stat Counter



Showing posts with label ಕನ್ನಡ ಕಾದಂಬರಿ. Show all posts
Showing posts with label ಕನ್ನಡ ಕಾದಂಬರಿ. Show all posts

Tuesday, July 7, 2020

ಮುರಳೀಧರ ಉಪಾಧ್ಯ ಹಿರಿಯಡಕ - ಪ್ರಹ್ಲಾದ ಅಗಸನಕಟ್ಟೆ ಅವರ ಕಾದಂಬರಿ - " ಅವಾಂತರ "

 ಅವಾಂತರ’ ಪ್ರಹ್ಲಾದ ಅಗಸನ ಕಟ್ಟೆಯವರ ಎರಡನೆಯ ಕಾದಂಬರಿ. ಸರಕಾರಿ ನೌಕರಿಯಲ್ಲಿರುವ ದಂಪತಿಗಳ ವರ್ಗಾವಣೆಯ ಸಮಸ್ಯೆಯ ಸುತ್ತ ಬೆಳೆಯುವ ಈ ಕಾದಂಬರಿ ಅಧಿಕಾರಶಾಹಿಯ  ಅಮಾನವೀಯತೆಯನ್ನು ಚಿತ್ರಿಸುತ್ತದೆ. ಸೋಮಶೇಖರನ ಹೆಂಡತಿ ಕಮಲ ಗಂಡಾನಿರುವ ಊರಿಗಿಂತ ತುಂಬ ದೂರದಲ್ಲಿ, ನವಿಲುಗಿರಿಯಲ್ಲಿ ಉದ್ಯೋಗದಲ್ಲಿದ್ದಾಳೆ. ಬಸುರಿಯಾಗಿರುವ ಅವಳ ವರ್ಗಾವಣೆಗೆ ಪ್ರಯತ್ನಿಸಲಿಕ್ಕಾಗಿ ಸೋಮಶೇಖರ  ಬೆಂಗಳೂರಿಗೆ ಹೋಗುತ್ತಾನೆ. ಯಾಂತ್ರಿಕ, ಭಷ್ಟ್ರ, ಸಹಾನುಭೂತಿ ಶೂನ್ಯ ಅಧಿಕಾರಶಾಹಿಯನ್ನು ಕಂಡು ಕಂಘಾಲಾಗುತ್ತಾನೆ. ಭ್ರಷ್ಟ, ಅವನತಮುಖಿ ವ್ಯವಸ್ಥೆಯಲ್ಲಿ ಪ್ರಕಾಶ ಕಟಕೇರಿ, ಸಹದೇವ ವಣಕಾರರಂಥ ಒಳ್ಳೆಯವರು ಅಪ್ರಸ್ತುತರಾಗಿದ್ದಾರೆ. ಸೋಮಶೇಖರ್ ದಂಪತಿಗಳಿಗೆ ನವಿಲು ಗಿರಿಯ ಪ್ರಾದೇಶಿಕ ವೈಶಿಷ್ಟ್ಯಗಳು ಅಸಹನೀ ಯವಾಗುತ್ತವೆ. ಆಧುನಿಕ ರೀತಿಯ ಶೌಚಾಲಯ ವ್ಯವಸ್ಥೆಯಿಲ್ಲದ ಆ ಊರು ಅವರ ಪಾಲಿಗೆ ನರ್ಅಕವಗುತ್ತದೆ. ಮಳೀಮಠ ದಂಪತಿಗಳು ಮರುಭೂಮಿಯ ಓಯಸಿಸ್ ನಂತೆ  ಕಾಣಿಸುತ್ತಾರೆ. ಹುಟ್ಟು ವಾಗಲೇ ಸತ್ತಿರುವ ಸೋಮಶೇಖರ ದಂಪತಿಗಳ್ ಅಮಗು ಅಧಿಕಾರಶಾಹಿಯ ಕ್ರೌರ್ಯದ ಸಂಕೇತವಾಗುತ್ತದೆ. 
’ಅವಾಂತರ’ ದಲ್ಲಿರುವ ಪ್ರಜಾಪ್ರಭುತ್ವ ವ್ಯವಸ್ಥೆಯ ಅಧಿಕಾರಶಾಹಿಯ ಚಿತ್ರಣ ’ತಬರನ ಕತೆ’ಯ ಮುಂದಿನ  ಅಧ್ಯಾಯದಂತಿದೆ. ಇದು ವಿಚಿತ್ರ ಕಲ್ಪನೆಯೋ ವಾಸ್ತವವೋ ಎಂದು ಭ್ರಮೆ ಹುಟ್ಟಿಸುವ ಭಯಾನಕ ಸಂಗತಿಗಳು ಈ ಕಾದಂಬರಿಯಲ್ಲಿವೆ.ವಾಸ್ತವ ಅನುಭವ ಗಳಿಗೆ ಕಲಾತ್ಮಕ ಅಭಿವ್ಯಕ್ತಿ ನೀಡುವುದರಲ್ಲಿ ಅಗಸನಕಟ್ಟೆಯವರು ಯಶಸ್ವಿಯಾಗಿದ್ದಾರೆ. 
ಮುರಳೀಧರ ಉಪಾಧ್ಯ ಹಿರಿಯಡಕ

Sunday, June 21, 2020

ಮುರಳೀಧರ ಉಪಾಧ್ಯ ಹಿರಿಯಡಕ - ಶಿವರಾಮ್ ಪಡಿಕ್ಕಲ್ ಅವರ " ನಾದು ನುದಿಯ ರೂಪಕ " { 2001 } ಸಾಮಾಜಿಕ ಅಸ್ಮಿತೆಯ ಹುಡುಕಾಟದ ಕಥನ

