲ್ಲ. ಮೊಬೈಲ್ ಎಂಬ ಮಾಯಾಪೆಟ್ಟಿಗೆಯಲ್ಲಿ ಆಟವೊ, ಕಾರ್ಟೂನು ಹಾಕಿ ಕೊಟ್ಟರೆ ಆಯಿತು, ಮಗು ಇಡೀ ಪ್ರಪಂಚವನ್ನೇ ಮರೆತು ಅದರೊಳಗೆ ಕಳೆದು ಹೋಗುತ್ತದೆ. ಮಗುವಿನದ್ದು ಗಲಾಟೆ ಇಲ್ಲ , ಅಮ್ಮನು ನಿರಾಳ. ತಾಯ್ತನ ಎನ್ನುವುದು ಒಂದು ಸಂಭ್ರಮ. ರಚ್ಚೆ ಹಿಡಿದು ಅಳುವ ಮಗುವನ್ನು ಸಂತೈಸಿ ಸಮಾಧಾನಿಸುವುದು ಒಂದು ಕಲೆ. ಈ ಕ್ರಿಯೆ ಅಮ್ಮ ಮಗುವಿನ ಬಾಂಧವ್ಯವನ್ನು, ಕರುಳಿನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಅನ್ನುವ ವಿಚಾರ ವೈಜ್ಞಾನಿಕವಾಗಿಯೂ ಸಾಬೀತಾಗಿದೆ ಆದರೂ ನಮಗೆ ಮಾತ್ರ ಅರ್ಥವಾಗುವುದಿಲ್ಲ. ಮರಳುಗಾಡಿನ ಮರೀಚಿಕೆಯಂತೆ ಕಾಣದ ಅದಾವುದೋ ತೃಷೆಯ ದಾಸರಾಗಿ ಅದರ ಹಿಂದೋಡುವುದೇ ಬದುಕಾಗಿದೆ. ನಮಗೆ ಯಾವಾಗ ಎಚ್ಚರವಾಗುತ್ತದೊ ಗೊತ್ತಿಲ್ಲ.
ಸುರಭಿ ತನ್ನ ಕಥೆಯ ಮೂಲಕ ಒಂದು ಉತ್ತಮ ಸಂದೇಶವನ್ನು ನೀಡುವ ಪ್ರಯತ್ನ ಮಾಡಿದ್ದಾಳೆ.
ಮೊಬೈಲ್ ಮೈಥಿಲಿಯಲ್ಲಿ ಇಂದಿನ ತಂತ್ರಜ್ಞಾನ ಸಂಬಂಧಿ ಮೊಬೈಲ್, ಕಂಪ್ಯೂಟರ್ ಗಳ ಬಳಕೆಯಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಹಾಗೂ ಮಕ್ಕಳ ಕೈಗೆ ಇಂತಹವನ್ನು ಕೊಡುವ ಪೋಷಕರಲ್ಲಿ ಇರಬೇಕಾದ ವಿವೇಕ, ಎಚ್ಚರಿಕೆಯನ್ನು ಸೂಕ್ಷ್ಮವಾಗಿ ನೀಡಲಾಗಿದೆ. ಇಷ್ಟು ಪುಟ್ಟ ತಲೆಯೊಳಗೆ ಎಂತಹ ವಿವೇಚನಾಯುಕ್ತ ಆಲೋಚನೆ ....
ಹೇನಿನ ಕಥೆಯಲ್ಲಿ ಅಜ್ಜ ಅಜ್ಜಿ ಹೇಳುವ ರಸವತ್ತಾದ ಕಥೆಗಳ ಸೊಗಸು, "ರಾಜಕುಮಾರಿ ಯಾಕೆ ಅಳುತ್ತಿದ್ದಾಳೆ " ಅನ್ನುವ ಪುಟ್ಟ ಕಥೆಯಲ್ಲಿ ದೇವರು ಯಾವತ್ತೂ ಎಲ್ಲ ಕಷ್ಟಗಳ ಸಂದರ್ಭದಲ್ಲೂ ಸಮಯಕ್ಕೆ ಒದಗುತ್ತಾನೆ, ದೇವರು ಇದ್ದಾನೆ ಅನ್ನುವ ಭರವಸೆಯನ್ನು ನೀಡುವ ಸಂದೇಶ, ಚಂದ್ರಮುಖಿ ಯಲ್ಲಿ ಪ್ರಾಣಿ ಪ್ರೀತಿ ಹಾಗೂ ಉನ್ನತವಾದುದನ್ನು ಸಾಧಿಸುವ ಆಕಾಂಕ್ಷೆಗಳು ಅಡಗಿವೆ.
ಸುರಭಿ- ಈ ಹುಡುಗಿಯ ಕಾಲ್ಪನಿಕ ಜಗತ್ತು ಬಹಳ ವಿಶಾಲ ಹಾಗೂ ಸುಂದರವಾಗಿದೆ. ಕೃಷ್ಣ, ಅವನ ತಲೆಯಲ್ಲಿರುವ ನವಿಲುಗರಿ, ಅವನು ಊದುವ ಕೊಳಲು- ಇವೆಲ್ಲವೂ ಇಂದಿಗೂ ಕಿರಿಯರಿಂದ ಹಿಡಿದು ಹಿರಿಯರವರೆಗೂ ಸೆಳೆಯುವ ಅಂಶಗಳು. ಕೃಷ್ಣನಿಗೆ ಕೊಳಲು ಹೇಗೆ ಸಿಕ್ಕಿತು ಅನ್ನುವ ಕುರಿತಾದ ಒಂದು ಸುಂದರ ಕಥೆ. ಈ ಪುಟ್ಟ ಮನಸ್ಸು ಸೃಷ್ಟಿಸುವ ಬಣ್ಣ ಬಣ್ಣದ ಕನಸಿನ ಜಗತ್ತು, ಮುಗ್ಧ ಪ್ರಪಂಚಕ್ಕೆ ಖಂಡಿತಾ ಓದುಗರ ಮನಸ್ಸು (ಅದು ಹಿರಿಯರು ಇರಲಿ ಪುಟಾಣಿಗಳು ಇರಲಿ ) ಸೆಳೆಯಲ್ಪಡುತ್ತದೆ.
"ಗೂಡುದೀಪದಲ್ಲಿ ಪುಟ್ಟ ಹಕ್ಕಿ ಮರಿ" ಕಥೆಯಲ್ಲಿ ಪುಟ್ಟ ಮನಸ್ಸಿನ ಪ್ರಬುದ್ಧ ಆಲೋಚನೆಗಳು ಎದ್ದು ಕಾಣುತ್ತವೆ. ಅಂತಃಕರಣ ತುಂಬಿದ ಆಂತರ್ಯ ವ್ಯಕ್ತವಾಗಿದೆ.
"ನಾನು ಹಕ್ಕಿಯನ್ನು ಸಾಕಿದ್ದು" - ಈ ಕಥೆಯನ್ನು ಓದುವಾಗ ನಮ್ಮ ಮನೆಯಲ್ಲೂ ನಡೆದ ಒಂದು ಘಟನೆಗೂ ಈ ಕಥೆಯಲ್ಲಿ ಉಲ್ಲೇಖಿಸಲ್ಪಟ್ಟ ಘಟನೆಗೂ ಸಾಮ್ಯವಿದೆ, ಹಾಗೂ ಸತ್ಯವಿದೆ ಅನ್ನಿಸಿತು. ಈ ಕಥೆಯಲ್ಲಿ ನಡೆದಂತೆಯೇ ನಮ್ಮ ಮನೆಯಲ್ಲೂ ಒಂದು ಹಕ್ಕಿ ಮೊಟ್ಟೆ ಇಟ್ಟು ಸ್ವಲ್ಪ ಸಮಯದ ನಂತರ ಆ ಮೊಟ್ಟೆಗಳು ಒಡೆದು ಮೂರು ಮರಿಗಳು ಹೊರ ಬಂದಿದ್ದುವು. ಒಂದು ದಿನ ಆ ಮರಿಗಳ ಅಮ್ಮನನ್ನು ಒಂದು ಬೆಕ್ಕು ಹಿಡಿದು ಕೊಂದು ತಿಂದಿತು. ತೀರಾ ಪುಟ್ಟ ಮರಿಗಳು . ಅವುಗಳನ್ನು ಹೇಗೆ ರಕ್ಷಿಸುವುದು ಎಂದು ನಮಗೆ ತೋಚಲೇ ಇಲ್ಲ. ಮರಿಗಳು ಹಸಿವಿನಿಂದ ಬಹಳ ಕಲರವ ಮಾಡುತ್ತಿದ್ದವು. ಇದನ್ನು ದೂರದಲ್ಲಿ ಕುಳಿತು ಒಂದು ಹಕ್ಕಿ ನೋಡುತ್ತಿತ್ತು. ಈ ಮರಿಗಳ ಕಲರವ ಹೆಚ್ಚಾದಂತೆ ಸ್ವಲ್ಪ ಸಮಯದ ಬಳಿಕ ಆ ಹಕ್ಕಿ ಎಲ್ಲೋ ಹಾರಿ ಹೋಗಿ ಮತ್ತೆ ಮರಳಿ ಮರಿಗಳಿದ್ದ ಗೂಡಿನ ಬಳಿ ಬಂದು ಅವುಗಳಿಗೆ ಆಹಾರವನ್ನು ತಿನ್ನತೊಡಗಿತು. ನಮ್ಮ ಪಾಲಿಗಿದು ಒಂದು ಆಶ್ಚರ್ಯದ ವಿಚಾರವೇ, ಬೇರೆ ಹಕ್ಕಿ ಬಂದು ತನ್ನದಲ್ಲದ ಮರಿಗಳಿಗೆ ಆಹಾರ ಉಣ್ಣಿಸುತ್ತದೆ ಎಂದರೆ ಅದ್ಭುತವಲ್ಲದೆ ಇನ್ನೇನು ? ... ನಾವು ಮನುಷ್ಯರು ಅದೆಷ್ಟೊಂದು ಸ್ವಾರ್ಥಿಗಳು ಅನ್ನಿಸಿತು ಆ ಕ್ಷಣ. ಇದು ಸುರಭಿ ಬರೆದ ಕಥೆಯನ್ನು ಓದುವಾಗ ನೆನಪಾದ ಕತೆ .ಈ ಕಥೆಯ ಅಂತ್ಯ ಸುಖಕರವಾಗಿದೆ .ಆದರೆ ನಾನು ನೋಡಿದ ಘಟನೆ ಆ ಮರಿಗಳನ್ನು ಕಿಡಿಗೇಡಿ ಬೆಕ್ಕು ತಿಂದು ಮುಗಿಸುವ ದುರ್ಘಟನೆ ಯೊಂದಿಗೆ ಕೊನೆಗೊಳ್ಳುತ್ತದೆ, ಇದು ನೋವಿನ ವಿಚಾರ .
ಸುಧೀರ್ ರಾವ್ ಕೊಡವೂರು ಕಲಾಕ್ಷೇತ್ರದ ಒಬ್ಬ ಮಹಾನ್ ಸಾಧಕ . ಇವರು ಮಾಡಿರುವ ಸಾಧನೆಗಳು ಒಂದೆರಡಲ್ಲ ನೃತ್ಯ, ಸಂಗೀತ ಭಾಗವತಿಕೆ ಹೀಗೆ ಹಲವಾರು . ಅವರ ಮಗಳಾದ ಸುರಭಿ ತನ್ನ ಅಪ್ಪನ ಕಲಾಕ್ಷೇತ್ರದಲ್ಲಿ ಆರಂಭದಲ್ಲಿ ಮಾಡಿದ ಸಾಧನೆಯನ್ನು ಕಥೆಯಾಗಿಸಿ ಉಲ್ಲೇಖಿಸಿದ ರೀತಿ ಈ ಹುಡುಗಿಯ ಸಾಮರ್ಥ್ಯವನ್ನು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ಈ ಕಥೆಯನ್ನು ಓದಿಯೇ ಸವಿಯಬೇಕು.
ಪುಟ್ಟ ಲೇಖಕಿ ಸುರಭಿಯ ಊರು ಕೊಡವೂರು. ಅಲ್ಲೊಂದು ತಕ್ಕಮಟ್ಟಿಗೆ ಪ್ರಸಿದ್ಧ ದೇವಾಲಯವಿದೆ. ಅದರ ಕುರಿತಾಗಿ, ತನ್ನೂರಿನ ಕುರಿತಾಗಿ ಹಾಗೂ ಆ ಊರಿನಲ್ಲಿ ನೆಲೆಸಿದ್ದ ಓರ್ವ ಕವಿಯ ಕುರಿತಾದ ತಾನು ಕೇಳಿ ಅರಿತ ಕಥೆಯನ್ನು ಇಲ್ಲಿ ಉಲ್ಲೇಖಿಸಿದ್ದಾಳೆ ಹುಡುಗಿ. ಈ ಮೂಲಕ ಆ ಊರಿನ ಹಿನ್ನೆಲೆಯನ್ನು ಓದುಗರು ಅರಿಯುವ ಒಂದು ಅವಕಾಶ. ಕೊಡವೂರು ನನಗೂ ನನ್ನ ಸಂಬಂಧಿಕರು ಅಲ್ಲಿ ಇರುವ ಕಾರಣ ಚಿರಪರಿಚಿತವೇ ಆದರೆ ಆ ಊರಿನಲ್ಲಿ ಅರುಣಾಬ್ಜ ಎಂಬ ಕವಿ ಇದ್ದರು ಅನ್ನುವುದು ಅಪರಿಚಿತ ಸಂಗತಿ.
ಹಾರುವ ಪ್ರಾಣಿಗಾಗಿ ಹುಡುಕಾಟ - ಹೀಗೊಂದು ಕಥೆ . ಈ ಕಥೆಯಲ್ಲಿ ಉಡುಪಿಯಲ್ಲಿರುವ ಎಲ್ಲಾ ದೇವಾಲಯಗಳ ಪರಿಚಯ ಹಾಗೂ ಇತಿಹಾಸ ಪ್ರಸಿದ್ಧ ಬಾರಕೂರಿನಲ್ಲಿ ರುವ ಬಸದಿಗಳ ಸ್ಥೂಲ ಪರಿಚಯ ಅಡಗಿದೆ. ಮೊದಲಿನಿಂದಲೂ ಅದೇಕೋ ಯಾವುದೇ ರೀತಿಯ ಸಂಬಂಧವಿಲ್ಲದಿದ್ದರೂ ಬಾರಕೂರು ಎಂದರೆ ಅದೇನೋ ಸೆಳೆತ.
7-8 ವರ್ಷ ಪ್ರಾಯದ ಪುಟ್ಟ ಹುಡುಗಿ ಕಥೆ ಬರೆದಿದ್ದಾಳೆ ಅನ್ನುವಾಗ ಏನೋ ಕುತೂಹಲ. ಆ ಕುತೂಹಲವೇ ನನ್ನನ್ನು ಮೊಬೈಲ್ ಮೈಥಿಲಿಯ ಕಥೆಗಳನ್ನು ಓದಿಸಿಕೊಂಡು ಹೋಯಿತು. ಓದಿ ಮುಗಿಸುವ ಹೊತ್ತಿಗೆ ಆ ಮಗುವಿನ ಟ್ಯಾಲೆಂಟ್, ಸಾಧನೆ, ಸಾಮರ್ಥ್ಯದ ಮೇಲೆ ಬಹಳ ಅಭಿಮಾನ, ಪ್ರೀತಿ ಮೂಡಲಾರಂಭಿಸಿತು. ಕಲೆ, ಸಾಹಿತ್ಯ ಬರಹ ಯಾರ ಸ್ವತ್ತೂ ಅಲ್ಲ. ಆದರೂ ಸಣ್ಣ ವಯಸ್ಸಿನಲ್ಲೇ ಈ ಮಗು ಮಾಡಿರುವ ಸಾಧನೆ ಶ್ಲಾಘನೀಯ ಹಾಗೂ ಅಭಿನಂದನಾರ್ಹ. ಈ ಕಥೆಗಳನ್ನು ಓದುವಾಗ ಸುರಭಿ ಮುಂದೆಯೂ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುವ ಎಲ್ಲ ಸಾಧ್ಯತೆಗಳು ಗೋಚರಿಸುತ್ತವೆ . ಮನದಾಳದ ಹಾರೈಕೆಯೂ ಕೂಡ ಇದುವೇ ಈ ಮಗು ಇನ್ನಷ್ಟು ಉನ್ನತ ಸಾಧನೆ ಮಾಡಲಿ ಅನ್ನುವುದು. ಓದುವ ಹವ್ಯಾಸವಿರುವ ಮಕ್ಕಳಿಗೆ ಓದಿಗೆ ಇದೊಂದು ಒಳ್ಳೆಯ ಸಾಹಿತ್ಯ, ಪುಸ್ತಕ .
- ನಯನ ಬಜಕೂಡ್ಲು
Sudha Adukal, Sudhir Rao and 35 others
2 Comments
Like
Comment
Share

