stat Counter



Friday, July 10, 2020

ಮುರಳೀಧರ ಉಪಾಧ್ಯ ಹಿರಿಯಡಕ - ಕೋಟ ಮಹಾ ಜಗತ್ತು {1985 - ಅನುವಾದ -ಶಿವರಾಮ ಕಾರಂತ }

ಡಾ| ಆರ್.ಎಲ್.ಕಪೂರ್ ಮತ್ತು ಡಾ| ಜಿ.ಎಂ. ಕಾಸ್ಟ್ರೆಯರ್ಸ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕೋಟದ ಜನರ ಮಾನಸಿಕ ಆರೋಗ್ಯದ ಕುರಿತು ನ್ಮಡೆಸಿದ ಕ್ಷೇತ್ರ  ಕಾರ್ಯ ಸಂಶೋಧನೆಯ್ ಫಲ್ ಈ ಗ್ರಂಥ. ಈ ಸಂಶೋಧನೆ ೧೯೨೦-೭೩ರ ನಡುವೆ ಎಡಿನ್ ಬರೊಫೌಂಡೇಶನ್, ಬೆಂಗಳೂರಿನ ನಿಮ್ಹಾನ್ಸ್ ಮತ್ತಿ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಸಹಾಯದಿಂದ ನಡೆಯಿತು. ಈ ಕ್ಷೇತ್ರಕಾರ್ಯ ಸಂಶೋಧನೆಯ ಅವಧಿಯಲ್ಲಿ ಕೋಟ ಗ್ರಾಮದ ಜನಸಂಖ್ಯೆ ೯೧೧೧ ಇತ್ತು; ಅವರಲ್ಲಿ ೩೭% ಓದುಬರಹ ಬಲ್ಲವರಾಗಿದ್ದರು. ಮೊಗೇರ, ಬಂಟ, ಬ್ರಾಹ್ಮಣ ಜಾತಿಗಳ ೧೨೯೯ ಜನರನ್ನು ಈ ಸಂಶೋಧನೆಗಾಗಿ ಸಂದರ್ಶಿಸಲಾಯಿತು. ನೂರತೊಂಬತ್ತು ಪುಟಗಳ ಪುಟ್ಟ ಗ್ರಂಥ  ದ ಹದಿಮೂರು ಅಧ್ಯಾಯಗಳಲ್ಲಿ ಸಂಶೋಧಕರು ತಮ್ಮ ಕ್ಷೇತ್ರ ಕಾರ್ಯ, ಯೋಜನೆ ಹಾಗೂ ಸಂಶೋಧನೆಯ ಫಲಿತಾಂಶಗಳನ್ನು ಸಂಖ್ಯಾ ಶಾಸ್ತ್ರೀಯ ವಿಶ್ಲೇಷಣೆಯೊಂದಿಗೆ ಮಂಡಿಸಿದ್ದಾರೆ.
ಈ ಸಂಶೋಧನೆಯಿಂದ ೩೭% ಗಂಡಸರಲ್ಲಿ ೪೦% ಹೆಂಗಸರಲ್ಲಿ ಒಂದೋ ಅದಕ್ಕಿಂತ ಹೆಚ್ಚಿಗೋ ಮನೋರೋಗದ ಚಿಹ್ನೆಗಳಿದ್ದುದು ಕಂಡು ಬಂತು. ಗಂಡಸರಲ್ಲಿ ಮಾನಸಿಕ ಶಾರೀರಕ ರೋಗ ಚಿಹ್ನೆ ಗಳನ್ನು ಹೆಚ್ಚಿಸಲು ಮೀರಿದ ವಯಸ್ಸು, ವಿದ್ಯೆ ಇಲ್ಲದ್ದರಿಂದ ದೊರೆತ ಕೀಳು ಸ್ಥಾನ, ಬಡತನ ದೆಸೆಯಿಂದ ಬಂದ ಕೀಳು  ಸ್ಥಾನ,   ಕಾರಣವಾಗಿದ್ದುವು. ಹೆಂಗಸರಲ್ಲಿ ವೈಧವ್ಯ ಮತ್ತು   ಪಿತೃಪ್ರಧಾನ ವಾಸ ಸ್ಥಾನದ ಬದಲಾವಣೆಗಳು ರೋಗ ಚಿಹ್ನೆಗಳನ್ನು ಹೆಚ್ಚಿಸಿದ್ದುವು. ಮೈ ಮೇಲೆ ಬರುವ ವಿದ್ಯಮಾನವನ್ನು ಕುರಿತು ಈ ಸ೦ಶೋಧಕರು, "ಹೀಗೆ ನಿರಿಚ್ಚೆ ಯಿ೦ದ ಬರುವ ಪರಾಧೀನತೆ ಎಂಬುದು ಒಂದು ಬಗೆಯ "ಹಿಸ್ಟೀರಿಯ"ದ ವಿದ್ಯಮಾನ. ಆದರೆ ಭೂತ, ಪ್ರೇತಗಳನ್ನು ನಂಬುವ ಸಂಸ್ಕೃತಿಯ ಜನರಲ್ಲಿ ಇಂಥ ಬೇನೆಯಿಂದ ಮನ್ನಣೆಗಳಿಸುವುದೂ ಅದರಿಂದಲೇ  ಜೀವನ ಸಾಗಿಸುವುದೂ ಸಾಧ್ಯವಾಗಿದೆ. ಇಂಥ ನಿರಿಚ್ಛಾ ಪರಾಧೀನತೆ ಯಾವುದೋ ಅಂತ:ಕಲಹದ ಫಲವಿರಬೇಕು" ಎನ್ನುತ್ತಾರೆ.

