stat Counter



Friday, December 30, 2016

ಎಚ್. ಎಸ್. ವೆಂಕಟೇಶಮೂರ್ತಿ - : ಎದೆಯೊಳಗಿನ ಒತ್ತುಗಂಟು.. |

ಸುನಂದಾ ಹಾಲಭಾವಿ- ಕಮಾನು ಕಟ್ಟಿತು ಕಾಮನ ಬಿಲ್ಲು { ಕಥಾ ಸಂಕಲನ -2016 }

ಡಾ / ವಿಜಯಾ - ಚಿತ್ತ ಕೆತ್ತಿದ ಚಿತ್ರ { ಲೇಖನಗಳು -2016 }

ಡಾ/ ಮಲ್ಲಿಕಾರ್ಜುನ ಮನಸೂರ ಸಮ್ಮಾನ ಪ್ರದಾನ ಸಮಾರಂಭ -31- 12- 2016

2016ರಲ್ಲಿ ನಾವು ನಂಬಿಯೇ ಬಿಟ್ಟ ಟಾಪ್ ಟೆನ್ ಫೇಕ್ ನ್ಯೂಸ್‌ಗಳು

ಕೀರ್ತಿ ಜೈನ್- View from the other side -Anuj Kumar

ಪುಸ್ತಕ ಮಾರಾಟ ಮೇಳಕ್ಕೆ ಬಾರದ ಜನ

ನೋಟಿನ ಬರ: ಅರೆಹೊಟ್ಟೆಯ ಹಾಹಾಕಾರ

ಮುರಳೀಧರ ಉಪಾಧ್ಯ ಹಿರಿಯಡಕ - ಕಯ್ಯಾರ ಅವರ ಕಾವ್ಯ

ಅಸ್ಪ್ರಶ್ಯತೆಯ ಅಪಾಯದ ಕುರಿತು ಎಚ್ಚರ - Talking to children about untouchability

ಕೆ. ಎಸ್. ನ - - ಇವ್ರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ

Photo

Thursday, December 29, 2016

ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆಯ ಕನ್ನಡಿಗರ ಪ್ರಶ್ನೆಗಳು -- Why should we study in Kannada, ask border villagers

ಜಾತಿ ‘ಟೌನ್‌ಶಿಪ್‌’ ಛಿದ್ರತೆಯ ಸಂಕೇತ - ದೇವನೂರು

ದೇವನೂರು ಮಹಾದೇವ { Audio } -ಕುವೆಂಪು ರಾಷ್ತ್ರೀಯ ಪ್ರಶಸ್ತಿ ಸ್ವೀಕಾರ ಭಾಷಣ --29-12-2016

Vocaroo Voice Message -Pls clik here to listen Devanooru Mahadeva , Kuvempu National Award Speech 29- 12-2016



ನೋಟು ಬದಲಾವಣೆ ಸಂಕಷ್ಟದಲ್ಲಿ ಬಳಲಿದ ಜನರು: ದೇವನೂರ ಮಹಾದೇವ

ಬಾಲ ಸುಬ್ರಹ್ಮಣ್ಯ ಕಂಜರ್ಪಣೆ- ಸಾಮಾಜಿಕ ಮಾಧ್ಯಮಗಳೆಂಬ ಅಂತರ್ಜಾಲದ ಆಕಾಶ

ಕನ್ನಡಕ್ಕೆ ಹೊಸತೊಂದು ಸಾಹಿತ್ಯ ಚರಿತ್ರೆ ಬೇಕೆ ?

No automatic alt text available.

