stat Counter



Thursday, July 9, 2020

ಮುರಳೀಧರ ಉಪಾಧ್ಯ ಹಿರಿಯಡಕ - ಎಸ್. ವೆಂಕಟರಾಮ್ ಅವರ - " ದುಡಿಯುವವರ ದನಿ "{ 1983 }


ದಿ| ಎಸ್. ವೆಂಕಟರಾಮ್ ಕರ್ನಾಟಾಕದ ಸ್ವೋಪಜ್ಜ ಧೀಮಂತರಲ್ಲೊಬ್ಬರು; ಸಮಾಜವಾದಿ, ಕಾರ್ಮಿಕ ನಾಯಕ, ರಾಜಕಾರಣೆ, ಎಂ.ಎಲ್.ಸಿ. ಆಗಿದ್ದರು ಅವರು ತನ್ನ್ ಐವತ್ತಾರನೆಯ ವಯಸ್ಸಿನಲ್ಲಿ ೧೯೮೧ರ್ ಜನ ವರಿಯಲ್ಲಿ ನಿಧನರಾದಾಗ ಡಾ|ಯು. ಆರ್. ಅನಂತಮೂರ್ತಿ ಹೀಗೆಂದರು- "ಮಾರ್ಕ್ಸ್ ಮತ್ತು ಲೋಹಿಯಾ ಇಬ್ಬರಿಂದಲೂ ಇವನಷ್ಟು ಕಲಿತವರು ನಮ್ಮಲ್ಲಿ ವಿರಳವೇ ಎನ್ನಬೇಕು." ಈ ಗ್ರಂಥದಲ್ಲಿ ದಿ| ವೆಂಕಟರಾಮ್ ಅವರ ಹದಿನಾಲ್ಕು ರಾಜಕೀಯ,ಶೈಕ್ಷಣಿಕ, ಸಾಹಿತ್ಯಕ್ ಲೇಖನಗಳು ಮತ್ತು ಒಂದು ಪ್ರವಾಸ ಕಥನ ಇವೆ.
’ಭಗವದ್ಗೀತೆ ಹಾಗೂ ಅಪರಾಧ ಮತ್ತು ಶಿಕ್ಷೆ’-ಈ ಗ್ರಂಥದ ಉತ್ತಮ್ ಲೇಖನಗಳಲ್ಲೊಂದು .ಇದರಲ್ಲಿ ಕೃಷ್ಣನ  ಭಗವದ್ಗೀತೆ ಮತ್ತು ರಷ್ಯನ್ ಕಾದಂಬರಿಕಾರ ದಾಸ್ತೊವಸ್ಕಿಯ ’ಅಪರಾಧ ಮತ್ತು ಶಿಕ್ಷೆ’ ಕಾದಂಬರಿಯ ’ಅಪರಾಧ ಮತ್ತು ಶಿಕ್ಷೆ’ ಕಾದಂಬರಿಯ ತೌಲನಿಕ ವಿಮರ್ಶೆ  ಇದೆ. "ಭಗವದ್ಗೀತೆ   ಸದುದ್ದೇಶಕ್ಕಾಗಿ ಯುದ್ದದ-ಸಾಮೂಹಿಕ ಕೊಲೆಯ ನೈತಿಕತೆಯನ್ನು ಪ್ರಶ್ನಿಸುವ ಒಳಗುದಿಯಿಂದ ಆರಂಭವಾಗಿ ಅಂಥ ನೈತಿಕತೆಯನ್ನು ಒಪ್ಪತೊಡಗುವುದರಲ್ಲಿ ಪರ್ಯವಸಾನವಾಗಿದೆ. ’ಅಪರಾಧ ಮತ್ತು ಶಿಕ್ಷೆ’ ಸದುದ್ದೇಶಕ್ಕಾಗಿ ಕೊಲೆಯ ನೈತಿಕತೆಯನ್ನು ಒಪ್ಪತೊಡಗುವುದರಿಂದ ಆರಂಭವಾಘಿ ಅದನ್ನು ತಿರಸ್ಕರಿಸುವ ಧರ್ಮದಲ್ಲಿ  ಪರ್ಯವಸಾನವಾಗುತ್ತದೆ" ಎನ್ನುವುದು ವೆಂಕಟರಾಮ್ ರ ಅಭಿಮತ. ಪ್ರತಿಕ್ರಿಯೆಗಳನ್ನು ಆಹ್ವಾನಿಸುವ, ಚರ್ಚೆಗೆ ಯೋಗ್ಯವಾದ ಲೇಖನವಿದು.
