stat Counter



Sunday, July 31, 2016

ಡಿ. ವಿ. ಜಿ - ನರಜಾತಿಯೊಳಗೆಂತು ಬಂದುದೀ ವೈಷಮ್ಯ ?

ಒಂದೆ ಗಗನವ ಕಾಣುತೊಂದೆ
ನೆಲವನು ತುಳಿಯುತ
ಒಂದೆ ಧಾನ್ಯವನುಣ್ಣುತ
ಒಂದೆ ನೀರ್ಗುಡಿದು
ಒಂದೆ ಗಾಳಿಯನುಸಿರ್ವ
ನರಜಾತಿಯೊಳಗೆಂತು
ಬಂದುದೀ ವೈಷಮ್ಯ?
-ಮಂಕುತಿಮ್ಮ

(ಜಗದೊಳಗಿರುವ ಮನುಜರೆಲ್ಲರೂ ಕಾಣುವ ಆಗಸ ಒಂದೇ, ಇನ್ನೊಂದು ಆಗಸವಿಲ್ಲ.
ತುಳಿಯುವ ನೆಲವೂ ಒಂದೇ, ಇನ್ನೊಂದು ಭೂಮಿಯಿಲ್ಲ,
ತಿನ್ನುವ ಆಹಾರ ಧಾನ್ಯಗಳೂ ಒಂದೇ ರೀತಿಯದ್ದು, ಹಾಗೆಯೇ ಕುಡಿವ ನೀರು, ಉಸಿರಾಡುವ ಗಾಳಿಯೂ ಒಂದೇ.
ಹೀಗಿದ್ದೂ ಮನುಷ್ಯರೊಳಗೆ ದ್ವೇಷ,ಅಸೂಯೆ,ಸಿಟ್ಟು ಇಂತಹ ಭಿನ್ನತೆ ಬಂದುದಾದರು ಹೇಗೆ? ನಮ್ಮೆಲ್ಲರ ಜೀವನಕ್ರಮ, ದೃಷ್ಟಿಕೋನ, ಆಚಾರ-ವಿಚಾರಗಳಲ್ಲಿ ವಿಭಿನ್ನತೆ ಇದೆ. ಆದರೆ ಅದುವೇ ನಮ್ಮ ವೈಷಮ್ಯ ಕ್ಕೆ ಕಾರಣವಾಗ ಬಾರದು. ಪರಸ್ಪರ ಗೌರವಿಸುತ್ತಾ, ಇತರರ ಅಭಿಪ್ರಾಯಗಳನ್ನು ಆಲಿಸಿ; ಅದನ್ನು ಪುರಸ್ಕರಿಸುತ್ತಾ ಪ್ರಜ್ಞಾವಂತರಾಗಿ ಬದುಕಿದರೆ, ಸಹಬಾಳ್ವೆ ನಡೆಸಿದರೆ ನಾವೆಲ್ಲರೂ ಶಾಂತಿಯ ಹರಿಕಾರರಾಗುತ್ತೇವೆ. ಜೀವನ ಅರ್ಥಪೂರ್ಣವಾಗುತ್ತದೆ.
{  ಕವಿತಾ ಅಡೂರು ಅವರ  Facebook ನಿಂದ }

No comments:

Post a Comment