ಡಾ| ಶಿವರಾಮ ಪಡಿಕ್ಕಲ್ ಅವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ ಪಿ.ಎಚ್.ಡಿ ಸಂಪ್ರಬಂಧದ ಪರಿಷ್ಕೃತ ರೂಪ ’ನಾಡು-ನುಡಿಯ ರೂಪಕ’ ಎಂಬ ಹೆಸರಿನಲ್ಲಿ ಪ್ರಕಟವಾಗಿದೆ. ಒಂದು ಶತಮಾನದ ಇತಿಹಾಸವಿರುವ ಕನ್ನಡ ಕಾದಂಬರಿ ಪ್ರಕಾರ ಸ್ವಂತಿಕೆಯ  ಛಾಪಿ ನೊಂದಿಗೆ ತಲೆಯೆತ್ತಿ ಬೆಳೆದ ಬಗೆಯನ್ನು ಹಾಗೂ ಅದ ತಾತ್ವಿಕತೆಯನ್ನು ವಿಶ್ಲೇಷಿಸುವುದು ಈ ಸಂಪ್ರಬಂಧದ ಉದ್ದೇಶ. ಕಾದಂಬರಿ ಬರಹದ ಮೂಲಕ ಲಭ್ಯವಾಗುವ ಚಾರಿತ್ರಿಕ ಸನ್ನಿವೇಶವನ್ನು ಚರ್ಚಿಸುತ್ತ, ಮೊದಲ ಕಾದಂಬರಿಗಳು ಕರ್ನಾಟಕದ ಸಂಸ್ಕೃತಿಯನ್ನು ನಿರೂಪಿಸಿದ ರೀತಿಯನ್ನು ಡಾ| ಪಡಿಕ್ಕಲ್ ವಿವರಿಸಿದ್ದಾರೆ.
ಜಾರ್ಜ್ ಲುಕಾಚ್ಸ್ ವಿವರಿಸುವಂತೆ   ವ್ಯಕ್ತಿ  ಮತ್ತು ಸಮಾಜದ  ಛಿದ್ರೀಕರಣದಿಂದ ನಾವೆಲ್ ಹುಟ್ಟುತ್ತದೆ. ನಾವೆಲ್ ನ ನಾಯಕ್ ಬಾಹ್ಯ ಜಗತ್ತಿನಿಂದ ಬೇರ್ಪಟ್ಟವನು. ಗೋಲ್ಡ್ ಮನ್ ನ ಪ್ರಕಾರ ನಾವೆಲ್ ಅವನತ ಸಮಾಜದಲ್ಲಿ ಅಪ್ಪಟ  ಮೌಲ್ಯಗಳ ಹುಡುಕಾಟದ ಕಥನ. ಈ ವ್ಯಾಖ್ಯಾನಗಳನ್ನು , ಅವು ಗಳ ಮಿತಿಗಳನ್ನು ’ ನಾವೆಲ್ ನ್ ಸಿದ್ಧಾಂತ, ಸಮಾಜಶಸ್ತ್ರೀಯ ವಿವರಣಿ ಎಂಬ ಮೊದಲ ಅಧ್ಯಾಯದಲ್ಲಿ ಲೇಖಕರು ಚರ್ಚಿಸಿದ್ದಾರೆ.
 ’ ರಾಷ್ಟ್ರ, ಆಧುನಿಕತೆ ಮತ್ತು ಮೊದಲ  ಕಾದಂಬರಿಗಳಿಉ’ ಎಂಬ್ ಎರಡನೆಯ ಅಧ್ಯಾಯದಲ್ಲಿ ಡಾ| ಪಡಿಕ್ಕಲ್ ಕರಾವಳಿ, ಮೈಸೂರು ಮತ್ತು ಉತರ ಕರ್ನಾಟಕದಲ್ಲಿ ವಿಭಿನ್ನ ರೀತಿಯ ಮೊದಲ ಕಾದಂಬರಿಗಳ ಸೃಷ್ಟಿಗೆ ಕಾರಣಾವಾದ ಸಾಂಸ್ಕೃತಿಕ ಸ್ಥಿತಿಯನ್ನು ವಿವರಿಸಿ, " ಅಂದರೆ ಪಾಶ್ಚಾತ್ಯ ’ನಾವೆಲ್’ ಪರಿಕಲ್ಪನೆಯು ಕನ್ನಡ ಕಾದಂಬರಿಯ್ ಮುಂದೆ ಇದ್ದ ಮಾದರಿಯಾಗಿದೆ. ಆದರೆ ಸಂಪೂರ್ಣವಾಗಿ ’ನಾವೆಲ್’ ಗೆ  ಸದೃಶವಾದ ಕಾದಂಬರಿಯನ್ನು ಕನ್ನಡ ಲೇಖಕರು ರಚಿಸಲಿಲ್ಲ. ಸಾಂಪ್ರದಾಯಿಕ ಬರಹದ ಸಂಪ್ರದಾಯ ಮತ್ತು ನಾವೆಲ್ ಗಳ ನಡುವಿನ್ ರಚನೆಯಿಂದ ಆರಂಭಿಸಿ ಆಧುನಿಕ ಕನ್ನಡ ಕಾದಂಬರಿಯನ್ನು ಅವರು ರಚಿಸಿದರು. ಆದುದರಿಂದ   ’ಕಾದಂಬರಿ’ ಯು ಸೈದ್ಧಾಂತಿಕವಾಗಿಯೇ ನಾವೆಲ್ ಮತ್ತು ಸಾಂಪ್ರದಾಯಿಕ ಕಥನಗಳಿಂದ ಭಿನ್ನ ಮತ್ತು ವಿಶಿಷ್ಟವಾದುದಾಗಿದೆ. ಹತ್ತೊಂಬತ್ತನೆಯ ಶತಮಾನದ ಕನ್ನಡದ ರಮ್ಯ ಕಥಾನಕಗಳು, ರೂಪಾಂತರಗಳು, ನಾಟಕಗಳಲ್ಲಿಯೂ ಕನ್ನಡ ಕಾದಂಬರಿಯ ಹುಟ್ಟಿಗೆ ಕಾರಣ್ವಾದ ವಿದ್ಯಾವಂತ ವರ್ಗದ ಮನ: ಸ್ಥಿತಿಯು ಬಿಂಬಿಸಲ್ಪಟ್ಟಿದೆ" ಎನ್ನುತ್ತಾರೆ.’ ಪ್ರಮುಖ ಲೇಖಾಕರು ಮತ್ತು ವಾಸ್ತವಿಕ ನಿರೂಪಣೆಯ ರಾಜಮಾರ್ಗ’ ಎಂಬ ಮೂರನೆಯ ಅಧ್ಯಾಯದಲ್ಲಿ ಡಾ| ಪಡಿಕ್ಕಲ್ ಅವರ ಒಳನೋಟಗಳಿವೆ. ಮೊದಲ ಕಾದಂಬರಿಗಳಲ್ಲಿರುವ ಆದರ್ಶ್ ಮತ್ತು ವಾಸ್ತವ ಸಂಬಂಧಗಳ ಪರಿಶೀಲನೆ ಯಲ್ಲಿ ಅವರು ಮೂರು ವಿಭಿನ್ನ ಸ್ಥಿತಿಗಳನ್ನು ಗುರುತಿಸಿದ್ದಾರೆ. ಗುಲ್ವಾಡಿ, ಬೋಳಾರರ ಕೃತಿಗಳಲ್ಲಿ ಭವಿಷ್ಯದಲ್ಲಿ ನಿಜವಾಗಿ ಬಿಡುವ ಆದರ್ಶಗಳೀವೆ. ಸಂಪ್ರದಾಯ ಧಾರ್ಮಿಕತೆಯ ವಿಡಂಬನೆ ಈ ಕೃತಿಗಳಲ್ಲಿದೆ. ಪ್ರಗತಿಗಾಗಿ ಗತಕಾಲದತ್ತ  ಹೊರಳುವ ಗಳಗನಾಥ- ಕೆರೂರರ ಕಾದಂಬರಿಗಳಲ್ಲಿ ಆದರ್ಶದ ವೈಭವೀಕರಣವಿದೆ. ಸಂಪ್ರ್ದಾಯವಾದಿಯಾದ ಎಂ,ಎಸ್. ಪುಟ್ಟಣ್ಣಾನವರಿಗೆ ಪಾಶ್ಚಾತ್ಯ ವೈಚಾರಿಕತೆಯ ಅಪಾಯಗಳು ತಿಳಿದಿವೆ. ಆದರ್ಶ ಗತಜೀವನವನ್ನು ಪುನರುಜ್ಜೀವನಗೊಳಿಸುವುದು ಅಸಾಧ್ಯ ಎಂಬ ಅರಿವಿರುವ ಅವರು  ಜೀವನಕ್ರಮದ ಪಲ್ಲಟಗಳನ್ನು ವಿಷಾದದಿಂದ ಚಿತ್ರಿಸುತ್ತಾರೆ.ಡಾ| ಶಿವರಾಮ್ ಪಡಿಕ್ಕಲ್ ಅವರು ವಿವರಿಸುವಂತೆ "ಅಂದರೆ ಈಗಾಗಲೇ ನಾವು ನೋಡಿರುವಂತೆ ವ್ಯಕ್ತಿ ಮತ್ತು ಸಮಾಜದ ದುರಂತ ಬಿರುಕು ಎನ್ನುವುದು ಪಾಶ್ಛಿಮಾತ್ಯ್ ನಾವೆಲ್ ನ್ ಮೂಲಭೂತ ದರ್ಶನ್ವಾದರೆ’ ವ್ಯಕ್ತಿಯ ನೆಲೆಯರಸುವ ಯತ್ನ್’ ಅಥವಾ ಸಾಮಾಜಿಕ ಅಸ್ಮಿತೆಯ ಹುಡುಕಾಟವೆನ್ನುವುದು ಕನ್ನಡ ಕಾದಂಬರಿಯ ತಾತ್ವಿಕತೆಯಾಗಿದೆ. ಇಲ್ಲಿ ಪಾಶ್ಚಿಮಾತ್ಯ ನಾವೆಲ್ ನಲ್ಲಿ ಕಾಣಿಸುವಂತೆ ನಿರೂಪಣಾ ಪ್ರಜ್ಜೆ’ಯದು ಸಮಾಜ್ ದಿಂದ ದೂರ ನಿಂತಿರುವ ಸ್ಥಿತಿಯಲ್ಲ. ಬದಲಾಗಿ ಎಅರಡು ವಿರೋಧೀ ಸಂಸ್ಕೃತಿಗಳಾ )ಆಳಿಸಿಕೊಳ್ಳುವ ಮತ್ತು ಆಳುವ್) ಮುಖಾಮುಖಿಯಲ್ಲಿಯೇ ತನ್ನ ಜನ್ಮವನ್ನು ಪಡೆದು ಅವುಗಳ  ನಡುವೆ ಸಿಲುಕಿರುವ ತ್ರಿಶಂಕು ಸ್ಥಿತಿಯಿಂದ ತನ್ನ ಸಾಮಾಜಿಕ ಅಸ್ಮಿತೆಯನ್ನು ಸ್ಥಾಪಿಸುವ ಯತ್ನವನ್ನು ಕನ್ನಡ ಕಾದಂಬರಿಯ ತಿರುಳೆಂದು  ನಾವು ಗ್ರಹಿಸಬಹುದು. ಆದುದರಿಂದ ಕಾದಂಬರಿಯನ್ನು ’ದೇಸೀ ವಿದ್ಯಾವಂತ ಮತ್ತು ವರ್ಗದ ಸಾಮಾಜಿಕ ಅಸ್ಮಿತೆಯ ಹುಡುಕಾಟದ ಕಥನ’ ಎಂದು ಕರೆಯಬಹುದು.
ಘುಟನಾಪ್ರಧಾನತೆ, ವಾಸ್ತವಿಕತೆ ಮತ್ತು ಆದರ್ಶವಾದಿತನಗಳು ಬೆರೆತಿರುವ ನಿರೂಪಣಾ  ಶೈಲಿ, ಪಾಶ್ಚಿಮಾತ್ಯ ಅರ್ಥದಲ್ಲಿ ’ಇಂಡಿವಿಜುವಲ್’ ಎಂದು ಕರೆಯಲಾಗದ ವಿಶಿಷ್ಟ ವ್ಯಕ್ತಿವಾದಿತನವನ್ನು ಹೊಂದಿದ ಪಾತ್ರಗಳ ಸೃಷ್ಟಿ, ಆದರ್ಶ ಮತ್ತು ವಾಸ್ತವಗಳ ಘರ್ಷಣಾತ್ಮಕ ಸನ್ನಿವೇಶಗಳು ಪರಸ್ಪರ ಘರ್ಷಿಸದೆ ಮೂಲಸ್ಥಿತಿಗೆ ಮರಳುವ ರೀತಿ ಇವನ್ನು ಕನ್ನಡದ ಮೊದಲ ಕಾದಂಬರಿಗಳ ವಿಶಿಷ್ಟ ಲಕ್ಷಣಗಳೆಂದು ಡಾ| ಪಡಿಕ್ಕಳ್ ಗುರುತಿಸುತ್ತಾರೆ.