ವೆಂಕಟರಾಮ್ ನಮ್ಮ ಶಿಕ್ಷಣ ಪದ್ಧತಿಯ ಅಸಂಗತತೆಯ ಕುರಿತು ಗಂಭೀರವಾಗಿ ಯೋಚಿಸುತ್ತಿದ್ದರೆಂಬುದಕ್ಕೆ ’ಶಿಕ್ಷಣ ಪದ್ಧತಿ ಒಂದು ವಿವೇಚನೆ’, ’ನಮ್ಮ ಪಠ್ಯಪುಸ್ತಕಗಳು-ಈ ಲೇಖನಗಳು ಋಜುವಾತು ನೀಡುತ್ತವೆ. ’ನಮ್ಮ ಪಠ್ಯ  ಪುಸ್ತಕಗಳು’- ಅಧ್ಯಾಪಕರೆಲ್ಲ ಓದಬೇಕಾದ ಲೇಖನ. ಅರೆ ಇಂಗ್ಲೀಷ ಕಲಿತ ಶಿಕ್ಷಕರು, ಅಧಿಕಾರಿಗಳು, ರಾಜಕಾರಣೆಗಳನ್ನು        ವಿಡಂಬಿಸುವ  ಅವರ ಅಭಿಪ್ರಾಯದಲ್ಲಿ, "ಭಾರತೀಯ ಜನ   ಭಾಷೆಯಲ್ಲಿ ಶಿಕ್ಷಣ, ಭಾರತೀಯ ಜನ ತಂತ್ರದ ವಿಕಾಸದ ಪ್ರಥಮ ಷರತ್ತು"  ವೆಂಕಟರಾಮ್ , ಲ್ಯಾಟಿನ್ ಅಮೇರಿಕದ ಫಾಲೊ ಫ್ರೆಯರೆಯ ವಿಮೋಚನೆವಾದಿ ಶಿಕ್ಷಣ ಕಲ್ಪನೆಯಿಂದ ಪ್ರಭಾವಿತರಾಗಿದ್ದರು.
ರಾಜ್ಯಗಳ ಸ್ವಾಯತ್ತತೆಯನ್ನು ಪ್ರತಿಪಾದಿಸುವ ವೆಂಕಟರಾಮ್ ರ ಅಭಿಪ್ರಾಯದಲ್ಲಿ ’ಸ್ವಾಯತ್ತತೆ’ ದೆಹಲಿ ಸಾರೋಟಿಗೆ ಎದುರಾಡುವ  ಸಿಂಹವಲ್ಲ, ಹೊಡಬಹುದಾದ ಕುದುರೆ." ’ಕರ್ನಾಟಕದ ರೈತ ಕಾರ್ಮಿಕರು’, ’ಭೂಮಿತಿ ಏಕೆ?’-ಈ ಲೇಖನಗಳಲ್ಲಿ ಅವರು ಕರ್ನಾಟಕದ ಕೃಷಿಕಾರ್ಮಿಕರ ಸಮಸ್ಯೆಯನ್ನು ಅಂಕೆ-ಸಂಖ್ಯೆಕೆಗಳ ಉದಾಹರಣೆ ನೀಡಿ,  ಚರ್ಚಿಸುತ್ತಾರೆ, ಸ್ಪಷ್ಟ ಕಾರ್ಯಕ್ರಮಗಳನ್ನು ಸೂಚಿಸುತ್ತಾರೆ. "ಸಂಘಟನೆಯನ್ನು  ಕುರಿತು ’ ಲೇಖನದಲ್ಲಿ ಸಮಾಜವಾದಿ ಕಾರ್ಯಕರ್ತರಿಗೆ ಮಾರ್ಗದರ್ಶಕ ಸಂಹಿತೆಯೊಂದನ್ನು ನೀಡುವ ವೆಂಕಟರಾಮ್, ಜನತಾಂತ್ರಿಕ ಚರ್ಚೆಯ ಹೆಸರಿನಲ್ಲಿ ಸಾರ್ವಜನಿಕವಾಗಿ ಪರಸ್ಪರ ಬೈದಾಡುವ ಸಮಾಜವಾದಿಗಳ    ವರ್ತನೆಯನ್ನು ಖಂಡಿಸುತ್ತಾರೆ.