ಚಿಕಿತ್ಸಾ ವ್ಯವಸಾಯಿಗಳು ಎಂಬ ಅಧ್ಯಾಯದಲ್ಲಿ ಲೇಖಕರು ಮಂತ್ರವಾದಿಗಳನ್ನು ಕುರಿತು ಹೇಳುವ ಈ ಮಾತುಗಳು ಗಮನಾರ್ಹ " ವೈದ್ಯಕೀಯ ಚಿಕತ್ಸೆಯ ವಿಚಾರದಲ್ಲಿ ಈ ಮಂತ್ರವಾದಿಗಳೂ ಅವರ ಗಿರಾಕಿಗಳೂ ತಮ್ಮೆಲ್ಲ ಸಂಕಟಗಳಿಗೆ ಬಾಹ್ಯ  ಕಾರಣಗಳಿವೆ ಎಂದು ನಂಬುವಂತೆ, ದೈಹಿಕ ಬೇನೆಗಳೂ ಕಾರಣವಾಗಬಹುದು ಎಂಬುದನ್ನು ಒಪ್ಪುತ್ತಾರೆ. ಮ೦ತ್ರವಾದಿ ಸಹ ತನ್ನ ಗಿರಾಕಿಗಳು ಅಸ್ಪತ್ರೆಗೆ ಹೋಗುವುದರಿಂದ ತನ್ನ ವ್ಯವಸಾಯಕ್ಕೆ ಒಂದು ಸ್ಪರ್ಧೆ ಎಂದು ತಿಳಿಯುವುದಿಲ್ಲ. ಅದರಿಂದಾಗುವ ಪ್ರಯೋಜನ ಸಿಗಲಿ ಎಂದೇ  ಹೇಳುತ್ತಾನೆ." ಹೆಂಗಸರು ಮ೦ತ್ರವಾದಿಗಳ ಬದಲಿಗೆ ಆಧುನಿಕ ಡಾಕ್ಟರುಗಳ ಬಳ ಹೋಗುವುದನ್ನು ಸಂಶೋಧಕರು ಗಮನಿಸಿದ್ದಾರೆ.