Tuesday, December 27, 2016

ಅರಕೆರೆ ಜಯರಾಮ್- ಜಮ್ಮು - ಕಾಶ್ಮೀರ: ನ್ಯಾಯಾಲಯ ಹೇಳಿದ ಸತ್ಯ

ದೇವನೂರು ಕಂಡಂತೆ ಚೆನ್ನಿ |

ದೇವನೂರು ಕಂಡಂತೆ ಚೆನ್ನಿ |






ಅಮೂರ್ತತೆ ಮತ್ತು ಪರಿಸರ - ರಾಜೇಂದ್ರ ಚೆನ್ನಿ

ಜಿ. ವೆಂಕಟಸುಬ್ಬಯ್ಯಗೆ ದತ್ತಿ ಪ್ರಶಸ್ತಿ ಪ್ರದಾನ

ಬಾಲ ಸುಬ್ರಹ್ಮಣ್ಯ ಕಂಜರ್ಪಣೆ - ಕನ್ನಡ ಭಾಷಾ ಸಂಬಂಧ

Monday, December 26, 2016

ಕೆ. ಸತ್ಯನಾರಾಯಣ -- ಜಾತಿ ವಿನ್ಯಾಸದ ಸೂಕ್ಷ್ಮಗಳು

ಸುಧಾ ರಘುನಾಥನ್‌ ಅವರಿಗೆ ‘ಸಾಮಗಾನ ಮಾತಂಗ’ ಪ್ರಶಸ್ತಿ -2016

ಬಿ. ಆರ್. ಲಕ್ಷ್ಮಣ ರಾವ್- - ‘ಕಬಂಧಾಸುರ’ ಬೆಂಗಳೂರು

ಎತ್ತಿನಹೊಳೆ: ಸಂಧಾನ ವಿಫಲ

ಜಿ. ಎನ್. ಮೋಹನ್ - ‘ಮುತ್ತುಪ್ಪಾಡಿ’ಯ ಕನ್ನಡಿಯಲ್ಲಿ ಕಂಡ ಬೊಳುವಾರು

Sunday, December 25, 2016

ಕಲಾಸಿಪಾಳ್ಯದಲ್ಲಿ ಸುಸಜ್ಜಿತ ಬಸ್‌ ನಿಲ್ದಾಣ ನಿರ್ಮಾಣ - ಪಕ್ಷಿಗಳ ಆವಾಸ ಸ್ಥಾನಕ್ಕೆ ಕುತ್ತು

ಹಿರಿಯ ಸಿರಿ - ವಾರ್ಷಿಕ ಸಂಚಿಕೆ -2015-2016 { ಸರಕಾರಿ ಪ್ರಥಮ ದರ್ಜೆ ಕಾಲೇಜು , ಹಿರಿಯಡಕ - -576113