Comments

View 1 more comment

ಕಥಾವಾಚನ - ಕಥೆ : ಭಾರತ ದೇಶದ ಹಕ್ಕಿ { ಧೀಮಹಿ ಮಟ್ಟು }

Tuesday, July 21, 2020

ಮುರಳೀಧರ ಉಪಾಧ್ಯ ಹಿರಿಯಡಕ - ’ ದೇವ ಸ್ಮರಣೆ’ { ಬಾಗಲೋದಿ ದೇವರಾಯರು " } " ಬಿದ್ದದ್ದು ಗರಿಯಲ್ಲ ಹಕ್ಕಿಯೇ " { ಕೆ. ರಾಮಚಂದ್ರ }

ಬಾಗಲೋಡಿ ದೇವರಾಯರು (೧೯೨೭-೧೯೮೫) ತನ್ನ ಯೌವನದಲ್ಲಿ ಬರೆದ ’ಹುಚ್ಚ ಮುನಸೀಫ ಮತ್ತು ಇತರ ಕತೆಗಳು’ (೧೯೪೯), ’ಆರಾಧನಾ (೧೯೫೬) ಎಂಬ ಕಥಾ ಸಂಕಲನಗಳಿಂದ ಕನ್ನಡ ಕಥಾಲೋಕದಲ್ಲಿ ಮಿಂಚಿ ಮರೆಯಾದ ಕತೆಗಾರ ಅವರ್ ಮೂರನೆಯ ಕಥಾ ಸಂಕಲನ ’ರುದ್ರಪ್ಪನ ರೌದ್ರ ಮತ್ತು ಇತರ ಕತೆಗಳು (೧೯೮೬) ಮರಣೋತ್ತರ ಕೃತಿಯಾಗಿ ೧೯೮೬ರಲ್ಲಿ ಪ್ರಕತವಾಯಿತು.೧೯೪೯ರಲ್ಲಿ ಐ.ಎಫ್. ಎಸ್. ಉತ್ತೀರ್ಣರಾಗಿ ವಿದೇಶಾಂಗ   ಸೇವೆ ಆರಂಭಿಸಿದ ಬಾಗಲೋಡಿಯವರು ಇತಾಲಿಯಾ, ನೈಜೀರಿಯಾ, ನೇಪಾಲಗಳಲ್ಲಿ ಅಧಿಕಾರಿಯಾಗಿದ್ದವರು. ಫಿಲಿ ಪ್ಪೀನ್ಸ್, ನ್ಯೂಝಿಲ್ಯಾಂಡ್, ಬಲ್ಗೇರಿಯಾಗಳಲ್ಲಿ ರಾಯಭಾರಿಯಾಗಿದ್ದರು.
ಬಾಗಲೋಡಿಯವರ ಸೋದರಳಿಯ ವಿ. ರಘುಚಂದ್ರ ಹೆಬ್ಬಾರ್, ಬಾಗಲಲೋಡಿಯವರ್ ಅಕ್ಕನ ಮಗ ಎಂ. ಅರವಿಂದ ಶರ್ಮ, ಸಹಪಾಠಿಗಳಾಗಿದ್ದ ಕು.ಶಿ. ಹರಿದಾಸ ಭಟ್, ಪಿ. ಸೇತುಮಾಧವ ರಾವ್, ಜಿ.ಟಿ ನಾರಾಯಣ ರಾವ್, ಕೆ. ರಾಘವೇಂದ್ರ ರಾವ್, ಎಂ. ಪಂಚಪ್ಪ, ವಿ. ಗುರುಮೂರ್ತಿ ಅವರ   ಲೇಖನಗಳು  ಬಾಗಲೋಡಿಯವರ ವ್ಯಕ್ತುತ್ವದ ಆತ್ಮೀಯ ಸಮೀಪಚಿತ್ರವನ್ನು ನೀಡುತ್ತವೆ.ಕು.ಶಿ., ಹಾ.ಮಾ.ನಾ., ಎಲ್.ಎಸ್. ಶೇಷಗಿರಿ ರಾವ್ ಮತ್ತು ಎಂ. ರಾಮ್ ಚಂದ್ರರು ಬಾಗಲೋಡಿಯವರ ಕುರಿತು ಬರೆದಿರುವ ನುಡಿನಮನಗಳು ಈ ಗ್ರಂಥದಲ್ಲಿವೆ. ಪ್ರೋ| ಶೇಷಗಿರಿರಾಯರು ಬರೆದಿರುವಂತೆ,’ ಅವರು ವಿಶಿಷ್ಟ ರೀತಿಯಲ್ಲಿ ವ್ಯಂಗ್ಯವನ್ನು ಬಳಸಿದ್ದನ್ನು ಕನ್ನಡ ಸಾಹಿತ್ಯದಲ್ಲಿ ಕಾಣಲಾರೆವು...ಬಾಗ ಲೋಡಿಯವರದು ಒಂದು ’ಪಾಸಿಟಿವ್’ ಕಲ್ಪನೆಯಿಂದ ಮೂಡಿಬಂದ ಐರನಿ. ಬಾಗಲೋಡಿಯವರ್ ವಾಜ಼್ಮಯ ಸಮೀಕ್ಷೆ ಎಂಬ ಭಾಗದಲ್ಲಿ ಕೆ. ಮಹಾಲಿಂಗ ಭಟ್, ಎಸ್. ದಿವಾಕರ್ ಹಾಗೂ ಎಂ. ರಾಮಚಂದ್ರರ ಲೇಖನಗಳಿವೆ. "ನಿಮ್ಮ ಕತೆಗಳು ಒಂದು ರೀತಿಯಲ್ಲಿ ಪ್ಯಾರಬಲ್ (ದೃಷ್ಟಾಂತ ಕತೆಗಳು) ಹಾಗಿವೆಯಲ್ಲ" ಎಂಬ ಎಸ್. ದಿವಾಕರ್ ಅವರು ಪ್ರಶ್ನೆಗೆ ಬಾಗಲೋಡಿಯವರ ಉತ್ತರ ಹೀಗಿತ್ತು-"ನನ್ನ ಎಲ್ಲ ಕತೆಗಳೂ ಒಂದೊಂದು ಉದ್ದೇಶಕ್ಕಾಗಿ ಬರೆಯಲ್ಲಟ್ಟಿವೆ. ವೈದ್ಯ, ವಿಜ್ಞಾನಿ, ಗುಮಾಸ್ತರಂತೆ ಸಾಹಿತಿಯೂ ಕೂಡ ಸಮಾಜಕ್ಕೆ ಪ್ರಯೋಜನ ಕಾರಿಯಾಗಬೇಕೆಂದು ನನ್ನ ನಂಬಿಕೆ..." ಫಿಲಿಪ್ಫೇನ್ಸ್ ಅಧ್ಯಕ್ಷರಾಗಿದ್ದ ಫರ್ಡಿನಾಂಡ್ ಮಾರ್ಕೋಸ್ ಅವರು ರಾಯಭಾರಿ  ಬಾಗಲೋಡಿಯವರಿಗೆ ಬರೆದ ಪ್ರಶಂಸಾಪತ್ರ ಈ ಭಾಗದಲ್ಲಿದೆ.’ ಬಾಗಲೋಡಿಯವರ ಚಿಂತನೆಗಳು ಎಂಬ ಈ ಗ್ರಂಥದ ಕೊನೆಯ ಭಾಗದಲ್ಲಿ ಎರಡು  ಲೇಖನಗಳಿವೆ. ’ಅಮೇರಿಕದಲ್ಲಿ ನೀಗ್ರೋ ಜನರ ದು:ಖ ಪರಂಪರೆ’ (ಪ್ರಬುದ್ಧ ಕರ್ನಾಟಕ-೧೯೪೮) ಜಾನ್ ಗುಂಥರ್ ನ ’ಇನ್ ಸೈಡ್ ಯು.ಎಸ್. ಎ’ ಗ್ರಂಥದ ಆಧಾರದಿಂದ ಬರೆದ ಲೇಖನ.’ಆಧುನಿಕ ಯುಗದಲ್ಲಿ ಸಂಸ್ಕೃತದ ಉಪಯುಕ್ತತೆ’ (೧೯೮೫) ಎಂಬುದು ಮಂಗಳೂರು  ವಿಶ್ವ ವಿದ್ಯಾನಿಲಯದಲ್ಲಿ ’ಬಾಗಲೋಡಿ ಯವರು ನೀಡಿದ ಉಪನ್ಯಾಸದ ಪೂರ್ಣ ಪಾಠ. ’ದೇವಸ್ಮರಣೆ’ ಬಾಗಲೋಡಿಯವರನ್ನು ಕುರಿತ ನೆನಪುಗಳು ಚಿರಂಜೀವಿ ಯಾಗಿ ಉಳಿಯುವಂತೆ ಮಾಡುವ ಸಾರ್ಥಕ ಗ್ರಂಥ.
’ ಸಾವನಪ್ಪಿ ಚೆಲ್ಲಿ ಹೋದ ಎಲುಬು ಗೂಡ  ರಾಸಿಗೆ, ಮಲಯ ಗಿರಿಯ ಕಳಸ ದಿಂದ ಅಮೃತಧಾರೆ ಸುರಿವೆವು’-ಇವು ಇಪ್ಪತ್ತಾರರ ಎಳೆ ವಯಸ್ಸಿನಲ್ಲಿ ಅನಾರೋಗ್ಯದಿಂದ ತೀರಿಕೊಂದ ಕವಿ  ಕುಂಜ಼್ ಹಿತ್ಲು ರಾಮಚಂದ್ರರ (೧೯೨೯-೧೯೫೫) ’ಸುಪ್ತಶ್ಕ್ತಿ ಕವನದ ಸಾಲುಗಳು. ೧೯೫೩ರಲ್ಲಿ ಪ್ರಕಟವಾದ ರಾಮಚಂದ್ರರ ’ಬಿದ್ದಗರಿ’ ಸಂಕಲನಕ್ಕೆ ಹಿನ್ನುಡಿ ಬರೆದಿದ್ದ ಎಂ.ಗೋಪಾಲ ಕೃಷ್ಣ ಅಡಿಗರು ಈ ಕವಿ ; ನೂತನ ಜಗತ್ತಿನ ವಿದ್ಯಮಾನಗಳನ್ನು ಅರಗಿಸಿಕೊಂಡು ನವಕಾಲೀನ ವಕ್ತಾರನಾಗಬಲ್ಲ    ಶಕ್ತಿಯನ್ನು ಬೆಳೆಸಿಕೊಳ್ಳತಕ್ಕವನು ಎಂದು ತೋರುತ್ತದೆ." ಎಂದು ಬರೆದಿದ್ದರು.೧೯೫೩ರಲ್ಲಿ ’ಬಿದ್ದಗರಿ’ಯನ್ನು ಪ್ರಕಟಿಸಿದ್ದ ಎಚ್. ಎಂ. ಮರುಳಸಿದ್ಧಯ್ಯ ಮತ್ತು ಎಂ.ಬಿ. ಮರಕಿಣೆಯವರು, ಐವತ್ತು ವರ್ಷಗಳ ಬಳಿಕ, ರಾಮಚಂದ್ರರನ್ನು ಕುರಿತ ತಮ್ಮ ನೆನಪುಗಳೊಂದಿಗೆ ’ಬಿದ್ದಗರಿ’ ಯನ್ನು ಸಂಪಾದಿಸಿದ್ದಾರೆ. ಟಿ.ಜಿ. ಮುಡೂರು, ಡಾ\ಎಚ್.ಎಂ. ಮರುಳಾಸಿದ್ಧಯ್ಯ,ಡಾ| ಎಂ.ಬಿ. ಮರಕಿಣೆ ಮತ್ತು ಸೂ.ವೆಂ. ಆರಗ ಲೇಖನಗಳಲ್ಲಿ ರಾಮಚಂದ್ರರ ವ್ಯಕ್ತಿತ್ವವನ್ನು ಕುರಿತ ನೆನಪುಗಳು ಹಸಿರಾಗಿವೆ. ಡಾ| ರಾಮಚಂದ್ರ ದೇವ ಅವರು ’ಬಿದ್ದಗರಿ’ಯಲ್ಲಿರುವ ’ಸುಪ್ತಶಕ್ತಿ’ ಕವನವನ್ನು ವಿಮರ್ಶಿಸುತ್ತ, "ಜನರ ಮಾತನ್ನು ಎಚ್ಚರದಿಂದ ಕೇಳಿಸಿಕೊಂಡ, ಸುತ್ತಲಿನ ಜೀವನದ ವಿವರ ಗಮನಿಸಿದ, ಸ್ವವಿಮರ್ಶೆ ಸಾಧ್ಯ ಇದ್ದ ಕವಿ ಬರೆದ ಕವನ್ ಇದು. ಹಾಗೆಯೇ ಮನುಷ್ಯರ ಭವಿಷ್ಯದ ಬಗ್ಗೆ ಆಶಾ ಭಾವನೆ ಇರುವ ಕವನವೂ ಹೌದು" ಎಂದಿದ್ದಾರೆ.
’ಬಿದ್ದಗರಿ’ಯಲ್ಲಿ ಐವತ್ತು ವರ್ಷಗಳ ಹಿಂದಿನ ಹಕ್ಕಿಯ ಹಾಡು ಮಾಸದೆ ಉಳಿದಿದೆ.
ಮುರಳೀಧರ ಉಪಾಧ್ಯ, ಹಿರಿಯಡಕ
ದೇವಸ್ಮರಣೆ
(ಬಾಗಲೋಡಿ ದೇವರಾಯರ ಸ್ಮರಣಸಂಪುಟ)
ಸಂ:ಜಿ.ಟಿ ನಾರಾಯಣ ರಾವ್
ಪ್ರ: ಅತ್ರಿ ಬುಕ್ ಸೆಂಟರ್,
೪ ಶರಾವತಿ ಕಟ್ಟಾಡ, ಬಲ್ಮಠ,
ಮಂಗಳೂರು-೫೭೫೦೦೧.
ಮೊದಲ ಮುದ್ರಣ:೨೦೦೩
ಬೆಲೆ:ರೂ.೬೦.

ಬಿದ್ದದ್ದು ಗರಿಯಲ್ಲ ಹಕ್ಕಿಯೇ
(ಕುಂಜ಼್ ಹಿತ್ಲುರಾಮಚಂದ್ರರ ಬದುಕು-ಬರೆಹ)
ಸಂ:ಡಾ\ಎಚ್.ಎಂ. ಮರುಳಸಿದ್ಧಯ್ಯ,
ಡಾ|ಎಂ.ಬಿ. ಮರಕಿಣೆ
ಪ್ರ:ಕರ್ನಾಟಕ ಸಂಘ
ಪುತ್ತೂರು-೫೭೪೨೦೨(ದ.ಕ)
ಮೊದಲ ಮುದ್ರಣ:೨೦೦೩
ಬೆಲೆ:ರೂ.೪೮.

