stat Counter



Showing posts with label ಎಚ್. ಎಸ್ ವೆಂಕಟೇಶಮೂರ್ತಿ. Show all posts
Showing posts with label ಎಚ್. ಎಸ್ ವೆಂಕಟೇಶಮೂರ್ತಿ. Show all posts

Monday, June 29, 2020

ಮುರಳೀಧರ ಉಪಾಧ್ಯ ಹಿರಿಯಡಕ - ಎಚ್. ಎಸ್. ವೆಂಕಟೇಸಮೂರ್ತಿ ಅವರ ’ ಸುನೀತ ಭಾವ " { 2015 }

 ಇತಾಲಿಯಾದಲ್ಲಿ ಬಾಲ್ಯ ಕಳೆದು , ಇಂಗ್ಲೆಂಡ್ ಮೂಲಕ ಕನ್ನಡಕ್ಕೆ ಬಂದ ಸಾನೆಟ್ , ’ಅಷ್ಟಷಟ್ಪದಿ ’ , ’ ಚತುರ್ದಶಪದಿ’ ಯಾಗಿ ತಿಣುಕುತ್ತ ಕನ್ನಡಿತಿ  ’ ಸುನೀತ ’ ವಾಗಿದೆ . ಗೋವಿಂದ ಪೈಗಳು  ನಾಂದಿ ಹಾಡಿದ ಕನ್ನಡ ಸಾನೆಟ್ ಪ್ರಕಾರವನ್ನು ಬೇಂದ್ರೆ , ಕುವೆಂಪು , ಮಾಸ್ತಿ , ಎಸ್. ವಿ. ಪರಮೇಶ್ವರ ಭಟ್ಟ ರಂಥ ಹಿರಿಯರು , ವೆಂಕಟಗಿರಿ ಕಡೆಕಾರ್ ಅವರಂಥ ಕಿರಿಯರು ಸೃಜನಶೀಲವಾಗಿ ಬೆಳೆಸಿದ್ದಾರೆ.ಕುವೆಂಪು ಅವರ ’ ಕೃತ್ತಿಕೆ ’ [ ೧೯೪೬] ಯಲ್ಲಿ  ತೊಂಬತ್ತಾರು ಸಾನೆಟ್ ಗಳಿವೆ .
ಎಚ್. ಎಸ್. ವೆಂಕಟೇಶಮೂರ್ತಿ ಅವರ ’ ಸುನೀತ ಭಾವ ’ [ ೨೦೧೫ ] ದಲ್ಲಿ ಎಪ್ಪತ್ತೊಂದು ಸುನೀತಗಳಿವೆ. ಬೇಂದ್ರೆ , ಕುವೆಂಪು , ಅಡಿಗ , ಕೆ. ಎಸ್. ನ , ಯು. ಆರ್. ಅನಂತಮೂರ್ತಿ , ದೇವನೂರು , ನಿಸಾರ್ , ವೈದೇಹಿ , ವಸುಧೇಂದ್ರ , ಸಿದ್ದಲಿಂಗಯ್ಯ , ಜಿ. ಎಸ್. ಶಿವರುದ್ರಪ್ಪ , ರವಿ ಬೆಳಗೆರೆ ಮತ್ತಿತರ  ಸಮಕಾಲೀನ ಕನ್ನಡ ಸಾಹಿತಿಗಳ , ತನ್ನ ಮಿತ್ರರ  ಸಮೀಪ ಚಿತ್ರಗಳನ್ನು ಎಚ್. ಎಸ್. ವಿ, ಈ ಸಾನೆಟ್ ಗಳಲ್ಲಿ ನೀಡಿದ್ದಾರೆ.