Photo

ಎಸ್. ಆರ್. ವಿಜಯಶಂಕರ - - ಇಂಗ್ಲಿಷ್‌ ಥಳಕಿನ ಉತ್ಸವ

ನನ್ನ ಇಷ್ಟದ ಪುಸ್ತಕ -2016

ನನ್ನ ಇಷ್ಟದ ಪುಸ್ತಕ | ಪ್ರಜಾವಾಣಿ

Kannada Best Books -2016 { Selected by various critics }

ಜಿ. ಎನ್. ರಂಗನಾಥ ರಾವ್ - ಬೊಳುವಾರರಿಗೆ ಅಭಿನಂದನೆಗಳು

ಜನ ನುಡಿ -2016 - - ಕವಿ ಗೋಷ್ಠಿ ವರದಿ - ಅಭಿಮತ ಮಂಗಳೂರು

ಕವಿಗೋಷ್ಠಿ ವರದಿ
“ಇಲ್ಲಿ ಬಣ್ಣಗಳೆಲ್ಲವ ಗುತ್ತಿಗೆ ಹಿಡಿದಿದ್ದಾರೆ,
ಮತ್ತೆ ತಮ್ಮ ತಮ್ಮ ಬಾವುಟಗಳಿಗೆ ಮೆತ್ತಿಕೊಂಡಿದ್ದಾರೆ,
ಸತ್ತ ಪ್ರಾಣಿಯೂ ಈಗ ದೈವವಾಗಿದೆ,
ಹೊಟ್ಟೆಗಿಲ್ಲದೇ ಜನ ಸತ್ತರೂ ದನ ಸಾಯಕೂಡದು,
ದನ ಸತ್ತರೂ ಜನ ತಿನ್ನಕೂಡದು”
ಮಂಗಳೂರು ನಂತೂರಿನ ಶಾಂತಿಕಿರಣ ಸಭಾಂಗಣದಲ್ಲಿ ಅಭಿಮತ ಆಯೋಜಿಸಿರುವ ಜನನುಡಿ-2016 ಸಮಾವೇಶದ ಎರಡನೇ ದಿನವಾದ ಭಾನುವಾರ ಕವಿಗೋಷ್ಠಿಯಲ್ಲಿ ಸಚಿನ್ ಅಂಕೋಲ ಅವರು ಹಿಂದೆ ಮತ್ತು ಮುಂದೆ ಎಂಬ ಶೀರ್ಷಿಕೆಯ ಈ ಕವನ ವಾಚಿಸಿದಾಗ ಚಪ್ಪಾಳೆಯ ಸುರಿಮಳೆಯಾಗಿತ್ತು.
ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಕವಿಗಳು ವರ್ತಮಾನದ ಸ್ಥಿತಿಗತಿಗಳನ್ನೇ ವಿಶ್ಲೇಷಿಸಿದ್ದು ವಿಶೇಷ.
ವಾಸುದೇವ ನಾಡಿಗ್ ಅವರು “ಕವಿತೆಯೊಂದರ ಮರಣೋತ್ತರ ಪರೀಕ್ಷೆ” ಕವನವನ್ನು ಮುಗಿಸುವಾಗ “ಇನ್ನು ಬರೆಯಲಾಗುತ್ತಿಲ್ಲ, ಸೋತ ಕವಿತೆಯೊಂದರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ” ಎನ್ನುತ್ತಾ ಕವಿತೆ ಬರೆಯಲಾಗದ, ಗೆದ್ದ ಕವಿತೆಗಳ ಪೊಳ್ಳುತನಗಳನ್ನು ವಿಶ್ಲೇಷಿಸಿದರು. “ಕತ್ತರಿಸಿಟ್ಟ ಮರದ ಬೊಡ್ಡೆಯ ಮೇಲೆ ನಾಳಿನ ಭವಿಷ್ಯ ಬರೆಯಲು ನೂಕುನುಗ್ಗಲು” ಎಂದರು.
ರಮೇಶ್ ಅರೋಲಿ ಅವರು ತಮ್ಮ ಕವನವನ್ನು ಹಾಡುತ್ತಾ “ಮೇಕೆಗೆ ಮೇವಿಲ್ಲ, ಮೇಕಿಂಗ್ ಇಂಡಿಯಾ” ಎಂದು ರಾಜಕೀಯ ವಿಡಂಬನಾತ್ಮಕ ಸ್ಥಿತಿಯನ್ನು ಹೇಳಿದರು.
