stat Counter



Showing posts with label kannada novel. Show all posts
Showing posts with label kannada novel. Show all posts

Wednesday, August 12, 2020

ಮುರಳೀಧರ ಉಪಾಧ್ಯ ಹಿರಿಯಡಕ -- ರಾಧಾಕೃಷ್ಣ ಕಲ್ಚಾರ್ ಅವರ ಕೂಡುಮನೆ { ಕಾದಂಬರಿ }

ರಾಧಾಕೃಷ್ಣ ಕಲ್ಚಾರ್ ಒಬ್ಬ ಕಸುಗಾಯಿ ಕವಿ. ಕತೆಗಾರ, ಪತ್ರಿಕಾಕತ೯ ಎಂಬುದನ್ನು ನಾನು ಗಮನಿಸಿದ್ದೇನೆ. ಒಂದು ಪ್ರಸಿದ್ದ ಜನಪ್ರಿಯ ವಾರಪತ್ರಿಕೆಯಲ್ಲಿ ಉಪಸಂಪಾದಕರಾಗಿದ್ದ ಈ ಜವ್ವನಿಗ ಕಾಲೇಜೊಂದರಲ್ಲಿ ಉಪನ್ಯಾಸಕನ ಕೆಲಸ ಸಿಕ್ಕಿದಾಗ ಪತ್ರಿಕಾರಂಗಕ್ಕೆ ವಿದಾಯ ಹೇಳಿದರು. ಈನಿಧಾ೯ರ, ಪ್ರಚಾರವನ್ನು ಇಷ್ಟಪಡದ. ಜನಪ್ರಿಯತೆಯ ಹುಚ್ಚು ಹೊಳೆಯಲ್ಲಿ ತೇಲಿ ಹೋಗದ ಅವರ ಅಂತಮು೯ಖಿ ವ್ಯಕ್ತಿತ್ವವನ್ನು ಸೂಚಿಸುತ್ತದೆ.

ಮುನ್ನುಡಿಕಾರನಾಗಿ ಒಂದೆರೆಡು ಪ್ರಸಂಗಗಳಲ್ಲಿ ನನಗೆ ಕಹಿ ಅನುಭವವಾದದ್ದುಂಟು, ದಮ್ಮಯ್ಯ ಹಾಕಿ ನನ್ನಿಂದ ಮುನ್ನುಡಿ ಪಡೆದ ಲೇಖಕರು ಅದನ್ನು ಪ್ರಕಟಿಸುವಾಗ ಕತ್ತರಿ ಪ್ರಯೋಗ ಮಾಡಿ ಪ್ರಕಟಿಸಿದ್ದರು! ರಾಧಾಕೃಷ್ಣ ಕಲ್ಚಾರ್ ಅವರ ಕೂಡುಮನೆ ಕಾದಂಬರಿ ಸ್ಪಧೆ೯ಯಲ್ಲಿ ಬಹುಮಾನ ಪಡೆದಿದೆ ಎಂಬ ಸುದ್ದಿ ಓದಿದಾಗ ಸಂತೋಷ ಪಟ್ಟ ನನಗೆ, ಈಕಾದಂಬರಿಗೆ ಮುನ್ನಡಿ ಬರೆಯಬೇಕೆಂಬ ವಿನಂತಿಯನ್ನು ನಿರಾಕರಿಸುವುದು ಸಾದ್ಯವಾಗಲಿಲ್ಲ. ಅನುಭವವು ಸವಿಯಲ್ಲ, ಅದರ ನೆನಪೇ ಸವಿಯು ಎಂಬ ಕವಿವಾಣಿಯನ್ನು ನೆನಪಿಸಿಕೊಂಡು ಒಪ್ಪಿದ್ದೇನೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಆಸುಪಾಸಿನ ಗ್ರಾಮೀಣ ಪರಿಸರದ ಅಡಿಕೆ ತೋಟದ ಬ್ರಾಹ್ಮಣ ಕುಟುಂಬವೊದರ ಕತೆ ಕಲ್ಚಾರರ ಕೂಡುಮನೆ ಯಲ್ಲಿದೆ. ಶಂಭಟ್ಟರ ಕೂಡುಮನೆ ಒಡೆಯುವುದು, ಅವರ ಮೊಮ್ಮಗನ ಕಾಲದಲ್ಲಿ ಮತ್ತೊಮ್ಮೆ ಕೂಡುಮನೆಯಾಗುವುದು ಈ ಕಾದಂಬರಿಯ ವಸ್ತು. ದುಡ್ಡಿನ ಲೆಕ್ಕಾಚಾರಕ್ಕೆ ಸಂಬಂಧಿಸಿ ಅಣ್ಣ-ತಮ್ಮಂದಿರಾದ ನಾರಾಯಣ - ಶಂಕರರಲ್ಲಿ ಉಂಟಗುವ ಮನಸ್ತಾಪವೇ ಕೂಡುಮನೆ ಒಡೆಯಲು ಕಾರಾಣವಾಗುತ್ತದೆ. ಬೆಂಗಳೂರಿನ ಕೃಷಿ ಕಾಲೇಜಿನಲ್ಲಿ ಪದವೀರನಾಗಿ ಮಹಾನಗರದ ಆಕಷ೯ಣೆಗಳಿಗೆ ಸಿಲುಕದೆ ಹಳ್ಲಿಗೆ ಹಿಂದಿರುಗುವ ಶ್ರೀಧರನ (ಶಂಭಟ್ಟರ ಮೊಮ್ಮಗ) ಕಣ್ಣೆದುರಿನಲ್ಲಿಯೇ ಕೂಡುಮನೆ ಪಾಲಾಗುತ್ತದೆ. ಮುಂದೆ ಕೂಡುಮನೆ ಹಿಸೆಯಾಗಲು ಕಾರಣನಾದ ನಾರಾಯಣ (ಶ್ರೀಧರನ ತಂದೆ) ಪಶ್ಚಾತ್ತಾಪ ಪಡುತ್ತಾನೆ. 