’ ಇತರ ಕಾದಂಬರಿಗಳು ಮತ್ತು ಮೆಲೋಡ್ರೆಮಾಟಿಕ್ ನಿರೂಪಣೆ ಎಂಬ್ ನಾಲ್ಕನೆಯ ಅಧ್ಯಾಯದಲ್ಲಿ ಲೇಖಕರು ವಸ್ತುವಿನ ದೃಷ್ಟಿಯಿಂದ ಅಧ್ಯಯನದ ಅನುಕೂಲಕ್ಕಾಗಿ ಮಾಡಿಕೊಂಡಿರುವ ವಿಭಾಗಗಳಿವು.೧.ಆರ್ಯ ಕುಲಾಂಗನೆಯರನ್ನು ವೈಭವೀಕರಿಸುವ ಕಾದಂಬರಿಗಳು(ತಿರುಮಲಾಂಭಾ), ೨.ಸ್ತ್ರೀ ಸಮಸ್ಯೆ ಕೇಂದ್ರವಾಗಿರುವ, ಗೃಹಚಿತ್ರವನ್ನು ಮಂಡಿಸುವ ಕಾದಂಬರಿಗಳು(ಆರ್. ಕಲ್ಯಾಣಮ್ಮ ಶಿವರಾಮ್ ಕಾರಂತ, ಎಂ. ಅಣ್ಣಾಜಿ ರಾವ್), ೩. ಗತ ವೈಭವವನ್ನು ವಸ್ತುವಾಗಿರಿಸಿಕೊಂಡ ಕಾದಂಬರಿಗಳು. (ಭಿ.ಪ. ಕಾಳೆ), ೪. ಪತ್ತೇದಾರಿ ಕಾದಂಬರಿಗಳು.