 ಹೆಚ್ಚಿನ ಸಾನೆಟ್ ಗಳು ಸಾಹಿತಿಗಳ ಒಡನಾಟದ ಅನುಭವದಿಂದಾಗಿ ಪುಟ ಬಂಗಾರದ  ಪ್ರತಿಮಾಲೋಕವೊಂದನ್ನು  ನಿರ್ಮಿಸಿವೆ .’ ಅಳಿಲು ರಾಮಾಯಣ ’ ದ  ನಾಟಕಕಾರ ಎಚ್. ಎಸ್. ವೆಂಕಟೇಶಮೂರ್ತಿ ಅವರನ್ನು , ನಾಟಕ ಪ್ರದರ್ಶನದಂದು ವೇದಿಕೆಗೆ ಕರೆಯಲು  ಮರೆತ ಬಿ. ವಿ. ಕಾರಂತರು ಎಚ್. ಎಸ್. ವಿ ಅವರ ಮನೆಗೆ ಬಂದು ಕ್ಷಮೆ ಯಾಚಿಸಿದ ಪ್ರಸಂಗದಲ್ಲಿ ಕಾರಂತರ ವಿನೀತ ಭಾವದ ವ್ಯಕ್ತಿತ್ವ ಕಂಗೊಳಿಸುತ್ತದೆ . ಪು. ತಿ. ನ ಅವರರನ್ನು ಕುರಿತ ಸಾನೆಟ್ ಲಘಿಮಾ        ಕೌಶಲದ ಹಕ್ಕಿಯ  ರೂಪಕದಲ್ಲಿ ಆಪ್ತವಾಗುತ್ತದೆ .’ ಕವಡೆಯಾಟದ ಅನಿಮಿತ್ತ ಕಾರುಣ್ಯ ಕವಿಗಷ್ಟೆ ಗೊತ್ತು ’ ಎಂದು ಮುಕ್ತಾಯಗೊಳ್ಳುವ ಎಸ್. ಮಂಜುನಾಥ್ ಕುರಿತ ಸಾನೆಟ್ ನಲ್ಲಿ ಕವಡೆಯಾಟದ ಧ್ವನಿಪೂರ್ಣ ರೂಪಕವಿದೆ .
ಎಚ್. ಎಸ್. ವೆಂಕಟೇಶಮೂರ್ತಿ ಅವರು  ಕುಂದಣಿಸಿದ ಸಾಹಿತಿಗಳು ನಿಮ್ಮ ಖಾಸಗಿ ನೆನಪುಗಳಲ್ಲಿ ಇದ್ದರೆ ಈ ಸಾನೆಟ್ ಗಳು ನಿಮಗೆ ಹೆಚ್ಚು ಖುಷಿ ಕೊಡಬಹುದು . ಚಂಪಾ , ಜಯಂತ ಕಾಯ್ಕಿಣಿ , ಡುಂಡಿರಾಜ್ , ಕೆ. ವಿ. ತಿರುಮಲೇಶ್ , ಪ್ರತಿಭಾ ನಂದಕುಮಾರ್ , ಎಸ್. ಎಲ್. ಭೈರಪ್ಪ , ಎಸ್. ಎಸ್. ರಾಘವೇಂದ್ರ ರಾವ್ , ಕೆ. ಸತ್ಯನಾರಾಯಣ ಇವರನ್ನು ಕುರಿತ ಸಾನೆಟ್ ಗಳಲ್ಲಿ ಆಯಾ ವ್ಯಕ್ತಿತ್ವದ ಚಹರೆಗಳು ಸೊಗಸಾಗಿ ಮೂಡಿ ಬಂದಿವೆ .
 ’ ಒಗ್ಗರಣೆಯ ಮಜವೇ ನಿಜವಾದ ಮಜ, ಮಾತು ಬೇಕೆಂದ ಹಾಗೆ ಆಡುವುದು ನಿಮ್ಮ ಕೈಯ್ಯಲ್ಲಿ ’ [ ಚಂಪಾ ], ’ ತೇಲುನೋಟಕ್ಕೆ  ಸರಳವೆಂಬಂತೆ  ತೋರುವ        ನಿಮ್ಮ ಕಾವ್ಯದ  ಒಳಗೆ ಎಷ್ಟು ಮುಳುಗಿದರಷ್ಟಾಳ ’ [ ಕೆ. ವಿ. ತಿರುಮಲೇಶ್ ] , ’ಆಡುವ ಮುನ್ನ ಮೌನ , ಆಡಿದ್ದಾದ ಮೇಲೂ ಮೌನ .