''ಮನೆ ಮಂದಿಯ ಸಂಬಂಧ ಗಾಢವಾಗಿ ಉಳಿದಿದೆಯೇ?ಅಥವಾ ಅದೂ ಬದಲಾಗಿದೆಯೇ? ಅಮ್ಮ. ಅಪ್ಪ, ಅಣ್ಣ, ತಂಗಿ ಇತ್ಯಾದಿ ಸಂಬಂಧಗಳೂ ಬದಲಾಗುತ್ತಿವೆಯೇ? ಈ ಪ್ರಶ್ನೆಗಳು ಶಂಭತ್ತರಿಗೆ ಬಿಡಿಸಲಾಗದ ಒಗಟುಗಳಾಗುತ್ತವೆ. ಮನುಷ್ಯ ಸಂಬಂಧಗಳನ್ನು ಕುರಿತ ನಿಗೂಢ ಒಗಟುಗಳನ್ನು ಬಿಡಿಸುವುದರಲ್ಲಿ ಕಾದಂಬಂರಿಕಾರ ಕಲ್ಚಾರರಿಗೆ ಆಸಕ್ತಿ ಇದೆ.

ಅವಿಭಕ್ತ ಕುಟುಂಬವೂಂದು ತಿರುಗಿ ಒಡೆದ ಮೇಲೆ ತಿರುಗಿ ಕೂಡುಮನೆಯಾಗಬೇಕೆಂಬುದು ಒಂದು ಅಸಾಧ್ಯ ಆದಶ೯ವಲ್ಲವೇ? ಈ ಪ್ರಶ್ನೆ ಕಾದಂಬರಿಕಾರನನ್ನು ಕಾಡಿದೆ. ಈಗ ಮತ್ತೆ ಒಟ್ಟಾಗುವುದು ಹೇಳಿದಷ್ಟು ಸುಲಭವೇ? ಎಂದು ಶ್ರೀಧರನ ಚಿಕ್ಕಪ್ಪ ರಾಜಾರಾಮ ಪ್ರಶ್ನಿಸುತ್ತಾನೆ. ಕೂಡುಮನೆ ಭಗ್ನಗೂಳ್ಳದ ಸ್ಥಾವರವಾಗಿ ಉಳಿಯಲು ಸಾಧ್ಯವೇ? ಈ ಕಾದಂಬರಿಯ ಕೂನೆಯ ಸಾಲುಗಳು ಹೀಗಿವೆ- "ಅಂತೂ ಅಜ್ಜನ ಆಸೆ ಈಡೇರುವ ಲಕ್ಷಣ ಕಾಣುತ್ತದೆ. ಇನ್ನು ನನ್ನ ಮಕ್ಕಳೋ, ರಾಮನೋ ಪಾಲು ಕೇಳುವವರೆಗೆ ಹೀಗೇ ನಡೆದೀತಿ. ಆಮೇಲೆ ಮತ್ತೂಮ್ಮೆ ಪಾಲಿಗೆ ಜಗಳ" ಎನ್ನುತ್ತ ಶೀಧರನೂ ನಕ್ಕ". 

ಕೂಡುಮನೆಯವರು ಮತ್ತು ಅವರ ನೆರೆಹೂರೆಯ ಸ್ವಜಾತಿ ಬಾಂಧವರಲ್ಲದೆ ಅನ್ಯಜಾತಿಯವರಾರೂ ಇಲ್ಲಿ ಕಾಣಿಸುವುದಿಲ್ಲ. ಹೀಗೆ ಸ್ವಜಾತಿಯ ದ್ವೀಪದಲ್ಲಿ  ಬದುಕುವುದು ಈ ಕಾಲದಲ್ಲಿ ಸಾದ್ಯವೇ/ ಇದು ಲೇಖಕರ ಅಖಂಡ ದೃಷ್ಟಿಗೆ ಸಂಬಂಧಿಸಿದ ಪ್ರಶ್ನೆಯೂ . ಕೂಡು ಮನೆ ಯಲ್ಲಿ ನಾವು ಚಿಂತಿಸುವಂತೆ ಮಾಡುವ ಇನ್ನೂಂದು ಚಿಕ್ಕ ಪಾತ್ರ_ಶ್ರೀಹರಿ. ಈತನ ಅಂತರ್ ಜಾತೀಯ ವಿವಾಹದಿಂದಾಗಿ ಇವನ ತಂದೆ ನಾರಾಯಣನಿಗೆ ಮಾನಸಿಕ ಆಘಾತವಾಗುತ್ತದೆ. ಶ್ರೀಧರನ ಕೂಡುಮನೆಯಲ್ಲಿ ಶ್ರೀಹರಿ ದಂಪತಿಗಳಿಗೆ ಸ್ವಾಗತವಿದೆಯೇ? ಕಾದಂಬರಿಕಾರರ ನಿಲುವು ಅಸ್ಪಷ್ಟವಾಗಿದೆ. 

ಕಾರಂತರ ಬೆಟ್ಟದ ಜೀವದ ಗೋಪಾಲಯ್ಯ ಅಂತರ್ ಜಾತೀಯ ವಿವಾಹ ಮಾಡಿಕೂಂಡ ತನ್ನ ಮಗನನ್ನು ಒಪ್ಪಿಕೂಳ್ಳುತ್ತಾನೆ. ಆದರೆ ಕೂಡುಮನೆ ಯ ನಾರಾಯಣನಿಗೆ ಇದು ಸಾಧ್ಯಾವಾಗುದಿಲ್ಲ.

