stat Counter



Showing posts with label ನಟರಾಜ ಹುಳಿಯಾರ್. Show all posts
Showing posts with label ನಟರಾಜ ಹುಳಿಯಾರ್. Show all posts

Wednesday, July 20, 2016

ನಟರಾಜ ಹುಳಿಯಾರ್ - ಅಧಿಕಾರಶಾಹಿಯ ಹೃದಯ ಪರೀಕ್ಷೆ

ಅಧಿಕಾರಶಾಹಿಯ ಹೃದಯ ಪರೀಕ್ಷೆ | ಪ್ರಜಾವಾಣಿ

ತಬರಿಸಮ್ - ಅಧಿಕಾರಶಾಹಿಯ ಯಾಂತ್ರಿಕ , ಅಮಾನವೀಯ ವರ್ತನೆ . " ತಬರನ ಕತೆ " ಹಿನ್ನೆಲೆಯಲ್ಲಿ ಕಿ. ರಂ . ನಾಗರಾಜ್ ಬಳಸುತ್ತಿದ್ದ ಶಬ್ದ - ಕನ್ನಡ ನಿಘಂಟಿಗೆ ಕಿ. ರಂ. ಕೊಡುಗೆ

Wednesday, May 11, 2016

ನಟರಾಜ ಹುಳಿಯಾರ್ - ಕಾಂಗ್ರೆಸ್ ಸರ್ಕಾರ: ಮೂರನೇ ಹುಟ್ಟು ಹಬ್ಬದ ಎದುರು

ಕಾಂಗ್ರೆಸ್ ಸರ್ಕಾರ: ಮೂರನೇ ಹುಟುıಹಬĽದ ಎದುರು: ವಾರದಲ್ಲಿ ಒಂದೇ ಒಂದು ದಿನ ಸಾರಿಗೆ ಮಂತ್ರಿಗಳು ನಗರದಲ್ಲಿ ಅಡ್ಡಾಡಿ, ಬೆಳಿಗ್ಗೆ ಕೆಲಸಕ್ಕೆ ಹೊರಟ ಬೈಕ್ ಸವಾರರಿಗೆ ದಿನವಿಡೀ ಪೊಲೀಸರು ಕೊಡುತ್ತಿರುವ ಕಿರುಕುಳಗಳನ್ನು ಕಣ್ಣಾರೆ ನೋಡಲಿ: ಜನರು ಯಾಕೆ ಸರ್ಕಾರಕ್ಕೆ ನಿತ್ಯ ಶಾಪ ಹಾಕುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಹಿಂದಿನ ಸರ್ಕಾರಗಳಲ್ಲಿದ್ದ ಅವ್ಯವಸ್ಥೆಯೇ ಮುಂದುವರಿದಿದೆ. ಮಧ್ಯವರ್ತಿಗಳಿಲ್ಲದೆ ಕೆಲಸಗಳು ನಡೆಯುತ್ತಿಲ್ಲ.

Wednesday, March 30, 2016

ನಟರಾಜ ಹುಳಿಯಾರ್ - ಪೋಪ್ ಫ್ರಾನ್ಸಿಸ್ ಮತ್ತು ಬಸವಣ್ಣ

ಪೋಪ್ ಫ್ರಾನ್ಸಿಸ್ ಮತ್ತು ಬಸವಣ್ಣ: ಈ ಸುದ್ದಿ ಬಂದ ಮಾರನೆಯ ದಿನದ ‘ಪ್ರಜಾವಾಣಿ’ಯಲ್ಲಿ ಇಟಲಿಯ ರೋಮ್ ಸಮೀಪದ ಕ್ಯಾಸಲಿನೋವ್ ಡಿಪೋರ್ಟ್‌ನ ನಿರಾಶ್ರಿತರ ಕೇಂದ್ರದಲ್ಲಿ ನಿರಾಶ್ರಿತರ ಪಾದ ತೊಳೆದ ಪೋಪ್ ಫ್ರಾನ್ಸಿಸ್ ಕಪ್ಪು ವರ್ಣೀಯರೊಬ್ಬರ ಕಾಲಿಗೆ ಮುತ್ತಿಕ್ಕುತ್ತಿರುವ ಫೋಟೊ ಪ್ರಕಟವಾಗಿದೆ. ‘ಎಲ್ಲ ಜನಾಂಗ ಹಾಗೂ ಧರ್ಮದವರು ಒಂದೇ ದೇವರ ಮಕ್ಕಳು ಎಂಬ ನಂಬಿಕೆಯಂತೆ ಈ ಅಚರಣೆಯನ್ನು ನೆರವೇರಿಸಲಾಗುತ್ತದೆ’ ಎಂದು ಫೋಟೊ ಕೆಳಗಿನ ವಿವರಣೆ ಹೇಳುತ್ತದೆ.

Wednesday, February 17, 2016

ನಟರಾಜ ಹುಳಿಯಾರ್ - ಹೊಸ ಕಾಲದ ವಿದ್ಯಾರ್ಥಿಗಳ ಹೊಸ ಎಚ್ಚರ!

ಹೊಸ ಕಾಲದ ವಿದ್ಯಾರ್ಥಿಗಳ ಹೊಸ ಎಚ್ಚರ!: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಒಂದು ಹುಂಬ ಗುಂಪು ಅಫ್ಜಲ್ ಗುರು ಬಗ್ಗೆ ಚರ್ಚೆ ನಡೆಸುತ್ತದೆ. ಅಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ ಇದ್ದಾರೆ.  ಯಾರೋ ದೇಶವಿರೋಧಿ ಘೋಷಣೆ ಕೂಗುತ್ತಾರೆ. ಕನ್ಹಯ್ಯಾರನ್ನು ಬಂಧಿಸಲಾಗುತ್ತದೆ. ನಮ್ಮ ಸರ್ಕಾರಗಳು ಹಾಗೂ ಪೊಲೀಸರು ಬ್ರಿಟಿಷರ ಕಾಲದ ಕ್ಷುದ್ರ ತಂತ್ರಗಳನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ.