stat Counter



Thursday, March 30, 2017

ಪ್ರೊ.ಎ.ವಿ.ನರಸಿಂಹಮೂರ್ತಿಗೆ ಪಿ.ಗುರುರಾಜ ಭಟ್ ಪ್ರಶಸ್ತಿ

ಹಿರಿಯ ಸಾಹಿತಿ, ಪತ್ರಕರ್ತ ಪ್ರೊ.ಎಚ್.ಎಲ್.ಕೇಶವಮೂರ್ತಿ ಇನ್ನಿಲ್ಲ

ಸಾಹಿತ್ಯಲಹರಿ ವಾಟ್ಸಪ್ ಬಳಗ { AUDIO }-- ಹರಟೆ - ಸಾಹಿತ್ಯ ಎಲ್ಲರಿಗೆ ಅಲ್ಲ ?

http://chirb.it/eKgdNb - Pls clik here to listen -

ಸಾಹಿತ್ಯಲಹರಿ ವಾಟ್ಸಪ್ ಬಳಗ ಉಡುಪಿಯಲ್ಲಿ ಏರ್ಪಡಿಸಿದ್ದ ಸಾಹಿತ್ಯ ಸಮ್ಮೀಲನದಲ್ಲಿ ನಡೆದ ಹರಟೆ ಕಾರ್ಯಕ್ರಮದ ಕೊನೆಯ ಭಾಗ - ಭಾಗವಹಿಸಿದವರು -ಪಿ. ಬಿ. ಪ್ರಸನ್ನ  , ಹರೀಶ್ ಬೊಳಂತಿಮೊಗರು , ಡಾ /ರಾಜೇಶ್ ಬೆಜ್ಜಂಗಳ ,  ಕೃಷ್ಣಪ್ರಸಾದ್ ಉಳಿತ್ತಾಯ


Image may contain: 9 people, people smiling, people sitting

ಸಾಹಿತ್ಯಲಹರಿ ವಾಟ್ಸಪ್ ಬಳಗ { AUDIO } -ಕವಿ ಗೋಷ್ಠಿ ಭಾಗ - 2

http://chirb.it/KAnGGd-Pls clik here to lisen poems recited by members of Sahityalahari Whatsap Kannada Group at Dwanyaloka , Govinda Pai Centre , Udupi



Image may contain: 3 people, people sitting and indoor


ಸಾಹಿತ್ಯ ಲಹರಿ ವಾಟ್ಸ್ಯಾಪ್ ಬಳಗದ ಉಡುಪಿ ಸಾಹಿತ್ಯ ಸಮ್ಮಿಲನ ಕಾರ್ಯಕ್ರಮದ ಕವಿಗೋಷ್ಟಿಯಲ್ಲಿ (ಈ ಎರಡನೇ ಭಾಗದಲ್ಲಿ) ಕವನ ಓದಿದವರ ಹೆಸರುಗಳು ಮತ್ತು ಅವರ ಕವನದ ಶೀರ್ಷಿಕೆ: 
೧- ರಾಮಪ್ರಸಾದ ಕಾಂಚೋಡು - ಕೃಷ್ಣಾ, ಸಖಭಾವ ತುಂಬಿರುವ ಪಾತ್ರಧಾರಿ 
೨- ವಿಭಾ ಕೆ.ಪಿ. ಉಳಿತ್ತಾಯ - ಚುಟುಕಗಳು 
೩- ಹರಿಪ್ರಸಾದ್ ದೈಲ - 
೪- ಗಿರಿಜಾ ಹೆಗ್ಡೆ ಗಾಂವ್ಕರ್ - ಪಿತೂರಿ 
೫- ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ - ಕೆ.ವಿ.ತಿರುಮಲೇಶರ ಕವನಗಳು 
೬- ವಾಸಂತಿ ಅಂಬಲಪಾಡಿ - ಮಗಳು 
೭- ಅಂಶುಮಾಲಿ - ಎರಡು ಕವನಗಳು 

Wednesday, March 29, 2017

ಪಂಜೆ ಮಂಗೇಶರಾಯರು

ಸಾಹಿತ್ಯ ಲಹರಿ ವಾಟ್ಸಪ್ ಬಳಗ { AUDIO } -ಕವಿ ಗೋಷ್ಠಿ ಭಾಗ -1

http://chirb.it/3IenF1 _pls clik here to listen Sahityalahari Kannada Whatsap  Memmbers reciting thier poems .Songs by Ramaprasad Kanchodu

Image may contain: 2 people, people sitting and eyeglasses




ಸಾಹಿತ್ಯ ಲಹರಿ ವಾಟ್ಸ್ಯಾಪ್ ಬಳಗದ ಉಡುಪಿ ಸಾಹಿತ್ಯ ಸಮ್ಮಿಲನ ಕಾರ್ಯಕ್ರಮದ ಕವಿಗೋಷ್ಟಿಯಲ್ಲಿ (ಈ ಮೊದಲ ಭಾಗದಲ್ಲಿ) ಕವನ ಓದಿದವರ ಹೆಸರುಗಳು ಮತ್ತು ಅವರ ಕವನದ ಶೀರ್ಷಿಕೆ: 
೧- ವರದೇಶ ಹಿರೆಗಂಗೆ - ಈ ಕೃಷ್ಣ 
೨- ಮೋಹನಕುಮಾರ್ (ಅಮೋಘಂಚೈತ್ರಕಾರಂಜಿ) - ಪ್ರೀತಿ, ಪ್ರೀತಿ, ಪ್ರೀತಿ 
೩- ಅಶೋಕ್ ಎನ್. ಕಡೇಶಿವಾಲಯ (ಅನೇಕ) - ನೀನೊಬ್ಬನೇ 
೪- ಮಲ್ಲಿಕಾ ಜೆ. ರೈ - ಕನ್ನಡ 
೫- ರವಿಶಂಕರ ಎ.ಕೆ. (ಅಂಕುರ) - (ಕವಿತೆಗೆ ಹೆಸರಿಲ್ಲ) 
೬- ವಿಶ್ವನಾಥ ಕುಲಾಲ್ - ಭಗವಂತ 
೭- ಹರೀಶ ಸುಲಾಯ ಒಡ್ಡಂಬೆಟ್ಟು - ಕಾಸರಗೋಡಿನ ಕೂಗು 
೮- ಕಾತ್ಯಾಯಿನಿ ಕುಂಜಿಬೆಟ್ಟು - ಒಂದು ಬಿಂದು 

ಶಶಿಕಾಂತ ಯಡಹಳ್ಳಿ - -- : ಕೆವೈಎನ್ ‘ಮಲ್ಲಿಗೆ’ ಮೂಲ ಎಲ್ಲಿದೆ..?

ಜಿ. ಎನ್. ಮೋಹನ್- - ‘ಚಿರಸ್ಮರಣೆ’ಯ ಪುಟಗಳಲ್ಲಿ ಅಡ್ದಾಡುತ್ತಾ..

ಗುಜರಾತ್ ನಲ್ಲಿ ಶೇ.80ಕ್ಕೂ ಅಧಿಕ ಇಂಜಿನಿಯರಿಂಗ್ ಪದವೀಧರರು ನಿರುದ್ಯೋಗಿಗಳು

: ಸುರಕ್ಷಿತ ಗರ್ಭಪಾತ ಆರೈಕೆಯ ಹಕ್ಕು -EPWeekly Editorial -ಕನ್ನಡಕ್ಕೆ- ಶಿವಸುಂದರ್

: ಅಭಿವೃದ್ಧಿ ದರದ ಊಹಂದಾಜುಗಳು { EPWeekly Editorial } - ಕನ್ನಡಕ್ಕೆ - ಶಿವಸುಂದರ್

Tuesday, March 28, 2017

ಎನ್. ಎ. ಎಮ್. ಇಸ್ಮಾಯಿಲ್ -- ಸಾಫ್ಟ್‌ವೇರ್ ತಂತ್ರಜ್ಞರಾಗುವುದಕ್ಕೆ ಎಂಜಿನಿಯರಿಂಗ್ ಬೇಡ!

ಕೆ. ಸತ್ಯನಾರಾಯಣ -- ವಿಮರ್ಶೆಯ ಹೊಸಹಾದಿ , ಹೊಸದಿಕ್ಕಿನ ಪಯಣಿಗ -

ಎಚ್. ಎಸ್. ಶಿವಪ್ರಕಾಶರೊಂದಿಗೆ ಸಂವಾದ - ಮನು ಚಕ್ರವರ್ತಿ

ಸಾಹಿತ್ಯ ಕೈ ಹಿಡಿಯದಿದ್ದರೆ ಹುಚ್ಚನಾಗುತ್ತಿದ್ದೆ: ಸಿದ್ಧಲಿಂಗಯ್ಯ

ಹಾಜಿ ಅಬ್ದುಲ್ಲಾ ಸರಕಾರಿ ಆಸ್ಪತ್ರೆ ಖಾಸಗೀಕರಣ: ನ್ಯಾಯಾಲಯದಿಂದ ಸಾರ್ವಜನಿಕ ಹಿತಾಸಕ್ತಿ ದಾವೆ ಸ್ವೀಕಾರ

ಡಾ. ವೀಣಾ ಮಜುಂದಾರ್

Monday, March 27, 2017

ಜನಾಂಗೀಯ ದಾಳಿ ಸಂದರ್ಭ ನೆರವು : ಅಮೆರಿಕ ಪ್ರಜೆಗೆ 1 ಲಕ್ಷ ಡಾಲರ್ ಕೊಡುಗೆ ನೀಡಿದ ಭಾರತೀಯರು

ಅಜಕ್ಕಳ ಗಿರೀಶ್ ಭಟ್ -- ಪಾ.ವೆಂ. ಎಂಬ ವಿಸ್ಮಯದ ಆರಾಧಕ

ಬುಡಕಟ್ಟು ಮಹಾಕಾವ್ಯ ಸಂಕಿರಣ 27- 3-2017

ರಾಮಪ್ರಸಾದ್ ಕಾಂಚೋಡು - ಉಡುಪಿಯಲ್ಲಿ ಸಾಹಿತ್ಯಲಹರಿ ವಾಟ್ಸಪ್ ಬಳಗದ ಸಾಹಿತ್ಯ ಸಮ್ಮಿಲನ

ಇವತ್ತು ಬೆಳಗ್ಗೆ ಸಾಹಿತ್ಯ ಸಮ್ಮಿಲನ ಹತ್ತುಗಂಟೆಗೆ ಸರಿಯಾಗಿ ಪ್ರಾರಂಭಗೊಳ್ಳಬೇಕಾಗಿತ್ತು. ಆದರೆ ನಾನು ಬರುವುದು ೧೦.೦೫ ಆದ ಪರಿಣಾಮ ಕಾರ್ಯಕ್ರಮ ಶುರುವಾಗುವುದು ವಿಳಂಬವಾಯಿತು.

ಸಂತೆಯ ಹೊತ್ತಿಗೆ ಮೂರುಮೊಳ ನೇಯ್ದಂತೆ ನನ್ನ ಪಾಡಾಯಿತು.
ಹಾಡಬೇಕಾದ ಗೀತೆಗಳ ಆಯ್ಕೆ ಅಖೈರಾಗಿರಲಿಲ್ಲ.
ನನಗೆ ವೇದಿಕೆಯ ಗಾಯನದಲ್ಲಿ ಹೇಳಿಕೊಳ್ಳುವ ಸಿದ್ಧಿ ಇಲ್ಲದಿರುವುದರಿಂದ ಕೊಂಚ ತಬ್ಲಾ ಕಲಾವಿದರ ಮನೆಯಲ್ಲಿ  ಅಭ್ಯಾಸ ಮಾಡಬೇಕಾಯಿತು. ಇದು ಒಟ್ಟುಕಾರ್ಯಕ್ರಮದ ಗತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದ್ದು ನನಗೇ ತಿಳಿದಿರುವ ಕಾರಣ ಈ ಪ್ರಮಾದಕ್ಕೆ ಕ್ಷಮೆಯಾಚಿಸುತ್ತೇನೆ.

*ಜೀವಯಾನ*ದ ಕವಿ ಮಂಜುನಾಥ್ ಅವರ ಸ್ಮೃತಿಯ ಕಾರ್ಯಕ್ರಮದಿಂದ ಅಗಲಿದ ಕವಿಯ ಕುರಿತು ಆಸಕ್ತಿ ಮೂಡುವಂತಾಯಿತು.

ಕವಿಗೋಷ್ಠಿ ಚೆನ್ನಾಗಿ ನಡೆಯಿತು.
ಲಹರಿ ವೇದಿಗೆ ಹೊಸಬರಾದ ಅಂಶುಮಾಲಿಯವರು ತುಂಬಾ ಪರಿಣಾಮವುಂಟುಮಾಡಿದರು. ವಾಸಂತಿಯವರು ಕಟ್ಟಿಕೊಟ್ಟ ಕವಿತೆ  *ತಲೆಮಾರುಗಳ ನಡುವಿನ ಅಂತರ*ಕ್ಕೆ ರೂಪಕವಾಗಿ ಗಮನಸೆಳೆಯಿತು.  

*ನನ್ನ ಕಾವ್ಯಗಾಯನ ನನಗೇ ಇಷ್ಟವಾಗದಂತಿತ್ತು*

*ತಬ್ಲಾ ಕಲಾವಿದರಾದ ಶಶಿಕಿರಣ್ ಮಣಿಪಾಲರು ಎಷ್ಟು ಒತ್ತಾಯಿಸಿದರೂ ಸಂಭಾವನೆ ಸ್ವೀಕರಿಸದೇ ಉಳಿದರು.
ಭಾಗವಹಿಸಿದ ಖುಷಿಯನ್ನು ಸಂಭಾವನೆ ಪಡೆದು ಕಳೆದುಕೊಳ್ಳದ ಅವರ       *ಸಿರಿವಂತಿಕೆ*ಗೆ ನಾನು ಶರಣು.

*ಹರಟೆ*ಯಲ್ಲಿ *ಸಾಹಿತ್ಯ ಎಲ್ಲರಿಗಲ್ಲ* ಎಂಬ ಪಕ್ಷವಹಿಸಿ ಮಾತನಾಡಿದ ಪೈಕಿ ಕೃಷ್ಣಪ್ರಕಾಶ ಉಳಿತ್ತಾಯರು ಹರಟೆಯ ಲಹರಿಯಲ್ಲಿ ಇದ್ದರೆ, ಪಿ.ಬಿ.ಪ್ರಸನ್ನರು ಹರಟೆಯ *ಮುಕ್ತಆವರಣ*ದಿಂದ ಪ್ರತ್ಯೇಕವಾಗಿ, ಗಂಭೀರವಾದಂತೆ ಇತ್ತು.
ವಾದಿಯೊಬ್ಬನಿಗೆ ದೊರಕಬೇಕಾದ ಹ್ಲಾದಮಯ ಆರಂಭ ಪ್ರಸನ್ನರಿಗೆ ದೊರೆಯಲಿಲ್ಲ. ಅವರ ಬರವಣಿಗೆಯಲ್ಲಿ ಕಂಡುಬರುವ *ವಿಮರ್ಶಾತ್ಮಕ ವ್ಯಂಗ್ಯದ ಲಕ್ಷಣ* ಇಂದಿನ ಹರಟೆಯ ವಾಗ್ವೈಖರಿಯಾಗಿ ಅಭಿವ್ಯಕ್ತವಾಗಲಿಲ್ಲ.
ಆದರೆ ಭಾರತೀಯ ಕಾವ್ಯಮೀಮಾಂಸೆಯ ಪ್ರಸಿದ್ಧೋಕ್ತಿ *ಅರಸಿಕೇಶು ಕವಿತ್ವ ನಿವೇದನಮ್ ಮಮ ಶಿರಸಿ ಮಾಲಿಖಾ ಮಾಲಿಖಾ ಮಾಲಿಖಾ* ಇದನ್ನು *ಸಾಹಿತ್ಯ ಎಮಲ್ಲರಿಗಲ್ಲ* ಎಂಬ ಸರ್ವಜ್ಞನ ಮಾತಿಗೆ ಸಮೀಕರಿಸಿಕೊಂಡದ್ದು
ಔಚಿತ್ಯಪೂರ್ಣವಾಗಿತ್ತು.
ಪ್ರಾಯಶಃ ಪ್ರಸನ್ನರು ಸಭಿಕರನ್ನು ಅವಲೋಕಿಸಿ ಹೇಳಿದ ಒಂದು ಅಂಶ ಗಮನಾರ್ಹ. ಅದೆಂದರೆ ಕೇಳುಗತನ ಮರೆತು ಸಭಿಕರನೇಕರು(ನಾನೂ ಸಹಿತ) ಮೊಬೈಲಾಧೀನರಾಗಿದ್ದುದು. ಇದು ವೈಯ್ಯಕ್ತಿಕವಾಗಿ ಪ್ರಸನ್ನರಿಗೆ ಹಿತವಾಗಿ ಕಂಡಿರದಿದ್ದರೆ ಅದು ಸಹಜವೇ. ಇದು ಅವರು ತುಸು ಗಂಭೀರವಾದಂತೆ ಕಾಣಲು ಕಾರಣವಿದ್ದಿರಬಹುದು.

ಹರಟೆಯ ನಿರ್ವಾಹಕರಾದ ಕವಿತಾ ಅಡೂರ್ ಚಾಟಿಬೀಸಲು ಇಲ್ಲೊಂದು ಅರ್ಹ ಅವಕಾಶವಿತ್ತು. ಅದನ್ನು ಆಕ್ಷೇಪಿಸಲು ಅವಕಾಶವೇ ಇರದ ವಿಷಯವದು!
ಇಲ್ಲೂ ನಾನು ತಪ್ಪುಗಾರನೇ( ಅವಧಾನಿಯಾಗಿಯೂ ವ್ಯವಧಾನ ರಹಿತ!)
 
ಕೃಷ್ಣಪ್ರಕಾಶ ಉಳಿತ್ತಾಯರು *ಕಾನೂನು ಸಾಹಿತ್ಯ ಹಾಗೂ ಅದರ ಆನ್ವಯಿಕ ಅಪ್ರಯೋಜಕತೆ*ಯ ಅಂಶವನ್ನು ನ್ಯಾಯವಿದರಾಗಿ ಹರಟೆಯ ಪರಿಧಿಗೆ ತಂದುದು ಸಮಯೋಚಿತವೇ ಆಗಿತ್ತು. ಸಾಹಿತ್ಯಲೋಕದಲ್ಲಿ ಬರೆಹಗಾರನಿಗೆ ಸಿಗುವ ದೇಶಾವರಿ ಮೆಚ್ಚುಗೆಯ ಪ್ರಾಮಾಣ್ಯದ ಕುರಿತು ಉಳಿತ್ತಾಯರು ಎತ್ತಿದ ಪ್ರಶ್ನೆ *ಹಾಸ-ಗಂಭೀರ*ವೇ ಸರಿ!

ಹರಟೆಗೆ ಹೇಳಿಮಾಡಿಸಿದ *ಲಾಲಿತ್ಯಪೂರ್ಣ  ಸಂಭಾಷಣಕ್ರಮ* ವಿಷಯದ ಪರವಾಗಿ ಮಾತನಾಡಿದ ಹರೀಶರ ಬೊಳಂತಿಮೊಗೆರು ಅವರಲ್ಲಿದೆ. ಅವರಿಗೆ ಯಕ್ಷಗಾನದ ವಾಗ್ಮಿತೆಯ ಆನುಷಂಗಿಕ ವರವಾಗಿ ಹರಟೆಯ ಶೈಲಿ ಸಿದ್ಧಿಸಿದೆ.
ಅವರ ನಿರ್ವಹಣೆ ಚೆನ್ನಾಗಿತ್ತು. 
ಡಾ.ರಾಜೇಶ್ ಬೆಜ್ಜಂಗಳರು ಹರಟೆಯ ವಿಷಯವನ್ನು ಸಾಕಷ್ಟು ಚೆನ್ನಾಗಿಯೇ ನಿರ್ವಹಿಸಿದ್ದಾರೆ. ಕಾವ್ಯಮೀಮಾಂಸಕ ಮಮ್ಮಟನನ್ನು ಉಲ್ಲೇಖಿಸಿ ಹೇಳಿದ ಕಾವ್ಯಪ್ರಯೋಜನದ ಕುರಿತಾದ ಮಾತು *ಕಾಂತಾಸಮ್ಮಿತ ಉಪದೇಶಯುಜೇ* ಇದು *ಕಾಂತಾಸಮ್ಮಿತತಯೋsಪದೇಶಯುಜೇ* ಎಂದಾಗಬೇಕಿತ್ತು. ಏನಿದ್ದರೂ ವಿಷಯದ ಮನವರಿಕೆಗೆ ಅಡ್ಡಿಯಿರಲಿಲ್ಲ. 

ಹರಟೆಯಲ್ಲಿ ಭಾಗಿಗಳಾದ ನಾಲ್ವರದೂ ನಾಲ್ಮೊಗ!
ಪ್ರಸನ್ನರಲ್ಲಿ ವಿಮರ್ಶಕನ ನೈಷ್ಠುರ್ಯ ಅಧಿಕ,
ಕೆ.ಪಿ.ಉಳಿತ್ತಾಯರದ್ದು ಯಕ್ಷಗಾನ, ಕಾನೂನು ಪರಿಜ್ಞಾನ, ಕಲಾಮೀಮಾಂಸಕನ ಹಾಗೂ ಹರಟೆಯ ಬೆರಸಶೈಲಿ,
ರಾಜೇಶರದು ಅಧ್ಯಾಪಕನ ಆಯಾಮದ ಶೈಲಿ,
ಹಾಗೂ ಹರೀಶರದು ಸೃಜನಶೀಲ ಕಲಾವಿದನ ಅನುಭವ ಹಾಗೂ ಪ್ರತ್ಯುತ್ಪನ್ನಕಾರಕ ಮುಖ.

ಒಪೀನಿಯನ್ ಪೋಲಿನಲ್ಲಿ ಹರಟೆ ಇನ್ನೂ *ರೈಸಬೇಕಾಗಿತ್ತು* ಎಂಬ ಮಾತೇ ಕೇಳಿಬಂದುದು ಸತ್ಯ!

ಯಥಾಪ್ರಕಾರ ಮುರಳೀಧರ ಉಪಾಧ್ಯರು ತನ್ನ ಓದಿಗೊದಗಿದ ಹೊಸರುಚಿಯನ್ನು(ತಿರುಮಲೇಶರ *ಅಕ್ಷಯ ಕಾವ್ಯ)* ಉಣಬಡಿಸುವ ಔದಾರ್ಯ ತೋರಿದರು.

ಕಾರ್ಯಕ್ರಮದ ಆಯೋಜನೆಯ ಶ್ರೇಯಸ್ಸು ಜ್ಯೋತಿ- ಮಹಾದೇವ, ಕವಿತಾ ಅಡೂರು, ಮುರಳೀಧರ ಉಪಾಧ್ಯಾಯ, ವರದೇಶ ಹಿರೇಗಂಗೆ ಇವರಿಗೆ ಸಂದರೆ,
ಭಾಗವಹಿಸಿದ ಎಲ್ಲರಿಗೂ ಆದಿತ್ಯವಾರವು ಫಲಪ್ರದವಾದ ಧನ್ಯತೆಯ ಖುಷಿ.

Sunday, March 26, 2017

ಸಾಹಿತಿಯ ಮನೆಯಂಗಳಕ್ಕೆ ಸಾಹಿತ್ಯ ಅಕಾಡೆಮಿ - ಹಿರಿಯ ಸಾಹಿತಿ ಡಾ. ಕೆ.ವಿ.ತಿರುಮಲೇಶ್ P...

ಬೈಲಹೊಂಗಲ ತಾಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ

ಮಲ್ಲಿಕಾರ್ಜುನ ಹಿರೇಮಠ -- ಬಹುಮುಖ ಪ್ರತಿಭೆಯ ಗಿರಡ್ಡಿ ಗೋವಿಂದರಾಜ

ಸಮ್ಮೇಳನಾಧ್ಯಕ್ಷ ವಿ. ಸಿ. ಐರಸಂಗರ ಸೈಕಲ್‌ ಪ್ರೀತಿ

ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ: ಬಸವರಾಜ ರಾಯರೆಡ್ಡಿ

​ಹೆಣ್ಮಕ್ಕಳ ಕೌಶಲ್ಯಗಳಿವೆ ಮಾನ್ಯತೆ ಸಿಗುತ್ತಿಲ್ಲ: ಡಾ.ಸಬಿಹಾ ಭೂಮಿಗೌಡ

Saturday, March 25, 2017

ಬಿ. ಎಮ್. ರೋಹಿಣಿ { AUDIO } - ಕರಾವಳಿ ಲೇಖಕಿಯರ ಸಾಹಿತ್ಯ ಸಮ್ಮೇಳನ , ಅಧ್ಯಕ್ಷ ಭಾಷಣ --25- 3-2017