ಹೇಮಲತಾ ಮೂರ್ತಿ ಅವರು “ಅಂತರಂಗದ ಅಳಲಿಗೆ ಕಣ್ಣು ಕಿವಿ ಮುಚ್ಚಿ ಕುಳಿತ” ಸ್ಥಿತಿಯನ್ನು ಬಿಂಬಿಸಿದರು.
ಪ್ರದೀಪ್ ಮಾಲ್ಗುಡಿ ಅವರು “ಮಾದ್ಯಮ ಉದ್ಯಮ” ಕವಿತೆಯಲ್ಲಿ ಮಾದ್ಯಮ ಕ್ಷೇತ್ರದ ಕೆಲವರ ನೈತಿಕತೆಯನ್ನು ಪ್ರಶ್ನಿಸುವಂತೆ “ಕೊಟ್ಟದ್ದು ಯಾರೋ, ಆದರೆ ಪಡೆದಿದ್ದು ನಾನೇ, ಈಗ ಕೈಸೋತು ಬರೆಯಲಾಗುತ್ತಿಲ್ಲ” ಎಂದರು.
ಯಂಶ ಬೆಂಗಿಲ ಅವರು “ಅಪ್ಪ ಮತ್ತು ವಾಸು” ಎಂಬ ಕವನದಲ್ಲಿ ಸಮಾಜದಲ್ಲಿನ ತಾರತಮ್ಯ-ಧ್ವೇಷವನ್ನು ತೆರೆದಿಡುತ್ತಾ ಕರಾವಳಿ ಸಾಗುತ್ತಿರುವ ದಿಕ್ಕಿನತ್ತ ಬೆಳಕು ಚೆಲ್ಲಿದರು.
ಡಾ. ಕಾವ್ಯಶ್ರೀ ಎಚ್. ಅವರು “ಕ್ಷಮಿಸಿಬಿಡು ವೇಮುಲ ಸಹಿಸುವುದನ್ನು ಕಲಿಯುತ್ತಾ ಕಲಿಯುತ್ತಾ ನಾನು ಅಸಹನೆಯನ್ನು ಅಡವಿಟ್ಟಿದ್ದೇನೆ, ಬೀದಿಗಿಳಿಯಲಾರೆ” ಎಂದರು.
ವೀರಪ್ಪ ತಾಳದವರ್ ಅವರು, “ತಲೆ ಚಿಟ್....ಹಿಡಿದದ” ಕವನ ವಾಚಿಸುತ್ತಾ, “ನನಗಿಗ ತಲಿ ಚಿಟ್ ಹಿಡಿದದ! ದಿನಕ್ಕೊಂದು ಕಾಯ್ದೆ ಜಾರಿ ಕಂಡು ದೇಶ ಆಳೋರ್ದ ನೀತಿ ಕಂಡು ತಲಿ ಕೆಟ್ಟಂಗ ಆಗೆದ ನನಗಿಗ ನೋಡಿ ಎತ್ಲಾಗರ ಓಡಿ ಹೋಗುವಂಗ ಆಗೆದ” ಎನ್ನುತ್ತಾ ಪ್ರಸ್ತುತ ಭಾರತದ ಪರಿಸ್ಥಿತಿ ತೆರೆದಿಟ್ಟರು.
ಡಾ. ಅರುಂಧತಿ ಅವರು “ಅಂಬೇಡ್ಕರ್” ಕವನವನ್ನು ಮಗುವಿನ ಕಣ್ಣುಗಳಲ್ಲಿ ನೋಡುತ್ತಾ, “ಅಮ್ಮಾ ಅಲ್ಲಿ ಅಂಬೇಡ್ಕರ್ ಅನ್ನೋ ತಿಂಡಿ ಕೊಡ್ತಾರಾ” ಎಂದಾಗ ತಾಯಿಯು “ತಿಂಡಿಯಲ್ಲ ಮಗಳೇ, ಮುಟ್ಟಲಾಗದ ಅಕ್ಷರಗಳ ದಕ್ಕಿಸಿಕೊಟ್ಟ ಸಂಜೀವಿನಿ”ಯನ್ನ ಎಂದು ಮಾರ್ಮಿಕವಾಗಿ ಉತ್ತರಿಸಿದ್ದನ್ನು ವಾಚಿಸಿದರು.
ದೀಪಾ ಗಿರೀಶ್ ಅವರು, “ಅವರು ನಿಮ್ಮನ್ನು ಒದ್ದ ಕಾಲಿಗೆ ಹುಟ್ಟಿದ ಕೂಸು ನಾನು” ಎಂದು ಅಂಬೇಡ್ಕರ್ ಅವರನ್ನು ಸ್ಮರಿಸಿದರು.
ಚಾಂದಿನಿ ಅವರು ನಾನು ಅವಳಾಗಲು ಹೋದಾಗ ಆದ ಅನುಭವಗಳನ್ನು ಹಂಚಿಕೊಂಡರು.
