stat Counter



Friday, August 29, 2014

’ಒಂದು ಅನಂತಮೂರ್ತಿಯವರ ಘರಾನಾ, ಇನ್ನೊಂದು ತೇಜಸ್ವಿ ಘರಾನ..’ – ಕುಂ ವೀ ಬರೀತಾರೆ

ನಿಮ್ಮ ಲೇಖನ ಮನನೀಯವಾಗಿದೆ. ಆದರೆ ನಿಮ್ಮ ಡಾ. ಬಸವನಗೌಡರು `ನೆಹರೂ ನಿವೃತ್ತರಾಗುವುದಿಲ್ಲ’ ಎಂಬ ಮಾತನ್ನು ಅನಂತಮೂರ್ತಿಯವರಿಗೆ ಯಾಕೆ ಆರೋಪಪಿಸಿದರೋ ತಿಳಿಯದು. ಅದು ಗೋಪಾಲಕೃ‍ಷ್ಣ ಅಡಿಗರ ಒಂದು (ಪ್ರಸಿದ್ಧ) ಕವಿತೆ (೧೯೫೮). `ನೆಹರೂ ನಿವೃತ್ತರಾಗುವುದಿಲ್ಲ / ಇನ್ನು ಪರವಾ ಇಲ್ಲ’ ಎಂದು ಕವಿತೆ ಆರಂಭವಾಗುತ್ತದೆ.
ಅನಂತಮೂರ್ತಿಯವರು ಆ ಕಾಲದಲ್ಲಿ ನೆಹರೂ ಪರವೇ ಆಗಿದ್ದರು. ಹೀಗೆಂದು ಅನಂತಮೂರ್ತಿಯವರು ತಾವೇ ಹೇಳಿಕೊಂಡಿದ್ದಾರೆ.
ಡಾ. ಗೌಡರು ಏನನ್ನು ಉದ್ದೇಶಿಸಿದ್ದರೋ ನನಗೆ ತಿಳಿಯದು. ಓದುಗರು ತಪ್ಪಾಗಿ ತಿಳಿಯದಿರಲಿ ಎಂದು ಈ ಪತ್ರ ಬರೆದಿದ್ದೇನೆ.
ಕೆ.ವಿ. ತಿರುಮಲೇಶ್

No comments:

Post a Comment