ಇದು ಸುಮಾರು ಮೂರು ವರ್ಷಗಳ ಹಿಂದಿನ ಕಥೆ.. ಒಬ್ಬ ಪತ್ರಕರ್ತನಾಗಿ ಹಲವಾರು ನ್ಯೂಸ್ಗಳನ್ನು ಕವರ್ ಮಾಡಿದ್ದೀನಿ. ಅದರಲ್ಲಿ ಕೆಲವೊಂದು ಬಹುತೇಕ ಒಂದು ನ್ಯೂಸ್ ಮಾತ್ರ. ಇನ್ನೂ ಕೆಲವು, ಕೇವಲ ನ್ಯೂಸ್ ಮಾತ್ರ ಅಲ್ಲದೆ ಅದರಾಚೆಗೆ ಹಲವರಿಗೆ ನೆರವಾಗಿದೆ. ಇದರಲ್ಲೂ ಎರಡು ರೀತಿಯದ್ದು ಇರತ್ತೆ. ಮೊದಲನೆಯದ್ದು ನ್ಯೂಸ್ ಟಿವಿಯಲ್ಲಿ ಬಂದ ಬಳಿಕ ಅದರಿಂದ ಕೆಲವರಿಗೆ ನೆರವಾಗುತ್ತೆ. ಎರಡನೆಯದ್ದು ನಾವು ಮಾಡಿರುವ ನೆರವು ನ್ಯೂಸ್ ಆಗೋದು. ನಾನಿಲ್ಲಿ ಹೇಳೋಕೆ ಹೊರಟಿರೋದು ಎರಡನೆಯ ವಿಚಾರ. ಇದು ನನ್ನ 11 ವರ್ಷಗಳ ವೃತ್ತಿ ಜೀವನದಲ್ಲಿ ತುಂಬಾನೇ ತೃಪ್ತಿ ತಂದು ಕೊಟ್ಟ ವಿಚಾರಗಳಲ್ಲಿ ಒಂದು.
2015ರಲ್ಲಿ ನಾನು ಟಿವಿ ನೈನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಕ್ರೈಂ ರಿಪೋರ್ಟರ್ ಆಗಿ. ನನ್ನ ಸ್ವಂತ ಊರು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ. ಆಗೊಮ್ಮೆ ಈಗೊಮ್ಮೆ ರಜೆ ಸಿಕ್ಕಾಗ ಊರಿಗೆ ಹೋಗಿ ಒಂದರೆಡು ದಿನ ಮನೆಯಲ್ಲಿ ಇದ್ದು ಬರ್ತಿದ್ದೆ. ಊರಿಗೆ ಹೋದಾಗೆಲ್ಲ ಸ್ನೇಹಿತರನ್ನು ಭೇಟಿಯಾಗುವುದು ವಾಡಿಕೆ. ಹೀಗೆ ನಾನು ಭೇಟಿಯಾಗುವ ಗೆಳೆಯರಲ್ಲಿ ಮುಂಡಾಜೆಯ ಅಜೀಜ್ ಸಹ ಒಬ್ಬರು. ಆಗಾಗ ಫೋನ್ ಮಾಡ್ತಾ ಇರ್ತಾರೆ. ಅದೊಂದು ದಿನ ನಾನು ಬೆಂಗಳೂರಿನಲ್ಲಿದ್ದಾಗಲೇ ಅಜೀಜ್ ನನಗೆ ಫೋನ್ ಮಾಡಿದ್ರು. ಕ್ಯಾಸುವಲ್ ಟಾಕ್ ಮಧ್ಯೆ ತಮ್ಮೂರಿನ ವ್ಯಕ್ತಿಯೊಬ್ಬನ ಬಗ್ಗೆ ವಿಚಾರ ಪ್ರಸ್ತಾಪಿಸಿದ್ರು.
ಆತನ ಹೆಸರು ಪುರುಷೋತ್ತಮ್.. ವಯಸ್ಸು ಸುಮಾರು 40 ಇರಬಹುದು. ಕಳೆದ ಎರಡು ವರ್ಷಗಳಿಂದ ಮುಂಡಾಜೆಯ ಸಂಗಮ್ ಅನ್ನೋ ಹೋಟೆಲ್ನಲ್ಲಿ ಕೆಲಸ ಮಾಡ್ತಿದ್ದಾನೆ. ಒರಿಯಾ ಭಾಷೆ ಬಿಟ್ರೆ ಅಲ್ಪಸ್ವಲ್ಪ ತೆಲುಗು ಬರುತ್ತೆ. ಮಾನಸಿಕವಾಗಿ ಅಷ್ಟೇನೂ ಗಟ್ಟಿಯಾಗಿಲ್ಲ. 2013ರಲ್ಲಿ ಈತ ಯಾವುದೋ ಊರಿಂದ ಲಾರಿ ಹತ್ತಿ ಕೊನೆಗೆ ಮುಂಡಾಜೆಯಲ್ಲಿ ಇಳ್ಕೊಂಡಿದ್ದ. ಕತ್ತರಿ ಕಾಣದ ಕೂದಲು.. ಗಡ್ಡದಿಂದ ಆವೃತವಾದ ಮುಖದಲ್ಲಿ ಕಣ್ಣು, ಮೂಗು ಬಿಟ್ರೆ ಇನ್ನೇನು ಕಾಣಿಸ್ತಿರ್ಲಿಲ್ಲ. ಮುಂಡಾಜೆಯ ಸಂಗಮ್ ಹೋಟೆಲ್ ಮುಂಭಾಗದ ಪುಟ್ಟ ಬಸ್ ನಿಲ್ದಾಣದಲ್ಲಿ ಅನಾಥನಾಗಿ ಕುಳಿತಿದ್ದ. ಆರಂಭದಲ್ಲಿ ಇವನನ್ನು ಎಲ್ಲರೂ ವಿಚಿತ್ರ ಜೀವಿಯಂತೆ ನೋಡ್ತಿದ್ರು. ಯಾರಾದ್ರೂ ಏನಾದ್ರೂ ಕೇಳಿದ್ರೆ ತನ್ನೆಲ್ಲ ಹಲ್ಲುಗಳನ್ನು ತೋರಿಸ್ತಾ ನಗುತ್ತಿದ್ದ. ಮುಂಡಾಜೆಯಲ್ಲಿ ಜನ ಮಾತಾಡೋದು ತುಳು ಭಾಷೆ. ಅಪರೂಪಕ್ಕೆ ಕನ್ನಡ ಬಳಸ್ತಾರೆ. ಆದ್ರೆ ಪುರುಷೋತ್ತಮ್ಗೆ ಇದ್ಯಾವುದೂ ಅರ್ಥ ಆಗಲ್ಲ. ಕೊನೆಗೆ ಗೊತ್ತಿರುವ ಹಿಂದಿ, ಇಂಗ್ಲೀಷ್ ಭಾಷೆಯಲ್ಲೂ ಮಾತನಾಡಿಸಿದ್ರು. ಯಾರು ಏನೇ ಮಾತಾಡಿದ್ರೂ ಪುರುಷೋತ್ತಮ್ ಉತ್ತರ ನಗುವೇ ಆಗಿತ್ತು. ಒಂದೆರಡು ದಿನ ಬಸ್ ಸ್ಟ್ಯಾಂಡ್ನಲ್ಲೇ ಕಾಲ ಕಳೆದ ಪುರುಷೋತ್ತಮ್ಗೆ ಸ್ಥಳೀಯರೇ ಊಟ ತಿಂಡಿ ನೀಡ್ತಿದ್ರು. ಈತ ಪ್ಯೂರ್ ವೆಜ್. ನಾನ್ವೆಜ್ ತಿನ್ನಲ್ಲ. ಊಟ ತಿಂಡಿ ಕೊಟ್ಟವರಿಗೆ ತನ್ನ ನಗುವಿನ ಮೂಲಕವೇ ಥ್ಯಾಂಕ್ಸ್ ಹೇಳ್ತಿದ್ದ. ಹೀಗೆ ಇದ್ದ ಪುರುಷೋತ್ತಮ್ ಸ್ಥಳೀಯರೊಬ್ಬರಿಂದ ಒಂದು ಕತ್ತಿ(ಮಚ್ಚು) ತಗೊಂಡ. ನಂತ್ರ ಬಸ್ ಸ್ಟ್ಯಾಂಡ್ ಸುತ್ತಮುತ್ತ ಬೆಳೆದಿದ್ದ ಹುಲ್ಲು ಕಡಿದು ಕ್ಲೀನ್ ಮಾಡಿದ. ಸ್ಥಳೀಯರು ತನಗೆ ಊಟ ತಿಂಡಿ ಕೊಡ್ತಿದ್ದಾರೆ. ಅದಕ್ಕೆ ಪ್ರತಿಫಲವಾಗಿ ತಾನು ಏನಾದ್ರೂ ಮಾಡ್ಬೇಕು ಅಂತ ಕಳೆ ಕೀಳುವುದು ಮತ್ತಿತರ ಕೆಲಸ ಮಾಡ್ತಿದ್ದ. ಇದನ್ನು ನೋಡಿದ ಸಂಗಮ್ ಹೋಟೆಲ್ ಮಾಲೀಕ ಲತೀಫ್ ಒಂದು ನಿರ್ಧಾರಕ್ಕೆ ಬಂದ್ರು. ಇವನನ್ನ ನಮ್ಮ ಹೋಟೆಲ್ನಲ್ಲೇ ಕೆಲಸಕ್ಕೆ ಸೇರ್ಸೋಣ ಅಂತ.. ಕೆಲಸಕ್ಕೆ ಸೇರ್ಸೋ ಮೊದ್ಲು ಪುರುಷೋತ್ತಮ್ನ ಒಂದು ರೌಂಡ್ ಕ್ಲೀನ್ ಮಾಡಿದ್ರು. ತಿಂಗಳಾನುಗಟ್ಟಲೆಯಿಂದ ಬೆಳೆದಿದ್ದ ಉದ್ದ ಕೂದಲು ಕತ್ತರಿಸಿ, ಶೇವಿಂಗ್ ಮಾಡ್ಸಿದ್ರು. ಹೊಸ ಬಟ್ಟೆ ಕೊಡಿಸಿದ್ರು. ಹೋಟೆಲ್ ಸಮೀಪವೇ ಪುರುಷೋತ್ತಮ್ ಇರೋದಿಕ್ಕೆ ಒಂದು ರೂಮ್ ಕೊಟ್ರು.
ಹಾಗೆ ಪುರುಷೋತ್ತಮ್ ಹೋಟೆಲ್ನಲ್ಲಿ ಕ್ಲೀನಿಂಗ್ ಮಾಡ್ತಾ ಕೆಲಸ ಆರಂಭಿಸಿದ. ಮೂರು ಹೊತ್ತು ಹೋಟೆಲ್ನಲ್ಲೇ ಊಟ. ಹಬ್ಬ ಹರಿದಿನ ಇದ್ದಾಗ ಲತೀಫ್ ತನ್ನ ಮನೆಗೆ ಪುರುಷೋತ್ತಮ್ನನ್ನೂ ಕರ್ಕೊಂಡು ಹೋಗ್ತಿದ್ದ. ಕ್ರಮೇಣ ಲತೀಫ್ ಮನೆಯವರಿಗೆಲ್ಲ ಪುರುಷೋತ್ತಮ್ ಇಷ್ಟವಾಗಿಬಿಟ್ಟ. ಈತ ಯಾವಾಗ್ಲೂ ತುಂಬಾನೇ ಕ್ಲೀನ್ ಆಗಿ ಇರ್ತಿದ್ದ. ಬೆಳಿಗ್ಗೆ ಎದ್ದು ಒಮ್ಮೆ ಸ್ನಾನ ಮಾಡ್ತಿದ್ದ. ರಾತ್ರಿ ಕೆಲಸ ಮುಗಿಸಿ ಇನ್ನೊಮ್ಮೆ ಸ್ನಾನ ಮಾಡಿದ್ಮೇಲೆ ಮಲಗ್ತಾ ಇದ್ದಿದ್ದು. ಹೋಟೆಲ್ನಲ್ಲಿ ಕ್ಲೀನಿಂಗ್ ಕೆಲಸ ಮಾಡೋದಾದ್ರೂ ತುಂಬಾನೇ ಅಚ್ಚುಕಟ್ಟಾಗಿ ಇರ್ತಿದ್ದ. ಹೀಗೆ ಎರಡು ವರ್ಷ ಕಳೆಯಿತು. ಹೋಟೆಲ್ ಮಾಲೀಕ ಅಜೀಜ್ ಪುರುಷೋತ್ತಮ್ ಹೆಸರಿನಲ್ಲಿ ಪ್ರತಿ ತಿಂಗಳು ಪಿಗ್ಮಿಗೆ ಹಣ ಕಟ್ಟುತ್ತಿದ್ರು. ಅವನು