ಸೈಫ್ ಜಾನ್ಸೆ ಕೊಟ್ಟೂರು, “ಕಡಲ ಚೂರುಗಳು ಜೋಳಿಗೆಗೆ ತುಂಬಿ ಊರ ಹಬ್ಬಿದ್ದು, ನೀರಡಿಸಿದೆ ಕರಾವಳಿಗೆ” ಎಂದರು.
ವಿಪ್ಲವಿ ರಾಯಚೂರು ಅವರು “ಸ್ತ್ರೀಸಂಭೂತೆ” ಕವನ ವಾಚಿಸುತ್ತಾ “ನಿರುತ್ತರಳಾಗಿದ್ದೇನೆ ಅನೈತಿಕತೆಯ ಮಾರಣಹೋಮದಲ್ಲಿ” ಎಂದರು.
ಚೀಮನಹಳ್ಳಿ ರಮೇಶ್ ಬಾಬು ಅವರು, “ಅಪ್ಪನ ಹಣೆಯ ಕಿಂಡಿ”, ಕಾವ್ಯಶ್ರೀ ಎಚ್. ನಾಯ್ಕ್ ಅವರು, “ನಿನ್ನ ಮೌನದ ಮಹಾಮನೆ” ಎಂಬ ಕವನ ವಾಚಿಸಿದರು. ಮಂಜುಳಾ ಹುಲಿಕುಂಟೆ ಅವರು, “ಯುದ್ಧದ ಬಗ್ಗೆ ನನಗೆ ಮೋಹವಿಲ್ಲ” ಎನ್ನುತ್ತಾ ಅದರ ಭಯಾನಕತೆಯನ್ನು ತೆರೆದಿಟ್ಟರು. ರಮೇಶ್ ಹಿರೇಜಂಬೂರು ಅವರು, “ಕೋವಿಯೊಳಗಿನ ಸತ್ಯ”, ಅಸಂಗಿ ಗಿರಿಯಪ್ಪ ಅವರು, “ಹೆಜ್ಜೆ ಮೂಡಿಸಿದ ಸದ್ದು” ಕವನ ವಾಚಿಸಿದರು. ಗುರು ಸುಳ್ಯ, ದುರ್ಗೇಶ್ ಪೂಜಾರಿ, ರೂಪಶ್ರೀ ಕಲ್ಲಿಗನೂರು, ಚಾಂದ್ ಬಾಷಾ ಅವರೂ ಸಹ ಕವನ ವಾಚಿಸಿದರು.
***
ಅಭಿವೃದ್ಧಿ ಎಂಬುದು ಪೋಷಾಕು- ಮೂಡ್ನಾಕೂಡು ಚಿನ್ನಸ್ವಾಮಿ
ಅಭಿವೃದ್ಧಿ ಎಂಬುದು ಒಂದು ಪೋಷಾಕು ಆಗಿದೆ ಎಂದು ಕವಿ ಮೂಡ್ನಾಕೂಡು ಚಿನ್ನಸ್ವಾಮಿ ಹೇಳಿದರು.
ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಂಸ್ಕೖತಿಕ ಯಜಮಾನಿಕೆಯನ್ನು ಮರುಸ್ಥಾಪಿಸುವ ಪ್ರಯತ್ನಗಳು ಅವರಿಂದ (ಸಂಘ ಪರಿವಾರ) ನಡೆಯುತ್ತಿದೆ ಎಂದು ವಿಶ್ಲೇಷಿಸಿದರು.
ಇಂದು ಪ್ರಜಾಪ್ರಭುತ್ವ ಅನೀಮಿಕ್ ಆಗಿದೆ. ಶಕ್ತಿ ಸಂಚಾರ ಕಡಿಮೆ ಆಗಿದೆ. ಯಾವಾಗ ಕೋಮಾಕ್ಕೆ ಹೋಗುತ್ತದೆಯೋ ಗೊತ್ತಿಲ್ಲ ಎನ್ನುತ್ತಾ ಪ್ರಸ್ತುತ ಪರಿಸ್ಥಿತಿಯನ್ನು ಬಿಡಿಸಿಟ್ಟರು.
ಜಾತಿ ಎನ್ನುವುದು ಒಂದು ಕ್ಯಾನ್ಸರ್. ಜಾತಿ ವಿನಾಶ ಆಗದೇ ನಮ್ಮ ದೇಶ ಅಭಿವೖದ್ಧಿ ಆಗದು ಎಂದರು. ನಂತರ ಅವರು ತಮ್ಮ ಎರಡು ಕವನಗಳನ್ನು ವಾಚಿಸಿದರು.
ಹನುಮಂತಪ್ಪ ದುರ್ಗದ್ ಅವರು ಗೋಷ್ಠಿ ನಿರ್ವಹಿಸಿದರು.
Like
Comment

