stat Counter



Showing posts with label shivananda kalave. Show all posts
Showing posts with label shivananda kalave. Show all posts

Saturday, April 9, 2016

ಶಿವಾನಂದ ಕಳವೆ- ಎಲೆ ಮರೆಯ ಸೇವಕರ ಲೋಕದೊಳು...

ಎಲೆ ಮರೆಯ ಸೇವಕರ ಲೋಕದೊಳು...: ಫಲ ವೃಕ್ಷಗಳಿಗೆ ನೀರುಣಿಸಬೇಕು, ಗೊಬ್ಬರ ಅಗತ್ಯ ಪೋಷಕಾಂಶ ನೀಡಬೇಕೆಂದು ತೋಟಗಾರಿಕಾ ತಜ್ಞರು ಯಾವತ್ತೂ ಹೇಳುತ್ತಿರುತ್ತಾರೆ. ಕೀಟ ಬಂದರೆ ರಾಸಾಯನಿಕ ಸಿಂಪಡಿಸಲು ಉಪದೇಶಿಸುತ್ತಾರೆ. ನಮ್ಮ ತೋಟಗಳಲ್ಲಿ ಬದುಕು ಸಾಗಿಸುವ ಕೆಂಪಿರುವೆಗಳು ಹಾನಿಕಾರಕ ಕೀಟಗಳನ್ನು ತಿಂದು ಬೆಳೆ ರಕ್ಷಣೆಯ ಮಹತ್ವದ ಕಾರ್ಯ ಮಾಡುತ್ತಿವೆ.

Saturday, December 7, 2013

ಶಿರಸಿಯಲ್ಲಿ ’ ಅನ್ನದ ಚಿತ್ರಗಳು ’ ಗ್ರಾಮೀಣ ಪತ್ರಿಕೋದ್ಯಮ ಶಿವಿರ -9-1-2014



ಅನ್ನದ ಚಿತ್ರಗಳು - ಗ್ರಾಮೀಣ ಪತ್ರಿಕೋದ್ಯಮ ಶಿಬಿರ
ಅನ್ನದ ಚಿತ್ರಗಳು - ಗ್ರಾಮೀಣ ಪತ್ರಿಕೋದ್ಯಮ ಶಿಬಿರವನ್ನು ನಮ್ಮ ಮಾಧ್ಯಮ ಸಂಸ್ಕೃತಿ
ಅಭಿವೃದ್ಡಿ ಕೇಂದ್ರ ಸಂಘಟಿಸುತ್ತಿದೆ . ಬರುವ
 2 0 1 4 ಜನವರಿ 9 , 1 0 ,1 1 ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಳವೆ
ಮನೆಯಲ್ಲಿ ಶಿಬಿರ ನಡೆಯಲಿದೆ. ರಾಜ್ಯದ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಹವ್ಯಾಸಿ &
ಕಾರ್ಯನಿರತ ಪತ್ರಕರ್ತರು ಭಾಗವಹಿಸಬಹುದು. ಈ ಸುದ್ದಿಯನ್ನು ತಮ್ಮ ಪತ್ರಿಕೆಯ ಕೃಷಿ
ಪುಟದಲ್ಲಿ ಪ್ರಕಟಿಸಬೇಕಾಗಿ ವಿನಂತಿ.
 ಹಿರಿಯ ಬರಹಗಾರ ಶ್ರೀ ಅಡ್ಡೂರು ಕೃಷ್ಣರಾವ್ ಶಿಬಿರ ನಿರ್ದೇಶಕರು. ಡಾ. ನಿರಂಜನ
ವಾನಳ್ಳಿ , ಪೂರ್ಣಪ್ರಜ್ಞ ಬೇಳೂರು ಹಾಗೂ ನಾನು ಶಿಬಿರ ಸಂಪನ್ಮೂಲ ವ್ಯಕ್ತಿಗಳು. ನಮ್ಮ
ಕೃಷಿಯ ಸ್ಥಿತಿಗತಿ ಬಗೆಗೆ ಬೆಳಕು ಚೆಲ್ಲುವ ಪ್ರಯತ್ನ ಇದು. ಬರಹಕ್ಕೆ ವಿಷಯ ಆಯ್ಕೆ ,
ಸಂದರ್ಶನ , ಅಧ್ಯಯನ, ಛಾಯಾಗ್ರಹಣ, ನುಡಿಚಿತ್ರ ಬರವಣಿ ಪ್ರಾಯೋಗಿಕ ಪಾಠ ನಡೆಯುತ್ತದೆ.
ಹಾವೇರಿಯ ಶಿಗ್ಗಾವ್ ರಾಕ್ ಗಾರ್ಡನ್ ಗೆ ಅನ್ನದ ಚಿತ್ರ ವೀಕ್ಷಣೆ ಪ್ರವಾಸ & ಹಿರಿಯ
ಕಲಾವಿದ ಶ್ರೀ ಸುಲಬಕ್ಕನವರ್ ಜೊತೆ ಕೃಷಿ ಕಲೆಯ ಕುರಿತು ಮಾತುಕತೆ ನಡೆಯುತ್ತದೆ. 1 5
ಜನಕ್ಕೆ ಮಾತ್ರ ಅವಕಾಶವಿದೆ. ಶಿಬಿರ ಶುಲ್ಕ 1 500 ರೂಪಾಯಿಗಳು.
ಹೆಚ್ಹಿನ ವಿವರಗಳಿಗೆ
ಶಿವಾನಂದ ಕಳವೆ
ಸಂಚಾಲಕರು
ಮಾಧ್ಯಮ ಸಂಸ್ಕೃತಿ ಅಭಿವೃದ್ಡಿ ಕೇಂದ್ರ
ಮೊಬೈಲ್ - 9 4 4 8 0 2 3 7 1 5

