stat Counter



Friday, October 26, 2012

ವಿಟ್ಲದ ರಾಮಚಂದ್ರ ಉಡುಪರಿಗೆ ಅಂತಿಮ ನಮನ

ಅಳಿಕೆಯ ಸತ್ಯಸಾಯಿ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ನನ್ನ ನಿಡುಗಾಲದ ಗೆಳೆಯ ರಾಮಚಂದ್ರ ಉಡುಪರು { ಜನನ-1952 }  ಇನ್ನಿಲ್ಲ.ಕ್ಯಾನ್ಸರ್ ಆಕ್ರಮಣದ ಸುದ್ದಿ ತಿಳಿದು ಹದಿನೈದು ದಿನದೊಳಗೆ  ಅವರು ನಿನ್ನೆ 26-10-2012  ತೀರಿಕೊಂಡಿದ್ದಾರೆ.
ಮೈಸೂರು ವಿ. ವಿ ಯಲ್ಲಿ ಡಾ / ಬಿ ದಾಮೋದರ ರಾಯರ ವಿದ್ಯಾರ್ಥಿಯಾಗಿ ಇಂಗ್ಲಿಷ್ ಎಮ್.ಎ.ಕಲಿತ ಅವರು ವಿಟ್ಲದ ಸಾಹಿತ್ಯ ಬಳಗಕ್ಕೆ ವೈಚಾರಿಕತೆಯ ಸ್ಪರ್ಶ ನೀಡಿದರು . ರಾಮಚಂದ್ರ ಉಡುಪರು , ಅನಂತ ಕ್ರೃಷ್ಣ ಹೆಬ್ಬಾರರೊಂದಿಗೆ ಅನುವಾದಿಸಿದ ಶ್ರಿಪಾದ ಅಮೃತ ಡಾಂಗೆಯವರ- ಸಂಘ್ಹ ಜೀವನದಿಂದ ಗುಲಾಮಗಿರಿಯೆಡೆಗೆ ’ ಪುಸ್ತಕ 1984 ರಲ್ಲಿ ಪ್ರಕಟವಾಗಿದೆ. ಉಡುಪರು ಅನುವಾದಿಸಿದ ಚೆಕಾವ್ ಕತೆಗಳು ’ ರುಜುವಾತು ’ ಪತ್ರಿಕೆಯಲ್ಲಿ ಪ್ರಕಟವಾಗಿವೆ.ನಾನು ಸಂಪಾದಿಸಿದ ಯು.ಆರ್.ಅನಂತಮೂರ್ತಿ ಗ್ರಂಥಕ್ಕೆ ಉಡುಪರು ಶ್ರಿಮತಿ ಹೈಡ್ರುನ್ ಬ್ರೂಕ್ನರ್ ’ಸಂಸ್ಕಾರ ’ದ ಕುರಿತು ಬರೆದ ಲೇಖನವನ್ನು ಅನುವಾದಿಸಿ ನೀಡಿದ್ದರು .  ದಿಡೀರನೆ ಕಣ್ಮರೆಯಾದ ಸಂಗಾತಿ ಉಡುಪರಿಗೆ ಅಂತಿಮ ನಮನ.
Photo: ಗೆಳೆಯ   ರಾಮ ಚಂದ್ರ ಉಡುಪ ...ಇನ್ನಿಲ್ಲ ಎನ್ನುವುದನ್ನು ನೆನೆಯುವುದೇ ಕಷ್ಟ.....
ramachandra udupa
 Pro. Ramachandra Udupa { 1952 -2012 ] , Dep of English , Satya Sai Pre University College, Vitla   passed away on  26-19-2012 at Bangalore . He has  translated Cherkov's stories & S. K. Dange's book to Kannada.

No comments:

Post a Comment