 ’ ಕೆಲವು ಕಾದಂಬರಿಗಳ  ಅಧ್ಯಯನ’   ಎಂಬ ಐದನೆಯ ಅಧ್ಯಾಯದಲ್ಲಿ  ಡಾ| ಪಡಿಕ್ಕಲ್ ಕನ್ನಡದ  ಮೊದಲ ಕಾದಂಬರಿಗಳು ಆಧುನಿಕ   ರಾಷ್ಟ್ರ ಅದರ  ರಾಷ್ಟ್ರೀಯತೆ, ಆಧುನಿಕತೆ ಮತ್ತು ಆ ಆಧುನಿಕತೆಯಲ್ಲಿ ರೂಪುಗೊಳ್ಳುವ ಆಧುನಿಕ ವ್ಯಕಿತ್ವಗಳನ್ನು ನಿರೂಪಿಸುವ ಕಥನಗಳು ಎನ್ನುವ ಮಾತನ್ನು , ’ ಇಂದಿರಾಬಾಯಿ’ ’ ಮಾಡಿದ್ದುಣ್ಣೋ ಮಹಾರಾಯ್’ ’ ಮಾಧವ ಕರುಣಾವಿಲಾಸ’ ದುಗೇರ್ಶ ನಂದಿನಿ ’ ಚೋರ ಗ್ರಹಣ  ತಂತ್ರ ’ ಎಂಬ ಐದು ಕಾದಂಬರಿಗಳ ವಿಶ್ಲೇಷಣೆಯಿಂದ ಸಮರ್ಥಿಸಿದ್ದಾರೆ.

