stat Counter



Showing posts with label ತ್ರಿಪುರಾಂಬಾ. Show all posts
Showing posts with label ತ್ರಿಪುರಾಂಬಾ. Show all posts

Wednesday, March 5, 2014

ತ್ರಿಪುರಾಂಬಾ - ಕನ್ನಡ ಸಿನಿಮಾದ ಮೊದಲ ನಾಯಕಿ --ಶ್ರೀಧರಮೂರ್ತಿ

ಇವರು ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನಾದಲ್ಲಿ ಸುಲೋಚನೆಯ ಪಾತ್ರ ವಹಿಸಿದ್ದ ಅಂದರೆ ಕನ್ನಡದ ಮೊದಲ ನಾಯಕಿ ತ್ರಿಪುರಾಂಬಾ. ಇವರ ಕುರಿತು ಮಾಹಿತಿಗಾಗಿ ಕಳೆದ ಮೂವತ್ತು ವರುಷಗಳಿಂದ ಹುಡುಕುತ್ತಿದ್ದೆ. ಮೊನ್ನೆ ಆಕಸ್ಮಾತ್ತಾಗಿ ನಿಧಿ ಸಿಕ್ಕಿದಂತೆ ಬೆಳ್ಳಾವೆ ನರಹರಿ ಶಾಸ್ತ್ರಿಗಳ 1938ರಲ್ಲಿ ಅಚ್ಚಾದ "ಕನ್ನಡ ರಂಗ ಕಲಾವಿದರು'ಕೃತಿ ಸಿಕ್ಕಿತು. ಅದರ ಜಾಡು ಹಿಡಿದು ಹುಡುಕಿದಾದ. ಇವರು ಕನ್ನಡದ ಖ್ಯಾತ ಸಂಗೀತಗಾರ ಶಂಕರ ಶಾಸ್ತ್ರಿಗಳ ಮಗಳು. 1910ರ ಜುಲೈ 17ರಂದು ಜನಿಸಿದರು. ಮೂಲತ; ಗಾಯಕರು. ಸುಲೋಚನಾ ಮಾತ್ರವಲ್ಲದೆ ಪುರಂದರ ದಾಸ ಕನ್ನಡ ಚಿತ್ರ ಮತ್ತು ಎರಡು ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. 1938ರಲ್ಲಿ ತಬಲಾದ ವಾದಕ ವೇಣುಗೋಪಾಲ್ ಅವರನ್ನು ವಿವಾಹವಾಗಿ ಸೇಲಂನಲ್ಲಿ ನೆಲೆ ನಿಂತರು.ಅಲ್ಲಿಂದ ಮುಂದೆ ಚಿತ್ರರಂಗ ಬಿಟ್ಟರು. 1979ರಲ್ಲಿ ನಿಧನರಾದರು ಎಂಬ ಮಾಹಿತಿಗಳು ಸಿಕ್ಕವು.ಈ ಮಾಹಿತಿಗಳಿಂದ ಈಗ ನನಗೆ ಆಗುತ್ತಿರುವ ಸಂತೋಷಕ್ಕೆ ಮೇರೆಯೇ ಇಲ್ಲ
Like ·  · Share