ರಷ್ಯ ಅಮೇರಿಕ, ಸ್ವೈಟ್ಸರ್ಲೆಂಡ್ ಗಳಲ್ಲಿ ವೆಂಕಟರಾಮ್ ಮಾಡಿದ ಪ್ರವಾಸ ಕಥನ ’ಪ್ರದಕ್ಷಿಣೆ ಎಂಬ ಗ್ರಂಥದಲ್ಲಿ ಈ ಮೊದಲು ಪ್ರಕಟವಾಗಿದೆ. ಈ ಗ್ರಂಥದ ’ಯುಗೋಸ್ಲಾವಿಯಾ ಪ್ರವಾಸ’ ನಲುವತ್ತೆಂಟು ಪುಟಗಳ ದೀರ್ಘ ಲೇಖನ .ವೆಂಕಟರಾಂ ೧೯೮೦ರಲ್ಲಿ ಅಂತಾರಾಷ್ಟೀಯ ಕಾರ್ಮಿಕ ಸಮ್ಮೇಳನವೊಂದರಲ್ಲಿ ಭಾಗವಹಿಸಲು ಯುಗೊಸ್ಮಾವಿಯಾಕ್ಕೆ ಹೋಗಿದ್ದರು ತೌಲನಿಕ ದೃಷ್ಟಿ, ತಿಳಿ ಹಾಸ್ಯ, ದಿನಚರಿಯ ತಂತ್ರದಲ್ಲಿರುವ ಈ ಪ್ರವಾಸ ಕಥನದ ವೈಶಿಷ್ಟ್ಯಗಳು. ಯುಗೊಸ್ಲಾವಿಯಾದ ಮುದ್ದಾದ ಮಕ್ಕಳನ್ನು ಕಾರ್ಮಿಕರ ಸುಸ್ಥಿತಿಯ  ನೋಡುವಾಗ, ವೆಂಕಟರಾಮ್ ಇಂಡಿಯಾದ ಮಕ್ಕಳ, ಕಾರ್ಮಿಕರ ದುಸ್ಥಿತಿಯನ್ನು ನೆನೆಪಿಸಿಕೊಳ್ಳುತ್ತಾರೆ. ವಿಯೆನ್ನಾದಲ್ಲಿ ವೆಂಕಟರಾಮ್ ಗೆಳೆಯ ಪೀಟರ್ ನೊಡನೆ ಕೇಳುವ  ಪ್ರಶ್ನೆಗಳು ಅವರ ಜಿಜ್ಜಾಸೆಗೆ ಉದಾಹರಣಿ -"ಯಾಕೆ  ಆಸ್ಟ್ರಿಯಾ ಮನೋ ವಿಜ್ಜಾನದ ತವರುಮನೆಯಾಯಿತು? ಯಾಕೆ  ಕಾಫ್ಕ  ಅಂತಹವನು  ಇಲ್ಲಿ ಆಗಿ ಹೋದ? ಯಾಕೆ ಫ್ರೈಡ್, ಆಡ್ಲ್ ರ್, ಯುಂಗ್ ನಿಮ್ಮವರು?" ರಾಮ ಕೃಷ್ಣ ಪರ ಮಹಂಸ, ಜೆ. ಕೃಷ್ಣ ಮೂರ್ತಿ, ಭಗವದ್ಗೀತೆ  ಓದಿಕೊಂಡಿರುವ ದುಭಾಷಿ  ರಂಕಾ ಮತ್ತು ಪೀಟರ್ ನ್ ದತ್ತು ಪುತ್ರಿ   ರೋಜಿ ನೆನಪಲ್ಲಿ ಉಳಿಯುತ್ತಾರೆ. ದಕ್ಷಿಣ ಕನ್ನಡದ ಬೈಂದೂರಿನ ಅನಾಥ ತರುಣಿ ರೋಜಿ, ವಿಯೆನ್ನಾದ ಪತ್ರಕರ್ತ ಪೀಟರನ ದತ್ತು ಮಗಳಾಗಿರುವುದನ್ನು ಕಂಡು ವೆಂಕಟರಾಂ, ಬದುಕಿನ ’ಅಚ್ಚರಿಯ   ಅಂಶ’ವನ್ನು ಕುರಿತು ಯೋಚಿಸುತ್ತಾರೆ. ’ಯುಗೊಸ್ಲಾವಿಯಾ ಪ್ರವಾಸ’ ಒಂದು ಯೋಗ್ಯ ಪ್ರವಾಸ ಕಥನ.