’ಡಾ| ಬಿ.ಎ. ವಿವೇಕ ರೈ ಅವರು ಮುನ್ನುಡಿಯಲ್ಲಿ ಬರೆದಿರುವಂತೆ ಡಾ| ಪಡಿಕ್ಕಲ್ ಅವರ ಈ ಅಧ್ಯಯನವು ಹೊರನೋಟಕ್ಕೆ ಸಮಾಜ್ ಶಾಸ್ತ್ರೀಯ ಎಂದು ಕಾಣಿಸಿದರೂ ಅಂತ ರಂಗದಲ್ಲಿ ಮಾರ್ಕ್ಸ್  ವಾದಿ, ಸ್ತ್ರೀವಾದಿ,   ರಾಚನಿಕೋತ್ತರ, ಆಧುನಿಕೋತ್ತರ, ವಸಾಹತೋತ್ತರ, ವಾಚಕ ಕೇಂದ್ರಿತ ಚಿಂತನೆಗಳಾನ್ನು ಅವುಗಳ ಗಡಿ ರೇಖೆಗಳನ್ನು ಮೀರಿ ಒಂದು ಗೂಡಿಸುತ್ತದೆ." ಜನಪ್ರಿಯ ಸಾಹಿತ್ಯ, ಗಂಭೀರ ಸಾಹಿತ್ಯ ಎಂಬ ವರ್ಗೀಕರಣವನ್ನು ನಿರಾಕರಿಸುವ ಪಡಿಕ್ಕಲ್ ಪತ್ತೇ ದಾರಿ ಕಾದಂಬರಿಗಳನ್ನೂ ಅಧ್ಯಯನ ಮಾಡಿದ್ದಾರೆ. ಕನ್ನಡದ ಮೊದಲ್ ಕಾದಂಬರಿಗಳ ಓದುಗರ ಪ್ರತಿ ಕ್ರಿಯೆಗಳಿಗೆ ಅವರು ಒತ್ತು ನೀಡಿದ್ದಾರೆ. ವಸಾಹತುಶಾಹಿ ತಂದ ಇಂಗ್ಲಿಷ್ ಶಿಕ್ಷಣದಿಂದ ಪ್ರೇರಣೆ ಪಡೆದು ಕನ್ನಡದ ಕಾದಂಬರಿ ಪ್ರಕಾರ ಹುಟ್ತಿತು. ಇಂಗ್ಲಿಷ್
 ಶಿಕ್ಷಣದ ಮೂಲಕ ಬಂದ, ಆಧುನಿಕತೆ-ವೈಚಾರಿಕತೆಯನ್ನು ಕುರಿತ ಆಕರ್ಷಣೆ-ವಿಕರ್ಷಣೆ ಕನ್ನಡದ ಮೊದಲ್ ಕಾದಂಬರಿಗಳಲ್ಲಿದೆ. ವಸಾಹತುಶಾಹಿ ಶಿಕ್ಷಣದ ಫಲ ಶ್ರುತಿಯಾಗಿ ಸೃಷ್ಟಿಯಾದ ಕನ್ನಡದ ಮೊದಲ ಕಾದಂಬರಿಗಳನ್ನು ಡಾ| ಪಡಿಕ್ಕಳ್ ವಸಾಹತೋತ್ತರ ಚಿಂತನೆಯ ನೆಲೆಯಿಂದ ವಿಮರ್ಶಿಸಿದ್ದಾರೆ. ಕನ್ನಡ ಕಾದಂಬರಿ ಹಳೆಯ್ ಗದ್ಯ ಕಥನಗಳ ಮುಂದುವರಿಕೆಯೂ ಅಲ್ಲ, ಪಾಶ್ಚಾತ್ಯ ’ನಾವೆಲ್’ ನ ನಕಲೂ ಅಲ್ಲ, ಅದು ಆಧುನಿಕ ವಿದ್ಯಾವಂತ ವರ್ಗದ ಅಸ್ಮಿತೆಯ ಹುಡುಕಾಟದ ಕಥನ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡದ ಮೊದಲ್ ಕಾದಂಬರಿಗಳ ಉಗಮದ ಸಾಂಸ್ಕೃತಿಕ ಹಿನ್ನಲೆಯನ್ನು ಚರ್ಚಿಸುವ ’ ಕನ್ನಡ ಕಾದಂಬರಿಗಳ ಮೊದಲ್ ಹೆಜ್ಜೆಗಳು’(ಸಂ-ಡಾ| ವಿವೇಕ ರೈ) ಎಂಬ ಲೇಖನ ಸಂಕಲನವೊಂದನ್ನು ಮಂಗಳೂರು ವಿಶ್ವವಿದ್ಯಾನಿಲಯ ೧೯೮೭ರಲ್ಲಿ ಪ್ರಕಟಿಸಿತು. ಇದೀಗ, ಹೈದರಾಬಾದ್ ವಿಶ್ವ ವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ| ಶಿವರಾಮ್ ಪಡಿಕ್ಕಲ್ ಅವರ ’ ನಾಡು ನುಡಿಯ ರೂಪಕ’ ಎಂಬ ಸಂವಾದ ಯೋಗ್ಯ ಸಂಪ್ರಬಂಧವನ್ನು ಪ್ರಕಟಿಸಿರುವ ಮಂಗಳೂರು ವಿ.ವಿ. ಪ್ರಸಾರಾಂಗ್, ಕನ್ನಡ ಮೊದಲ ಕಾದಂಬರಿಗಳ ಪುನರಾವಲೋಕನದ ಮುಂದಿನ ಹೆಜ್ಜೆಯನ್ನಿರಿಸಿದೆ.
ಮುರಳೀಧರ ಉಪಾಧ್ಯ ಹಿರಿಯಡಕ

