stat Counter



Showing posts with label nataraj huliyar. Show all posts
Showing posts with label nataraj huliyar. Show all posts

Wednesday, May 11, 2016

ನಟರಾಜ ಹುಳಿಯಾರ್ - ಕಾಂಗ್ರೆಸ್ ಸರ್ಕಾರ: ಮೂರನೇ ಹುಟ್ಟು ಹಬ್ಬದ ಎದುರು

ಕಾಂಗ್ರೆಸ್ ಸರ್ಕಾರ: ಮೂರನೇ ಹುಟುıಹಬĽದ ಎದುರು: ವಾರದಲ್ಲಿ ಒಂದೇ ಒಂದು ದಿನ ಸಾರಿಗೆ ಮಂತ್ರಿಗಳು ನಗರದಲ್ಲಿ ಅಡ್ಡಾಡಿ, ಬೆಳಿಗ್ಗೆ ಕೆಲಸಕ್ಕೆ ಹೊರಟ ಬೈಕ್ ಸವಾರರಿಗೆ ದಿನವಿಡೀ ಪೊಲೀಸರು ಕೊಡುತ್ತಿರುವ ಕಿರುಕುಳಗಳನ್ನು ಕಣ್ಣಾರೆ ನೋಡಲಿ: ಜನರು ಯಾಕೆ ಸರ್ಕಾರಕ್ಕೆ ನಿತ್ಯ ಶಾಪ ಹಾಕುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಸರ್ಕಾರಿ ಕಚೇರಿಗಳಲ್ಲಿ ಹಿಂದಿನ ಸರ್ಕಾರಗಳಲ್ಲಿದ್ದ ಅವ್ಯವಸ್ಥೆಯೇ ಮುಂದುವರಿದಿದೆ. ಮಧ್ಯವರ್ತಿಗಳಿಲ್ಲದೆ ಕೆಲಸಗಳು ನಡೆಯುತ್ತಿಲ್ಲ.

Sunday, April 17, 2016

ನಟರಾಜ್ ಹುಳಿಯಾರ್ - ಕನ್ನಡ ರಂಗಭೂಮಿಯ ನವವಸಂತ!

ಕನ್ನಡ ರಂಗಭೂಮಿಯ ನವವಸಂತ!: ಈ ಅಂಕಣ ಬರೆಯುವ ದಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸಿ.ಜಿ.ಕೆ. ರಾಷ್ಟ್ರೀಯ ನಾಟಕೋತ್ಸವ’ ನಡೆಯುತ್ತಿದೆ.  ರಂಗಪ್ರಿಯರೆಲ್ಲ ಪ್ರೀತಿಯಿಂದ ‘ಸಿ.ಜಿ.ಕೆ.’ ಎಂದು ಕರೆಯುತ್ತಿದ್ದ ಸಿ.ಜಿ. ಕೃಷ್ಣಸ್ವಾಮಿ ರೂಪಿಸಿದ ರಂಗಸಂಸ್ಕೃತಿ ಅಂದಿನಷ್ಟೇ ಕ್ರಿಯಾಶೀಲವಾಗಿದೆ ಎನ್ನಿಸುವಂತೆ ಜನ ನಾಟಕ ನೋಡುತ್ತಿದ್ದಾರೆ.

Wednesday, March 30, 2016

ನಟರಾಜ ಹುಳಿಯಾರ್ - ಪೋಪ್ ಫ್ರಾನ್ಸಿಸ್ ಮತ್ತು ಬಸವಣ್ಣ

ಪೋಪ್ ಫ್ರಾನ್ಸಿಸ್ ಮತ್ತು ಬಸವಣ್ಣ: ಈ ಸುದ್ದಿ ಬಂದ ಮಾರನೆಯ ದಿನದ ‘ಪ್ರಜಾವಾಣಿ’ಯಲ್ಲಿ ಇಟಲಿಯ ರೋಮ್ ಸಮೀಪದ ಕ್ಯಾಸಲಿನೋವ್ ಡಿಪೋರ್ಟ್‌ನ ನಿರಾಶ್ರಿತರ ಕೇಂದ್ರದಲ್ಲಿ ನಿರಾಶ್ರಿತರ ಪಾದ ತೊಳೆದ ಪೋಪ್ ಫ್ರಾನ್ಸಿಸ್ ಕಪ್ಪು ವರ್ಣೀಯರೊಬ್ಬರ ಕಾಲಿಗೆ ಮುತ್ತಿಕ್ಕುತ್ತಿರುವ ಫೋಟೊ ಪ್ರಕಟವಾಗಿದೆ. ‘ಎಲ್ಲ ಜನಾಂಗ ಹಾಗೂ ಧರ್ಮದವರು ಒಂದೇ ದೇವರ ಮಕ್ಕಳು ಎಂಬ ನಂಬಿಕೆಯಂತೆ ಈ ಅಚರಣೆಯನ್ನು ನೆರವೇರಿಸಲಾಗುತ್ತದೆ’ ಎಂದು ಫೋಟೊ ಕೆಳಗಿನ ವಿವರಣೆ ಹೇಳುತ್ತದೆ.