ವಿಚಾರ ಗೋಷ್ಠಿ- ಜಾತಿ ವಿನಾಶ ಮತ್ತು ನಾನು { VEDIO } { ಜನ ನುಡಿ ಮಂಗಳೂರು -2016 }

Saturday, December 24, 2016

ರಾಜೀವ ತಾರಾನಾಥ್ - ಬೊಳುವಾರು ಅವರ " ಸ್ವಾತಂತ್ರ್ಯದ ಓಟ " ಕಾದಂಬರಿ ಕುರಿತು

ಮುತ್ತುಪ್ಪಾಡಿಯಲ್ಲಿ ಸರಕು ಖಾಲಿಯಾಗುವುದಿಲ್ಲ - ಬೊಳುವಾರು { ಸಂದರ್ಶನ }

ಬೊಳುವಾರು {ಸಂದರ್ಶನ } - ದೇಶವೆಂದರೆ ‘ಇ–ಖಾತಾ’ ಆಗಿರುವ ಜಮೀನಲ್ಲ!

ಮನುಷ್ಯನಿಗೆ ಸ್ಪಂದಿಸದ ಬರಹ ‘ಬೂಸಾ ಸಾಹಿತ್ಯ’ -ಜನನುಡಿ ಉದ್ಘಾಟನೆಯಲ್ಲಿ ಸಾಹಿತಿ ಶರಣಕುಮಾರ್‌ ಲಿಂಬಾಳೆ

ಲಕ್ಷ್ಮೀಶ ತೋಳ್ಪಾಡಿ -- ಗೀತೆ: ಒಳಗಿನ ಸತ್ಯದ ಅಭಿಜ್ಞಾನ

ಸಲ್ಲಾಪ: ಕರಿಮರಿನಾಯಿ...................................ದ.ರಾ.ಬೇಂದ್ರೆ

ಬಿ. ಶ್ರೀನಿವಾಸ - ಕಿರಸೂರ ಗಿರಿಯಪ್ಪ ಅವರ ನಾಭಿಯ ಚಿಗುರು { ಕವನ ಸಂಕಲನ }

ಜನ ನುಡಿ -- ನೇರ ಪ್ರಸಾರ - Live in Face Book JANA NUDI LIVE (79) Abhimata Mangalooru

(79) Abhimata Mangalooru - Clik her to view

Friday, December 23, 2016

ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಸಾಹಿತ್ಯಗಳು ಮುಖ್ಯವಾಹಿನಿಗೆ ಬರಲಿ: ಲಿಂಬಾಳೆ

ಅರುಣ್ ಜೋಳದಕೂಡ್ಲಿಗಿ -- : ಲಿಂಗಾಂತರಿಗಳ ಹೋರಾಟದ ಕಥನ

ಕುವೆಂಪು ಅವರನ್ನು ಮೀರಿ ಬರೀಬೇಕು -- ಬೊಳುವಾರು

ಭಾಷೆಯ ಅಹಂಕಾರ ಅಪಾಯಕಾರಿ: ಹನೀಫ್

ಎಚ್ ಎಸ್ . ವೆಂಕಟೇಶಮೂರ್ತಿ -- ಅಡಿಗರ ಅಭ್ಯಾಸದ ಕೋಣೆಯಲ್ಲಿ ಕಿಟೆಲ್ ಡಿಕ್ಷ್ನರಿ..

ಎಚ್ ಎಸ್ ವಿ ಕಾಲಂ: ಅಡಿಗರ ಅಭ್ಯಾಸದ ಕೋಣೆಯಲ್ಲಿ ಕಿಟೆಲ್ ಡಿಕ್ಷ್ನರಿ.. |

                                                                           

 ವಿನುತ ಸಂಜಯ ಸಹಿತ ಕೌರವHSV
ಜನಪ ಬಂದನು ತತ್ಸರೋವರ
ಕನಿಲನೆದಿರಾದನು ಸುಗಂಧದ ಶೈತ್ಯಪೂರದಲಿ|
ತನುವಿಗಪ್ಯಾಯನದಿನಂತ
ರ್ಮನಕೆ ಪಲ್ಲಟವಾಯ್ತು ಭೀಮನ
ಜನಕನರಿದನು ತನ್ನ ಗುಪ್ತ ಸ್ಥಾನ ಸಂಗತಿಯ||
      - ಕುಮಾರವ್ಯಾಸ

ರಾಜ್ಯದ ಎಷ್ಟು ಸರಕಾರಿ ಕಾಲೇಜುಗಳಲ್ಲಿ ಖಾಯಂ ಪ್ರಾಚಾರ್ಯರಿದ್ದಾರೆ ?