ಅದೇ ವೈನ .ಆಕಾಶದಲ್ಲಿ ನಿಶ್ಶಬ್ದವಾಗುರಿವ ಕೆಂಗದಿರ ನಾಲಗೆ ’[ ದೇವನೂರು ಮಹಾದೇವ ] ,’ ಭಾಷೆಯಲ್ಲಿ ಬೇಷರತ್ತು ಮಗ್ನಗೊಳ್ಳುವ ಶ್ಲೇಷಶಾಯಿ ಆಗದೆ ಇದೆಲ್ಲ ಆಗೊಲ್ಲ ಮಾರಾಯರೇ ’[ ಡುಂಡಿರಾಜ್ ] , ಇಂಥ ಅವಿಸ್ಮರಣೀಯ ಸಾಲುಗಳು ’ ಸುನೀತಭಾವ’ ದಲ್ಲಿವೆ ." ಮಾಸ್ತಿಯವರೊಂದಿಗೆ ತೀರ್ಥ ಸೇವನೆಗೆಂದು ಎಂದು ನೀವು ಹೋದದ್ದು ? " [ ಸಿದ್ದಲಿಂಗಯ್ಯ ]  - ಇಂಥ ಸಾಲುಗಳಿಗೆ ಟಿಪ್ಪಣಿ , ವಿವರಣೆ ಬೇಕಾಗುತ್ತದೆ .’ ಸೆಲ್ಫಿ’ ಯಲ್ಲಿ ಎಚ್. ಎಸ್. ವಿ ಅವರ ಪ್ರಖರ  ಸ್ವವಿಮರ್ಶೆ ಕಾಣಿಸುತ್ತದೆ .
 ’ ಆಷ್ಟಷಟ್ಪದಿಯಲ್ಲಿ ಉಯ್ಯಾಲೆಯಾಡುತಿದೆ ಕೌತುಕದ ಬಗೆ ’ ಎಂಬ ಬೇಂದ್ರೆ ಸಾಲನ್ನು , ಕೆ. ಕೆ. ಹೆಬ್ಬಾರರ ರೇಖಾಲೀಲೆಗಳನ್ನು ನೆನಪಿಸುವ ಸುನೀತಗಳಿವು .ಸುನೀತವನ್ನು ತೆಕ್ಕೆಗೊಗ್ಗಿಸಿಕೊಳ್ಲುವುದು ಕವಿಗೆ  ಒಂದು ಅಗ್ನಿದಿವ್ಯ . ಅವಲೋಕಿತೇಶ್ವರನನ್ನು ಎವೆಯಿಕ್ಕದೆ ನೋಡುವಂತೆ  , ಓದಿ ಆಸ್ವಾದಿಸಬೇಕಾದ ಸಾನೆಟ್ ಸಂಕಲನ ’ ಸುನೀತಭಾವ ’. ಕವಿ ಎಚ್. ಎಸ್. ವೆಂಕಟೇಶಮೂರ್ತಿ ಅವರಿಗೆ ಅಭಿನಂದನೆಗಳು.
            - ಮುರಳೀಧರ ಉಪಾಧ್ಯ ಹಿರಿಯಡಕ
ಸುನೀತ ಭಾವ
 ಎಚ್. ಎಸ್. ವೆಂಕಟೇಶಮೂರ್ತಿ
 ಅಂಕಿತ ಪುಸ್ತಕ
  ೫೩ , ಶ್ಯಾಮ್ ಸಿಂಗ್ ಕಾಂಪ್ಲೆ಼ಕ್ಸ್ , ಗಾಂಧಿ      ಬಜಾರ್ ಮುಖ್ಯ ರಸ್ತೆ ,
 ಬೆಂಗಳೂರು - ೫೬೦೦೦೪
 ಬೆಲೆ- ರೂ ೧೫೦  . ಮೊದಲ ಮುದ್ರಣ -೨೦೧೫