Sunday, July 19, 2020

ಶಿವರಾಮ ಕಾರಂತರ "--- ಸಿರಿಗನ್ನಡ ಅರ್ಥಕೋಶ }{1940 }



ಸಿರಿಗನ್ನಡ ಅರ್ಥಕೋಶ 

ಸಂಪಾದಕರು -ಶಿವರಾಮ ಕಾರಂತ

ಸಹಾಯಕ ಮಂಡಳಿ-

ಶ್ರೀ ಬಿ. ಶಂಕರನಾರಾಯಣ ರಾವ್ ,ಕೈ//ಶ್ರೀ. ಐ. ಶಿವರಾಮಯ್ಯನವರು ,

ಶ್ರೀ ಟಿ. ನಾರಾಯಣ ಭಟ್ತರು  , ಶ್ರೀ ಹು. ಬೆಂಗೇರಿಯವರು , ಇತರ ಗೆಳೆಯರು

ಮೊದಲ ಮುದ್ರಣ -1944

ಪ್ರಕಾಶಕರು -ಹರ್ಷ ಪ್ರಕಟಣಾಲಯ , ಪುತ್ತೂರು, ದ. ಕ

ಶಿವರಾಮ ಕಾರಂತರ ಮುನ್ನುಡಿಯ ಆಯ್ದ ಭಾಗ -

’ಈ ಪ್ರಯೋಗದ ಕತೆಯನ್ನು ಚಿಕ್ಕದಾಗಿ ಇಲ್ಲಿ ಹೇಳುವುದು ಅಪ್ರಾಸಂಗಿಕವಲ್ಲ . ನನ್ನ ಗೆಳೆಯರಾದ ಶ್ರೀ ಬಡೆಕ್ಕಿಲ ಶಂಕರನಾರಾಯಣ ರಾಯರು ಕನ್ನಡ ಸಾಹಿತ್ಯ ಪ್ರಿಯರು . ಅವರು ಮೊದಲಿಗೆ ದುಡಿದು ದುಡಿದು ಕುಮಾರವ್ಯಾಸನ ಶಬ್ದ ಸಂಪತ್ತಿಯನ್ನು ಆರಿಸಿ ಬರೆದಿರಿಸಿದ್ದರು , ಅವುಗಳ ಪ್ರಯೋಗಗಳನ್ನು ಸಂಗ್ರಹಿಸಿದ್ದರು. ಅದು ನನ್ನನ್ನು ಆಕರ್ಷಿಸಿತು. ಅದನ್ನೇ ಪಾಯವಾಗಿರಿಸಿಕೊಂದು  ಶಬ್ದಕೋಶ ರಚಿಸಬಾರದೇಕೆ ಎಂದು ಅನಿಸಿತು . ನನ್ನಗುರುಗಳಾದ ಶ್ರೀ ಐ. ಶಿವರಾಮಯ್ಯನವರು  ಈ ಬರಹವನ್ನು ತಿದ್ದಿ ತಮ್ಮ ಶಬ್ದ ಸಂಪತ್ತಿನಿಂದ ಪುಷ್ಟಿಗೊಳಿಸಿದರು . ಈ ಕಾಲದಲ್ಲಿ  ಅನೇಕ ಷಟ್ಪದಿ ಕಾವ್ಯಗಳ ಮತ್ತು ಪ್ರಸಿದ್ದಗೊಂಡ ಇತರ ಗ್ರಂಥಗಳ ಶಬ್ದ ಭಂಡಾರವನ್ನೂ ಅದಕ್ಕೆ ಸೇರಿಸಿಕೊಡೆನು . ಮುಂದೆ ಈ ಕೆಲಸಕ್ಕೆ ನನ್ನ ಮಿತ್ರರಾದ ಶ್ರೀ ಶಂ. ಬಾ. ಜೋಶಿಯವರು ನೆರವಾದರು.ಶ್ರೀ ವಿ. ಸೀ ಅವರೂ ಅನೇಕ ಅಮೂಲ್ಯ ಸೂಚನೆಗಳನ್ನಿತ್ತರು . ಅವರು ತಂತಮ್ಮ ಪ್ರಾಂತದ ಶಬ್ದ ಸಂಗ್ರಹ ಕೊಟ್ಟುದಲ್ಲದೆ ಕರಡು ಪ್ರತಿಯನ್ನು ತಿದ್ದಲು ನೆರವಾದರು , ಶ್ರೀ  ಹುಚ್ಚ ರಾವ್ ಬೆಂಗೇರಿ ಅವರು ಧಾರವಾಡ ಪ್ರಾಂತದ ಮಾತುಗಳನ್ನೂ , ಅರ್ಥಗಳನ್ನೂ ಒದಗಿಸಿ ಕೊಟ್ತರು .ಇತ್ತ ಶ್ರೀ . ಟಿ. ನಾರಾಯಣ ಭಟ್ಟರು ತಮ್ಮ ಭಾಷಾ , ಸಾಹಿತ್ಯ ಪಾಂಡಿತ್ಯದ ನೆರವನ್ನು ನನಗೆ ಒದಗಿಸಿ ಕೊಟ್ಟರು , ಇಷ್ಟೊಂದು ಗೆಳೆಯರು ಕೊಟ್ಟ ಪ್ರತ್ಯಕ್ಷ , ಪರೋಕ್ಷ ಬೆಂಬಲಗಳು ಇಲ್ಲದಿರುತ್ತಿದ್ದರೆ ಈ ಅರ್ಥ ಕೋಶ ಈ ರೂಪಕ್ಕೆ ಬರುತ್ತಿರಲಿಲ್ಲ . ಅವರೆಲ್ಲರಿಗೆ ನಾನು ನನ್ನ ಮಾತಿನ ಋಣ ಸಂದಾಯ ಮಾಡಿದರೆ ಸಾಕೇ ?"

-ಶಿವರಾಮ ಕಾರಂತ

ಮಂಗಳೂರು 

26-12=1940

Manasi Sudhir ಗುರುರಾಜ ಮಾರ್ಪಳ್ಳಿಯವರ "ಹರಿಯುವ ನೀರೆ"

ಮುರಳೀಧರ ಉಪಾಧ್ಯ ಹಿರಿಯಡಕ -- - ಅಪರೂಪದ ಹಕ್ಕಿ { ಅಸ್ಸಾಮಿ ಕವಿತೆಗಳು 1998 }

’ ಕಾಮರೂಪವೆಂದು ಕರೆಯಲ್ಪಟ್ಟ ಇವಳು ಬೆಟ್ಟದ ಕುವರಿ’ ಪ್ರಾಚೀನ ದಾಖಲೆಗಳು ತೌಳವ ಅಸ್ಸಾಮನ್ನು ಹೀಗೆ ವರ್ಣೆಸಿವೆ. ಹದಿಮೂರನೆಯ ಶತಮಾನದ ವಲಸೆ ಬಂದ ಶಾನ್ ವಂಶದ ಅಹೋಮರಿಂದಾಗಿ (ಅಸಾಮಾನ್ಯರು) ಈ ನಾಡಿಗೆ ’ಅಸಾಮ’ ಎಂಬ ಹೆಸರು ರೂಡಿಯಾಯಿತು. ಬಂಗಾಲಿ, ಒರಿಯಾಗಳಂತೆ ಅಸಾಮಿ ಕೂಡ ಮಾಗಧಿ ಅಪಭ್ರಂಶದಿಂಸ ಮೈತಳೆದ ಭಾಷೆ. ವಾಲ್ಮೀಕಿ ರಾಮಾಯಣವನ್ನು ಭಾಷಾಂತರಿಸಿದ ಮಾಧವ ಕಂಡಲಿ (೧೪ನೆಯ ಶತಮಾನ), ಭಾಗವತವನ್ನು ಅನುವಾದಿಸಿದ ಶಂಕರದೇವ (೧೫ನೆಯ ಶತಮಾನ), ಮಹಾಭಾರತವನ್ನು ಭಾಷಾಂತರಿಸಿದ ರಾಮಸರಸ್ವತಿ ಪ್ರಾಚೀನ ಅಸಾಮೀ ಸಾಹಿತ್ಯದ ಪ್ರಮುಖ ಕವಿಗಳು. ’ಹೊಳೆಯುವುದೆಲ್ಲ   ಚಿನ್ನವಲ್ಲ’ ಎಂಬ ಕಾದಂಬರಿಯನ್ನು ಬರೆದ ಹೇಮಚಂದ್ರ ಬರುವಾ(೧೮೩೫-೯೬)’ಆಧುನಿಕ ಅಸ್ಸಾಮಿ ಸಾಹಿತ್ಯದ ಜನಕ’ ಎಂದು ಪ್ರಸಿದ್ಧರಾಗಿ ದ್ದಾರೆ. ಕಮಲಾಕಾಂತ ಭಟ್ಟಾಚಾರ್ಯ, ಲಕ್ಷ್ಮೀನಾಥ್ ಬೆಜಬರುವಾ ಮತ್ತಿತರ ಹಿರಿಯ ಕವಿಗಳು ಆಧಿನಿಕ ಅಸ್ಸಾಮಿ ಕಾವ್ಯವನ್ನು ಬೇಳೆಸಿದ್ದಾರೆ.
ಕೃಷ್ಣ ಪಾಟೀಲರ ’ಅಪರೂಪದ ಹಕ್ಕಿ’ ಸಂಕಲನದಲ್ಲಿ ಇಪ್ಪತ್ತೆಂಟು ಕವಿಗಳ ನಲುವತ್ತಮೂರು ಕವನಗಳಿವೆ. ಪ್ರದೀಪ ಆಚಾರ್ಯರು ಇಂಗ್ಲಿಷಿಗೆ ಅನುವಾದಿಸಿರುವ ಅಸ್ಸಾಮಿ ಕವನಗಳನ್ನು, ಪಾತೀಲರು ಇಂಗ್ಲಿಷಿನ ಮೂಲಕ ಕನ್ನಡಕ್ಕೆ ತಂದಿದ್ದಾರೆ. ೧೯೭೫-೯೫ರ ವರೆಗಿನ, ಅಸ್ಸಾಮಿ ಕಾವ್ಯದ ಎರಡು ದಶಕದ ಸಾಧನೆಯನ್ನು ಪ್ರತಿನಿಧಿಸುವ ಕವನಗಳು ಈ ಸಂಕಲದಲ್ಲಿವೆ. ಈ ಸಂಕಲದಲ್ಲಿರುವ ನವಕಾಂತ ಬರುವಾ, ಬಿರೇಶ್ವರ್ ಬರುವಾ,  ಹಿರೇನ್  ಭಟ್ಟಾಚಾರ್ಯ, ಕೇಶವ ಮಹಂತಾ, ನಿರ್ಮಲಪ್ರಭಾ ಬಾಡೋಲೊಯಿ, ನೀಲಮಣೆ ಫುಕಾನ್ ಅಸ್ಸಾಮಿ ಕಾವ್ಯದ ಹಿರಿಯ ತಲೆಮಾರಿನ ಕವಿಗಳು. ದಿನೇಶ್ ಗೋಸ್ವಾಮಿ, ಅನಿಸ್ ಉಜ್ ಝಮಾನ್, ಸೈಯದ್ ಅಬ್ಬುಲ್ ಹಾಲಿಂ, ಕಬಿನ್ ಫುಕಾನ್, ಹರೇಕೃಷ್ಣ ಡೇಕಾ, ಶಿಬಪ್ರಸಾದ ಬರುವಾ, ಸಮೀರ ತಂತಿ, ಅಬೋನಿ ಚಕ್ರವರ್ತಿ, ಸನಂತಾ ತಂತಿ, ಅನುಭವ ತುಲಸಿ, ಅರ್ಚನಾ ಪೂಜಾರಿ, ಚನ್ನಿರಾಮ್ ಗೋಗೋಯಿ,  ಪ್ರಯಾಣ್ ಸೈಕಿಯಾ ಇವರೆಲ್ಲ ವರ್ಧಮಾನದ ಹಾದಿಯಲ್ಲಿರುವ ಮುಖ್ಯ ಕವಿಗಳು.
ಎಂಬತ್ತರ ದಶಕದ ಅಸ್ಸಾಮಿನ ಉಗ್ರಗಾಮಿ ಚಳವಳಿ ಹಾಗೂ ಅದರ ಪರಿಣಾಮವಾದ ಹಿಂಸೆ ಈ ಸಂಕಲನದ ಹೆಚ್ಚಿನ ಕವನಗಳ ಹಿನ್ನೆಲೆಯಲ್ಲಿದೆ. ಹೊಂಚಿ ಕುಳಿತಿರುವ ಸೈನಿಕರು ತಮ್ಮನ್ನು ಆಸೆಗಣ್ಣುಗಳಿಂದ ನೋಡುತ್ತಿದ್ದಾರೆ ಎಂಬುದನ್ನರಿಯದೆ   ಮೀಯಲೆಂದು  ಹೊಳೆಗಿಳಿದಿರುವ ಗಿರಿಬಾಲೆಯರ  ಚಿತ್ರಣ  ಹರೇ ಕೃಷ್ಣ ಡೇಕಾ ಅವರ  ’ಅರುಣೋದಯ’ ಕವನದಲ್ಲಿದೆ.

ಕಬಿನ್ ಫುಕಾನ್ ರ ’ಮೋಸ ಹೋದವರು’ ಕವನದ ಕೊನೆಯ ಸಾಲುಗಳು ಹೀಗಿವೆ; "ಗದಾ ಪ್ರಹಾರ ಭಲ್ಲೆಗಳಿರಿತದಿಂದಾಗಿ ನೆಲೆ ತಪ್ಪಿ ಕ್ಷೀಣಿಸಿದೆ ಯದುಕುಲ ವಾರಸುದಾರರಿಲ್ಲದೆ" "ಚೀರಾಟ ಮತ್ತು ರೋದನ ಜೀವಮಾನದುದ್ದಕ್ಕೂ ಕೇಳಿರುವೆ ನಾನು"
ಎನ್ನುತ್ತಾರೆ ’ದುರುಳ  ಕಣ್ಣೇರು’ ಕವನದ ಕವಿ ಆತನು ಭಟ್ಟಾಚಾರ್ಯ. ಅಜಿತ್ ಗೋಗೋಯಿ ಅವರ ’ ವ್ಯರ್ಥ ಕಾಲ’ ಕವನದ ಮೊದಲ ಸಾಲುಗಳಿವು’ "ಕಾಂಚನ ಪುಷ್ಪದ ಬಿಳಿಪಕಳೆಗಳ ಮೇಲೆ ಅತ್ಯಾಚಾರವೆಸಗಿದೆ ಹೆಜ್ಜೇನು ಹಾಡೇ ಹಗಲು."

’ಅಕ್ಷರ ಕವಿ ಸಂಧಾನ’ ಮಾಲೆಯಲ್ಲಿ ಪ್ರಕಟವಾಗಿರುವ ಈ ಸಂಕಲನದ ಹಿಂಸೆಯ ಅರ್ಥ-ಅನರ್ಥಗಳನ್ನು ಕುರಿತು ಧ್ಯಾನಿಸುತ್ತಿರುವ ಇತ್ತೀಚಿಗಿನ ಅಸ್ಸಾಮಿ ಕಾವ್ಯವನ್ನು ಚೆನ್ನಾಗಿ ಪರಿಚಯಿಸುತ್ತದೆ. ಕಾವ್ಯಾನು ಸಂಧಾನದ ಜತೆಯಲ್ಲಿ ಭಾರತದ ಭಾವೈಕ್ಯತೆಯನ್ನು ಬೆಸೆಯುವ ಸಾರ್ಥಕ ಪ್ರಯ ಇಲ್ಲಿದೆ. ಅಸ್ಸಾಮಿನ ’ಅಪರೂಪದ ಹಕ್ಕಿಯನ್ನು ಕರ್ನಾಟಕಕ್ಕೆ ಕರೆ ತಂದಿರುವ ಪಾಟೀಲರು ಅಭಿನಂದನಾರ್ಹರು.
ಮುರಳೀಧರ ಉಪಾಧ್ಯ, ಹಿರಿಯಡಕ
ಅಪರೂಪದ ಹಕ್ಕಿ
(ಅಸ್ಸಾಮಿ ಕವಿತೆಗಳು)
ಕನ್ನಡಕ್ಕೆ:ಕೃಷ್ಣ ಪಾಟೀಲ
ಪ್ರ:ಅಕ್ಷರ   ಪ್ರಕಾಶನ,  ಹೆಗ್ಗೋಡು-೫೭೭೪೧೭,
ಸಾಗರ್ ತಾಲೂಕು
ಮೊದಲ ಮುದ್ರಣ:೧೯೯೮
ಬೆಲೆ ರೂ.೬೦/(ಪುಟಗಳು:೯೬)

Saturday, July 18, 2020

Dr. U. P. Upadhyaya - Tulu Lexicon -ತುಳು ನಿಘಂಟು

ಅಕ್ಷರ ನಮನ: ವಿನಯಶೀಲ ವಿದ್ವಾಂಸ ಡಾ| ಯು. ಪಿ. ಉಪಾಧ್ಯಾಯರು -

ಮುರಳೀಧರ ಉಪಾಧ್ಯ -ಡಾ/ ಸ್ರೀಧರ ಎಚ್. ಜಿ. ಅವರ " ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ದ ಕಲೆ "

ಡಾ|ಶ್ರೀಧರ ಎಚ್. ಜಿ. ಅವರು ಡಾ| ಟಿ.ವಿ ವೆಂಕಟಾಚಲ  ಶಾಸ್ತ್ರಿಗಳ ಮಾರ್ಗದರ್ಶನದಲ್ಲಿ ಬರೆದ ಸಂಪ್ರಬಂಧ-’ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಯುದ್ಧ ಕಲೆ’ (ಕ್ರಿ.ಶ ೪೫೦-೧೩೫೦) ಪ್ರಾಚೀನ ಭಾರತದ ಯುದ್ಧಕಲೆಯ ಕುರಿತು "The art of war in ancient India' (ಜಿ.ಬಿದಾಸೆ), "War in Ancient India' (ವಿ.ಆರ್. ರಾಮಚಂದ್ರ ದೀಕ್ಷಿತರ್), "Ancient Indian Warfare'(ಸರ್ವದಮನ ಸಿಂಗ್),"The Military system in Ancient India(ಬಿ.ಕೆ. ಮಜುಂದಾರ್) ಮತ್ತಿತರ ಪುಸ್ತಕಗಳು ಪ್ರಕಟವಾಗಿವೆ. ಡಾ| ಎಂ. ಚಿದಾನಂದ ಮೂರ್ತಿ ಅವ್ರ ’ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’ (೧೯೬೬) ಗ್ರಂಥದ ’ಯುದ್ಧಕಲೆ’ ಎಂಬ ಅಧ್ಯಾಯ ಎಚ್. ಜಿ. ಶ್ರೀಧರ ಅವರ ಅಧ್ಯಯನಕ್ಕೆ ಪ್ರೇರಣೆ ನೀಡಿದೆ.ಈ ಸಂಪ್ರಬಂಧದ ’ಪ್ರಾಚೀನ ಭಾರತದಲ್ಲಿ ಯುದ್ಧಕಲೆ’ ಎಂಬ ಅಧ್ಯಾಯದಲ್ಲಿ ಪ್ರಾಚೀನ ರಾಜನೀತಿ ಶಾಸ್ತ್ರ್ರದ ಆರು ಗುಣಗಳು, ನಾಲ್ಕು ಉಪಾಯಗಳು , ಗೂಢಚರ್ಯೆ, ಕೋಟೆ ಕೊತ್ತಲಗಳು ಮತ್ತು ರಕ್ಷಣಾ ಕವಚಗಳನ್ನು ಪರಿಚಯಿಸಲಾಗಿದೆ. ಮುಂದಿನ ಅಧ್ಯಾಯ ಪ್ರಾಚೀನ ಕರ್ನಾಟಕದ ಅರಸು ಮನೆತನಗಳು ಮತ್ತು ಸಾಹಿತ್ಯದಲ್ಲಿ ಚಾರಿತ್ರಿಕ ಅಂಶಗಳು, ಯುದ್ಧದ ನೆಲೆಗಳು ಕೋಟೆಯ ರಚನೆ, ಕೋಟೆಕಾಳಗ ಹಾಗೂ ಪ್ರಾಚೀನ ಕರ್ನಾಟಕದ ಕೆಲವು ಪ್ರಮುಖ ಯುದ್ಧಗಳನ್ನು ಸಮೃದ್ಧ ಮಾಹಿತಿಯೊಂದಿಗೆ ನಿರೂಪಿಸುತ್ತದೆ. ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ನಿರೂಪಿತವಾಗಿರುವ ಮಂತ್ರ, ಸಮ್ಧಿ ವಿಗ್ರಹಿ, ಯಾನ, ನಾಯಕಾಭ್ಯುದಯ, ಯುದ್ಧ ಶಿಕ್ಷಣ, ಚಿಕಿತ್ಸೆ ಇವುಗಳ ಚರ್ಚೆ ನಾಲ್ಕನೆಯ ಅಧ್ಯಾಯದಲ್ಲಿದೆ.
"ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ನಿರೂಪಿತವಾಘಿರುವ ಯುದ್ಧ ಚಿತ್ರಗಳು’ ಹಾಗೂ ಕನ್ನಡ ನಾಡಿನ ಸಾಮಾಜಿಕ ಸಾಂಸ್ಕೃತಿಕ ಜೀವನದಲ್ಲಿ ಸೈನಿಕರ ಸ್ಥಾನಮಾನಗಳು-ಈ ಸಂಪ್ರಬಂಧದ ಮಹತ್ವದ ಅಧ್ಯಾಯಗಳು.’ಪಡೆವಳರು’ ’ಅರವಳಿ ಘೋಷಣೆ’ ಯುಧ್ಧವಾದ್ಯಗಳು, ’ವೀರ ಪಾಣ’ ’ತುಮುಲಯುದ್ಧ; ಗರುಡ’, ವೇಳೆವಡಿಚ’, ’ಚೋಳವಾಳಿ’, ’ದಂಡುಳಿಗ’, ’ಬಾಳ್ಗಚ್ಚು’ -ಇಂಥ ಹಲವಾರು ಪಾರಿಭಾಷಿಕ ಪದಗಳ ಅರ್ಥವನ್ನು ಡಾ| ಶ್ರೀಧರ್ ತಲಸ್ಪರ್ಶೀಯಾಗಿ ವಿವರಿಸಿದ್ದಾರೆ.
’ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ವರ್ಣೆತವಾಘಿರುವ ಯುದ್ಧೋಪಯೋಗಿ ಆಯುಧಗಳು’ ಎಂಬ ಅಧ್ಯಾಯದಲ್ಲಿ ದೊಣೆ, ಸಿಂಜಿನಿ, ಕೊಂತ, ಕಕ್ಕಡೆ ತೋಮರ, ಪರಿಘ, ಮುಸಲ ಮತ್ತಿತರ ಆಯುಧಗಳ, ವಸ್ತ್ರ ವಿಭೂಷಣಗಳ ವಿವರಣೆ ಇದೆ. ’ಕರ್ನಾಟಕ ಸಂಸ್ಕೃತಿಯ ಪುನಾರಚನೆಗೆ ಪ್ರಾಚೀನ ಕನ್ನಡ ಸಾಹಿತ್ಯದ ಯುದ್ಧ ಚಿತ್ರಗಳ ಕೊಡುಗೆ ಎಂಬುದು ಈ ಸಂಪ್ರಬಂಧದ ಕೊನೆಯ ಅಧ್ಯಾಯ. ಕನ್ನಡದಲ್ಲಿ ಜಾನಪದ ಹಾಗೂ ಹೊಸಗನ್ನಡ ಲೇಖಕರನ್ನು ಕುರಿತ ಸಂಪ್ರಬಂಧಗಳು ಹೆಚ್ಚಾಗಿ ಕಾಣಿಸುತ್ತಿವೆ. ಹೊಸ ತಲೆಮಾರಿನವರಲ್ಲಿ ಹಳೆಗನ್ನಡ ಸಾಹಿತ್ಯವನ್ನು ಕುರಿತ ಸಂಶೋಧನೆ ಕ್ಷೀಣೆ ಸುತ್ತಿದೆ. ಇಂಥ ಸಂದರ್ಭದಲ್ಲಿ ಡಾ|ಶ್ರೀಧರ ಅವರ ವಿಷಯದ ಆಯ್ಕೆ, ವಿಶ್ಲೇಷಣೆ ಹಾಗೂ  ಸಂಯೋಜನೆ ಅಭಿನಂದನಾರ್ಹವಾಗಿವೆ.

Friday, July 17, 2020

ತುಳು ವಿದ್ವಾಂಸ, ಭಾಷಾ ಸಂಶೋಧಕ ಯು. ಪಿ ಉಪಾಧ್ಯಾಯ ಇನ್ನಿಲ್ಲ 17--7-2020

ಮುರಳೀಧರ ಉಪಾಧ್ಯ ಹಿರಿಯಡಕ - ಗೌರೀಶ ಕಾಯ್ಕಿಣಿ ಅವರ ಚಿಂತನಶೀಲ ಗದ್ಯ

ಗೌರೀಶ ಕಾಯ್ಕಣಿ (ಜನನ-೧೯೧೨) ಅವರ ಕೃತಿಗಳ ಹರಹು ಹಾಗೂ ವೈವಿಧ್ಯಗಳನ್ನು ಕಂಡು ವಿಸ್ಮಯವಾಗುತ್ತದೆ. ವಿಷ್ಣು ನಾಯ್ಕರು ಸಂಪಾದಿಸುತ್ತಿರುವ ಗೌರೀಶ ಕಾಯ್ಕಿಣೆಯವರ ಸಮಗ್ರ ಕೃತಿಗಳ ಏಳು ಸಂಪುಟಗಳು ಈಗಾಗಲೇ ಪ್ರಕಟವಾಘಿವೆ. ಕಾಯ್ಕಿಣೆಯವರ ’ವಿಚಾರವಾದ’, ’ನಾಸ್ತಿಕನು ಮತ್ತು ದೇವರ್’, ’ಪಶ್ಚಿಮದ ಪ್ರತಿಭೆ’, ಕಾವ್ಯ ಸಾಹಿತ್ಯ ವಿಮರ್ಶೆ, ನಾಟಕಗಳು, ರೂಪಕಗಳು-ಈ ಸಂಪೂಟದಲ್ಲಿ ಸೇರಿವೆ.
ಇದೀಗ ಪ್ರಕಟವಾಗಿರುವ ಗೌರೀಶ ಕಾಯ್ಕಿಣೆ ಸಮಗ್ರ ಸಾಹಿತ್ಯದ ಎಂಟನೆಯ ಸಂಪುಟದಲ್ಲಿ ಕಾಯ್ಕಿಣೇಯವರ ಸಮಗ್ರ ಸಾಹಿತ್ಯದ ಎಪ್ಪತ್ತೈದು ಪತ್ರಿಕಾ ಲೇಖನಗಳಿವೆ. ದಿನಕರ ದೇಸಾಯಿಯವರ ’ಜನಸೇವಕ’ ಸಾಪ್ತಾಹಿಕದಲ್ಲಿ  ಗೌರೀಶ ಕಾಯ್ಕಿಣೆಯವರ ಒಂದು ಸಾವಿರಕ್ಕಿಂತ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಕರ್ನಾಟಕದ ಇತರ ಪತ್ರಿಕೆಗಳಿಗಾಗಿ ಅವರು ಸಾವಿರಾರು  ಲೇಖನಗಳನ್ನು ಬರೆದಿದ್ದಾರೆ. "ಹೀಗಾಗಿ ಅವರ ಪತ್ರಿಕಾ ಲೇಖನಗಳ ಸಮಗ್ರ ಸಂಪುಟಗಳ ವಿಚಾರವನ್ನು ಬಿಟ್ಟುಕೊಟ್ಟು ಮಾದರಿಗಾಗಿ ಆಯ್ದುಕೊಂಡ ಲೇಖಾನಗಳನ್ನು ಎರಡು ಸಂಪುಟಗಳಲ್ಲಿ (೮ ಮತ್ತು ೯ನೆಯ ಸಂಪುಟಗಳಲ್ಲಿ)ಆಳವಡಿಸಿ ಓದು ಗರಿಗೆ ಒದಗಿಸುವ ಮಟ್ಟಿಗೆ ನನಗೆ ನಾನೇ ಒಂದು ಮಿತಿಯನ್ನು ಹಾಕಿಕೊಂಡಿದ್ದೇನೆ" ಎಂದು ಸಂಪಾದಕರು ತಿಳಿಸಿದ್ದಾರೆ.
ಸ್ವಾತಂತ್ರ್ಯೋತ್ತರ ಭಾರತದಅ ರಾಜಕೀಯದ ಅನೇಕ ಸಂಗತಿಗಳನ್ನು ಕಾಯ್ಕಿಣೇಯವರು ತನ್ನ ಲೇಖನಗಳಲ್ಲಿ ಚರ್ಚಿಸಿದ್ದಾರೆ. ’ಗಾಂಧೀ ಸ್ಮರಣೆ ಪ್ರಾಮಾಣಿಕವೇ?’, ’ ಪಕ್ಷ ರಾಜಕಾರಣದ ವ್ಯಾಕರಣ’, ’ಪಕ್ಷಾಂತರದ ಪಕ್ಷವಾತಕ್ಕೆ ಯಾವ ಮದ್ದು?’, ’ಸಮಾಜವಾದಿಗಳ ಧೋರಣೆಯಲ್ಲಿ ನಿಖರತೆ ಏಕೆ ಇಲ್ಲ?’, ’ಹಿಂದೂ ವಿಶ್ವ ಮತ್ತು ವಿಶ್ವಹಿಂದೂ ಪರಿಷತ್ತು’,- ಇಂಥ ಹಲವು ಲೇಖನಗಳು ಈ  ಸಂಪುಟದಲ್ಲಿವೆ. ಇತಿಹಾಸದ ವೈಭವೀಕರಣದಲ್ಲಿ ಕಾಯ್ಕಿಣೆಯವರಿಗೆ ಆಸಕ್ತಿ ಇಲ್ಲ. ಜವಹರಲಾಲ ನೆಹರೂ ಅವರ ಈಶ್ವರ ನಿರಾಸಕ್ತಿ ಲೌಕಿಕವಾದಲ್ಲಿ ಅವರಿಗೆ ನಂಬಿಕೆ ಓದು ಇದೆ. ೧೯೯೬ ರಲ್ಲಿ ಪ್ರಕಟವಾದ ’ಶ್ರೀರಾಮ ಜನ್ಮಭೂಮಿ ಹೆಸರಿನಲ್ಲಿ ಮುಂದೆ ವಾದ ಭೂಮಿಗಳನ್ನು ಪರಿಶೀಲಿಸಿ,ವಾಗಿಯೂ ನಮ್ಮ ಭಾವನಾ ಶ್ರದ್ಧಾಭಕ್ತಿಗಳ  ಸಂತೋಷಕ್ಕೆ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಎಲ್ಲಿಯೂ ಪ್ರಶಸ್ತ ಸ್ಥಳಾದಲ್ಲಿ ಶ್ರೀರಾಮನ  ಭವ್ಯ ಮಂದಿರವನ್ನು ಕಟ್ಟಬಹುದು" ಎಂದಿದ್ದಾರೆ. "ದಲಿತ ವರ್ಗದ ವಿಮೋಚಬೆ’, ’ಅಸ್ಪಶ್ಯತೆ ಮತ್ತು ಆದರ  ನಿವಾರಣೆ’, ’ಜಾತೀಯ ಸತ್ಯ ಮಾನವೀಯ ನ್ಯಾಯ’, ’ಮತಾಂತರ ಮತ್ತು ಹಿಂದುತ್ವ’- ಈ ಲೇಖನಗಳಲ್ಲಿ ಕಾಯ್ಕಣೆಯವರ ಪುರೋಗಾಮಿ ಸಾಮಾಜಿಕ ನಿಲುವುಗಳನ್ನು ಕಾಣುತ್ತೇವೆ.೧೯೭೭ರಲ್ಲಿ ಬರೆದ ’ಹಿಂದುಳಿದ ಸಮಾಜದಲ್ಲಿ ಬುದ್ಧಿಜೀವೆಗಳ ಪಾತ್ರ’ ಎಂಬ ಲೇಖನದಲ್ಲಿ ಕಾಯ್ಕಿಣೆಯವರು ಕೊಂಕಣೆ ಮೀನುಗಾರ ಸಮಾಜದ (ಖಾರ್ವಿ) ಸಮಸ್ಯೆಗಳನ್ನು ಚರ್ಚಿಸಿದ್ದಾರೆ.

ಕನ್ನಡ, ಸಂಸ್ಕೃತ, ಇಂಗ್ಲಿಷ್ ಮರಾಠಿ, ಕೊಂಕಣೆಗಳನ್ನು ಬಲ್ಲ ಕಾಯ್ಕಣೆಯವರು ಹಿರಿಯ ಬಹುಭಾಷಾ ವಿದ್ವಾಂಸರಲ್ಲೊಬ್ಬರು. ಮರಾಠಿಗೆ ಸೇರಿದ ಕನ್ನಡದ ಶಬ್ಧಗಳು’, ’ಕೊಂಕಣೆಯ ಮೇಲೆ ಕನ್ನಡದ ಪ್ರಭಾವ’, ’ಕೊಂಕಣೆ ಕೆಲವು ಪ್ರಮೇಯಗಳು’, ಸಂಸ್ಕೃತದ ಸಂಕಟ-ಇಂಥ ಲೇಖನಗಳು ಗಮನಸೆಳೆಯುತ್ತದೆ. ಪದ ಪರಂಪರೆಯ ಅಧ್ಯಯನಕ್ಕೆ ಕಾಯ್ಕಿಣೆಯವರು ವಿಶಿಷ್ಟ ಕೊಡುಗೆ ನೀಡಿದ್ದಾರೆ. ಸಂಸ್ಕೃತ ಭಾಷೆಯನ್ನು ಜನಪ್ರಿಯಗೊಳಿಸಲು ಕಾಯ್ಕಿಣೆಯವರು ನೀಡಿರುವ ಕೆಲವು ಮೌಲಿಕ ಸಲಹೆಗಳು ಹೀಗಿವೆ."ಅನಂತರ ಸಂಸ್ಕೃತವನ್ನು ಬಹಳಷ್ಟು ಸುಗಮ, ಸುಬೋಧಗೊಳಿಸಬೇಕು. ಉದಾಹರಣೆಗೆ  ಅದರಲ್ಲಿಯ ಆತ್ಮನೆ, ಪರಸ್ಮೈ ಪದಗಳ ತಲೆಗೆಡಿಸುವ ತೊಡಕು ತೊಡೆದು ಹಾಕಬೇಕು. ಈ ಭೇದದ ಮರ್ಮ ಮೃತವಾಘಿ ಶತಮಾನಗಳೇ ಸಂದಿವೆ. ಅವುಗಳಿಗೆ ಯೋಗ್ಯ ಅಂತ್ಯೇಷ್ಟಿ ಆಗಬೇಕು. ಜತೆಗೆ ದ್ವಿವಚನವೂ ಹೋಗಬೇಕು. ಹಾಗೆಯೇ ಸಂಸ್ಕೃತ ಶಬ್ದಗಳ ಲಿಂಗಭೇದ, ವ್ಯಂಜನಾಂತಗಳ ಶಬ್ಧಗಳ ವಿಭಕ್ತಿ ಕ್ರಮ ಇತ್ಯಾದಿ ಧೃತಿಗೆಡಿಸುವ ಕಸರತ್ತು. ಹೀಗೆ  ಸಂಸ್ಕೃತ ವ್ಯಾಕರಣ ಬಹಳಷ್ಟು ಸರಳವಾಗಬೇಕು."