ಅಡಿಕೆತೋಟಗಳಲ್ಲಿ ವಾಸಿಸುವ ದಕ್ಷಿಣ ಕನ್ನಡದ ಹವ್ಯಕ ಬಾಹ್ಮಣರ ಅವಿಭಕ್ತ ಕುಟುಂಬಗಳನ್ನು ಕುರಿತು ಸಮಾಜ ಶಾಸ್ತ್ರಜ್ನರೂಬ್ಬರು ಬರೆದ ಸಂಶೋಧನ ಪ್ರಬಂಧವೂಂದನ್ನುನಾನು ಇತ್ತೀಚೆಗೆ ಓದಿದೆ. ಸಂಶೋಧಕ ಮಾಕ್೯ ವಿಕ್ಟರ್ ಹೇಳುವಂತೆ, ಬೇರೆ ಆಗುವ ಸ್ಥಿತಿಯಲ್ಲಿರುವ ಅಥವಾ ಹೆಸರಿಗೆ ಮಾತ್ರ ಒತ್ತಿಗೆ ಇದ್ದು ಅಸಂತೋಷ ವ್ಯಕ್ತಪಡಿಸುತ್ತಾ ಇರುವ ಸಯುಕ್ತ ಪರಿವಾರಗಳಲ್ಲಿ ವಿಷ ಹಾಕಿರುವ ಬಗ್ಗೆ ಸಂದೇಹ ಪಡುವುದು ಹೆಚ್ಚು ಪ್ರಚಲಿತವಾಗಿದೆ. ನನ್ನ ಎರಡು ಮೂರು ವಷ೯ಗಳ ಅಧ್ಯಯನದಿಂದ ತಿಳಿದು ಬಂದಂತೆ ಓರಗಿತ್ತಿಯವರು ಒಬ್ಬರಿಗೂಬ್ಬರು ಸರಿ ಇಲ್ಲದಿದ್ದು ಯಾವಾಗಲೂ ಪರಸ್ಪರ ಮನಸ್ತಾಪದಿಂದ ಕೂಡಿದವರಾಗಿರುತ್ತಾರೆ. ಪ್ರತಿಯೊಬ್ಬಳೂ ಇನ್ನೂಬ್ಬಳಿ ತನ್ನ ಮಕ್ಕಳು ಅಥವಾ ಗಂಡನಿಗೆ ಗಾಕಿರುವರೆಂದು ಸಂದೇಹಿಸಿದ್ದಳು. ಈ ಸಂದೇಹ ಮಾನಸಿಕ ಉನ್ಮಾದದ ಮಟ್ಟಕ್ಕೆ ಹೋಗಿತ್ತು. (ಸಿರಿ- ಅಮೃತ ಸೋಮೇಶ್ವರ ಅಭಿನಂದನ ಗ್ರಂಥ (ಸಂ) ಡಾ|ಪುರುಷೋತ್ತಮ ಬಿಳಿಮಲೆ, ಎ.ವಿ. ನಾವಡ, ರಾಮಚಂದ್ರ ಉಚ್ಚಿಲ, ೧೯೯೫). ಅಡುಕೆತೋಟದ ನಡುವಿನ ಕೂಡುಮನೆ ಒಂದು ಸಂಕೀಣ೯ ಜಗತ್ತು. ಆದರೆ ರಾಧಾಕೃಷ್ನ ಕಲ್ಚಾರ್ ಅವರ ಕಾದಂಬರಿಯಲ್ಲಿ ಯಾವ ಹೆಣ್ಣು ಪಾತ್ರವೂ ಸರಿಯಾಗಿ ಬೆಳೆದಿಲ್ಲ. ಕಾದಂಬರಿಗೆ ಪ್ರಾದೇಶಿಕ ರಂಗು ನೀಡಲು ಲೇಖಕರು ಇನ್ನಷ್ಟು ಪ್ರಯತ್ನಿಸಬಹುದಿತ್ತು. 

"ಕೂಡುಮನೆ" ಓದುವಗ ನನಗೆ ಕಡೆಂಗೋಡ್ಲು ಶಂಕರ ಭಟ್ಟರ ಕಾದಂಬರಿ ಈ ಪೀಳಿಗೆಯ ನೆನಪಾಯಿತು. ಸ್ವಾತಂತ್ರ್ಯ ಹೋರಾಟದ ಸಂದಭ೯ದ ಕಾದಂಬರಿಯಲ್ಲಿ ರಾಜಕೀಯ ಭಿನ್ನಭಿಪ್ರಾಯಗಳ ಕಾರಣದಿಂದ ಒಂದು ಕುಟುಂಬ ಒಡೆಯುತ್ತದೆ. ಕೂಡುಮನೆಯ ನಾರಾಯಣ ಶಂಕರರಿಗೆ ಆಸ್ತಿಯ ರಾಜಕೀಯವೇ ಮುಖ್ಯವಾಗುತ್ತದೆ.

ವಧ೯ಮಾನದ ವರಾತದಲ್ಲಿರುವ ಕಾದಂಬರಿಕಾರ ರಾಧಾಕೃಷ್ನ ಕಲ್ಚಾರ್ ಅದೃಷ್ಟಶಾಲಿ. ಅವರ ಮೂದಲ ಕಾದಂಬರಿ ಕೂಡುಮನೆ ಹಸ್ತಪ್ರತಿಯ ರೂಪದಲ್ಲಿದ್ದಾಗಲೆ ಪ್ರಶಸ್ತಿ ಪಡೆದು ಈಗ ಪ್ರಕಟವಾಗುತ್ತಿದೆ. ಕೂಡುಮನೆ ಓದುವಾಗ ಮನೆಯೂಳಗೆ ಮನೆಯೂಡೇಯ ಇದ್ದಾನೂ ಇಲ್ಲವೂ ಎಂಬ ಗುಮಾನಿ ಮೂಡುವುದಿಲ್ಲ. ಈ ಕಾದಂಬರಿ ಸಹೃದಯರ, ವಿಮಶ೯ಕ ಗಮನ ಸೆಳೆಯಲಿ ಎಂದು ಹಾರೈಸುತ್ತೇನೆ. ಒಂದು ಹೆಜ್ಜೆ ಮುಂದೆ -ಇಷ್ಟು ಸಾಕು ನನಗೆ ಎಂದು ಗಾಂದೀಜಿ ಹೇಳುತ್ತಿದ್ದರು. ರಾಧಾಕೃಷ್ಣ ಕಲ್ಚಾರ್ ಅವರು ಕೋಡುಮನೆ ಯಲ್ಲಿ ಪುಟ್ತ-ದಿಟ್ಟ, ಹೆಜ್ಜೆಯಿಡುತ್ತಿದ್ದಾರೆ. ಅವರ ಪ್ರತಿಭೆ ಪೂಂಬಾಳೆಯಲ್ಲಿರುವ ಸಿಂಗಾರದಂತಿದೆ. ಈ ಸಿಂಗಾರದ ಹೂ ಬಂಗಾರ ಬಣ್ಣದ ಅಡಾಕೆಗೊನೆ ಯಾಗಿ ಮಾಗಲಿ ಎಂದು ಹಾರೈಸುತ್ತೇನೆ. 


                                                                                 ಮುರಳೀಧರ ಉಪಾಧ್ಯ ಹಿರಿಯಡಕ 

Wednesday, March 27, 2019

ವಿವೇಕ ಶ್ಯಾನುಭಾಗರ "ಘಾಚರ್ ಘೋಚರ್ " Ghachar Ghochar by Vivek Shanbhag, book review: This novella packs a punch

Ghachar Ghochar by Vivek Shanbhag, book review: This novella packs a punch | The Independent: Think of great Indian novels since Salman Rushdie set a certain tone with Midnight’s Children back in 1981 – Vikram Seth’s A Suitable Boy, Rohinton Mistry’s A Fine Balance, Arundhati Roy’s The God of Small Things or, most recently, Jhumpa Lahiri’s The Lowland – they tend towards large tomes, written in English.

Friday, October 19, 2018

ದೇವನೂರು ಮಹಾದೇವ -- ಮಲೆಗಳಲ್ಲಿ ಮದುಮಗಳಿಗೆ ಕಣ್ಹಾಕಿ‌...