ದುಡಿದ ಹಣ ಅವನ ಹೆಸರಲ್ಲೇ ಇರ್ಲಿ ಅಂತ.. ಈ ನಡುವೆ ಲತೀಫ್ ಸೇರಿದಂತೆ ಹೋಟೆಲ್ಗೆ ಬರ್ತಿದ್ದವರೆಲ್ಲ ಪುರುಷೋತ್ತಮ್ನ ಊರು ಯಾವುದು ಅನ್ನೋದನ್ನು ವಿಚಾರಿಸ್ತಿದ್ರು. ಎರಡು ವರ್ಷಗಳಿಂದ ಮನೆಯಿಂದ ದೂರ ಇದ್ದಾನೆ, ಮನೆಯವರೆಲ್ಲ ಗಾಬರಿಯಾಗಿರ್ತಾರೆ, ಹೇಗಾದ್ರೂ ಮಾಡಿ ಈತನ ಮನೆಯವರ ಜೊತೆಗೆ ಸಂಪರ್ಕ ಸಾಧಿಸ್ಬೇಕು ಅಂತ ತುಂಬಾನೇ ಪ್ರಯತ್ನ ಪಡ್ತಿದ್ರು. ಆದ್ರೆ ಪುರುಷೋತ್ತಮ್ಗೆ ತನ್ನ ಹೆಸರು ಬಿಟ್ರೆ ಇನ್ನೇನು ಹೇಳೋಕೆ ಗೊತ್ತಿರ್ಲಿಲ್ಲ. ಪುರುಷೋತ್ತಮ್ಗೆ ಭಾಷೆ ಒಂದು ಸಮಸ್ಯೆಯಾದ್ರೆ, ಮತ್ತೊಂದು ಕಡೆ ತನ್ನ ಊರು, ಮನೆಯವರು ಯಾವುದೂ ಅಷ್ಟಾಗಿ ನೆನಪಿರಲಿಲ್ಲ. ಹಾಗಾಗಿ ಲತೀಫ್ ಮತ್ತು ಸ್ಥಳೀಯರ ಪ್ರಯತ್ನಕ್ಕೆ ಯಾವುದೇ ಫಲ ಸಿಕ್ಕಿರಲಿಲ್ಲ.
2015ರಲ್ಲಿ ನಾನು ಟಿವಿ ನೈನ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ. ಕ್ರೈಂ ರಿಪೋರ್ಟರ್ ಆಗಿ. ನನ್ನ ಸ್ವಂತ ಊರು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ. ಆಗೊಮ್ಮೆ ಈಗೊಮ್ಮೆ ರಜೆ ಸಿಕ್ಕಾಗ ಊರಿಗೆ ಹೋಗಿ ಒಂದರೆಡು ದಿನ ಮನೆಯಲ್ಲಿ ಇದ್ದು ಬರ್ತಿದ್ದೆ. ಊರಿಗೆ ಹೋದಾಗೆಲ್ಲ ಸ್ನೇಹಿತರನ್ನು ಭೇಟಿಯಾಗುವುದು ವಾಡಿಕೆ. ಹೀಗೆ ನಾನು ಭೇಟಿಯಾಗುವ ಗೆಳೆಯರಲ್ಲಿ ಮುಂಡಾಜೆಯ ಅಜೀಜ್ ಸಹ ಒಬ್ಬರು. ಆಗಾಗ ಫೋನ್ ಮಾಡ್ತಾ ಇರ್ತಾರೆ. ಅದೊಂದು ದಿನ ನಾನು ಬೆಂಗಳೂರಿನಲ್ಲಿದ್ದಾಗಲೇ ಅಜೀಜ್ ನನಗೆ ಫೋನ್ ಮಾಡಿದ್ರು. ಕ್ಯಾಸುವಲ್ ಟಾಕ್ ಮಧ್ಯೆ ತಮ್ಮೂರಿನ ವ್ಯಕ್ತಿಯೊಬ್ಬನ ಬಗ್ಗೆ ವಿಚಾರ ಪ್ರಸ್ತಾಪಿಸಿದ್ರು.