ಮಾನಸಿಕ ಅಸ್ವಾಸ್ಥ್ಯಗಳ ವಿಷಯದಲ್ಲಿ ಜನರಿಗೆ ಪಾಶ್ಚಾತ್ಯ ವೈದ್ಯರು ಪ್ರಥಮ ಆಕರ್ಷಣೆಯಲ್ಲ. ಆದರೆ ಸಾಮಾನ್ಯ ಚಿಕಿತ್ಸೆಯ ಸಲಹೆ  ಕೇಳುವ ಮಟ್ಟಿಗೆ ಅವರೇ ಜನಪ್ರಿಯರು. ಕೇವಲ ಮಾನಸಿಕ ರೋಗಚಿಹ್ನೆ ಉಳ್ಳವರು ಸಲಹೆ ಕೇಳಲು ಬಯಸುವುದು ಕಡಿಮೆ. ಮೈಮೇಲೆ ಬರುವಂಥ ರೋಗಚಿಹ್ನೆ ಗೆ ಡಾಕ್ಟರು ಗಳ  ಸಲಹೆಯೇ ಬೇಡ ಎಮ್ದು ಅಲಕ್ಷಿಸುತ್ತಾರೆ-ಇವು ಸ೦ಶೋಧಕರು ಗಮನಿಸಿರುವ ಇತರಮುಖ್ಯ ವಿಚಾರಗಳು.
ಈ ಗ್ರ೦ಥದ ಅ೦ತ್ಯದಲ್ಲಿರುವ "ಅಭಿವೃದ್ಧಿ ಪರ  ರಾಷ್ಟ್ರಗಳಲ್ಲಿ ಚಿಕಿತ್ಸೆಯ ಆವಶ್ಯಕತೆಯನ್ನು ಇದಿರಿಸುವ ಸಮಸ್ಯೆ" ಎಂಬ ಅಧ್ಯಾಯ ಗ್ರಾಮೀಣ ಆರೋಗ್ಯ ಯೋಜನೆ ರೂಪಿಸುವವರು ಅಧ್ಯಯನ ಮಾಡಲೇಬೇಕಾದ ಮುಖ್ಯ ವಿಷಯಗಳನ್ನೊಳಗೊ೦ಡಿದೆ. ಡಾ| ಕಾರ್ಸ್ಟೆಯರ್ಸ್ ಮತ್ತು ಡಾ| ರವಿ ಎಲ್. ಕಪೂರ್ ಅವರು ಹೇಳುವಂತೆ "ನಮ್ಮ ಭಾರತ ದೇಶದಲ್ಲಿ ಸಹ ಮನೋರೋಗ ಚಿಕಿತ್ಸಕರು, ಅವರ ಸಹಾಯಕರು ಎಂದರೆ ಡಾಕ್ಟರರು, ದಾದಿಯರು, ಸಮಾಜಸೇವಕರು, ಮನ:ಶಾಸ್ತ್ರ ಜ್ಜರು, ಇವರ ಬೆಂಬಲಕ್ಕೆ ಸಿಗುವ ಸಮಾಜದ ಸ್ಥಳೀಕರು ಮಾಡಬಹುದಾದ ಕೆಲಸ ಅನಾದಿಕಾಲದಿಂದ ಹಳ್ಳಿಗಾಡಿನಲ್ಲಿ ಈ ತೆರನ ಚಿಕಿತ್ಸೆ ನೀಡುತ್ತ ಬಂದವರೊಡನೆ ಸ್ಪರ್ಧಿಸುವುದಲ್ಲ; ಅವರೆಲ್ಲರಿಗೂ ಬೆಂಬಲ ನೀಡಬೇಕಾದದ್ದು, ನಮ್ಮ  ಅಧ್ಯಯನದಲ್ಲಿ ತಿಳಿದುಬಂದ ವಿಷಯವೆಂದರೆ-ನಮ್ಮ ಹಳ್ಳಿಯವರು ಸಾಂಪ್ರದಾಯಿಕ ಚಿಕಿತ್ಸೆಕರನ್ನು ನಂಬುತ್ತಾರೆ. ಆಧುನಿಕ ಜ್ಜಾನದಿಂದ ತಮಗೆ ಹೆಚ್ಚಿನ ಪ್ರಯೋಜನ ಸಿಗುವುದಾದರೆ ಅದನ್ನೂ ಅವರು ಪಡೇಯಲು ಸಿದ್ಧರಿದ್ದಾರೆ."