ಮಲೆಗಳಲ್ಲಿ ಮದುಮಗಳಿಗೆ ಕಣ್ಹಾಕಿ‌... | Prajavani: ಕನ್ನಡದ ಮೊದಲ ಕಾದಂಬರಿ ‘ಇಂದಿರಾ ಬಾಯಿ’ಗೆ ನೂರು ವರ್ಷ ತುಂಬಿದ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಅಲ್ಲಿ ‘ಮಲೆಗಳಲ್ಲಿ ಮದುಮಗಳು’ ಶತಮಾನದ ಕಾದಂಬರಿ ಎಂದೆ. ಈ ಅನ್ನಿಸಿಕೆ ಕನ್ನಡಕ್ಕೆ ಮಾತ್ರ ಅಲ್ಲ ಭಾರತದ ವ್ಯಾಪ್ತಿಗೂ ಈಗಲೂ ನಿಜ ಅನ್ನಿಸುತ್ತಿದೆ.


Deccan Herald

Monday, July 16, 2018

ಸುಬ್ರಾಯ ಚೊಕ್ಕಾಡಿ -- ಟಿ. ಜಿ. ರಾಘವರ ಕಾದಂಬರಿ

"ಮನೆ" ಟಿ.ಜಿ.ರಾಘವರ ಒಂದು ವಿಶಿಷ್ಟ ಕಾದಂಬರಿ. ಟಿ.ಜಿ.ರಾಘವರು ನವ್ಯ ಸಾಹಿತ್ಯ ಸಂದರ್ಭದ ಪ್ರಮುಖ ಲೇಖಕರಲ್ಲಿ ಒಬ್ಬರು.ಮೊದಲ ಸಂಕ್ರಮಣ ದ್ವೈಮಾಸಿಕದಲ್ಲಿ ಪ್ರಕಟವಾದ ಅವರ"ಶ್ರಾದ್ಧ"ಕತೆಯು ಸಾಕಷ್ಟು ಚರ್ಚೆಗೆ ಒಳಗಾಗಿತ್ತು.1979 ರಲ್ಲಿ ಪ್ರಥಮ ಮುದ್ರಣ ಹಾಗೂ 1990 ರಲ್ಲಿ ದ್ವಿತೀಯ ಮುದ್ರಣ ಕಂಡ ಈ ಪುಟ್ಟ ಕಾದಂಬರಿಯ ಪ್ರಕಾಶಕರು "ಗೀತಾ ಬುಕ್ ಹೌಸ್, ಮೈಸೂರು " ರಾಘವರ ಇತರ ಪ್ರಕಟಿತ ಕೃತಿಗಳಲ್ಲಿ "ಜ್ವಾಲೆ ಆರಿತು"ಹಾಗೂ "ಸಂಬಂಧಗಳು "ಎನ್ನುವ ಕಥಾ ಸಂಕಲನಗಳು,"ವಿಕೃತಿ"ಎನ್ನುವ ಕಾದಂಬರಿ,ಮತ್ತು "ಪ್ರೇತಗಳು"ಎನ್ನುವ ನಾಟಕ ಮುಖ್ಯವಾದವುಗಳು.
"ಸಂತೆಯೊಳಗೊಂದು ಮನೆಯ ಮಾಡಿ,ಸದ್ದು ಗದ್ದಲಕೆ ಅಂಜಿದೊಡೆ ಎಂತಯ್ಯಾ "ಅನ್ನುವುದು ಅಕ್ಕನ ವಚನವೊಂದರ ಸಾಲು. ಈ ಸಾಲಿಗೆ ವಿಷಾದದ ಉದಾಹರಣೆಯಾಗಿ ಈ ಕಾದಂಬರಿಯ ಮುಖ್ಯ-ಆದರೆ ಅಮಾಯಕ-ಪಾತ್ರಗಳಾದ ರಾಜಣ್ಣ ಮತ್ತು ಗೀತಾ ,ನಗರದಲ್ಲಿ ಒಂದು ಪುಟ್ಟ ಮನೆಯು ನೆಮ್ಮದಿಯ ಹಾಗೂ ಖಾಸಗಿಯ ಬದುಕಿಗಾಗಿ ಬೇಕೆಂದು ಹಂಬಲಿಸಿದವರು.;ಅಂಥ ಕನಸು ಕಂಡವರು.