ಗೌರೀಶ ಕಾಯ್ಕಿಣೆಯವರ ತೌಲನಿಕ ಅಧ್ಯಯನಾಸಕ್ತಿ ಸಂಶೋಧನ ಪ್ರವೃತ್ತಿಗಳಿಗೆ ಉದಾಹರಣೆಯಾಗಿ ’ ಕುಮಾರವ್ಯಾಸ ಮತ್ತು ಭಗವದ್ಗೀತೆ;, ’ಪ್ರಾಚೀನ ಭಾರತದಲ್ಲಿ ವಿಮಾನ ವಿದ್ಯೆ ಇತ್ತೆ?, ’ಭಗವದ್ಗೀತೆ-ಕೆಂಪು, ನೀಲಿ, ಕಪ್ಪು’, ’ದ್ರೌಪದಿ ವಸ್ತ್ರಾಪ ಹರಣ-ನಿಜವಾಗಿ ನಡೆದದ್ದೇನು?’, ’ಭಾರತೀಕ ಸಂಸ್ಕೃತಿ ಆಧ್ಯಾತ್ಮಿಕವೇ?-ಈ ಲೇಖನಗಳನ್ನು ಗಮನಿಸಬೇಕು. ಸಂಗೀತ, ರಂಗಭೂಮಿ ಹಾಗೂ ಯಕ್ಷಗಾನಕ್ಕೆ ಸಂಬಂಧಪಟ್ಟ ಕೆಲವು ಲೇಖನಗಳು ಈಅ ಸಂಪುಟದಲ್ಲಿವೆ.
ಡಾ| ಗೌರೀಶ ಕಾಯ್ಕಿಣೇಯವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಏಕವ್ಯಕ್ತಿ ವಿಶ್ವವಿದ್ಯಾನಿಲದಂತೆ ಕೆಲಸ ಮಾಡಿದ್ದಾರೆ. ಅವರ ಗದ್ಯ ಚಿಂತನೆಗೆ ಸಾಣೆ ಹಿಡಿವ ಗದ್ಯ; ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಜನರ ಅಭಿರುಚಿ ತಿದ್ದುವ ಗದ್ಯ; ಪ್ರಜಾಪ್ರಭುತ್ವವನ್ನು ಪೋಷಿಸುವ, ಪಕ್ವಗೊಳಿಸುವ ಗದ್ಯ. ಈ ಸಂಪುಟ ಲೇಖನಗಳ  ವಿಷಯಾಸಾರವಾದ ವರ್ಗೀಕರಣ, ಕಾಲಾನುಕ್ರಮ ಸಂಕಲನ, ವಿಷಯಸೂಚಿಗಳಿಲ್ಲದೆ ಪ್ರಕಟವಾಗಿದೆ. ಕನ್ನಡಿಗರು ರಾಘುವೇಂದ್ರ ಪ್ರಕಾಶನ ವಿಷ್ಣುನಾಯ್ಕರ ಸಾಹಸಕ್ಕೆ ಬೆಂಬಲ ನೀಡಬೇಕು. ಗೌರೀಶ ಕಾಯ್ಕಿಣೆಯವರ ಸಮಗ್ರ ಪುಸ್ತಕಗಳು ಹಾಗೂ ಲೇಖನಗಳ ಕೃತಿಸೂಚಿಯೊಂದು ಪ್ರಕಟವಾಗಬೇಕು.
ಮುರಳೀಧರ ಉಪಾಧ್ಯ, ಹಿರಿಯಡಕ
ಗೌರೀಶ ಕಾಯ್ಕಿಣಿ ಸಮಗ್ರ ಸಾಹಿತ್ಯ
ಸಂಪುಟ-೮ (ಪತ್ರಿಕಾ ಲೇಖನಗಳು)
ಸಂ:ವಿಷ್ಣು ನಾಯ್ಕ
ಪ್ರ:ಶ್ರೀರಾಘವೇಂದ್ರ ಪ್ರಕಾಶನ,
ಅಂಕೋಲಾ-೫೮೧೩೧೪.
ಮೊದಲ ಮುದ್ರಣ:೧೯೯೯
ಬೆಲೆ ರೂ.೧೮೦(ಪುಟಗಳು:೩೮೪)

Wednesday, July 15, 2020

B. R. Nagesh -ಗ್ರಾಮೀಣ ಪರಿಸರದಲ್ಲಿ ಆಧುನಿಕ ನಾಟಕಗಳ ಪ್ರಯೋಗ

ಮುರಳೀಧರ ಉಪಾಧ್ಯ ಹಿರಿಯಡಕ - ಕೆ. ಜಿ . ವಸಂತ ಮಾಧವರ " ಕರಾವಳಿ ಕರ್ನಾಟಕದ ರಾಜಕೀಯ ಇತಿಹಾಸ "

ಡಾ|ಕೆ.ಜಿ. ವಸಂತ ಮಾಧವ ಅವರು ಕರಾವಳಿ ಕರ್ನಾಟಕದ ರಾಜಕೀಯ ಇತಿಹಾಸದ ಅಧ್ಯಯನಕ್ಕೆ ಅಸಾಧಾರಣ ಕೊಡುಗೆ ನೀಡಿದ್ದಾರೆ.’ಪೊಲಿಟಿಕಲ್ ಹಿಸ್ಟರಿ ಆಫ್ ಕೆನರಾ ೧೫೬೫-೧೭೬೩’ ಎಂಬ ಸಂಶೋಧನ ಗ್ರಂಥಕ್ಕಾಗಿ ಅವರು ಪಿ.ಎಚ್.ಡಿ. ಪದವಿ ಪಡೆದರು. ’ರಿಲಿಜನ್ ಇನ್ ಕೋಸ್ಟಲ್ ಕರ್ನಾಟಕ ೧೫೦೦-೧೭೬೩’(೧೯೮೫), ;ವೆಸ್ಟರ್ನ್ ಕರ್ನಾಟಕ-ಇಟ್ಸ್ ಎಗ್ರೇರಿಯನ್ ರಿಲೇಶ್ ನ್ಸ್ -ಎ ಹಿಸ್ಟರಿ’ (೧೯೯೧)- ಇವು ಅವರ ಇತರ ಪ್ರಮುಖ ಗ್ರಂಥಗಳು. ಲಂಡನ್ನಿನ ’ ರಾಯಲ್ ಏಷಿಯಾಟಿಕ್ ಸೊಸೈಟಿಯ ಸದಸ್ಯತ್ವದ ಗೌರವ ಪಡೆದಿರುವ ಇವರು ದಿಲ್ಲಿಯ ಭಾರತ ಇತಿಹಾಸ ಸಂಶೋಧನಾ ಸಂಸ್ಥೆಯ ಹಿರಿಯ ಇತಿಹಾಸ ಸಂಶೋಧಕರಲ್ಲಿ ಒಬ್ಬರಾಗಿದ್ದಾರೆ.’ಕರಾವಳಿ ಕರ್ನಾಟಕದ  ರಾಜಕೀಯ ಇತಿಹಾಸ ಮತ್ತು ಸಂಶೋಧನೆ’ ಗ್ರಂಥದಲ್ಲಿ ಡಾ| ಕೆ.ಜಿ. ವಸಂತ ಮಾಧವರ ಇಪ್ಪತ್ತಮೂರು ಸಂಶೋಧನ ಲೇಖನಗಳಿವೆ. "ರಾಜಕೀಯ ಇತಿಹಾಸ ಸಮೀಕ್ಷೆ’ ಎಂಬ ಮೊಸಲ ಭಾಗದಲ್ಲಿ ಸ್ವಾತಂತ್ರ್ಯ ಪೂರ್ವ ತುಳುನಾಡಿನ ಇತಿಹಾಸ ಗ್ರಂಥಗಳ ವಿಮರ್ಶೆ, ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ  ಇತಿಹಾಸ ಸಮೀಕ್ಷೆ ಹಾಗೂ ಗೇರಸೊಪ್ಪೆಯ ಸಾಳ್ವರು, ಭಟ್ಕಳ ಗೇರಸೊಪ್ಪೆಯ ರಾಣೆಯರನ್ನು ಕುರಿತ ಲೇಖನಗಳಿವೆ. ’ಆಕರಗಳು’ ಎಂಬ ಎರಡನೆಯ ವಿಭಾಗದ ಲೇಖನಗಳು ಕರಾವಳಿ ಕರ್ನಾಟಕದ ದಾಖಲೆಗಳು, ಕೊಚ್ಚಿ ಪತ್ರಾಗಾರದಲ್ಲಿರುವ ಕನ್ನಡ ಇತಿಹಾಸ ದಾಖಲೆಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ  ದಕ್ಷಿಣ ಕನ್ನಡ ಜಿಲ್ಲೆಯ ವಿದೇಶಿ ಆಕರಗಳಿಗೆ ಸಂಬಂಧಿಸಿವೆ. ’ಕರ್ನಾಟಕ ಮತ್ತು ಕರಾವಳಿ ಅರಸು ಮನೆತನಗಳು’ ಎಂಬ ಮೂರನೆಯ ಭಾಗದಲ್ಲಿ ಕರ್ನಾಟಕದ ಅರಸುಗಳೊಂದಿಗಿನ ಕದಂಬರ ಹಾಗೂ ವಿಜಯನಗರ ಅರಸರ ಸಂಬಂಧ, ಕೆಳದಿಯ ನಾಯಕರು, ಕೆಳದಿ ಅರಸರ ತೆರಿಗೆ ಪದ್ಧತಿ, ಶಿವಾಝಿಯ ಬಸರೂರು ಧಾಳಿ ಹಾಗೂ ಹೈದರಾಲಿ ಟಿಪ್ಪು ಸುಲ್ತಾನರ ಕಾಲದ ಕರಾವಳಿ ಕರ್ನಾಟಕವನ್ನು ಕುರಿತ ಲೇಖನಗಳಿವೆ.
’ಕರಾವಳಿ ಕರ್ನಾಟಕದ ಅರಸು ಮನೆತನಗಳ ಸಂಶೋಧನಾತ್ಮಕ ಅಧ್ಯಯನ ಎಂಬ ನಾಲ್ಕನೆಯ ಭಾಗದಲ್ಲಿರುವ ಲೇಖನಗಳು ಭೂತಪಾಂಡ್ಯನ ಐತಿಹಾಸಿಕ ಹಿನ್ನಲೆ, ಕಳಸ-ಕಾರ್ಕಳ ಅರಸ್ರು ಮತ್ತು ಶೃಂಗೇರಿ ಮಠ, ಚೌಟ-ಭೈರವ ಒಡೆಯರ ರಾಜಕೀಯ ಸಂಬಂಧ, ಕಾರ್ನಾಡಿನ ರಾಣೆ, ಸ್ಯಾದಿ ಅರಸು ಮನೆತನ-ಈ ವಿಷಯಗಳಿಎ ಸಂಬಂಧಿಸಿವೆ.

ಸಾಳ್ವ ವಂಶದ ಚೆನ್ನಭೈರಾದೇವಿ ೧೫೫೨ರಿಂದ ೧೬೦೬ರ ವರೆಗೆ ಐವತ್ತಾರು ವರ್ಷಗಳ ಕಾಲ ಸಂಗೀತಪುರ-ಗೇರುಸೊಪ್ಪೆಗಳನ್ನು ಆಳುತ್ತಿದ್ದಳು.ಇವಳ ರಾಜ್ಯಕ್ಕೆ ಕರಿಮೆಣಸಿನ ವ್ಯಾಪಾರಕ್ಕಾಗಿ ಬರುತ್ತಿದ್ದ ಪೋರ್ಚ್ ಗೀಜರು ಇವಳನ್ನು
’ಕರಿಮೆಣಸಿನ ರಾಣೆ’ ಎಂದು ಕರೆಯುತ್ತಿದ್ದರು. ೧೫೬೯ರಲ್ಲಿ ಪೋರ್ತುಗೀಜರು ಆಕ್ರಮಣ ಮಾಡಿದಾಗ ಚೆನ್ನ ಭೈರಾದೇವಿ  ಧೈರ್ಯದಿಂದ ಎದುರಿಸಿದಳು. ಹೊನ್ನಾವರ ಕೋಟೆಗೆ ಬಂದು ಸ್ವತ:ಬಂದೂಕು ಹಿಡಿದು ಯುದ್ಧ ಮಾಡಿದಳು. ನಾಲ್ಕು ದಿನ ನಡೆದ ಯುದ್ಧದಲ್ಲಿ ಪೋರ್ಚುಗೀಜರು ಸೋತರು.
ಶೃಂಗೇರಿ ಮಠದ ಕಡತಗಳ ಪ್ರಕಾರ, ಉಡುಪಿಯ ಪೇಜಾವರ ಸ್ವಾಮಿಗಳ ಆಹ್ವಾನದ ಮೇರೆಗೆ ಕ್ರಿ.ಶ.೧೮೪೧ರಲ್ಲಿ ಉಡುಪಿಯ ಪರ್ಯಾಯ ಉತ್ಸವಕ್ಕೆ ಶೃಂಗೇರಿಯ ಜಗದ್ಗುರುಗಳು (ಶ್ರೀ ನರಸಿಂಹ ಭಾರತಿ VIII)ಆಗಮಿಸಿದ್ದರು. ೧೬೩೩ರಲ್ಲಿ ಕರಾವಳಿಯ ಕ್ಶತ್ರಿಯ ವರ್ಗದ ಒಂದು ಜಾತಿಯವರು ಜನಿವಾರ ತೊಡಲು ಅರ್ಹರೊ ಅಲ್ಲವೊ ಎಂಬ ವಿವಾದ ಉಂಟಾಯಿತು. ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕೆಳದಿಯ ಅರಸ,ಶೃಂಗೇರಿಯ ಗುರುಗಳನ್ನು ಬೇಡಿಕೊಂಡನು. ಶೃಂಗೇರಿಯ ಪೀಠಾಧಿಪತಿಗಳು ಆ ಜಾತಿಯವರಿಗೆ ಜನಿವಾರ ತೊಡಲು ಅನುಮತಿ ನೀಡಿದರು ಕ್ರಿ.ಶ. ೧೪೪೦ರಲ್ಲಿ ತುಳುನಾಡಿಗೆ ಭೇಟಿ ನೀಡಿದ ಪರ್ಷಿಯಾದ ಪ್ರವಾಸಿ ಅಬ್ದುಲ್ ರಜಾಕ್, ಪೊಳಲಿ ದೇವಸ್ಥಾನವನ್ನು ನೋಡಿ ,    ಇದು ಪ್ರಪಂಚ ದಲ್ಲೆಲ್ಲ ಎಣ್ಣೆಯಿಲ್ಲದಂತಹ ವಿಗ್ರಹಗಳುಳ್ಳ ದೇವಸ್ಥಾನ’ ಎಂದು ಹೊಗಳಿದ್ದಾನೆ.

Monday, July 13, 2020

ಮುರಳೀಧರ ಉಪಾಧ್ಯ ಹಿರಿಯಡಕ - ಎ. ಕೆ. ರಾಮಾನುಜನ್ ಅವರ ’ ಕುಂಟೋ ಬಿಲ್ಲೆ "

 ಅಮೆರಿಕದಲ್ಲಿರುವ ದುಭಾಷಿ ಕವಿ. ಎ.ಕೆರಾಮಾನುಜನ್ (ಜ-೧೯೨೯) ಕನ್ನಡದ ಕಾವ್ಯ ಭಾಷೆಯ ಸಾಧ್ಯತೆಗಳನ್ನು ವಿಸ್ತರಿಸಿದ ನವ್ಯ ಕಾವ್ಯದ ಮುಖ್ಯ ಕವಿಗಳಾಲ್ಲೊಬ್ಬರು. ಅಡಿಗರ ಕೊಡೆಯ ಕೆಳಗೆ ಒದ್ದಾಡದೆ ದೂರ ನಿಂತು ನಗುವ ವಾಮನ-ಈ ರಾಮಾನುಜನ್. ಸಂಕೀರ್ಣ, ಬೌದ್ಧಿಕ ತರ್ಕ, ಸೊಫಿಸ್ಟಿಕೇಶನ್ (ಅತಿಶಿಷ್ಟತೆ), ಭಾಷಾ ಸೂಕ್ಷ್ಮತೆ, ಪದಭಂಜಕ ಪ್ರವೃತ್ತಿ, ’ಕಲಾಸೌಷ್ಠವನಿಷ್ಠ ಕಾಳಜಿ’- ರಾಮಾನುಜನ್ನರ ಕಾವ್ಯದ ಇಂಥ ವೈಶಿಷ್ಟ್ಯಗಳನ್ನು ಕನ್ನಡ ವಿಮರ್ಶಕರು ಈಗಾಗಲೇ ಗುರುತಿಸಿದ್ದಾರೆ.