Sunday, January 31, 2016

‘ಜ್ವರ ಬಂದರೆ ಕುಮಾರವ್ಯಾಸ ಭಾರತವನ್ನು ತಲೆಕೆಳಗಿಡುತ್ತಿದ್ದಳು’

‘ಜ್ವರ ಬಂದರೆ ಕುಮಾರವ್ಯಾಸ ಭಾರತವನ್ನು ತಲೆಕೆಳಗಿಡುತ್ತಿದ್ದಳು’: ‘ನನಗೆ ಜ್ವರ ಬಂದರೆ ನನ್ನಜ್ಜಿ ನನ್ನ ತಲೆದಿಂಬಿನ ಕೆಳಗೆ ಕುಮಾರವ್ಯಾಸ ಭಾರತದ ಕೃತಿಯನ್ನು ಇಡುತ್ತಿದ್ದಳು..’ ಹೀಗೆಂದವರು ಕವಿ ಎಚ್‌.ಎಸ್‌. ವೆಂಕಟೇಶಮೂರ್ತಿ.

Sunday, January 3, 2016

ಎಚ್. ಎಸ್. ವೆಂಕಟೇಶಮೂರ್ತಿ ಅವರ " ಸುನೀತಭಾವ " - ಮುರಳೀಧರ ಉಪಾಧ್ಯ ಹಿರಿಯಡಕ

 ಇತಾಲಿಯಾದಲ್ಲಿ ಬಾಲ್ಯ ಕಳೆದು , ಇಂಗ್ಲೆಂಡ್ ಮೂಲಕ ಕನ್ನಡಕ್ಕೆ ಬಂದ ಸಾನೆಟ್ , ’ಅಷ್ಟಷಟ್ಪದಿ ’ , ’ ಚತುರ್ದಶಪದಿ’ ಯಾಗಿ ತಿಣುಕುತ್ತ ಕನ್ನಡಿತಿ  ’ ಸುನೀತ ’ ವಾಗಿದೆ . ಗೋವಿಂದ ಪೈಗಳು  ನಾಂದಿ ಹಾಡಿದ ಕನ್ನಡ ಸಾನೆಟ್ ಪ್ರಕಾರವನ್ನು ಬೇಂದ್ರೆ , ಕುವೆಂಪು , ಮಾಸ್ತಿ , ಎಸ್. ವಿ. ಪರಮೇಶ್ವರ ಭಟ್ಟ ರಂಥ ಹಿರಿಯರು , ವೆಂಕಟಗಿರಿ ಕಡೆಕಾರ್ ಅವರಂಥ ಕಿರಿಯರು ಸೃಜನಶೀಲವಾಗಿ ಬೆಳೆಸಿದ್ದಾರೆ.ಕುವೆಂಪು ಅವರ ’ ಕೃತ್ತಿಕೆ ’ [ ೧೯೪೬] ಯಲ್ಲಿ  ತೊಂಬತ್ತಾರು ಸಾನೆಟ್ ಗಳಿವೆ .
ಎಚ್. ಎಸ್. ವೆಂಕಟೇಶಮೂರ್ತಿ ಅವರ ’ ಸುನೀತ ಭಾವ ’ [ ೨೦೧೫ ] ದಲ್ಲಿ ಎಪ್ಪತ್ತೊಂದು ಸುನೀತಗಳಿವೆ. ಬೇಂದ್ರೆ , ಕುವೆಂಪು , ಅಡಿಗ , ಕೆ. ಎಸ್. ನ , ಯು. ಆರ್. ಅನಂತಮೂರ್ತಿ , ದೇವನೂರು , ನಿಸಾರ್ , ವೈದೇಹಿ , ವಸುಧೇಂದ್ರ , ಸಿದ್ದಲಿಂಗಯ್ಯ , ಜಿ. ಎಸ್. ಶಿವರುದ್ರಪ್ಪ , ರವಿ ಬೆಳಗೆರೆ ಮತ್ತಿತರ  ಸಮಕಾಲೀನ ಕನ್ನಡ ಸಾಹಿತಿಗಳ , ತನ್ನ ಮಿತ್ರರ  ಸಮೀಪ ಚಿತ್ರಗಳನ್ನು ಎಚ್. ಎಸ್. ವಿ, ಈ ಸಾನೆಟ್ ಗಳಲ್ಲಿ ನೀಡಿದ್ದಾರೆ.