http://chirb.it/gLIagc --Pls clik here to listen B. M. Rohini , Kannada Writer



Image result for b. m rohini

ಕತೆ ಅನುಭವದ ಅವತಾರ: ಸುನಂದಾ ಪ್ರಕಾಶ್ ಕಡಮೆ

ಮಹಿಳೆಯರು ಸಾಮುದಾಯಿಕ ಚಿಂತನೆಯಲ್ಲಿ ತೊಡಗಲಿ: ಲೇಖಕಿ ಸುನೀತಾ ಶೆಟ್ಟಿ

Friday, March 24, 2017

ಕಿ. ರಂ. ನಾಗರಾಜ ಕೊನೆಯ ಉಪನ್ಯಾಸ - ‘ಜೋಗಿ’ ಕವಿತೆಯ ಗ್ರಹಿಕೆಯ ವಿಭಿನ್ನ ನೆಲೆಗಳು

ಚಾರು ನಿವೇದಿತಾ -- ಅಶೋಕ ಮಿತ್ರನ್ Ashokamitran (1931-2017): A genius bottled in obscurity who deserved far, far more

ಅಶೋಕ ಮಿತ್ರನ್ - Asokamitharan talks about Tamil Literature

ತಮಿಳು ಲೇಖಕ ಅಶೋಕ ಮಿತ್ರನ್‌ ನಿಧನ

ಮುರಳೀಧರ ಉಪಾಧ್ಯ ಹಿರಿಯಡಕ - - ರಾಷ್ಟ್ರಕವಿ ಗೋವಿಂದ ಪೈ - ಬದುಕು ಬರಹ

ಕೆ. ವಿ. ತಿರುಮಲೇಶ್ { AUDIO }- ನನ್ನ ಸಾಹಿತ್ಯ

http://chirb.it/CIKp7N -pls clik here to listen k. v. tirumalesh


Image result for k . v tirumalesh

Thursday, March 23, 2017

ಕೆ. ವಿ. ತಿರುಮಲೇಶ್ { AUDIO } - ರಾಷ್ಟ್ರಕವಿ ಗೋವಿಂದ ಪೈ ಪ್ರಶಸ್ತಿ ಸ್ವೀಕಾರ ಭಾಷಣ

http://chirb.it/EyAgfE -  pls clik here to listen K. V. Tirumalesh

Dr. K. V. Tirumales's reply to Govinda Pai award at Govinda Pai Research Centre , Udupi on 23 -- 3---2017


Image result for k . v tirumalesh

ಬರಗೂರು ರಾಮಚಂದ್ರಪ್ಪ -- ಸುದ್ದಿ ಮಾಧ್ಯಮದವರಿಗೆ ಬೇಕು ಮಾನಸಿಕ ದೂರ

ರಂಗದಲ್ಲೇ ಚಿರನಿದ್ರೆಗೆ ಜಾರಿದ ಯಕ್ಷಕಲಾವಿದ ಗೇರುಕಟ್ಟೆ ಗಂಗಯ್ಯಶೆಟ್ಟಿ

‘ಹೆಣ್ಣೆಂದು ಹೇಳಿಕೊಳ್ಳಲು ಹೆಮ್ಮೆ’ -ಅಶ್ವಿನಿ ಅಂಗಡಿ

2017 ರ ಮೇ ಸಾಹಿತ್ಯ ಮೇಳದ ಆಶಯ

.. ಪ್ರೊ ಸಿ ಎನ್ ಆರ್ ಅವರ ‘ಇತ್ಯಾದಿ’ |

ಸಂಶೋಧನೆ, ಅನ್ವೇಷಣೆ ಗುಣವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಡಾ.ತಿರುಮಲೇಶ್

Wednesday, March 22, 2017

ಸಾಯಿಭದ್ರಾ ರೈ -- ಪಕ್ಷಿಗಳ ಚಂದದೂರು ಕಿದೂರು

ಕಾಜೂರು ಸತೀಶ್ -- : ಮನಸು ಅಭಿಸಾರಿಕೆ ಮತ್ತು ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ

ಬ್ರಿಟನ್‌ ಸಂಸತ್‌ ಹೊರಗೆ ಗುಂಡಿನ ದಾಳಿ

ಸಂಧ್ಯಾ - -- ಮನೆಯ ಕರೆಗಂಟೆ ಒತ್ತಿದೆ.. ಉಳಿದದ್ದು ಇಲ್ಲಿದೆ |

ಕಡಿಮೆ ನೀರು ಬಳಸೋಣ...