ಆತನ ಹೆಸರು ಪುರುಷೋತ್ತಮ್.. ವಯಸ್ಸು ಸುಮಾರು 40 ಇರಬಹುದು. ಕಳೆದ ಎರಡು ವರ್ಷಗಳಿಂದ ಮುಂಡಾಜೆಯ ಸಂಗಮ್ ಅನ್ನೋ ಹೋಟೆಲ್ನಲ್ಲಿ ಕೆಲಸ ಮಾಡ್ತಿದ್ದಾನೆ. ಒರಿಯಾ ಭಾಷೆ ಬಿಟ್ರೆ ಅಲ್ಪಸ್ವಲ್ಪ ತೆಲುಗು ಬರುತ್ತೆ. ಮಾನಸಿಕವಾಗಿ ಅಷ್ಟೇನೂ ಗಟ್ಟಿಯಾಗಿಲ್ಲ. 2013ರಲ್ಲಿ ಈತ ಯಾವುದೋ ಊರಿಂದ ಲಾರಿ ಹತ್ತಿ ಕೊನೆಗೆ ಮುಂಡಾಜೆಯಲ್ಲಿ ಇಳ್ಕೊಂಡಿದ್ದ. ಕತ್ತರಿ ಕಾಣದ ಕೂದಲು.. ಗಡ್ಡದಿಂದ ಆವೃತವಾದ ಮುಖದಲ್ಲಿ ಕಣ್ಣು, ಮೂಗು ಬಿಟ್ರೆ ಇನ್ನೇನು ಕಾಣಿಸ್ತಿರ್ಲಿಲ್ಲ. ಮುಂಡಾಜೆಯ ಸಂಗಮ್ ಹೋಟೆಲ್ ಮುಂಭಾಗದ ಪುಟ್ಟ ಬಸ್ ನಿಲ್ದಾಣದಲ್ಲಿ ಅನಾಥನಾಗಿ ಕುಳಿತಿದ್ದ. ಆರಂಭದಲ್ಲಿ ಇವನನ್ನು ಎಲ್ಲರೂ ವಿಚಿತ್ರ ಜೀವಿಯಂತೆ ನೋಡ್ತಿದ್ರು. ಯಾರಾದ್ರೂ ಏನಾದ್ರೂ ಕೇಳಿದ್ರೆ ತನ್ನೆಲ್ಲ ಹಲ್ಲುಗಳನ್ನು ತೋರಿಸ್ತಾ ನಗುತ್ತಿದ್ದ. ಮುಂಡಾಜೆಯಲ್ಲಿ ಜನ ಮಾತಾಡೋದು ತುಳು ಭಾಷೆ. ಅಪರೂಪಕ್ಕೆ ಕನ್ನಡ ಬಳಸ್ತಾರೆ. ಆದ್ರೆ ಪುರುಷೋತ್ತಮ್ಗೆ ಇದ್ಯಾವುದೂ ಅರ್ಥ ಆಗಲ್ಲ. ಕೊನೆಗೆ ಗೊತ್ತಿರುವ ಹಿಂದಿ, ಇಂಗ್ಲೀಷ್ ಭಾಷೆಯಲ್ಲೂ ಮಾತನಾಡಿಸಿದ್ರು. ಯಾರು ಏನೇ ಮಾತಾಡಿದ್ರೂ ಪುರುಷೋತ್ತಮ್ ಉತ್ತರ ನಗುವೇ ಆಗಿತ್ತು. ಒಂದೆರಡು ದಿನ ಬಸ್ ಸ್ಟ್ಯಾಂಡ್ನಲ್ಲೇ ಕಾಲ ಕಳೆದ ಪುರುಷೋತ್ತಮ್ಗೆ ಸ್ಥಳೀಯರೇ ಊಟ ತಿಂಡಿ ನೀಡ್ತಿದ್ರು. ಈತ ಪ್ಯೂರ್ ವೆಜ್. ನಾನ್ವೆಜ್ ತಿನ್ನಲ್ಲ. ಊಟ ತಿಂಡಿ ಕೊಟ್ಟವರಿಗೆ ತನ್ನ ನಗುವಿನ ಮೂಲಕವೇ ಥ್ಯಾಂಕ್ಸ್ ಹೇಳ್ತಿದ್ದ. ಹೀಗೆ ಇದ್ದ ಪುರುಷೋತ್ತಮ್ ಸ್ಥಳೀಯರೊಬ್ಬರಿಂದ ಒಂದು ಕತ್ತಿ(ಮಚ್ಚು) ತಗೊಂಡ. ನಂತ್ರ ಬಸ್ ಸ್ಟ್ಯಾಂಡ್ ಸುತ್ತಮುತ್ತ ಬೆಳೆದಿದ್ದ ಹುಲ್ಲು ಕಡಿದು ಕ್ಲೀನ್ ಮಾಡಿದ. ಸ್ಥಳೀಯರು ತನಗೆ ಊಟ ತಿಂಡಿ ಕೊಡ್ತಿದ್ದಾರೆ. ಅದಕ್ಕೆ ಪ್ರತಿಫಲವಾಗಿ ತಾನು ಏನಾದ್ರೂ ಮಾಡ್ಬೇಕು ಅಂತ ಕಳೆ ಕೀಳುವುದು ಮತ್ತಿತರ ಕೆಲಸ ಮಾಡ್ತಿದ್ದ. ಇದನ್ನು ನೋಡಿದ ಸಂಗಮ್ ಹೋಟೆಲ್ ಮಾಲೀಕ ಲತೀಫ್ ಒಂದು ನಿರ್ಧಾರಕ್ಕೆ ಬಂದ್ರು. ಇವನನ್ನ ನಮ್ಮ ಹೋಟೆಲ್ನಲ್ಲೇ ಕೆಲಸಕ್ಕೆ ಸೇರ್ಸೋಣ ಅಂತ.. ಕೆಲಸಕ್ಕೆ ಸೇರ್ಸೋ ಮೊದ್ಲು ಪುರುಷೋತ್ತಮ್ನ ಒಂದು ರೌಂಡ್ ಕ್ಲೀನ್ ಮಾಡಿದ್ರು. ತಿಂಗಳಾನುಗಟ್ಟಲೆಯಿಂದ ಬೆಳೆದಿದ್ದ ಉದ್ದ ಕೂದಲು ಕತ್ತರಿಸಿ, ಶೇವಿಂಗ್ ಮಾಡ್ಸಿದ್ರು. ಹೊಸ ಬಟ್ಟೆ ಕೊಡಿಸಿದ್ರು. ಹೋಟೆಲ್ ಸಮೀಪವೇ ಪುರುಷೋತ್ತಮ್ ಇರೋದಿಕ್ಕೆ ಒಂದು ರೂಮ್ ಕೊಟ್ರು.