 ಹೆಚ್ಚಿನ ಸಾನೆಟ್ ಗಳು ಸಾಹಿತಿಗಳ ಒಡನಾಟದ ಅನುಭವದಿಂದಾಗಿ ಪುಟ ಬಂಗಾರದ  ಪ್ರತಿಮಾಲೋಕವೊಂದನ್ನು  ನಿರ್ಮಿಸಿವೆ .’ ಅಳಿಲು ರಾಮಾಯಣ ’ ದ  ನಾಟಕಕಾರ ಎಚ್. ಎಸ್. ವೆಂಕಟೇಶಮೂರ್ತಿ ಅವರನ್ನು , ನಾಟಕ ಪ್ರದರ್ಶನದಂದು ವೇದಿಕೆಗೆ ಕರೆಯಲು  ಮರೆತ ಬಿ. ವಿ. ಕಾರಂತರು ಎಚ್. ಎಸ್. ವಿ ಅವರ ಮನೆಗೆ ಬಂದು ಕ್ಷಮೆ ಯಾಚಿಸಿದ ಪ್ರಸಂಗದಲ್ಲಿ ಕಾರಂತರ ವಿನೀತ ಭಾವದ ವ್ಯಕ್ತಿತ್ವ ಕಂಗೊಳಿಸುತ್ತದೆ . ಪು. ತಿ. ನ ಅವರರನ್ನು ಕುರಿತ ಸಾನೆಟ್ ಲಘಿಮಾ        ಕೌಶಲದ ಹಕ್ಕಿಯ  ರೂಪಕದಲ್ಲಿ ಆಪ್ತವಾಗುತ್ತದೆ .’ ಕವಡೆಯಾಟದ ಅನಿಮಿತ್ತ ಕಾರುಣ್ಯ ಕವಿಗಷ್ಟೆ ಗೊತ್ತು ’ ಎಂದು ಮುಕ್ತಾಯಗೊಳ್ಳುವ ಎಸ್. ಮಂಜುನಾಥ್ ಕುರಿತ ಸಾನೆಟ್ ನಲ್ಲಿ ಕವಡೆಯಾಟದ ಧ್ವನಿಪೂರ್ಣ ರೂಪಕವಿದೆ .
ಎಚ್. ಎಸ್. ವೆಂಕಟೇಶಮೂರ್ತಿ ಅವರು  ಕುಂದಣಿಸಿದ ಸಾಹಿತಿಗಳು ನಿಮ್ಮ ಖಾಸಗಿ ನೆನಪುಗಳಲ್ಲಿ ಇದ್ದರೆ ಈ ಸಾನೆಟ್ ಗಳು ನಿಮಗೆ ಹೆಚ್ಚು ಖುಷಿ ಕೊಡಬಹುದು . ಚಂಪಾ , ಜಯಂತ ಕಾಯ್ಕಿಣಿ , ಡುಂಡಿರಾಜ್ , ಕೆ. ವಿ. ತಿರುಮಲೇಶ್ , ಪ್ರತಿಭಾ ನಂದಕುಮಾರ್ , ಎಸ್. ಎಲ್. ಭೈರಪ್ಪ , ಎಸ್. ಎಸ್. ರಾಘವೇಂದ್ರ ರಾವ್ , ಕೆ. ಸತ್ಯನಾರಾಯಣ ಇವರನ್ನು ಕುರಿತ ಸಾನೆಟ್ ಗಳಲ್ಲಿ ಆಯಾ ವ್ಯಕ್ತಿತ್ವದ ಚಹರೆಗಳು ಸೊಗಸಾಗಿ ಮೂಡಿ ಬಂದಿವೆ .