’ಸಾಹಿತ್ಯದಲ್ಲಿ ದುಡಿಯುವವರ ದನಿ’, ’ ಸಂಸ್ಕಾರ- ವಂಶ ವೃಕ್ಷ’ ’ಭಾರತೀಪುರ -ಒಂದು ಸಮೀಕ್ಷೆ’ ’ ಕಾಡು’-ಇವು ವೆಂಕಟರಾಮ್ ರ ವಿಮರ್ಶಾ  ಪ್ರಜ್ಜೆಯನ್ನು ದಾಖಲಿಸುತ್ತವೆ. ’ದುಡಿಯುವವರ ದನಿ’ಯಲ್ಲಿ ಅವರು ಕಾರಂತರ ’ಮೂಕಜ್ಜಿಯ ಕನಸುಗಳು’, ’ತ್ರಿವೇಣಿ’ ಯವರ ’ ಕಂಕಣ’,  ನಿರಂಜನರ ’ಚಿರಸ್ಮರಣೆ’ -ಈ ಕೃತಿಗಳ ಮುಖಾಂತರ ಸಾಹಿತ್ಯದಲ್ಲಿ ದುಡಿಯುವವರ  ದನಿ’ ಯಲ್ಲಿ   ಗುರುತಿಸುತ್ತಾರೆ. ’ನೀತಿಯ ಪಟ್ಟಾಂಗಗಳು, ಜಯಘೋಷ, ರಣಗರ್ಜನೆಗಳು  ಸಾಹಿತ್ಯವಾಗುವುದಿಲ್ಲ’ ಎಂಬ ಎಚ್ಚರ ಅವರಿಗಿದೆ. ವೆಂಕಟರಾಮ್ ಇತಿಹಾಸದ ಸೂಕ್ಷ್ಮ ಸತ್ಯಗಳನ್ನು ಅಧ್ಯಯನ ಮಾಡಿದ ಸಮಾಜವಾದಿ ಎಂಬುದನ್ನು ಈ ಲೇಖನ ಸಾಬೀತು ಪಡಿಸುತ್ತದೆ ಅವರೆನ್ನುತ್ತಾರೆ-" ವಿಜಯನಗರದ ವೈಭವಕ್ಕೆ ಅಗತ್ಯವಾದ ತೆರಿಗೆ ತೆರಲಾರದೆ ರೈತರು ದೇಶಾಂತರ ಹೋದರೆಂಬುದು ಆ ವೈಭವದಷ್ಟೇ ಮಹತ್ವವುಳ್ಳ ಕಥೆ. ಬ್ರಿಟಿಷರು ಜನ ತಂತ್ರಕ್ಕೆ ಜಗತ್ತಿನಲ್ಲೇ ಘೋರ ಗಂಡಾಂತರವೆನಿಸಿದ್ದ ನಾಜಿಸಮ್ ಅನ್ನು ಸದೆ ಬಡಿದು ಜನ ತಂತ್ರವನ್ನು ಉಳಿಸಿದರೆಂಬ ದಾವಾದಷ್ಟೆ ಅಥವಾ ಅದಕ್ಕಿಂತ ಹೆಚ್ಚು ಸತ್ವಶಾಲಿಯಾದದ್ದು ಬಂಗಾಳದ ಹತ್ತು ಲಕ್ಷ ಮಂದಿ ಬಡವರು ಜನ ತಂತ್ರದ ಉಳಿವಿನ ಈ ಹೋರಾಟಕ್ಕೆ ಬಲಿಪಶುಗಳಾದರೆಂಬ ದಾವ." ವೆಂಕಟರಾಂ ಅಭಿಪ್ರಾಯದಲ್ಲಿ "ಸಂಸ್ಕಾರ" ಸಂಪ್ರದಾಯವನ್ನು ತಿರಸ್ಕರಿಸಿ ಆಧುನಿಕತೆಗೆ ಮನಮೊಲಿಸಿದರೆ ’ವಂಶವೃಕ್ಷ’ ಆಧುನಿಕತೆಯನ್ನು ತಿರಸ್ಕರಿಸಿ  ಸಂಪ್ರದಾಯಕ್ಕೆ ಹಿಂತಿಗುತ್ತದೆ. "ಸಂಸ್ಕಾರದಲ್ಲಿ ಪ್ರಜ್ಜೆ ಕತ್ತಲಿನಿಂದ ಬೆಳಕಿಗೆ ಹೋಗುತ್ತದೆ; "ಭಾರತೀಪುರ’ದಲ್ಲಿ ಬೆಳಕಿನಿಂದ ಕ್ರಿಯೆಗೆ ಹೋಗುತ್ತದೆ." ಸಮಷ್ಟಿಯನ್ನು ಕುರಿತ ಸಮಾಜವಾದಿಯ ಎಚ್ಚರ, ಜಿಜ್ಜಾಸೆ, ಸ್ಪುಟವಾದ ಸರಳ ಶೈಲಿ-ವೆಂಕಟರಾಂ ಅವರ ಗದ್ಯದ ಮುಖ್ಯಾಂಶಗಳು. ವೆಂಕಟರಾಮ್
 ಅಳಿದ ಮೇಲೆ ಉಳಿದಿರುವುದು ನಾಡನ್ನು ಕುರಿತ ರಚನಾತ್ಮಕ ಧೋರಣೆಯ ’ದುಡಿಯುವವರ ದನಿ’ ’ವೆಂಕಟರಾಮ್ ಗತಿಸಿದರೂ ಅವರು ಅಮರವಾದವನ್ನು ಉಳಿಸಿ ಹೋಗಿದ್ದಾರೆ’ ಎಂಬ ಮಧುದಂಡವತೆಯವರ ಮಾತು ಉತ್ಪ್ರೀಕ್ಷೆಯಲ್ಲ.. ಕನ್ನಡ ಗ್ರಂಥ ಪ್ರಕಾಶನ ಲೋಕಕ್ಕೆ ಹೊಸದಾಗಿ ಪ್ರವೇಶಿಸಿರುವ ಪ್ರಿಂಟರ್ಸ್ ಪ್ರಕಾಶನದ ಪ್ರಶಂಸಾರ್ಹ ಕೊಡುಗೆ ಈ ಗ್ರಂಥ.
ದುಡಿಯುವವರ ದನಿ ಮತ್ತು ಇತರ ಲೇಖನಗಳು.
ಎಸ್. ವೆಂಕಟರಾಮ್ ಪ್ರಿಂಟರ್ಸ್ ಪ್ರಕಾಶನ ೭೫,
ಮಹಾತ್ಮಾಗಾಂಧಿ ರಸ್ತೆ,
ಬೆಂಗಳೂರು-೫೭೦೦೦೧.
೧೯೮೩ ಪುಟ್:೧೮೩.
ಬೆಲೆ:ಹದಿನಾರು ರೂಪಾಯಿ.





No comments:

Post a Comment