ಹಾಗೆ ಪುರುಷೋತ್ತಮ್ ಹೋಟೆಲ್ನಲ್ಲಿ ಕ್ಲೀನಿಂಗ್ ಮಾಡ್ತಾ ಕೆಲಸ ಆರಂಭಿಸಿದ. ಮೂರು ಹೊತ್ತು ಹೋಟೆಲ್ನಲ್ಲೇ ಊಟ. ಹಬ್ಬ ಹರಿದಿನ ಇದ್ದಾಗ ಲತೀಫ್ ತನ್ನ ಮನೆಗೆ ಪುರುಷೋತ್ತಮ್ನನ್ನೂ ಕರ್ಕೊಂಡು ಹೋಗ್ತಿದ್ದ. ಕ್ರಮೇಣ ಲತೀಫ್ ಮನೆಯವರಿಗೆಲ್ಲ ಪುರುಷೋತ್ತಮ್ ಇಷ್ಟವಾಗಿಬಿಟ್ಟ. ಈತ ಯಾವಾಗ್ಲೂ ತುಂಬಾನೇ ಕ್ಲೀನ್ ಆಗಿ ಇರ್ತಿದ್ದ. ಬೆಳಿಗ್ಗೆ ಎದ್ದು ಒಮ್ಮೆ ಸ್ನಾನ ಮಾಡ್ತಿದ್ದ. ರಾತ್ರಿ ಕೆಲಸ ಮುಗಿಸಿ ಇನ್ನೊಮ್ಮೆ ಸ್ನಾನ ಮಾಡಿದ್ಮೇಲೆ ಮಲಗ್ತಾ ಇದ್ದಿದ್ದು. ಹೋಟೆಲ್ನಲ್ಲಿ ಕ್ಲೀನಿಂಗ್ ಕೆಲಸ ಮಾಡೋದಾದ್ರೂ ತುಂಬಾನೇ ಅಚ್ಚುಕಟ್ಟಾಗಿ ಇರ್ತಿದ್ದ. ಹೀಗೆ ಎರಡು ವರ್ಷ ಕಳೆಯಿತು. ಹೋಟೆಲ್ ಮಾಲೀಕ ಅಜೀಜ್ ಪುರುಷೋತ್ತಮ್ ಹೆಸರಿನಲ್ಲಿ ಪ್ರತಿ ತಿಂಗಳು ಪಿಗ್ಮಿಗೆ ಹಣ ಕಟ್ಟುತ್ತಿದ್ರು. ಅವನು ದುಡಿದ ಹಣ ಅವನ ಹೆಸರಲ್ಲೇ ಇರ್ಲಿ ಅಂತ.. ಈ ನಡುವೆ ಲತೀಫ್ ಸೇರಿದಂತೆ ಹೋಟೆಲ್ಗೆ ಬರ್ತಿದ್ದವರೆಲ್ಲ ಪುರುಷೋತ್ತಮ್ನ ಊರು ಯಾವುದು ಅನ್ನೋದನ್ನು ವಿಚಾರಿಸ್ತಿದ್ರು. ಎರಡು ವರ್ಷಗಳಿಂದ ಮನೆಯಿಂದ ದೂರ ಇದ್ದಾನೆ, ಮನೆಯವರೆಲ್ಲ ಗಾಬರಿಯಾಗಿರ್ತಾರೆ, ಹೇಗಾದ್ರೂ ಮಾಡಿ ಈತನ ಮನೆಯವರ ಜೊತೆಗೆ ಸಂಪರ್ಕ ಸಾಧಿಸ್ಬೇಕು ಅಂತ ತುಂಬಾನೇ ಪ್ರಯತ್ನ ಪಡ್ತಿದ್ರು. ಆದ್ರೆ ಪುರುಷೋತ್ತಮ್ಗೆ ತನ್ನ ಹೆಸರು ಬಿಟ್ರೆ ಇನ್ನೇನು ಹೇಳೋಕೆ ಗೊತ್ತಿರ್ಲಿಲ್ಲ. ಪುರುಷೋತ್ತಮ್ಗೆ ಭಾಷೆ ಒಂದು ಸಮಸ್ಯೆಯಾದ್ರೆ, ಮತ್ತೊಂದು ಕಡೆ ತನ್ನ ಊರು, ಮನೆಯವರು ಯಾವುದೂ ಅಷ್ಟಾಗಿ ನೆನಪಿರಲಿಲ್ಲ. ಹಾಗಾಗಿ ಲತೀಫ್ ಮತ್ತು ಸ್ಥಳೀಯರ ಪ್ರಯತ್ನಕ್ಕೆ ಯಾವುದೇ ಫಲ ಸಿಕ್ಕಿರಲಿಲ್ಲ.