 ’ ಒಗ್ಗರಣೆಯ ಮಜವೇ ನಿಜವಾದ ಮಜ, ಮಾತು ಬೇಕೆಂದ ಹಾಗೆ ಆಡುವುದು ನಿಮ್ಮ ಕೈಯ್ಯಲ್ಲಿ ’ [ ಚಂಪಾ ], ’ ತೇಲುನೋಟಕ್ಕೆ  ಸರಳವೆಂಬಂತೆ  ತೋರುವ        ನಿಮ್ಮ ಕಾವ್ಯದ  ಒಳಗೆ ಎಷ್ಟು ಮುಳುಗಿದರಷ್ಟಾಳ ’ [ ಕೆ. ವಿ. ತಿರುಮಲೇಶ್ ] , ’ಆಡುವ ಮುನ್ನ ಮೌನ , ಆಡಿದ್ದಾದ ಮೇಲೂ ಮೌನ .ಅದೇ ವೈನ .ಆಕಾಶದಲ್ಲಿ ನಿಶ್ಶಬ್ದವಾಗುರಿವ ಕೆಂಗದಿರ ನಾಲಗೆ ’[ ದೇವನೂರು ಮಹಾದೇವ ] ,’ ಭಾಷೆಯಲ್ಲಿ ಬೇಷರತ್ತು ಮಗ್ನಗೊಳ್ಳುವ ಶ್ಲೇಷಶಾಯಿ ಆಗದೆ ಇದೆಲ್ಲ ಆಗೊಲ್ಲ ಮಾರಾಯರೇ ’[ ಡುಂಡಿರಾಜ್ ] , ಇಂಥ ಅವಿಸ್ಮರಣೀಯ ಸಾಲುಗಳು ’ ಸುನೀತಭಾವ’ ದಲ್ಲಿವೆ ." ಮಾಸ್ತಿಯವರೊಂದಿಗೆ ತೀರ್ಥ ಸೇವನೆಗೆಂದು ಎಂದು ನೀವು ಹೋದದ್ದು ? " [ ಸಿದ್ದಲಿಂಗಯ್ಯ ]  - ಇಂಥ ಸಾಲುಗಳಿಗೆ ಟಿಪ್ಪಣಿ , ವಿವರಣೆ ಬೇಕಾಗುತ್ತದೆ .’ ಸೆಲ್ಫಿ’ ಯಲ್ಲಿ ಎಚ್. ಎಸ್. ವಿ ಅವರ ಪ್ರಖರ  ಸ್ವವಿಮರ್ಶೆ ಕಾಣಿಸುತ್ತದೆ .
 ’ ಆಷ್ಟಷಟ್ಪದಿಯಲ್ಲಿ ಉಯ್ಯಾಲೆಯಾಡುತಿದೆ ಕೌತುಕದ ಬಗೆ ’ ಎಂಬ ಬೇಂದ್ರೆ ಸಾಲನ್ನು , ಕೆ. ಕೆ. ಹೆಬ್ಬಾರರ ರೇಖಾಲೀಲೆಗಳನ್ನು ನೆನಪಿಸುವ ಸುನೀತಗಳಿವು .ಸುನೀತವನ್ನು ತೆಕ್ಕೆಗೊಗ್ಗಿಸಿಕೊಳ್ಲುವುದು ಕವಿಗೆ  ಒಂದು ಅಗ್ನಿದಿವ್ಯ . ಅವಲೋಕಿತೇಶ್ವರನನ್ನು ಎವೆಯಿಕ್ಕದೆ ನೋಡುವಂತೆ  , ಓದಿ ಆಸ್ವಾದಿಸಬೇಕಾದ ಸಾನೆಟ್ ಸಂಕಲನ ’ ಸುನೀತಭಾವ ’. ಕವಿ ಎಚ್. ಎಸ್. ವೆಂಕಟೇಶಮೂರ್ತಿ ಅವರಿಗೆ ಅಭಿನಂದನೆಗಳು.
            - ಮುರಳೀಧರ ಉಪಾಧ್ಯ ಹಿರಿಯಡಕ
ಸುನೀತ ಭಾವ
 ಎಚ್. ಎಸ್. ವೆಂಕಟೇಶಮೂರ್ತಿ
 ಅಂಕಿತ ಪುಸ್ತಕ
  ೫೩ , ಶ್ಯಾಮ್ ಸಿಂಗ್ ಕಾಂಪ್ಲೆ಼ಕ್ಸ್ , ಗಾಂಧಿ      ಬಜಾರ್ ಮುಖ್ಯ ರಸ್ತೆ ,
 ಬೆಂಗಳೂರು - ೫೬೦೦೦೪
 ಬೆಲೆ- ರೂ ೧೫೦  . ಮೊದಲ ಮುದ್ರಣ -೨೦೧೫