ನಾಡು-ನುಡಿಯ ರೂಪಕ
(ರಾಷ್ಟ್ರ, ಆಧುನಿಕತೆ ಮತ್ತು ಕನ್ನಡದ ಮೊದಲ್ ಕಾದಂಬರಿಗಳು)
ಲೇ:ಡಾ|ಶಿವರಾಮ್ ಪಡಿಕ್ಕಲ್
ಪ್ರ: ಪ್ರಸಾರಾಂಗ, ಮಂಗಳೂರು ವಿಶ್ವವಿದ್ಯಾನಿಲಯ,
ಮಂಗಳ ಗಂಗೋತ್ರಿ-೫೭೪೧೯೯.
ಮೊದಲ್ ಮುದ್ರಣ:೨೦೦೧
ಬೆಲೆ ರೂ.೧೨೦.


Saturday, June 20, 2020

ಮುರಳೀಧರ ಉಪಾಧ್ಯ ಹಿರಿಯಡಕ - ಗೀತಾ ನಾಗಭೂಷಣ ಅವರ " ಬದುಕು " { 2001 } ಅಸಾಧಾರಣ ಪ್ರಾದೇಶಿಕ ಕಾದಂಬರಿ

’ಬದುಕು’  ಒಂದು ಪ್ರಾದೇಶಿಕ  ಕಾದಂಬರಿಯಾಗಿ  ಮೊದಲ ಓದಿನಲ್ಲೇ ಸಹೃದಯರನ್ನು ಆಕರ್ಷಿಸುತ್ತದೆ. ಗುಲ್ಬರ್ಗಾದ ಸಮೀಪದ ಶಿವಳ್ಳಿಯ ಭೌಗೋಳಿಕ ವಿವರಗಳು ಈ ಕಾದಂಬರಿಯಲ್ಲಿವೆ. ಶಿವಳ್ಳಿ ಯ ಬದುಕಿನ ಸಾಮಾಜಿಕ, ಸಾಂಸ್ಕೃತಿಕ ವಿವರಗಳನ್ನು ಗ್ರಹಿಸಿ, ಭಾಷೆಯಲ್ಲಿ ಪ್ರತಿ  ಸೃಷ್ಟಿಸಲು ಲೇಖಕಿ ಗೀತಾ ನಾಗಭೂಷಣ  ಪ್ರಯತ್ನಿಸಿದ್ದಾರೆ.