Thursday, November 21, 2013

ಶಿವಾನಂದ ಕಳವೆ - ಭೂಮಿಗೆ ಶಕ್ತಿಯಿದೆ ಆದರೆ ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇಲ್ಲ

ಭೂಮಿಗೆ ಶಕ್ತಿಯಿದೆ, ಆಳುವ ರಾಜಕಾರಣಿಗಳಿಗೆ ಇಚ್ಚಾಶಕ್ತಿ ಇಲ್ಲ !
ಇನ್ನೂ ಕೆಲವೆಡೆ ತೆರೆದ ಬಾವಿಗಳಿಂದ ಕಬ್ಬಿಗೆ ನೀರಾವರಿ , ಕಬ್ಬಿನ ಸಾಲಿನ ಅಂತರ ಹಿಗ್ಗಿಸಿ ಉಪಬೆಳೆ ತೆಗೆಯುವ ತಂತ್ರಗಳು. ಇಥ್ರೇಲ್ ಹೊಡೆದು ಎಲೆ ಉದುರಿಸಿದ ಬಳಿಕ ಡಾರ್ಮೆಕ್ಸ್ ಬಳಿದುಕೊಂಡು ಹೂ ಬಿಡಲು ಅಣಿಯಾದ ದ್ರಾಕ್ಷಿ. ತೊಗರಿಯ ನಡುವೆ ಅರಿಸಿನ ಸೊಬಗು, ಗುಲಬರ್ಗಾ ಕಮಲಾಪುರ ಕೆಂಪು ಬಾಳೆಯ ಬೆರಗು, ವಿಜಾಪುರ ಇಂಡಿಯ ಕೃಷಿಯ ಮಳೆ ಆಶ್ರಿತ ನೆಲದ ಬೆಳೆ ವಿಶೇಷಗಳು ನೂರಾರು. ಬೀದರ ಮಾಂಜ್ರಾ ನದಿಯ ಗಡಿಯಲ್ಲಿ ಸುತ್ತಾಡುತ್ತ ಕಲಿತ ಪಾಠಗಳು ನೂರಾರು. ೭೦ ೦ ಕಿಲೋ ಮೀಟರ್ ದೂರದ ಈ ಊರಿಗೆ ಹೊರಟಾಗ ನನ್ನ ಜೊತೆ ಇದ್ದದ್ದು ಒಬ್ಬ ಸ್ನೇಹಿತನ ಮೊಬೈಲ್ ನಂಬರ್ ಮಾತ್ರ ..... ಆದರೆ ರೈತರ ಪ್ರೀತಿ ದೊಡ್ಡದು .... ಹಲವರು ಸಿಕ್ಕರು,ಸ್ನೇಹಿತರಾದರು, ಅವರ ಮನೆಗಳಲ್ಲಿ ವಾಸ್ತವ್ಯ. ಬಿಳಿಜೋಳದ ರೊಟ್ಟಿ, ಪುಡಿ ಚಟ್ನಿಯ ಜೊತೆ ಕುಸುಬಿ ಹಸಿರೆಲೆ ಎಲೆ ತಿನ್ನುತ್ತ ನಮ್ಮ ಕೃಷಿ ಹರಟೆ. ಗೆಳೆಯ ಚಂದ್ರಶೇಖರ ಕಾಡಾವಿ ನೇರ ಬಸವ ಕಲ್ಯಾಣದ ಶರಣ ಕಮ್ಮಟಕ್ಕೆ ಕರೆದೊಯ್ದರು. ರಾಜ್ಯದ ಕೃಷಿಯ ಕಥೆ ಕೇಳಿದರು. ಸ್ವಾಮಿಗಳು ಅಕ್ಕರೆಯಲ್ಲಿ ಸತ್ಕರಿಸಿದರು.
' ಅಧಿಕಾರಿಗಳನ್ನು ಬೀದರಕ್ಕೆ ವರ್ಗಾಯಿಸುತ್ತೆನೆಂದು ರಾಜಕಾರಣಿಗಳು ಲಂಚಕೋರ ಅಧಿಕಾರಿಗಳನ್ನು ಹೆದರಿಸುವದು ಕೇಳಿದ್ದೇನೆ ..... ಈ ಜಿಲ್ಲೆಯ ಹಳ್ಳಿ ಸುತ್ತಾಡಿ ಒಂದು ಮಾತು ಹೇಳಬೇಕು ಬೇಕು .... ರಾಜ್ಯದ ಕೃಷಿ ಅಭ್ಯುದಯಕ್ಕೆ ಇಂದು ಬೀದರ ಕೃಷಿಕರ ಜ್ಞಾನವರ್ಗಾವಣೆ ತುರ್ತಾಗಿ ಆಗಬೇಕಿದೆ 'ರೈತರು ಯಾವ ನೀರಾವರಿ ಯೋಜನೆ ಇಲ್ಲದಿದ್ದರೂ ಬಹಳ ಚನ್ನಾಗಿ ಕೃಷಿ ನಡೆಸಿದ್ದಾರೆ... ಉತ್ತಮ ಬೆಳೆ ಪಡೆಯುತ್ತಾರೆ. ದುಃಖದ ಸಂಗತಿಯೆಂದರೆ ಇಲ್ಲಿನ ಎಲ್ಲ ಕೃಷಿ ಉತ್ಪನ್ನಗಳಿಗೂ ಮಹಾರಾಷ್ಟ್ರ ಮುಖ್ಯ ಮಾರುಕಟ್ಟೆ ! ನಮ್ಮ ಭೂಮಿಗೆ ಶಕ್ತಿಯಿದೆ, ಆಳುವ ರಾಜಕಾರಣಿಗಳಿಗೆ ಇಚ್ಚಾಶಕ್ತಿ ಇಲ್ಲ !
 (6 photos)