ಆದರೆ ನಗರದ ಗದ್ದಲ,ಎಲ್ಲ ಖಾಸಗಿತನವನ್ನೂ ನುಂಗಿ ಹಾಕಿ,ಅದರ ಪಾವಿತ್ರ್ಯವನ್ನು ನಾಶಮಾಡಿ ನಿರ್ದಯವಾಗಿ ವರ್ತಿಸುವ ನಗರದ ಕ್ರೌರ್ಯ,ಖಾಸಗಿ ಬದುಕಿನೊಳಗೆ ಮೂಗುತೂರಿಸುವ ಜನ ಸಮುದಾಯದ ತಲೆಹರಟೆ...ಇವೆಲ್ಲವುಗಳ ನಡುವೆ ರಾಜಣ್ಣ ದಂಪತಿಗಳ ಮನೆಯನ್ನು ಹೊಂದುವ.ಹಾಗೂ ಆಮೇಲೆ ಮನೆಯನ್ನು ಹೇಗೋ ಹೊಂದಿದ ಮೇಲೆ ನೆಮ್ಮದಿಯಾಗಿ ಹಾಗೂ ಖಾಸಗಿಯಾಗಿ ಬದುಕುವ ಕನಸು ವಾಸ್ತವದ ಸುಡು ಬಿಸಿಯಲ್ಲಿ ಕರಗಿ ಹೋಗುವುದನ್ನು ಈ ಕಾದಂಬಲರಿಯು ಅನನ್ಯವಾಗಿ ಚಿತ್ರಿಸುತ್ತದೆ.ಮನೆ ಎನ್ನುವ ಸಂಸ್ಥೆಯ ಸುತ್ತ ನಿರ್ಮಿತವಾಗುವ ಮಧ್ಯಮವರ್ಗದ ಜೀವನದ ದುರಂತವನ್ನು ನಗರದ ಹಿನ್ನೆಲೆಯಲ್ಲಿಈ ಬಗೆಯ ನಿಷ್ಠುರತೆಯಲ್ಲಿ ಕಟ್ಟಿಕೊಟ್ಟ ಕೃತಿ ಇನ್ನೊಂದಿಲ್ಲವೆನ್ನಬಹುದು.ಮನುಷ್ಯನ ಖಾಸಗಿತನದ ಬದುಕು ಕಳೆದು ಹೋಗುತ್ತಿರುವ ನಮ್ಮ ಕಾಲದ ನೋವಿನ ಅನುಭವಕ್ಕೆ ಈ ಕೃತಿಯು ಕನ್ನಡಿ ಹಿಡಿದ ಹಾಗಿದೆ.
ಗಿರೀಶ ಕಾಸರವಳ್ಳಿಯವರ "ಮನೆ" ಸಿನೆಮಾವು ಈ ಕಾದಂಬರಿಯನ್ನು ಆಧರಿಸಿ ನಿರ್ಮಾಣವಾಗಿದೆ.ಹಿಂದಿ ಹಾಗೂ ಕನ್ನಡ-ಈ ಎರಡೂ ಭಾಷೆಗಳಲ್ಲಿ ತಯಾರಾಗಿರುವ ಈ ಸಿನೆಮಾದಲ್ಲಿ ಖ್ಯಾತ ನಟ ನಟಿಯರಾದ ನಾಸಿರುದ್ದೀನ್ ಷಾ,ದೀಪ್ತಿ ನಾವಲ್,ರೋಹಿಣಿ ಹಟ್ಟಂಗಡಿ ಮೊದಲಾದವರು ಅಭಿನಯಿಸಿದ್ದು ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂದು ರಾಷ್ಟ್ರಪ್ರಶಸ್ತಿಯನ್ನು ಗಳಿಸಿರುತ್ತದೆ.
--ಸುಬ್ರಾಯ ಚೊಕ್ಕಾಡಿ.