ಈ ಸಂಕಲನದ ’ನಿನ್ನೆ’, ’ಒಂದು ಕ್ಷಣ, ಆಶ್ಚರ್ಯವೇನಿಲ್ಲ’ ಕವನಗಳಲ್ಲಿ ’ ಕಾಲಪುರುಷನ ದವಡೆಯ ಒಳಗೆ’ ಅಸಹಾಯಕನಾಗಿರುವ ಮನುಷ್ಯನ ಪಾಡು-ಕವಿಯನ್ನು ಕಾಡುತ್ತದೆ. ರಾಮಾನುಜನ್ನರ ಪ್ರಸಿದ್ಧ ಪುಟ್ಟ ಕವನ ’ ಅಪ್ಪ-ಮಗ’ದಂತೆ’ಆಶ್ಚರ್ಯವೇನಿಲ್ಲ’ ಕೂಡಾ ಒಂದು ಕಿರು ಕವನ-
ಒಳಗಿನ ಎಲ್ಲುಬು
ಹೀಗೇ ಒಂದು ದಿನ
ಬಿಸಿಲಲ್ಲಿ ಬೆಳ್ಳಗೆ ಬಿಳಿಚಿಕೊಂಡು
ತುಟಿಯಿಲ್ಲದೆ ಹಲ್ಲು ಕಿರಿದು ನಾಯಿ ಬಾಯಿಗೆ ಸಿಕ್ಕಿದರೆ ಆಶ್ಚರ್ಯವೇನಿಲ್ಲ.
’ ಮೂರು (ನಾಲ್ಕು) ಜೀವನ ಚರಿತ್ರೆ’ಯಲ್ಲಿ ಕವಿ ಹೋರಾಟದ ಬದುಕನ್ನು ಮೆಚ್ಚುವ ಆಶಾವಾದಿಯಾಗಿ ದ್ದಾರೆ. ’ಒಡಿಸ್ಸಿ’ಯ ಮೆನೆಲೆಅಸ್ ಹೇಳಿದ ಕತೆ’ಯನ್ನು ಭಾಷಾಂತರಿಸುವ, ’ಸಂಶಯ ಭಕ್ತಿ’ ಎಂಬ ಕವನ ಬರೆದಿರುವ ರಾಮಾನುಜನ್ ಚಾರ್ವಾಕ ಕವಿ. ಇವರು ಪದಭಂಜಕ ಮಾತ್ರವಲ್ಲ, ಪುರಾಣ ಭಂಜಕರೂ ಹೌದು. ’ ಸಂಶಯದ ಭಕ್ಕ್ತಿ’ಯಲ್ಲಿ ದೇವರನ್ನು ಅರ್ಥೈಸುತ್ತ, "ಮನುಷ್ಯ ಮಾತ್ರನಾದ ನನಗೆ ಮಾತ್ರ ದಕ್ಕಿದ ಭ್ರಾಂತಿ. ಮದ್ದೇ ಇಲ್ಲದ ಭ್ರಮೆ. ದೇಹದೊಂದಿಗೇ ಒಕ್ಕರಿಸಿದ ಸಂದೇಹ" ಎನ್ನುತ್ತಾರೆ. ರಾಮಾನುಜನ್ನರ ಕಾವ್ಯದಲ್ಲಿ ಸಣ್ಣಪುಟ್ಟ ಸಂಗತಿಗಳ ಹಳೆಯ ನೆನಪುಗಳು ಮತ್ತೆ ಮತ್ತೆ ಮಿಂಚುತ್ತವೆ. (’ಪಕ್ಕದ ಮನೆಯಲ್ಲಿ ಉಪನಿಷತ್ತು’, ’ಕೊಲರಾಡೊಕೃಷ್ಣಾಜಿನ’, ’ಕುಂಟೋಬಿಲ್ಲೆ’) ಆದರೆ ಅನಿವಾಸಿ ಭಾರತೀಯರಾಗಿರುವ ಇವರಲ್ಲಿ ಬೇರು ಕಳಚಿಕೊಂಡ ಸಂಕಟವಾಗಲಿ, ಪರಕೀಯತೆಯಾಗಲಿ, ಭವಿಷ್ಯದ ಕನಸುಗಳಾಗಲೀ ಇಲ್ಲ. ಚಿಂತನಪರ ಕವಿತೆಗಳ ಈ ಕವೆ ಕಾವ್ಯಭಾಷೆಯನ್ನೂ, ಕಾವ್ಯಕುತೂಹಲಿಗಳ ಬುದ್ಧಿಯನ್ನೂ ಬೆಳೆಸುತ್ತಾರೆ.
’ಪದ್ಯದ ಮಾತು ಬೇರೆ’ ಕವನದಲ್ಲಿ ರಾಮಾನುಜನ್,
ಪದ್ಯದ ಮಾತು ಬೇರೆ
ಅದು ಕುದುರಿಬಿಟ್ಟರಂತೂ
ಅಪಾರ್ಥ ಮಾಡಿಕೊಂಡರೆ
ಅದೂ ಒಂದು ತರಹ ಅರ್ಥವೇ ಅಂತ ಅನಿಸಿಬಿಡುತ್ತೆ. ಎನ್ನುತ್ತಾರೆ. ರಾಮಾನುಜನ್ನರ ಕೆಲವು ಕವನಗಳಲ್ಲಿ ವ್ಯಂಗ್ಯಾರ್ಥ ಬೆಡಗಿನಲ್ಲಿ ಉಳಿದು, ವಾಚ್ಯಾರ್ಥ ವಿಮುಖರಾದ ಸಹೃದಯರಿಗೆ ಧ್ವನಿಯ ಎಳೆ ಥಟ್ಟನೆ ಹೊಳೆಯುವುದಿಲ್ಲ.ಅಂಗುಲ ಹುಳ ಕೋಗಿಲೆಯ ಹಾಡು ಅಳೆಯುವುದರಲ್ಲಿ ಸೋತಂತೆ ಓದುಗ ಪದ್ಯದ ಬೇರೆ ಮಾತು ಏನೆಂದು ತಿಳಿಯದೆ ಸುಸ್ತಾಗುತ್ತಾನೆ.
’ಕುಂಟೋಬೆಲ್ಲೆ’ ಸಂಕಲನದಲ್ಲಿ ಅನ್ನಾ ಅಖಮ ತೋವಾ, ಬೆಕೆಟ್, ರಿಲ್ಕ್, ಗ್ಯಾರಿ ಸ್ನೇಡರ್, ಚೆನಾರ್ ವಲೆಹೊ, ಯೆಹುದ್ ಅಮಿಖಾಯ್ ಮತು ಜೋಸೆಫಿನ್ ಜೇಕಬ್ ಸನ್ನರ ಕವನಗಳ, ಹನ್ನೆರಡು ಜಪಾನಿ ಹೈಕುಗಳ ಭಾಷಾಂತರ ರೂಪಾಂತರಗಳಿವೆ. ’ಇರಾನಿನಲ್ಲಿ ಬರೆದಿರಬಹುದಾದ ಪದ್ಯ ’ ಕಾಫಿ ಕುಡಿಯುತ್ತ ಪಾಪಪ್ರಜ್ಞೆ’ ಇಂಥ ಕವನಗಳಲ್ಲಿ ರಾಮಾನು ಜನ್ನರ ರಾಜಕೀಯ ನಿಲುವುಗಳ ಸುಳಿವು ಸಿಗುತ್ತದೆ.

’ವರ್ತಮಾನ’ ಕವನದ ಕೊನೆಯಲ್ಲಿ ಕವಿ ಪ್ರಶ್ನೆಸುತ್ತಾರೆ.-
ಅಮೆಜಾನ್ ದಾಟಬಶುದು
ಈ ಅನುದಿನದ ಅಂತರಗಂಗೆ ದಾಟುವುದು ಹೇಗೆ?
ಕಣ್ಣೊಳಗಿನ ಈ ಕ್ಷಿತಿಜ ಮುಟ್ಟುವುದು ಹೇಗೆ?
’ ನಲುವತ್ತರ ನೆರಳಿನಲ್ಲಿ ಖ್ಯಾತರಾದ ಎ.ಕೆ. ರಾಮಾನು ಜನ್ ರಿಗೆ ಈಗ ಅರುವತ್ತೊಂದು ವರ್ಷ. ಅವರ ಪ್ರತಿಭೆ ’ ಶಬುದಕ್ಕೆ ಹೇಸಿ ಮುಗುದನಾದ’ ಅಜಗಣ್ಣನಂಥದ್ದು.

ಅವರ ಕಾವ್ಯ ಕುಂಟೋಬಿಲ್ಲೆ ಆಟದ ಹದಿಹರೆಯದ ಬೆಚ್ಚನೆಯನ್ನು, ತುಂಟಾಟವನ್ನು ಇನ್ನೂ ಉಳಿಸಿಕೊಂಡಿದೆ. ಬಹಿರಂಗದಲ್ಲಿ ಭಾಷಾವಿಜ್ಞಾನಿಯ ಕಸರತ್ತು, ಅಂತರಂಗದಲ್ಲಿ ಲೋಕ ಪರಿವರ್ತನೆಯ  ಚಲವಿಲ್ಲದ ಲೋಕಾಯತ ಮನೋಧರ್ಮ, ಇವೆರಡರ ಸಂಧಿಯಲ್ಲಿ ಕಾವ್ಯದ ಅಂತರಗಂಗೆ-ಇದು ರಾಮಾನುಜನ್ ಕಾವ್ಯದ ನೆಯ್ಗೆ. "ಚಿಕ್ಕಂದು ಮುಕ್ಕಿದ ಬೀದಿ ಮಣ್ಣಲ್ಲಿ ವಿಶ್ವರೂಪ ಕಂಡ ಹಾಗಾಗಿ ಒಂದು ನಿಮಿಷ ತಬ್ಬಿಬ್ಬಾಯಿತು. : (ಕುಂಟೋ ಬಿಲ್ಲೆ)

ಕುಂಟೋಬಿಲ್ಲೆ
-ಎ.ಕೆ.ರಾಮಾನುಜನ್
ಮನೋಹರ ಗ್ರಂಥಮಾಲಾ,
ಲಕ್ಷ್ಮೀಭವನ, ಸುಭಾಸ ರಸ್ತೆ,
ಧಾರವಾಡ-೫೮೦೦೦೧.೧೯೯೦. ರೂ.೩೦/-
ಮುರಳೀಧರ ಉಪಾಧ್ಯ ಹಿರಿಯಡಕ


Sunday, July 12, 2020

ಮುರಳೀಧರ ಉಪಾಧ್ಯ ಹಿರಿಯಡಕ - ಪೀಟರ್ ಬ್ರೂಕ್ ಮಹಾಭಾರತ [ ರಂಗ ಕೃತಿ }

"ಇಲ್ಲಿರುವುದು ಎಲ್ಲಕಡೆಯೂ ಇದೆ. ಇಲ್ಲಿ ಇಲ್ಲದಿರುವುದು ಬೇರೆ ಎಲ್ಲಿಯೂ ಇಲ್ಲ" ಎನ್ನುತ್ತದೆ. ಮಹಾಭಾರತ. ಇದು ಮಹಾಭಾರತದ ಅಗ್ಗಳಿಕೆ. ಮಹಾಭಾರತ-ಪುರಾಣ, ಚರಿತ್ರೆ , ಆಖ್ಯಾನ, ಉಪಾಖ್ಯಾನ, ದೃಷ್ಟಾಂತ, ಧರ್ಮಶಾಸ್ತ್ರ, ಅರ್ಥಶಾಸ್ತ್ರಗಳನ್ನೊಳಗೊಂಡ ಇತಿಹಾಸ ಕಾವ್ಯ. ನಾಟಕೀಯ ಸನ್ನಿವೇಶ ಮತ್ತು ಸಂಭಾಷಣೆಗಳಿಂದ ಕೂಡಿದ ಮಹಾಭಾರತವನ್ನು ಹಾಡುತ್ತಿದ್ದ ಸೂತರು-ಚಾರಣರು-ಭಾರತೀಯ ರಂಗಭೂಮಿಯ ಆದ್ಯರು.ಈ  ಉಪಜೀವ್ಯ ಕಾವ್ಯ ಭಾರತದ ಹಲವಾರು ಭಾಷೆಗಳ ಮಹಾಕಾವ್ಯಗಳಿಗೆ, ಭಾಸ, ಕಾಳಿದಾಸರಂಥ ಶ್ರೇಷ್ಠ ನಾಟಕಕಾರರ ನಾಟಕಗಳಿಗೆ ವಸ್ತುವನ್ನು ಒದಗಿಸಿದೆ. ಕುಮಾರವ್ಯಾಸರು, ಅಭಿನವವ್ಯಾಸರು ಭಾರತದ ಎಲ್ಲ ಭಾಷೆಗಳಲ್ಲೂ ಇದ್ದಾರೆ.
ಮಹಾಭಾರತ ರಂಗಕೃತಿ
ಪ್ಯಾರಿಸ್ ನಲ್ಲಿರುವ ಅಂತಾರಾಷ್ಟೀಯ ರಂಗಭೂಮಿ ಸಂಶೋಧನ ಸಂಸ್ಥೆಯ ನಿರ್ದೇಶಕ ಪೀಟರ್ ಬ್ರೂಕ್ (ಜನನ-೧೯೨೫) ನಿರ್ದೇಶಿಸಿದ ಒಂಬತ್ತು ಗಂಟೆಗಳ ಅವಧಿಯ ಮಹಾಭಾರತದ ರಂಗಕೃತಿಯನ್ನು ಫೆಂಚ್ ಭಾಷೆಯಲ್ಲಿ ಬರೆದವರು ಜೀನ್-ಕ್ಲಾಡ್ ಕ್ಯಾರಿಯೇರ್. ಅವರು ಪ್ಯಾರಿಸ್ ನಲ್ಲಿರುವ ’ನ್ಯೂ ಫೆಂಚ್ ಸ್ಕೂಲ್ ಫಾರ್ ಸಿನಿಮಾ ಆಯ್ಯಂಡ್ ಟೆಲಿವಿಷನ್’ನ ಅಧ್ಯಕ್ಷರಾಗಿದ್ದಾರೆ. ಪ್ರೆಂಚ್ ಕೃತಿಯನ್ನು ಪೀಟರ್ ಬ್ರೂಕ್ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಜೀನ್-ಕ್ಲಾಡ್ ಕ್ಯಾರಿಯೇರ್ ಮತ್ತು ಪೀಟರ್ ಬ್ರೂಕ್ ರಿಗೆ ’ತತೋ ಜಯಮುದಿರಯೇತ್’ ಎಂದು ಒಂದು ಲಕ್ಷ ಶ್ಲೋಕಗಳ ’ ಮಹಾಭಾರತದ’ ಕಥೆ ಹೇಳಿದವರು ಪ್ಯಾರಿಸ್ ನಲ್ಲಿರುವ ಸಂಸ್ಕೃತ ವಿದ್ವಾಂಸ ಫಿಲಿಪ್ಪೆ ಲಾವಸ್ಟೈನ್. ಈ ಲೇಖನ ಪೀಟರ್  ಬ್ರೂಕ್ ರ ನಾಟಕ ಪ್ರಯೋಗದ ವಿಮರ್ಶೆ ಅಲ್ಲ; ಜೀನ್-ಕ್ಲಾಡ್ ಕ್ಯಾರಿಯೇರ್ ಬರೆದಿರುವ ರಂಗಕೃತಿಯ ಒಂದು ಅವಲೋಕನ "ಮಹಾಭಾರತವನ್ನು ನಿಮ್ಮ ಅಂಗೈಯಲ್ಲಿ ಹಿಡಿದಿದುವುದು ಅಸಾಧ್ಯ". "ಮೂಲ ಪಠ್ಯದಲ್ಲಿ ನಮ್ಮ ಕಲ್ಪನೆಗಳನ್ನು ತುರುಕುವುದಿಲ್ಲ, ನಮ್ಮ ತೀರ್ಮಾನಗಳನ್ನು ಹೇರುವುದಿಲ್ಲ, ಸಾಧ್ಯವಾದಷ್ಟೂ ಇಪ್ಪತ್ತನೆಯ ಶತಮಾನದ ನಮ್ಮ ವಿವೇಚನೆಯನ್ನು ಬಳಸುವುದಿಲ್ಲ" ಎನ್ನುತ್ತಾರೆ ಕ್ಯಾರಿಯೇರ್.
ಕ್ಯಾರಿಯೇರ್ ಅವರ ೨೩೮ ಪುಟಗಳ ’ಮಹಾಭಾರತ’ ನಾಟಕದಲ್ಲಿ ದ್ಯೂತ ಕ್ರೀಡೆ, ಅರಣ್ಯವಾಸ ಮತ್ತು ಯುದ್ಧ ಎಂಬ ಮೂರು ಭಾಗಗಳಿವೆ. ಒಟ್ಟು ಇಪ್ಪತ್ತಾರು ದೃಶ್ಯಗಳಿವೆ. ಪುರಾಣಭಂಜನೆಯಲ್ಲಿ. ನಿಗೂಡಗಳನ್ನು ಭೇದಿಸುವುದರಲ್ಲಿ ನಾಟಕಕಾರರಿಗೆ ಆಸಕ್ತಿ ಇಲ್ಲ. ಅಪನಂಬಿಕೆಯನ್ನು  ಅಮಾನತ್ತಿನಲ್ಲಿಟ್ಟು ಸವಿಯಬೇಕಾದ ಪಾಶುಪತಾಸ್ತ್ರ, ಊರ್ವಶಿಶಾಪ, ಭೀಮ-ಹನುಮರ ಭೇಟಿ, ಯಕ್ಷ ಪ್ರಶ್ನೆ, ಜಯದ್ರಥ ವಧೆಯ ಸಂದರ್ಭದಲ್ಲಿ ಕೃಷ್ಣನ ಇಂದ್ರಜಾಲದ ಸೂರ್ಯಾಸ್ತ, ಸ್ವರ್ಗಾರೋಹಣ, ಕುಂತಿ ಮಂತ್ರಾಭಿಮಾನಿ ದೇವತಗಳಿಂದ ಮಕ್ಕಳನ್ನು ಪಡೆಯುವುದು-ಇಂಥ ಪುರಾಣಾಂಶಾಗಳನ್ನು, ನಿಗೂಢಗಳನ್ನು ಉಳಿಸಿಕೊಳ್ಳಲಾಗಿದೆ. ಸಂಶೋಧಕರು ಪ್ರಕ್ಷಿಪ್ತ ಭಾಗ ವೆಂದು ಅಭಿಪ್ರಾಯ ಪಡುವ ಅಕ್ಷಯ ವಸ್ತ್ರದ ಪ್ರಸಂಗವೂ ಈ ನಾಟಕದಲ್ಲಿದೆ. ದುಶ್ಯಾಸನನು ದ್ರೌಪದಿಯ ಸೀರೆಯನ್ನು ಸೆಳೆದಾಗ ಒಂದರ ಹಿಂದೆ ಇನ್ನೊಂದು, ಮತ್ತೊಂದು ಸೀರೆಗಳು ಬಂದುವೆಂದು ಮಹಾಭಾರತ  ವರ್ಣಿಸುತ್ತದೆ. ಆದರೆ ಜನಪ್ರಿಯ ಜನಪದ ಪರಂಪರೆಯಲ್ಲಿರುವಂತೆ ಒಂದೇ ಬಟ್ಟೆ ಅಸೀಮವಾಯಿ ತೆಂದು ನಾಟಕಕಾರ ಬರೆಯುತ್ತಾರೆ. "ಕೃಷ್ಣ ಚತುರನಿದ್ದ, ದೂರದರ್ಶಿಯಾಗಿದ್ದ, ಆದರೆ ತ್ರಿಕಾಲ ಜ್ಞಾನಿ, ಸರ್ವಶಕ್ತ ಆಗಿರಲಿಲ್ಲ" ಎನ್ನುತ್ತಾರೆ’ ಯುಗಾಂತ’ದ ಲೇಖಕಿ ಇರಾವತಿ ಕರ್ವೆ. ಆದರೆ ಕ್ಯಾರಿಯೇರ್ ಹೇಳುತ್ತಾರೆ-"ಮನುಷ್ಯನೋ? ದೇವರೋ? ನಿರ್ಧರಿಸುವುದು ನಮ್ಮಿಂದಾಗದು. ಚರ್ಚಾಸ್ಪದವಾದ ಐತಿಹಾಸಿಕ, ಆಧ್ಯಾತ್ಮಿಕ ಸತ್ಯಗಳಲ್ಲಿ ನಮ್ಮಗೆ ಆಸಕ್ಕ್ತಿ ಇಲ್ಲ. ನಿಸ್ಸಂಶಯವಾದ ನಾಟಕೀಯ ಸತ್ಯ ನಮ್ಮ ಗುರಿ". ಕೃಷ್ಣನ ಪಾತ್ರದ ಅಂತ:ಸತ್ವ ಈ ಕೃತಿಯಲ್ಲಿ ಮೂಡಿ ಬಂದಿಲ್ಲ.