ಬಂಗಾಳಿಯ ಶಂಖಾ ಘೋಷ್ ರಿಗೆ 2016 ನೆ ಸಾಲಿನ ಪ್ರತಿಷ್ಠಿತ ಜ್ಞಾನಪೀಠ ಪ್ರಶಸ್ತಿ

ಪಶ್ಚಿಮ ಘಟ್ಟದ ಹಲವೆಡೆ ಶೋಲಿಗ ಕಪ್ಪೆ ಪತ್ತೆ

ದೇವನೂರಿನಲ್ಲಿ ಜೈಮಿನಿ ಭಾರತ ಮಹಾಕಾವ್ಯದ ವೈಭವ

ಬರಗೂರು ರಾಮಚಂದ್ರಪ್ಪ --- ಶ್ರೀಸಾಮಾನ್ಯರ ಸಮಾನಾಂತರ ಪುರಾಣ ಕಥನ

ಡಾ ರಾಜೇಗೌಡ ಹೊಸಹಳ್ಳಿ --- ಸ್ವಾತಂತ್ರ್ಯದ ಓಟ : ಒಂದು ಕಿರುನೋಟ

ಮನೆಯೊಳಗೂ ಪ್ರವೇಶಿಸಿದ ಫ್ಯಾಸಿಸಂ

ಪೃಥ್ವಿ ದತ್ತ ಚಂದ್ರ ಶೋಭಿ - ಸುಸಂಬದ್ಧವಾದ ಸಾಹಿತ್ಯಕ ಚರ್ಚೆಯ ಕೊರತೆ

Thursday, December 22, 2016

ಜ. 20ರಿಂದ ಧಾರವಾಡ ಸಾಹಿತ್ಯ ಸಂಭ್ರಮ

ಕಮಲಾಹಂಪನಾ, ಪ್ರಕಾಶ್‌ರೈ ಸಹಿತ ಏಳು ಗಣ್ಯರಿಗೆ ‘ಸಂದೇಶ’ ಪುರಸ್ಕಾರ -2016

ಯು. ಆರ್. ಅನಂತಮೂರ್ತಿ - ಅಭಿವೃದ್ದಿ , ರಾಷ್ತ್ರೀಯತೆ , ಭಯೋತ್ಪಾದನೆ

ಬನ್ನಂಜೆ ಷಡ್ದರ್ಶನ -ಪುಸ್ತಕ ಬಿಡುಗಡೆ - 27-12-2016

Photo

ಕಾಡಿಗೆ ಹೋಗ್ತೀಯಾ ಪುಟ್ಟಿ ಕಾಡಿಗೆ ಹೋಗ್ತೀಯಾ { ನಿ- ಐ. ಕೆ. ಬೊಳುವಾರು }

Wednesday, December 21, 2016

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು -2016

ಎಂಟು ಭಾಷೆಗಳಲ್ಲಿ ’ ನೀಟ್ ’ ಪರೀಕ್ಷೆ -- ಕನ್ನಡದ ಕಡೆಗಣನೆ NEET exam in 8 languages but not in Kannada -

ವಡ್ದಗೆರೆ ಚಿನ್ನಸ್ವಾಮಿ - ದೇವನೂರು ಹೇಳಿದ ಸತ್ಯ : ಯಾವುದು ಇಲ್ಲಿ ಸ್ಥಿರವಲ್ಲ…

ವಿ. ಎನ್. ಲಕ್ಷ್ಮೀನಾರಾಯಣ - ನಾನು ಓದಿದ ’ಸ್ವಾತ೦ತ್ರ್ಯದ ಓಟ’…

ನಾನು ಓದಿದ ’ಸ್ವಾತ೦ತ್ರ್ಯದ ಓಟ’…



ಬೊಳುವಾರು ಅವರ ಸ್ವಾತಂತ್ರ್ಯದ ಓಟ

ಬೊಳುವಾರು - - ಸ್ವಾತಂತ್ರ್ಯದ ಓಟ ಕಾದಂಬರಿಯ ಕುರಿತು



ಬೊಳುವಾರು [ ಸಂದರ್ಶನ }



ಬೊಳುವಾರು { Audio } - Boluvaru Mahammad Kunhi-AUDIO -ಮಕ್ಕಳ ಸಾಹಿತ್ಯ ಸಮ್ಮೇಳನ

ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಬೊಳುವಾರು ಮಹಮ್ಮದ್ ಕುಂಞಿ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ | ಪ್ರಜಾವಾಣಿ

ಗೆಳೆಯ ಬೊಳುವಾರು ಅವರಿಗೆ ಅಭಿನಂದನೆಗಳು -ಮುರಳೀಧರ ಉಪಾಧ್ಯ






ನಿರಂಜನ ಆರಾಧ್ಯ --ಸರಕಾರಿ ಶಾಲೆಗಳ ಸ್ಥಿತಿ - ಜಡಸ್ಪಂದನದ ವರಸೆಗಳು

ಯರ್ಮುಂಜ ರಾಮಚಂದ್ರ --ಯಾರಿಲ್ಲಿಗೆ ಬಂದರು ಕಳೆದಿರುಳು ?