ಶಿವಳ್ಳಿಯ ಮಲ್ಲಪ್ಪ ಜಮಾದಾರನ ಕುಟುಂಬದ ಎರಡು ತಲೆಮಾರಿನ ಕತೆ ಈ ಕಾದಂಬರಿಯ     ಮುಖ್ಯ ಕವಲು.     ಹನ್ನೆರಡನೆಯ ಶತಮಾನದ ಕಲ್ಯಾಣದ ಅಂತರ್ ಜಾತೀಯ ವಿವಾಹದ ಸಮಸ್ಯೆ ಇಪ್ಪತ್ತನೆಯ ಶತಮಾನದ ಶಿವಳ್ಳಿಯಲ್ಲೂ ಮುಖ್ಯವಾಗುತ್ತದೆ. ಮಲ್ಲಪ್ಪನ ಮಗಳು ಕಾಶಮ್ಮ ಲಿಂಗರಾಜನನ್ನು ಪ್ರೀತಿಸುತ್ತಾಳೆ. ಜಾತಿ-ಭೇದದಿಂದಾಗಿ ಇವರ  ವಿವಾಹ ಪೂರ್ವ ಪ್ರಣಯ ಭಗ್ನವಾಗುತ್ತದೆ. ಲಿಂಗ ರಾಜ್-ನೀಲಮ್ಮನನ್ನು ಕಾಶಮ್ಮ-ಮಾರ್ತಾಂಡನನ್ನು ಮದುವೆಯಾಗ ಬೇಕಾಗುತ್ತದೆ ಕೆಲವು ವರ್ಷಗಳ ಅನಂತರ ಲಿಂಗರಾಜ ಕಾಶಮ್ಮ ನನ್ನು ಕರೆತಂದು ತನ್ನ ಉಪಪತ್ನಿಯಾಗಿ ಇರಿಸಿಕೊಳ್ಳುತ್ತಾನೆ. ತನ್ನ ಹೆಂಡತಿಯ  ದಾಂಪತ್ಯ ದ್ರೋಹದಿಂದ ಕಂಗಾಲಾದ ಮಾರ್ತಾಂಡ ಸನ್ಯಾಸಿಯಾಗುತ್ತಾನೆ. ತನ್ನ ಸಾವು ಸಮೀಪಿಸುತ್ತಿದೆ ಅನ್ನಿದಾಗ ಕೊನೆಯ ಬಾರಿ ಕಾಶಮ್ಮನನ್ನು ಭೇಟಿಯಾಗುತ್ತಾನೆ. ಈ ಕಾದಂಬರಿಯಲ್ಲಿ ಮಾರ್ತಾಂಡನ ಪಾತ್ರ ಬೆಳೆಯುವುದಿಲ್ಲ. ಹಾದರದಂತೆ ಕುಡಿತವೂ ಅಂಗ. ಸೇಂದಿ ಅಂಗಡಿಯಲ್ಲಿ ನಡೆದ ಜಗಳವೊಂದರಲ್ಲಿ ಮಲ್ಲಪ್ಪನ ಮಗ ಕಲ್ಯಾಣೆ ಮುಕಡಪ್ಪನಿಗೆ ಹೊಡೆಯುತ್ತಾನೆ. ಬಿದ್ದ ಮುಕಡಪ್ಪ ತಲೆಗೆ ಕಲ್ಲು ತಾಗಿ ಸಾಯುತ್ತಾನೆ. ಕೊಲೆ ಆರೋಪ ಹೊತ್ತ ಕಲ್ಯಾಣೆ ಹದಿನಾಲ್ಕು ವರ್ಷ ಜೈಲುಶಿಕ್ಷೆ ಅನುಭವಿಸುತ್ತಾನೆ. ಕಲ್ಯಾಣೆ ಯ ಹೆಂಡತಿ ಬೆಳ್ಳಿ ಊರಿನ ಗೌಡನ ಉಪ ಪತ್ನಿಯಾಗಲು ಒಪ್ಪದೆ ಸ್ವಾಭಿಮಾನಿಯಾಗಿ, ಗಂಡನ ನಿರೀಕ್ಷೆಯಲ್ಲಿ ಬದುಕುತಾಳೆ.
ಜೋಗತಿಯರ ಬದುಕಿನ ದಾರುಣ ಕತೆ ಈ ಕಾದಂಬರಿಯ ಇನ್ನೊಂದು ಕವಲು. ಮನೆಯವರ  ಒತ್ತಾಯದಿಂದ ಜೋಗತಿಯಾದ ಭರಮ್ಯಾನ ಮಗಳು ನೀಲವ್ವ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. "ದೊಡ್ಡ ದೊಡ್ದ ಮ್ಯಾಲಿನ ಜಾತಿ ಹೆಂಗಸರು ಯಾರಲೆ    ಜೋಗಣೇರಾಗಿ ಹಿಂಗ್   ಮೈ ಮಾರ್ಕೊಳ್ಳಾ ದಂಧಾಕ್ಕೆ ನಿಂತಿದ್ದು ಎಲ್ಲೆಲೆ  ಕೇಳಿದ್ದೇಯ ನೀನು?" ಎಂದು ನಿಂಬೆವ್ವ ಪ್ರಶ್ನಿಸುತ್ತಾಳೆ. ಜೋಗಿತಿಯಾಗಿದ್ದ ತುಳಜಾ ಹಾದರದ ಬದುಕನ್ನು ಬಿಟ್ಟು ಹುಸೇನನನ್ನು ಮದುವೆಯಾಗಿ ಊರುಬಿಟ್ಟು ಹೋಗುತ್ತಾಳೆ. ಚುಂಚೂರು ಆರೋಪ ನಿರಾಕರಿಸಿ ಪ್ರತಿಭಟಿಸುತ್ತಾಳೆ.
ಉಪ ಪತ್ನಿ ವ್ಯವಸ್ಥೆಯನ್ನು ಈ ಕಾದಂಬರಿ ಮೆಲುದನಿಯಲ್ಲಿ ವಿರೋಧಿಸುತ್ತದೆ. ಈರವ್ವ, ಮಲ್ಲಪ್ಪ ಜಮಾದಾರನ ಉಪಪತ್ನಿಯಾಗಿದ್ದಾಳೆ. ಬೆಳ್ಳಿ, ಗೌಡನೊಬ್ಬನ ಉಪಪತ್ನಿಯಾಗಲು ಒಪ್ಪುವುದಿಲ್ಲ. ತುಳಜಾಳ ಪ್ರತಿಭಟನೆ ಯಲ್ಲಿ ಬೆಳ್ಳಿಯ ಸ್ವಾಭಿಮಾನದಲ್ಲಿ ಕಾದಂಬರಿ ಕಾರ್ತಿಯ  ವಿಷಾದಪೂರ್ಣ ಆಶಾವಾದ ಕಾಣಿಸುತ್ತದೆ. ಕಲ್ಲವ್ವ, ತನ್ನ ಗಂಡನ ಮೃಗೀಯ ಲೈಂಗಿಕ ಲಾಲಸೆಗೆ ಬಲಿಯಾಗುತ್ತಾಳೆ. ಫತರೂನ ಪಾತ್ರ ಚಿತ್ರಣದಲ್ಲಿ ಶಿವಳ್ಳಿಯಲ್ಲಿನ ಹಿಂದೂ ಮುಸ್ಲಿಂ ಸಹ ಬಾಳ್ವೆಯನ್ನು ಕಾಣುತ್ತೇವೆ. ಶಿಥಿಲ ಬಂಧದ ಈ ಕಾದಂಬರಿ ದೇಸಿ ಕಥನ ಪರಂಪರೆಗೆ ಸೇರುತ್ತದೆ. ದಟ್ಟವಾದ ಅನುಭವ