ನಾಟಕ-ನಿರೂಪಣೆ
ಕಥನ ಸಂಪ್ರದಾಯದ ಮಹಾಕಾವ್ಯದ ಸೂತ-ಚಾರಣರ ಬದಲಿಗೆ ಈ ನಾಟಕದಲ್ಲಿ ವ್ಯಾಸನೇ ಸೂತ್ರಧಾರನಾಗಿದ್ದಾನೆ. ಅವನ ಜತೆಯಲ್ಲಿ ಆಗಾಗ ಮುಖ್ಯ  ಪ್ರಖ್ಯೆಗಳನ್ನು ಕೇಳುವ ಗಣೇಶ ಮತ್ತು ಒಬ್ಬ  ಪುಟ್ಟ ಹುಡುಗ ಇದ್ದಾರೆ. ಈ ಪುಟ್ಟ ಬಾಲಕ ಮಹಾಯುದ್ಧವೊಂದರ ಅನಂತರ ಉಳಿಯುವ ಹತಭಾಗ್ಯ ತಲೆಮಾರಿನ ಪ್ರತಿನಿಧಿ. ದ್ಯೂತಕ್ರೀಡೆ ದೃಶ್ಯದ ಅಂತ್ಯದಲ್ಲಿ ವ್ಯಾಸ-ಗಣೇಶ-ಹುಡುಗ ಜೂಜಾಡುತ್ತಾರೆ. ಇಂಥಲ್ಲಿ ನಾಟಕಕಾರ  ಮೌನದಲ್ಲಿ ಮಾತನಾಡುತ್ತಾನೆ. ವ್ಯಾಸ ಪಾತ್ರಧಾರಿ ಶಂತನುವಾಗಿ ಅಭಿನಯಿಸುವುದು, ಅರ್ಜುನ ಹನುಮಂತನಾಗಿ ಅಭಿನಯಿಸುವುದು-ಇಂಥ ಕಥನ ಸಂಪ್ರದಾಯದ ಅಂಶಗಳು ಈ ಕೃತಿಯಲ್ಲಿವೆ. ನಾಟಕೀಯ ತಂತ್ರದ ದೃಷ್ಟಿಯಿಂದ ಕ್ಯಾರಿಯೇರ್ ಮಾಡಿರುವ ಹಲವು ಸಣ್ಣ ಪುಟ್ಟ ಬದಲಾವಣೆಗಳು ಸೊಗಸಾಗಿವೆ. ’ ಸ್ತ್ರೀ ಪರ್ವದಲ್ಲಿ ಕುಪಿತ ಧೃತರಾಷ್ಟನ ಅಪ್ಪುಗೆಯಲ್ಲಿ ಭೀಮ ಸಾಯದಂತೆ ಕೃಷ್ಣ ಕಬ್ಬಿಣದ ವಿಗ್ರಹವನ್ನು ಮುಂದೆ ತಳ್ಳುವ ಸಂದರ್ಭ. ಈ ನಾಟಕದಲ್ಲಿ ಕೃಷ್ಣ ವಿಗ್ರಹದ ಬದಲಿಗೆ ಕುರುಕ್ಷೇತ್ರದಲ್ಲಿದ್ದ ಒಂದು ಹೆಣವನ್ನು ಧೃಷ್ಣರಾಷ್ಟ್ರ ಅಪ್ಪಿಕೊಳ್ಳುವಂತೆ ಮಾಡುತ್ತಾನೆ.
’ ಮಹಾಭಾರತ’ ನಾಟಕದಲ್ಲಿ ವಿದುರನ ಗೈರುಹಾಜರಿ ಎದ್ದು ಕಾಣುತ್ತದೆ. ವಿದುರನ ಪಾತ್ರ ಮಹತ್ವದ್ದಲ್ಲ ಎನ್ನುವ ನಾಟಕಕಾರರ

‘ವರ್ಜಿನ್‌ ಮೊಹಿತೊ’ ಕೃತಿ ಬಗ್ಗೆ ಸತೀಶ್‌ ಚಪ್ಪರಿಕೆ...

ಪಾ.ವೆಂ.ಪುಸ್ತಕದ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ 2020

Saturday, July 11, 2020

ಬನ್ನಂಜೆಯವರ ಲೇಖನಗಳು- ಮುರಳೀಧರ ಉಪಾಧ್ಯ ಹಿರಿಯಡಕ

ಬನ್ನಂಜೆಯವರು ಅನುವಾದಿಸಿದ ಬಾಣ ಭಟ್ಟರ ಕಾದಂಬರಿಗೆ ಮುನ್ನುಡಿ ಬರೆದ ಬೇಂದ್ರೆ, ಬನ್ನಂಜೆ ಗದ್ಯದ ಕುರಿತು, " ಇಲ್ಲಿ ಗದ್ಯವು ಚರ್ವಣಾನುಕೂಲವಾಗಿದೆ   ವಜ್ರದಂತಕ್ಕಾಗಿ ಹುಟ್ಟಿದ ಕಬ್ಬಿಣದ ಕಡಲೆ  ಇಲ್ಲಿಲ್ಲ. ಮಾತು ಕಬ್ಬಿನ ಗಣಿಕೆ. ಕಬ್ಬದ ತುಣುಕೆ" ಎಂದು ಕೊಂಡಾಡಿದ್ದಾರೆ. ನನ್ನ ಗುರು ಗಳಾಗಿದ್ದ ಪ್ರೋತಾಶಾ  ಬಲ್ಲಾಳರು ಬನ್ನಂಜೆಯವ ರನ್ನು ಕುರಿತು ನನ್ನ ಒಂದು ಲೇಖನದಲ್ಲಿ ಬೇಂದ್ರೆ ಬನ್ನಂಜೆ ಕುರಿತು ಆಡಿದ ಒಂದು  ಮಾತು ಬರೆದಿದ್ದಾರೆ-"ಬನ್ನಂಜೆ ಅಪೂರ್ವ  ವ್ಯಕ್ತಿ. ಆತನ ಮಹತ್ವ ಎಲ್ಲರಿಗೂ ತಿಳಿಯಬಾರದು. ಆತ ಒಟ್ಟು ಪೋಲಿ ಹುಡುಗನಂತೆ ಇರುತ್ತಾನಲ್ಲ ಅದೇ ನನಗೆ ಇಷ್ಟ", ಮಿತ್ರ ಡಿ.ಆರ್ .ನಾಗರಾಜ್ ರ. ಮಾತು ನೆನಪಾಗುತ್ತದೆ-"ನಾನು ಕನ್ನಡ ಎಂ.ಎ. ಕ್ಲಾಸಿಗೆ ಹೋಗಿ ಪಾಠ ಮಾಡುವಾಗ ಬನ್ನಂಜೆಯವರ  ಬಾಣ ಭಟ್ಟನ ಕಾದಂಬರಿಯ ಅಧ್ಯಾಯಗಳನ್ನು ಓದಿ ಹೇಳುತ್ತೇನೆ.

               ಬನ್ನಂಜೆಯವರ ಲೇಖನಗಳು ’ಬನ್ನಂಜೆ ಬರಹಗಳು ಸಂಪುಟ ೧, ೨, ೩ ರಲ್ಲಿ ಪ್ರಕಟವಾಗಿವೆ. ಬನ್ನಂಜೆಯವರು ’ಉದಯವಾಣಿಯಲ್ಲಿ ೨೫ ವರ್ಷ, ’ರಾಮಾನುಜ’ ಜಡಭರತ’ ಕಾವ್ಯನಾಮಗಳಲ್ಲಿ ೭೫೦ಕ್ಕಿಂತ ಹೆಚ್ಚು ಪುಸ್ತಕ ವಿಮರ್ಶೆಗಳನ್ನು ಬರೆದಿದ್ದಾರೆ. ಅವು ಪುಸ್ತಕರೂಪದಲ್ಲಿ ಪ್ರಕಟವಾಗಿಲ್ಲ, ಬನ್ನಂಜೆ ಯವರು ’ಉದಯವಾಣೆ’ ಯಲ್ಲಿ
"ಕಿಷ್ಕಿಂಧಾ ಕಾಂಡ" ದಲ್ಲಿ ಪಾ.ವೆಂ. ಆಚಾರ್ಯ ಹಾಸ್ಯ ಲೇಖನಗಳಲ್ಲಿರುವಂತೆ  ತೀಕ್ಣ ರಾಜಕೀಯ ವಿಡಂಬನೆ ಇದೆ. ’ಕಿಷ್ಕಿಂಧಾ ಕಾಂಡ’ ಪುಸ್ತಕ ರೂಪದಲ್ಲಿ ಪ್ರಕಟವಾಗಿಲ್ಲ.

ಪ್ರಕಟವಾಗಿರುವ, ಬನ್ನಂಜೆಯವರ ಲೇಖನ ಸಂಪುಟಗಳಲ್ಲಿ ಒಟ್ಟು ೭೫ ಲೇಖನಗಳಿವೆ. ಉಡುಪಿಯ ಕೊಡುಗೆ,  ಭಗವದ್ಗೀತೆ ದಾಸ ಸಾಹಿತ್ಯ, ಸಂಸ್ಕೃತ ಸಾಹಿತ್ಯ, ಆತ್ಮ ಕಥನ, ಕರಾವಳಿಯ ಕನ್ನಡ ಸಾಹಿತ್ಯ, ವ್ಯಾಕರಣ, ಭಾಷಾ ಶಾಸ್ತ್ರ- ಹೀಗೆ ವೈವಿಧ್ಯಪೂರ್ಣ ವಿಷಯಗಳನ್ನು ಕುರಿತು ಬನ್ನಂಜೆ ಬರೆದಿದ್ದಾರೆ.

    ಬನ್ನಂಜೆಯವರ ವೈಚಾರಿಕ ನೆಲೆಗಳು ಅವರ ಲೇಖನಗಳಲ್ಲಿ ಹೇಗೆ ಕಾಣಿಸುತ್ತವೆ  ಎನ್ನುವುದಕ್ಕೆ ಒಂದೆರಡು ಉದಾಹರಣೆಗಳು ಇಲ್ಲಿವೆ-

"ಬದುಕು ನನ್ನ ದೃಷ್ಟಿಯಲ್ಲಿ" ಎಂಬ ಲೇಖನದಲ್ಲಿ ಬನ್ನಂಜೆಯವರು "ಬದುಕು ಸಮಷ್ಟಿಗಾಗಿ ಇದೆ ಎನ್ನುವುದು ನಿಜ. ಆದರೆ ಅದಕ್ಕೆ ಸೃಷ್ಟಿಯ ವೈಯಕ್ತಿಕತೆಯ ಛಾವು ಇದೆ ಎನ್ನುವುದು ಅಷ್ಟು ನಿಜ ಪ್ರಾಚೀನರು ಹೇಳುತ್ತಾರೆ-ಬದುಕು ನಿಷ್ಕಾಮವಾಗಿರಬೇಕು, ನಿ:ಸ್ವಾರ್ಥವಾಗಿರಬೇಕು  ಇದು ಸಾಧ್ಯವೇ? ಆಸೆಯೆ ಇರದವನು ಬದುಕಿದ್ದಾನೆ ಎಂಬುದಕ್ಕಾದರೂ ಏನು ಸಾಕ್ಷಿ? ಕೊನೆಗೆ ಬದುಕುವಾಸೆಯಾದರೂ ಇರಬೇಕಲ್ಲ. ಮನುಷ್ಯನ ಬದುಕು ಎಂದರೆ ಬಯಕೆಗಳ ಸರಮಾಲೆ. ಮತ್ತೆ ನಿಷ್ಕಾಮ ಕರ್ಮ’ ಎಂದರೇನು? ನಿಸ್ವಾರ್ಥ ಸೇವೆ ಎಂದರೇನು? ನಿಷ್ಕಾಮ ಎಂದರೆ ಕಾಮನೆಗಳ ತ್ಯಾಗ ಅಲ್ಲ, ವಿಸ್ತಾರ ಎಲ್ಲರಿಗೂ ಒಳಿತಾಗಲಿ ಎನ್ನುವುದು  ನಿಷ್ಕಾಮ  ನನಗೆ ನನ್ನ ಹೆಂಡತಿ ಮಕ್ಕಳಿಗೆ  ಮಾತ್ರ ಎನ್ನುವುದು ಸಕಾಮ.ನನಗೆ ಸಂಪತ್ತು, ಮನೆಮಾತು, ಕಾರು ಬೇಕೆನ್ನುವುದೂ ತಪ್ಪಲ್ಲ . ನನಗೆ ಮಾತ್ರ ಬೇಕೆನ್ನುವುದು ತಪ್ಪು. ಅದು ಸ್ವಾರ್ಥ’  

ಭವಭೂತಿ ಸಾರ್ಥಕ ಬದುಕಿಗೆ ನೀಡಿದ ಸೂತ್ರ ಬನ್ನಂಜೆಯವರಿಗೆ ಇಷ್ಟ-’ಅದ್ವೈತಂ ಸುಖ ದು:ಖಯೋ; ’ "ಸುಖದಲ್ಲು ದು:ಖದಲ್ಲು , ಸಿರಿತನದಲ್ಲು ಬಡತನದಲ್ಲು ಹೊಂದಿ ಬಾಳುವ ಸಾಮರಸ್ಯ."