ಆನ್ವಯಿಕ ಮನೋವಿಜ್ಜಾನಕ್ಕೆ ಒಂದು ಅಸಾಮಾನ್ಯ ಕೊಡುಗೆ. ವ್ಯಕ್ತಿಯನ್ನು ಒಂಟಿ ಎಂದು ಪರಿಗಣಿಸದೆ ಸಾಮಾಜಿಕ, ಆರ್ಥಿಕ ಒತ್ತಡಗಳಿಗೆ ಈಡಾಗುವ ಸಮಾಜಜೀವಿ ಎಂದು ನಡೆಸಿದ ಈ ಸಂಶೋಧನೆಯ ಮಹತ್ವವನ್ನು ವಿದೇಶಿ ವಿದ್ವಾಂಸರು ಈಗಾಗಲೇ ಮನಗಂಡಿದ್ದಾರೆ. "ಟೈಮ್ಸ್ ಆಫ್ ಇಂಡಿಯೋ" ಈ ಗ್ರಂಥದ ಮಹತ್ವವನ್ನು ಕುರಿತು ಒಂದು ಸಂಪಾದಕೀಯವನ್ನು ಬರೆದಿತ್ತು. ಈ ಸಂಪ್ರಬಂಧದ ವಿವರಗಳನ್ನು ಜನರು ತಿಳಿಯಬೇಕು ಎಂಬ ಉದ್ದೇಶದಿಂದ ಡಾ| ಶಿವರಾಮ ಕಾರಂತರು ಇದನ್ನು
 ಭಾಷಾಂತರ ಎಂದು  ಗೊತ್ತಾಗದಷ್ಟು ಚೆನ್ನಾಗಿ ಭಾಷಾಂತರಿಸಿದ್ದಾರೆ. ಕನ್ನಡ ಗೊತ್ತಿದ್ದರೂ ಕನ್ನಡದಲ್ಲಿ ಒಂದೇ ಒಂದು ವೈಜ್ಜಾನಿಕ ಲೇಖನ ಬರೆಯದ ವಿಜ್ಜಾನಿಗಳು,  ಡಾಕ್ಟರ್ ಗಳು ಕಾರಂತರ ಕಾಯಕ, ಉತ್ಸಾಹಗಳಿಂದ ಸ್ಪೂರ್ತಿ ಪಡೆಯಬೇಕು.
ಮುರಳೀಧರ ಉಪಾಧ್ಯಯ
ಕೋಟ ಮಹಾ ಜಗತ್ತು
ಗ್ರಾಮೀಣ ಮನಸ್ಸಿನ ಆಘಾತಗಳು
ಮೂಲ: ಡಾ| ಜಿ.ಎಂ.ಕಾರ್ಸ್ಟೆಯರ್ಸ್ ಮತ್ತು
ಡಾ|ಆರ್. ಎಲ್. ಕಪೂರ್.
ಅನು:ಶಿವರಾಮ ಕಾರಂತ.
ಪ್ರ: ಅಕ್ಷರ ಪ್ರಕಾಶನ, ಸಾಗರ-೫೭೭೪೦೧.
ಮೊದಲ ಮುದ್ರಣ:೧೯೮೫. ಬೆಲೆ:ರೂ.೨೫.೦೦

No comments:

Post a Comment