ಕನ್ನಡಕ್ಕೆ ತೆರೆದಿಟ್ಟ ಅಪರಿಚಿತ ಜಗತ್ತು-ಕೆರೆಯಂಗಳದ ನವಾಬ

ಅಯೋಧ್ಯೆ ವಿವಾದ: ಕೋರ್ಟ್‌ ಹೊರಗೆ ಇತ್ಯರ್ಥಕ್ಕೆ ಸಿದ್ಧ : AIMPLB

Tuesday, March 21, 2017

ಸಾಹಿತಿಯ ಮನೆಯಂಗಳಕ್ಕೆ ಸಾಹಿತ್ಯ ಅಕಾಡೆಮಿ - ಹಿರಿಯ ಸಾಹಿತಿ ಡಾ. ಕೆ.ವಿ.ತಿರುಮಲೇಶ್ .

ಟ್ರಂಪ್ ಆಡಳಿತದ ಅಮೆರಿಕದಲ್ಲಿ ನಾನು ಅನಪೇಕ್ಷಿತ ವ್ಯಕ್ತಿ : ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್

ಗಿರಡ್ದಿ ಗೋವಿಂದರಾಜ ಸಾಹಿತ್ಯ ಸಮೀಕ್ಷೆ -- 26- 3 -2017

ಬಂಟ್ವಾಳ ತಾಲೂಕು ಸಾಹಿತ್ಯ ಸಮ್ಮೇಳನ -25-3-2017

ಪಿ. ಶ್ರೀಪತಿ ತಂತ್ರಿ -- ದೇಸೀ ಕಲಾಬದುಕಿನ ಅವಿಶ್ರಾಂತ ಆಸಕ್ತ ವಿಜಯನಾಥರಂಥ ಮತ್ತೂಬ್ಬರಿಲ್ಲ

ಮುರಳೀಧರ ಉಪಾಧ್ಯ ಹಿರಿಯಡಕ --- ನೀ ಕೃಷ್ಣ, ನಾ ರಾಧೆಯೆನ್ನಲಾರೆ.. |

ಧರಣಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ; 20ಸಾವಿರ ಮಂದಿಯನ್ನೂ ಜೈಲಿಗೆ ಹಾಕಿ: ಅಂಗನವಾಡಿ ಕಾರ್ಯಕರ್ತೆಯರು

ಕೆ. ತಾರಾ ಭಟ್ - ಮಹಿಳಾ ಚಳವಳಿಯ ಸುತ್ತ ಮುತ್ತ

Sunday, March 19, 2017

ಕೆ. ವಿ. ತಿರುಮಲೇಶ್ -- ಪದ್ಯ ವಾಚನ, ಗದ್ಯವಾಚನ

ಜಿ . ಎಸ್. ಬಿ. ಅಗ್ನಿಹೋತ್ರಿ- ಜನರ ಆಶೋತ್ತರಕ್ಕೆ ಸ್ಪಂದಿಸುವರೇ ಯೋಗಿ?

ಎತ್ತಿನಹೊಳೆ ಪೈಪಿನಲ್ಲಿ ಸಮುದ್ರದ ನೀರು!

ಕೆ. ಸತ್ಯನಾರಾಯಣ --- ಪಂಚ ರಾಜ್ಯ ಚುನಾವಣೆ - ಮಾಧ್ಯಮಗಳ ದಿಕ್ಕು ತಪ್ಪಿಸಿದ " ಗುಂಪು ಚಿಂತನೆ "

ಡಾ/ ಬಿ. ವಸಂತ ಶೆಟ್ಟರ - ಬಾರಕೂರು { ಸಂಶೋಧನ ಗ್ರಂಥ } ಬಿಡುಗಡೆ ---20-3-2017


Dr. B. Vasantha Shetty - Barkoor -A Metropolitan City of Antiquity , Its History ans Culture 

ಮಂಗಳೂರಿನಲ್ಲಿ ನದಿ ವನ ರೋದನ -21--3-2017

ಉಡುಪಿಯಲ್ಲಿ ವಿಶ್ವ ಗೊಂಬೆಯಾಟ ದಿನಾಚರಣೆ -- 21---3---2017

Displaying World-puppets-day-page-1-SA_Krishnaiah.jpg

ಯಕ್ಷಗಾನದ ಮೇಲೆ "ಉತ್ತರಕಾಂಡ' ಪ್ರಭಾವ ?