’ಆಯಿತೇ  ಅರುವತ್ತು’ ಎಂಬ ಲೇಖನದಲ್ಲಿ ಬನ್ನಂಜೆ ನನಗೆ "ಅಶಾಂತಿ ಇಲ್ಲವಲ್ಲ. ಅರುವತ್ತರ ಶಾಂತಿ ಯಾಕೆ?" ಎಂದು ಪ್ರಶ್ನಿಸುತ್ತ ಹೀಗೆ ಬರೆದಿದ್ದಾರೆ-"ಪ್ರಾಯ: ಅಶಾಂತಿಯೇ ಮುಪ್ಪಿನ ಮೂಲ ದ್ರವ್ಯ ದೇಹದ ವಯಸ್ಸು ನನಗೆ ಮುಖ್ಯವಲ್ಲ. ಮಾನಸಿಕವಾಗಿ ನನಗೆ ಮುಪ್ಪು ಬರಲಿಲ್ಲ. ನಾನಿನ್ನೂ ಯುವಕ. ನನ್ನ ಜೀವನದುದ್ದಕ್ಕೂ ನನ್ನ  ಸಂಗಾತಿಗಳಾಗಿ  ನನ್ನನ್ನು ಶಾಂತಿ ಪರ್ವದತ್ತ  ಒಯ್ದಂಥವು ನನ್ನ ಪುಸ್ತಕಗಳು. ಮುಖ್ಯವಾಗಿ ಉಪನಿಷತ್ತುಗಳು ಮತ್ತು ಮಹಾಭಾರತ. ನನ್ನ ಸಂಸಾರದ  ಮಂದಿ ನನ್ನನ್ನು ಮುಪ್ಪಿನತ್ತ ಎಳೆದರೆ, ಇವು ನನ್ನನ್ನು ಅನಂತ    ಯೌವನದತ್ತ  ಎಳೆಯುತ್ತಿವೆ. ಇದು ನನ್ನನೇ ತಪ್ಪಿರಬಹುದು. ನಾನು ಮನೆಯಲ್ಲಿ ಅತಿಥಿಯಂತೆ ಬದುಕಿದೆ. ನಾನು  ಅವರ ಮುಂದೆ ನನ್ನ ಎದೆಯನ್ನು ಬಿಟ್ಟಿಕೊಳ್ಳಲ್ಲಿಲ್ಲ. ನನ್ನ  ಒಳವನಿ ಅವರಿಗೆ ಕೇಳಿಸದಿರಲಿ ಎಂದು ನನ್ನೊಗಳಿಗೆ ನೋವು ಅವರನು ಕಂಗೆಡಿಸದಿರಲಿ ಎಂದು."
’ಧರ್ಮ ಮತ್ತು ಮುಖವಾಡ’ ಎಂಬ ಲೇಖನದಲ್ಲಿ ಬನ್ನಂಜೆಯವರು "ಧರ್ಮ’ ಎಂದರೆ ಸದ್ ಭಾವ ಮತ್ತು ಪ್ರಾಮಾಣಿಕತೆ ಎಂಬ ಮೂಲವ್ಯಾಖ್ಯೆಗೆ ನಾವು ಮತ್ತೆ ಮರಳಬೇಕು’ ಎನ್ನುತ್ತಾರೆ. ಅವರ ಪ್ರಕಾರ  ಎರಡು ವರ್ಗದ ಜನ ಬೆಳೆಯುತ್ತಿದ್ದಾರೆ. ಧಾರ್ಮಿಕತೆಯ ಸೋಗು ಹಾಕಿ, ಮುಖವಾಡದ ಬದುಕು ಬದುಕುತ್ತಿರುವ ’ ಧರ್ಮಧ್ವಜ’ ರದ್ದು ಒಂದು ವರ್ಗ ಇಂಥ ಅಪ್ರಾಮಾಣಿಕತೆಯೇ ಧರ್ಮದ ಮಾನದಂಡವಾದರೆ ನಮಗೆ ಈ ಧರ್ಮವೇ ಬೇಡ ಎನ್ನುವ ಕ್ರಾಂತಿವಾದಿಗಳದ್ದು ಇನ್ನೊಂದು ವರ್ಗ" ಮೊದಲ ವರ್ಗದ ಧರ್ಮ ಧ್ವಜರೇ ಎರಡನೆಯ ವರ್ಗದ ಹುಟ್ಟಿಗೆ ಕಾರಣಪುರುಷರು. ಧರ್ಮಕ್ಕೆ ನಿಜವಾದ ಅಪಾಯ ಇರುವುದು ’ಧರ್ಮ ಬೇಡ’ ಎನ್ನುವ ಕ್ರಾಂತಿ ವಾದಿಗಳಿಂದಲ್ಲ. ಧರ್ಮಧ್ವಜರಿಂದ ಮತ್ತು ಅದನ್ನು  ಸಮರ್ಥಿಸುವ ಧರ್ಮ ಸಂಸ್ಥೆಗಳಿಂದ  ಇದೇ ಧರ್ಮದ ದೊಡ್ಡ ದುರಂತ" ಎನ್ನುತ್ತಾರೆ ಬನ್ನಂಜೆ.

" ಧರ್ಮ ಶಾಸ್ತ್ರಗಳು, ಸ್ಮೃತಿ ಗ್ರಂಥಗಳು ಶಾಶ್ವತ  ಸತ್ಯಗಳಲ್ಲ" ಎಂಬ ಬನ್ನಂಜೆಯವರ ಮಾತನ್ನು ಗಮನಿಸಬೇಕು.-" ಧರ್ಮಶಾಸ್ತ್ರಗಳು, ಸ್ಮೃತಿ ಗ್ರಂಥಗಳು  ಶಾಶ್ವತ ಧರ್ಮದ ಚೌಕಟ್ಟಿ ನಲ್ಲಿ ಸಮಾಜ ಧರ್ಮವನ್ನು ಹೇಳುತ್ತೇವೆ. ಅವು ಆಯಾಕಾಲದ ಕಾನ್ ಸ್ಟಿಟ್ಯೂಶನ್ ಇದ್ದಂತೆ. ಆದ್ದರಿಂದಲೇ ಅವು  ಸಾರ್ವಜನಿಕ ಸತ್ಯಗಳಲ್ಲ, ಕಾಲ ಕಾಲಕ್ಕೆ ಧರ್ಮ ಶಾಸ್ತ್ರಗಳೂ ಬದಲಾಗಿವೆ. ಧರ್ಮಗಳೂ ಬದಲಾಗಿವೆ. ಧರ್ಮಶಾಸ್ತ್ರಗಳು, ಸ್ಮೃತಿ ಗ್ರಂಥಗಳು ಮನೆಯಿದ್ದಂತೆ. ನಮ್ಮ ರಕ್ಷಣೆಗೆಂದೇ ಇರುವಂಥವು.ಆದರೆ ಮನೆ  ಹಳತಾದಾಗ ಬದಲಾಯಿಸಬೇಕು. ಇಲ್ಲ, ನವೀಕರಣ ಮಾಡಬೇಕು. ತೀರ ಹಳತಾದಾಗ ಕೆಡವಿ ಹೊಸ ಮನೆ ಕಟ್ಟಬೇಕು. ಇಲ್ಲವಾದರೆ ರಕ್ಷೆಗಿದ್ದ ಮನೆಯೇ ತಲೆಯ ಮೇಲೆ ಕುಸಿದು ನಾಶಕ್ಕೆ ಕಾರಣವಾದೀತು."

"ಸೆಕ್ಸ್ ಮತ್ತು ಸಮಾಜ" ಎಂಬ ಲೇಖನದಲ್ಲಿ ಬನ್ನಂಜೆಯವರು ವೈದಿಕ ಸಾಹಿತ್ಯದ ಒಂದು ಮಾತಿನತ್ತ ನಮ್ಮ ಗಮನ ಸೆಳೆಯುತ್ತಾರೆ-" ನಾಹಂ ಕರ್ತಾ, ಕಾಮ: ಕರ್ತಾ ನಾಹಂ ಕಾರಯಿತಾ, ಕಾಮ: ಕಾರಯಿತಾ"-ಇದರ ಅರ್ಥ-"ನನ್ನ ಬದುಕಿನಲ್ಲಿ ಏನೆಲ್ಲ  ನಡೆಯಿತು ಅದನ್ನು ಮಾಡಿದ್ದು ನಾನಲ್ಲ-ಕಾಮ, ಮಾಡಿಸಿದವನೂ ನಾನಲ್ಲ, ಕಾಮನೇ,"

ಧಾರ್ಮಿಕ ಗ್ರಂಥಗಳ ತೌಲನಿಕ ಅಧ್ಯಯನದ ಒಳನೋಟಗಳು ಬನ್ನಂಜೆಯವರ ಮೊಸೆನ್ ಮತ್ತು ಉಪನಿಷತ್ತು’ ಎಂಬ ಲೇಖನದಲ್ಲಿದೆ. ಬೇಂದ್ರೆ ಕಾವ್ಯ ಮತ್ತು ಸುಮತೀಂದ್ರ ನಾಡಿಗರ ’ಪಂಚಭೂತಗಳು ಕಾವ್ಯವನ್ನು ಕುರಿತ ವಿಮರ್ಶೆಯಲ್ಲಿ ಬನ್ನಂಜೆಯವರ ಹೊಳಹುಗಳಿವೆ.

ನನಗೆ ತುಂಬ ಇಷ್ಟವಾದ ಬನ್ನಂಜೆಯವರ ವಿಮರ್ಶಾ ಕೃತಿ ವಾಲ್ಮೀಕಿ ಕಂಡ ರಾಮಾಯಣ’ ಎಂಬ ಕಿರು ಹೊತ್ತಗೆ. ವಾಲ್ಮೀಕಿಗೆ ಅನುಷ್ಟು ಪ್ ಛಂದಸ್ಸು ಎಷ್ಟು ಮುಖ್ಯವೋ ವೌನವೂ ಅಷ್ಟೇ ಇಷ್ಟ. ವಾಲ್ಮೀಕೀಯ ವೌನಕಾಂಡ, ಧ್ವನಿಕಾಂಡಗಳನ್ನು ಗುರುತಿಸಿರುವುದು ಬನ್ನಂಜೆಯವರ ಅಗ್ಗಳಿಕೆ. ದಶರಥ ತನ್ನ ಮೂವರು ಪುತ್ರಿಯರಿಗೆ ನಾಲ್ಕು ಪಾಲು ಮಾಡಿ ಪಾಯಸ ಹಂಚಿದ್ದನ್ನು ತಿಳಿಸುವ ವಾಲ್ಮೀಕಿಯ ಶ್ಲೋಕಗಳು ಧ್ವನಿಪೂರ್ಣವಾಗಿವೆ. ದಶರಥನ ಭಯ, ಮುಂದಾಲೋಚನೆಗಳು ಈ ಶ್ಲೋಕದಲ್ಲಿ ಅಡಗಿವೆ.ಚಂದ ಭಾರತದ ತ್ರಿತ್ರಮನಾಡಿ ಭಾನುಮತಿ ಸೋತ್ತೋಲೆ ಎಂಬ ಪದ್ಯದಂಥ ಈ ಧ್ವನಿ ಪೂರ್ಣ ಶ್ಲೋಕಗಳ ಅರ್ಥವನ್ನು ಅನಾವರಣ ಮಾಡುತ್ತ ಬನ್ನಂಜೆಯವರು," ವಾಲ್ಮೀಕಿ ತನ್ನ ವೌನದಲ್ಲಿ ಎಷ್ಟು ಅರ್ಥವನ್ನು ತುಂಬಬಲ್ಲ ಎನ್ನುವುದಕ್ಕೆ ಈ ಪ್ರಕರಣ ಒಮ್ದು ಶ್ರೇಷ್ಠ ಉದಾಹರ್ಣೆ" ಎಂದು ವಿವರಿಸುತ್ತಾರೆ.
ಬನ್ನಂಜೆಯವರಿಗೆ ’ ಕನ್ನಡಂಗಳಲ್ಲಿ ಆಸಕ್ತಿ ಇದೆ. ಆವೆಯ ಮಣ್ಣಿನ ಆಟದ ಬಂಡಿ’ಯ ಸೂತ್ರಧಾರ ಕುಂದಾಪುರ ಕನ್ನಡ ಮಾತನಾಡುತ್ತಾನೆ. " ಅಯ್ಯಯ್ಯೋ ಅಯ್ಯಯ್ಯೋ, ಈ ಹಾಳಾದ್ ಹಾಟ್ ಕುಣ್ತಾ ಕಟ್ಕಂಟ್ ಹಸಿದ್ ಹಸಿದ್ ಸಾಕಾಗಿ ನನ್ನ  ಮೈ ಕೈ ಎಲ ವೂ ಒ ಣ್ಕಟ್ ತಾವ್ರೇ ಬೀಜದಾಂಗೆ ಒಟ್ಟಿ ಬಡ ಆಯಿ ಹೋಯ್ತ್."

ಬನ್ನಂಜೆಯವರ ಕನ್ನಡ ಗದ್ಯದ ಸೊಗಸು ಅವರು ನನ್ನ ಭಾಷಾಂತರ ಕೃತಿಗಳಿಗೆ ನೀಡಿದ ಹೆಸರುಗಳಲ್ಲೆ ಗೊತ್ತಾಗುತ್ತದೆ-ಅಭಿಜ್ಞಾನ ಶಾಕುಂತಲ -ನೆನಪಾದಳು ಶಕುಂತಲೆ, ಉತ್ತರ ರಾಮ ಚರಿತ- ಮತ್ತೆ ರಾಮನ ಕತೆ, ಮೃಚ್ಷಕಟಿಕ-" ಆಮೆಯ ಮಣ್ಣಿನ ಆಟದ ಬಂಡಿ, ವಿಷ್ಣು ಸಹಸ್ರನಾಮ-ದ್ರೆವರ ಸಾವಿರ ಹೆಸರಿನ ಹಾಡು."

ಬನ್ನಂಜೆಯವರು ಸೃಷ್ಟಿಸಿರುವ ಹಲವು ಶಬ್ದಗಳಿವೆ. ಒಂದೆರಡು  ಉದಾಹರಣೆ- ’ದ್ವಿಜೋತ್ತಮ" (ದ್ರೋಣ) -’ಹೆಬ್ಬಾರುವ’ ’ ಕೀಳು ಹಿರಿಮೆ’-

ತನ್ನ ಮಿತಿಯನ್ನು ಮೀರಿದ ದೈವದ ಮಹಿಮೆಯನ್ನು ಕಂಡಾಗ ಉಂಟಾಗುವ ರೋಮಾಂಚ) ಬನ್ನಂಜೆಯವರ ಪತ್ತ್ ರೂಪೊಡು ಜತ್ತಿನಾಯೆ ಎಂಬ ತುಳು ಕವನದ ಸಾಲು ಇದು- "ಏರಾಯೆ ಏರಾಯೆ, ಏರಾಯೆ ಗೊತ್ತಾ, ಮಾರಾಯೆ ಪಂಜುರ್ಲಿ ದೇವೆರತ್ತಾ". ವರಾಹ ಇಲ್ಲಿ ’ ಪಂಜುರ್ಲಿ’ ಆಗಿದ್ದಾನೆ.

ಬನ್ನಂಜೆ  ಗೋವಿಂದಾಚಾರ್ಯರ  ಕನ್ನಡ ಗದ್ಯ ಸತ್ಯ ಶ್ಯಾಮರ  ಗದ್ಯವನ್ನು ನೆನಪಿಸುವ ಗದ್ಯ . ಆದರೆ  ಸತ್ಯ ಶ್ಯಾಮದ ಗದ್ಯದಲ್ಲಿರುವ ಬೆಡಗು (ಅವಿಶದತೆ) ಬನ್ನಂಜೆ ಗದ್ಯದಲ್ಲಿಲ್ಲ. ಬನ್ನಂಜೆ ಗದ್ಯ ವಾಗಾಡಂಬರದ  ವಾಚಸ್ಪತಿ ಗದ್ಯವಲ್ಲ. ಅವರ ಗದ್ಯ ದೇಸಿಯ ಬನಿ ಇರುವ ಕಾವ್ಯ ಸ್ಪರ್ಶದ ಗದ್ಯ. ’ಅವಚನೀಯ  ಬೇರೆನೊ ಇಹುದು’ ಎಂದು ಸೂಚಿಸುವ ಗದ್ಯ . ಸಂಸ್ಕೃತದ ಕೊಡೆಯಡಿ ಯಲ್ಲಿ ನಡೆಯವ ಸ್ವಾಭಿಮಾನಿ ಕನ್ನಡ ಗದ್ಯ. ಮುದ್ದಣನ ಉಡುಪಿಯಲ್ಲಿ ಸಂಸ್ಕೃತದ ದೀವಟಿಗೆಯ ಬೆಳಕಿನಲ್ಲಿ ಸಾಗಿದ ಬನ್ನಂಜೆ, "ಕರಿಮಣಿ ಸರದಲ್ಲಿ ಕೆಂಪು ಹವಳ" ವನ್ನು ಪೋಣಿಸುವ ಮುದ್ದಣನ ಗದ್ಯ ಮಾರ್ಗವನ್ನು ನವೀಕರಿಸುತ್ತ ಮುನ್ನಡೆದಿದ್ದಾರೆ.

(೨೦-೧೨-೨೦೧೫ ರಂದು ಬೆಂಗಳೂರಿನಲ್ಲಿ ನಡೆದ  ಬನ್ನಂಜೆ ೮೦ ವಿಚಾರಗೋಷ್ಟಿಯಲ್ಲಿ ಮಾಡಿದ ಭಾಷಣದ ಸಾರಾಂಶ.)

ಪ್ರೋ ಮುರಳೀಧರ ಉಪಾಧ್ಯ
’ಸಖೀಗೀತ’
ಎಂ.ಐ.ಜಿ-೧(ಎಚ್)
ದೊಡ್ಡನಗುಡ್ಡೆ, ಉಡುಪಿ -೫೭೬೧೦೨
ಮೊಬೈಲ್-೯೪೪೮೨೧೫೭೭೯.
ಬ್ಲಾಗ್-mupadhyahiri.blogspot.in



ಕೆ. ಸತ್ಯನಾರಾಯಣ ಬರೆದ ‘ಬಾಡಿಗೆ ಮನೆಗಳ ರಾಜಚರಿತ್ರೆ’ ಪುಸ್ತಕದಿಂದ ಒಂದು ಲೇಖನ