ಮಂಡನೆಯಲ್ಲಿ ಆಸಕ್ತರಾದ ಲೇಖಕಿ ಗೀತಾ ನಾಗಭೂಷಣ ಆಖ್ಯಾನಗಳಷ್ಟೇ ಉಪಾಖ್ಯಾನಗಳಿಗೂ ಮಹತ್ವ ನೀಡಿದ್ದಾರೆ. ಸರ್ವ ಸಾಕ್ಷಿತ್ವದ ನಿರೂಪಣಿ ಇರುವ ಈ ಕಾದಂಬರಿಯಲ್ಲಿ ಉರ್ದು, ಹಿಂದೀ ಶಬ್ದಗಳು ಹಾಸುಹೊಕ್ಕಾಗಿರುವ ಗುಲ್ಬರ್ಗಾ ಕನ್ನಡವನ್ನು ಲೇಖಕಿ ಸಮರ್ಥವಾಗಿ ಬಳಸಿದ್ದಾರೆ. ಸುದೀರ್ಘವಾದ ಈ ಕಾದಂಬರಿಯ ಮೊದಲ್ ನೂರು ಪುಟ ಓದಿದ ಮೇಲೆ ’ ಗುಲ್ಬರ್ಗ ಕನ್ನಡ ಅರ್ಥವಾಗುತ್ತದೆಯೇ?" ಎಂಬ ಪ್ರಶ್ನೆಗೆ ನೀವು ’ಹೊಯಿಂದು’ (ಹೌದು)ಎನ್ನುತ್ತೀರಿ ಜನಪ್ರಿಯ ಹಾಗೂ  ಸೌಂದರ್ಯಾತ್ಮಕ ಅಂಶಗಳಲ್ಲಿ ಲೇಖಕಿ ರಾಜಿ ಮಾಡಿಕೊಂಡಿದ್ದಾರೆ. ಸಂಭಾಷಣಿ ಹಾಗೂ ಲೈಂಗಿಕ ವರ್ಣನೆಗಳನ್ನು ಅವಲೋಕಿಸಿದಾಗ ಈ ಅಂಶ ಸ್ಪಷ್ಟವಾಗುತ್ತದೆ.

 ’ಬದುಕು’ ಮಾನವೀಯ ಅನುಭವದ ವ್ಯಾಪ್ತಿಯನ್ನು ವಿಸ್ತರಿಸುವ, ವೈವಿಧ್ಯಪೂರ್ಣ ಜೀವನಾನುಭವವನ್ನು ಜೀವಂತಿಕೆಯಿಂದ ಚಿತ್ರಿಸುವ ಅಸಾಧಾರಣ ಕಾದಂಬರಿ. ಈ ಬಹುಕೇಂದ್ರಿತ ಕಾದಂಬರಿ ಪುರುಷ ಪ್ರಧಾನ ಸಮಾಜದ ಜೋಗತಿ ಹಾಗೂ ಉಪಪತ್ನಿ ವ್ಯವಸ್ಥೆಯಿಂದ ಬಿಡುಗಡೆ ಪಡೆಯಲು ಹೆಣಗಾಡುತ್ತಿರುವ ಗುಲ್ಬರ್ಗಾದ ಗ್ರಾಮೀಣ ಮಹಿಳೆಯರ ಬದುಕಿನ ಆತ್ಮೀಯ ಚಿತ್ರಣವನ್ನು ನೀಡುತ್ತದೆ.

ಮುರಳೀಧರ ಉಪಾಧ್ಯ ಹಿರಿಯಡಕ,
ಬದುಕು(ಕಾದಂಬರಿ)
ಲೇ: ಗೀತಾ ನಾಗಭೂಷಣ
ಪ್ರ: ಲೋಹಿಯಾ ಪ್ರಕಾಶನ
ಕ್ಷಿತಿಜ, ಕಪ್ಪಗಲ್ಲು ರಸ್ತೆ,
ಗಾಂಧಿನಗರ, ಬಳ್ಳಾರಿ-೫೮೩೧೦೩
ಮುದ್ರಣ:೨೦೦೧ ಬೆಲೆ ರೂ.೧೯೦ ಪುಟಗಳು-೪೮೯.

Sunday, July 13, 2014

ನರೇಂದ್ರ ಪೈ - ಕನ್ನಡ ಕಾದಂಬರಿ ಸ್ವರೂಪ {ಭಾಗ -2 }

pls clik title to read Narendra Pai's article -Kannada Novel -Latest Trends
ವಿವೇಕ ಶಾನುಭಾಗ - ಒಂದು ಬದಿ ಕಡಲು -ಗುರುಪ್ರಸಾದ್ ಕಾಗಿನೆಲೆ- ಗುಣ , ಎಸ್. ಸುರೇಂದ್ರನಾಥರ -ಎನ್ನ ಭವದ ಕೇಡು , ವಿ ಆರ್. ಕಾರ್ಪೆಂಟರ್ -ಅಪ್ಪನ ಪ್ರೇಯಸಿ , ನೀಲಿ ಗ್ರಾಮ , ಉಮಾರಾವ್ - ವನಜಮ್ಮನ ಸೀಟು ,

ನರೇಂದ್ರ ಪೈ- ಹೊರಳುವ ದಾರಿಯಲ್ಲಿ ಕನ್ನಡ ಕಾದಂಬರಿ ಪ್ರಕಾರ

pls clik title to read Narendra Pai's article -New Trends in KANNADA NOVEL

Saturday, August 3, 2013

ಕನ್ನಡಕಾದಂಬರಿ – ಇಂದಿನ ಸವಾಲುಗಳು -ಎಚ್.ಎಸ್. ರಾಘವೇಂದ್ರ ರಾವ್.

ನಾದಲೀಲೆ-naadaleele: ಕನ್ನಡಕಾದಂಬರಿ – ಇಂದಿನ ಸವಾಲುಗಳು ಕಥೆಮತ್ತು ಕಾದಂಬರಿಗಳ ನ...: ಕನ್ನಡ ಕಾದಂಬರಿ – ಇಂದಿನ ಸವಾಲುಗಳು ಕಥೆ ಮತ್ತು ಕಾದಂಬರಿಗಳ ನಡುವಿನ ವ್ಯತ್ಯಾಸವನ್ನು , ಬರೆಯುವವರ ಅಥವಾ ಓದುವವರ ನೆಲೆಯಿಂದ ಹುಡುಕುವ ಕೆಲಸವು ಕನ್ನಡದಲ್ಲಿ ಅಷ್...