Thursday, July 9, 2015

ಕಾವ್ಯಾ .ಎಸ್. ಕೋಳಿವಾಡ - ನಾನು ಮೆಚ್ಚಿದ ಪುಸ್ತಕ - ’ಉರಿಯ ಉಯ್ಯಾಲೆ ’

ನನ್ನ ಮೆಚ್ಚಿನ ಪುಸ್ತಕ : ಉರಿಯ ಉಯ್ಯಾಲೆ
ಪುಸ್ತಕ ಓದೋದು ನನ್ನ ಹವ್ಯಾಸ .ಓದ್ತ ಓದ್ತಾ ನಾನೇ ಆ ಪಾತ್ರವಾಗಿ ತನ್ಮೂಲಕ ಆ ಪಾತ್ರದ ಭಾವನೆಗಳನ್ನು ಅರಿಯೋದು ನನಗೆ ಇಷ್ಟ
ಇದು ದ್ರೌಪದಿಯ ಸ್ವಗತ. ಹೆಸರಿಗೆ ತಕ್ಕಂತೆ ಅವಳ ಮನಸಿನ ಬೇಗುದಿಯ ಬೆಂಕಿಯ ಮೇಲೆಯೇ ಸದಾ ತೊಯ್ದಾಡುವ ಪರಿಸ್ಥಿತಿ ಅವಳದ್ದು....ಉರಿಯ ಉಯ್ಯಾಲೆ ಜೀಕಿದಂತೆಲ್ಲಾ ಅವಳ ವ್ಯಕ್ತಿತ್ವದ ವಿವಿಧ ಆಯಾಮಗಳೂ ತೆರದುಕೊಳ್ಳುತ್ತಾ ಹೋಗುತ್ತದೆ...ಮಹಾಭಾರತದ ಮಹತ್ತರ ಶಕ್ತಿ ಸ್ವರೂಪಿಣಿಯೂ, ಪ್ರಕೃತಿಯ ಪ್ರತಿರೂಪವೇ ದ್ರೌಪದಿ.ಅಗ್ನಿಸುತೆಯವಳು . ಅವಳು ಪ್ರಕೃತಿ-ಪುರುಷರ ನಡುವಿನ ಸಂಬಂಧದೆಡೆಗೆ ಬೆರಳು ತೋರಿ ತನ್ನ ಐವರು ಗಂಡಂದಿರ ಜೊತೆಗಿನ ಸಂಬಂಧವನ್ನೂ ಬಿಚ್ಚಿಡುತ್ತಾಳೆ.... ಈ ಐವರನ್ನೂ ಮೀರಿ ತನ್ನ ಮನಸಿಗೆ ಬರುತ್ತಿದ್ದ ಆ ಸುಂದರ ಯಾರು ಎಂಬ ಪ್ರಶ್ನೆಗೆ ಸ್ವತಃ ದ್ರೌಪದಿಯ ಬಳಿಯೂ ಉತ್ತರವಿಲ್ಲ . ವಸ್ತ್ರಾಪಹರಣ ಸಂದರ್ಭದಲ್ಲಿ , ತನ್ನ ಐವರು ಮಕ್ಕಳೂ ಒಂದೇದಿನ ಸತ್ತಾಗ ಆ ತಾಯಿ ಹೃದಯ ಅನುಭವಿಸಿದ ನೋವು,ತಲ್ಲಣ , ಅಸುರಕ್ಷತೆ, ಅಪಮಾನ, ಯಾರಿಗೂ ಬೇಡ. ದ್ರೌಪದಿಯ ಈ ನೋವು ಕೇವಲ ಸ್ತ್ರೀ ಸಹಜ ನರಳುವಿಕೆಯಲ್ಲದೇ ಪುರುಷ ಪ್ರಧಾನ ಸಮಾಜದ ಅಸ್ತಿತ್ವವನ್ನೇ ತಿವಿಯುತ್ತೆ.
ಮಾನಹರಣ ಕಾಲದಲ್ಲಿ ನೆರವಿಗೆ ಬರದ ಸಂಸ್ಕೃತಿ ನಿರುಪಯುಕ್ತ ಎನ್ನುತ್ತಾಳೆ. ಕೊನೆಗೆ ಮಳೆ ಬಂದು ತನ್ನ ಮನದ ಬಿಸಿ ತಣ್ಣಗಾಗಲಿ ಎಂದು ಆಶಿಸುತ್ತಾಳೆ. ದ್ರೌಪದಿ ಇಂದಿನ ಎಲ್ಲಾ ಹೆಣ್ಣು ಮಕ್ಕ‍ಳ ಶೋಷಿತ ದನಿಯಾಗಿದ್ದಾಳೆ.ಇಲ್ಲಿ ದ್ರೌಪದಿಯ ಸ್ವಗತ, ಸಂವೇದನೆ,ದೃಷ್ಟಿಕೋನದ ಮೂಲಕ ಕಾದಂಬರಿಯನ್ನು ಸುಂ
ದರವಾಗಿ H S ವೆಂಕಟೇಶ್ ಮೂರ್ತಿಯವರು ಹೆಣೆದಿದ್ದಾರೆ. ನಾನಂತೂ ಭಾವುಕಳಾಗಿದ್ದೇನೆ...